Friday, March 20, 2026
Friday, March 20, 2026
Home Blog Page 5

Madhu Bangarappa ಚಿತ್ರಟ್ಟೆಹಳ್ಳಿ ಕ್ರಾಸ್ ಭಾಗದ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿವೃಂದಕ್ಕೆ ಬಸ್ ನಿಲ್ದಾಣ ಸಹಕಾರಿಯಾಗಲಿದೆ- ಮಧು ಬಂಗಾರಪ್ಪ

0

Madhu Bangarappa ಸೊರಬ ತಾಲೂಕಿನ ಚಿತ್ರಟ್ಟೆಹಳ್ಳಿ ಕ್ರಾಸ್ ಬಳಿ ಕರ್ನಾಟಕ ರಾಜ್ಯ ಖನಿಜಗಳ ನಿಗಮ ನಿಯಮಿತದ (KSMCL) ಸಿ.ಎಸ್.ಆರ್ (CSR) ಅನುದಾನದಡಿ ಸುಮಾರು 20 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಗ್ರಾಮೀಣ ಬಸ್ ನಿಲ್ದಾಣದ ಕಾಮಗಾರಿಗೆ ಶಂಕುಸ್ಥಾಪನೆಯನ್ನ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನೆರವೇರಿಸಿದರು.

ಗ್ರಾಮೀಣ ಭಾಗದ ಸಾರಿಗೆ ಸೌಕರ್ಯಕ್ಕೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಚಿತ್ರಟ್ಟೆಹಳ್ಳಿ ಕ್ರಾಸ್ ಭಾಗದ ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಬಹುದಿನದ ಬೇಡಿಕೆಯನ್ನು ಈಡೇರಿಸಲಾಗುತ್ತಿದ್ದು, ವಿಶೇಷವಾಗಿ ಶಾಲಾ-ಕಾಲೇಜುಗಳಿಗೆ ತೆರಳುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

Madhu Bangarappa ಈ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮಸ್ಥರು, ಕೆ.ಎಸ್.ಎಂ.ಸಿ.ಎಲ್ ನಿಗಮದ ಅಧಿಕಾರಿಗಳು ಹಾಗೂ ಗ್ರಾಮದ ಪ್ರಮುಖರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

Inner Wheel Shivamogga ಮಹಿಳಾ ದಿನಾಚರಣೆ: ಶಿವಮೊಗ್ಗದ ಸಾಧಕಿಯರಿಗೆ ಸನ್ಮಾನ

0

Inner Wheel Shivamogga ಇನ್ನರ್ ವ್ಹೀಲ್ ಶಿವಮೊಗ್ಗ ನಾರ್ಥ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಶನಿವಾರದಂದು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ತಮ್ಮ ಜೀವನದಲ್ಲಿ ಸಾಧನೆ ಗೈದ ಹಾಗೂ ನಿಸ್ವಾರ್ಥ ಸೇವೆ ಗೈದ ಸ್ತ್ರೀ ರೋಗ ತಜ್ಞೆಯಾದ ಡಾ. ವಿಮಲಾ ಬಾಯಿ, ಮಹಿಳೆಯರನ್ನು ಆರ್ಥಿಕವಾಗಿ ಸದೃಢ ಮಾಡಿದ ಶ್ರೀಮತಿ ಶಿವಲೀಲಾ ಮತ್ತು ಕುಟುಂಬವು ಆರ್ಥಿಕವಾಗಿ ಕುಸಿದಾಗ ತಮ್ಮ ಅಡುಗೆಯ ದುಡಿಮೆಯಿಂದ ಕುಟುಂಬಕ್ಕೆ ಆಸರೆಯಾದ ಶ್ರೀಮತಿ ಆಶಾ ಎ ಕಿಣಿ ಈ ಮೂವರು ಮಹಿಳೆಯರ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಮಹಿಳೆಯರಿಗೆ ಫ್ಯಾಷನ್ ಶೋ ಮತ್ತು ಸಾಂಪ್ರದಾಯಿಕ ಧಿರಿಸು ಧರಿಸುವ ಸ್ಪರ್ಧೆಯನ್ನು ಏರ್ಪಡಿಸುವುದರ ಮೂಲಕ ಅನೇಕ ವಿನೋದದ ಆಟಗಳನ್ನು ಆಡಿಸಿ, ವಿಜೇತರಿಗೆ ಬಹುಮಾನವನ್ನು ನೀಡಲಾಯಿತು.

Inner Wheel Shivamogga ಗಣೇಶನ ವಂದನೆಯೊಂದಿಗೆ ಆರಂಭವಾದ ಸಾಂಸ್ಕೃತಿಕ ಕಾರ್ಯಕ್ರಮವು ಆಕರ್ಷಕ ಶ್ರೀ ಕೃಷ್ಣ ನೃತ್ಯ ರೂಪಕದೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.

