Thursday, June 18, 2026
Thursday, June 18, 2026
Home Blog

ಮಹಿಷಿಯಲ್ಲಿನ ಉತ್ತರಾದಿಮಠದಲ್ಲಿನ ಚಿನ್ನದ ಹಲಗಾರತಿಗಳ ಕಳವು ಪ್ರಕರಣ

0

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ ಮಹಿಷಿ ಉತ್ತರಾಧಿ ಮಠದಲ್ಲಿ ಮತ್ತೊಮ್ಮೆ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನದ ಹಲಗಾರತಿಗಳು ನಾಪತ್ತೆಯಾಗಿರುವುದು ಭಕ್ತರಲ್ಲಿ ಆತಂಕ ಮೂಡಿಸಿದೆ.

ತುಂಗಾ ನದಿಯ ದಡದಲ್ಲಿರುವ ಮಹಿಷಿ ಉತ್ತರಾಧಿ ಮಠವು ಮಧ್ವ ಪರಂಪರೆಯ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ. ಪ್ರತಿದಿನ ನೂರಾರು ಭಕ್ತರು ಭೇಟಿ ನೀಡುವ ಈ ಮಠದಲ್ಲಿ ಇದೀಗ ಚಿನ್ನಾಭರಣ ಕಳವು ಪ್ರಕರಣ ಬೆಳಕಿಗೆ ಬಂದಿದೆ.

ಮಠದ ಮೂಲಗಳ ಪ್ರಕಾರ, ಸುಮಾರು 750 ಗ್ರಾಂ ತೂಕದ ಚಿನ್ನದ ಹಲಗಾರತಿಗಳು ನಾಪತ್ತೆಯಾಗಿವೆ. ಒಂದೊಂದು ಹಲಗಾರತಿ ಸುಮಾರು 50 ಗ್ರಾಂ ಚಿನ್ನದಿಂದ ನಿರ್ಮಿತವಾಗಿದ್ದು, ಒಟ್ಟು 15 ಹಲಗಾರತಿಗಳು ಕಾಣೆಯಾಗಿರುವುದಾಗಿ ತಿಳಿದುಬಂದಿದೆ.

ಪ್ರಾಥಮಿಕ ಅಂದಾಜಿನ ಪ್ರಕಾರ, ಕಳುವಾಗಿರುವ ಚಿನ್ನಾಭರಣದ ಮೌಲ್ಯ ಒಂದು ಕೋಟಿಗೂ ಅಧಿಕ ಎಂದು ಹೇಳಲಾಗುತ್ತಿದೆ. ಈ ಘಟನೆ ಮಠದ ಆಡಳಿತ ಮಂಡಳಿ ಹಾಗೂ ಭಕ್ತರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಮಹಿಷಿ ಉತ್ತರಾಧಿ ಮಠದಲ್ಲಿ ಚಿನ್ನದ ಹಲಗಾರತಿಗಳ ನಾಪತ್ತೆ ಪ್ರಕರಣ ಇದೀಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಭದ್ರತಾ ವ್ಯವಸ್ಥೆಯ ನಡುವೆಯೂ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹೇಗೆ ನಾಪತ್ತೆಯಾಯಿತು ಎಂಬುದರ ಕುರಿತು ತನಿಖೆ ನಡೆಯಬೇಕಿದೆ. ಈ ಪ್ರಕರಣದ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಪೊಲೀಸರು ಪತ್ತೆಹಚ್ಚಬೇಕಿದೆ.

ಗಮನಾರ್ಹ ಸಂಗತಿಯೆಂದರೆ, ಇದೇ ಮಠದಲ್ಲಿ ಕಳೆದ ವರ್ಷ ಏಪ್ರಿಲ್ 5ರಂದು ದರೋಡೆ ಯತ್ನ ನಡೆದಿತ್ತು. ಮಠದಲ್ಲಿ ಸುಮಾರು 300 ಕೋಟಿ ರೂಪಾಯಿ ಹಣ ಸಂಗ್ರಹಿಸಲಾಗಿದೆ ಎಂಬ ತಪ್ಪು ಮಾಹಿತಿಯ ಆಧಾರದ ಮೇಲೆ 12 ರಿಂದ 15 ಮಂದಿಯ ತಂಡ ದರೋಡೆಗೆ ಯತ್ನಿಸಿತ್ತು.

ಆ ಸಂದರ್ಭದಲ್ಲಿ ನಗದು, ಲ್ಯಾಪ್‌ಟಾಪ್ ಹಾಗೂ ಮೊಬೈಲ್ ಸೇರಿದಂತೆ ಸುಮಾರು 1.16 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ದರೋಡೆಕೋರರು ಕೊಂಡೊಯ್ದಿದ್ದರು. ಬಳಿಕ ಪ್ರಕರಣದ ತನಿಖೆ ವೇಳೆ ಪ್ರಮುಖ ಆರೋಪಿಯನ್ನು ಪೊಲೀಸರು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದರು.

