2025-26ನೇ ಸಾಲಿನ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಪ್ರತಿ ಹನಿಗೆ ಅಧಿಕ ಬೆಳೆ ಕಾರ್ಯಕ್ರಮದಲ್ಲಿ ತೋಟಗಾರಿಕೆ ಬೆಳೆಗಳಲ್ಲಿ ನೀರಿನ ಬಳಕೆಯ ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಸೂಕ್ಷ್ಮ ನೀರಾವರಿ ಪದ್ಧತಿ ಅಳವಡಿಕೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಎಲ್ಲಾ ವರ್ಗಗಳ ಆಸಕ್ತ ರೈತರಿಂದ ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಿದೆ.
ಈ ಯೋಜನೆಯಡಿ 5 ಎಕರೆವರೆಗಿನ ಪ್ರದೇಶಕ್ಕೆ ಶೇಕಡಾ 90% ರಷ್ಟು ಸಹಾಯಧನ ಹಾಗೂ ಮೇಲ್ಪಟ್ಟ ಪ್ರದೇಶಕ್ಕೆ ಶೇಕಡಾ 45% ರ ದರದಂತೆ ಸಹಾಯಧನವನ್ನು ಒಟ್ಟಾರೆ ಗರಿಷ್ಠ 12.50 ಎಕರೆ ಪ್ರದೇಶದವರೆಗೆ ನೀಡಲು ಅವಕಾಶವಿದ್ದು, ಈಗಾಗಲೇ 7 ವರ್ಷಗಳ ಹಿಂದೆ ಸೂಕ್ಷ್ಮ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡು ಸಹಾಯಧನ ಪಡೆದಿರುವ ರೈತರು ಅವುಗಳು ಹಾಳಾಗಿದ್ದಲ್ಲಿ ಪುನಃ ಸೂಕ್ಷ್ಮ ನೀರಾವರಿ ಅಳವಡಿಸಿಕೊಂಡಲ್ಲಿ ಅವರೂ ಸಹಾಯಧನ ಪಡೆಯಲು ಅರ್ಹರಾಗಿರುತ್ತಾರೆ. ಸಹಾಯಧನವನ್ನು ಯೋಜನೆಯ ಮಾರ್ಗಸೂಚಿ ಹಾಗೂ ಅನುದಾನ ಲಭ್ಯತೆ ಮತ್ತು ಜೇಷ್ಠತೆಯ ಅನುಸಾರ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಹೋಬಳಿ/ತಾಲೂಕು ಮಟ್ಟದ ತೋಟಗಾರಿಕಾ ಕಚೇರಿಯನ್ನು ಸಂಪರ್ಕಿಸುವAತೆ ತೋಟಗಾರಿಕೆ ಜಂಟಿ ನಿರ್ದೇಶಕರು ತಿಳಿಸಿರುತ್ತಾರೆ.
ಕೃಷಿ ಸಿಂಚಾಯಿ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
Agricultural University ಕೃಷಿ ವಿವಿಯಲ್ಲಿ ರೇಂಜರ್, ರೋವರ್ ಘಟಕ ಉದ್ಘಾಟನೆ
Agricultural University ಕೃಷಿ ವಿಶ್ವವಿದ್ಯಾಲಯದಲ್ಲಿ ರೇಂಜರ್, ರೋವರ್ ಘಟಕ ಘಟಕ ಸ್ಥಾಪನೆ ಆಗುತ್ತಿರುವುದು ವಿಶೇಷ ಎಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಅರ್.ಸಿಂಧಿಯಾ ಹೇಳಿದರು.
ಇರುವಕ್ಕಿಯ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಅಡಿಯಲ್ಲಿ ರೇಂಜರ್ ಮತ್ತು ರೋವರ್ ಘಟಕ ಉದ್ಘಾಟಿಸಿ ಮಾತನಾಡಿ, ಕೃಷಿ ವಿವಿಯ ಪರಿಸರ ಹೊಸ ಕಲಿಕೆಯ ಅನುಭವ ನೀಡುತ್ತದೆ. ಕೃಷಿ ವಿವಿಯಲ್ಲಿ ಕ್ಯಾಂಪ್ ಆಯೋಜಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ತಿಳಿಸಿದರು.
ಕುಲಸಚಿವ ಡಾ. ಕೆ.ಸಿ.ಶಶಿಧರ ಮಾತನಾಡಿ, ಕೃಷಿ ವಿವಿಗಳಲ್ಲಿ ಎನ್ಸಿಸಿ ಮತ್ತು ಎನ್ಎಸ್ಎಸ್ ಈಗಾಗಲೇ ಪಠ್ಯದಲ್ಲಿ ಇವೆ. ಅದೇ ಮಾದರಿಯಲ್ಲಿ ರೇಂಜರ್ ಮತ್ತು ರೋವರ್ ಸೇರಿಸಲು ಸಾಧ್ಯ. ಈ ಬಗ್ಗೆ ಪ್ರಯತ್ನ ಮಾಡಲಾಗುವುದು ಎಂದರು.
ಕುಲಪತಿ ಡಾ. ಆರ್.ಸಿ.ಜಗದೀಶ ಮಾತನಾಡಿ, ನಾಯಕತ್ವ ಗುಣ ಬೆಳಸುವಲ್ಲಿ ರೇಂಜರ್ ಮತ್ತು ರೋವರ್ ಅತ್ಯುತ್ತಮ ಪಾತ್ರ ವಹಿಸಲಿದೆ. ನಮ್ಮ ವಿದ್ಯಾರ್ಥಿಗಳಿಗೆ ಇಂತಹ ಅವಕಾಶ ಕೊಡಬೇಕು ಎನ್ನುವದೇ ನನ್ನ ಗುರಿ ಎಂದರು.
ರೋವರ್ ಘಟಕದ ಮುಖ್ಯಸ್ಥರಾಗಿ ಡಾ. ಸತೀಶ್ ವೈ ಹಾಗೂ ರೇಂಜರ್ ಘಟಕದ ಮುಖ್ಯಸ್ಥರಾಗಿ ಡಾ. ಬಸಮ್ಮ ಆಲದ ಕಟ್ಟಿ ಅವರನ್ನು ವಿಶ್ವವಿದ್ಯಾಲಯ ನೇಮಕ ಮಾಡಿತು. ಬಸಮ್ಮ ಕಾರ್ಯಕ್ರಮ ಸಂಘಟಿಸಿದರು.
Agricultural University ಡಾ. ಹೇಮ್ಲಾನಾಯಕ್, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಶಿವಮೊಗ್ಗ ಜಿಲ್ಲಾ ಮುಖ್ಯ ಆಯುಕ್ತೆ ಶಕುಂತಲಾ ಚಂದ್ರಶೇಖರ್, ಜಿಲ್ಲಾ ಆಯುಕ್ತ (ರೋವರ್ ವಿಭಾಗ) ಕೆ.ರವಿ, ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರಯ್ಯ ಕೆ.ವಿ., ವಿಜಯಕುಮಾರ್, ವಿಶ್ವವಿದ್ಯಾಲಯದ ಡಾ ಸಿ.ಜೆ. ಶ್ರೀಧರ, ಡಾ. ರವಿಕುಮಾರ್ ಡಾ. ರಾಮಕೃಷ್ಣ ಹೆಗ್ಗಡೆ, ನಮ್ರತ, ಮಾನ್ಯ, ರಕ್ಷಿತ, ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್ ಉಪಸ್ಥಿತರಿದ್ದರು.