Department of Youth Empowerment and Sports ಯುವಜನತೆ ಶಿಸ್ತು ಮತ್ತು ನಾಯಕತ್ವ ಗುಣಗಳನ್ನ ಮೈಗೂಡಿಸಿಕೊಳ್ಳಬೇಕು- ಡಾ.ಮಾಲೇಗೌಡ

0

Department of Youth Empowerment and Sports ಕರ್ನಾಟಕ ಸರ್ಕಾರದ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಎಸ್ ಜೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ (ಎನ್ ಎಸ್ ಎಸ್) 2025 – 26 ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವನ್ನು ಮಾರ್ಚ್ 9 ರಿಂದ 15 ರವರೆಗೆ ಬೆಂಗಳೂರು ವಿಶ್ವವಿದ್ಯಾನಿಲಯದ ಜ್ಞಾನಭಾರತಿ ಕ್ಯಾಂಪಸ್ ನ ಎನ್‌ ಎಸ್‌ ಎಸ್ ಭವನದಲ್ಲಿ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜಾಗೃತಿ, ನಾಯಕತ್ವದ ಗುಣಗಳು ಹಾಗೂ ಸಮಾಜ ಸೇವೆಯ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಶಿಬಿರದಲ್ಲಿ ‘ಯುವಜನತೆ ಮತ್ತು ನಾಯಕತ್ವದ ಗುಣಗಳು’ ಎಂಬ ವಿಷಯವನ್ನುದ್ದೇಶಿಸಿ ಮಾತನಾಡಿದ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕರ್ನಾಟಕ ರಾಜ್ಯ ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆಯ ಜಂಟಿ ನಿರ್ದೇಶಕರು ಹಾಗೂ ರಾಜ್ಯ ನೌಕರರ ವಿಮಾ ಆಸ್ಪತ್ರೆಯ ವೈದ್ಯರ ಸಂಘದ ರಾಜ್ಯಾಧ್ಯಕ್ಷರಾದ ಡಾ.ಮಾಲೇಗೌಡರವರು “ಈಗಿನ ಯುವಜನತೆ ಶಿಸ್ತು ಹಾಗೂ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಸಮಾಜದ ಹೊಣೆಗಾರಿಕೆಯನ್ನು ಅರಿತು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯ” ಎಂದರು. ಇದೆ ಸಂದರ್ಭದಲ್ಲಿ ಇಲೆಕ್ಟ್ರಾನಿಕ್ ವಿಭಾಗದ ಆಯ್ಕೆ ಶ್ರೇಣಿ ಉಪನ್ಯಾಸಕರಾದ ಶ್ರೀ ಯುತ ಪರಮೇಶ್ವರಪ್ಪ.ಬಿ.ಎಂ ರವರು ಈ ವಿಷಯದ ಮೇಲೆ ಶಿಬಿರಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು.

ಈ ಕಾರ್ಯಕ್ರಮದ ಪ್ರಮುಖ ಅಂಗವಾಗಿ ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ನಿಮ್ಹಾನ್ಸ್ ನ ಸಹಯೋಗದೊಂದಿಗೆ ನಡೆಯುತ್ತಿರುವ ಯುವ ಸ್ಪಂದನ ಯೋಜನೆಯಡಿಯಲ್ಲಿ ಜೀವನ ಕೌಶಲ್ಯಗಳ ಕುರಿತು ವಿಶೇಷ ತರಬೇತಿ ಅಧಿವೇಶನವನ್ನು ಹಮ್ಮಿಕೊಳ್ಳಲಾಗಿತ್ತು. ಈ ತರಬೇತಿಯಲ್ಲಿ ಯುವ ಸ್ಪಂದನ ಕಾರ್ಯಕ್ರಮದ ಕ್ಷೇತ್ರ ಸಂಪರ್ಕಾಧಿಕಾರಿಗಳಾದ ಕು.ಪೂಜಾ ಸಿದ್ದಿ ಹಾಗೂ ಶ್ರೀ ಅನಿಲ್ ರಾಜ್ ರವರು ಈ ಅಧಿವೇಶನವನ್ನು ನಡೆಸಿಕೊಟ್ಟರು.
ಅಧಿವೇಶನದಲ್ಲಿ ಯುವ ಸ್ಪಂದನ ಕಾರ್ಯಕ್ರಮದ ಉದ್ದೇಶ, ಅದರ ಸೇವೆಗಳು ಹಾಗೂ ಯುವಜನರ ಮಾನಸಿಕ ಆರೋಗ್ಯದಲ್ಲಿ ಯುವ ಸ್ಪಂದನದ ಪಾತ್ರದ ಕುರಿತು ವಿವರವಾಗಿ ತಿಳಿಸಲಾಯಿತು. ಜೊತೆಗೆ ಯುವಜನರು ಜೀವನದಲ್ಲಿ ಎದುರಿಸುವ ಭಾವನಾತ್ಮಕ ಸಮಸ್ಯೆಗಳು, ಒತ್ತಡ ಮತ್ತು ಗೊಂದಲಗಳನ್ನು ಸಮರ್ಥವಾಗಿ ಎದುರಿಸಲು ಜೀವನ ಕೌಶಲ್ಯಗಳ ಅಗತ್ಯತೆಯ ಕುರಿತು ಅರಿವು ಮೂಡಿಸಲಾಯಿತು.
ಸ್ವ-ಅರಿವು, ಭಾವನೆಗಳನ್ನು ಸಮರ್ಥವಾಗಿ ನಿರ್ವಹಿಸುವುದು, ಒತ್ತಡದ ನಿರ್ವಹಣೆ, ಉತ್ತಮ ಸಂವಹನ ಕೌಶಲ್ಯ, ಸೃಜನಾತ್ಮಕ ಚಿಂತನೆ ಹಾಗೂ ಸಹಾನುಭೂತಿ…. ಹೀಗೆ ಮೊದಲಾದ ಜೀವನ ಕೌಶಲ್ಯಗಳ ಬಗ್ಗೆ ಶಿಬಿರಾರ್ಥಿಗಳಿಗೆ ವಿವರಿಸಲಾಯಿತು. ಚರ್ಚೆಗಳು, ಉದಾಹರಣೆಗಳು ಹಾಗೂ ಸಂವಾದಾತ್ಮಕ ಚಟುವಟಿಕೆಗಳ ಮೂಲಕ ವಿಷಯವನ್ನು ಸರಳವಾಗಿ ಪರಿಚಯಿಸಲಾಯಿತು.
ಈ ಕಾರ್ಯಕ್ರಮವು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸ ಹಾಗೂ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಮಹತ್ವದ್ದಾಗಿದ್ದು, ಯುವಜನರಲ್ಲಿ ಸಮಾಜದತ್ತ ಇರುವ ಹೊಣೆಗಾರಿಕೆ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಲು ಸಹಕಾರಿಯಾಯಿತು ಎಂದು ಕಾರ್ಯಕ್ರಮದ ಆಯೋಜಕರು ಮೆಚ್ಚುಗೆ ವ್ಯಕ್ತಪಡಿಸಿದರು.

