Saturday, December 6, 2025
Saturday, December 6, 2025
Home Blog Page 3

Shimoga Press Trust ಸೇವಾಮನೋಭಾವದಿಂದ ಉಚಿತ ಆರೋಗ್ಯ ತಪಾಸಣೆ ಸಮಾಜಕ್ಕೆ ದೊಡ್ಡ ಕೊಡುಗೆ- ಆರ್.ಮಾರುತಿ

0

Shimoga Press Trust ಆಸ್ಪತ್ರೆಗಳು ಪ್ರಸ್ತುತ ದಿನಮಾನಗಳಲ್ಲಿ ವಾಣಿಜ್ಯ ಕೇಂದ್ರಗಳಾಗಿ ಮಾರ್ಪಟ್ಟಿದ್ದು, ವೈದ್ಯರುಗಳಲ್ಲಿ ಸೇವಾ ಮನೋಭಾವನೆ ಕಡಿಮೆಯಾಗಿದೆ ಎಂದು ವಾರ್ತಾಧಿಕಾರಿ ಆರ್ ಮಾರುತಿ ತಿಳಿಸಿದರು.
ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಹಾಗೂ ತೃಪ್ತಿ ಹಾಸ್ಪಿಟಲ್ ಇವರ ಸಂಯುಕ್ತ ಆಶ್ರಯದಲ್ಲಿ ತೃಪ್ತಿ ಆಸ್ಪತ್ರೆಯಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ತೃಪ್ತಿ ಆಸ್ಪತ್ರೆಯ ವೈದ್ಯ ಡಾ.ಚಂದ್ರಶೇಖರ್ ಅವರು ಸೇವಾ ಮನೋಭಾವದಿಂದ ಉಚಿತವಾಗಿ ಆರೋಗ್ಯ ತಪಾಸಣೆ ನಡೆಸುತ್ತಿರವುದು ಸಮಾಜಕ್ಕೆ ನೀಡುತ್ತಿರುವು ಬಹುದೊಡ್ಡ ಕೊಡುಗೆಯಾಗಿದೆ ಎಂದರು.
ಸೇವಾ ಮನೋಭಾವ ಮತ್ತು ಸಾಮಾಜಿಕ ಕಳಕಳಿ ಇರುವವರಿಗೆ ಮಾತ್ರ ಇಂತಹ ಕಾರ್ಯಗಳನ್ನು ನಡೆಸಲು ಸಮಯ ಸಿಗುತ್ತದೆ ಎಂದು ಹೇಳಿದರು.
Shimoga Press Trust ಶಿವಮೊಗ್ಗ ನಗರದಲ್ಲಿ ಇಂತಹ ಕಾರ್ಯ ನಡೆಯುತ್ತಿರುವುದು ಶ್ಲಾಘನೀಯವಾಗಿದ್ದು, ಆರೋಗ್ಯದ ಬಗ್ಗೆ ಪ್ರಸ್ತುತ ದಿನಮಾನಗಳಲ್ಲಿ ಪ್ರತಿಯೊಬ್ಬರು ಕಾಳಜಿ ವಹಿಸಬೇಕು ಎಂದ ಅವರು, ದೇಹದ ಭಾಗಗಳಲ್ಲಿ ಮುಖ್ಯವಾಗಿರುವ ಮೂತ್ರಕೋಶ, ಲಿವರ್, ಹೃದಯ ಇವುಗಳ ತಪಾಸಣೆಗೆ ಇತರೆ ಆಸ್ಪತ್ರೆಗಳಲ್ಲಿ ಸಾಕಷ್ಟು ಹಣ ಪಾವತಿ ಮಾಡಬೇಕಾಗುತ್ತದೆ. ಆದರೆ ತೃಪ್ತಿ ಆಸ್ಪತ್ರೆ ಇವುಗಳ ತಪಾಸಣೆಯನ್ನು ಉಚಿತವಾಗಿ ನಡೆಸುತ್ತಿರುವುದು ಅತ್ಯಂತ ಸ್ವಾಗತಾರ್ಹ ಎಂದು ಹೇಳಿದರು.
ಆಸ್ಪತ್ರೆಯ ವೈದ್ಯ ಡಾ.ಚಂದ್ರಶೇಖರ್ ಮಾತನಾಡಿ, ಪ್ರತಿಯೊಬ್ಬರಿಗೂ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಕನಸಾಗಿದೆ. ಈ ನಿಟ್ಟಿನಲ್ಲಿ ಉಚಿತ ತಪಾಸಣಾ ಶಿಬಿರಗಳನ್ನು ಹಮ್ಮಿಕೊಂಡಿದ್ದೇನೆ. ಪ್ರತಿಯೊಬ್ಬರಿಗೂ ಆರೋಗ್ಯವೇ ಭಾಗ್ಯ. ಆದ್ದರಿಂದ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ದೊರಕಿಸಿ ಕೊಡುವುದು ನನ್ನ ಮೊದಲ ಆಧ್ಯತೆಯಾಗಿದೆ. ಕಿಡ್ನಿ, ಲಿವರ್ ಹಾಗೂ ಹೃದಯದ ಆರೋಗ್ಯ ಉತ್ತಮವಾಗಿದ್ದರೆ ಮನುಷ್ಯ ಆರೋಗ್ಯವಾಗಿರುತ್ತಾನೆ. ಇವುಗಳು ಉತ್ತಮವಾಗಿರಬೇಕಾದರೆ ಮಿತವಾದ ಆಹಾರ, ವ್ಯಾಯಾಮ ಮತ್ತು ನಡಿಗೆಯನ್ನು ಮಾಡಲೇಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ಕಾರ್ಯದರ್ಶಿ ನಾಗರಾಜ್ ನೇರಿಗೆ, ಹೊನ್ನಾಳಿ ಚಂದ್ರಶೇಖರ್, ಗೋ.ವಾ.ಮೋಹನಕೃಷ್ಣ ಮತ್ತಿರರಿದ್ದರು.

