ಸಂಗೀತ್ ಸಮರ್ಪಣ್ ಟ್ರಸ್ಟ್ (ರಿ.) ಸಂಸ್ಥೆ 9 ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿದೆ.
ಡಿಸೆಂಬರ್ 6ರಂಜು ಸಂಜೆ 5.30ಕ್ಕೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಸಂಗೀತ ಸ್ವರಧಾರಾ – ಆವೃತ್ತಿ 3 ವಿಶೇಷ ಹಿಂದಿ ಹಾಗೂ ಕನ್ನಡ ಸುಮಧುರವಾದ ಚಲನಚಿತ್ರ ಗೀತಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ.
ಸಂಗೀತ್ ಸಮರ್ಪಣ್ ಟ್ರಸ್ಟ್ (ರಿ.) ಸಂಸ್ಥೆ 9 ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿದೆ.
ಡಿಸೆಂಬರ್ 6ರಂಜು ಸಂಜೆ 5.30ಕ್ಕೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಸಂಗೀತ ಸ್ವರಧಾರಾ – ಆವೃತ್ತಿ 3 ವಿಶೇಷ ಹಿಂದಿ ಹಾಗೂ ಕನ್ನಡ ಸುಮಧುರವಾದ ಚಲನಚಿತ್ರ ಗೀತಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ.
Karnataka Institute of Management Training Institute ಕರ್ನಾಟಕ ಇನ್ಸ್ಟಿಟ್ಯೂಟ್ ಮ್ಯಾನೇಜ್ಮೆಂಟ್ ತರಬೇತಿ ಸಂಸ್ಥೆಯಲ್ಲಿ ಜನವರಿ ಒಂದು 2026 ರಿಂದ ಪ್ರಾರಂಭವಾಗುವ ಡಿಪ್ಲೋಮಾ ಇನ್ ಕೋ ಆಪರೇಟಿವ್ ಮ್ಯಾನೇಜ್ಮೆಂಟ್ ರೆಗ್ಯುಲರ್ ಮತ್ತು ದೂರ ಶಿಕ್ಷಣದ ಕೋರ್ಸ್ ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿ ಪಡೆಯಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು
ಡಿಸೆಂಬರ್ 15
ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ತರಬೇತಿ ಪಡೆಯಲು ಕನಿಷ್ಠ ವಿದ್ಯಾರ್ಹತೆ ಪಿಯುಸಿ ಉತ್ತೀರ್ಣರಾಗಿರಬೇಕು.
ಪಿಯುಸಿ ಮೇಲ್ಪಟ್ಟ ಅಭ್ಯರ್ಥಿಗಳು ಸಹ ಅರ್ಜಿಯನ್ನು ಸಲ್ಲಿಸಬಹುದು. ಸದರಿ ತರಬೇತಿಯು ಸಹಕಾರ ಕ್ಷೇತ್ರದ ನೇಮಕಾತಿ ಪರೀಕ್ಷೆಗಳಿಗೆ ಅನುಕೂಲಕರ ಹಾಗೂ ತರಬೇತಿ ಪಡೆಯುವ ಎಲ್ಲಾ ಅಭ್ಯರ್ಥಿಗಳಿಗೂ ಮಾಹೆಯಾನ ಶಿಷ್ಯವೇತನ ನೀಡಲಾಗುವುದು.
Karnataka Institute of Management Training Institute ಅರ್ಜಿಯನ್ನು ಪಡೆಯುವ ವಿಳಾಸ: ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕೋರ್ಟಿ ಮ್ಯಾನೇಜ್ಮೆಂಟ್ ನಂಬರ್ 1/2, ಎರಡನೇ ಮಹಡಿ ಮೂರನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು -18
ಹೆಚ್ಚಿನ ಮಾಹಿತಿಗಾಗಿ 9449007661 ಹಾಗೂ 08035541407 ಸಂಪರ್ಕಿಸಬಹುದು ಎಂದು ತಿಳಿಸಿದೆ.