Department of Youth Empowerment and Sports ಕಾರ್ಯಕ್ರಮದಲ್ಲಿ ಎಸ್ ಜೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಹರೀಶ್.ಎಂ, ಎನ್ ಎಸ್ ಎಸ್ ಘಟಕ – 1 ರ ಕಾರ್ಯಾಕ್ರಮಾಧಿಕಾರಿಗಳು ಹಾಗೂ ಶಿಬಿರಾಧಿಕಾರಿಗಳಾದ ಶ್ರೀ ಮಧುಸೂದನ.ಎಸ್.ಎಂ, ಗೌರವ ಶಿಬಿರಾಧಿಕಾರಿಗಳು ಹಾಗೂ ಆಯ್ಕೆ ಶ್ರೇಣಿ ಉಪನ್ಯಾಸಕರಾದ ಶ್ರೀ ಜಗದೀಶಯ್ಯ, ಸ್ವ – ಆರ್ಥಿಕ ಘಟಕದ ಶಿಬಿರಾಧಿಕಾರಿಗಳು ಹಾಗೂ ಕಾರ್ಯಾಕ್ರಮಾಧಿಕಾರಿಗಳಾದ ಶ್ರೀಮತಿ ಚಂದನ ವಾಗ್ಲೆ.ಆರ್.ಜೆ, ನಿವೃತ್ತ ಕೆ ಎ ಎಸ್ ಅಧಿಕಾರಿಗಳಾದ ಶ್ರೀ ಚಂದ್ರಪ್ಪ, ಬಸವೇಶ್ವರನಗರದ ಪೊಲೀಸ್ ನಿರೀಕ್ಷಕರಾದ ಶ್ರೀ ಚಿಕ್ಕಸ್ವಾಮಿ ಹಾಗೂ ಎಲೆಕ್ಟ್ರಿಕಲ್ ವಿಭಾಗದ ವಿಭಾಗಾಧಿಕಾರಿಗಳಾದ ಶ್ರೀ ಆನಂದ್ ರವರು ಉಪಸ್ಥಿತರಿದ್ದರು.