Minority Welfare Department ವಿಶೇಷ ಪ್ರೋತ್ಸಾಹ ಸೌಲಭ್ಯಕ್ಕೆ ಅರ್ಜಿ ಆಹ್ವಾನ

0

Minority Welfare Department 2025-26ನೇ ಸಾಲಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ವತಿಯಿಂದ ಬಿ.ಇಡಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹಧನ ಯೋಜನೆಯಡಿ ಸೌಲಭ್ಯ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ನ್ಯಾಷನಲ್ ಕೌನ್ಸಿಲ್ ಫಾರ್ ಟೀಚರ್ ಎಜುಕೇಷನ್ ನಿಂದ ಮಾನ್ಯತೆ ಪಡೆದಿರುವ ಸರ್ಕಾರಿ/ಅನುದಾನಿತ ಹಾಗೂ ಖಾಸಗಿ ಕಾಲೇಜುಗಳಲ್ಲಿ ದಾಖಲಾತಿ ಹೊಂದಿ ಬಿ.ಇಡಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ) ವಿದ್ಯಾರ್ಥಿಗಳಿಗೆ ರೂ.25000/-ಗಳ ವಿಶೇಷ ಪ್ರೋತ್ಸಾಹಧನ ಯೋಜನೆಯಡಿ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ವಿಶೇಷ ಪ್ರೋತ್ಸಾಹಧನವನ್ನು ಸಂಬಂಧಪಟ್ಟ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಡಿಬಿಟಿ ಮುಖಾಂತರ ಜಮಾ ಮಾಡಲಾಗುವುದು.
Minority Welfare Department ಅರ್ಜಿ ಸಲ್ಲಿಸಲು ದಿ: 31.12.2025 ಕಡೆಯ ದಿನಾಂಕವಾಗಿದ್ದು, ಅರ್ಜಿಯನ್ನು sevasindhu.karnataka.gov.in ಮೂಲಕ ಸಲ್ಲಿಸಿ ನಂತರ ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರ ಮೊಹರು ಮತ್ತು ಸಹಿ/ದೃಢೀಕರಣ ಪಡೆದು, ಅರ್ಜಿಯೊಂದಿಗೆ ನಿವಾಸಿ ದೃಢೀಕರಣ ಪತ್ರ. ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಹಿಂದಿನ ವರ್ಷದ ಅಂಕಪಟ್ಟಿ, ಪದವಿ ಪ್ರಮಾಣ ಪತ್ರ, ಶುಲ್ಕ ರಸೀದಿ, ಆಧಾರ್ ಕಾರ್ಡ್, ಎಸ್.ಎಸ್.ಎಲ್.ಸಿ. ಅಂಕಪಟ್ಟಿ, ಪಿ.ಯು.ಸಿ ಅಂಕಪಟ್ಟಿ, ವ್ಯಾಸಂಗ ದೃಢೀಕರಣ ಪತ್ರ, ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್ ಪ್ರತಿಳಿಗೆ ಪ್ರಾಂಶುಪಾಲರಿಂದ ದೃಢೀಕರಿಸಿ ಜಿಲ್ಲಾ ಅಧಿಕಾರಿಗಳ ಕಛೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, 1ನೇ ಮಹಡಿ, ಸತ್ಯಶ್ರೀ ಆರ್ಕೆಡ್, 5ನೇ ಪ್ಯಾರಲಲ್ ರಸ್ತೆ, ದುರ್ಗಿಗುಡಿ, ಶಿವಮೊಗ್ಗ ಇಲ್ಲಿಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08182-220206 ಗೆ ಸಂಪರ್ಕಿಸಬಹುದೆಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.

Kuvempu University ಶಿವಮೊಗ್ಗದ ಸುದೀಪ್ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಹೈಜಂಪ್ ಸ್ಪರ್ಧೆ, ಚಿನ್ನದ ಪದಕ ವಿಜೇತ

0

Kuvempu University ರಾಜಸ್ಥಾನದಲ್ಲಿ ಆಯೋಜಿಸಿರುವ ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಶಿವಮೊಗ್ಗದ ವಿದ್ಯಾರ್ಥಿ ಚಿನ್ನದ ಪದಕ ವಿಜೇತನಾಗಿದ್ದಾನೆ.

ಖೇಲೋ ಇಂಡಿಯಾದ ಎತ್ತರ ಜಿಗಿತ ಸ್ಪರ್ಧೆಯಲ್ಲಿ ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಮೂರನೇ ವರ್ಷದ ಬಿಕಾಂ ವಿದ್ಯಾರ್ಥಿ ಸುದೀಪ್ 2.8 ಮೀಟರ್ ಎತ್ತರ ಜಿಗಿತ ಮಾಡಿ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ವಿಜೇತನಾಗಿದ್ದಾನೆ.

ಖೇಲೋ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಭಾರತ ದೇಶ ಪ್ರತಿನಿಧಿಸುವ ಗುರಿ ಹೊಂದಿದ್ದೇನೆ ಎಂದು ವಿಜೇತ ಸ್ಪರ್ಧಿ ಸುದೀಪ್ ಅನಿಸಿಕೆ ವ್ಯಕ್ತಪಡಿಸಿದ್ದಾನೆ.

Kuvempu University ಕುವೆಂಪು ವಿಶ್ವವಿದ್ಯಾಲಯದಿಂದ ಪ್ರತಿನಿಧಿಸಿದ್ದ ಡಿವಿಎಸ್ ಕಾಲೇಜಿನ ವಿದ್ಯಾರ್ಥಿ ಸುದೀಪ್ ಸಾಧನೆಗೆ ದೇಶೀಯ ವಿದ್ಯಾಶಾಲಾ ಸಮಿತಿ ಆಡಳಿತ ಮಂಡಳಿ ಹಾಗೂ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯ ಡಾ. ಎಂ.ವೆಂಕಟೇಶ್ , ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸಚಿನ್. ಕೆ ಅಭಿನಂದಿಸಿದ್ದಾರೆ.

Agricultural Science Centre ಮಹಿಳೆಯರು ಕೃಷಿ ಮತ್ತು ಕುಟುಂಬ ನಿರ್ವಹಣೆಯಲ್ಲಿ ಪಾಲ್ಗೊಳ್ಳುತ್ತಾರೆ- ಡಾ.ಬಿ.ಹೇಮ್ಲಾನಾಯಕ್