Vishvesvaraya Iron and Steel Factory ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಅಗತ್ಯ ಬಂಡವಾಳ ಹೂಡಿಕೆ ಹಾಗೂ ಕಾರ್ಖಾನೆಯ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಕಾರ್ಖಾನೆಯ ಆವರಣದ ಕಚೇರಿಯಲ್ಲಿ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಕೇಂದ್ರ ಉಕ್ಕು ಮತ್ತು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವರಾದ ಸನ್ಮಾನ್ಯ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಶಿವಮೊಗ್ಗ ಸಂಸದರಾದ ಬಿ.ವೈ.ರಾಘವೇಂದ್ರ ಅವರು ಭಾಗವಹಿಸಿದರು.
Vishvesvaraya Iron and Steel Factory ಈ ಸಂದರ್ಭದಲ್ಲಿ ಶಾಸಕರುಗಳಾದ ಶ್ರೀಮತಿ ಶಾರದಾ ಪೂರ್ಯನಾಯಕ್, ಶ್ರೀ ಭೋಜೆಗೌಡ, ಶ್ರೀ ಮಂಗೋಟೆ ರುದ್ರೇಶ್, ಶ್ರೀ ಧರ್ಮ ಪ್ರಸಾದ್, ಶ್ರೀಮತಿ ಶಾರದಾ ಅಪ್ಪಾಜಿ ಅವರು ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
SKDRDP ಶಿವಮೊಗ್ಗ ತಾಲೂಕಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ದಿನಾಂಕ 29.11.2025ರಂದು ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಎಸ್.ವೈ ಅರುಣಾದೇವಿ. ನಿರ್ದೇಶಕರು ಜನಶಿಕ್ಷಣ ಸಂಸ್ಥಾನ ಶಿವಮೊಗ್ಗ ಇವರು ನೆರವೇರಿಸಿ, ಧರ್ಮಸ್ಥಳ ಸಂಸ್ಥೆಯ ಹಲವಾರು ಮಹಿಳಾ ಪರ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆಯನ್ನು ತಿಳಿಸಿದರು.
ಶ್ರೀಯುತ ಸುರೇಶ್ ಬಾಳೆಗುಂಡಿ ಉದ್ಯಮಿ ಶಿವಮೊಗ್ಗ, ಇವರು ಮಾತನಾಡಿ ಪೂಜ್ಯರ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಆದರ್ಶ ದಾಯಕವಾಗಿದೆ. ಪೂಜ್ಯರ ಮಾರ್ಗದರ್ಶನದಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಗ್ರಾಮೀಣ ಪ್ರದೇಶದ ಜನರಿಗೆ ತಲುಪುತ್ತಿವೆ. ಎಂದು ಮಾತನಾಡಿದರು.
ಕಾರ್ಯಕ್ರಮದಲ್ಲಿ ಭಾರತೀಯ ನಾರಿ ಬದುಕಿಗೆ ದಾರಿ ಎಂಬ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಿದ್ದು ಶ್ರೀಮತಿ ಜೆ.ಸಿ ಸವಿತ ರಮೇಶ್, ನ್ಯಾಯವಾದಿಗಳು ಜೆ.ಸಿ.ಐ ಭಾರತದ ರಾಷ್ಟ್ರೀಯ ಸಂಯೋಜಕರು ಹಾಗೂ ವ್ಯಕ್ತಿತ್ವ ವಿಕಸನದ ತರಬೇತುದಾರರು ಹೊಸಪೇಟೆ, ವಿಜಯನಗರ ಜಿಲ್ಲೆ ಇವರು ನಡೆಸಿ, ಸಮಾಜದಲ್ಲಿ ಮಹಿಳೆಯರ ಸವಾಲುಗಳು, ಸ್ವಾವಲಂಬಿ ಬದುಕಿನ ಬಗ್ಗೆ ಪ್ರಶ್ನಾವಳಿಗಳ ಮೂಲಕ ಮಾಹಿತಿ ನೀಡಿದರು.
ಶಿವಮೊಗ್ಗ ತಾಲೂಕಿನ ಸಾಧಕ ಮಹಿಳೆಯರಿಗೆ ಸನ್ಮಾನ ಮಾಡಲಾಯಿತು. ಸದ್ರಿ ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಕೇಂದ್ರದ 650 ಮಹಿಳಾ ಸದಸ್ಯರು ಪಾಲ್ಗೊಂಡಿದ್ದರು.