Sri Kshetra Dharmasthala Village Development Yojana Trust ಮಾನವೀಯ ಮೌಲ್ಯಗಳ ಅರಿವಿಲ್ಲದ ಅಭಿವೃದ್ಧಿ ನಿರರ್ಥಕ :ಹೆಬ್ಬಾಳು ಶ್ರೀ-
ದಾವಣಗೆರೆ
Sri Kshetra Dharmasthala Village Development Yojana Trust ಮಾನವೀಯ ಮೌಲ್ಯಗಳ ಅರಿವಿಲ್ಲದ ಅಭಿವೃದ್ಧಿಯು ನಿರರ್ಥಕ, ಸಮಾಜದ ಹಿತ ಬಯಸುವುದರಲ್ಲಿ ಮಾನವೀಯ ಮೌಲ್ಯಗಳಿವೆ ಎಂದು ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಮಹಾ ಸ್ವಾಮಿಗಳು ಹೇಳಿದರು.
ಅವರಿಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ವತಿಯಿಂದ ಹೆಬ್ಬಾಳು ವಿರಕ್ತಮಠದಲ್ಲಿ ನೆರವೇರಿದ ಸಾಮೂಹಿಕ ಸಹಸ್ರ ಬಿಲ್ವಾರ್ಚನೆ, ಧಾರ್ಮಿಕ ಸಭಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಕೊಟ್ಟರೆ ಸಾಲದು ಸಂಸ್ಕೃತಿ ಸಂಸ್ಕಾರವನ್ನು ಕೊಡಬೇಕು ಇದರಲ್ಲಿ ತಾಯಂದಿರ ಪಾತ್ರ ಮಹತ್ತರವಾಗಿದೆ ಎಂದರು.
ಧಾರ್ಮಿಕ ಉಪನ್ಯಾಸ ನೀಡಿದ ಹಿರಿಯ ಪತ್ರಕರ್ತ ಡಾ. ಎಚ್ ಬಿ ಮಂಜುನಾಥ ಜೀವನೋದ್ಧಾರಕ್ಕೆ ಆರ್ಥಿಕ ನೆರವು ಅವಶ್ಯ ಆದರೆ ಆತ್ಮೋದ್ಧಾರಕ್ಕೆ ಧಾರ್ಮಿಕ ಅರಿವು ಅವಶ್ಯ. ಧಾರ್ಮಿಕ ಅರಿವು ಎಂದರೆ ಸಮಾಜದಲ್ಲಿ ಅಹಂಕಾರದಿಂದ ಬೀಗದೆ ಸಂಸ್ಕಾರದಿಂದ ಬಾಗುವುದು. ಸಾಮೂಹಿಕವಾದ ಧಾರ್ಮಿಕ ಆಚರಣೆಗಳಲ್ಲಿ ‘ನಾನು’ ಎಂಬುವ ಅಹಂಭಾವ ದೂರವಾಗಿ ‘ನಾವು’ ಎಂಬುವ ವಿಶಾಲಭಾವ ಮೂಡುತ್ತದೆ ಎಂಬುದನ್ನು ಸ್ವಾರಸ್ಯಕರ ನಿದರ್ಶನಗಳ ಮೂಲಕ ವಿವರಿಸಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ದಾವಣಗೆರೆ ಅಧ್ಯಕ್ಷ ಎಸ್ ಕೆ ಚಂದ್ರಶೇಖರ್ ಧಾರ್ಮಿಕ ಸಭಾದ ಉದ್ಘಾಟನೆ ನೆರವೇರಿಸಿದರು. ಗ್ರಾಮಾಭಿವೃದ್ಧಿ ಯೋಜನೆ ಯ ಜಿಲ್ಲಾ ನಿರ್ದೇಶಕ ಎಂ ಲಕ್ಷ್ಮಣ್ ಪ್ರಾಸ್ತಾವಿಕ ನುಡಿಗಳ ನಾಡಿದರು. ಮುಖ್ಯ ಅತಿಥಿಗಳಾಗಿ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷ ಅಣಬೇರು ಮಂಜಣ್ಣ, ಎಂ ರುದ್ರಪ್ಪ, ನರೇಂದ್ರಬಾಬು, ಆನಂದಪ್ಪ, ಮಹಾ ರುದ್ರಯ್ಯ, ರುದ್ರಮುನಿ, ಮಹೇಂದ್ರಪ್ಪ, ಮಹಾಂತೇಶ, ಬಸವರಾಜಪ್ಪ, ಶಶಿಕಲಾ, ಬಸಮ್ಮ, ಚಂದ್ರಕಲಾ ಹಾಗೂ ಕೊಡಗನೂರು ವಲಯ ಪದಾಧಿಕಾರಿಗಳು ಮುಂತಾದವರು ಉಪಸ್ಥಿತರಿದ್ದು ಯೋಜನಾಧಿಕಾರಿ ಸತೀಶ್ ಸ್ವಾಗತ ಕೋರಿದರು. ಶಾಲಾ ಮಕ್ಕಳು ಸಾಂಪ್ರದಾಯಿಕ ನೃತ್ಯಗಳನ್ನು ಪ್ರಸ್ತುತಪಡಿಸಿದರು.
Chamber Of Commerce Shivamogga ಕೈಗಾರಿಕೆ, ತರಬೇತಿ ಸಂಸ್ಥೆಗಳ ನಡುವೆ ನೇರ ಸಂಬಂಧವಿರಲಿ : ಬಿ.ಗೋಪಿನಾಥ್
Chamber Of Commerce Shivamogga ಕೌಶಲ್ಯಗಳ ಅಸಮಾನತೆಯಿಂದ ಉದ್ಯೋಗ ಭರ್ತಿ ಮಾಡುವುದು ಸವಾಲಿನ ಕೆಲಸವಾಗಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೇರೋ ಕಾಸ್ಟ್ ಸಭಾಂಗಣದಲ್ಲಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಅಧಿಕಾರಿಗಳು, ಜಿಲ್ಲೆಯ ಎಲ್ಲ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಏರ್ಪಡಿಸಿದ್ದ ಕೌಶಲ್ಯ ಅಂತರ ಅಧ್ಯಯನ, ವಿವಿಧ ಉದ್ಯಮ ಹಾಗೂ ಕೈಗಾರಿಕೆಗಳಲ್ಲಿ ವಿದ್ಯಾರ್ಥಿಗಳಿಗೆ ಬೇಕಾಗಿರುವ ವಿವಿಧ ಕೌಶಲ್ಯಗಳ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಂತ್ರಿಕ ಜ್ಞಾನ ಮತ್ತು ಉದ್ಯೋಗದ ಅವಶ್ಯಕತೆಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಕೌಶಲ್ಯ ಅವಶ್ಯಕ. ಉದ್ಯೋಗದಾತರು ನಿರೀಕ್ಷಿಸುವ ಕೌಶಲ್ಯಗಳು ಮತ್ತು ಉದ್ಯೋಗಿಗಳು ಹೊಂದಿರುವ ನಿಜವಾದ ಕೌಶಲ್ಯಗಳ ನಡುವಿನ ಅಸಮಾನತೆ ಇದ್ದು, ಕೌಶಲ್ಯ ಕಲಿಯಲು ಪ್ರೋತ್ಸಾಹಿಸಬೇಕಿದೆ ಎಂದು ತಿಳಿಸಿದರು.