0

Agricultural Science Centre ಕೃಷಿ ನಿರತ ಮಹಿಳಾ ದಿನಾಚರಣೆಯನ್ನು ದಿನಾಂಕ 4.12.2025 ರದ್ದು ಕೃಷಿ ವಿಜ್ಞಾನ ಕೇಂದ್ರ ಶಿವಮೊಗ್ಗದಲ್ಲಿ ಆಚರಿಸಲಾಯಿತು. ಕೃಷಿಯಲ್ಲಿ ಮಹಿಳೆಯರ ದಿನವನ್ನು ಡಿಸೆಂಬರ್ 4 ,2018 ರಿಂದ ಪ್ರತಿ ವರ್ಷ ಭಾರತೀಯ ಕೃಷಿ ಸಂಶೋಧನಾ ಮಂಡಳಿಯು ಪ್ರತಿ ವರ್ಷ ಆಚರಿಸಲು ನಿರ್ಧರಿಸಲಾಗಿದೆ. ಇದರ ಮುಖ್ಯ ಉದ್ದೇಶ ಕೃಷಿಯಲ್ಲಿ ಮಹಿಳೆಯರ ಕೊಡುಗೆಗಳನ್ನು ಗುರುತಿಸುವುದು ಮತ್ತು ಗೌರವಿಸುವುದಾಗಿದೆ, ಜೊತೆಗೆ ಮಹಿಳೆಯರು ಹೆದರಿಸುವ ಸವಾಲುಗಳನ್ನು ಪರಿಹರಿಸುವುದು. ಈ ದಿನದಂದು ಮಹಿಳೆಯರ ಸಬಲೀಕರಣಕ್ಕಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಮತ್ತು ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಸವಾಲುಗಳು ಮತ್ತು ಅವರ ಕೊಡುಗೆಗಳ ಕುರಿತು ಚರ್ಚಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಮಹಿಳೆಯರಿಗಾಗಿ ಕೋಕೋ ಬೆಳೆಯ ಉತ್ಪಾದನೆ, ಸಂಸ್ಕರಣೆ, ಮತ್ತು ಮೌಲ್ಯವರ್ಧನ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಕೃಷಿ ವಿಜ್ಞಾನ ಕೇಂದ್ರ ನವಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
Agricultural Science Centre ಈ ಸಮಾರಂಭದ ಅಧ್ಯಕ್ಷತೆಯನ್ನು ಡಾ. ಬಿ .ಹೆಮ್ಲಾ ನಾಯಕ್, ಶಿಕ್ಷಣ ನಿರ್ದೇಶಕರು ಹಾಗೂ ಪ್ರಭಾರ ಕುಲಪತಿಗಳು ನೆರವೇರಿಸಿ ಕೃಷಿಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಇಲ್ಲದೆ ಯಾವುದೇ ಕಾರ್ಯಕ್ರಮವು ಸಾಧ್ಯವಿಲ್ಲ ಮತ್ತು ಮಹಿಳೆಯರು ಕೃಷಿ ಆಧಾರಿತ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಮಹಿಳೆಯರು ಕೃಷಿ ಮತ್ತು ಕುಟುಂಬ ನಿರ್ವಹಣೆ ಎರಡರಲ್ಲೂ ಪ್ರಮುಖ ಪಾತ್ರ ವಹಿಸುವುದರಿಂದ ಮಹಿಳೆಯರ ಈ ಕಾರ್ಯ ತುಂಬಾ ಶ್ಲಾಘನೀಯ ವಾಗಿದೆ ಎಂದು ಪ್ರಶಂಶಿಸಿದರು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಪ್ರತಿಭಾ , ಸಂಸ್ಥಾಪಕರು, ಜೀವನಮುಖಿ ಸಂಸ್ಥೆ, ಸಾಗರ ಇವರು ನೆರವೇರಿಸಿ ಮಹಿಳೆಯರ ಕೃಷಿಯಲ್ಲಿ ಕೆಲಸಗಳನ್ನು ಶ್ಲಾಘಿಸಿದರು. ರ್ಡಾಕ್ಟರ್ ಸುನಿಲ್ ಸಿ, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು ಕೃಷಿ ವಿಜ್ಞಾನ ಕೇಂದ್ರ ಶಿವಮೊಗ್ಗ ಇವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರನ್ನು ಸ್ವಾಗತವನ್ನು ಕೋರಿ ಹಾಗೂ ಈ ಕಾರ್ಯಕ್ರಮದ ಕುರಿತಾಗಿ ವಾಸ್ತವಿಕವಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಡಾ ನಾರಾಯಣ ಮಾವರ್ಕರ್, ಡೀನ್ ಸ್ನಾತೋಕೋತರ,
ಡಾಕ್ಟರ್ ಡಿ ತಿಪ್ಪೇಶ್ , ಡೀನ್ ಕೃಷಿ, ಮಂಜುಳಾ ಕೃಷಿ ಉಪನಿರ್ದೇಶಕರು, ಡಾಕ್ಟರ್ ಸಂಜಯ್ ಜಂಟಿ ನಿರ್ದೇಶಕರು ತೋಟಗಾರಿಕೆ ಇಲಾಖೆ ಇವರುಗಳು ಭಾಗವಹಿಸಿದ್ದರು.
ಈ ಕಾರ್ಯಕ್ರಮದ ನಿರೂಪಣೆಯನ್ನು ಡಾ. ಸುಧಾರಣೆ ಅವರು ನೆರವೇರಿಸಿ ಕೊಟ್ಟರು. ಈ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಎಲ್ಲಾ ವಿಜ್ಞಾನಿಗಳು ಸಿಬ್ಬಂದಿ ವರ್ಗದವರು ಮತ್ತು 150 ರೈತ ಮಹಿಳೆಯರು ಭಾಗವಹಿಸಿ ಪ್ರಯೋಜನವನ್ನು ಪಡೆದುಕೊಂಡರು.

Seeta Ramanjaneya Swamy Temple ಕೋಟೆ ಆಂಜನೇಯ ದೇಗುಲದ ಸಮಗ್ರ ಅಭಿವೃದ್ಧಿ ಬಗ್ಗೆ ಶಾಸಕ ಚೆನ್ನಿ ಅಧಿಕಾರಿಗಳೊಂದಿಗೆ ಚರ್ಚೆ

0

Seeta Ramanjaneya Swamy Temple ಶಿವಮೊಗ್ಗ ನಗರದ ಐತಿಹಾಸಿಕ ದೂರ್ವಾಸ ಕ್ಷೇತ್ರ ಕೋಟೆ ಶ್ರೀ ಸೀತಾ ರಾಮಾಂಜನೇಯ ಸ್ವಾಮಿ ದೇವಸ್ಥಾನಕ್ಕೆ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಭೇಟಿ ನೀಡಿ, ದೇವಸ್ಥಾನದ ಸಮಗ್ರ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಸಂಬಂಧಿಸಿದಂತೆ ನಿರ್ಮಿತಿ ಕೇಂದ್ರದ ಅಧಿಕಾರಿಗಳೊಂದಿಗೆ ವಿಶೇಷ ಸಮಾಲೋಚನೆ ನಡೆಸಿದರು.

ದೇವಾಲಯದ ಸೌಂದರ್ಯೀಕರಣ, ಮೂಲಭೂತ ಸೌಕರ್ಯಗಳ ಸುಧಾರಣೆ ಹಾಗೂ ಭಕ್ತಾದಿಗಳಿಗೆ ಅನುಕೂಲವಾಗುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಮಹತ್ವದ ಯೋಜನೆಗಳನ್ನು ಚರ್ಚಿಸಿದರು.

Seeta Ramanjaneya Swamy Temple ಭೇಟಿಯ ಸಂದರ್ಭ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ದೀನ್ ದಯಾಳ್, ಪ್ರಮುಖರಾದ ಪ್ರಭಾಕರ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಬಾಲಚಂದ್ರ, ಅರ್ಚಕರಾದ ಶ್ರೀರಾಮ್ ಪ್ರಸಾದ್ ಮತ್ತು ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

S.N. Channabasappa ಅವಕಾಶ ದೊರೆತರೆ ವಿಕಲಚೇತನರು ಏನು ಬೇಕಾದರೂ ಸಾಧಿಸುತ್ತಾರೆ- ಶಾಸಕ ಚನ್ನಬಸಪ್ಪ

0

S.N. Channabasappa ವಿಕಲಚೇತನರಿಗೆ ಅನುಕಂಪವಲ್ಲ-ಅವಕಾಶ ಬೇಕಾಗಿದ್ದು, ಅದು ದೊರೆತಲ್ಲಿ ಏನು ಬೇಕಾದರೂ ಸಾಧಿಸುತ್ತಾರೆಂದು ತೊರಿಸಿಕೊಟ್ಟಿದ್ದಾರೆ ಎಂದು ಶಾಸಕರಾದ ಎಸ್.ಎನ್. ಚನ್ನಬಸಪ್ಪ ನುಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಶಿವಮೊಗ್ಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲೆಯಲ್ಲಿ ವಿಕಲಚೇತನರ ಶ್ರೇಯೋಭಿವೃದ್ದಿಗಾಗಿ ಶ್ರಮಿಸುತ್ತಿರುವ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ನಗರದ ಕುವೆಂಪು ರಂಗಮಂದಿರದಲ್ಲಿ “ಸಾಮಾಜಿಕ ಪ್ರಗತಿಯನ್ನು ಸಾಧಿಸಲು ವಿಕಲಚೇತನರನ್ನು ಒಳಗೊಂಡ ಸಮಾಜವನ್ನು ರೂಪಿಸುವುದು” ಎಂಬ ಘೋಷವಾಕ್ಯದಡಿ ಆಯೋಜಿಸಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೇವಲ ವಿಶೇಷಚೇತನರು ಮಾತ್ರವಲ್ಲದೆ ಇಡೀ ಮನುಕುಲವೇ ನೆನಪಿಡುವಂತಹ ದಿನ ಇವತ್ತಾಗಿದೆ. “ಮನಸ್ಸಿದ್ದರೆ ಮಾರ್ಗ” ಎಂಬ ನಾಣ್ಗುಡಿಯಂತೆ ವಿಶೇಷಚೇತನ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ. ಕ್ರಿಕೆಟ್‌ನಲ್ಲಿ ಕಾವ್ಯ, ಕುಸ್ತಿಯಲ್ಲಿ ಗೌರಮ್ಮ, ಥ್ರೋಬಾಲ್‌ನಲ್ಲಿ ಜ್ಯೋತಿ ಇಂತಹ ವಿಶೇಷಚೇತನ ಮಹಿಳೆಯರು ಅವಕಾಶ ಸಿಕ್ಕರೆ ಇಡೀ ಜಗತ್ತನ್ನೆ ಗೆಲ್ಲುತ್ತೇವೆ ಎಂದು ತೋರಿಸಿದ್ದಾರೆ.