SKDRDP ಕಾರ್ಯಕ್ರಮದ ವೈಶಿಷ್ಟತೆ : ಜ್ಞಾನವಿಕಾಸ ಸದಸ್ಯರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಆಶು ಅಭಿನಯ ಸ್ಪರ್ಧೆ, ಆಕರ್ಷಕ ವಸ್ತು ಮಳಿಗೆ ಸ್ಪರ್ಧೆ, ಕಿರುಪ್ರಹಸನ, ನೃತ್ಯ ಸ್ಪರ್ಧೆ, ಕಣ್ಣಿಗೆ ಬಟ್ಟೆ ಕಟ್ಟಿ ಮಹಿಳೆಗೆ ಶೃಂಗಾರ ಸ್ಪರ್ಧೆಗಳನ್ನು ಹಾಗೂ ಪುಷ್ಪಗುಚ್ಚ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಡಾ. ಪಲ್ಲವಿ ಅದ್ವೈತಾ ಆಯರ್ವೇದ ಚಿಕಿತ್ಸಾಲಯ, ವಿನೋಬ ನಗರ ಶಿವಮೊಗ್ಗ, ಶ್ರೀಮತಿ ಪುಷ್ಪಾಶೆಟ್ಟಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸದಸ್ಯರು ಶಿವಮೊಗ್ಗ, ಶ್ರೀಯುತ ಪುರಂದರ ಪೂಜಾರಿ ಯೋಜನಾಧಿಕಾರಿ ಶಿವಮೊಗ್ಗ ತಾಲೂಕು, ಶ್ರೀಮತಿ ರತ್ನ ಜ್ಞಾನವಿಕಾಸ ಯೋಜನಾಧಿಕಾರಿ ಪ್ರಾದೇಶಿಕ ಕಚೇರಿ ಚಿತ್ರದುರ್ಗ, ಶ್ರೀಮತಿ ಚೇತನಾ ಗೌಡ ಜ್ಞಾನವಿಕಾಸ ಸಮನ್ವಯಾಧಿಕಾರಿ ಶಿವಮೊಗ್ಗ ತಾಲೂಕು, ಶಿವಮೊಗ್ಗ ತಾಲೂಕಿನ ಮೇಲ್ವಿಚಾರಕರು ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
Shimoga Fisheries Department ಶಿವಮೊಗ್ಗ ಜಿಲ್ಲಾ ಮೀನುಗಾರಿಕೆ ಇಲಾಖೆಯು 2025-26 ನೇ ಸಾಲಿನ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿಯಲ್ಲಿ ಮೀನು ಕೃಷಿ ಕೊಳಗಳ ನಿರ್ಮಾಣ, ಮೀನುಕೃಷಿ ಕೊಳ ನಿರ್ಮಾಣ ಮಾಡಿ ಮೀನುಕೃಷಿ ಕೈಗೊಂಡವರಿಗೆ ಹೂಡಿಕೆಗಳ ವೆಚ್ಚದ ಮೇಲೆ ಸಹಾಯಧನ, ಮೀನುಮರಿ ಪಾಲನಾ ಘಟಕ ನಿರ್ಮಾಣದ ಬಗ್ಗೆ ಸಹಾಯಧನ ಹಾಗೂ ಸೈಕಲ್ ವಿತ್ ಐಸ್ ಬಾಕ್ಸ್ ಪಡೆಯಲು ಆಸಕ್ತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಸಹಾಯಧನ ಘಟಕಗಳ ಉಪಯೋಜನೆಗಳನ್ನು ಪಡೆಯಲು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ. 40 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಹಿಳಾ ಫಲಾನುಭವಿಗಳಿಗೆ ಶೇ. 60 ರಷ್ಟು ಸಹಾಯಧನ ನೀಡಲಾಗುವುದು.
