Friday, March 27, 2026
Friday, March 27, 2026
Home Blog Page 534

Style Dance Crew Shivamogga ಕಲಾವಿದ ಶಶಿಕುಮಾರ್ ಗೆ ” ಮಲೆನಾಡು ಬಹುಮುಖಿ ಪ್ರತಿಭೆ ಪ್ರಶಸ್ತಿ”

0

Style Dance Crew Shivamogga ನೃತ್ಯಗಾರ, ನೃತ್ಯ ನಿರ್ದೇಶಕ, ಚಲನಚಿತ್ರ ನಿರ್ದೇಶಕ ಮತ್ತು ಗಾಯಕ ಸೇರಿದಂತೆ ಹಲವು ಕಲೆಗಳನ್ನು ಮೈಗೂಡಿಸಿಕೊಂಡಿರುವ ಸ್ಟೈಲ್‌ಡ್ಯಾನ್ಸ್ ಕ್ರಿವ್ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಶಶಿಕುಮಾರ್ ಎನ್ ಅವರಿಗೆ ಶಿವಮೊಗ್ಗ ಮಹಾನಗರ ಪಾಲಿಕೆ ಆಯೋಜಿಸಿದ್ದ ಯುವ ದಸರಾ ಕಾರ್ಯಕ್ರಮದಲ್ಲಿ 2024ನೇ ಸಾಲಿನ “ಮಲೆನಾಡು ಬಹುಮಖಿ ಪ್ರತಿಭೆ ಪ್ರಶಸ್ತಿ” ನೀಡಿ ಗೌರವಿಸಿದರು.

Style Dance Crew Shivamogga ಈ ಸಂದರ್ಭದಲ್ಲಿ ಶಾಸಕ ಚನ್ನಬಸಪ್ಪ, ಪಾಲಿಕೆಯ ಆಯುಕ್ತೆ ಕವಿತಾ ಯೋಗಪ್ಪನವರ್, ಮಾಜಿ ಪಾಲಿಕೆ ಸದಸ್ಯರಾದ ವಿಶ್ವಾಸ್, ಹೆಚ್.ಸಿ.ಯೋಗೀಶ್ , ರಘು ಗುಂಡ್ಲು ಸೇರಿದಂತೆ ಹಲವರಿದ್ದರು.

Shivamogga Dasara ಶಿವಮೊಗ್ಗ ದಸರಾ ವಿಶೇಷ :ಕರಾಟೆ ಪಂದ್ಯಾವಳಿ ಯಶಸ್ವಿ

0

Shivamogga Dasara ನಾಡಹಬ್ಬ ದಸರಾ ಪ್ರಯುಕ್ತ ಶಿವಮೊಗ್ಗ ಜಿಲ್ಲಾ ಕರಾಟೆ ಅಸೋಸಿಯೇಷನ್ ಪ್ರತಿ ವರ್ಷ ಆಯೋಜಿಸುವಂತೆ ಈ ವರ್ಷವೂ 4ನೇ ಬಾರಿ ಶಿವಮೊಗ್ಗದ ವಿನೋಬನಗರದ ಸಮುದಾಯ ಭವನದಲ್ಲಿ ದಸರಾ ಕರಾಟೆ ಪಂದ್ಯಾವಳಿ ಆಯೋಜಿಸಲಾಗಿತ್ತು.

ಪಂದ್ಯಾವಳಿಗೆ ಜಿಲ್ಲೆಯ ಸುಮಾರು 100 ಕ್ರೀಡಾಪಟುಗಳು ಆಗಮಿಸಿದ್ದು
ಪಂದ್ಯಾವಳಿಯಲ್ಲಿ ಕಟಾ ಮತ್ತು ಕುಮತಿ ವಿಭಾಗಗಳಲ್ಲಿ ಮಕ್ಕಳಿಗೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು .

Shivamogga Dasara ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಶ್ರೀಲಂಕಾ ಶೋಟೋಖಾನ್ ವರ್ಲ್ಡ್ ಕರಾಟೆ
ಮುಖ್ಯ ತರಬೇತಿದಾರ ಮೇಡೋನ್ಜ್ ಮತ್ತು ವಿನೋಬನಗರದ ಮುಖಂಡರಾದ ಶರತ್ ಅಭಿನಂದನ್ ಸಂತೋಷ್ ಗಿರೀಶ್ ಮತ್ತು
ಶಿವಮೊಗ್ಗ ಜಿಲ್ಲಾ ಕರಾಟೆ ಅಸೋಸಿಯೇಷನ್ ಗೌರವಾಧ್ಯಕ್ಷ ಶಿವಮೊಗ್ಗ ವಿನೋದ್ ಅಧ್ಯಕ್ಷ ಮುಕೀಬ್ ಅಹಮದ್ ಚಿಕ್ಕಮಗಳೂರು ಜಿಲ್ಲಾ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಸೈಯಾದ್ ರಿಯಾಜ್ ಶಿವಮೊಗ್ಗ ಜಿಲ್ಲಾ ಕರಾಟೆ ಅಸೋಸಿಯೇಷನ್ ಖಜಾಂಚಿ ಮೀನಾಕ್ಷಿ ಸಹ ಕಾರ್ಯದರ್ಶಿ ಇರ್ಫಾನ್ ಮತ್ತು ನಿರ್ದೇಶಕರಾದ ಜಸ್ಟಿನ್ ಸಾಧಿಕ್
ಸೇರಿದಂತೆ ಇತರರು ಉಪಸ್ಥಿತರಿದ್ದರು.