Scouts-Guides ಗೌರವ ಡಾಕ್ಟರೇಟ್ ಪಡೆದ ಪಿ‌.ಜಿ.ಆರ್.ಸಿಂಧ್ಯಾ ಅವರಿಗೆ ಸನ್ಮಾನ

0

Scouts-Guides ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ನಡೆದ ಜಿಲ್ಲಾ ಮಟ್ಟದ ರೋವರ್ಸ್ ಮತ್ತು ರೇಂಜರ್ಸ್ ಶಿಬಿರ ಮತ್ತು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಕಲಬುರ್ಗಿ ಕೇಂದ್ರ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಸ್ಕೌಟ್ಸ್-ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತರಾದ ಶ್ರೀ ಪಿ.ಜಿ.ಆರ್.ಸಿಂದ್ಯ ಹಾಗೂ ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀ ಗಜಾನನ ಮನ್ನಿಕೇರಿ ಇರ್ವರನ್ನೂ ಸವದತ್ತಿಯ ಬಿಇಒ ಕಚೇರಿ ಹಾಗೂ ತಾಲೂಕಾ ಸಂಸ್ಥೆಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನವು ದೇಶದ ಮುಖ್ಯ ಧಾರ್ಮಿಕ ಹಾಗೂ ಪ್ರೇಕ್ಷಣೀಯ ಸ್ಥಳವಾಗಿದ್ದು, ಈ ಕ್ಷೇತ್ರದಲ್ಲಿ ಸ್ಕೌಟ್ಸ್‌-ಗೈಡ್ಸ್ ನ ರೋವರ್ಸ್ ಮತ್ತು ರೇಜರ್ಸ್ ಗಳ ಶಿಬಿರ ಹಮ್ಮಿಕೊಂಡು ಸ್ವಚ್ಛತಾ ಕಾರ್ಯ ಮಾಡಿರುವುದು ಶ್ಲಾಘನೀಯ ಎಂದರು. ಸ್ಕೌಟ್ಸ್-ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತರಾದ ಗಜಾನನ ಮನ್ನಿಕೇರಿ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ಮಹಿಳೆ ಅಬಲೆಯಲ್ಲ, ಅವಳು ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆ ಮಾಡಿ ಎಲ್ಲರಿಗೂ ಸ್ಪೂರ್ತಿಯಾಗಿದ್ದಾಳೆ ಎಂದರು. ಸವದತ್ತಿ ಬಿಇಒ ಎ.ಎ.ಖಾಜಿ ಮಾತನಾಡಿ ಮಕ್ಕಳಲ್ಲಿ ಶಿಸ್ತು ಸಂಯಮ ಬೆಳೆಸಲು ಸ್ಕೌಟ್ಸ್‌-ಗೈಡ್ಸ್ ಮಹತ್ವದ ಪಾತ್ರ ವಹಿಸಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎರಡೂ ಶೈಕ್ಷಣಿಕ ಜಿಲ್ಲೆಯ ಮಹಿಳಾ ಅಧಿಕಾರಿಗಳಾದ ಶ್ರೀಮತಿ ಲೀಲಾವತಿ ಹಿರೇಮಠ DDPI , ಶ್ರೀಮತಿ ಮಹದೇವಿ ನಾಯಕ BEO ನಿಪ್ಪಾಣಿ, ಶ್ರೀಮತಿ ಪಿ ಬಿ ಪಾಟೀಲ BEO ಹುಕ್ಕೇರಿ, ಶ್ರೀಮತಿ ಉಮಾದೇವಿ ಹಿರೇಮಠ DYPC ಬೆಳಗಾವಿ, ಶ್ರೀಮತಿ ಸುರೇಖಾ ಮಿರ್ಜಿ ಖಾನಾಪುರ PEO, ಶ್ರೀಮತಿ ಸಾಧನಾ ಎಂ ಭದ್ರಿ PEO ಬೆಳಗಾವಿ ಗ್ರಾಮೀಣ, ಶ್ರೀಮತಿ ಜಾಹಿರಾ ಪಟೇಲ್ PEO ಬೆಳಗಾವಿ ನಗರ ಹಾಗೂ ಶ್ರೀ ರೇಣುಕಾ ಎಲ್ಲಮ್ಮ ಟ್ರಸ್ಟ್ ಉಪ ಕಾರ್ಯದರ್ಶಿಗಳಾದ ಶ್ರೀಮತಿ ನಾಗರತ್ನ ಚೋಳನ, ಶ್ರೀಮತಿ ಪಲ್ಲವಿ ನಾಡಕರ್ಣಿ ಜೈನ ಶಿಕ್ಷಣ ಸಂಸ್ಥೆ ಬೆಳಗಾವಿ, ಶ್ರೀಮತಿ ಅಪರ್ಣ ದೇಶಪಾಂಡೆ ಫೀನಿಕ್ಸ್ ಇಂಗ್ಲಿಷ್ ಮಾಧ್ಯಮ ಶಾಲೆ ಹೊಣಗ, ಶ್ರೀಮತಿ ಚೇತನ ಪಾಟೀಲ್ ಕೆಎಲ್ಇ ಇಂಗ್ಲಿಷ್ ಮಾಧ್ಯಮ ಶಾಲೆ ಗೋಕಾಕ್, ಶ್ರೀಮತಿ ಭಾರತಿ ತೂಗಶೆಟ್ಟಿ ಅಡುಗೆ ಸಹಾಯಕರು ಇವರುಗಳನ್ನು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ನಿಮಿತ್ಯವಾಗಿ “ಶ್ರೇಷ್ಠ ಸೇವಾ ಪ್ರಶಸ್ತಿ” ಯನ್ನು ನೀಡಿ, ಗೌರವಿಸಿ ಸತ್ಕರಿಸಲಾಯಿತು.

Scouts-Guides ಶಿಬೀರದಲ್ಲಿ ಬೆಳಗಾವಿ ಜಿಲ್ಲೆಯ ಬೇರೆ ಬೇರೆ ಪದವಿ ಮಹಾವಿದ್ಯಾಲಯಗಳ 300 ರೋವರ್ಸ್ ಮತ್ತು ರೇಂಜರ್ಸ್ ಮಕ್ಕಳು, ನಾಲ್ಕು ದಿನದವರೆಗೆ ಯಲ್ಲಮ್ಮ ದೇವಸ್ಥಾನದ ಪ್ರಾಂಗಣದ ಸ್ವಚ್ಛತೆ ಮತ್ತು ಜಾತ್ರಾ ನಿಮಿತ್ಯ ಎಲ್ಲಮ್ಮ ದೇವಸ್ಥಾನದ ಹುಂಡಿಯ ಹಣ ಎಣಿಕೆಯನ್ನು ಮಾಡಿದರು. ಕಾರ್ಯಕ್ರಮದಲ್ಲಿ ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಎಲ್ಲಾ ತಾಲೂಕುಗಳ ಸ್ಕೌಟ್ ಕಾರ್ಯದರ್ಶಿಗಳು ಹಿರಿಯ ದಳ ನಾಯಕರುಗಳು, ಜಿಲ್ಲೆಯ ರೋವರ್ಸ್ ರೆಂಜರ್ಸ್ ವಿದ್ಯಾರ್ಥಿಗಳು ರೋವರ್ ರೇಂಜರ್ ನಾಯಕರುಗಳು ಹಾಗೂ ಸಿ.ಆರ್.ಪಿಗಳು ಉಪಸ್ಥಿತರಿದ್ದರು.