Shimoga Fisheries Department ಆಸಕ್ತರು ನಿಗದಿತ ಅರ್ಜಿ ನಮೂನೆಯನ್ನು ಆಯಾ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಛೇರಿಯಿಂದ ಪಡೆದು ಅಗತ್ಯ ದಾಖಲೆಗಳೊಂದಿಗೆ ಡಿ.06 ರೊಳಗಾಗಿ ಸಲ್ಲಿಸುವಂತೆ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವಾಯುಗುಣಮಟ್ಟ ಸೂಚ್ಯಂಕವು 20 ಇರಬೇಕಾಗಿದ್ದು ಭಾರತದ ಅನೇಕ ನಗರಗಳಲ್ಲಿ ಇದು ಅಪಾಯ ಮಟ್ಟವನ್ನೂ ಮೀರಿ 150ನ್ನು ದಾಟಿದೆ ಎಂದು ಹಿರಿಯ ಪತ್ರಕರ್ತ ಡಾ. ಎಚ್ ಬಿ ಮಂಜುನಾಥ ಆತಂಕ ವ್ಯಕ್ತಪಡಿಸಿದರು.
ಅವರಿಂದು ಪ್ರಾದೇಶಿಕ ಸಾರಿಗೆ ಕಚೇರಿ ಸಭಾಂಗಣದಲ್ಲಿ ಏರ್ಪಾಡಾಗಿದ್ದ ‘ವಾಯುಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ’ಯ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಗಿಡಕ್ಕೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಬೆಂಗಳೂರಲ್ಲಿ ಇದು 153 ನ್ನು ದಾಟಿದ್ದರೆ ಹೈದರಾಬಾದಿನಲ್ಲಿ 161 ನ್ನು ದಾಟಿದೆ, ದೆಹಲಿಯಲ್ಲಂತೂ 999 ಕ್ಕೆ ಏರಿದ್ದು ಉಸಿರಾಟವೂ ಕಷ್ಟ ಎನ್ನುವಂತಾಗಿದೆ, ಇದರಲ್ಲಿ ವಾಹನಗಳಿಂದ ಹೊರಬರುವ ಹೊಗೆಯ ಪಾತ್ರವೂ ಇದ್ದು ವಾತಾವರಣದಲ್ಲಿನ ಓಝೋನ್ ಪ್ರಮಾಣ ಪ್ರತಿ ಘನ ಮೀಟರ್ ಗೆ 100 ಇರಬೇಕಾದ್ದು 351 ದಾಟುತ್ತಿದೆ, ಹೀಗೇ ಮುಂದುವರೆದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದರು. 460 ಕೋಟಿ ವರ್ಷಗಳ ಹಿಂದೆ ಸೃಷ್ಟಿಯಾದ ಭೂಮಿಯನ್ನು ನಾವೀಗ ಕ್ಷಣಮಾತ್ರದಲ್ಲಿ ವಿನಾಶ ಮಾಡುವ ಹಂತಕ್ಕೆ ತಲುಪಿದ್ದೇವೆ ಎಂಬುದನ್ನು ಉದಾಹರಣೆಗಳ ಸಹಿತ ವಿವರಿಸಿದ ಮಂಜುನಾಥ್ ಅನವಶ್ಯಕವಾದ ವಾಹನ ಬಳಕೆ ಕಡಿಮೆ ಮಾಡುವುದು ಹಾಗೂ ವಾಹನಗಳಿಂದ ಕೆಟ್ಟ ಹೊಗೆ ಬಾರದಂತೆ ನೋಡಿಕೊಳ್ಳುವುದು ಮುಂತಾದ ಮಾರ್ಗಗಳನ್ನು ಸೂಚಿಸಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಭಗವಾನ್ ದಾಸ್ ರವರು ಅಧ್ಯಕ್ಷೀಯ ನುಡಿಗಳನ್ನಾಡುತ್ತಾ ಸಾರ್ವಜನಿಕ ಸಾರಿಗೆಯನ್ನು ಹೆಚ್ಚಾಗಿ ಬಳಸಬೇಕು, ಸಣ್ಣ ದೂರಕ್ಕೂ ವಾಹನ ಬಳಸುವ ರೂಢಿ ಬಿಡಬೇಕು, ಕಪ್ಪು ಹೊಗೆ ಪ್ರಮಾಣ ಹೆಚ್ಚಾಗಿರುವ ಡೀಸೆಲ್ ವಾಹನಗಳ ಬಳಕೆಯನ್ನು ಕಡಿಮೆ ಮಾಡಬೇಕು, ವಿದ್ಯುತ್ ವಾಹನಗಳನ್ನು ಸಾಧ್ಯವಾದಷ್ಟೂ ಬಳಸಬೇಕು ಎಂದರು.
ಹಿರಿಯ ಮೋಟಾರ್ ವಾಹನ ನಿರೀಕ್ಷಕರಾದ ಅನಿಲ್ ಬಿ ಮಾಸೂರ್ ಉಪಸ್ಥಿತರಿದ್ದರು. ವಾಯು ಮಾಲಿನ್ಯ ಪರಿಣಾಮ ಹಾಗೂ ನಿಯಂತ್ರಣ ಕುರಿತಾದ ಚಿತ್ರಕಲಾ, ಪ್ರಬಂಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಥಮ ದರ್ಜೆ ಗುಮಾಸ್ತರಾದ ರಮೇಶ್ ಭಾರಧ್ವಾಜ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಅತಿಥಿಗಳ ಪರಿಚಯ ಸ್ವಾಗತ ಹಾಗೂ ವಂದನಾರ್ಪಣೆಯನ್ನು ಸೂಪರಿಂಟೆಂಡೆಂಟ್ ಸೋಮಣ್ಣ ಮಾಡಿದರು. ಅಧೀಕ್ಷಕರುಗಳಾದ ಹೆಚ್ ಸಿ ರವಿ, ಪ್ರಸನ್ನ ಹಾಗೂ ಸಿಬ್ಬಂದಿ ವರ್ಗದವರು ಮುಂತಾದವರು ಭಾಗವಹಿಸಿದ್ದರು.
ಸಂಪತ್ತು ಇದ್ದವರು ದೊಡ್ಡ ದಾನ ಕೊಡುವುದು ಸ್ವಾಭಾವಿಕ ಆದರೆ ಮಧ್ಯಮ ವರ್ಗದವರು ಸ್ವಯಂ ಪ್ರೇರಣೆಯಿಂದ ದೊಡ್ಡ ಮೊತ್ತದ ದಾನವನ್ನು ಸತ್ಕಾರ್ಯಕ್ಕೆ ಕೊಡುವುದು ನಿಜಕ್ಕೂ ಶ್ಲಾಘನೀಯ ಎಂದು ವೀರೇಶ್ವರ ಪುಣ್ಯಾಶ್ರಮದ ಅಧ್ಯಕ್ಷರಾದ ಅಥಣಿ ಎಸ್ ವೀರಣ್ಣ ಅಭಿಪ್ರಾಯ ಪಟ್ಟರು.
ಅವರಿಂದು ಬಾಡಾ ಕ್ರಾಸ್ ನಲ್ಲಿರುವ ಶ್ರೀ ವೀರೇಶ್ವರ ಪುಣ್ಯಾಶ್ರಮದ ಅಭಿವೃದ್ಧಿ ಕಾರ್ಯಗಳಿಗಾಗಿ ನಿವೃತ್ತ ಶಿಕ್ಷಕರಾದ ಎ ಎಮ್ ಬಸವರಾಜಯ್ಯನವರು ತಮ್ಮ ತಂದೆ ಎ ಎಂ ವೃಷಭೇಂದ್ರಯ್ಯ ತಾಯಿ ಎ ಎಮ್ ಅನ್ನಪೂರ್ಣಮ್ಮನವರ ಸ್ಮರಣೆಯಲ್ಲಿ ಒಂದು ಕೋಟಿ ರೂಪಾಯಿ ದಾನವಾಗಿ ನೀಡಿದ್ದು ದಾನಿ ಬಸವರಾಜಯ್ಯನವರನ್ನು ಸನ್ಮಾನಿಸಿ ಮಾತನಾಡುತ್ತಾ ಅಂಧ ಮಕ್ಕಳಿಗೆ ಆಶ್ರಯ ಕೊಟ್ಟು ಸಂಗೀತ ಶಿಕ್ಷಣವನ್ನು ಕೊಡುತ್ತಿರುವ ಪುಣ್ಯಾಶ್ರಮಕ್ಕೆ ಸಹೃದಯರು ಸ್ವಯಂ ಪ್ರೇರಣೆಯಿಂದ ನೀಡುತ್ತಿರುವುದು ಲಿಂಗೈಕ್ಯ ಪಂಚಾಕ್ಷರ ಗವಾಯಿಗಳು ಪುಟ್ಟರಾಜ ಗವಾಯಿಗಳ ಪ್ರೇರಣೆಯಿಂದಲೇ ತಾನಾಗಿ ಬರುತ್ತಿದೆ. ಮಾನ್ಯ ಡಾ. ಶಾಮನೂರು ಶಿವಶಂಕರಪ್ಪನವರ ಗೌರವಾಧ್ಯಕ್ಷತೆಯಲ್ಲಿ ಪುಣ್ಯಾಶ್ರಮದ ಕಾರ್ಯಗಳು ಸುಗಮವಾಗಿ ಸಾಗುತ್ತಿದ್ದು ಅನೇಕರು ತಮ್ಮ ಹುಟ್ಟುಹಬ್ಬ ಹಾಗೂ ಹಿರಿಯರ ನೆನಪುಗಳನ್ನು ಇಲ್ಲಿಯೇ ಬಂದು ಆಚರಿಸುತ್ತಾರೆ, ಬಸವರಾಜಯ್ಯನವರ ಈ ಒಂದು ಕೋಟಿ ರೂಪಾಯಿ ದೊಡ್ಡ ಮೊತ್ತದ ದಾನವು ಪುಣ್ಯಾಶ್ರಮದ ಅಭಿವೃದ್ಧಿಗಾಗಿ ಸದ್ಬಳಕೆಯಾಗಲಿದೆ ಎಂದರು.
ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಹಿರಿಯ ಪತ್ರಕರ್ತ ಡಾ. ಎಚ್ ಬಿ ಮಂಜುನಾಥ ದಾನದ ಮಹತ್ವ ವಿವರಿಸಿದರು.
ಕೋಟಿ ರೂ. ದಾನಿ ನಿವೃತ್ತ ಶಿಕ್ಷಕ ಎ ಎಂ ಬಸವರಾಜಯ್ಯ ಮಾತನಾಡಿ ಪುಣ್ಯಾಶ್ರಮಕ್ಕೆ ತಂದೆ ತಾಯಿಗಳ ಸ್ಮರಣೆಯಲ್ಲಿ ಈ ಮೊತ್ತದ ದಾನ ನೀಡಲು ಐದಾರು ತಿಂಗಳುಗಳಿಂದ ಯೋಚಿಸುತ್ತಿದ್ದೆ, ಈಗ ದಾನ ನೀಡಿ ನನ್ನ ಭಾರ ಕಡಿಮೆ ಮಾಡಿಕೊಂಡಿದ್ದೇನೆ, ದಾನ ಸ್ವೀಕರಿಸಿ ಪುಣ್ಯಾಶ್ರಮದ ಅಥಣಿ ವೀರಣ್ಣ ಮುಂತಾಗಿ ಸರ್ವರೂ ನನ್ನನ್ನು ಕೃತಾರ್ಥ ರನ್ನಾಗಿಸಿದ್ದಾರೆ ಎಂದರು.
ಆಶ್ರಮದ ಉಪಾಧ್ಯಕ್ಷ ದೇವರ ಮನಿ ಶಿವಕುಮಾರ್, ಕಾರ್ಯದರ್ಶಿ ಎ ಹೆಚ್ ಸಿದ್ದಲಿಂಗೇಶ್ವರ, ದಾನಿಗಳ ಆಪ್ತಮಿತ್ರ ಕೆ ಎಂ ಶೇಖರಪ್ಪ ಉಪಸ್ಥಿತರಿದ್ದು ಕೃತಜ್ಞತಾಪೂರ್ವಕ ಮಾತನಾಡಿದರು. ಅಮರಯ್ಯ ಸ್ವಾಮಿ ಹಿರೇಮಠ್ ಹಾಗೂ ಆನಂದ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು ಆಶ್ರಮದ ಅಂಧ ವಿದ್ಯಾರ್ಥಿಗಳು ಭಕ್ತಿ ಗೀತೆಗಳು ಹಾಗೂ ವಚನ ಗಾಯನ ಮಾಡಿದರು.
Rotary Club Shimoga ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಶಿಸ್ತು, ಕ್ರಮಬದ್ಧತೆ, ಧೈರ್ಯದ ಜತೆಯಲ್ಲಿ ಒಗ್ಗಟ್ಟು ಜೀವನವನ್ನು ಶ್ರೀಮಂತಗೊಳಿಸುತ್ತವೆ ಎಂದು ಮೌಂಟ್ ಕಾರ್ಮೆಲ್ ಶಾಲೆ ಪ್ರಾಂಶುಪಾಲ ಸುರೇಶ್ ಸಾಲ್ಡಾನ ಹೇಳಿದರು.
ವಿದ್ಯಾನಗರದ ಮೌಂಟ್ ಕಾರ್ಮೆಲ್ ಶಾಲೆಯಲ್ಲಿ ರೋಟರಿ ವಲಯ 10ರ ವತಿಯಿಂದ ಆಯೋಜಿಸಿದ್ದ ಉತ್ತರ ಧ್ರುವ ಕ್ರೀಡೋತ್ಸವ 2025 ಉದ್ಘಾಟಿಸಿ ಮಾತನಾಡಿ, ರೋಟರಿ ಪರಿವಾರ ಶಾಲೆಯಲ್ಲಿ ಪ್ರತಿ ವರ್ಷ ಕ್ರೀಡೋತ್ಸವ ಆಯೋಜಿಸುತ್ತಿರುವುದು ಸಂತೋಷ ತಂದಿದೆ ಎಂದು ತಿಳಿಸಿದರು.
ಶಾಲೆಯ ಸ್ವಚ್ಛತೆ, ಶಿಸ್ತಿನ ಪಾಲನೆ ಮತ್ತು ಗೌರವವು ರೋಟರಿ ಸದಸ್ಯರ ಜವಾಬ್ದಾರಿಯುತ ನಡತೆ ತೋರಿಸುತ್ತದೆ. ರೋಟರಿ ಸಂಸ್ಥೆಯು ಶಾಲೆಯಲ್ಲಿ ಆಯೋಜಿಸಿದ್ದ ಐ-ಚೆಕಪ್, ಡೆಂಟಲ್ ಹೆಲ್ತ್ ಕ್ಯಾಂಪ್, ಮಕ್ಕಳ ಆರೋಗ್ಯ ತಪಾಸಣೆ ಮಾನವೀಯ ಸೇವಾ ಕಾರ್ಯಕ್ರಮಗಳು ಶ್ಲಾಘನೀಯ ಎಂದು ಹೇಳಿದರು.
ವಲಯ 10ರ ಸಹಾಯಕ ಗವರ್ನರ್ ಕೆ.ಪಿ.ಶೆಟ್ಟಿ ಮಾತನಾಡಿ, ಎಲ್ಲ ವಯೋಮಿತಿಗಳಲ್ಲಿ ನಡೆಯುವ ಈ ಕ್ರೀಡಾ ಸ್ಪರ್ಧೆಗಳು ರೋಟರಿ ಕುಟುಂಬದ ಬಾಂಧವ್ಯವನ್ನು ಗಟ್ಟಿಗೊಳಿಸುವ ಅದ್ಭುತ ವೇದಿಕೆ. ನಾವು ಎಲ್ಲರೂ ಒಂದೇ ಪರಿವಾರ ಎಂಬ ಭಾವನೆ ಕ್ರೀಡೋತ್ಸವದಿಂದ ಮತ್ತಷ್ಟು ಬಲವಾಗುತ್ತದೆ ಎಂದು ತಿಳಿಸಿದರು.