ಜಿಲ್ಲೆಯ 14 ಗ್ರಾಮ ಪಂಚಾಯತಿ ಅರಿವು ಕೇಂದ್ರಗಳ ಮೇಲ್ವಿಚಾರಕ ಹುದ್ದೆಗಳಿಗೆ ಅರ್ಜಿ ಆಹ್ವಾನ

0

ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 258 ಗ್ರಾಮ ಪಂಚಾಯತಿ ಅರಿವು ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಪ್ರಸ್ತುತ ಖಾಲಿ ಇರುವ 14 ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಿಗೆ ತಲಾ ಒಂದರಂತೆ ಒಟ್ಟು 14 ಮೇಲ್ವಿಚಾರಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಬಾಂಡ್ಯ ಕುಕ್ಕೆ, ಹೊಸಹಳ್ಳಿ. ಸಾಗರ ತಾಲ್ಲೂಕಿನ
ಕುದರೂರು, ಕಲ್ಮನೆ, ಹೆಗ್ಗೋಡು. ಭದ್ರಾವತಿ ತಾಲ್ಲೂಕಿನ ವೀರಾಪುರ, ಕೂಡ್ಲಿಗೆರೆ. ಹೊಸನಗರ ತಾಲ್ಲೂಕಿನ ಸುಳುಗೋಡು, ತ್ರಿಣಿವೆ. ಸೊರಬ ತಾಲ್ಲೂಕಿನ ಭಾರಂಗಿ, ಹರೀಶಿ. ಶಿಕಾರಿಪುರ ತಾಲ್ಲೂಕಿನ‌ ಮುದ್ದನಹಳ್ಳಿ, ಅಂಬಾರಗೊಪ್ಪ ಹಾಗೂ ಶಿವಮೊಗ್ಗ ತಾಲ್ಲೂಕಿನ ಚೋರಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅರಿವು ಕೇಂದ್ರಗಳಲ್ಲಿ ಈ ಹುದ್ದೆಗಳು ಖಾಲಿ ಇದ್ದು, ನಿಯಮಾನುಸಾರ ರೋಸ್ಟರ್ ಬಿಂದುಗಳ ಆಧಾರದ ಮೇಲೆ ನೇಮಕಾತಿ ನಡೆಯಲಿದೆ.
ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ, ಧೃಢೀಕರಿಸಿದ ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಿಗೆ ಖುದ್ದಾಗಿ ಅಥವಾ ನೊಂದಾಯಿತ ಅಂಚೆ ಮೂಲಕ ಸಲ್ಲಿಸಬೇಕಾಗಿದೆ. ಅರ್ಜಿಗಳನ್ನು ಸಲ್ಲಿಸಲು ಜುಲೈ 8 ಕಡೆಯ ದಿನವಾಗಿದೆ.
ಅರ್ಜಿ ನಮೂನೆಗಳು ಆಯಾ 14 ಗ್ರಾಮ ಪಂಚಾಯತಿಗಳಲ್ಲಿ ಲಭ್ಯವಿದ್ದು, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://shivamogga.nic.in ಮೂಲಕವೂ ಡೌನ್‌ಲೋಡ್ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸಲು ಶಿವಮೊಗ್ಗ ಜಿಲ್ಲಾ ಪಂಚಾಯತ್‌ನ ಉಪ ಕಾರ್ಯದರ್ಶಿ (ಆಡಳಿತ) ಹಾಗೂ ಗ್ರಾಮ ಪಂಚಾಯತಿ ಗ್ರಂಥಾಲಯ ಮೇಲ್ವಿಚಾರಕರ ನೇಮಕಾತಿ ಸಮಿತಿ ಸದಸ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದಿಂದ ಅರಿವು ಸಾಲಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

0

ಶಿವಮೊಗ್ಗ ಜಿಲ್ಲಾ ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮವು 2026-27ನೇ ಸಾಲಿಗೆ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಕ್ರಿಶ್ಚಿಯನ್ ಸಮುದಾಯದವರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆಯ್ಕೆಯಾಗುವ ಹೊಸ/ಸಿಇಟಿ/ಎನ್‌ಇಇಟಿ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್ಗಳಿಗೆ ಪ್ರವೇಶ ಪಡೆಯಬಯಸುವವರಿಂದ ಅರಿವು ಸಾಲ ಸೌಲಭ್ಯ ಪಡೆಯಲು ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.
ಆಸಕ್ತ ವಿದ್ಯಾರ್ಥಿಗಳು www.kccdconline.karnataka.gov.in ಮೂಲಕ ಅರ್ಜಿ ಭರ್ತಿ ಮಾಡಿ, ಪ್ರಿಂಟೌಟ್ ಜೊತೆಗೆ ಎಸ್‌ಎಸ್‌ಎಲ್‌ಸಿ/ಪಿಯುಸಿ ಅಂಕಪಟ್ಟಿ, ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಭಾವಚಿತ್ರ, ಸಿಇಟಿ/ಎನ್‌ಇಇಟಿ ಪ್ರವೇಶ ಪತ್ರ ಹಾಗೂ ಇನ್ನಿತರ ದಾಖಲೆಗಳನ್ನು ಲಗತ್ತಿಸಿ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಅಚ್ಯುತ್‌ರಾವ್ ಲೇಔಟ್, 4ನೇ ತಿರುವು, ನಂಜಪ್ಪ ಆಸ್ಪತ್ರೆ ಮುಂಭಾಗ, ಶಿವಮೊಗ್ಗ ಇಲ್ಲಿಗೆ ಸಲ್ಲಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹಿರಿಯ ಉದ್ಯಮಿ, ಸಮಾಜ ಸೇವಕ ಟಿ‌ಆರ್ .ಅಶ್ವತ್ಥ ನಾರಾಯಣ ಶೆಟ್ಟಿ ಅವರಿಗೆ ಸನ್ಮಾನ