ಜಿಲ್ಲೆಯ ಮಹಿಳೆಯರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಈ ದೇಶಕ್ಕೆ ಕೀರ್ತಿ ಮತ್ತು ಗೌರವ ತಂದಿದ್ದಾರೆ. ದೇಹದ ಎಲ್ಲಾ ಅಂಗಗಳು ಸರಿಯಾಗಿದ್ದೂ ಸಾಧನೆ ಮಾಡಲು ಹಿಂಜರಿಯುವ ಪೀಳಿಗೆಗೆ ವಿಶೇಷಚೇತನರು ಮಾದರಿಯಾಗಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ನಮ್ಮ ಸಮಾಜದಲ್ಲಿ ತಾಯಿಗಿಂತ ದೊಡ್ಡ ಶಕ್ತಿ ಇನ್ನೊಂದಿಲ್ಲ. ಆಕೆಗೆ ಬದಲಿ ವ್ಯವಸ್ಥೆಯೂ ಇಲ್ಲ. ಇಂತಹ ವಿಶೇಷಚೇತನ ಮಕ್ಕಳನ್ನು ಸಾಕಿ, ಸಲುಹಿ ಸಾಧನೆ ಮಾಡಲು ಮಾನಸಿಕವಾಗಿ ಸಿದ್ದಗೊಳಿಸಿದ ತಾಯಂದಿರೆಲ್ಲರಿಗೂ ಅಭಿನಂದನೆಗಳು. ಇಂತಹ ಮಕ್ಕಳು ಇರುವ ಮನೆಗಳು ಬಲಯುತವಾಗಿರುತ್ತದೆ.

ವಿಶೇಷಚೇತನರು ಇತರರ ಮೇಲೆ ಅವಲಂಬಿತವಾಗದೆ ತಮ್ಮ ಸಾಧನೆಯ ಹಾದಿಯನ್ನು ರೂಪಿಸಿಕೊಳ್ಳಬೇಕು. ಅದಕ್ಕೆಂದೇ ನಿಮ್ಮ ಕುಟುಂಬಗಳು, ಸರ್ಕಾರಗಳು ಬೆಂಬಲವಾಗಿ ನಿಂತು, ಅನೇಕ ಸವಲತ್ತುಗಳನ್ನು ನೀಡುತ್ತಿವೆ ಎಂದರು.

ವಿಧಾನ ಪರಿಷತ್ ಶಾಸಕರಾದ ಧನಂಜಯ ಸರ್ಜಿ ಮಾತನಾಡಿ, ವಿಕಲಚೇತನರಲ್ಲ ಇವರು ವಿಶೇಷಚೇತನರು. ಇವರಿಗೆ ಅನುಕಂಪ ಬೇಕಾಗಿಲ್ಲ, ಬದುಕುವ ಹಕ್ಕು ನೀಡಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಈ ಮೂರೂ ವಿಶೇಷಚೇತನರನ್ನು ವೇದಿಕೆಗೆ ಆಹ್ವಾನಿಸಿರುವುದು ಈ ಕಾರ್ಯಕ್ರಮದ ಗೌರವವನ್ನು ಹೆಚ್ಚಿಸಿದೆ ಎಂದರು.

ವೈಫಲ್ಯತೆ ದೇಹಕ್ಕೆ ಬರಬಹುದು, ಮನಸ್ಸಿಗಲ್ಲ. ದೇಹಕ್ಕೆ ಮಿತಿ ಇರಬಹುದು, ಕನಸಿಗಲ್ಲ. ಅದಕ್ಕೆ ಪ್ರತ್ಯಕ್ಷ ಸಾಕ್ಷಿ ಕಾವ್ಯ, ಗೌರಮ್ಮ, ಜ್ಯೋತಿ. ಮನಸ್ಸು ಮಾಡಿದರೆ ಸಾಧನೆಗೆ ಯಾವುದ್ದೇ ಅಡ್ಡಿ ಇಲ್ಲ ಎಂಬುದಕ್ಕೆ ಈ ಮೂವರು ಉತ್ತಮ ಉದಾಹರಣೆ. ನೀವೆಲ್ಲಾ ಉದಾತ್ತ ಕನಸುಗಳನ್ನು ಕಾಣಬೇಕು. ಅದನ್ನು ಸಾಧಿಸುವಲ್ಲಿ ಪ್ರಯತ್ನಿಸಬೇಕು. ಕಣ್ಣಿದ್ದರೂ ಕಣ್ಣೆತ್ತಿ ನೋಡದವರು ನಿಜವಾದ ಕುರುಡರು. ಸಾಧನೆ ಮಾಡದೇ ಇರುವುದು ನಿಜವಾದ ಅಂಗವಿಕಲ್ಯ ಎಂದರು.

ವಿಧಾನ ಪರಿಷತ್ ಶಾಸಕಿ ಬಲ್ಕೀಶ್ ಬಾನು ಮಾತನಾಡಿ, ವಿಕಲಚೇತನರ ಬಗ್ಗೆ ಅಪಾರ ಪ್ರೀತಿ ಮತ್ತು ಕಾಳಜಿ ಹೊಂದಿದ್ದ ವಿಶ್ವ ಆರೋಗ್ಯ ಸಂಸ್ಥೆ 1992 ರಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಮಾಡಲು ನಿರ್ಧರಿಸಿತು. ವಿಕಲಚೇತನ ಮಹಿಳೆಯರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ಶಿವಮೊಗ್ಗಕ್ಕೆ ಕೀರ್ತಿ ತಂದಿದ್ದಾರೆ.

ಈ ಸಾಧನೆ ಮಾಡಲು ಮಾನಸಿಕವಾಗಿ ಹಾಗೂ ದೈಹಿಕವಾಗಿ ಶಕ್ತಿ ಕೊಟ್ಟಿರುವ ನಿಮ್ಮ ಪೋಷಕರು, ಶಿಕ್ಷಕರು ಹಾಗೂ ಶ್ರಮಿಸಿದ ನಿಮಗೆ ಯಶಸ್ಸಿನ ಗೌರವ ಸಲ್ಲಬೇಕು ಎಂದ ಅವರು ಇವರನ್ನು ಲಾಲನೆ ಪಾಲನೆ ಮಾಡುವ ತಾಯಂದಿರಿಗೆ ಗೌರವಧವನ್ನು ಹೆಚ್ಚಿಸಬೇಕು. ಈ ಬಗ್ಗೆ ಸರ್ಕಾರಕ್ಕೆ ಮನವಿಯನ್ನು ಮಾಡುತ್ತೇವೆ ಎಂದರು.