ವೃತ್ತಿಗಳನ್ನು ಗುರಿಯಾಗಿಸಿ ಮತ್ತು ಅವರಿಗೆ ಅಗತ್ಯವಾದ ತರಬೇತಿ ಒದಗಿಸಬೇಕು. ಉದ್ಯೋಗಗಳಿಗೆ ಸಂಬಂಧಿಸಿದ ಉದ್ಯಮದ ಅವಶ್ಯಕತೆಗಳನ್ನು ಪೂರೈಸುವ ಸಾಮರ್ಥ್ಯಗಳಿಗೆ ಒತ್ತು ನೀಡಬೇಕು. ಪಠ್ಯಕ್ರಮವನ್ನು ನವೀಕರಿಸಲು ಮತ್ತು ಪ್ರಾಯೋಗಿಕ ತರಬೇತಿಯನ್ನು ನೀಡಲು ಉದ್ಯಮ ಸಮೂಹಗಳನ್ನು ಬಳಸುವುದು ಇಂದಿನ ಅತ್ಯವಶ್ಯಕವಾಗಿದೆ ಎಂದರು.
ಕೈಗಾರಿಕೆಗಳಲ್ಲಿ ಕಾರ್ಮಿಕರ ಕೊರತೆ ಇದೆ ಎಂಬುದು ರಹಸ್ಯವಲ್ಲ. ತಾಂತ್ರಿಕ ಕೆಲಸಗಳಿಗೆ ಕೌಶಲ್ಯವಿಲ್ಲದ ಜನರನ್ನು ನೇಮಿಸಿಕೊಳ್ಳಲು ಸಾಧ್ಯವಿಲ್ಲ. ಸಾಂಪ್ರದಾಯಿಕ, ಕಡಿಮೆ ಬೇಡಿಕೆಯ ಕೌಶಲ್ಯಗಳಿಗಿಂತ ಮುಂದುವರಿದ ವಲಯಗಳ ಮೇಲೆ ಕೇಂದ್ರೀಕರಿಸುವ ಗುರಿಯನ್ನು ಕೈಗಾರಿಕಾ ತರಬೇತಿ ಸಂಸ್ಥೆಗಳು ಹೊಂದಬೇಕು ಎಂದು ತಿಳಿಸಿದರು.
ಮಾಚೇನಹಳ್ಳಿ ಕೈಗಾರಿಕಾ ಸಂಘದ ಕಾರ್ಯದರ್ಶಿ ರಾಜೇಶ್ ಮಾತನಾಡಿ, ಟ್ರೇಡ್ ಸ್ಕೂಲ್ ಕೌಶಲ್ಯ ಅಂತರವನ್ನು ನಿವಾರಿಸಲು ವಿದ್ಯಾರ್ಥಿಗಳು ತಮ್ಮ ಕ್ಷೇತ್ರವನ್ನು ಆಳವಾಗಿ ಅರ್ಥಮಾಡಿಕೊಳ್ಳಬೇಕು ಎಂದರು
Chamber Of Commerce Shivamogga ಮೂಲಭೂತ ಸೌಕರ್ಯಗಳ ಸಮಿತಿ ಚೇರ್ಮನ್ ಗಣೇಶ್ ಎಂ ಅಂಗಡಿ ಮಾತನಾಡಿ, ಐಟಿಐ ತರಬೇತುದಾರರ ಗುಣಮಟ್ಟ ಹೆಚ್ಚಿಸಿಕೊಳ್ಳಬೇಕು. ಕೆಲಸಗಾರರು ನೇಮಕಗೊಳ್ಳುವ ಮೊದಲು ತಮ್ಮ ಕೆಲಸಗಳಿಗೆ ಜ್ಞಾನ ಮತ್ತು ಕೌಶಲ್ಯಗಳನ್ನು ಹೊಂದಿರಬೇಕು ಎಂದು ತಿಳಿಸಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ್, ನಿರ್ದೇಶಕರಾದ ಎಸ್.ಎಸ್.ಉದಯಕುಮಾರ್, ಪ್ರದೀಪ್ ವಿ ಎಲಿ, ಎಸ್.ಪಿ.ಶಂಕರ್, ಸಿ.ಎ.ಶರತ್, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಅಧಿಕಾರಿಗಳು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಂಶುಪಾಲರು ಇತರರು ಭಾಗವಹಿಸಿದ್ದರು.
Karnataka State Commission for Protection of Child Rights ವಿಶೇಷಚೇತನ ಮಕ್ಕಳಿಗೆ ಸಾಮಾನ್ಯ ಶಾಲೆಯಲ್ಲಿ ದಾಖಲಾತಿ ನೀಡಬೇಕು : ಅಪರ್ಣಾ ಕೊಳ್ಳ
Karnataka State Commission for Protection of Child Rights ವಿಶೇಷ ಚೇತನ ಮಕ್ಕಳಿಗೆ ಸಾಮಾನ್ಯ ಶಾಲೆಯಲ್ಲಿ ಓದಲು ಅವಕಾಶ ನೀಡಬೇಕು. ಹಾಗೂ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕಾರ್ಯಕರ್ತರಿಗೆ ಪೋಕ್ಸೋ, ಬಾಲ್ಯ ವಿವಾಹ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ತರಬೇತಿ ನೀಡುವುದು ಅತ್ಯವಶ್ಯ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಅಪರ್ಣಾ ಕೊಳ್ಳ ಅಧಿಕಾರಿಗಳಿಗೆ ಸೂಚಿಸಿದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ನಗರದ ಜಿಲ್ಲಾ ಡಯಟ್ ತರಬೇತಿ ಸಂಸ್ಥೆಯಲ್ಲಿ ಜಿಲ್ಲಾ ಅಂಗವಿಕಲ ಕಲ್ಯಾಣ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು(ವಿಆರ್ಡಬ್ಲುö್ಯ) ಮತ್ತು ನಗರ ಪುನರ್ವಸತಿ ಕಾರ್ಯಕರ್ತರು(ಯುಆರ್ಡಬ್ಲುö್ಯ) ಹಾಗೂ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು(ಎಂಆರ್ ಡಬ್ಲುö್ಯ) ಗಳಿಗೆ ಬಾಲ್ಯ ವಿವಾಹ, ಪೋಕ್ಸೋ ಮತ್ತು ಮಕ್ಕಳ ರಕ್ಷಣೆ ಕುರಿತು ಏರ್ಪಡಿಸಿದ್ದ ಅರಿವು/ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಶೇಷ ಮಕ್ಕಳ ರಕ್ಷಣೆ ಕುರಿತು ಆಯೋಜಿಸಿರುವ ವಿಶೇಷ ತರಬೇತಿ ಇದು. ರಾಜ್ಯದಲ್ಲಿ 10 ಲಕ್ಷ ಜನ ವಿಶೇಷ ಚೇತನರಿದ್ದು ಶೇ.5 ರಿಂದ 7 ರಷ್ಟಿದ್ದಾರೆ. ಇದರಲ್ಲಿ ಶೇ.40 ಮಕ್ಕಳು ಇದ್ದಾರೆ. ಆದ್ದರಿಂದ ಇವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳು, ಹಕ್ಕುಗಳು ಲಭಿಸುತ್ತಿವೆಯೇ ಎಂದು ಪರಿಶೀಲಿಸುವ ಅವಶ್ಯಕತೆ ಇದೆ.