Sandipani English Medium School ಶಿಕ್ಷಕ, ರಂಗಕರ್ಮಿ ಚೇತನ್ ಸಿ. ರಾಯನಹಳ್ಳಿಗೆ “ಸದ್ಭಾವನಾ ಸೇವಾರತ್ನ” ಪ್ರಶಸ್ತಿ

0

Sandipani English Medium School ಶಿವಮೊಗ್ಗದ ನಮ್ಮ ಹಳ್ಳಿ ಥಿಯೇಟರ್ ನ (ರಿ) ಅಧ್ಯಕ್ಷರು ಹಾಗೂ ಸಾಂದೀಪನಿ ಆಂಗ್ಲ ಮಾಧ್ಯಮ ಶಾಲೆಯ ಗ್ರಂಥಪಾಲಕರು ಹಾಗೂ ಶಿಕ್ಷಕರಾದ ಚೇತನ್.ಸಿ.ರಾಯನಹಳ್ಳಿಯವರಿಗೆ ರಂಗಭೂಮಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಗಾಗಿ ವಿಜಯನಗರ ಜಿಲ್ಲೆಯ ಶ್ರೀ ಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ರಂಗಕಲಾವಿದರು (ರಿ) ಸಂಘದ Sandipani English Medium School ವತಿಯಿಂದ ಧಾರವಾಡದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದವರಿಗೆ ನೀಡುವ “ಸದ್ಭಾವನಾ ಸೇವಾರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

Shivamogga Dasara ಶಿವಮೊಗ್ಗದಲ್ಲಿ ಮನಾಕರ್ಷಕ ವೈಭವದ ವಿಜಯದಶಮಿ ಉತ್ಸವ: ವರುಣ ತಂಪೆರೆದು ಸಂಪನ್ನ

0

Shivamogga Dasara ಜೋರು ಮಳೆಯ ನಡುವೆ ಶಿವಮೊಗ್ಗ ದಸರಾದಲ್ಲಿ ಅಂಬು ಛೇದನ ಕಾರ್ಯಕ್ರಮ ನಡೆಯಿತು. ತಹಶೀಲ್ದಾರ್‌ ಗಿರೀಶ್‌ ಅವರು ಅಂಬು ಛೇದನ ಮಾಡಿದರು. ಬಳಿಕ ಪಟಾಕಿ ಸಿಡಿಸಲಾಯಿತು.
ಅಂಬು ಛೇದನಬದ ಬಳಿ ಜನರು ಘೋಷಣೆ ಕೂಗಿದರು. ಪರಸ್ಪರ ಬನ್ನಿ ಹಂಚಿಕೊಂಡು ದಸರಾ ಹಬ್ಬ ಶುಭಾಶಯ ವಿನಿಮಯ ಮಾಡಿಕೊಂಡರು.

ಇದೇ ವೇಳೆ ಬೃಹತ್‌ ರಾವಣನ ಪ್ರತಿಕೃತಿ ದಹಿಸಲಾಯಿತು.

ಶಿವಮೊಗ್ಗ ದಸರಾದ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಮಳೆ ಅಡ್ಡಿಯಾಗಿದೆ. ದಿಢೀರ್‌ ಶುರುವಾದ ಮಳೆಯಿಂದಾಗಿ ಜನರು ಕಾರ್ಯಕ್ರಮ ಬಿಟ್ಟು ತೆರಳುವಂತಾಯಿತು. ಕೆಲವರು ಛತ್ರಿ ಹಿಡಿದು ನಿಂತು ಅಂಬು ಛೇದನ ವೀಕ್ಷಿಸಿದರು. ನಗರದ ಫ್ರೀಡಂ ಪಾರ್ಕ್‌ನಲ್ಲಿ ಅಂಬು ಛೇದನ ಆಯೋಜಿಸಲಾಗಿತ್ತು.

ಈ ಸಂದರ್ಭ ಮಳೆಯಿಂದಾಗಿ ಜನರು ಗಲಿಬಿಲಿಗೊಂಡರು.