S.N. Channabasappa ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್, ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಅಧ್ಯಕ್ಷ ತಾಜುದ್ದೀನ್‌ಖಾನ್, ಡಿಸಿ ಕಚೇರಿ ತಹಸೀಲ್ದಾರ್ ಪ್ರದೀಪ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿಯ ಇಲಾಖೆಯ ಉಪ ನಿರ್ದೇಶಕಿ ಭಾರತಿ ಬಣಕಾರ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸುವರ್ಣ ವಿ. ನಾಯ್ಕ್, ಅಂತರಾಷ್ಟ್ರೀಯ ಮಹಿಳಾ ದೃಷ್ಟಿವಿಕಲಚೇತನ ವಿಶ್ವಕಪ್ ಕ್ರೀಡಾಪಟು ಕಾವ್ಯ, ಅಂತರಾಷ್ಟ್ರೀಯ ಪಂಜುಕುಸ್ತಿ ಕ್ರೀಡಾಪಟು ಗೌರಮ್ಮ, ಅಂತರಾಷ್ಟ್ರೀಯ ಥ್ರೋಬಾಲ್ ಕ್ರೀಡಾಪಟು ಜ್ಯೋತಿ, ವಿವಿಧ ಇಲಾಖೆ ಹಾಗೂ ಸಂಘ ಸಂಸ್ಥೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.

TET Exam ಗಮನಿಸಿ. ಡಿಸೆಂಬರ್ 7. ಶಿವಮೊಗ್ಗದಲ್ಲಿ2025 ರ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ

0

TET Exam 2025 ರ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯು (ಕೆಎಆರ್‌ಟಿಇಟಿ-2025) ಡಿ.07 ರ ಭಾನುವಾರದಂದು ಶಿವಮೊಗ್ಗ ನಗರದಲ್ಲಿ ನಡೆಯಲಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಮೊದಲ ಅಧಿವೇಶನಕ್ಕೆ 3169 ಅಭ್ಯರ್ಥಿಗಳು ಹಾಗೂ ಪೇಪರ್ -2 ಕ್ಕೆ 8677 ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, ಬೆಳಗಿನ ಅವಧಿಗೆ 11 ಪರೀಕ್ಷಾ ಕೇಂದ್ರಗಳು ಮತ್ತು 2ನೇ ಅವಧಿಗೆ ಒಟ್ಟು 31 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ.

ಬೆಳಗಿನ ಅವಧಿಯು ಬೆಳಿಗ್ಗೆ 90.30 ರಿಂದ 12 ಮತ್ತು ಮಧ್ಯಾಹ್ನದ ಅವಧಿಯು 2.00 ರಿಂದ ಸಂಜೆ 4.30 ರವರೆಗೆ ನಡೆಯಲಿದೆ.

ಪರೀಕ್ಷಾ ಅವಧಿಯಲ್ಲಿ ಪರೀಕ್ಷಾ ಕೇಂದ್ರದ ಸುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಜಿಲ್ಲಾಧಿಕಾರಿಗಳು ಘೋಷಿಸಿರುತ್ತಾರೆ.

TET Exam ಪರೀಕ್ಷಾರ್ಥಿಗಳು ಪ್ರವೇಶ ಪತ್ರದ ಜೊತೆಗೆ ಕಡ್ಡಾಯವಾಗಿ ಯಾವುದಾದರೂ ಗುರುತಿನ ಚೀಟಿಯನ್ನು ತರಬೇಕು (ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್) ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು(ಆಡಳಿತ) ತಿಳಿಸಿದ್ದಾರೆ.

Klive Special Article ಸದ್ ‘ವಿನಯ’ ವಂತ, ಸಿಹಿಮೊಗೆಯ ಸಾಂಸ್ಕೃತಿಕ ದನಿ ಈತ-ಡಾ.ಮೈತ್ರೇಯಿ ಆದಿತ್ಯ ಪ್ರಸಾದ್

0

Klive Special Article ಶಿವಮೊಗ್ಗೆಯಲ್ಲಿ ಅರಳಿದ ಮೊಗ್ಗುಗಳು – 4
ಕಲಾರಾಧನೆಲ್ಲಿ ವಿನಯ ಸಂಪನ್ನರಾದ ವಿನಯ್ ಶಿವಮೊಗ್ಗ

ಸಾಹಿತ್ಯ ಸಂಗೀತ ಕಲಾವಿಹೀನಃ ಸಾಕ್ಷಾತ್ ಪಶುಃ ಪುಚ್ಛ ವಿಷಾಣ ಹೀನಃ l ಎನ್ನುವ ಸಂಸ್ಕೃತದ ಸುಭಾಷಿತ ಮನುಷ್ಯನಿಗಿರಬೇಕಾದ ಕಲಾಸಕ್ತಿಯ ಕುಳಿತು ಕುರಿತು ತಿಳಿಸುತ್ತದೆ. ಇದನ್ನು ನೋಡಿದಾಗ ನನಗೆ ನೆನಪಾಗುವ ವ್ಯಕ್ತಿ ಕಲಾಕ್ಷೇತ್ರದಲ್ಲಿ ಅತಿ ಹೆಚ್ಚು ಆಸಕ್ತಿಯಿಂದಿದ್ದು ತಮ್ಮದೇ ಆದ ಕೊಡುಗೆ ನೀಡುತ್ತಲೇ ಶಿವಮೊಗ್ಗಕ್ಕೆ ಆಸ್ತಿಯಂತಾದ ಹೆಮ್ಮೆಯ ಪ್ರತಿಭೆ. ಅದೇನೋ ಒಮ್ಮೊಮ್ಮೆ ಕಲಾ ಸರಸ್ವತಿ ತನ್ನೆಲ್ಲ ಪ್ರಾಕಾರಗಳನ್ನು ಒಬ್ಬರಿಗೆ ಧಾರೆ ಎರೆದು ಬಿಡುತ್ತಾಳೆನೋ? ಏಕೆ ಈ ಮಾತೆಂದರೆ ನಾನು ಅನೇಕರನ್ನು ನೋಡಿದ್ದೇನೆ ಕೆಲವರಿಗೆ ನೃತ್ಯ ಇಷ್ಟವಾದರೆ ಇನ್ನು ಕೆಲವರಿಗೆ ಸಂಗೀತ. ಮತ್ತೆ ಕೆಲವರಿಗೆ ಸಾಹಿತ್ಯ. ಒಂದಷ್ಟು ಜನಕ್ಕೆ ನಾಟಕ, ಯಕ್ಷಗಾನ, ಸಿನಿಮಾ. ಒಂದು ಕಡೆ ಕೇವಲ ಇಷ್ಟವಷ್ಟೇ ಅಲ್ಲ ಅದರ ಒಂದೊಂದು ವಿಭಾಗದಲ್ಲೂ ಜ್ಞಾನವನ್ನು ಪಡೆದಿರುವ ವ್ಯಕ್ತಿಗಳಿರುತ್ತಾರೆ. ಆದರೆ ಅಂಥವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಎಲ್ಲವೂ ಇಷ್ಟ, ಎಲ್ಲದರಲ್ಲೂ ಆಳವಾದ ಜ್ಞಾನ ಅಂತಹ ಕೆಲವೇ ಕೆಲವು ವ್ಯಕ್ತಿಗಳಲ್ಲಿ ನಾನು ನೋಡಿದ ಒಬ್ಬ ವ್ಯಕ್ತಿ ವಿನಯ್ ಶಿವಮೊಗ್ಗ. ತನ್ನ ಹೆಸರಿಗೆ ಊರು ಸೇರಿಸಿ ಊರನ್ನು ಪ್ರಸಿದ್ಧಿಯಾಗಿಸಿದ ಹೆಮ್ಮೆ ಇವರದು.

ವಿನಯ್ ಶಿವಮೊಗ್ಗ ಅವರ ಜನನ ಅಪ್ಪಟ ಮಲೆನಾಡಿನ ಭಾಗದಲ್ಲಾದರೆ ಓದಿದ್ದು ಶಿವಮೊಗ್ಗದಲ್ಲಿ.

ತಂದೆ ಶಿವಮೊಗ್ಗದ ಪ್ರಖ್ಯಾತ ರಮ್ಯಾ ಮೆಡಿಕಲ್ಸ್ ನ ಮಾಲೀಕರೂ ಹಾಗೂ 100ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ ಶ್ರೀ ಯಜ್ಞನಾರಾಯಣ. ತಾಯಿ ವಿಜಯ ಆಕಾಶವಾಣಿಯಲ್ಲಿ ಅನೇಕ ಸುಗಮಸಂಗೀತಗಳನ್ನು ಹಾಡಿದ ಕಲಾವಿದೆಯಾಗಿದ್ದಾರೆ. ವಿನಯ್ ಅವರು ಉನ್ನತ ಅಧ್ಯಯನದ ಕಾರಣದಿಂದ ಉದ್ಯೋಗ ಅರಸಿ ಹೋದದ್ದು ಬೆಂಗಳೂರಿಗೆ. ಅಲ್ಲದೇ ಹಲವಾರು ದೇಶ-ವಿದೇಶಗಳನ್ನು ಸುತ್ತಿದ ಅನುಭವ ಇವರಿಗಿದೆ. ಅಲ್ಲೇ ಹಲವಾರು ವರ್ಷಗಳು ಇದ್ದು ನಂತರ ತಂದೆಯ ಅನಾರೋಗ್ಯ ಎಂದು ತನ್ನ ಕೆಲಸವನ್ನು ತೊರೆದು ತಂದೆ ತಾಯಿಯ ಆರೈಕೆಗಾಗಿ ಶಿವಮೊಗ್ಗಕ್ಕೆ ಬಂದರು. ಹೆತ್ತವರ ಮೇಲೆ ಅದೆಂತ ಪ್ರೀತಿ ಎಂದರೆ, ಇಳಿ ವಯಸ್ಸಿನಲ್ಲಿ ಅವರನ್ನು ನೋಡುತ್ತಾ ನೋಡುತ್ತಾ ತಮಗೂ ಜೀವನದ ವೈರಾಗ್ಯ ಬರಲು ಸಾರ್ಥಕ ಎನ್ನುವ ಭಾವದಿಂದ ಆರೈಕೆ ಮಾಡಿದರು. ಅವರದು ಸಂಗೀತ, ಸಾಹಿತ್ಯ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡಿದ ಮನೆತನ. ಸುಗಮ ಸಂಗೀತ ಕ್ಷೇತ್ರದ ಗಾರುಡಿಗ ಶಿವಮೊಗ್ಗ ಸುಬ್ಬಣ್ಣ ಇವರ ದೊಡ್ಡಪ್ಪನಾದರೆ, ತಾಯಿ ಸೋಜುಗಾದ ಸೂಜು ಮಲ್ಲಿಗೆ ಎಂಬ ಹಾಡನ್ನು ಬಹು ವರ್ಷಗಳ ಹಿಂದೆಯೇ ಪ್ರಥಮ ಬಾರಿಗೆ ಹಾಡಿದ ಹೆಗ್ಗಳಿಕೆ ಉಳ್ಳವರು. ಹಾಗಾಗಿ ಈ ಎಲ್ಲದರಲ್ಲೂ ಆಸಕ್ತಿ ರಕ್ತದಲ್ಲಿಯೇ ಇತ್ತೇನೋ. ತಂದೆಯ ಮೆಡಿಕಲ್ ಶಾಪ್ ಶಿವಮೊಗ್ಗಕ್ಕೆ ಪ್ರಸಿದ್ಧಿ ಆಗಿತ್ತು. ಹಾಗಾಗಿ ಇವರ ಉದ್ಯೋಗ ಅದೇ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದೆಯಾದರೂ ಇವರ ಒಲವು ಹೆಚ್ಚಿದ್ದಿದ್ದು ಕಲಾರಾಧನೆಯಲ್ಲಿ.

Klive Special Article ಸಾಹಿತ್ಯ, ಹಾಡು, ನಾಟಕ, ಯಕ್ಷಗಾನ, ನೃತ್ಯ, ನಟನೆ ಹೀಗೆ ಎಲ್ಲ ಕಲಾ ಪ್ರಾಕಾರಗಳಲ್ಲೂ ಆಳವಾದ ಪಾಂಡಿತ್ಯ ಹಾಗೇ ಅವಿರತವಾಗಿ ದುಡಿದ ಪ್ರತಿಭೆ. ನನಗೆ ವಿನಯಣ್ಣ ಪರಿಚಿತರಾದದ್ದು ಚಕ್ರವರ್ತಿ ಅವರು ಗೀತೆಯ ಪುಸ್ತಕವನ್ನು ತಮ್ಮ ಯುವಾ ಬ್ರಿಗೇಡ್ ವತಿಯಿಂದ ಬಿಡುಗಡೆ ಮಾಡಿ ಅದನ್ನು ಎಲ್ಲರಿಗೂ ತಲುಪಿಸಬೇಕೆಂಬ ಉದ್ದೇಶದಲ್ಲಿದ್ದಾಗ ನನ್ನ ಮಗನ ಚೌಲದ ಕಾರ್ಯಕ್ರಮಕ್ಕೆ ಉಡುಗೊರೆಯಾಗಿ ಅದನ್ನೇ ನೀಡೋಣ ಎಂದು ವಿಚಾರಿಸಿದಾಗ ದೊರೆತ ಸಂಖ್ಯೆಯೇ ವಿನಯಣ್ಣನದು. ಅಂದು ಮಾತನಾಡಿಸಿದಾಗ ಸಾಮಾನ್ಯರಂತೆ ಅನಿಸಿದ್ದು ಸುಳ್ಳಲ್ಲ. ನಂತರವೇ ತಿಳಿದದ್ದು ಇದು ಅಸಾಮಾನ್ಯ ಪ್ರತಿಭೆ ಎಂದು.
ಇವರು ಕವಿಗಳ, ಸಾಹಿತಿಗಳ ಕುರಿತು ಪರಿಚಯಿಸುವಾಗ ಅವರೆಲ್ಲರೂ ನಮ್ಮೆದುರಿಗೆ ಇದ್ದಾರೆಯೇನೋ ಎಂದು ಅನಿಸಿಬಿಡುವುದಂತೂ ಸುಳ್ಳಲ್ಲ. ತುಂಗಾರತಿಗಾಗಿ ಸಾಹಿತ್ಯ ರಚಿಸಿ ಹಾಡಿದ ಹಾಡಂತೂ ಅತ್ಯದ್ಭುತ. ಕನ್ನಡಕ್ಕಾಗಿ ಇವರು ವಿಕಸನದಲ್ಲಿ ಹಾಡಿದ ಹಾಡು, ಭಾಷೆಯ ಸೊಗಡು ಬಹು ಚೆನ್ನಾಗಿ ತಿಳಿಯುವಂತಿದೆ. ಮೋದಿ 2.0ನಲ್ಲಿ ಅವರಿಗಾಗಿ ರಚಿಸಿದ ಸಾಹಿತ್ಯ, ಅದರ ಸ್ವರ ಸಂಯೋಜನೆ ಮಾಡಿದ್ದಂತು ನಿಜಕ್ಕೂ ಮೋಡಿ ಮಾಡುತ್ತದೆ. ಪ್ರತಿ ಬಾರಿಯೂ ಹೊಸದರ ಆಲೋಚನೆ ಅಷ್ಟೇ ಅಲ್ಲ ಅದನ್ನು ಸಾಕಾರಗೊಳಿಸುವುದು ಇವರ ವಿಶೇಷ.