0

ಆರ್ಯವೈಶ್ಯ ಶ್ರೀರಾಮ ಸಹಕಾರ ಸಂಘದ ಮಾಜಿ ಅಧ್ಯಕ್ಷರು ಮತ್ತು ಸೇವಾ ಪುರಸ್ಕೃತರಾದ ಅಶ್ವತ್ಥ ನಾರಾಯಣ ಶೆಟ್ಟಿ ಟಿ.ಆರ್ ಅವರಿಗೆ ಶ್ರೀ ಆರ್ಯವೈಶ್ಯ ಸಹಕಾರ ಸಂಘದಿಂದ ಆತ್ಮೀಯವಾಗಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಸಹಕಾರ ಸಂಘದ ಅಧ್ಯಕ್ಷ ಡಾ. ಭರತ್, ಉಪಾಧ್ಯಕ್ಷ ಈಶ್ವರ್ ಬಿ.ಎಂ. ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಚಿನ್ ಟಿ.ಎಲ್., ಅವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕರುಗಳು ಮತ್ತು ಸಿಬ್ಬಂದಿ ವರ್ಗದವರಿದ್ದರು.

“ಅಗ್ನಿವೀರ್” ಆಗಿ ಆಯ್ಕೆಯಾದ ಶಿವಮೊಗ್ಗದ ಡಿ.ದರ್ಶಿತ್ ಗೆ ಆತ್ಮೀಯ ಸನ್ಮಾನ

0

ಶಿವಮೊಗ್ಗ ಗೋಪಾಳದ ಶ್ರೀ ರಾಮಕೃಷ್ಣ ವಿದ್ಯಾನಿಕೇತನದ ಹಿಂದಿನ ವಿದ್ಯಾರ್ಥಿ ಅನುಪಿನಕಟ್ಟೆ ಹಳೇ ಊರಿನ ದೀಪಿಕಾ ಅವರ ಪುತ್ರ ದರ್ಶಿತ್ ಡಿ. ಅವರು ಭಾರತೀಯ ಸೇನೆಯ ಅಗ್ನಿವೀರ್ ಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ರಾಮಕೃಷ್ಣ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಕಾರ್ಯದರ್ಶಿ ಶೋಭಾ ವೆಂಕಟರಮಣ ಅವರ ನೇತೃತ್ವದಲ್ಲಿ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಇಂದು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿತು.

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

0

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡುವ ಸಲುವಾಗಿ, ಶಿವಮೊಗ್ಗ ವೃತ್ತ ವ್ಯಾಪ್ತಿಯಲ್ಲಿ ವನ್ಯಪ್ರಾಣಿಗಳು ಮೃತಪಟ್ಟಾಗ ಮರಣೋತ್ತರ ಪರೀಕ್ಷೆ, ವನ್ಯಪ್ರಾಣಿ ಮತ್ತು ಮಾನವ ಸಂಘರ್ಷದ ಸಂದರ್ಭದಲ್ಲಿ ಮತ್ತು ಇನ್ನಿತರೆ ತುರ್ತು ಸಂದರ್ಭದಲ್ಲಿ ವನ್ಯಪ್ರಾಣಿಗಳ ರಕ್ಷಣಿ ಮತ್ತು ಸ್ಥಳಾಂತರ ಕಾರ್ಯಗಳನ್ನು ತ್ವರಿತವಾಗಿ ಪರಿಸ್ಥಿತಿಗಳನ್ನು ನಿಭಾಯಿಸಲು 01 ಪಶುವೈದ್ಯರ ಅವಶ್ಯಕತೆ ಇದ್ದು, ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸಲು ಆಸಕ್ತಿ ಹೊಂದಿರುವ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.

ಪಶುವೈದ್ಯರ ಹುದ್ದೆಗೆ Bachelor of veterinary science & Animal husbandry ಶಿಕ್ಷಣವನ್ನು ಹೊಂದಿರುವ ಜೊತೆಗೆ ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳ ವನ್ಯಜೀವಿ ಕ್ಷೇತ್ರ / ಮೃಗಾಲಯ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸಿದ ಅನುಭವ ಪಡೆದಿರುವ, ವನ್ಯಜೀವಿ ವಿಷಯದಲ್ಲಿ ಸ್ನಾತಕೋತ್ತರ ಪಶುವೈದ್ಯಕೀಯ ಪದವಿ ಪಡೆದಿರುವ ಪಶುವೈದ್ಯರು ದಿ:06.07.2026 ರಂದು ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸುವುದು.

ಜು.02 ರೊಳಗೆ ಸ್ವಯಂ ವಿವರಗಳೊಂದಿಗೆ ಅವಶ್ಯಕವಾದ ಪೂರಕ ದಾಖಲಾತಿಗಳನ್ನು ಅಂಚೆ ಮೂಲಕ ಅಥವಾ ಮುದ್ದಾಂ ಈ ಕಚೇರಿಗೆ ಸಲ್ಲಿಸುವಂತೆ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

ಅರ್ಜಿ ನಮೂನೆಗಾಗಿ ಅಥವಾ ಉಪ ಅರಣ್ಯ ಸಂರಕ್ಷಣಾಧಿಕಾರಿ. ವನ್ಯಜೀವಿ ವಿಭಾಗ ಕಛೇರಿ. ಶಿವಮೊಗ್ಗ ಅಥವಾ ವೆಬ್‌ಸೈಟ್ https://sakrebailuelephantcamp.org/ ಮೂಲಕ ಪಡೆಯುವುದು.
ಹೆಚ್ಚಿನ ಮಾಹಿತಿಗೆ ದೂ. ಸಂ.: 08182-222983, ವಿಜಯ್‌ಕುಮಾರ್ ಕಾಳಪ್ಪನವರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವನ್ಯಜೀವಿ ಉಪ ವಿಭಾಗ, ಶಿವಮೊಗ್ಗ- ಮೊಬೈಲ್ ಸಂಖ್ಯೆ:- 9481461553. ವಿನಯ್ ಜೆ ಆರ್. ವಲಯ ಅರಣ್ಯಾಧಿಕಾರಿ, ಸಕ್ರೆಬೈಲು ವನ್ಯಜೀವಿ ವಲಯ, ಗಾಜನೂರು, 9663121406 ಇವರುಗಳನ್ನು ಸಂಪರ್ಕಿಸುವುದು.
05