ಮೆರವಣಿಗೆ ವೇಳೆ ತುಂತುರು ಮಳೆ

Shivamogga Dasara ದಸರಾ ಮೆರವಣಿಗೆ ಜೈಲು ರಸ್ತೆಯಲ್ಲಿದ್ದಾಗ ದಟ್ಟವಾಗಿ ಮೋಡ ಕವಿದು, ತುಂತುರು ಮಳೆಯಾಗಿತ್ತು. ಕೆಲವೇ ನಿಮಿಷದಲ್ಲಿ ಮೋಡ ಸರಿದಂತಾಗಿತ್ತು. ಮಳೆ ಭೀತಿಯಿಂದಾಗಿ ಈ ಬಾರಿ ಅಂಬು ಛೇದನಕ್ಕೆ ಕಡಿಮೆ ಸಂಖ್ಯೆ ಜನ ಸೇರಿದ್ದರು.

ದಿಢೀರ್‌ ಮಳೆಗೆ ಜನರು ಗಲಿಬಿಲಿ:
ಅಂಬು ಛೇದನ ಕಾರ್ಯಕ್ರಮ ಮುನ್ನ ದಿಢೀರ್‌ ಮಳೆ ಸುರಿಯಿತು. ಜೋರು ಮಳೆಯಾಗುತ್ತಿದ್ದಂತೆ ತಕ್ಷಣ ಫ್ರೀಡಂ ಪಾರ್ಕ್‌ನಿಂದ ಹೊರ ನಡೆದರು. ಮಳೆಯಿಂದ ರಕ್ಷಣೆಗೆ ದಸರಾ ಕಾರ್ಯಕ್ರಮದ ಪೆಂಡಾಲ್‌, ಅಕ್ಕಪಕ್ಕದ ಕಟ್ಟಡಗಳ ಅಡಿ‌, ಉತ್ಸವ ಮೂರ್ತಿಗಳ ಟ್ರಾಕ್ಟರ್‌ ಕೆಳಗೆ ಕುಳಿತು ಜನರು ರಕ್ಷಣೆ ಪಡೆದರು. ಕೆಲವು ಛತ್ರಿ ಹಿಡಿದು ನಿಂತಿದ್ದರು.

University of Agricultural and Horticultural Sciences ಆಧುನಿಕ ತಾಂತ್ರಿಕತೆಯ ಸದುಪಯೋಗದಿಂದ ಕೃಷಿ ಪ್ರಗತಿ- ಡಾ.ಶ್ರೀಬಸವಸಿದ್ಧ ಮರುಳಶ್ರೀ

0

University of Agricultural and Horticultural Sciences ರೈತರು ಆಧುನಿಕ ತಂತ್ರಜ್ಞಾನದ ಸದುಪಯೋಗ ಪಡೆದುಕೊಂಡು ಕೃಷಿಯಲ್ಲಿ ಹೆಚ್ಚು ಪ್ರಗತಿ ಸಾಧಿಸಬೇಕು ಎಂದು ಬಸವ ಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.
ನಗರದ ನವುಲೆಯಲ್ಲಿರುವ ಕೃಷಿ ವಿಶ್ವವಿದ್ಯಾಲಯದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ವತಿಯಿಂದ ಆಯೋಜಿಸಿದ್ದ ರೋಟರಿ ಜಿಲ್ಲಾ ಕಾರ್ಯಕ್ರಮ, ಹಸಿರು ಮತ್ತು ನೀರು ಜಾಗೃತಿ ಉಪನ್ಯಾಸ
ಪ್ರಗತಿಪರ ರೈತರಿಗೆ ಸನ್ಮಾನ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ರೋಟರಿ ಸಂಸ್ಥೆಯು ಸೇವಾ ಕಾರ್ಯದ ಜತೆಯಲ್ಲಿ ಪರಿಸರ ಜಾಗೃತಿ, ರೈತರಿಗೆ ಉಪಯುಕ್ತ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ. ಆರ್.ಸಿ.ಜಗದೀಶ್, ರೈತರು ಸಮಗ್ರ ಕೃಷಿ ಪದ್ಧತಿ ತೊಡಗಿಸಿಕೊಂಡರೆ ಆರ್ಥಿಕವಾಗಿ ಸದೃಢರಾಗಲು ಸಾಧ್ಯವಿದೆ. ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಿದೆ ಎಂದರು.

University of Agricultural and Horticultural Sciences ರೋಟರಿ ಜಿಲ್ಲಾ ಗವರ್ನರ್ ಸಿ.ಎ.ದೇವ್ ಆನಂದ್ ಮಾತನಾಡಿ, ಹಸಿರೇ ಉಸಿರು, ನಮಗೆ ಉಸಿರಾಡಲು ಗಿಡಮರಗಳು ಆಮ್ಲಜನಕ ಒದಗಿಸುತ್ತದೆ. ಹಸಿರನ್ನು ಕಾಪಾಡಿಕೊಳ್ಳುವಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ತಿಳಿಸಿದರು.

ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಮಾತನಾಡಿ, ಹಿಂದಿನ ಕಾಲದಲ್ಲಿ ರಾಸಾಯನಿಕ ಗೊಬ್ಬರ ಬಳಸದೆ ಬೆಳೆ ಬೆಳೆಯುತ್ತಿದ್ದರು. ರೈತರು ಸಾವಯವ ಕೃಷಿಯನ್ನು ಅವಲಂಬಿಸಬೇಕು ಎಂದು ಹೇಳಿದರು.