Madhu Bangarappa ಗ್ರಾಮೀಣ ಭಾಗದ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯರ ಶಿಕ್ಷಣ ಅರ್ಧಕ್ಕೆ ನಿಲ್ಲಬಾರದು- ಮಧು ಬಂಗಾರಪ್ಪ

0

ಶೈಕ್ಷಣಿಕ ಅಭಿವೃದ್ಧಿ ಹಾಗೂ ವಿದ್ಯಾರ್ಥಿನಿಯರ ಉನ್ನತ ಭವಿಷ್ಯದ ದೃಷ್ಟಿಯಿಂದ ನನ್ನ ಮತಕ್ಷೇತ್ರ ಸೊರಬ ಪಟ್ಟಣದಲ್ಲಿ ಸುಮಾರು ₹5.47 ಕೋಟಿ ವೆಚ್ಚದ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದ ನೂತನ ಕಟ್ಟಡ ನಿರ್ಮಾಣಕ್ಕೆ ಇಂದು ಶಂಕುಸ್ಥಾಪನೆಯನ್ನು ಜಿಲ್ಲಾ ಉಸ್ತುವಾರಿ ಮತ್ತು ಶಾಲಾ ಶಿಕ್ಷಣ ಸಚಿವ ಮಧುಬಂಗಾರಪ್ಪ ನೆರವೇರಿಸಿದರು.

ಗ್ರಾಮೀಣ ಭಾಗದ ಬಡ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿನಿಯರಿಗೆ ಶಿಕ್ಷಣ ಅರ್ಧಕ್ಕೆ ನಿಲ್ಲಬಾರದು ಎಂಬ ಉದ್ದೇಶದಿಂದ ಸುಸಜ್ಜಿತ ವಸತಿ ನಿಲಯವನ್ನು ನಿರ್ಮಿಸಲಾಗುತ್ತಿದೆ.

Madhu Bangarappa ಶಿಕ್ಷಣದಿಂದ ಮಾತ್ರ ಸಮಾಜದ ಬದಲಾವಣೆ ಮಾಡಲು ಸಾಧ್ಯ ಆದ್ದರಿಂದ ವಿದ್ಯಾರ್ಥಿನಿಯರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಸಾಧನೆ ಮಾಡಬೇಕು ಎಂದು ಸಚಿವರು ತಿಳಿಸಿದರು

Madhu Bangarappa ಕೇವಲ ₹5 ಕ್ಕೆ ತಿಂಡಿ.₹10 ಕ್ಕೆ ಊಟ ಸಿಗಲಿದ್ದು ನಿರ್ಗತಿಕರು,ಕೂಲಿ ಕಾರ್ಮಿಕರು ಇಂದಿರಾ ಕ್ಯಾಂಟೀನ್ ಸೌಲಭ್ಯ ಬಳಸಿಕೊಳ್ಳಿ- ಮಧು ಬಂಗಾರಪ್ಪ

0

Madhu Bangarappa ಶಿಕಾರಿಪುರ ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ “ಇಂದಿರಾ ಕ್ಯಾಂಟಿನ್” ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ‌ ಉದ್ಘಾಟಿಸಿದರು.
ನಂತರ ಮುಖಂಡರೊಂದಿಗೆ ಉಪಹಾರ ಸವಿದರು.
ಬಳಿಕ ವೇದಿಕೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಸಚಿವರು ಮಾತನಾಡಿದರು. 2013ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾರಿಗೆ ತಂದ ‘ಅನ್ನಭಾಗ್ಯ’ ಯೋಜನೆ ಇಂದಿಗೂ ಬಡವರ ಪಾಲಿಗೆ ಆಸರೆಯಾಗಿದೆ. ಕಾಂಗ್ರೆಸ್ ಪಕ್ಷವು ಅಧಿಕಾರಕ್ಕಿಂತಲೂ ಬಡವರ ಮತ್ತು ಹಸಿದವರ ಹಿತಾಸಕ್ತಿಗೆ ಆದ್ಯತೆ ನೀಡುತ್ತಾ ಬಂದಿದೆ. ಇಂದಿರಾ ಗಾಂಧಿಯವರ ಕಾಲದಿಂದಲೂ ಹಸಿವು ಮುಕ್ತ ಸಮಾಜ ನಿರ್ಮಾಣ ಮಾಡುವುದು ನಮ್ಮ ಪಕ್ಷದ ಮೂಲ ಮಂತ್ರವಾಗಿದೆ.

ಮಾಜಿ ಮುಖ್ಯಮಂತ್ರಿಗಳು ನನ್ನ ತಂದೆ ಶ್ರೀ ಎಸ್. ಬಂಗಾರಪ್ಪನವರು ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಿದ್ದು, ಭೂರಹಿತರಿಗೆ ಭೂಮಿ ಮಂಜೂರು ಮಾಡಿದ್ದು ಹಾಗೂ ಗ್ರಾಮೀಣ ಕೃಪಾಂಕದಂತಹ ಐತಿಹಾಸಿಕ ತೀರ್ಮಾನಗಳು ಬಂಗಾರಪ್ಪನವರ ಬಡವರ ಪರ ಕಾಳಜಿಯನ್ನು ಎತ್ತಿ ತೋರಿಸುತ್ತದೆ. ಅವರ ಆಶಯದಂತೆಯೇ ನಾವು ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಕೇವಲ ₹5ಕ್ಕೆ ತಿಂಡಿ ಹಾಗೂ ₹10ಕ್ಕೆ ಗುಣಮಟ್ಟದ ಊಟ ಸಿಗಲಿದ್ದು ಪಟ್ಟಣದ ನಿರ್ಗತಿಕರು, ಕೂಲಿ ಕಾರ್ಮಿಕರು ಮತ್ತು ಸಾರ್ವಜನಿಕರು ಈ ಇಂದಿರಾ ಕ್ಯಾಂಟಿನ್ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
. ಇದೇ ವೇಳೆ ಹೆಚ್ಚಿನ ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ, ಗೌರವಿಸಲಾಯಿತು.