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆಯ ಸಮಯಕ್ಕೆ ರಾಮಾಯಣದ ಘಟನೆ ಆಧಾರಿತವಾಗಿ ಬರೆದ ಲೇಖನಗಳಂತೂ ಅದೆಷ್ಟೋ ಜನರನ್ನು ಸೆಳೆಯಿತು. ಆ ಸಮಯದಲ್ಲಿ ನಮ್ಮ ಮನೆಯಲ್ಲಿ ನಿತ್ಯ ಸಂಜೆ ರಾಮ ಭಜನೆ ಮಾಡುತ್ತಿದ್ದೆವು ಆಗ ಈ ಲೇಖನದ ತುಣುಕನ್ನು ಓದಿದಾಗ ಎಲ್ಲರೂ ತಲೆದೂಗಿದವರೇ. ಇನ್ನು ಮನೆಯಲ್ಲಿಯೇ ಸ್ವಾತಂತ್ರ್ಯ ದಿನವನ್ನು ಹಬ್ಬವಾಗಿ ಆಚರಿಸುವ ಚಂದ್ರಶೇಖರ್ ಬಾಯರ್ ಅವರ ಮನೆಗೆ ಹೊಸತನದ ಕಾರ್ಯಕ್ರಮಕ್ಕಾಗಿ ವಿನಯಣ್ಣನ ಸಂಪರ್ಕಿಸಿದರೆ, ಅವರು ನೀಡಿದ ತಾಯಿ ಭಾರತೀಯ ಗಾನಸುಧೆ ಎಲ್ಲರ ಮನಕಾವರಿಸಿತು.

ವಿನಯ್ ಅವರ ಗರಡಿಯಲ್ಲಿ ಅದೆಷ್ಟು ಶಿವಮೊಗ್ಗದ ದೈತ್ಯ ಪ್ರತಿಭೆಗಳು ಬೆಳೆದಿದ್ದಾರೋ? ಎಲ್ಲರ ಬೆಳವಣಿಗೆಗೆ ಬೆಂಬಲ ಇವರದು. ನಗರದ ವಿವಿಧ ಕಾರ್ಯಕ್ರಮಗಳಲ್ಲಿ ತಾಯಂದಿರಿಗಾಗಿ ಹಾಡಿಸಿದ ಸಾವರ್ಕರ್ ಹಾಡಿದ ಜಯೋಸ್ತುತೆ… ತುಂಬಾ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದು. ಕವಿ ಹೆಚ್ಚೆಸ್ವಿ ಅಗಲಿದಾಗ ಅವರ ನುಡಿ ನಮನವಂತು ಮನಮುಟ್ಟುವಂತಿತ್ತು. ಹಾಗೆ ನಗರದ ಅನೇಕ ಮಹನೀಯರ ಕುರಿತು ಬರೆದ ಲೇಖನಗಳು ಅವರ ಸಾಹಿತ್ಯದ ಆಳ ಹಾಗೂ ಭಾಷಾ ಪ್ರಯೋಗಗಳ ಪ್ರೌಢಿಮೆಗೆ ಹಿಡಿದ ಕೈಗನ್ನಡಿ.

ಸಾಂಸ್ಕೃತಿಕ ಪ್ರಪಂಚದ ದಿಗ್ಗಜರ ಒಡನಾಟ ಇವರಿಗೆ ತುಸು ಹೆಚ್ಚೇ. ಉಪನ್ಯಾಸಕಿ ವೀಣಾ ಬನ್ನಂಜೆ, ಶತಾವಧಾನಿ ರಾ. ಗಣೇಶ್, ಚಕ್ರವರ್ತಿ ಸೂಲಿಬೆಲೆ, ನಿರುಪಮಾ ರಾಜೇಂದ್ರ ಹೀಗೆ ಹಲವಾರು ಮಹನೀಯರು ಇವರಿಗೆ ಚಿರಪರಿತರು. ಯಾವುದೇ ಕಾರ್ಯಕ್ರಮಕ್ಕೆ ಒಳ್ಳೆಯ ಅತಿಥಿ ಬೇಕೆಂದರೆ ನಾನಿವರನ್ನೇ ಕೇಳುವುದು. ಏಕೆಂದರೆ ಅವರ ಸಂಪರ್ಕ ಇದ್ದೇ ಇರುತ್ತದೆ ಎಂದು.

ಇವರು ನಗರದ ಅನೇಕ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಕಲಾತ್ಮ ಎಂಬ ಸಂಗೀತ ಶಾಲೆಯನ್ನು ನಡೆಸುತ್ತಿದ್ದಾರೆ. ಕಲಾ ಹಾಗೂ ಸಾಹಿತ್ಯ ಪ್ರಾಕಾರಗಳಿಗೆ ಇವರು ತೋರಿದ ಒಲವು ಹಾಗೂ ಜ್ಞಾನದ ಕಾರಣದಿಂದಾಗಿ ಕರ್ನಾಟಕ ಸಂಘದ ಸದಸ್ಯರಾಗಿ, ನಿರ್ದೇಶಕರಾಗಿ ಈಗ ಕಾರ್ಯದರ್ಶಿಯಾಗಿ ತಮ್ಮ ಸೇವೆ ಸಲ್ಲಿಸುವಂತಾಗಿದೆ. ಹಾಗಾಗಿ ವಿನೂತನವಾದ ಕಾರ್ಯಕ್ರಮಗಳು ಆಯೋಜನೆಯಾಗಿ ಜನರನ್ನು ಕರ್ನಾಟಕ ಸಂಘ ಸೆಳೆಯುತ್ತಿರುವುದು ಕಂಡಿದ್ದೇವೆ. ಅಲ್ಲದೇ ನಗರದ ಶ್ರೀಗಂಧ, ಅಭಿರುಚಿ ಹಾಗೂ ಅಜೇಯ ಸಂಸ್ಕೃತಿ ಬಳಗ ಮತ್ತು ಜಿ. ಎಸ್. ಎಸ್. ಪ್ರತಿಷ್ಠಾನಗಳಲ್ಲಿ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. 30 ಕ್ಕೂ ಹೆಚ್ಚು ಕಿರುಚಿತ್ರಗಳಲ್ಲಿ ಅಭಿನಯಿಸಿದ ಇವರಿಗೆ ‘ಬೆಳ್ಳಿಮಂಡಲ’ದವರು ನೀಡುವ “ಅಂಬೆಗಾಲು” ಕಿರುಚಿತ್ರಕ್ಕೆ ನೀಡುವ ಪುರಸ್ಕಾರದಲ್ಲಿ ಉತ್ತಮ ಮೋಷಕ ನಟ ಎನ್ನುವ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಇನ್ನಷ್ಟು ಸಾಹಿತ್ಯ ಸೇವೆ ಇವರನ್ನು ಅರಸಿ ಬರಲಿ. ಪ್ರಶಸ್ತಿಗೆ ಭಾಜನರಾಗಿ ಕನ್ನಡದ ಹಿರಿಮೆ ಹೆಚ್ಚಿಸಲಿ ಎನ್ನುವ ಆಶಯ ನನ್ನದು.