Shikaripura Ulli Foundation ಪೌರ ಕಾರ್ಮಿಕರಿಗೆ ಸಿಹಿ- ಕೊಡುಗೆ ವಿತರಿಸಿ ಮಾಜಿ ಶಾಸಕರ ಜನ್ಮದಿನ ಆಚರಣೆ

0

Shikaripura Ulli Foundation ಶಿಕಾರಿಪುರ ಉಳ್ಳಿ ಫೌಂಡೇಶನ್ ವತಿಯಿಂದ ಪೌರಕಾರ್ಮಿಕರಿಗೆ ಸೀರೆ ಹಾಗೂ ಸಿಹಿ ವಿತರಿಸುವ ಮೂಲಕ ಜಿಲ್ಲಾ ಕಾಂಗ್ರೆಸ್ ಅದ್ಯಕ್ಷರು ಹಾಗು ಮಾಜಿ ವಿಧಾನಪರಿಷತ್ ಸದಸ್ಯರಾದ ಆರ್ ಪ್ರಸನ್ನಕುಮಾರ್ ರವರ ಹುಟ್ಟು ಹಬ್ಬ ಆಚರಣೆ ಮಾಡಲಾಯಿತು.

ಜಿಲ್ಲಾ ಕಾಂಗ್ರೆಸ್ ಅದ್ಯಕ್ಷರು ಹಾಗು ಮಾಜಿ ವಿಧಾನಪರಿಷತ್ ಸದಸ್ಯರಾದ ಆರ್.ಪ್ರಸನ್ನಕುಮಾರ್ ರವರ ಹುಟ್ಟು ಹಬ್ಬದ ಅಂಗವಾಗಿ ಶಿಕಾರಿಪುರ ಪುರಸಭೆಯ ಪೌರ-ಕಾರ್ಮಿಕರಿಂದ ಕೇಕ್ ಕತ್ತರಿಸಿ ಸುಮಾರು 35ಜನ ಮಹಿಳಾ ಪೌರಕಾರ್ಮಿಕರಿಗೆ ಸೀರೆ ಹಾಗು ಸಿಹಿ ವಿತರಿಸಿ ಮಾತನಾಡಿದ ಉಳ್ಳಿ ಫೌಂಡೇಶನ್ ಅದ್ಯಕ್ಷರಾದ ಉಳ್ಳಿ ದರ್ಶನ್ ರವರು, ಪ್ರತಿನಿತ್ಯ ಪಟ್ಟಣವನ್ನು ಸ್ವಚ್ಚವಾಗಿ ಇಡುವ ಹಾಗೂ ಕರೋನಾ ಸಂಧರ್ಭದಲ್ಲಿ ತಮ್ಮ ಜೀವದ ಹಂಗನ್ನು ತೊರೆದು ಕೆಲಸ ಮಾಡಿದ ಅವರ ಕಾರ್ಯ ಶ್ಲಾಘನೀಯ ಆದ್ದರಿಂದ ನಮ್ಮ ನಾಯಕರು, ಜಿಲ್ಲಾ ಕಾಂಗ್ರೆಸ್ ಅದ್ಯಕ್ಷರು, ಮಾಜಿ ವಿಧಾನ ಪರಿಷತ್ ಸದಸ್ಯರಾದ ಆರ್. ಪ್ರಸನ್ನಕುಮಾರ್ ರವರ ಹುಟ್ಟು ಹಬ್ಬವನ್ನು ಅರ್ಥ ಪೂರ್ಣವಾಗಿ ಆಚರಿಸಿದ್ದು, ಸರಳ ಸಜ್ಜನ ವ್ಯಕ್ತಿತ್ವದವರಾದ ಅವರ ಕೊಡುಗೆ ಶಿಕಾರಿಪುರಕ್ಕೆ ಅಮೂಲ್ಯವಾದದ್ದು, ಆ ದೇವರು ಅವರಿಗೆ ಆಯುರ್-ಆರೋಗ್ಯ ನೀಡಲಿ ಎಂದು ಪ್ರಾರ್ಥಿಸಿದರು.

Shikaripura Ulli Foundation ಕೆಪಿಸಿಸಿ ಸದಸ್ಯರು, ನಿಕಟಪೂರ್ವ ಕಾಂಗ್ರೆಸ್ ಅಭ್ಯರ್ಥಿಗಳಾದ ಗೋಣೆ ಮಾಲತೇಶ್ ರವರು ಮಾತನಾಡಿ ನಮ್ಮ ನಾಯಕರಾದ ಆರ್.ಪ್ರಸನ್ನಕುಮಾರ್ ರವರು ನಗರಸಭಾ ಅದ್ಯಕ್ಷರಾಗಿ, ಜಿಲ್ಲಾ ಕಾಂಗ್ರೆಸ್ ಅದ್ಯಕ್ಷರಾಗಿ, ವಿಧಾನಪರಿಷತ್ ಶಾಸಕರಾದರೂ ಕೂಡ ಕಿಂಚಿತ್ತು ಅಹಂ ಅನ್ನು ತೋರಿಸದೇ ಸಾಮಾನ್ಯ ಕಾರ್ಯಕರ್ತರಿಗೂ ಸ್ಪಂದಿಸುವ ವ್ಯಕ್ತಿ, ಅವರಿಗೆ ಆ ದೇವರು ಇನ್ನೂ ಹೆಚ್ಚಿನ ಅಧಿಕಾರ, ಆರೋಗ್ಯ ನೀಡಲಿ ಎಂದರು.