Madhu Bangarappa ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಶ್ರೀ ವಿರೇಶ್, ತಹಶೀಲ್ದಾರ್ ಶ್ರೀಮತಿ ವಾಣಿ, ಪುರಸಭೆ ಮುಖ್ಯಾಧಿಕಾರಿ ಶ್ರೀ ಭರತ್ ಹಾಗೂ ಮುಖಂಡರುಗಳಾದ ಶ್ರೀ ಗೋಣಿ ಮಾಲತೇಶ್, ಶ್ರೀ ದರ್ಶನ್ ಉಳ್ಳಿ, ಶ್ರೀ ರಾಘವೇಂದ್ರ ನಾಯ್ಕ್, ಶ್ರೀಮತಿ ಪುಷ್ಪ ಸೇರಿದಂತೆ ಜನಪ್ರತಿನಿಧಿಗಳು, ಮುಖಂಡರುಗಳು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದರು.

MESCOM ಮಾರ್ಚ್ 17. ಶಿಕಾರಿಪುರ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

0

MESCOM ಶಿಕಾರಿಪುರ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಮಾ.17 ರಂದು ಸಮಯ ಬೆಳಿಗ್ಗೆ 11.00 ರಿಂದ 01.00 ರವರೆಗೆ ಜನ ಸಂಪರ್ಕ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದು, ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ;. 94482895

Madhu Bangarappa ನೂತನ ಜೆಸಿಬಿ ಯಂತ್ರದ ಸೇರ್ಪಡೆಯಿಂದ ಕಾಮಗಾರಿಗಳು ಮತ್ತಷ್ಟು ಸುಗಮ- ಮಧು ಬಂಗಾರಪ್ಪ

0

Madhu Bangarappa ಎಸ್. ಮಧು ಬಂಗಾರಪ್ಪನವರ ಮತಕ್ಷೇತ್ರ ಸೊರಬ ತಾಲೂಕಿನ ಆನವಟ್ಟಿ ಪಟ್ಟಣ ಪಂಚಾಯಿತಿಯಲ್ಲಿ ಸ್ವಚ್ಛಭಾರತ್ ಅಭಿಯಾನದ ಅನುದಾನದಡಿ ಸುಮಾರು 38 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಖರೀದಿಸಲಾದ ನೂತನ ಜೆಸಿಬಿ ಯಂತ್ರವನ್ನು ಮಧು ಬಂಗಾರಪ್ಪನವರು ಉದ್ಘಾಟಿಸಿದರು.

ಆನವಟ್ಟಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ನಂತರ ಪಟ್ಟಣದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಈ ಯಂತ್ರದ ಸೇರ್ಪಡೆಯಿಂದ ಕೆಲಸಗಳು ಮತ್ತಷ್ಟು ಸುಗಮವಾಗಲಿವೆ. ಪಟ್ಟಣದ ವ್ಯಾಪ್ತಿಯಲ್ಲಿ ಚರಂಡಿ ಹೂಳೆತ್ತುವುದು, ಘನತ್ಯಾಜ್ಯ ವಿಲೇವಾರಿ ಘಟಕದ ನಿರ್ವಹಣೆ ಮತ್ತು ತುರ್ತು ನಾಗರಿಕ ಸೇವೆಗಳಿಗಾಗಿ ಇದನ್ನು ಬಳಸಲಾಗುವುದು ಎಂದು ತಿಳಿಸಿದರು.

Madhu Bangarappa ಈ ವೇಳೆ ಜನಪ್ರತಿನಿಧಿಗಳು, ಮುಖಂಡರುಗಳು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Madhu Bangarappa ವಿದ್ಯಾರ್ಥಿಗಳಲ್ಲಿನ ವೈಜ್ಞಾನಿಕ- ಶೈಕ್ಷಣಿಕ ಪ್ರತಿಭೆ ಅನಾವರಣಕ್ಕೆ” ಡಿಜಿಟಲ್ ಸ್ಟುಡಿಯೊ” ಆರಂಭಿಸುವ ಉದ್ದೇಶವಿದೆ- ಮಧು ಬಂಗಾರಪ್ಪ.

0

Madhu Bangarappa ವಿದ್ಯಾರ್ಥಿಗಳಲ್ಲಿನ ವೈಜ್ಞಾನಿಕ- ಶೈಕ್ಷಣಿಕ ಪ್ರತಿಭೆ ಅನಾವರಣಗೊಳಿಸಲು ವೇದಿಕೆಯನ್ನು ಒದಗಿಸುವ ‘ಡಿಜಿಟಲ್ ಸ್ಟುಡಿಯೋ’ ಆರಂಭಿಸುವ ಉದ್ದೇಶ ಹೊಂದಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಮಧು ಬಂಗಾರಪ್ಪ ನುಡಿದರು.
ಜಿಲ್ಲಾ ಪಂಚಾಯತ್ ವತಿಯಿಂದ ಜಿಲ್ಲೆಯ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರಿಗಾಗಿ ಮಲ್ಲಿಗೇನಹಳ್ಳಿಯ
ಸನ್ನಿಧಿ ಸೆಂಟರ್ ಫಾರ್ ಪ್ಯಾಸ್ಟರಲ್ ರಿನೀವಲ್ ಚರ್ಚ್ ಇಲ್ಲಿ ಏರ್ಪಡಿಸಲಾಗಿದ್ದ ‘ ನಾನು ವಿಜ್ಞಾನಿ’ ತರಬೇತಿ ಕಾರ್ಯಾಗಾರದಲ್ಲಿ ಶವಿವಾರ ಸಂಜೆ ಭಾಗವಹಿಸಿ ಮಾತನಾಡಿದರು.
ಈಗಾಗಲೇ ಡಿಜಿಟಲ್ ಸ್ಟುಡಿಯೋಗಾಗಿ ರೂ. ೧೫ ಲಕ್ಷ ಮೀಸಲಿಡಲಾಗಿದೆ. ಇಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಸಣ್ಣ ಸಣ್ಣ ವಿಡಿಯೋ ತುಣುಕುಗಳ‌ ಮೂಲಕ ಪ್ರದರ್ಶಿಸಬೇಕು. ಆ ವಿಡಿಯೋಗಳನ್ನು ಯೂಟ್ಯೂಬ್ ನಲ್ಲಿ ಹಂಚಿಕೊಳ್ಳಲಾಗುವುದು. ಆಗ ವಿದ್ಯಾರ್ಥಿಗಳ ರೀಲ್ಸ್ ಗೀಳು ಸಹ ಕಡಿಮೆಯಾಗಲಿದ್ದು, ವಿನೂತನ ವೈಜ್ಞಾನಿಕ ಆವಿಷ್ಕಾರಗಳು, ಇತರೆ ವಿಷಯ ಕಲಿಕೆ ಕಡೆ ಹೆಚ್ಚಿನ ಗಮನ ಹರಿಯಲಿದೆ ಎಂದರು.
ಜಿ.ಪಂ ಸಿಇಓ ಹೇಮಂತ್ ಎನ್ ಮಾತನಾಡಿ, ಈ ತರಬೇತಿ‌ ಮೂಲಕ ಗ್ರಾಮೀಣ ಜ್ಞಾನ ಕೇಂದ್ರಗಳನ್ನು ಕೌತುಕದ ವಿಜ್ಞಾನ ಕಲಿಕಾ ಕೇಂದ್ರಗಳನ್ನಾಗಿ ಪರಿವರ್ತಿಸುವ ಗುರಿಯನ್ನು ಹೊಂದಲಾಗಿದ್ದು ಅರಿವು ಕೇಂದ್ರದ ಗ್ರಂಥಪಾಲಕರಿಗಾಗಿ ನಾನು ವಿಜ್ಞಾನಿ ಎಂಬ ವಿಜ್ಞಾನ ಮತ್ತು ಖಗೋಳಶಾಸ್ತ್ರ ಕಾರ್ಯಾಗಾರವನ್ನು ಯಶಸ್ವಿಯಾಗಿ ಪ್ರಾರಂಭಿಸುವ ಮೂಲಕ ವೈಜ್ಞಾನಿಕ ಮನೋಭಾವವನ್ನು ಬೆಳೆಸುವಲ್ಲಿ ಪ್ರವರ್ತಕ ಹೆಜ್ಜೆಯನ್ನು ಇಡಲಾಗಿದೆ.
Madhu Bangarappa ಈ ಪ್ರಾಯೋಗಿಕ ಅನುಭವದಲ್ಲಿ, ಗ್ರಂಥಪಾಲಕರು ತಮ್ಮದೇ ಆದ ದೂರದರ್ಶಕಗಳನ್ನು ವಿನ್ಯಾಸಗೊಳಿಸಿ, ತಯಾರಿಸಿದ್ದಾರೆ ಹಾಗೂ ಇವುಗಳ‌ಮೂಲಕ ಗ್ರಹಗಳು ಮತ್ತು ಉಪಗ್ರಹಗಳನ್ನು ವೀಕ್ಷಿಸಬಹುದಾಗಿದೆ.
ಈ ಭವಿಷ್ಯದ ಉಪಕ್ರಮದ ಭಾಗವಾಗಿ, ಶಿವಮೊಗ್ಗದಾದ್ಯಂತ ವಿಜ್ಞಾನ ಕ್ಲಬ್‌ಗಳನ್ನು ಸ್ಥಾಪಿಸಲಾಗುವುದು. ಗ್ರಂಥಪಾಲಕರು ಹವ್ಯಾಸಿ ಖಗೋಳಶಾಸ್ತ್ರಜ್ಞರಾಗಿ ಹೊಸ ಪಾತ್ರವನ್ನು ವಹಿಸಿಕೊಳ್ಳುತ್ತಾರೆ, ವಿದ್ಯಾರ್ಥಿಗಳು ಮತ್ತು ಗ್ರಾಮೀಣ ಸಮುದಾಯಗಳು ಬ್ರಹ್ಮಾಂಡದ ಅದ್ಭುತಗಳನ್ನು ಅನ್ವೇಷಿಸಲು ಮತ್ತು ವೈಜ್ಞಾನಿಕ ಕುತೂಹಲವನ್ನು ಬೆಳೆಸಲು ಮಾರ್ಗದರ್ಶನ ನೀಡುತ್ತಾರೆಂದು ಭರವಸೆ ವ್ಯಕ್ತಪಡಿಸಿದರು.
ವಿಜ್ಞಾನಿಗಳು ಮಾತನಾಡಿ, ಟೆಲಿಸ್ಕೋಪ್ ಗಳಿಗೆ ಬಹಳ ಬೇಡಿಕೆ ಇದೆ. ಗ್ರಂಥಪಾಲಕರೇ ಸಿದ್ದಪಡಿಸಿರುವ ಈ ಟೆಲಿಸ್ಕೋಪ್ ಮೂಲಕ ರಾತ್ರಿಯಲ್ಲಿ‌ ನಕ್ಷತ್ರಗಳು, ಚಲಿಸುತ್ತಿರವ ಸ್ಯಾಟಲೈಟ್ಗಳು, ಈಗ ಗುರು ಗ್ರಹವನ್ನು ಈ ಟೆಲಿಸ್ಕೋಪ್ ಮೂಲಕ ಹತ್ತಿರದಿಂದ ಕಾಣಬಹುದು.
ಗುರುಗ್ರಹ ೪೦ ಪಟ್ಟು ಹತ್ತಿರ ಕಾಣುತ್ತದೆ, ಪಶ್ಚಿಮ ಘಟ್ಟದಲ್ಲಿ‌ನ ಆಕಾಶ ಅದ್ಭುತವಾಗಿ ಕಾಣು ತ್ತದೆ ಎಂದರು.
ಈ ವೇಳೆ ಜಿಲ್ಲಾ ಪಂಚಾಯಿತಿ ಸಿಇಓ ಹೇಮಂತ್ ಎನ್, ಸನ್ನಿಧಿ ಸೆಂಟರ್ ಫಾರ್ ಪ್ಯಾಸ್ಟರಲ್ ರಿನೀವಲ್ ಚರ್ಚ್ ಮುಖ್ಯಸ್ಥ ಫಾ.ಪಿಂಟೋ, ವಿಜ್ಞಾನಿಗಳು, ಗ್ರಂಥಪಾಲಕರು, ಮುಂತಾದವರು ಉಪಸ್ಥಿತರಿದ್ದರು.