University of Agricultural ಮಲೆನಾಡಿನಲ್ಲಿ ಹಲಸಿನ ಬೆಳೆ ಹೇರಳ.ಅದರ ವಿವಿಧ ಸಂಸ್ಕರಿತ ಉತ್ಪನ್ನಗಳಿಂದ ಅಧಿಕ‌ ಲಾಭಗಳಿಸಬಹುದು- ಡಾ.ರಾಮಕೃಷ್ಣ ಹೆಗಡೆ

0

University of Agricultural ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ, ವಿಸ್ತರಣಾ ನಿರ್ದೇಶನಾಲಯದ, ರೈತರ ತರಬೇತಿ ಸಂಸ್ಥೆ, ಇರುವಕ್ಕಿ ಶಿವಮೊಗ್ಗದಡಿಯಲ್ಲಿ ದಿನಾಂಕ 16.06.2026 ಮಂಗಳವಾರ ದಂದು ” ಹಲಸಿನ ಹಣ್ಣಿನ ಮೌಲ್ಯವರ್ಧನೆ” ಕುರಿತ ತರಬೇತಿ ಕಾರ್ಯಕ್ರಮವನ್ನು ರೈತರ ತರಬೇತಿ ಸಂಸ್ಥೆ, ಇರುವಕ್ಕಿ ಯಲ್ಲಿ ಆಯೋಜಿಸಲಾಗಿತ್ತು.

ಈ ತರಬೇತಿಯಲ್ಲಿ ಡಾ. ರಾಮಕೃಷ್ಣ ಹೆಗಡೆ, ಹಿರಿಯ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ರೈತರ ತರಬೇತಿ ಸಂಸ್ಥೆ, ಇರುವಕ್ಕಿ ಇವರು ರೈತರನ್ನು ಸ್ವಾಗತಿಸಿದರು. ಡಾ. ರಾಘವೇಂದ್ರ ಕೆ. ಮೆಸ್ತಾ, ವಿಸ್ತರಣಾ ನಿರ್ದೇಶಕರು, ಕೆ.ಶಿ.ನಾ.ಕೃ.ತೋ.ವಿ.ವಿ., ಇರುವಕ್ಕಿ, ಶಿವಮೊಗ್ಗರವರು ಈ ತರಬೇತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ರೈತರನುದ್ದೇಶಿಸಿ ಮಾತನಾಡುತ್ತಾ ಮಲೆನಾಡಿನಲ್ಲಿ ಅತಿ ಹೆಚ್ಚಾಗಿ ಹಲಸಿನ ಹಣ್ಣು ದೊರೆಯುತ್ತಿದ್ದು, ಹಣ್ಣನ್ನು ನೇರವಾಗಿ ಮಾರಾಟ ಮಾಡುವ ಬದಲು, ಅದನ್ನು ವಿವಿಧ ಸಂಸ್ಕರಿತ ಉತ್ಪನ್ನಗಳನ್ನಾಗಿ ಪರಿವರ್ತಿಸಿ ಹೆಚ್ಚಿನ ಲಾಭಗಳಿಸಬಹುದು ಎಂದು ತಿಳಿಸಿದರು. ಹಲಸಿನ ಹಣ್ಣು ಬೇಗನೆ ಕೊಳೆಯುವುದು ಮತ್ತು ಶೇಕಡಾ 60 ರಿಂದ 70 ರಷ್ಟು ಹಣ್ಣುಗಳು ವ್ಯರ್ಥವಾಗುವುದರಿಂದ ಮೌಲ್ಯವರ್ಧನೆ ಅತ್ಯಗತ್ಯವಾಗಿದೆ ಎಂದು ಸೂಚಿಸಿದರು.

University of Agricultural ಈ ತರಬೇತಿ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಸಾಗರ ತಾಲ್ಲೂಕಿನ ಅತ್ತಿಸರ ಗ್ರಾಮದ ಶ್ರೀ ರವೀಂದ್ರ ಕಾಶಿ ರವರು ಹಲಸಿನ ಹಣ್ಣಿನಿಂದ ವಿವಿಧ ಬಗೆಯ ತಿನಿಸುಗಳಾದ ಪಾಯಸ, ಕೋಸಂಬರಿ, ಬೋಂಡಾ, ಚಿಪ್ಸ್ ಹಾಗೂ ವೈನ್ ತಯಾರಿಕೆಯ ವಿಧಾನವನ್ನು ಹಾಗೂ ಇತರೆ ತಿನಿಸುಗಳ ಮಾಹಿತಿಯನ್ನು ಸುವಿವರವಾಗಿ ರೈತರೊಂದಿಗೆ ಹಂಚಿಕೊಂಡರು. ಕೃಷಿ ವಿಜ್ಞಾನಗಳ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಶ್ರುತಿ ನಾಯಕ್ ರವರು ಹಲಸಿನ ಹಣ್ಣಿನಿಂದ ಬನ್ಸ್ ಮತ್ತು ಜಾಮ್ ತಯಾರಿಸುವ ವಿಧಾನವನ್ನು ರೈತರಿಗೆ ತಿಳಿಯಪಡಿಸಿದರು. ಈ ತರಬೇತಿ ಕಾರ್ಯಕ್ರಮದಲ್ಲಿ ರೈತ ತರಬೇತಿ ಸಂಸ್ಥೆಯ ಡಾ.ಕೃಷ್ಣ ರೆಡ್ಡಿ, ಪಿ. ರವರು ಭಾಗವಹಿಸಿ ರೈತರೊಂದಿಗೆ ಇತರೆ ವಿಷಯಗಳ ಕುರಿತು ಉಪಯುಕ್ತ ಮಾಹಿತಿಯನ್ನು ನೀಡಿದರು.