ಈ ಸಂದರ್ಭದಲ್ಲಿ ಮಾಜಿ ತಾಂಡಾ ಅಭಿವೃದ್ದಿ ನಿಗಮದ ಸದಸ್ಯರಾದ ಶಿವು ನಾಯಕ್, ಬುಡೇನ್ ಸಾಬ್, ಸ.ನಾ.ಮಂಜಪ್ಪ, ನಗರದ ಮಾಲತೇಶ್, ಗುಡ್ಡಳ್ಳಿ ಸಂತೋಷ್, ಶಶಾಂಕ್, ಸಂತೋಷ್ ಮಡಿವಾಳ್, ಪ್ರದೀಪ್ ಮುಂತಾದ ಮುಖಂಡರು ಹಾಗೂ ಪುರಸಭೆಯ ಅಧಿಕಾರಿಯಾದ ರಾಜಕುಮಾರ್, ನವೀನ್ ಹಾಗು ಪೌರಕಾರ್ಮಿಕರು ಪಾಲ್ಗೊಂಡಿದ್ದರು..

Shivamogga Police ಬಸ್ ಹತ್ತುವಾಗ ಮಹಿಳೆಯ ಆಭರಣ ಕಳವು ಪೊಲೀಸ್ ಠಾಣೆಯಲ್ಲಿ ದೂರು ದಾಖಲು

0

Shivamogga Police ಶಿವಮೊಗ್ಗ ನಗರದ ಸರಕಾರಿ ಬಸ್ ನಿಲ್ದಾಣದಲ್ಲಿ ಮಹಿಳೆಯ ಚಿನ್ನಾಭರಣ ಕಳ್ಳತನ ಮಾಡಲಾಗಿದೆ.

ತಾಲೂಕಿನ ರಾಮೇನಕೊಪ್ಪದಲ್ಲಿರುವ ತವರು ಮನೆಗೆ ಬಂದಿದ್ದ 28 ವರ್ಷದ ಮಹಿಳೆ ಗಂಡನ ಮನೆಯಾದ ಶಿಕಾರಿಪುರದ ನೆಲವಾಗಿಲು ಗ್ರಾಮಕ್ಕೆ ವಾಪಾಸ್ ಆಗಲು ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಧರ್ಮಸ್ಥಳ-ಹುಬ್ಬಳ್ಳಿ KSRTC ಬಸ್ ಹತ್ತಿದ್ದಾರೆ. ಎಂದಿನಂತೆ ಬಸ್ ಹತ್ತಲು ರಶ್ ಆಗಿದೆ.

Shivamogga Police ರಶ್ ನಲ್ಲೇ ಸೀಟು ಹಿಡಿಯಲು ಮುಂದಾದ ಮಹಿಳೆಯು ಸೀಟು ಹಿಡಿದ ನಂತರ ವ್ಯಾನಿಟಿ ಬ್ಯಾಗ್ ನಲ್ಲಿದ್ದ ಆಧಾರ್ ಕಾರ್ಡ್ ತೆಗೆಯಲು ಬ್ಯಾಗ್ ನೋಡಿಕೊಂಡಿದ್ದಾರೆ. ವ್ಯಾನಿಟಿ ಬ್ಯಾಗ್ ನ ಜಿಪ್ ಅರ್ಧ ತೆಗೆದಿರುವುದು ಗಮನಕ್ಕೆ ಬಂದಿದೆ. ವ್ಯಾನಿಟಿ ಬ್ಯಾಗ್ ಪರಿಶೀಲಿಸಿದಾಗ ಬ್ಯಾಗ್ ನಲ್ಲಿದ್ದ ಚಿನ್ನಾಭರಣ ಮತ್ತು ಹಲವು ಕಾರ್ಡ್ ಗಳು ಕಾಣೆಯಾಗಿವೆ.

20 ಸಾವಿರದ ಕರಿಮಣಿ ಮತ್ತು ತಾಳಿಗುಂಡು ಇರುವ ತಾಳಿ ಸರ, ಈಶ್ವರನ ಡಾಲರ್, ಕೆನೆರಾ ಮತ್ತು ಇಂಡಿಯನ್ ಬ್ಯಾಂಕ್‌ನ ಎಟಿಎಂ ಕಾರ್ಡ್, ಕೆಎಂವೈ ಕಾರ್ಡ್, ಪಾನ್ ಕಾರ್ಡ್ ಕಳುವಾಗಿದೆ ಎಂದು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದಾರೆ.

Chikkamagaluru Police ಚಿಕ್ಕಮಗಳೂರು ದತ್ತಪೀಠದ ಬಳಿ ಕಂದಕಕ್ಕೆ ಬಿದ್ದ ಕಾರು ಸ್ಥಳೀಯರಿಂದ ಪ್ರಯಾಣಿಕರ ರಕ್ಷಣೆ

0

Chikkamagaluru Police ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಸುಮಾರು 250 ಅಡಿ ಆಳಕ್ಕೆ ಬಿದ್ದಿರುವ ಘಟನೆ ದತ್ತಪೀಠ (ಮಾರ್ಗದ ಕವಿಕಲ್ ಗಂಡಿ ಬಳಿ ಸಂಭವಿಸಿದೆ.
ಮೂಲತಃ ತೆಲಂಗಾಣ ರಾಜ್ಯದ ನೋಂದಣಿ ಇರುವ ಕಾರು ಆಕ್ಟಿಡೆಂಟ್‌ ಆಗಿದ್ದು, ಕಾರಿನಲ್ಲಿದ್ದವರು ಹೈದರಾಬಾದ್‌ ನವರು ಎನ್ನಲಾಗಿದೆ. ಅದೃಷ್ಟಕ್ಕೆ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Chikkamagaluru Police ಕಾರು ಪ್ರಪಾತಕ್ಕೆ ಉರುಳುವಾಗ ಮರಗಳು ಅಡ್ಡಿಯಾದ್ದರಿಂದ ಕಾರಿನಲ್ಲಿದ್ದ ಮಗುವೂ ಸೇರಿದಂತೆ ಐವರು ಬಚಾವ್‌ ಆಗಿದ್ದಾರೆ. ಇನ್ನೂ ಕಾರು ಪಾತಾಳಕ್ಕೆ ಬಿದ್ದ ವಿಷಯ ತಿಳಿಯುತ್ತಲೇ ಸ್ಥಳೀಯರು ದೌಡಾಯಿಸಿ ಎಲ್ಲಾ ಪ್ರಯಾಣಿಕರನ್ನು ರಕ್ಷಿಸಿದ್ದಾರೆ.

Dasara Festival ದೇವಿಗೆ ನಾಲಗೆಯನ್ನೇ ಕತ್ತರಿಸಿ ಅರ್ಪಿಸಿದ ಭಕ್ತ!