B. Y. Raghavendra “ನಾನು ವಿಜ್ಞಾನಿ” ಇಂತಹ ಆತ್ಮವಿಶ್ವಾಸ ಮೂಡಿಸುವ ಕಾರ್ಯಕ್ರಮಕ್ಕೆ ಬೆಂಬಲವಿದೆ- ಸಂಸದ ಬಿ.ವೈ.ರಾಘವೇಂದ್ರ.

0

B. Y. Raghavendra ನಮ್ಮ ಶಿವಮೊಗ್ಗ ಜಿಲ್ಲಾ ಪಂಚಾಯತ್‌ನ ‘ಅರಿವು ಕೇಂದ್ರ’ದ ಮೂಲಕ ಹಮ್ಮಿಕೊಂಡಿರುವ ವಿಜ್ಞಾನ ಜಾಗೃತಿಯ ಅಪೂರ್ವ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅತಿಥಿಯಾಗಿ ಭಾಗವಹಿಸಿದ್ದರು.

ಜಿಲ್ಲಾ ಪಂಚಾಯತ್ ಸಿಇಒ ಶ್ರೀ ಹೇಮಂತ್ ಎನ್ (IAS) ಅವರ ಸಮ್ಮುಖದಲ್ಲಿ, ಗ್ರಾಮೀಣ ಭಾಗದ ಗ್ರಂಥಪಾಲಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಅರ್ಥಪೂರ್ಣ ಸಂವಾದ ನಡೆಯಿತು. ಸಂಸದ ಬಿ.ವೈ.ರಾಘವೇಂದ್ರ ಅವರು ಈ ಸಂವಾದದಲ್ಲಿ ಪಾಲ್ಗೊಂಡಿದ್ದರು.

B. Y. Raghavendra ತಾವೇ ಸ್ವತಃ ಟೆಲಿಸ್ಕೋಪ್ ತಯಾರಿಸಿದ ಗ್ರಂಥಪಾಲಕರ ಉತ್ಸಾಹ ಹಾಗೂ ಮಕ್ಕಳ ವೈಜ್ಞಾನಿಕ ಮಾದರಿಗಳು ಶಿವಮೊಗ್ಗವು ವೈಜ್ಞಾನಿಕವಾಗಿ ಜಾಗೃತಗೊಂಡ ಸಮಾಜವಾಗಿ ಹೊರಹೊಮ್ಮುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಗ್ರಾಮೀಣ ಭಾಗದ ಮಕ್ಕಳಲ್ಲಿ ‘ನಾನು ವಿಜ್ಞಾನಿ’ ಎನ್ನುವ ಆತ್ಮವಿಶ್ವಾಸ ಮೂಡಿಸುತ್ತಿರುವ ಈ ವಿನೂತನ ಪ್ರಯತ್ನಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಬಿ.ವೈ.ರಾಘವೇಂದ್ರ ಹೇಳಿದರು.