ವಿಶೇಷ ಚೇತನ ಎಲ್ಲ ಮಕ್ಕಳಿಗೆ ಅಗತ್ಯವಾಗಿ ಶಿಕ್ಷಣ ನೀಡಬೇಕು. ಶ್ರವಣ ಮತ್ತು ಕಣ್ಣಿನ ದೋಷ ಹೊರತುಪಡಿಸಿ ಉಳಿದ ವಿಶೇಷ ಚೇತನ ಮಕ್ಕಳಿಗೆ ಸಾಮಾನ್ಯ ಶಾಲೆಗಳಲ್ಲಿ ದಾಖಲಾತಿ ಸಿಗಬೇಕು. ಕೆಲವು ಶಾಲೆಗಳಲ್ಲಿ ದಾಖಲಾತಿ ನೀಡುತ್ತಿಲ್ಲ್ಲ ಎಂಬ ದೂರು ಇದ್ದು, ಇದನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಯುಡಿಐಡಿ ಕಾರ್ಡ್ ಸೇರಿದಂತೆ ಸರ್ಕಾರಿ ಸೌಲಭ್ಯಗಳು ಸಮರ್ಪಕವಾಗಿ ಸಿಗುವಂತೆ ವಿಶೇಷ ಚೇತನರ ಪರವಾಗಿ ಕೆಲಸ ಮಾಡುತ್ತಿರುವ ಕಾರ್ಯಕರ್ತರು ನಿಗಾ ವಹಿಸಬೇಕು. ಶೇ.70 ರಷ್ಟು ವಿಶೇಷಚೇತನರು ಗ್ರಾಮೀಣ ಭಾಗದಲ್ಲಿದ್ದು, ಮನೆಯಲ್ಲಿರುವ ವಿಶೇಷ ಮಕ್ಕಳಿಗೆ ಲಭಿಸಬೇಕಾದ ಸೌಲಭ್ಯಗಳ ಬಗ್ಗೆ ಗಮನ ಹರಿಸಬೇಕು. ಗ್ರಾಮೀಣ ಭಾಗದಲ್ಲಿ ಬಾಲ್ಯ ವಿವಾಹ, ಪೋಕ್ಸೊ ಹೆಚ್ಚಾಗಿದ್ದು, ತಡೆಯಲು ಜಾಗೃತಿ ಹೆಚ್ಚಿಸಬೇಕು, ವಿಶೇಷ ಚೇತನ ಮಕ್ಕಳಲ್ಲಿ ಮಕ್ಕಳ ಸಹಾಯವಾಣಿ 1098 ಬಗ್ಗೆಯೂ ಜಾಗೃತಿ ಮೂಡಿಸಬೇಕು.
ಬಾಲ್ಯ ವಿವಾಹಕ್ಕೆ ಸಂಬAಧಿಸಿದAತೆ ಮಕ್ಕಳ ನಿಶ್ಚಿತಾರ್ಥ ಆದರೂ ಕೂಡ ಎಫ್ಐಆರ್ ದಾಖಲಿಸಿ ಕ್ರಮ ವಹಿಸಬಹುದಾಗಿದ್ದು ಈ ಬಗ್ಗೆಯೂ ಜಾಗೃತಿ ಮೂಡಿಸಿ ಕ್ರಮ ಜರುಗಿಸಬೇಕೆಂದರು.
Karnataka State Commission for Protection of Child Rights ಹಾಗೂ ವಿಶೇಷ ಚೇತನರ ಮಾಹಿತಿ ಅಪ್ಡೇಟ್ ಮಾಡುವ ಪಂಚತAತ್ರ ತಂತ್ರಾAಶದ ಬಗ್ಗೆ ವಿಆರ್ಡಬ್ಲುö್ಯ, ಯುಆ ರ್ಡಬ್ಲುö್ಯ, ಎಂಆರ್ಡಬ್ಲುö್ಯ ಗಳಿಗೆ ತರಬೇತಿ ನೀಡಬೇಕು ಎಂದು ಸೂಚಿಸಿದ ಅವರು ಕಾರ್ಯಕರ್ತರಿಂದ ತಾಲ್ಲೂಕುವಾರು ಸಮಸ್ಯೆಗಳ ಕುರಿತು ಆಲಿಸಿ, ಸಂವಾದ ನಡೆಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ ಎಸ್ ಮಾತನಾಡಿ, ಕಾಯ್ದೆ-ಕಾನೂನುಗಳನ್ನು ತಿಳಿಯುವ ಜೊತೆಗೆ ಕಾರ್ಯಗತಗೊಳಿಸುವುದು ಬಹಳ ಮುಖ್ಯವೆಂದು ಆಯೋಗದ ಸದಸ್ಯರು ನಮ್ಮನ್ನು ‘ಆ್ಯಕ್ಷನ್ ಮೋಡ್’ ಗೆ ತಂದ ಕಾರಣ ಪೋಕ್ಸೋ, ಬಾಲ್ಯವಿವಾಹ ತಡೆಯಲು ಜಿಲ್ಲೆಯಾದ್ಯಂತ ಮಿಷನ್ ಸುರಕ್ಷಾ ಅಭಿಯಾನವನ್ನು ಅತ್ಯಂತ ಪರಿಣಾಮಕಾರಿಗೊಳಿಸಲಾಗಿದೆ. ಅಭಿಯಾನದ ನಂತರ ಕಳೆದ ಸಾಲಿಗಿಂತ ಈ ಬಾರಿ ಹೆಚ್ಚಿನ ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಬಹುದಾಗಿದ್ದು ಇದಕ್ಕೆ ಕಾರಣ ಜಾಗೃತಿ ಮತ್ತು ಅರಿವು ಮೂಡಿಸಿರುವುದಾಗಿದೆ.
ಕಾವಲು ಸಮಿತಿಯ ಮೂಲಕ ಗ್ರಾ.ಪಂ ಮಟ್ಟದಲ್ಲಿ ಗ್ರಾ.ಪಂ ಅಧ್ಯಕ್ಷರು, ಪಿಡಿಓ ಮತ್ತು ಇತರೆ ಅಧಿಕಾರಿ ಸಿಬ್ಬಂದಿಗಳೊಡನೆ ಸಭೆಗಳನ್ನು ನಡೆಸಿ ಅಲ್ಲಿ ಶಾಲೆ ಬಿಟ್ಟ ಮಕ್ಕಳೊಂದಿಗೆ ಸಂವಾದ ನಡೆಸಲಾಗಿದೆ. ಅನಾರೋಗ್ಯ, ಏಕ ಪೋಷಕ ಮತ್ತಿತರೆ ಕಾರಣಗಳಿಂದ ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿದ್ದು ಮರಳಿ ಶಾಲೆಗೆ ಕರೆ ತರಲಾಗುತ್ತಿದೆ. ಹಾಗೂ ಮುಂದಿನ ದಿನಗಳಲ್ಲಿ ಬಾಲ್ಯ ವಿವಾಹ, ಪೋಕ್ಸೊ ಪ್ರಕರಣ ನಿಯಂತ್ರಿಸಲು ಕ್ರಿಯಾ ಯೋಜನೆ ರೂಪಿಸಲಾಗಿದೆ. ಜಿಲ್ಲೆಯ 1234 ಶಾಲೆಗಳಲ್ಲಿ ಕಾನೂನಿನ ಕುರಿತು, ಬಾಲ್ಯ ವಿವಾಹ, ಪೋಕ್ಸೋ, ಮಕ್ಕಳ ಹಕ್ಕುಗಳ ಕುರಿತು ಶಿಕ್ಷಕರು ಮತ್ತು ಮಕ್ಕಳಿಂದಲೇ ಜಾಗೃತಿ ಮೂಡಿಸುವ, ಚರ್ಚಿಸುವ ಸಾಕ್ಷರತಾ ಕ್ಲಬ್ಗಳನ್ನು ಆರಂಭಿಸಲಾಗಿದೆ ಎಂದರು.
ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಸುವರ್ಣ ನಾಯಕ್ ಮಾತನಾಡಿ, ಇಲಾಖೆಯ ಸೂಚನೆ ಮೇರೆಗೆ ವಿಆರ್ಡಬ್ಲುö್ಯ, ಯುಆರ್ಡಬ್ಲುö್ಯ, ಎಂಆರ್ಡಬ್ಲುö್ಯ ಗಳಿಗೆ ತರಬೇತಿ ನೀಡಲಾಗುತ್ತಿದೆ. ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು ತಿಳಿಸಿದಂತೆ ಜಿಲ್ಲೆಯ ಏಳೂ ತಾಲ್ಲೂಕುಗಳಲ್ಲಿ ಪಂಚತAತ್ರ ತಂತ್ರಾAಶದ ಬಳಕೆ ಬಗ್ಗೆ ಅವರಿಗೆ ತರಬೇತಿ ನಿಡಲಾಗುವುದು. ವಿಶೇಷ ಚೇತನ ಮಕ್ಕಳಿಗೆ ಲಭಿಸಬೇಕಾದ ಸರ್ಕಾರದ ಸೌಲಭ್ಯಗಳು, ಶಿಕ್ಷಣ ಮತ್ತು ರಕ್ಷಣೆಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕವೂ ಜೊತೆಗಿದ್ದು ಅವರ ಸಮನ್ವಯದೊಂದಿಗೆ ಕೆಲಸ ಮಾಡೋಣ ಎಂದರು.
ಜಿಲ್ಲೆಯಲ್ಲಿ 3085 ವಿಶೇಷ ಮಕ್ಕಳಿದ್ದು 2194 ಮಕ್ಕಳು ಸಾಮಾನ್ಯ ಶಾಲೆಯಲ್ಲಿ ಮತ್ತು 423 ವಿಶೇಷ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ 7 ವಿಶೇಷ ಶಾಲೆಗಳಿವೆ. ಯಾವುದೇ ವಿಶೇಷ ಮಗು ಶಿಕ್ಷಣ, ಶಾಲೆಯಿಂದ ವಂಚಿತರಾಗದAತೆ ನೋಡಿಕೊಳ್ಳಬೇಕು, ಅವರಿಗೆ ಲಭಿಸಬೇಕಾದ ಸೌಲಭ್ಯಗಳನ್ನು ನೀಡಲು ಕಾರ್ಯಕರ್ತರು ಮುತುವರ್ಜಿ ವಹಿಸಿ ಕೆಲಸ ಮಾಡಬೇಕೆಂದರು.
ಮಹಿಳಾ ಪೊಲೀಸ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಭರತ್ ಕುಮಾರ್ ಮಾತನಾಡಿ, ಪೋಕ್ಸೋ, ಬಾಲ್ಯ ವಿವಾಹಗಳನ್ನು ತಡೆಯುವಲ್ಲಿ ಜನ ಸಾಮಾನ್ಯರು, ಅಧಿಕಾರಿಗಳ ಪಾತ್ರ ಬಹು ಮುಖ್ಯವಾಗಿದೆ. ಸಾರ್ವಜನಿಕರು ಅಧಿಕಾರಿಗಳೊಂದಿಗೆ ಕೈಜೋಡಿಸಿದರೆ ಪ್ರಕರಣಗಳನ್ನು ತಡೆಯಬಹುದು. ಗ್ರಾಮೀಣ ಮತ್ತು ನಗರ ಭಾಗದಲ್ಲಿ ಪ್ರಕರಣಗಳ ಸರಿಯಾದ ಮಾಹಿತಿ ನೀಡಬೇಕು. ಪೊಲೀಸ್ ಸಹಾಯವಾಣಿ 112 ಮತ್ತು ಮಕ್ಕಳ ಸಹಾಯವಾಣಿ 1098 ಬಗ್ಗೆ ಜಾಗೃತಿ ಮೂಡಿಸಬೇಕು ಹಾಗೂ ಕಾನೂನಾತ್ಮಕ ಸಮಸ್ಯೆಗಳಿದ್ದಾಗ ವಿಶೇಷಚೇತನರಿಗೆ ಠಾಣೆಗೆ ಬರಲು ಕಾರ್ಯಕರ್ತರು ಸಹಾಯ ಮಾಡಬೇಕೆಂದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುನಾಥ್.ಆರ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿಶೇಷಚೇತನರಿಗೆ ಸಹಕರಿಸಲು ಸೇವೆ ಸಲ್ಲಿಸುತ್ತಿರುವ ವಿಆರ್ಡಬ್ಲುö್ಯ, ಯುಆರ್ಡಬ್ಲುö್ಯ, ಎಂಆರ್ಡಬ್ಲುö್ಯ ಗಳಿಗೆ ಬಾಲ್ಯ ವಿವಾಹ, ಪೋಕ್ಸೋ ಮತ್ತು ಮಕ್ಕಳ ರಕ್ಷಣೆ ಕುರಿತು ತರಬೇತಿ ನೀಡುವುದು ಅಗತ್ಯವಾಗಿದೆ. ಏಕೆಂದರೆ ಪೋಕ್ಸೋ ಪ್ರಕರಣದಲ್ಲಿ ವಿಶೇಷ ಚೇತನ ಮಕ್ಕಳೂ ಸಹ ಇದ್ದಾರೆ.
ಜಿಲ್ಲೆಯಲ್ಲಿ 214 ಪೋಕ್ಸೋ ಹಾಗೂ 54 ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿವೆ. ಇಲಾಖೆಯು ಏಪ್ರಿಲ್ನಿಂದ ಡಿಸೆಂಬರ್ ವರೆಗೂ 60 ಬಾಲ್ಯವಿವಾಹಗಳನ್ನು ತಡೆಗಟ್ಟಿದೆ. ಮಿಷನ್ ಸುರಕ್ಷಾ ಅಭಿಯಾನವನ್ನು ಪರಿಣಾಮಕಾರಿಯಾಗಿ ನಡೆಸಲಾಗುತ್ತಿದ್ದು, ಕಾವಲು ಸಮಿತಿ ಸಭೆಗಳನ್ನು ಮಾಡಲಾಗುತ್ತಿದೆ. ಮುಂದಿನ ಆರು ತಿಂಗಳಲ್ಲಿ ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಎಲ್ಲರೂ ಸಹಕರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಬಾಲನ್ಯಾಯ ಮಂಡಳಿ ಸದಸ್ಯೆ ರೇಖಾ.ಜಿ.ಎಂ ಮತ್ತು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ತಾಜುದ್ದೀನ್ ಖಾನ್ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಶಿವಮೊಗ್ಗ ದುರ್ಗಿಗುಡಿಯ ತೃಪ್ತಿ ಹೆಲ್ತ್ ಕೇರ್ ನಲ್ಲಿ ಕಿಡ್ನಿ ಮತ್ತು ಮೂತ್ರಕೋಶ ರೋಗಗಳ ತಪಾಸಣಾ ಶಿಬಿರ
ದೇಶದಲ್ಲಿ ಆರೋಗ್ಯ ಮತ್ತು ಶಿಕ್ಷಣ ಎಲ್ಲರಿಗೂ ಉಚಿತವಾಗಿ ದೊರೆಯುವಂತಾಗಬೇಕೆಂದು ಕಿಡ್ನಿ ಮತ್ತು ಮೂತ್ರಕೋಶ ರೋಗಗಳ ತಜ್ಞ ಡಾ.ಚಂದ್ರಶೇಖರ್ ಹೇಳಿದರು.
ದುರ್ಗಿಗುಡಿಯ ತೃಪ್ತಿ ಹೆಲ್ತ್ ಕೇರ್ ಜೆಸಿಐ ಶಿವಮೊಗ್ಗ ರಾಯಲ್ಸ್ ಸದಸ್ಯರಿಗೆ ಇಂದು ಹಮ್ಮಿಕೊಂಡಿದ್ದ ಕಿಡ್ನಿ ಮತ್ತು ಮೂತ್ರಕೋಶ ರೋಗಗಳ ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸಿ ಮಾತನಾಡಿದ ಅವರು, ಸಾರ್ವಜನಿಕರಲ್ಲಿ ಆರೋಗ್ಯದ ಜಾಗೃತಿ ಮೂಡಿಸುವುದು ಈ ಸಂದರ್ಭದ ತುರ್ತು ಅಗತ್ಯ ಎಂದರು.