ವಲಯ 10ರ ಸ್ಪೋರ್ಟ್ಸ್ ಕೋಆರ್ಡಿನೇಟರ್ ಸಿ.ಎನ್.ಮಲ್ಲೇಶ್ ಮಾತನಾಡಿ, ವಲಯ ಸ್ಪರ್ಧೆಗಳಲ್ಲಿ ಆಯ್ಕೆಯಾದ ಸ್ಪರ್ಧಿಗಳಿಗೆ ಜಿಲ್ಲಾಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶ ಇದೆ ಎಂದು ಹೇಳಿದರು.
Rotary Club Shimoga ರೋಟರಿ ಕ್ಲಬ್ ಶಿವಮೊಗ್ಗ ಉತ್ತರ ಅಧ್ಯಕ್ಷ ಬಸವರಾಜ್ ಮಾತನಾಡಿ, ಶಿವಮೊಗ್ಗದ ಎಂಟು ಕ್ಲಬ್ಗಳು ಒಟ್ಟಾಗಿ ನಡೆಸುತ್ತಿರುವ ಕ್ರೀಡೋತ್ಸವವು ರೋಟರಿಯ ಒಗ್ಗಟ್ಟಿಗೆ ಸಾಕ್ಷಿಯಾಗಿದೆ. ಯಾವುದೇ ತಪ್ಪುಗಳಿದ್ದರೆ ಪರಸ್ಪರ ಸಹಕಾರದಿಂದ ಸರಿಪಡಿಸಿಕೊಂಡು ಮುಂದೆ ಉತ್ತಮವಾಗಿ ಸಾಗೋಣ ಎಂದು ಸದಸ್ಯರಿಗೆ ಕರೆ ನೀಡಿದರು.
ರೋಟರಿ ಕಿರಿಯ ಮಕ್ಕಳಿಂದ ಹಿರಿಯರ ತನಕ ಎಲ್ಲ ವಯೋಮಿತಿಯವರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ರೋಟರಿ ಕ್ಲಬ್ ಶಿವಮೊಗ್ಗ ಉತ್ತರ ಕಾರ್ಯದರ್ಶಿ ಶಿವಕುಮಾರ್, ವಲಯ ಸೇನಾನಿ ಜಗದೀಶ್ ಸರ್ಜಾ, ಶಂಕರ್.ಎಂ.ಪಿ., ಎಂಟು ಕ್ಲಬ್ಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರು ಮತ್ತು ಅವರ ಕುಟುಂಬ ಸದಸ್ಯರು ಭಾಗವಹಿಸಿದ್ದರು.
ಶಿವಮೊಗ್ಗ ನಗರದ ಕೋಟೇ ಶ್ರೀ ಭೀಮೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಶ್ರೀ ಗುರು ಗೀತಾ, ದತ್ತಾತ್ರೇಯ ಹಾಗೂ ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳ ಜಯಂತಿ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದು, ಜ.05ರವರೆಗೆ ನಡೆಯಲಿದೆ.
ಸಂಪ್ರದಾಯದಂತೆ ನಿತ್ಯ ಬೆಳಿಗ್ಗೆ 05 ರಿಂದ ಕಾಕಡಾರತಿ, ನಗರ ಸಂಕೀರ್ತನೆ ನಡೆಯಲಿದ್ದು, ಪ್ರತಿ ದಿನ ಸಂಜೆ ಪೂಜೆ, ಉಪಾನ್ಯಾಸ ಹಾಗೂ ಮಹಾ ಮಂಗಳಾರತಿ ನಡೆಯಲಿದೆ.
ಡಿ. 03ರ ಬುಧವಾರ ಹಂದಲಸು ವಾಸುದೇವ ಭಟ್ಟರಿಂದ ಶ್ರೀ ದತ್ತ ಸಂದೇಶ ಉಪನ್ಯಾಸ, ಡಿ. 04ರಂದು ದತ್ತ ಜನನ, ೦೫ರಂದು ದತ್ತಾತ್ರೇಯ ಮೂಲ ಮಂತ್ರ ಹೋಮ ನಡೆಯಲಿದೆ.
ಭಕ್ತಾದಿಗಳು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಲಾಗಿದೆ.