Friday, March 20, 2026
Friday, March 20, 2026
Home Blog Page 4

DVS College of Arts, Science ಹೊಸ ರೀತಿಯ ಶಿಕ್ಷಣ ಅಗತ್ಯ. ಬದಲಾವಣೆಗೆ ನಾವು ಸನ್ನದ್ಧರಾಗಬೇಕು: ಪ್ರೊ.ಶರತ್ ಅನಂತ ಮೂರ್ತಿ

0

DVS College of Arts, Science ವಿಜ್ಞಾನ ಮತ್ತು ತಂತ್ರಜ್ಞಾನ ಅಳವಡಿಸಿಕೊಳ್ಳುವುದರಿಂದ ಹೊಸತನದ ಕಲಿಕೆ ಸಾಧ್ಯ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಹೇಳಿದರು.

ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಭೌತಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಿದ್ದ ಅಂತರಶಿಸ್ತೀಯ ಸಂಶೋಧನೆ ಮತ್ತು ನಾವೀನ್ಯತೆ ವಿಷಯ ಕುರಿತ ಎರಡು ದಿನದ ರಾಷ್ಟ್ರೀಯ ವಿಜ್ಞಾನ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಹೊಸ ಆಲೋಚನೆಗಳು, ಹೊಸ ರೀತಿಯ ಶಿಕ್ಷಣ ನಮ್ಮ ದೇಶಕ್ಕೆ ಬಹುಮುಖ್ಯವಾಗಿ ಅಗತ್ಯವಾಗಿದೆ. ನಾವು ಹೊಸ ಬದಲಾವಣೆಗೆ ಸನ್ನದ್ಧರಾಗಬೇಕು. ವಿದ್ಯಾರ್ಥಿಗಳು ವಿಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಧನಾತ್ಮಕ ಉಪಯೋಗಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ. ಎಚ್.ಕೇಶವ ಮಾತನಾಡಿ, ಸಂಶೋಧನೆ ಮತ್ತು ನಾವೀನ್ಯತೆ ಬಹುಪ್ರಾಮುಖ್ಯವಾದ ವಿಚಾರ. ಹೊಸ ವಿಚಾರಕ್ಕೆ, ಹೊಸತನಕ್ಕೆ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ವಿಜ್ಞಾನಿ ಡಾ. ಸಿ.ವಿ.ಯೇಳಮಗ್ಗದ ಮಾತನಾಡಿ, ಹೊಸ ಆವಿಷ್ಕಾರಗಳ ಬಗ್ಗೆ ವಿದ್ಯಾರ್ಥಿಗಳು ಆಸಕ್ತಿ ವಹಿಸಬೇಕು. ನಮ್ಮ ಎದುರು ಇರುವ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ಐಐಟಿ ಧಾರವಾಡ ಡೀನ್ ಡಾ. ಎಸ್.ಎಂ.ಶಿವಪ್ರಸಾದ್ ಮಾತನಾಡಿ, ಸಂಶೋಧನಾ ಕ್ಷೇತ್ರದಲ್ಲಿನ ಹೊಸ ಸಾಧ್ಯತೆಗಳ ವಿದ್ಯಾರ್ಥಿಗಳು ಅಧ್ಯಯನ ನಡೆಸಬೇಕು ಎಂದು ಹೇಳಿದರು.

ದೇಶೀಯ ವಿದ್ಯಾಶಾಲಾ ಸಮಿತಿ ಅಧ್ಯಕ್ಷ ಕೆ.ಬಸಪ್ಪಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಕೃತಿ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

DVS College of Arts, Science ಎಸ್‌ಪಿಆರ್‌ಒಸಿ ಮಾಜಿ ಗ್ರೂಪ್ ನಿರ್ದೇಶಕ ಎಚ್.ಡಿ.ಆನಂದ, ಸ್ಕೂಲ್ ಆಫ್ ಸೈನ್ಸಸ್‌ನ ಡಾ. ಎಸ್.ಆರ್.ರಮೇಶ್ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು.

ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಎಂ.ವೆಂಕಟೇಶ್, ಐಕ್ಯೂಎಸಿ ಸಂಯೋಜಕ ಪ್ರೊ. ಎನ್.ಕುಮಾರಸ್ವಾಮಿ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಂ.ಆರ್.ಹರೀಶ್ ಕುಮಾರ್, ದೇಶೀಯ ಸಮಿತಿ ಆಡಳಿತ ಮಂಡಳಿ, ಕಾಲೇಜಿನ ಸಿಬ್ಬಂದಿ ಉಪಸ್ಥಿತರಿದ್ದರು.

D.S.Arun ಕುವೆಂಪು ವಿವಿ ಕುಲಸಚಿವರ ವಿರುದ್ಧ ಭ್ರಷ್ಠಾಚಾರ ಆರೋಪ: ಸರ್ಕಾರ ಮದ್ಯೆ ಪ್ರವೇಶಿಸಬೇಕು- ಶಾಸಕ ಡಿ.ಎಸ್.ಅರುಣ್

0

ಮಲೆನಾಡು ಭಾಗದ ಹಾಗೂ ಶಿವಮೊಗ್ಗ ಜಿಲ್ಲೆಯ ಹೆಮ್ಮೆಯಾಗಿರುವ ಕುವೆಂಪು ವಿಶ್ವವಿದ್ಯಾಲಯ ಗೌರವ ಮತ್ತು ಘನತೆಗೆ ಧಕ್ಕೆಯಾಗುವಂತಹ ಬೆಳವಣಿಗೆಗಳ ಕುರಿತು ವಿಧಾನ ಪರಿಷತ್‌ನಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದ ವಿಧಾನ ಪರಿಷತ್ ಶಾಸಕರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಡಿ.ಎಸ್.ಅರುಣ್ ಅವರು, ವಿಶ್ವವಿದ್ಯಾಲಯದ ಆಡಳಿತದಲ್ಲಿ ಉಂಟಾಗಿರುವ ಗೊಂದಲಗಳು ಹಾಗೂ ಕುಲಸಚಿವರ ವಿರುದ್ಧ ಕೇಳಿಬರುತ್ತಿರುವ ಭ್ರಷ್ಟಾಚಾರ ಆರೋಪಗಳ ಬಗ್ಗೆ ರಾಜ್ಯ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದರು.

ವಿಧಾನ ಪರಿಷತ್‌ನ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು,ಕುವೆಂಪು ವಿಶ್ವವಿದ್ಯಾಲದ ಕುಲಸಚಿವರ ವಿರುದ್ಧ ವಿವಿಧ ಹಗರಣಗಳು ಭ್ರಷ್ಟಾಚಾರ ಮತ್ತು ಕರ್ತವ್ಯ ಲೋಪದಂತಹ ಗಂಭೀರ ಆರೋಪಗಳು ಕೇಳಿಬಂದಿರುವುದು ಅತ್ಯಂತ ಚಿಂತಾಜನಕ ವಿಷಯವಾಗಿದೆ ಎಂದು ಹೇಳಿದರು.

ಅಲ್ಲದೆ, ಕುಲಸಚಿವರು ಹಾಗೂ ಕುಲಪತಿಗಳ ನಡುವೆ ಹೊಂದಾಣಿಕೆ ಕೊರತೆಯಿರುವುದು ವಿಶ್ವವಿದ್ಯಾಲಯದ ಆಡಳಿತ ವ್ಯವಸ್ಥೆ ಮತ್ತು ಶೈಕ್ಷಣಿಕ ವಾತಾವರಣದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದರು.

ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಕುವೆಂಪು ವಿಶ್ವವಿದ್ಯಾಲಯದ ಘನತೆ ಮತ್ತು ವಿಶ್ವಾಸವನ್ನು ಕಾಪಾಡುವುದು ಅತ್ಯಂತ ಅಗತ್ಯವಾಗಿದೆ. ಯಾವುದೇ ರೀತಿಯ ಗೊಂದಲಗಳು ಮತ್ತು ಆರೋಪಗಳು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಣ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ತಕ್ಷಣ ಸ್ಪಷ್ಟ ಕ್ರಮ ಕೈಗೊಳ್ಳಬೇಕು ಎಂದು ಅವರು ದೃಢವಾಗಿ ತಿಳಿಸಿದರು.

D.S.Arun ಈ ವಿಷಯದ ಕುರಿತು ರಾಜ್ಯದ ಉನ್ನತ ಶಿಕ್ಷಣ ಸಚಿವರು ತಕ್ಷಣ ಗಮನ ಹರಿಸಿ, ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಜೊತೆಗೆ ವಿಶ್ವವಿದ್ಯಾಲಯದ ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಶಿಸ್ತನ್ನು ಕಾಪಾಡಿ ಸಂಸ್ಥೆಯ ಗೌರವವನ್ನು ಉಳಿಸಬೇಕೆಂದು ಅವರು ಒತ್ತಾಯಿಸಿದರು.

ಈ ವಿಷಯದ ಕುರಿತು ಉನ್ನತ ಶಿಕ್ಷಣ ಸಚಿವರು ಪ್ರತಿಕ್ರಿಯಿಸಿ, ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದೇನೆ ಎಂದು ತಿಳಿಸಿ,ತಕ್ಷಣ ಅಗತ್ಯ ಕ್ರಮ ಕೈಗೊಂಡು ಸಂಬಂಧಿಸಿದ ಅಧಿಕಾರಿಯನ್ನು ವರ್ಗಾವಣೆ ಮಾಡಲು ನಿರ್ದೇಶನ ನೀಡಿದ್ದೇನೆ ಎಂದು ಭರವಸೆ ನೀಡಿದರು.

Chamber Of Commerce Shivamogga ತರೀಕೆರೆ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಎಸ್.ಶಂಕರನಾರಾಯಣರಿಗೆ ಸನ್ಮಾನ

0

Chamber Of Commerce Shivamogga ಸಾಹಿತಿ ಹಾಗೂ ಬೆಂಗಳೂರು ಆಕಾಶವಾಣಿ ಮುಖ್ಯಸ್ಥರಾದ ಡಾ. ಎ.ಎಸ್.ಶಂಕರ ನಾರಾಯಣ ರವರಿಗೆ ಈ ಬಾರಿ ತರೀಕೆರೆ ತಾಲೂಕಿನ 19 ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಶಿವಮೊಗ್ಗ ಜಿಲ್ಲಾ ಸರ್ವೋದಯ ಮಂಡಲ, ಭದ್ರಾವತಿ ಶಿವಮೊಗ್ಗ ಆಕಾಶವಾಣಿ ಕೇಳುಗರ ಬಳಗ, ಆರ್ ಜೆ ಬಳಗ, ನನ್ನ ಕನಸಿನ ಶಿವಮೊಗ್ಗ ಸಂಸ್ಥೆಗಳ ವತಿಯಿಂದ ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಎಂ.ಎನ್.ಸುಂದರರಾಜ್ ರವರು ಮಾತನಾಡಿ, ಸನ್ಮಾನಿತರಿಗೆ ಈ ಗೌರವ ಸಿಕ್ಕಿರೋದು ತುಂಬಾ ಸಂತೋಷದ ವಿಷಯ. ಅವರಿಂದ ಇನ್ನೂ ಹೆಚ್ಚಿನ ಸಾಹಿತ್ಯವನ್ನು ನಾವೆಲ್ಲ ನಿರೀಕ್ಷಿಸುತ್ತಿದ್ದೇವೆ ಎಂದು ತಿಳಿಸಿದರು.

ಜಿಲ್ಲಾ ಸರ್ವೋದಯ ಮಂಡಲದ ಅಧ್ಯಕ್ಷರಾದ ಆರ್.ಮನೋಹರ್ ಮೂಲತಃ ತರೀಕೆರೆಯವರೇ ಆದ ಶಂಕರ್ ನಾರಾಯಣ್ ತಮ್ಮ ಬರಹದ ಮೂಲಕ ಆಕಾಶವಾಣಿ ಸಂದರ್ಶನಗಳ ಮೂಲಕ ನಾಡಿಗೆ ಚಿರಪರಿಚಿತರಾಗಿದ್ದಾರೆ. ಅವರ ಸಾಹಿತ್ಯ ಸೇವೆ ಹೀಗೆಯೇ ಮುಂದುವರೆಯಲಿ ಎಂದು ಶುಭ ಹಾರೈಸಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಶಂಕರ ನಾರಾಯಣ ಅವರ ಸಾಧನೆ ಸಾಕಷ್ಟು ಇದೆ. ಅವರ ಸಾಧನೆಗೆ ಸಿಕ್ಕ ಮನ್ನಣೆ ಇದು. ಅವರ ಸಾಹಿತ್ಯ ಕೃಷಿ ಇನ್ನೂ ಹೆಚ್ಚು ಹೆಚ್ಚು ಆಗಲಿ ಎಂದು ಶುಭ ಹಾರೈಸಿದರು.

Chamber Of Commerce Shivamogga ಇದೇ ಸಂದರ್ಭದಲ್ಲಿ ನನ್ನ ಕನಸಿನ ಶಿವಮೊಗ್ಗ ವೇದಿಕೆಯ ಎನ್.ಗೋಪಿನಾಥ್, ಆಕಾಶವಾಣಿ ಕೇಳುಗರ ಬಳಗದ ಚಿಕ್ಕಪ್ಪ ರಾಮೇಶ್ವರ, ಆಕಾಶವಾಣಿ ಆರ್ ಜೆ ಗಳಾದ ಗಣೇಶ್ ಕೆಂಚನಾಳ, ಸರ್ವೋದಯ ಮಂಡಲದ ಬಸವರಾಜಪ್ಪ, ರುದ್ರಪ್ಪ ಚೀಲೂರ್, ಪ್ರೊಫೆಸರ್ ಸತ್ಯನಾರಾಯಣ, ಬಿಂದು ವಿಜಯ ಕುಮಾರ ಉಪಸ್ಥಿತರಿದ್ದರು.

ತರೀಕೆರೆ ತಾಲೂಕಿನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ದೊರೆತಿರುವುದು ಸೌಭಾಗ್ಯ. ತಮ್ಮ ಅಧಿಕಾರ ಅವಧಿಯಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿಗೆ ಹೆಚ್ಚು ಒತ್ತು ನೀಡುತ್ತೇನೆ ಎಂದು ಬೆಂಗಳೂರಿನ ಆಕಾಶವಾಣಿ ಮುಖ್ಯಸ್ಥರಾದ ಡಾ. ಎ.ಎಸ್.ಶಂಕರ ನಾರಾಯಣ ಅವರು ತಿಳಿಸಿದ್ದಾರೆ.

B.Y. Raghavendra ಕೇಂದ್ರ ಗೃಹ ವ್ಯವಹಾರಗಳ ಸಂಸದೀಯ ಸಭೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಭಾಗಿ

0

B.Y. Raghavendra ನವದೆಹಲಿಯಲ್ಲಿ ನಡೆದ ಕೇಂದ್ರ ಗೃಹ ಇಲಾಖೆಗೆ ಸಂಬಂಧಿಸಿದ ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯ ಸಭೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಭಾಗವಹಿಸಿದ್ದರು

B.Y. Raghavendra ಗೃಹ ವ್ಯವಹಾರ ಸಚಿವಾಲಯ ಮತ್ತು ಈಶಾನ್ಯ ಪ್ರದೇಶ ಅಭಿವೃದ್ಧಿ ಸಚಿವಾಲಯದ ಅನುದಾನ ಬೇಡಿಕೆಗಳ (2026–27) ಕರಡು ವರದಿಗಳನ್ನು ಮತ್ತು ಸಮಿತಿಯ ಹಿಂದಿನ ಶಿಫಾರಸುಗಳ ಕುರಿತು ತೆಗೆದುಕೊಂಡ ಕ್ರಮ ವರದಿಗಳನ್ನು ಪರಿಗಣಿಸಲು ಮತ್ತು ಅಂಗೀಕರಿಸಲು ಸಮಿತಿಯ ಸಭೆ ಏರ್ಪಡಿಸಲಾಗಿತ್ತು.

ಮಾರ್ಚ್ 17. ಶಿವಮೊಗ್ಗದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ

0

ಶಿವಮೊಗ್ಗ : ನಗರದ ಹೊಸಮನೆ ಬಡಾವಣೆಯ ಶ್ರೀ ವಜ್ರೇಶ್ವರಿ ವಿನಾಯಕ ಸೇವಾ ಟ್ರಸ್ಟ್‌ನ ೨೨ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಮಾ.17 ರ ಸಂಜೆ 7.30ಕ್ಕೆ ಶ್ರೀ ವಿನಾಯಕ ಪ್ರಾರ್ಥನೆ, ಪುಣ್ಯಾಹ, ಕುಂಭಾಧಿವಾಸ, ಸಪ್ತಶುದ್ಧಿ, ವಾಸ್ತುಮ ರಾಕ್ನೋಘ್ನ ಹೋಮ, ವಸ್ತು ಬಲಿ, ದಿಗ್ಬಲಿ, ಪೂರ್ಣಹುತಿ, ಮಹಾಮಂಗಳಾರತಿ ನಡೆಯಲಿದೆ.
ಮಾ.17ರ ಮಂಗಳವಾರ ಬೆಳಿಗ್ಗೆ 9ಕ್ಕೆ ದ್ವಾದಶ ನಾರಿಕೇಳ ಗಣಯಾಗ, ಪೂರ್ಣಹುತಿ, ಕುಂಭಾಭಿಷೇಕ, 12.10ಕ್ಕೆ ಬ್ರಹ್ಮ ಕುಂಭಾಷೇಕ 12.30ಕ್ಕೆ ಮಹಾಂಗಳಾರತಿ, ಮಧ್ಯಾಹ್ನ ೧ಕ್ಕೆ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.
ವಾಸನ್ ಕಣ್ಣಿನ ಆಸ್ಪತ್ರೆ ವತಿಯಿಂದ ಮಾ.17ರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ಶಾಲಾ ಮಕ್ಕಳಿಗೆ ಉಚಿತ ನೋಟ್‌ಬುಕ್ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ದೇವರಾಜ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಕಿದ ಪ್ರೀತಿಯ ಕುರಿ ಸಾವು: ಶ್ರದ್ಧಾಂಜಲಿ ವಿಶೇಷವಾಗಿ ಶಾಲಾಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿ ವಿತರಣೆ

0

ಶಿವಮೊಗ್ಗ ನಗರದ ಸಿಗಹಟ್ಟಿ ಬಡಾವಣೆಯಲ್ಲಿ ಮಣಿ ಸಾಕಿದ್ದ ಫೈಟರ್ ಕುರಿ ಶುಕ್ರವಾರ ಅನಾರೋಗ್ಯದಿಂದ ಮೃತಪಟ್ಟ ಘಟನೆ ನಡೆದಿದೆ. ಸಾಕುಪ್ರಾಣಿಯ ಮೇಲೆ ಅಪಾರ ಪ್ರೀತಿ ಹೊಂದಿದ್ದ ಮಣಿ ಹಾಗೂ ಅವರ ಸ್ನೇಹಿತರು ಆ ಕುರಿಯನ್ನು ಕುಟುಂಬ ಸದಸ್ಯನಂತೆ ನೋಡಿಕೊಂಡಿದ್ದರು.
ಕುರಿ ಮೃತಪಟ್ಟ ನಂತರ ಅದಕ್ಕೆ ಸಕಲ ವಿಧಿ ವಿಧಾನಗಳೊಂದಿಗೆ ಶವ ಸಂಸ್ಕಾರ ನೆರವೇರಿಸಲಾಯಿತು. ಬಳಿಕ ಅದರ ನೆನಪಿಗಾಗಿ ವಿಶೇಷವಾಗಿ ತಿಥಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಸುಮಾರು 60 ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಊಟ ವ್ಯವಸ್ಥೆ ಮಾಡಲಾಗಿದ್ದು, ಅವರ ವಿದ್ಯಾಭ್ಯಾಸಕ್ಕೆ ಸಹಾಯವಾಗುವಂತೆ ಪೆನ್ನುಗಳು ಮತ್ತು ಪುಸ್ತಕಗಳನ್ನು ವಿತರಿಸಲಾಯಿತು. ಮಣಿ ಹಾಗೂ ಅವರ ಸ್ನೇಹಿತರು ಮಕ್ಕಳಿಗೆ ಆಹಾರ ನೀಡುವ ಮೂಲಕ ಮತ್ತು ವಿದ್ಯಾಭ್ಯಾಸಕ್ಕೆ ಬೇಕಾದ ಸಾಮಗ್ರಿಗಳನ್ನು ನೀಡುವ ಮೂಲಕ ಪ್ರೀತಿಯ ಕುರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

Nidhi Apke Nikat ಮಾರ್ಚ್ 27. ಶಿವಮೊಗ್ಗ & ದಾವಣಗೆರೆ ಜಿಲ್ಲೆಗಳಲ್ಲಿ “ನಿಧಿ ಆಪ್ ಕೆ ನಿಕಟ್” ಕಾರ್ಯಕ್ರಮ ಆಯೋಜನೆ.

0

Nidhi Apke Nikat ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ವತಿಯಿಂದ ನಿಧಿ ಆಪ್ಕೆ ನಿಕಟ್ 2.0 ಕಾರ್ಯಕ್ರಮವನ್ನು ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಮಾ. 27 ರಂದು ಆಯೋಜಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ತೀರ್ಥಹಳ್ಳಿ ತಾಲೂಕು ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ಆಧಿಶಕ್ತಿ ಕಾರ್ಸ್ ಪ್ರೆ, ಲಿ., ಅವರಗೆರೆ, ಓಲ್ಡ್ ಪಿಬಿ ರಸ್ತೆ, ದಾವಣಗೆರೆ ಇಲ್ಲಿ ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮ ನಡೆಯಲಿದೆ.
ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆ ಹಾಗೂ ಪಿಂಚಣಿದಾರರಿಗೆ ಮಧ್ಯಾಹ್ನ 2.30 ರಿಂದ ಸಂಜೆ 4 ಗಂಟೆವರೆಗೆ ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮ ನಡೆಯಲಿದ್ದು, ಉದ್ಯೋಗದಾತರು ಮತ್ತು ಉದ್ಯೋಗಿಗಳು ಮತ್ತು ಪಿಂಚಣಿದಾರರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಪ್ರಾದೇಶಿಕ ಕಚೇರಿಯ ಸಹಾಯಕ ಭವಿಷ್ಯ ನಿಧಿ ಆಯುಕ್ತರು ತಿಳಿಸಿದ್ದಾರೆ.

Klive Special Article ಯುಗಾದಿ…ಒಂದಿಷ್ಟು ಮಾಹಿತಿ- ಡಾ.ಹೆಚ್.ಪದ್ಮನಾಭ ಅಡಿಗ. ಶಿವಮೊಗ್ಗ

0

Klive Special Article ಬ್ರಹ್ಮನ ಸೃಷ್ಟಿಯ ಪ್ರಾರಂಭದದಿನ, ಬ್ರಹ್ಮನ ಪೂಜೆಯೇ ವಿಶೇಷ.ಈ ದಿನ ಯುಗಗಳ ಪ್ರಾರಂಭದ ದಿನವಾಗಿ ಯುಗಾದಿ. ಭಾರತದ ದಕ್ಷಿಣ ರಾಜ್ಯಗಳಲ್ಲಿ ಹೊಸ ಸಂವತ್ಸರ ಪರಾಭವದ ಪ್ರಥಮ ದಿನ. ಶಾಲಿವಾಹನ ಶಕದಂತೆ 1949 ನೇ ವರ್ಷದ ಪ್ರಾರಂಭದ ದಿನ. ಏಳನೇ ವೈವಸ್ವತ ಮನ್ವಂತರದಲ್ಲಿ 28 ನೇ ಚತುರ್ ಯುಗದಲ್ಲಿ ಕೃತ ತ್ರೇತಾ ದ್ವಾಪರ ಕಳೆದು ಕಲಿಯುಗದಲ್ಲಿ 5127 ವರ್ಷಗಳು ಕಳೆದಿವೆ.
ಹೊಸವರ್ಷಕ್ಕೆ ಗುರುವೇ ರಾಜ, ಕುಜನೇ ಮಂತ್ರಿ. ಪರಾಭವಾಬ್ದೇ ರಾಜ್ಞ: ಸ್ಯಾತ್ ಸಮರಮ್ ಸಹಶತ್ರುಭಿ:. ರಾಜರು ರಾಜರೊಳಗೆ ನಿತ್ಯ ಯುದ್ಧ. ಅದರಲ್ಲಿ ಪರಾಭವ ಎಲ್ಲರಿಗೂ.
ಕಾಲವನ್ನು ಅಳೆಯಲು ವಿಶ್ವದಲ್ಲಿ ಅನೇಕ ರೀತಿಯ ಪದ್ಧತಿಗಳನ್ನು ಮಾಡಿಕೊಂಡಿದ್ದಾರೆ. ಭಾರತದಲ್ಲಿ ವರ್ಷ ಅಯನ, ಋತು , ಮಾಸ, ಪಕ್ಷ, ದಿನ ಎಂದು ಆರು ವಿಧವಾಗಿ ವಿಂಗಡಿಸಿದ್ದಾರೆ. ಭಾರತೀಯರಿಗೆ ಆಕಾಶವೇ ಪಂಚಾಂಗ. ಪ್ರಾಚೀನಕಾಲದಲ್ಲಿ ಅನೇಕ ರೀತಿಯ ವರ್ಷಾಚರಣೆಯಿತ್ತು . ಸಾವನವರ್ಷ, ಸೌರವರ್ಷ, ಚಾಂದ್ರ ವರ್ಷ, ನಾಕ್ಷತ್ರ ವರ್ಷ ಮತ್ತು ಬಾರ್ಹಸ್ಪತ್ಯ ವರ್ಷ ಎಂದು ಐದು ಪ್ರಕಾರದ ವರ್ಷಾಚರಣೆಗಳು ಬಳಕೆಯಲ್ಲಿದ್ದವು. ಇವುಗಳಲ್ಲಿ ಸೌರವರ್ಷವು ಮೇಷ ಮಾಸ, ವೃಷಭ ಮಾಸ ಇತ್ಯಾದಿಯಾಗಿ ಸಂಕ್ರಾಂತಿಗೆ ಅನುಗುಣವಾಗಿ ಎಣಿಸಲಾಗುತ್ತದೆ. ಇದು ಸೌರಯುಗಾದಿಯಿಂದ ಅಂದರೆ ಮುಂದಿನ ಏಪ್ರೀಲ್ 14 ನೇ ದಿನಾಂಕದಿಂದ ಹೊಸವರ್ಷ ಆರಂಭವಾಗುತ್ತದೆ.
ಚಾಂದ್ರವರ್ಷವನ್ನು ಪ್ರಭವ ವಿಭವ ಮೊದಲಾದ 60 ಸಂವತ್ಸರದ ಕ್ರಮದಲ್ಲಿ ಹೇಳುತ್ತಾರೆ. ಈ ಹೊಸವರ್ಷ ಪರಾಭವ ಎಂಬ ಹೆಸರಿನ ವರ್ಷವಾಗಿದೆ. ಎರಡು ಮಾಸಗಳಿಗೆ ಒಂದು ಸೌರ ಋತು, ಮೂರು ಸೌರ ಋತುಗಳಿಗೆ ಒಂದು ಅಯನ. ಇವು ಉತ್ತರ ಅಯನ ಮತ್ತು ದಕ್ಷಿಣ ಅಯನ ಎಂದು ಎರಡು ಇವೆ. ಕರ್ಕ ಸಂಕ್ರಾಂತಿಯಿಂದ ದಕ್ಷಿಣಾಯನ, ಮಕರ ಸಂಕ್ರಾಂತಿಯಿಂದ ಉತ್ತರಾಯಣ ಪ್ರಾರಂಭವಾಗುತ್ತವೆ. ದಕ್ಷಿಣಾಯನ,ಮಳೆಗಾಲವಾಗಿ ಕೃಷಿ ಮೊದಲಾದ ಕಾರ್ಯಗಳನ್ನು ಹೆಚ್ಚಾಗಿ ಹೊಂದಿರುವುದರಿಂದ ಗೃಹಪ್ರವೇಶ, ದೇವಾಲಯ ನಿರ್ಮಾಣ ವಿವಾಹ ಮೊದಲಾದವುಗಳಿಗೆ ಉತ್ತರಾಯಣವೇ ಶ್ರೇಷ್ಠ ಎಂದು ಪರಿಗಣಿಸಿದ್ದಾರೆ. ಚಾಂದ್ರ ಮಾಸಗಳನ್ನು ಹುಣ್ಣಿಮೆಯಂದು ಇರುವ ನಕ್ಷತ್ರದ ಹೆಸರಿನಲ್ಲಿ ಹೇಳುತ್ತಾರೆ. ಹುಣ್ಣಿಮೆಯು ಕೃತಿಕಾ ನಕ್ಷತ್ರದಲ್ಲಿ ಬಂದರೆ ಆ ಮಾಸ ಕಾರ್ತಿಕ, ಚಿತ್ರಾ ನಕ್ಷತ್ರದಲ್ಲಿ ಬಂದರೆ ಚೈತ್ರ, ವಿಶಾಖಾ ನಕ್ಷತ್ರದ ದಿನ ಹುಣ್ಣಿಮೆಯಾದರೆ ಆ ಮಾಶಸ ವೈಶಾಖ ಹೀಗೆ ಚಾಂದ್ರಮಾನದ ಮಾಸಗಳು ಚಂದ್ರನ ಗತಿಯನ್ನು ಅವಲಂಬಿಸಿವೆ.
Klive Special Article ಯುಗಾದಿಯಂದು ತೈಲಾಭ್ಯಂಜನ ಹೊಸಬಟ್ಟೆ ಧರಿಸುವುದು ,ಜೋಕಾಲಿ ,ದೇವೀ ಆರಾಧನೆ ,ಪಂಚಾಂಗಶ್ರವಣ , ಮುಂತಾದ ಆಚರಣೆಗಳು ರೂಢಿಯಲ್ಲಿದೆ. ಹೊಸವರ್ಷದ ಮೊದಲ ದಿನವೇ ಊರವರೆಲ್ಲ ಸೇರಿ, ಹೊಸ ಸಂವತ್ಸರದಲ್ಲಿ ವಾರ್ಷಿಕ ಕಾರ್ಯಕ್ರಮಗಳ ಆದ್ಯತೆಗಳ ವಿಚಾರ ವಿನಿಮಯ ಮಾಡಿಕೊಳ್ಳುತ್ತಾರೆ . ಮಳೆ ಎಷ್ಟು ಪ್ರಮಾಣದಲ್ಲಿ ಆಗಬಹುದು,ರೋಗರುಜಿನಗಳ ಬಾಧೆ ಬರಬಹುದೇ, ಯಾವ ಯಾವ ವಸ್ತುಗಳು, ಆಹಾರಪದಾರ್ಥಗಳು ತುಟ್ಟಿಯಾಗುತ್ತವೆ ಅಥವಾ ಅಗ್ಗವಾಗುತ್ತವೆ, ಯಾವುದನ್ನು ಬೆಳೆಯುವುದು ಉತ್ತಮ ಇತ್ಯಾದಿಯಾಗಿ ಇಡೀ ವರ್ಷದ ಉತ್ಪನ್ನಗಳ ಬಗ್ಗೆ ಚರ್ಚಿಸುತ್ತಾರೆ. ಹೊಸ ಹುಮ್ಮಸ್ಸಿನೊಂದಿಗೆ, ಹೊಸ ಸಂಕಲ್ಪ ದಿಂದ, ಮುಂದಿನ ದಿನಗಳಲ್ಲಿ ಮಾಡಬೇಕಾದ ಕಾರ್ಯಗಳ ರೂಪುರೇಖೆಗಳನ್ನು ನಿರ್ಧರಿಸುತ್ತಾರೆ.
ಈ ಪರಾಭವ ಸಂವತ್ಸರವು ನಮ್ಮ ನಮ್ಮ ಋಣಾತ್ಮಕ ವಿಚಾರಗಳಿಗೆ ಪರಾಭವವೂ ಧನಾತ್ಮಕ ವಿಚಾರಗಳಿಗೆ ವಿಜಯವೂ ಆಗಲೆಂದು ಪ್ರಾರ್ಥಿಸೋಣ.

ಡಾ. ಪದ್ಮನಾಭ ಅಡಿಗ. ಹೆಚ್.
ನಿವೃತ ಉಪನ್ಯಾಸಕರು,
94819 88755

ಶಿಕ್ಷಣ ಹಾಗೂ ದಾಸೋಹ ವ್ಯವಸ್ಥೆಯಿರುವ ಮಠಗಳಿಗೆ ಆದ್ಯತೆ ಮೇರೆಗೆ ಗ್ಯಾಸ್ ಸಿಲಿಂಡರ್ ಒದಗಿಸಲು ಮನವಿ

0

ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗೆ ಉಚಿತ ಆಶ್ರಯ, ಶಿಕ್ಷಣ ಹಾಗೂ ದಾಸೋಹದ ವ್ಯವಸ್ಥೆಯನ್ನು ಮಾಡುತ್ತಿರುವ ಮಠಗಳಿಗೆ ಮೊದಲ ಆದ್ಯತೆ ಮೇರೆಗೆ ಅಡುಗೆ ಅನಿಲ ಪೂರೈಕೆ ಮಾಡಬೇಕು ಎಂದು ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್. ಚಿದಾನಂದ ಗೌಡ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಶತಮಾನಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಜಾತಿ, ಮತಗಳ ಭೇದವಿಲ್ಲದೆ ಜ್ಞಾನವನ್ನು ನೀಡುತ್ತಿರುವ ಮಠಗಳ ಮೇಲೆಯೂ ಕೊಲ್ಲಿ ರಾಷ್ಟçಗಳ ಯದ್ಧದ ಪರಿಣಾಮ ಎದುರಾಗಿದೆ. ಸಮರ್ಪಕವಾಗಿ ಅಡುಗೆ ಅನಿಲ ದೊರೆಯದೇ ದಾಸೋಹಕ್ಕೆ ತೊಂದರೆಯಾಗುತ್ತಿದೆ. ಉತ್ತರ ಕರ್ನಾಟಕದ ಹಲವು ಮಠಗಳು ಸೌದೆಗೆ ಮೊರೆ ಹೋಗಿದ್ದು, ಇತ್ತ ಸೌದೆಯೂ ಅವಶ್ಯಕತೆಗೆ ತಕ್ಕಷ್ಟು ದೊರೆಯುತ್ತಿಲ್ಲ. ಮಠಗಳಿಗೆ ದುಸ್ಥಿತಿ ಎದುರಾಗಿದೆ ಎಂದಿದ್ದಾರೆ.
ಮಠಗಳು ಹಾಗೂ ಕೆಲ ಸಂಸ್ಥೆಗಳು ಶಿಕ್ಷಣ ನೀಡುವುದರ ಜೊತೆಗೆ ಸಂಸ್ಕಾರವನ್ನೂ ಕಲಿಸುತ್ತಿವೆ. ತ್ರಿವಿಧ ದಾಸೋಹ ಪದ್ಧತಿಯು ಶಿಕ್ಷಣದ ಸಮಾನತೆಗೆ ನಾಂದಿ ಹಾಡಿದೆ. ಇಂತಹ ಮಠಗಳಲ್ಲಿ ಆಹಾರ ತಯಾರಿಸಲು ಸಮರ್ಪಕವಾಗಿ ಅಡುಗೆ ಅನಿಲ ಪೂರೈಕೆ ಮಾಡುವ ಜವಾಬ್ದಾರಿ ಸರ್ಕಾರದ ಮೇಲಿದೆ. ಸರ್ಕಾರಗಳು ಮಾಡುವ ಕೆಲಸವನ್ನು ಯಾವುದೇ ಪ್ರತಿಫಲಾಕ್ಷೆ ಇಲ್ಲದೇ ಮಠಗಳು ಕಾರ್ಯ ನಿರ್ವಹಿಸುತ್ತಿವೆ. ಆದ್ದರಿಂದ ತ್ರಿವಿಧ ದಾಸೋಹದಲ್ಲಿ ತೊಡಗಿದ ಮಠಗಳಿಗೆ ಮೊದಲ ಆದ್ಯತೆ ಮೇರೆಗೆ ಅಡುಗೆ ಅನಿಲ ಪೂರೈಕೆ ಮಾಡಿದರೆ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ಶಿವಮೊಗ್ಗದ ಶ್ರೀಮತಿ ಶಾಂತಾ ಶೆಟ್ಟಿ ಅವರಿಗೆ “ವೀರವನಿತೆ” ಪ್ರಶಸ್ತಿ

0


ಹಲವಾರು ಸಂಘ ಸಂಸ್ಥೆಯಲ್ಲೇ ನಿಸ್ವಾರ್ಥವಾಗಿ ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತಿರುವ ಕಲಾವಿದೆ ನಿರೂಪಕಿ ಹಾಗೂ ಚಿರಂತನ ಯೋಗ ಹಾಗು ಸಂಗೀತ ಟ್ರಸ್ಟ್ ಸಂಸ್ಥಾಪಕ ರಾದ. ಶ್ರೀಮತಿ ಶಾಂತಾ ಶೆಟ್ಟಿಯವರಿಗೆ ಬೆಂಗಳೂರಿನ ಹೈದರ್ ಪಾರ್ಕ್ ಹೋಟೆಲ್ ನಲ್ಲಿ ಪ್ರತಿಷ್ಠಿತ ಚಿತ್ರಸಂತೆ ಸಂಸ್ಥೆವತಿಯಿಂದ ಸಾಮಾಜಿಕ ಸೇವೆಗಾಗಿ ಪ್ರಶಸ್ತಿ ನೀಡಿ ಆತ್ಮೀಯವಾಗಿ ಸನ್ಮಾನಿಸಿ
ಪಾರಿ ತೋಷಕ ಹಾಗೂ ಪ್ರಶಸ್ತಿ ಪತ್ರ ವನ್ನು ಖ್ಯಾತ ಚಲನಚಿತ್ರ ನಟಿ ತಾರಾ ಅವರು ಹಾಗೂ ಗಿರೀಶ್ ಗೌಡ ಮತ್ತು ಚಿತ್ರಸಂತೆ ತಂಡದವರು ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಚಿತ್ರನಟಿ ತಾರಾ ಅವರು ಇವರ ಸೇವೆಯನ್ನು ಸ್ಮರಿಸಿದರು.