ಜೆಸಿಐ ಸಂಸ್ಥೆಯ ಅಧ್ಯಕ್ಷೆ ಗಾನವಿ, ಕಾರ್ಯದರ್ಶಿ ತೇಜಸ್ವಿನಿ, ತಾಯಿಮನೆಯ ಸುದರ್ಶನ್, ಸಾಧನ ಟ್ರೇಡಿಂಗ್ಸ್ ನ ರಂಗನಾಥ್, ಚಿತ್ರಕೂಟ ಶ್ರೀನಿವಾಸ್ ಸೇರಿದಂತೆ ಹಲವರು ಈ ಸಂದರ್ಭದಲ್ಲಿದ್ದರು.
40 ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆಯನ್ನು ಡಾ.ಚಂದ್ರಶೇಖರ್ ಮಾಡಿದರು.
Karnataka Sanga Shivamogga ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ವಸುಧಾ-ವೈಶಾಲಿ ಜನ್ಮದಿನ ಕಲಾ ಸನ್ಮಾನ ಕಾರ್ಯಕ್ರಮ
Karnataka Sanga Shivamogga ಕಳೆದ ನಲವತ್ತು ವರ್ಷಗಳ೦ತೆ ಈ ವರ್ಷವೂ ಕೂಡ ವಸುಧಾ-ವೈಶಾಲಿ ಜನ್ಮದಿನ ಸಮಿತಿಯು ಸ್ವಯಂ ಸಂಘ ಸಂಸ್ಥೆ “ಸಮಾನಸ” (ರಿ.) ದ ಸಹಯೋಗದೊ೦ದಿಗೆ ದಿನಾ೦ಕ 01-02-2026 ರವಿವಾರ ಸ೦ಜೆ 5 ಘ೦ಟೆಗೆ ಸರಿಯಾಗಿ ಶಿವಮೊಗ್ಗ ಕರ್ನಾಟಕ ಸಂಘದ ಹಸೂಡಿ ವೆ೦ಕಟ ಶಾಸ್ತ್ರಿ ಸಾಹಿತ್ಯ ಭವನದಲ್ಲಿ ಕಲಾ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಿದೆ.
ಕಿತ್ತೂರು ರಾಣಿಚೆನ್ನಮ್ಮ ರಾಜ್ಯ ಪ್ರಶಸ್ತಿ ವಿಜೇತರೂ, ಶ್ರೀವಿದ್ಯಾ ಪ್ರತಿಷ್ಠಾನದ ಅಧ್ಯಕ್ಷರೂ ಆಗಿರುವ ಶ್ರೀಮತಿ ಪೂಜಾ ರರಘುನಂದನ್, ಹಾಸನ ಇವರನ್ನು ಈ ವರ್ಷದ ಕಲಾ ಸನ್ಮಾನಿತರಾಗಿ ಆಮ೦ತ್ರಿಸಲಾಗಿದೆ. ಸನ್ಮಾನ ಸಮಾರ೦ಭದ ನ೦ತರ ಸನ್ಮಾನಿತರಿ೦ದ “ತಾಯಿಯಾಗುವುದೆ೦ದರೆ” ಎ೦ಬ “ಏಕವ್ಯಕ್ತಿ ರ೦ಗಪ್ರದರ್ಶನ”ವು ಜರುಗಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸ೦ಘದ ಅಧ್ಯಕ್ಷರಾದ ಪ್ರೊ. ಹೆಚ್. ಆರ್. ಶ೦ಕರನಾರಾಯಣ ಶಾಸ್ತ್ರಿಯವರು ವಹಿಸುವರು. ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ನಗರದ ಪ್ರಖ್ಯಾತ ಜನಾನುರಾಗಿ ವೈದ್ಯರಾದ ಡಾ. ಪಿ. ನಾರಾಯಣ ಅವರು ಉಪಸ್ಥಿತರಿರುವರು. ವಿಶೇಷ ಆಮ೦ತ್ರಿತರಾಗಿ ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆಯ ಅಧ್ಯಕ್ಷರಾದ ಶ್ರೀ ಎನ್. ಗೋಪಿನಾಥ್ ಅವರು ಆಗಮಿಸಲಿದ್ದಾರೆ.
ಮಕ್ಕಳ ಹೆಸರಿನಲ್ಲಿ ಇದೊ೦ದು “ಸ೦ಗೀತ ಸಾಹಿತ್ಯ, ನೃತ್ಯ, ಯಕ್ಷಗಾನ ರ೦ಗಗಳ ವಿದ್ಯೆಗೆ ತಲೆಬಾಗುವ ಸ೦ಸ್ಕೃತಿ ಸನ್ಮಾನ” ಕಾರ್ಯಕ್ರಮ. ಆ ದಿನ ಬ೦ದ ಎಲ್ಲ ಪುಟಾಣಿ ಮಕ್ಕಳಿಗೆ ಕಿರುಗಾಣಿಕೆ ನೀಡುವು
ದು ಹಾಗೂ ಮಿತ್ರಭೋಜನವನ್ನು ಏರ್ಪಡಿಸುವದೂ ಈ ಕಾರ್ಯಕ್ರಮದ ಸದುದ್ದೇಶ.
Karnataka Sanga Shivamogga ಕಲಾಭಿಮಾನಿಗಳು ಹೆಚ್ಚಿನ ಸ೦ಖ್ಯೆಯಲ್ಲಿ ಭಾಗವಹಿಸಿ ಸಾಹಿತ್ಯ-ಕಲೆಗಳ ಈ ಸನ್ಮಾನ ‘ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಹಾಗೂ ಮಿತ್ರಭೋಜನವನ್ನುಸ್ವೀಕರಿಸಬೇಕೆ೦ದು ಕಾರ್ಯಕ್ರಮದ ಸ೦ಘಟಕರೂ ಪ್ರಾಯೋಜಕರೂ ಆದ ಡಾ. ವಿಘ್ನೇಶ್ ಎನ್. ಭಟ್ ಮತ್ತು ಡಾ. ಸುಮಿತ್ರಾ ವಿ. ಭಟ್ ಅವರು ಶಿವಮೊಗ್ಗದ ಕಲಾಸಕ್ತರನ್ನು ಆತ್ಮೀಯವಾಗಿ ಆಮ೦ತ್ರಿಸಿದ್ದಾರೆ.
Ishwar B Khandre ಅರಣ್ಯ ಸಂರಕ್ಷಣೆ-ಜನರ ಜೀವನೋಪಾಯದ ನಿಟ್ಟಿನಲ್ಲಿ ಸರ್ಕಾರದ ನಿರ್ಧಾರ : ಈಶ್ವರ್ ಬಿ ಖಂಡ್ರೆ
Ishwar B Khandre ವನ್ಯಜೀವಿ ಸಂರಕ್ಷಣೆ, ಅರಣ್ಯ ಸಂಪತ್ತು ರಕ್ಷಣೆ ಮತ್ತು ಜನರ ಅಭಿವೃದ್ದಿಯ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತನ್ನ ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದು ಶೆಟ್ಟಿಹಳ್ಳಿ ಅಭಯಾರಣ್ಯ ಡಿನೋಟಿಫಿಕೇಷನ್ ಮತ್ತು ಶರಾವತಿ ಸಂತ್ರಸ್ತರಿಗೆ ಪರಿಹಾರ ಕುರಿತಾದ ತೀರ್ಮಾನಗಳು ಅಂತಿಮ ಘಟ್ಟ ತಲುಪಿವೆ ಎಂದು ಅರಣ್ಯ ಜೀವಶಾಸ್ತ್ರ ಮತ್ತು ಪರಿಸರ ಸಚಿವರಾದ ಈಶ್ವರ್ ಬಿ ಖಂಡ್ರೆ ತಿಳಿಸಿದರು.
ಬುಧವಾರ ತ್ಯಾವರೆಕೊಪ್ಪದ ಸಿಂಹಧಾಮದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶೆಟ್ಟಿಹಳ್ಳಿ ವನ್ಯಜೀವಿ ಧಾಮ ಡಿ-ನೋಟಿಫಿಕೇಷನ್ ಪ್ರಸ್ತಾವನೆಯು ಸುಮಾರು 2016 ರಿಂದ ಬಾಕಿ ಇದ್ದು ಈಗ ಅಂತಿಮ ಘಟ್ಟಕ್ಕೆ ಬಂದಿದೆ. ಹಿಂದೆ 1974 ರಲ್ಲಿ ನೋಟಿಫಿಕೇಷನ್ ಮಾಡಿದ ಸಂದರ್ಭದಲ್ಲಿ 395 ಚ.ಕೀ ಪ್ರದೇಶ ಸೇರ್ಪಡೆ ಮಾಡಿದ್ದರು. ಆದರೆ ಅದರಲ್ಲಿ ಬಸ್ ಸ್ಟಾö್ಯಂಡ್, ಎಫ್ಸಿಐ ಗೋಡಾನ್, ಎಪಿಎಂಸಿ, ಸರ್ಕಾರಿ ಕಚೇರಿಗಳು, ಜನವಸತಿ ಪ್ರದೇಶ ಸೇರ್ಪಡೆಗೊಂಡಿದ್ದು ಇದೆಲ್ಲವನ್ನೂ ಪರಿಶೀಲನೆ ಮಾಡಿ, ಅಧಿಕಾರಿಗಳು ಸಮೀಕ್ಷೆಗಳನ್ನು ಮಾಡಿದ್ದಾರೆ. ಈ ಕುರಿತು ಹಲವಾರು ಸಭೆಗಳನ್ನು ಮಾಡಲಾಗಿದೆ. ಅರಣ್ಯ ಸಂಪತ್ತು ಸಂರಕ್ಷಣೆ ಮಾಡಬೇಕು. ಜೀವನ ಮತ್ತು ಜೀವನೋಪಾಯ ಎರಡೂ ಬೇಕಾಗಿದ್ದು ಆಡಳಿತಾತ್ಮಕವಾಗಿ, ಭಾವನಾತ್ಮಕವಾಗಿ ತೀರ್ಮಾನ ತೆಗೆದುಕೊಳ್ಳಲು ಖುದ್ದಾಗಿ ಪರಿಶೀಲಿಸಲು ಬಂದಿದ್ದೇನೆ. ನಂತರ ಸಭೆ ಮಾಡಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು.
ಶರಾವತಿ ಸಂತ್ರಸ್ತರ ಸಮಸ್ಯೆಗಳಿಗೆ ಪರಿಹಾರೋಪಾಯ ಅಂತಿಮ ಘಟ್ಟ ತಲುಪಿದೆ. ಸರ್ವೋಚ್ಚ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಲಾಗಿದ್ದು ನ್ಯಾಯಾಲಯವು, ಕೇಂದ್ರ ಸರ್ಕಾರ ಮತ್ತು ಅರಣ್ಯ ಇಲಾಖೆ ಸೇರಿ ತೀರ್ಮಾನ ಮಾಡಲು ಸೂಚಿಸಿದೆ. ಹಾಗೂ ಕಂದಾಯ ಇಲಾಖೆಯು ಅರ್ಹ ಫಲಾನುಭವಿಗಳನ್ನು ಗುರಿತಿಸುತ್ತಿದ್ದು, ಅರಣ್ಯ ಇಲಾಖೆ ನಿರಂತರವಾಗಿ ಕಂದಾಯ ಇಲಾಖೆಯ ಸಂಪರ್ಕದಲ್ಲಿದೆ. ಕಂದಾಯ ಇಲಾಖೆ ಅಂತಿಮಗೊಳಿಸಿದ ಪಟ್ಟಿ ಬಂದ ತಕ್ಷಣ ಸುಮಾರು 60 ವರ್ಷಗಳ ನಂತರ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಶಾಶ್ವತವಾಗಿ ಪರಿಹಾರ ನೀಡುತ್ತಿದೆ ಎಂದರು.
Ishwar B Khandre ವನ್ಯಜೀವಿ ಸಂರಕ್ಷಣೆ ಆಗಬೇಕು, ಅರಣ್ಯ ಸಂಪತ್ತು ಉಳಿಯಬೇಕು ಹಾಗೂ ಅಭಿವೃದ್ದಿಯೂ ಆಗಬೇಕು ಈ ನಿಟ್ಟಿನಲ್ಲಿ ಸರ್ಕಾರ ತೀರ್ಮಾನಗಳನ್ನು ತೆಗೆದುಕೊಳ್ಳತ್ತಿದೆ. ಮಾನವ-ವನ್ಯಜೀವಿ ಸಂಘರ್ಷವನ್ನು ತಡೆಯಲು ಸರ್ಕಾರ ಹಲವಾರು ಕ್ರಮ ಕೈಗೊಂಡಿದೆ. ಆನೆ ಕಾರ್ಯಪೆಡೆ, ಚಿರತೆ ಕಾರ್ಯಪಡೆ, ಹೆಚ್ಚುವರಿ ಸಿಬ್ಬಂದಿ ನೇಮಕ, ಸಲಕರಣೆಗಳು, ಕ್ಯಾಂಪ್ಗಳು, ರೈಲ್ವೇ ಬ್ಯಾರಿಕೇಡ್, ಸೋಲಾರ್ ಫೆನ್ಸಿಂಗ್ ರಚನೆ, ಕಮಾಂಡ್ ಸೆಂಟರ್ ಗಳು, ಇಂಟಿಗ್ರೇಟೆಡ್ ಕಮಾಂಡ್ ಸೆಂಟರ್ಗಳು ಜೊತೆಗೆ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಈ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದ್ದು ಒಂದೇ ಒಂದು ಜೀವ ಕಳೆದುಕೊಳ್ಳದ ರೀತಿ ಮಾನವ ಪ್ರಾಣ ಮತ್ತು ವನ್ಯಜೀವಿಗಳು ಉಳಿಯಬೇಕೆಂಬ ದೃಷ್ಟಿಯಲ್ಲಿ ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಈ ವೇಳೆ ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಶಾರದಾ ಪರ್ಯಾನಾಯ್ಕ, ಜನಪ್ರತಿನಿಧಿಗಳು, ಅಧಿಕಾರಿಗಳು ಇದ್ದರು.
ಕಾಣಿಯಾಗಿದ್ದಾರೆ ಸುಳಿವು ನೀಡಲು ಮನವಿ
ಆನವಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಸೊರಬ ತಾಲೂಕು ಕುಪ್ಪಗುಡ್ಡೆ ಗ್ರಾಮ ವಾಸಿ ಮಾರುತಿ ಎಂಬುವವರ ಪತ್ನಿ 25 ವರ್ಷದ ಭಾಗ್ಯ ಎಂಬುವವರು ಸೆಪ್ಟಂಬರ್ 2025 ರಂದು ಮನೆ ಬಿಟ್ಟು ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ. ಈಕೆ ಗಾಜನೂರು ಮುರಾರ್ಜಿ ಹಾಸ್ಟೆಲ್ನಲ್ಲಿ ಕೆಲಸ ಮಾಡುತ್ತಿದ್ದರು. ಈಕೆಯ ಚಹರೆ 5 ಅಡಿ ಎತ್ತರ, ಕೋಲುಮುಖ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿರುತ್ತಾರೆ. ಮನೆಯಿಂದ ಹೋಗುವಾಗ ಆಕಾಶ ನೀಲಿ ಬಣ್ಣದ ಚೂಡಿದಾರ್, ಕಪ್ಪು ಬಣ್ಣದ ಜಾಕೆಟ್ ಧರಿಸಿರುತ್ತಾರೆ.
ಈಕೆಯ ಕುರಿತು ಸುಳಿವು ದೊರೆತಲ್ಲಿ ದೂ.ಸಂ.: 08182-261413/ 08187-222443/ 08184-272122/267135/ 9480803339/ 9480803369 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ತಿಳಿಸಿದೆ.
Bharat Scouts and Guides ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಮಲ್ನಾಡ್ ಓಪನ್ ಗ್ರೂಪ್ ವತಿಯಿಂದ 77ನೇ ಗಣರಾಜ್ಯೋತ್ಸವ ಆಚರಣೆ
Bharat Scouts and Guides ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಮಲ್ನಾಡ್ ಓಪನ್ ಗ್ರೂಪ್ ವತಿಯಿಂದ ಜಿಲ್ಲಾ ಸ್ಕೌಟ್ ಭವನದ ಆವರಣದಲ್ಲಿ 77ನೇ ಗಣರಾಜ್ಯೋತ್ಸವ ಅಂಗವಾಗಿ ದೆಹಲಿಯಲ್ಲಿ ನಡೆಯುವ ರೀತಿ ಮಾದರಿಯ ‘ಬೀಟಿಂಗ್ ದ ರಿಟ್ರೀಟ್’ ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್ ವಿನಯ್ ಕಠಾರೆ ಅವರು ಅಮರ್ ಜವಾನ್ಗೆ ಗೌರವ ಸಲ್ಲಿಸಿದರು.
25ನೇ ವರ್ಷದ ರಿಟ್ರೀಟ್ ಕಾರ್ಯಕ್ರಮದ ಆಯೋಜನೆ ಮಾಡಿದ್ದ ಮಲ್ನಾಡ್ ಓಪನ್ ಗ್ರೂಪ್ನ ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ಇಂಟರ್ ನ್ಯಾಷನಲ್ ಶಾಲೆಯ 60 ವಿದ್ಯಾರ್ಥಿಗಳ ತಂಡ ಅತ್ಯುತ್ತಮ ಬ್ಯಾಂಡ್ ಪ್ರದರ್ಶನ ನೀಡಿತು.
ಸಾಂದೀಪನಿ ಶಾಲೆಯ ವಿದ್ಯಾರ್ಥಿಗಳು ಉತ್ತಮವಾಗಿ ದೈಹಿಕ ಕವಾಯತು ಪ್ರದರ್ಶಿಸಿದರು. ಮೇರಿ ಇಮಾಕ್ಯುಲೇಟ್ ಹಿರಿಯ ಪ್ರಾಥಮಿಕ ಶಾಲೆ ಗೈಡ್ ವಿದ್ಯಾರ್ಥಿನಿಯರು ದೇಶಭಕ್ತಿ ಗೀತೆಗೆ ನೃತ್ಯ ಪ್ರದರ್ಶಿಸಿದರು. ರೇಡಿಯೋ ಶಿವಮೊಗ್ಗ 90.8 ಎಫ್.ಎಂನ ಆರ್.ಜೆ.ಅರ್ಪಿತ ಅವರ ಮುಂಗೋಳಿ ಕೂಗ್ಯಾವೋ, ಪರಿಸರ ಪರಿಚಯ, ಬ್ಯುಜಿನೆಸ್ ಬಝ್ ಕಾರ್ಯಕ್ರಮಗಳ ವಿಶೇಷ ಕಾಳಜಿಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಮಲ್ನಾಡ್ ಓಪನ್ ಗ್ರೂಪ್ನ ಸ್ವಯಂ ಸೇವಕ ಚಂದನ್.ಕೆ.ಎಂ, ರಾಷ್ಟ್ರೀಯ ಟೆಕ್ವಾಂಡೋ ರೆಫರಿ ಆಗಿರುವ ನವೀ.ಡಿ.ಸಿ, ಕರಾಟೆಯಲ್ಲಿ ಸಾಧನೆ ಮಾಡಿರುವ ಶೃತಿ.ಪಿ, ಗ್ರೂಪ್ ಹಿರಿಯ ಸದಸ್ಯ ಉಮೇಶ್.ಹೆಚ್.ವಿ, 25 ವರ್ಷ ಶಿಕ್ಷಕ ಸೇವೆ ಗುರುತಿಸಿ ಸ್ವಾಮಿ ವಿವೇಕಾಂದ ಶಾಲೆಯ ದೈಹಿಕ ಶಿಕ್ಷಕ ಜಯದೇವ್.ಹೆಚ್.ಎನ್ ಅವರನ್ನು ಸನ್ಮಾನಿಸಲಾಯಿತು.
ಗ್ರೂಪ್ ಸದಸ್ಯ ಚೇತನ್ ಕುಮಾರ್.ಸಿ 46ನೇ ಬಾರಿ ರಕ್ತದಾನ ಮಾಡಿದ್ದನ್ನು ಗುರುತಿಸಿ ಉತ್ತಮ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡಿದರು. ನಗರದ ಶಾಲಾ ಮಕ್ಕಳಿಗೆ ಏರ್ಪಡಿಸಿದ್ದ ಚಿತ್ರಕಲೆ ಮತ್ತು ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
Bharat Scouts and Guides ಜಿಲ್ಲಾ ಸಂಸ್ಥೆಯ ಮುಖ್ಯ ಆಯುಕ್ತೆ ಶಕುಂತಲಾ ಚಂದ್ರಶೇಖರ್, ಜಿ.ವಿಜಯ್ ಕುಮಾರ್, ರವಿ.ಕೆ, ಎಸ್.ಜಿ.ಆನಂದ್, ಎಸ್.ಕೆ.ಲಕ್ಷ್ಮೀ, ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾದ ನವೀನ್ ಜವಳಿ, ಗ್ರೂಪ್ನ ಫೋಷಕರ್ ಪ್ರರಮೇಶ್ವರ.ಹೆಚ್, ರಾಜೇಶ್ ಅವಲಕ್ಕಿ ಮತ್ತು ಚೇತನ್ ಕುಮಾರ್.ಸಿ, ಶ್ರೀನಿವಾಸ ವರ್ಮಾ ಇದ್ದರು.
ಅಮರ್ ಜವಾನ್ ಮುಂದೆ ದೇಶಕ್ಕಾಗಿ ಮಡಿದ ವೀರಯೋಧರಿಗೆ ದೀಪ ಬೆಳಗಿಸುವ ಮೂಲಕ ನಮನ ಸಲ್ಲಿಸಲಾಯಿತು. ಪರಮವೀರಚಕ್ರ ಪುರಸ್ಕತ 21 ಯೋಧರ ಭಾವಚಿತ್ರವನ್ನು ಅಮರ್ ಜವಾನ್ ಹಿಂಭಾಗದಲ್ಲಿ ಹಾಕಲಾಗಿತ್ತು.