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

0

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ ಕಾಯಿಲೆ

ಲೇಖಕರು: ಡಾ. ಕಾರ್ತಿಕ್ ಯು ಎಸ್
ಮೂತ್ರಕೋಶ ಶಸ್ತ್ರಚಿಕಿತ್ಸಾ ತಜ್ಞರು
ಎಸ್ ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಯಾಲಿಟಿ ಸೆಂಟರ್, ದಾವಣಗೆರೆ.

58 ವರ್ಷದ ಉದ್ಯಮಿ ರಮೇಶ್ (ಹೆಸರು ಬದಲಾಯಿಸಲಾಗಿದೆ) ಅವರು ತಮ್ಮ ವೈದ್ಯಕೀಯ ವರದಿಗಳ ಫೈಲ್ ಹಿಡಿದುಕೊಂಡು ನನ್ನ ಕ್ಲಿನಿಕ್ಗೆ ಬಂದಿದ್ದರು. ಕುಟುಂಬದ ಸಮಾರಂಭವೊಂದರ ನಂತರ ಕಾಣಿಸಿಕೊಂಡ ಆಮ್ಲೀಯತೆ (ಅಸಿಡಿಟಿ) ಮತ್ತು ಹೊಟ್ಟೆಯ ಅಸ್ವಸ್ಥತೆಗಾಗಿ ಅವರು ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಿಸಿದ್ದರು. ಗ್ಯಾಸ್ಟ್ರಿಕ್ ಸಮಸ್ಯೆಗೆ ವೈದ್ಯರು ಔಷಧಿ ನೀಡುತ್ತಾರೆ ಮತ್ತು ಮರುದಿನವೇ ಕೆಲಸಕ್ಕೆ ಮರಳಬಹುದು ಎಂಬುದು ಅವರ ನಿರೀಕ್ಷೆಯಾಗಿತ್ತು.

ಆದರೆ, ಸ್ಕ್ಯಾನಿಂಗ್ ವರದಿಯು ಅವರ ಮೂತ್ರಪಿಂಡದಲ್ಲಿ (ಕಿಡ್ನಿ) ಸಣ್ಣ ಗಡ್ಡೆಯೊಂದನ್ನು ಪತ್ತೆಹಚ್ಚಿತ್ತು. ಆ ವೈದ್ಯರು ಹೆಚ್ಚಿನ ತಪಾಸಣೆ ಹಾಗೂ ಚಿಕಿತ್ಸೆಗೆ ನನ್ನ ಬಳಿ ಕಳುಹಿಸಿದ್ದರು. “ಡಾಕ್ಟರ್, ನನಗೆ ಯಾವುದೇ ನೋವಿಲ್ಲ. ನಾನು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ,” ಎಂದು ಅವರು ಅಚ್ಚರಿಯಿಂದ ಹೇಳಿದರು.

ಕಿಡ್ನಿ ಕ್ಯಾನ್ಸರ್ ರೋಗನಿರ್ಣಯಗೊಂಡ ಅನೇಕ ರೋಗಿಗಳಂತೆ, ರಮೇಶ್ ಅವರಿಗೂ ಯಾವುದೇ ಮುನ್ಸೂಚನೆ ಅಥವಾ ಲಕ್ಷಣಗಳಿರಲಿಲ್ಲ. ಮೂತ್ರದಲ್ಲಿ ರಕ್ತ, ತೂಕ ನಷ್ಟ, ಅಥವಾ ವೈದ್ಯರನ್ನು ಭೇಟಿಯಾಗಲು ಪ್ರೇರೇಪಿಸುವಂತಹ ಯಾವುದೇ ಗಂಭೀರ ನೋವು ಅವರಲ್ಲಿರಲಿಲ್ಲ. ಆ ಗಡ್ಡೆಯು ಕೇವಲ ಆಕಸ್ಮಿಕವಾಗಿ ಪತ್ತೆಯಾಗಿತ್ತು.

ಅದೃಷ್ಟವಶಾತ್, ಕ್ಯಾನ್ಸರ್ ಆರಂಭಿಕ ಹಂತದಲ್ಲೇ ಪತ್ತೆಯಾದ ಕಾರಣ, ಅವರು ಸಕಾಲಿಕ ಚಿಕಿತ್ಸೆಗೆ ಒಳಗಾದರು ಮತ್ತು ಇಂದು ಆರೋಗ್ಯಕರ ಹಾಗೂ ಸಕ್ರಿಯ ಜೀವನವನ್ನು ನಡೆಸುತ್ತಿದ್ದಾರೆ. ಅವರ ಕಥೆಯು ಕಿಡ್ನಿ ಕ್ಯಾನ್ಸರ್ ಕುರಿತಾದ ವಾಸ್ತವವನ್ನು ಎತ್ತಿತೋರಿಸುತ್ತದೆ — ಇದು ಬಹುತೇಕ ಒಂದು ನಿಶ್ಯಬ್ದ ಕಾಯಿಲೆಯಾಗಿದ್ದು, ಮುಂದುವರಿದ ಹಂತವನ್ನು ತಲುಪುವವರೆಗೆ ಗುಪ್ತವಾಗಿ ಉಳಿಯಬಲ್ಲದು. ಆದ್ದರಿಂದ ಜಾಗೃತಿ, ಆರಂಭಿಕ ಪತ್ತೆ ಮತ್ತು ನಿಯಮಿತ ಆರೋಗ್ಯ ತಪಾಸಣೆಗಳು ಬಹಳ ಮುಖ್ಯ.

ಕಿಡ್ನಿ ಕ್ಯಾನ್ಸರ್ ಎಂದರೇನು?

ಮೂತ್ರಪಿಂಡದಲ್ಲಿರುವ ಅಸಹಜ ಜೀವಕೋಶಗಳು ಅನಿಯಂತ್ರಿತವಾಗಿ ಬೆಳೆಯಲು ಪ್ರಾರಂಭಿಸಿದಾಗ ಕಿಡ್ನಿ ಕ್ಯಾನ್ಸರ್ ಸಂಭವಿಸುತ್ತದೆ. ವಯಸ್ಕರಲ್ಲಿ ಕಂಡುಬರುವ ಅತ್ಯಂತ ಸಾಮಾನ್ಯ ವಿಧವೆಂದರೆ ರೆನಲ್ ಸೆಲ್ ಕಾರ್ಸಿನೋಮ (RCC).

ಕಿಡ್ನಿಗಳು ರಕ್ತದಿಂದ ತ್ಯಾಜ್ಯವನ್ನು ಫಿಲ್ಟರ್ ಮಾಡುವುದು, ದ್ರವದ ಸಮತೋಲನವನ್ನು ಕಾಪಾಡುವುದು ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುವಂತಹ ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತವೆ. ಈ ಅಂಗಗಳಲ್ಲಿ ಕ್ಯಾನ್ಸರ್ ಬೆಳೆದಾಗ, ಅದು ಈ ಕಾರ್ಯಗಳಿಗೆ ಅಡ್ಡಿಪಡಿಸುತ್ತದೆ ಮತ್ತು ಬೇಗನೆ ಚಿಕಿತ್ಸೆ ನೀಡದಿದ್ದರೆ ದೇಹದ ಇತರ ಭಾಗಗಳಿಗೂ ಹರಡುವ ಅಪಾಯವಿರುತ್ತದೆ.

ಇದನ್ನು “ನಿಶ್ಯಬ್ದ ಕಾಯಿಲೆ” ಎಂದು ಏಕೆ ಕರೆಯುತ್ತಾರೆ?

Klive Special Article ಇತರ ಕ್ಯಾನ್ಸರ್ಗಳಿಗಿಂತ ಭಿನ್ನವಾಗಿ, ಕಿಡ್ನಿ ಕ್ಯಾನ್ಸರ್ ಆರಂಭಿಕ ಹಂತಗಳಲ್ಲಿ ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ. ಅಲ್ಟ್ರಾಸೌಂಡ್ ಅಥವಾ ಸಿಟಿ ಸ್ಕ್ಯಾನ್ನಂತಹ ಇಮೇಜಿಂಗ್ ಪರೀಕ್ಷೆಗಳಿಗೆ ಒಳಗಾದಾಗ ಅನೇಕ ರೋಗಿಗಳಲ್ಲಿ ಇದು ಆಕಸ್ಮಿಕವಾಗಿ ಪತ್ತೆಯಾಗುತ್ತದೆ. ರೋಗ ಉಲ್ಬಣಗೊಂಡಾಗ ಈ ಕೆಳಗಿನ ಲಕ್ಷಣಗಳು ಕಾಣಿಸಿಕೊಳ್ಳಬಹುದು:

ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು
ಬೆನ್ನಿನ ಕೆಳಭಾಗದಲ್ಲಿ ಅಥವಾ ಪಕ್ಕೆಲುಬಿನ ಬಳಿ ನಿರಂತರ ನೋವು
ಹೊಟ್ಟೆಯಲ್ಲಿ ಗಡ್ಡೆ (Lump)
ವಿವರಿಸಲಾಗದ ತೂಕ ನಷ್ಟ
ತೀವ್ರ ಆಯಾಸ ಮತ್ತು ಹಸಿವಾಗದಿರುವುದು
ಯಾವುದೇ ಸೋಂಕು ಇಲ್ಲದೆ ಜ್ವರ ಬರುವುದು

ಅಪಾಯ ಯಾರಿಗೆ ಹೆಚ್ಚು?

ಈ ಕೆಳಗಿನ ಅಂಶಗಳು ಕಿಡ್ನಿ ಕ್ಯಾನ್ಸರ್ ಬರುವ ಅಪಾಯವನ್ನು ಹೆಚ್ಚಿಸುತ್ತವೆ:

ಧೂಮಪಾನ: ಕಿಡ್ನಿ ಕ್ಯಾನ್ಸರ್ಗೆ ಇದು ಅತ್ಯಂತ ಪ್ರಮುಖ ಹಾಗೂ ತಡೆಗಟ್ಟಬಹುದಾದ ಕಾರಣವಾಗಿದೆ.
ಬೊಜ್ಜು: ವಿಪರೀತ ದೇಹದ ತೂಕವು ಹಾರ್ಮೋನುಗಳ ಮಟ್ಟವನ್ನು ಬದಲಾಯಿಸಿ ಕ್ಯಾನ್ಸರ್ ಬೆಳವಣಿಗೆಗೆ ಕಾರಣವಾಗಬಹುದು.
ಅಧಿಕ ರಕ್ತದೊತ್ತಡ: ದೀರ್ಘಕಾಲದ ಅಧಿಕ ರಕ್ತದೊತ್ತಡವು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.
ಕೌಟುಂಬಿಕ ಹಿನ್ನೆಲೆ: ಹತ್ತಿರದ ಸಂಬಂಧಿಗಳಲ್ಲಿ ಯಾರಿಗಾದರೂ ಕಿಡ್ನಿ ಕ್ಯಾನ್ಸರ್ ಇದ್ದರೆ, ಅಪಾಯ ಹೆಚ್ಚು.
ದೀರ್ಘಕಾಲದ ಮೂತ್ರಪಿಂಡದ ಕಾಯಿಲೆ (CKD): ಡಯಾಲಿಸಿಸ್ ಪಡೆಯುತ್ತಿರುವ ರೋಗಿಗಳಿಗೆ ಎಚ್ಚರಿಕೆ ಅಗತ್ಯ.

ಪತ್ತೆ ಮಾಡುವುದು ಹೇಗೆ ? ಮತ್ತು ಇದರ ಚಿಕಿತ್ಸೆ

ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿ ಪತ್ತೆಹಚ್ಚಿದರೆ, ಚಿಕಿತ್ಸೆಯ ಫಲಿತಾಂಶಗಳು ಅತ್ಯುತ್ತಮವಾಗಿರುತ್ತವೆ. ಶಸ್ತ್ರಚಿಕಿತ್ಸೆಯ ಮೂಲಕ ಸಣ್ಣ ಗಡ್ಡೆಗಳನ್ನು ಯಶಸ್ವಿಯಾಗಿ ತೆಗೆದುಹಾಕಬಹುದು. ಕಳೆದ ದಶಕದಲ್ಲಿ ಕಿಡ್ನಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಭಾರಿ ಪ್ರಗತಿಯಾಗಿದೆ.

ಗಡ್ಡೆಯನ್ನು (Partial nephrectomy) ಅಥವಾ (Radical nephrectomy) ಶಸ್ತ್ರಚಿಕಿತ್ಸೆಯ ಮೂಲಕ ತೆಗೆಯುವುದು, ಕನಿಷ್ಠ-ಆಕ್ರಮಣಕಾರಿ (Minimally invasive) ಲ್ಯಾಪ್ರೋಸ್ಕೋಪಿಕ್ ಮತ್ತು ರೋಬೋಟಿಕ್ ಶಸ್ತ್ರಚಿಕಿತ್ಸೆಗ̧ಳು ಟಾರ್ಗೆಟೆಡ್ ಥೆರಪಿ ಮತ್ತು ಇಮ್ಯುನೊಥೆರಪಿ ಹಾಗೂ ಗಡ್ಡೆಯ ಗುಣಲಕ್ಷಣಗಳ ಆಧಾರದ ಮೇಲೆ ವೈಯಕ್ತಿಕಗೊಳಿಸಿದ ಚಿಕಿತ್ಸೆಗಳು.

ಇದನ್ನು ತಡೆಗಟ್ಟಲು ಸಾದ್ಯವೇ?

ಎಲ್ಲಾ ಪ್ರಕರಣಗಳನ್ನು ತಡೆಯಲಾಗದಿದ್ದರೂ, ಈ ಜೀವನಶೈಲಿ ಬದಲಾವಣೆಗಳಿಂದ ಅಪಾಯವನ್ನು ಕಡಿಮೆ ಮಾಡಬಹುದು:

ತಂಬಾಕು ಮತ್ತು ಧೂಮಪಾನ ತ್ಯಜಿಸುವುದು, ಆರೋಗ್ಯಕರ ತೂಕ ಮತ್ತು ರಕ್ತದೊತ್ತಡವನ್ನು ಕಾಪಾಡಿಕೊಳ್ಳುವುದು, ನಿಯಮಿತ ವ್ಯಾಯಾಮ ಮತ್ತು ಸಮತೋಲಿತ ಆಹಾರ, ಸಾಕಷ್ಟು ನೀರು ಕುಡಿಯುವುದು, ನಿಯಮಿತವಾಗಿ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು

ಪ್ರತಿ ವರ್ಷ ‘ಕಿಡ್ನಿ ಕ್ಯಾನ್ಸರ್ ಜಾಗೃತಿ ದಿನ’ ನಮಗೆ ನೆನಪಿಸುವುದೇನೆಂದರೆ, ಕೆಲವು ಗಂಭೀರ ಕಾಯಿಲೆಗಳು ಯಾವುದೇ ಮುನ್ಸೂಚನೆ ನೀಡದೆ ಬರಬಹುದು. ರಮೇಶ್ ಅವರು ಅದೃಷ್ಟವಂತರು, ಏಕೆಂದರೆ ಅವರ ಕ್ಯಾನ್ಸರ್ ಹಾನಿ ಮಾಡುವ ಮುನ್ನವೇ ಪತ್ತೆಯಾಯಿತು. ಆದರೆ ಕಾಯಿಲೆ ಉಲ್ಬಣಗೊಳ್ಳುವವರೆಗೆ ಕಾಯಬೇಡಿ. ಕಿಡ್ನಿ ಕ್ಯಾನ್ಸರ್ ನಿಶ್ಯಬ್ದವಾಗಿರಬಹುದು, ಆದರೆ ನಮ್ಮ ಅರಿವು ಮತ್ತು ಜಾಗೃತಿ ಎಂದಿಗೂ ನಿಶ್ಯಬ್ದವಾಗಿರಬಾರದು.

( ಜೂನ್ 18, ವಿಶ್ವ ಕಿಡ್ನಿ ಕ್ಯಾನ್ಸರ್ ದಿನದ ಅಂಗವಾಗಿ ಲೇಖನ )

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

0

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ ಬಂದಿದ್ದೇನೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ತಮ್ಮ ಮನದಾಳದಿಂದ ಮಾತನಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ಅಂತಃಕರಣದ ನುಡಿ ಅವರಿಂದ ಹೊರಬಂದಿದೆ.
ಮುಂದುವರೆದು..
“ಆದರೆ ನನ್ನ ಮನಸ್ಸು ಇಂದಿಗೂ ಬಿಜೆಪಿಯಲ್ಲೇ ಇದ್ದು ದೇಹ ಮಾತ್ರ ಹೊರಗಡೆ ಇದೆ.
ನನ್ನ ಅಭಿಪ್ರಾಯವೇ ಬಹಳಷ್ಟು ಜನ ನಾಯಕರು ಮತ್ತು ಕಾರ್ಯಕರ್ತರದ್ದಾಗಿದೆ
ಪಕ್ಷದ ನಾಯಕತ್ವ ಇದನ್ನು ಗಮನಿಸುತ್ತಿದೆ ಎಂದು ಹೇಳಿದರು

K.S. Eshwarappa ಇಂದಲ್ಲ ನಾಳೆ ಪರಿಸ್ಥಿತಿ ಸರಿ ಹೋಗಲಿದೆ ಎಂದು ಕೆ ಎಸ್ ಈಶ್ವರಪ್ಪ
ವಿಶ್ವಾಸ ವ್ಯಕ್ತಪಡಿಸಿದರು

ರಾಜಾಸ್ಥಾನದ ರಣಕಪುರ,ಕುಂಭಲಗಢ ಕೋಟೆ,ಅರಾವಳಿ ಪರ್ವತ ತಪ್ಪಲಲ್ಲಿ ಚಾರಣ ಮಾಡಬೇಕೆ? ಇಲ್ಲಿದೆ ಮಾಹಿತಿ

0

ರಾಜಸ್ಥಾನದ ಪ್ರಸಿದ್ಧ ರಣಕಪುರ ಜೈನ ದೇವಾಲಯ, ಐತಿಹಾಸಿಕ ಕುಂಭಲಗಢ ಕೋಟೆ, ಅರಾವಳಿ ಪರ್ವತಗಳ ಸುಂದರ ಪ್ರಕೃತಿ ವೀಕ್ಷಣೆ, ಪರ್ವತಾರೋಹಣ ಹಾಗೂ ಚಿರತೆ ಸಫಾರಿ (Leopard Safari) ಸೇರಿದಂತೆ ವಿವಿಧ ಸಾಹಸ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆಯಲಿದ್ದಾರೆ.

ಈ ಐದು ದಿನಗಳ ಸಾಹಸ ಕಾರ್ಯಕ್ರಮವು 2026ರ ನವೆಂಬರ್ 13 ರಿಂದ 18 ರವರೆಗೆ ನಡೆಯಲಿದೆ. ಕೇವಲ 50 ಜನರಿಗೆ ಮಾತ್ರ ಅವಕಾಶವಿದ್ದು ಮೊದಲು ಹೆಸರು ನೊಂದಾಯಿಸಿದವರಿಗೆ ಆಧ್ಯತೆ ನೀಡಲಾಗುವುದು.

ಶುಲ್ಕ: ಪ್ರತಿ ವ್ಯಕ್ತಿಗೆ 15,200/- ಮಾತ್ರ.
ಈ ಶುಲ್ಕದಲ್ಲಿ ವಸತಿ, ಸರಳ ಪೌಷ್ಟಿಕ ಆಹಾರ, ಸ್ಥಳೀಯ ಸಾರಿಗೆ, ಮಾರ್ಗದರ್ಶನ, ಅಗತ್ಯ ಉಪಕರಣಗಳು ಹಾಗೂ ವಿಮಾ ಸೌಲಭ್ಯಗಳು ಒಳಗೊಂಡಿರುತ್ತವೆ. ರೈಲು (3 tyre ac up to falana 30 km from base camp) ರೈಲು ಪ್ರಯಾಣದ ಸಮಯ ಆಹಾರದ ವ್ಯವಸ್ಥೆ ಸ್ವತಃ ಮಾಡಿಕೊಳ್ಳಬೇಕು.

ಭಾಗವಹಿಸಲು ಅರ್ಹತೆ:
10 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಭಾಗವಹಿಸಬಹುದು. ವಯೋಮಿತಿಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ‌
ಕಾರ್ಯಕ್ರಮ ಸಂಯೋಜಕರುಗಳಾದ

ಶ್ರೀ ವಾಗೀಶ್, 9844809533
ಶ್ರೀ ಸುರೇಶ್, 9449277593
ಶ್ರೀ ರವೀಂದ್ರ, 9916929220
ಶ್ರೀ ರಮೇಶ್, 9945925532