0

Dasara Festival ದಸರಾ ಹಬ್ಬದಂದು 9 ದಿನಗಳ ಕಾಲ ದುರ್ಗಾ ದೇವಿಯ ಒಂಬತ್ತು ರೂಪಗಳನ್ನು ಪೂಜಿಸಲಾಗುತ್ತದೆ. ಪ್ರತಿ ವರ್ಷ ಆಶ್ವಿಯುಜ ಮಾಸದಲ್ಲಿ ಈ ಪೂಜೆ ನಡೆಯುತ್ತದೆ. ಈ ವರ್ಷ ಅಕ್ಟೋಬರ್ 3 ರಂದು ನವರಾತ್ರಿ ಪ್ರಾರಂಭವಾಗಿ ವಿಜಯದಶಮಿಗೆ ಮುಗಿದಿದೆ.
ಇನ್ನು ದೇಶದೆಲ್ಲೆಡೆ ಈ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸಲಾಯಿತು ಈ ಪೈಕಿ ಮಧ್ಯಪ್ರದೇಶದಲ್ಲಿ ಭಕ್ತರೊಬ್ಬರು ದೇವಿಗೆ ಅರ್ಪಿಸಿದ ನೈವೇದ್ಯ ನೋಡಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಹೌದು, ರಾಮ್ ಸರಣ್ ಎಂಬ ಭಕ್ತ ತನ್ನ ನಾಲಿಗೆಯನ್ನು ಕತ್ತರಿಸಿ ದೇವಿಗೆ ಅರ್ಪಿಸಿದ್ದಾನೆ ಎಂದು ದೇವಸ್ಥಾನದ ಅರ್ಚಕ ಜೈ ಕಿಶನ್ ಹೇಳಿದ್ದಾರೆ.
ಈ ಭಕ್ತ ತನ್ನ ನಾಲಿಗೆಯನ್ನು ಸುಮಾರು ಮೂರು ಇಂಚು ಕತ್ತರಿಸಿ ದೇವಿಗೆ ಅರ್ಪಿಸಿದನೆಂದು ಹೇಳಲಾಗುತ್ತದೆ. ಅಲ್ಲದೆ, ಸ್ವಲ್ಪ ರಕ್ತವನ್ನೂ ಪಾತ್ರೆಯಲ್ಲಿ ತುಂಬಿ ಮಾತೆಗೆ ಅರ್ಪಿಸಿದ್ದಾನೆ.. ವಿಷಯ ತಿಳಿದ ನೆರೆಹೊರೆಯವರು ದೃಶ್ಯವನ್ನು ನೋಡಲು ದೇವಸ್ಥಾನಕ್ಕೆ ಆಗಮಿಸಿದ್ದಾರೆ. ರತ್ನಗಿರಿ ಅಮ್ಮನವರು ಅಂದ್ರೆ ನನಗೆ ಅಪಾರವಾದ ಭಕ್ತಿ ಮತ್ತು ನಂಬಿಕೆ ಇದೆ, ಅದಕ್ಕೆ ನನ್ನ ನಾಲಿಗೆಯನ್ನು ಅರ್ಪಿಸಿದೆ ಅಂತ ಭಕ್ತ ಹೇಳಿಕೊಂಡಿದ್ದಾನೆ ಎನ್ನಲಾಗಿದೆ..
Dasara Festival ಈ ರತ್ನನಗರ ದೇವಾಲಯವನ್ನು 2015 ರಲ್ಲಿ ನಿರ್ಮಿಸಲಾಯಿತು. ಈ ದೇವಾಲಯದಲ್ಲಿರುವ ದುರ್ಗಾ ಮಾತೆಯ ಮೇಲೆ ತಮಗೆ ಅಪಾರ ನಂಬಿಕೆಯಿದೆ ಎನ್ನುತ್ತಾರೆ ಭಕ್ತರು. ಲಹರ್ ನಗರದಲ್ಲಿರುವ ಈ ದೇವಾಲಯದಲ್ಲಿ ಅಮ್ಮನನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯಲ್ಲಿ ಜನರು ಬರುತ್ತಾರೆ. ಮೇಲಾಗಿ ಭಕ್ತನಿಗೆ ನಾಲಿಗೆ ಮರಳಿ ಬರುತ್ತದೆ ಎಂಬ ನಂಬಿಕೆಯೂ ಸಹ ಇದೆ.. ಎನ್ನುತ್ತಾರೆ ದೇವಸ್ಥಾನಕ್ಕೆ ಬರುವ ಭಕ್ತರು.
ನಿನ್ನೆ ಕೂಡ ದೇವಸ್ಥಾನದಲ್ಲಿ ಹವನ ಮಾಡಿದ ಭಕ್ತರು ಭಕ್ತಿಯಿಂದ ನಾಲಿಗೆ ಕತ್ತರಿಸಿ ದೇವಿಗೆ ಅರ್ಪಿಸಿದ್ದಾರೆ. ಇನ್ನು ಕೆಲವರು ಇಷ್ಟಾರ್ಥಗಳು ನೆರವೇರಿದಾಗ ದೇವಿಯ ಮೇಲಿನ ಭಕ್ತಿಯನ್ನು ತೋರಿಸಲು ಹೀಗೆ ಮಾಡುತ್ತಾರೆ.

Shivamogga Dasara ಶಿವಮೊಗ್ಗ ದಸರಾ ಅಧಿಕಾರಿಗಳಿಗೆ ಬಿಸ್ಲೇರಿ ನೀರು ಜನಕ್ಕೆ ಕೊಳಕು ನೀರು ಸರಬರಾಜು ಪಾಲಿಕೆ ವೈಚಿತ್ರ್ಯ- ಶಿ.ಜು.ಪಾಶಾ

0

Shivamogga Dasara ಹಿಂದೂಗಳ ವಿಶೇಷ ಹಬ್ಬ ದಸರೆಗೆ ಹಿಂದೂ ನಾಯಕರೆಂದೇ ಕರೆಸಿಕೊಳ್ಳುವ ಶಾಸಕ ಚನ್ನಬಸಪ್ಪ @ ಚನ್ನಿ ಕೊಳಕು ಕುಡಿಯುವ ನೀರು ಸರಬರಾಜಾಗುತ್ತಿದ್ದರೂ ಮೌನವಾಗಿರುವುದೇಕೆ?

ಸಂತೋಷದಿಂದಲೇ ನವರಾತ್ರಿ ಹಬ್ಬ ಆಚರಿಸಲು ಸಿದ್ಧರಾದ ಶಿವಮೊಗ್ಗದ ಜನತೆಗೆ ಕೊಳಕು ನೀರನ್ನು ಸರಬರಾಜು ಮಾಡುತ್ತಿದೆ. ಈ ನೀರು ಎಷ್ಟು ಕೊಳಕಿದೆ ಎಂದರೆ, ಸ್ನಾನ ಕೂಡ ಮಾಡಲು ಸಾಧ್ಯವಿಲ್ಲದಷ್ಟು- ಇನ್ನು ಈ ನೀರು ಕುಡಿದುಬಿಟ್ಟರೆ ದೇವರೇಗತಿ; ಆ ನವದುರ್ಗೆಯರೇ ಕಾಪಾಡಬೇಕು!

ಶಿವಮೊಗ್ಗ ನಗರ ನೀರು ಸರಬರಾಜು ವ್ಯವಸ್ಥೆಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ನಿರ್ವಹಿಸಲಾಗುತ್ತಿದ್ದು, ಅ.8ರಂದು ಬಂದ ಮಳೆಯಿಂದಾಗಿ ಗಾಜನೂರು ಡ್ಯಾಂ ಮತ್ತು ತುಂಗಾ ನದಿಯ ನೀರಿನಲ್ಲಿ ಕೆಂಪು ಬಣ್ಣವು (ಟರ್ಬಿಡಿಟಿ) ಹೆಚ್ಚಾಗಿದ್ದು, ನೀರನ್ನು ಸಾರ್ವಜನಿಕರು ಕುದಿಸಿ, ಆರಿಸಿ ಕುಡಿಯುವಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿ ಅದೇ ನೀರಲ್ಲಿ ಕೈತೊಳೆದುಕೊಂಡು ಕಾಣೆಯಾಗಿದ್ದಾರೆ.

ಈ ಕೊಳಕು ನೀರು ಇಡೀ ಶಿವಮೊಗ್ಗಕ್ಕೆ ವಿತರಣೆಯಾಗುತ್ತಿದೆ. ಶಾಸಕ ಚನ್ನಿ, ಆಯುಕ್ತೆ ಕವಿತಾ ಯೋಗಪ್ಪನವರ್, ನೀರು ಸರಬರಾಜು ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರ ಮನೆಗೂ ಇದೇ ಕೊಳಕು ನೀರು ಸರಬರಾಜಾಗುತ್ತಿದೆಯಾ? ಹಾಗೆ ಆಗುತ್ತಿದ್ದರೆ, ಹಿಂದೂಗಳ ವಿಶೇಷ ಹಬ್ಬ ದಸರಾ ಕೊಳಕು ನೀರಲ್ಲೇ ನಡೆಯುತ್ತಿರುವುದೇಕೆ? ಶಾಸಕ ಚನ್ನಿಯವರು ದಸರಾ ಕಾರ್ಯಕ್ರಮಗಳಲ್ಲಿ ಮುಳುಗಿ ಹೋಗಿದ್ದಾರೆ. ಅವರು ಕುಂತಲ್ಲಿ, ನಿಂತಲ್ಲಿ ಬಿಸ್ಲರಿ ವಾಟರ್ ಸಿಗುತ್ತಿದೆ. ಅವರ ಜೊತೆ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ತಮ್ಮ ವ್ಯಾಪ್ತಿಗೇ ಈ ಸಮಸ್ಯೆ ಬರುವುದಿಲ್ಲ ಎಂದು ಅದೇ ಬಿಸ್ಲರಿ ವಾಟರ್ ಕುಡಿಯುತ್ತಾ ದಸರಾದಲ್ಲಿ ಮಗ್ನರಾಗಿದ್ದಾರೆ.

Shivamogga Dasara ಇನ್ನು ಈ ಸಮಸ್ಯೆ ಬಗೆಹರಿಸುವವರು ಯಾರು? ಕೊಳಕು ನೀರು ಕುದಿಸಿ, ಆರಿಸಿ ಕುಡಿಯಲು ಹೋದರೂ ನೀರಿನ ಕೊಳಕು ಬಣ್ಣ ನೋಡಿ ಜನ ಕಂಗಾಲಾಗುತ್ತಿದ್ದಾರೆ. ಕೊಳಕಾತಿ ಕೊಳಕು ನೀರಲ್ಲೇ ದಸರಾ ಮುಗಿಯುತ್ತಿದೆ. ಇನ್ನು, ರೋಗಗಳಿಗೆ ಬಲಿಯಾಗುವುದಷ್ಟೇ ಬಾಕಿ.

ಮಾಜಿ ಸಂಸದರೂ ಆಗಿರುವ ಕಾಂಗ್ರೆಸ್ಸಿನ ರಾಜ್ಯ ವಕ್ತಾರರಾದ ಆಯನೂರು ಮಂಜುನಾಥ್ ರವರು ಶಿವಮೊಗ್ಗ ಜನತೆಗೆ ವಿಶೇಷ ರೀತಿಯಲ್ಲೇ ಶುಭಾಶಯಗಳನ್ನು ಕೋರುತ್ತಾ ನೀರಿನ ಕುರಿತು ಗಮನ ಸೆಳೆದಿದ್ದಾರೆ. ಶಾಸಕರಿಗೂ ಆಯುಕ್ತರಿಗೂ ಮಾತಾಡಿದ್ದಾರೆ.

ಆದರೆ…ನೀರು ಹಾಗೇ ಕೊಳಕಾತಿ ಕೊಳಕಾಗಿಯೇ ಸರಬರಾಜಾಗುತ್ತಿರುವುದು ನಿಂತಿಲ್ಲ ಎಂದು ಶಿವಮೊಗ್ಗದ ಪತ್ರಕರ್ತ ಮತ್ತು ಕವಿ ಶಿ.ಜು.ಪಾಶಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.