ಡಾ. ಮೈತ್ರೇಯಿ ಆದಿತ್ಯ
ಸಂಸ್ಕೃತ ಉಪನ್ಯಾಸಕರು
ಪೇಸ್ ಕಾಲೇಜ್, ಶಿವಮೊಗ್ಗ

Department of Kannada and Culture ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೋಂದಾಯಿತ ಸಂಸ್ಥೆ ಮತ್ತು ಕಲಾವಿದರು ಸಹಾಯಧನ ಪಡೆಯಲು ಅರ್ಜಿ ಆಹ್ವಾನ

0

Department of Kannada and Culture ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರಾಜ್ಯಾದ್ಯಂತ ಮತ್ತು ಹೊರರಾಜ್ಯಗಳಲ್ಲಿ ಕ್ರಿಯಾತ್ಮಕ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ನಾಡಿನ ಭಾಷಾ ಸಂವರ್ಧನ, ಕಲೆ, ಸಾಹಿತ್ಯ, ಸಂಗೀತ, ಜಾನಪದ, ನೃತ್ಯ ಕಲಾಪ್ರಕಾರಗಳನ್ನು ಉಳಿಸಿ ಬೆಳೆಸುವ ಸಲುವಾಗಿ ಕಾರ್ಯನಿರ್ವಹಿಸುತ್ತಿರುವ ನೋಂದಾಯಿತ ಸಂಘ-ಸಂಸ್ಥೆಗಳಿಗೆ ಧನಸಹಾಯ ನೀಡಲು ಹಾಗೂ ಕಲಾವಿದರಿಗೆ ವಾದ್ಯ ಪರಿಕರ ಮತ್ತು ವೇಷಭೂಷಣಗಳ ಖರೀದಿಗೆ ಸಹಾಯಧನ ಹಾಗೂ ಚಿತ್ರಕಲೆ/ಶಿಲ್ಪಕಲಾಕೃತಿಗಳ ಪ್ರದರ್ಶನಕ್ಕೆ ಸಹಾಯಧನ ನೀಡಲು 2025-26ನೇ ಸಾಲಿನ ಸಾಮಾನ್ಯ/ಪ.ಜಾ/ಪ.ಪಂ. ಉಪಯೋಜನೆಯಡಿ ಸೇವಾಸಿಂದು ಮುಖಾಂತರ ಅರ್ಜಿ ಆಹ್ವಾನಿಸಿದೆ.

ಆಸಕ್ತರು ಸೇವಾಸಿಂಧು sevesindhu.karnataka.gov.in ಮೂಲಕ ಡಿ.30ರೊಳಗಾಗಿ ಅರ್ಜಿ ನ್ನು ಸಲ್ಲಿಸುವುದು ಹಾಗೂ ಮಾರ್ಗ ಸೂಚಗಾಗಿ ಇಲಾಖೆ ವೆಬ್ಸೈಟ್ www.kannadasiri.karnataka.gov.in ನ್ನು ಮತ್ತು ಸೇವಾಸಿಂದು ಪೋರ್ಟಲ್‌ನ್ನು ಸಂಪರ್ಕಿಸುವುದು.

Department of Kannada and Culture ಹೆಚ್ಚಿನ ಮಾಹಿತಿಗಾಗಿ 08024410547/8792662814/8792662816/08022213530/9986837037/9900337738/9449436877/9480197511/9916600027/08022241325 ಗಳನ್ನು ಹಾಗೂ ಆಯಾ ಜಿಲ್ಲೆಯ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಆಯಾ ಜಿಲ್ಲೆಯ ವ್ಯವಸ್ಥಾಪಕರು, ಸೇವಾಸಿಂಧು ಇವರನ್ನು ಸಂಪರ್ಕಿಸುವಂತೆ ಶಿವಮೊಗ್ಗ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ .

Chamber of Commerce Shivamogga ಡಿಸೆಂಬರ್ 4. ಶಿವಮೊಗ್ಗದಲ್ಲಿ ಕೈಗಾರಿಕಾ ಇಲಾಖೆಯಿಂದ ಇನ್ಕ್ಯುಬೇಷನ್ ಯೋಜನೆ ಅರಿವು ಕಾರ್ಯಕ್ರಮ

0

Chamber of Commerce Shivamogga ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಶಿವಮೊಗ್ಗ ಮತ್ತು ಕೆಸಿಟಿಯು ಬೆಂಗಳೂರು ಹಾಗೂ ಪಿಇಎಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ ಇವರ ಸಹಯೋಗದೊಂದಿಗೆ ಡಿ.4 ಬೆಳಿಗ್ಗೆ 10.30 ಕ್ಕೆ ಸಾಗರ ರಸ್ತೆಯಲ್ಲಿರುವ ಪಿಇಎಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ ಎಂಎಸ್‌ಎಂಇಗಳ ಕಾರ್ಯಕ್ರಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವುದು ಯೋಜನೆಯಡಿ ಇನ್‌ಕ್ಯೂಬೆಷನ್ ಯೋಜನೆ ಕುರಿತು ಒಂದು ದಿನದ ಅರಿವು ಮೂಡಿಸುವ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.

ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಜೋಯಿಸ್ ರಾಮಾಚಾರ್ ಕಾರ್ಯಾಗಾರದ ಉದ್ಘಾಟನೆಯನ್ನು ನೆರವೇರಿಸಲಿದ್ದು, ಅಧ್ಯಕ್ಷೆತೆಯನ್ನು ಪಿಇಎಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ ಕಾಲೇಜಿನ ಪ್ರಾಂಶುಪಾಲರು ಡಾ.ಸ್ವಾಮಿ ಡಿ.ಆರ್ ವಹಿಸಿರುವರು.

Chamber of Commerce Shivamogga ಪಿಇಎಸ್ ಟ್ರಸ್ಟ್ ಮುಖ್ಯ ಆಡಳಿತ ಸಂಯೋಜಕ ಡಾ.ನಾಗರಾಜ.ಆರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಆ‌ರ್.ಗಣೇಶ್‌, ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಹನುಮಂತಪ್ಪ.ಪಿ ಗೌರವಾನ್ವಿತ ಉಪಸ್ಥಿತಿ ವಹಿಸಿಲಿದ್ದು, ಜಿಲ್ಲಾ ಕೈಗಾರಿಕಾ ಕೇಂದ್ರ ಉಪ ನಿರ್ದೇಶಕ ಹೆಚ್.ಸುರೇಶ್, ಪಿಇಎಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ ಕಾಲೇಜಿನ ಪ್ರಾಧ್ಯಪಕರಾ ಡಾ.ಅರ್ಜುನ್.ಯು ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವರು.