Tuesday, May 5, 2026
Tuesday, May 5, 2026
Home Blog Page 6

ಅಬಕಾರಿ ಇಲಾಖೆಯಲ್ಲಿ ಮುಟ್ಟುಗೋಲಾದ ವಾಹನದ ಬಹಿರಂಗ ಹರಾಜು

0

ಶಿವಮೊಗ್ಗ ಜಿಲ್ಲಾ ಅಬಕಾರಿ ನಿರೀಕ್ಷಕರವರ ಕಛೇರಿ ವತಿಯಿಂದ ಮೇ 06 ರ ಬೆಳಿಗ್ಗೆ 11 ಗಂಟೆಗೆ ಶಿವಮೊಗ್ಗ ವಲಯ ನಂ-1 ಕಛೇರಿಯ ಅಬಕಾರಿ ಭವನ ಆವರಣದಲ್ಲಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿರುವ 02 ದ್ವಿ ಚಕ್ರ ವಾಹನವನ್ನು ಯಥಾಸ್ಥಿತಿಯಾಗಿ ಬಹಿರಂಗ ಹರಾಜು ಮಾಡಲಾಗುವುದು. ಆಸಕ್ತರು ನಿಗದಿತ ಸಮಯಯಲ್ಲಿ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಶಿವಮೊಗ್ಗ ವಲಯ ನಂ.1 ರ ಅಬಕಾರಿ ನಿರೀಕ್ಷಕರು ತಿಳಿಸಿದ್ದಾರೆ.

Klive Special Article ವಿಶಿಷ್ಟಾವತಾರಾ.. ನರಸಿಂಹಾವತಾರ ಲೇ: ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ

0

Klive Special Article ವಿಷ್ಣುವಿನ ದಶಾವತಾರದಲ್ಲಿ ನಾಲ್ಕನೇ ಅವತಾರವೇ ನೃಸಿಂಹಾವತಾರ.
ದಶಾವತಾರದಲ್ಲಿ ಇದೊಂದು ವಿಶಿಷ್ಟಾವತಾರ.
ಹೆಸರೇ ಹೇಳುವಂತೆ ಅರ್ಧಭಾಗ ಮನುಷ್ಯ ಶರೀರ,ಉಳಿದರ್ಧ ಭಾಗ ಮೃಗ(ಸಿಂಹ)ದ ಶರೀರವನ್ನು ಹೊಂದಿರುವ ಅವತಾರ.
ದಾನವ ಹಿರಣ್ಯಕಶಿಪು ಸಾವನ್ನು ಗೆಲ್ಲಲು ಬಹಳ ಕಠಿಣ ತಪಸ್ಸನ್ನು ಮಾಡಿ ಬ್ರಹ್ಮನನ್ನು ಪ್ರತ್ಯಕ್ಷ ಗೊಳಿಸಿ ಕೊಳ್ಳುತ್ತಾನೆ.ಹಿರಣ್ಯಕಶಿಪುವಿನ ಕಠಿಣ ತಪಸ್ಸಿಗೆ ಪ್ರತ್ಯಕ್ಷನಾದ ಬ್ರಹ್ಮದೇವನಿಂದ ಸಾವನ್ನೇ
ವರವನ್ನು ನೀಡುವಂತೆ ಕೇಳುತ್ತಾನೆ. ಹಿರಣ್ಯಕಶಿಪುವಿನ ಕಠಿಣ ತಪಸ್ಸಿಗೆ ಪ್ರಸನ್ನನಾದ ಬ್ರಹ್ಮದೇವರು ಹೇಳುತ್ತಾನೆ ಭೂಮಿಯಲ್ಲಿ ಹುಟ್ಟಿದವರಿಗೆ ಮರಣವಿದ್ದೇ ಇರುತ್ತದೆ.ಈ ನಿಯಮವನ್ನು ಬದಲಾಯಿಸಲು ಸಾಧ್ಯವೇ ಇಲ್ಲ.
ಆದ್ದರಿಂದ ನೀನು ಬೇರೆಯಾವುದಾದರೂವರವನ್ನು ಕೇಳುಎಂದುಬ್ರಹ್ಮದೇವನುಹೇಳುತ್ತಾನೆ.ಹಿರಣ್ಯಕಶಿಪುಬಹಳಯೋಚನೆಮಾಡಿ”ತನಗೆಮನುಷ್ಯರಿಂದಾಗಲೀ,ಮೃಗಗಳಿಂದಾಗಲೀ,ಯಾವುದೇಶಸ್ತ್ತ್ರಾಸ್ತ್ರಗಳಿಂದಾಗಲೀ,ಮನೆಯಒಳಗಾಗಲೀಹೊರಗಾಗಲೀ,ಹಗಲಿನಲ್ಲಾಗಲೀರಾತ್ರಿಯಲ್ಲಾಗಲೀಸಾವುಬಾರದಂತೆವರವನ್ನುಕೊಡುಎಂದುಬ್ರಹ್ಮನಲ್ಲಿಪ್ರಾರ್ಥಿಸುತ್ತಾನೆ.ಬ್ರಹ್ಮದೇವನು ತಥಾಸ್ತು ಎಂದು ವರವನ್ನು ಕೊಟ್ಟುಅದೃಶ್ಯನಾಗುತ್ತಾನೆ.
ಹಿರಣ್ಯಕಶಿಪುವಿನಪತ್ನಿಕಯಾದುಗರ್ಭಿಣಿಯಾಗಿದ್ದಾಗ ಕೆಲವು ಕಾಲ ನಾರದ ಮಹರ್ಷಿಗಳ ಆಶ್ರಮದಲ್ಲಿ
ಇರಬೇಕಾದ ಪ್ರಸಂಗ ಬರುತ್ತದೆ. ಕಯಾದುವಿನ ಹೊಟ್ಟೆಯಲ್ಲಿ ಹರಿಯ ಭಕ್ತ ಪ್ರಹ್ಲಾದನು ಬೆಳೆಯುತ್ತಿರುತ್ತಾನೆ.ನಾರದರು ಮಾಡುತ್ತಿದ್ದ ಶ್ರೀಹರಿಯ ಗುಣಗಾನ ಕಯಾದುವಿನ ಹೊಟ್ಟೆಯಲ್ಲಿದ್ದ ಪ್ರಹ್ಲಾದನಿಗೆ ಹರಿಯ ಮೇಲಿನ ಭಕ್ತಿಯನ್ನು ಇಮ್ಮಡಿಗೊಳಿಸಿತ್ತು.
ತನ್ನ ಕಠಿಣ ತಪಸ್ಸನ್ನು ಮುಗಿಸಿಕೊಂಡು ಬಂದ ಮೇಲೆ ಹಿರಣ್ಯಕಶಿಪು ಕಯಾದು ಗಂಡುಮಗುವಿನ ತಾಯಿಯಾಗಿರುವ ವಿಷಯ ಕೇಳಿ ಬಹಳ ಸಂತೋಷಗೊಳ್ಳುತ್ತಾನೆ.ಪ್ರಹ್ಲಾದನೆಂದು ನಾಮಕರಣವೂ ಆಗುತ್ತದೆ.
ಹಿರಣ್ಯಕಶಿಪುವಿಗೆ ಮಗ ಹುಟ್ಟಿರುವ ವಿಷಯ ಕೇಳಿ ಶ್ರೀಹರಿಯ ಬದ್ಧ ದ್ವೇಷಿಯಾದ ಇವನು ತನ್ನ ಜೊತೆ ಹೋರಾಡಲು ತನ್ನ ಮಗನೂ ಜೊತೆಗೆ ಸಿಗುತ್ತಾನೆ ಎಂದು ಮನಸ್ಸಿನಲ್ಲಿ ಲೆಕ್ಕಾಚಾರ ಹಾಕುತ್ತಾನೆ.
ವಿದ್ಯಾಭ್ಯಾಸಕ್ಕಾಗಿ ಗುರುಕುಲಕ್ಕೆ ಕಳಿಸಿಕೊಡುತ್ತಾನೆ.
Klive Special Article ಗುರುಕುಲದಲ್ಲಿಯೂ ಬಾಲಕ ಪ್ರಹ್ಲಾದನಿಗೆ ಶ್ರೀಹರಿಯದೇ ಧ್ಯಾನ.ದಾನವಕುಲದಲ್ಲಿ ಹುಟ್ಟಿದ
ಪ್ರಹ್ಲಾದನನ್ನು ಕಟುಕತನದಿಂದ ಬೆಳೆಸಬೇಕೆಂದರೂ ಅದು ಸಾಧ್ಯವಾಗದೆ ಬಹಳಮೃದು ಮನಸ್ಸಿನಿಂದ ಹರಿಯ ನಾಮವನ್ನೇತನ್ನಉಸಿರಲ್ಲಿಸೇರಿಸಿಕೊಂಡು ಬೆಳೆಯತೊಡಗಿದ ಪ್ರಹ್ಲಾದ. ಪ್ರಹ್ಲಾದನು ಎಷ್ಟು ಹರಿಭಕ್ತನಾಗಿದ್ದನೋ ಅಷ್ಟೇ
ಹರಿದ್ವೇಷಿಯಾಗಿದ್ದ ಹಿರಣ್ಯಕಶಿಪು.
ಹಿರಣ್ಯಕಶಿಪುಪ್ರಹ್ಲಾದನನ್ನುತನ್ನಕಡೆಸೆಳೆದುಕೊಳ್ಳಲು ಮಾಡಿದ ಪ್ರಯತ್ನಗಳೆಲ್ಲವೂವಿಫಲವಾಗುತ್ತವೆ.
ಪ್ರಹ್ಲಾದನೇ ತನ್ನ ತಂದೆಗೆ “ಅಪ್ಪಾ ಶ್ರೀಹರಿಯು ಎಲ್ಲಾ ಕಡೆಯೂ ಇದ್ದಾನೆ,ಅವನೇ ನಮ್ಮೆಲ್ಲರನ್ನು
ರಕ್ಷಿಸುತ್ತಿರುವನು”ಎಂದು ಹೇಳುತ್ತಾನೆ. ಹರಿ,ಹರಿ ಎಂಬ ಶಬ್ದವನ್ನು ಪದೇಪದೇ ಪ್ರಹ್ಲಾದನ
ಬಾಯಿಂದ ಕೇಳಿ ಕೇಳಿ ಸಾಕಾಗಿ ಹಿರಣ್ಯ ಕಶಿಪು ತನ್ನ ಅರಮನೆಯ ಕಂಭವೊಂದನ್ನು ತೋರಿಸಿ
ಈ ಕಂಭದಲ್ಲಿದ್ದಾನೇಯೋ ನಿನ್ನ ಶ್ರೀಹರಿ ಎಂದು ಕೇಳಿದಾಗ ಪ್ರಹ್ಲಾದನು ಹೌದಪ್ಪಾ ಶ್ರೀಹರಿ ಎಲ್ಲಾ
ಕಡೆಯೂ ಇದ್ದಾನೆ,ಈ ಕಂಭದಲ್ಲಿಯೂ ಇದ್ದಾನೆ, ಆ ಕಂಭದಲ್ಲಿಯೂ ಇದ್ದಾನೆ ಎಂದು ಹೇಳಿದ ಕೂಡಲೇ ಹಿರಣ್ಯಕಶಿಪು ತನ್ನ ಗದೆಯಿಂದ ತನ್ನೆದುರಿನ ಕಂಭಕ್ಕೆ ಹೊಡೆಯುತ್ತಾನೆ. ಕೂಡಲೇ ಭಯಂಕರ ಶಬ್ದದಿಂದ ಕಂಬದಿಂದ ನೃಸಿಂಹರೂಪದಿಂದ ಶ್ರೀಹರಿಯು ಪ್ರತ್ಯಕ್ಷನಾಗಿ ಹಿರಣ್ಯಕಶಿಪುವನ್ನು ಸಂಹಾರಮಾಡುತ್ತಾನೆ.ಹಿರಣ್ಯ
ಕಶಿಪುವನ್ನು ಸಂಹಾರ ಮಾಡಿದ ನೃಸಿಂಹರೂಪಿ ಶ್ರೀಹರಿಯನ್ನು ಶಾಂತವಾಗಿಸಲುಸ್ವತಃ:ಲಕ್ಷ್ಮೀದೇವಿಯಿಂದಲೇ ಸಾಧ್ಯವಾಗುವುದಿಲ್ಲ.
ಬಾಲಕ ಪ್ರಹ್ಲಾದನೇ ನೃಸಿಂಹ ರೂಪಿಯಾದ ಭಗವಂತನನ್ನು ಪ್ರಾರ್ಥನೆ ಮಾಡಿ ಸಮಾಧಾನ ಮಾಡುತ್ತಾನೆ.
ನೃಸಿಂಹದೇವರು ತನ್ನ ಅಂತರಂಗ ಭಕ್ತ ಪ್ರಹ್ಲಾದನ
ಪ್ರಾರ್ಥನೆಯ ಮೇರೆಗೆ ಶಾಂತನಾಗುವುದಲ್ಲದೇ ಅವನ ಪ್ರಾರ್ಥನೆಯಂತೆ ಹಿರಣ್ಯಕಶಿಪುವಿಗೆ ಮುಕ್ತಿಯನ್ನೂ ದಯಪಾಲಿಸುತ್ತಾನೆ.
ನಾವೂ ಹಿರಣ್ಯಕಶಿಪುವಿನಂತೆ ನಮ್ಮೊಳಗಿರುವ
ಕೋಪ,ಅಸಹನೆ,ದ್ವೇಷ ಭಾವನೆ,ಅಸೂಯೆ,ಇವುಗಳನ್ನು ಹೊರಹಾಕಿ ಎಲ್ಲರ ಮೇಲೆ ಪ್ರೀತಿ,ವಿಶ್ವಾಸ,ಒಳ್ಳೆಯ ಮನಸ್ಸನ್ನು
ನಮ್ಮೊಳಗೆ ತುಂಬಿಕೊಂಡು ಶ್ರೀನೃಸಿಂಹದೇವರ ಅನುಗ್ರಹಕ್ಕೆ ಪಾತ್ರರಾಗೋಣ.

ಶಿವಮೊಗ್ಗ ಮಹಿಳಾ ಪಾಲಿಟೆಕ್ನಿಕ್ ಡಿಪ್ಲೊಮಾ ಪ್ರವೇಶಕ್ಕೆ ‌ಅರ್ಜಿ ಆಹ್ವಾನ

0

ಶಿವಮೊಗ್ಗ ಸರ್ಕಾರಿ ಮಹಿಳಾ ವಸತಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿನಿಯರಿಗೆ ಡಿಪ್ಲೊಮಾ ಪ್ರಥಮ ಸೆಮಿಸ್ಟರ್ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಸಂಸ್ಥೆಯಲ್ಲಿ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಆಂಡ್ ಇಂಜಿನಿಯರಿಂಗ್, ಕಮರ್ಷಿಯಲ್ ಪ್ರಾಕ್ಟಿಸ್(ಕನ್ನಡ), ಕಮರ್ಷಿಯಲ್ ಪ್ರಾಕ್ಟಿಸ್(ಇಂಗ್ಲಿಷ್), ಅಪೆರಲ್ ಡಿಸೈನಿಂಗ್ ಫ್ಯಾಬ್ರಿಕೇಷನ್ ಟೆಕ್ನಾಲಜಿ ಕೋರ್ಸ್ಗಳು ಲಭ್ಯವಿದೆ.
ಅಭ್ಯರ್ಥಿಗಳು ಪ್ರವೇಶ ಪಡೆಯಲು ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ವರ್ಗಾವಣೆ ಪ್ರಮಾಣ ಪತ್ರ/ಎನ್‌ಓಸಿ, 05 ವರ್ಷದ ವ್ಯಾಸಂಗ ಪ್ರಮಾಣ ಪತ್ರ (ಕ್ಷೇತ್ರ ಶಿಕ್ಷಣಾಧಿಕಾರಿಗಳು ದೃಢೀಕರಿಸಿದ ಸಹಿಯೊಂದಿಗೆ), ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಹಾಗೂ 06 ಭಾವಚಿತ್ರಗಳೊಂದಿಗೆ ಮೇ 02 ರೊಳಗಾಗಿ ಸಲ್ಲಿಸುವುದು. ಪ್ರಾಂಶುಪಾಲರ ಹಂತದಲ್ಲಿಯೇ ಮೆರಿಟ್ ಹಾಗೂ ರೋಸ್ಟರ್‌ಗನುಗುಣವಾಗಿ ಆಯ್ಕೆ ಮಾಡಲಾಗುವುದು. ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಆರ್, ಸುನೀಲ್, ಮೊ.ಸಂ: 9480542763 ನ್ನು ಸಂಪರ್ಕಿಸಬಹುದೆಂದು ಸರ್ಕಾರಿ ಮಹಿಳಾ ವಸತಿ ಪಾಲಿಟೆಕ್ನಿಕ್‌ನ ಪ್ರಾಂಶುಪಾಲರು ತಿಳಿಸಿದ್ದಾರೆ.

S.N. Channabasappa ಮಹಾನಗರ ಪಾಲಿಕೆ ಪ್ರಗತಿ ಪರಿಶೀಲನಾ ಸಭೆ‌ .ತುರ್ತು ಕೆಲಸಗಳ ಬಗ್ಗೆ ಅಧಿಕಾರಿಗಳಿಗೆ ಕಟ್ಟುನಿಟ್ಟು ಸೂಚನೆ ನೀಡಿದ ಶಾಸಕ ಚೆನ್ನಿ

0

S.N. Channabasappa ಮಹಾನಗರ ಪಾಲಿಕೆಯಲ್ಲಿ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಅವರ ನೇತೃತ್ವದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೈಗೊಳ್ಳಲಾದ ಪ್ರಮುಖ ತೀರ್ಮಾನಗಳು ಹೀಗಿವೆ:

ಗುಂಡಿ ಮುಕ್ತ ರಸ್ತೆ: ನಗರಾದ್ಯಂತ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯದ ಪ್ರಗತಿಯನ್ನು ಪರಿಶೀಲಿಸಲಾಯಿತು. ಬಾಕಿ ಇರುವ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ಕೂಡಲೇ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ವರದಿ ನೀಡಲು ಸೂಚಿಸಲಾಯಿತು.

ಮಳೆಗಾಲದ ಮುನ್ನೆಚ್ಚರಿಕೆ: ಮುಂಬರುವ ಮಳೆಗಾಲದ ಹಿನ್ನೆಲೆಯಲ್ಲಿ ರಾಜಕಾಲುವೆಗಳ ಹೂಳು ತೆಗೆಯುವುದು ಸೇರಿದಂತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಯಿತು.

ಅಧಿಕಾರಿಗಳಿಗೆ ಎಚ್ಚರಿಕೆ: ಮಳೆ ಹಾನಿ ಪ್ರದೇಶಗಳ ವೀಕ್ಷಣೆ ಮತ್ತು ಸಂತ್ರಸ್ತರಿಗೆ ಪರಿಹಾರ ವಿತರಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಅಧಿಕಾರಿಗಳ ವಿರುದ್ಧ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಕರ್ತವ್ಯ ಲೋಪವಾದರೆ ಶಿಸ್ತುಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.

ಪಾರ್ಕಿಂಗ್ ವ್ಯವಸ್ಥೆ ಸುಧಾರಣೆ: ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ವಿವಿಧೆಡೆ ಇರುವ ಕನ್ಸರ್ವೆನ್ಸಿ ರಸ್ತೆಗಳನ್ನು ತುರ್ತಾಗಿ ಅಭಿವೃದ್ಧಿಪಡಿಸಿ, ಅವುಗಳನ್ನು ವ್ಯವಸ್ಥಿತ ವಾಹನ ಪಾರ್ಕಿಂಗ್‌ಗಾಗಿ ಬಳಸಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.

ಬೀದಿ ದೀಪ ನಿರ್ವಹಣೆ: ಪಾಲಿಕೆಯ ವಿದ್ಯುತ್ ವಿಭಾಗದ ಅಧಿಕಾರಿಗಳು ಪ್ರತಿದಿನ ವಾರ್ಡ್‌ಗಳಲ್ಲಿ ಸಂಚರಿಸಿ ಬೀದಿ ದೀಪಗಳ ಸಮಸ್ಯೆಯನ್ನು ಸ್ಥಳದಲ್ಲೇ ಪರಿಹರಿಸಬೇಕು. ನಿರ್ವಹಣೆಯಲ್ಲಿ ವಿಫಲರಾದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲು ತಿಳಿಸಲಾಯಿತು.

ಕೆರೆ ಮತ್ತು ಪಾರ್ಕ್‌ಗಳ ಅಭಿವೃದ್ಧಿ: ಅಮೃತ್ ಯೋಜನೆಯಡಿ ಕೈಗೆತ್ತಿಕೊಂಡಿರುವ ಕೆರೆ ಹಾಗೂ ಉದ್ಯಾನವನಗಳ ಕಾಮಗಾರಿಗಳ ಪ್ರಸ್ತುತ ಸ್ಥಿತಿಗತಿಯ ವಿವರ ಪಡೆಯಲಾಯಿತು.

S.N. Channabasappa ನಗರೋತ್ಥಾನ ಯೋಜನೆ: NGT ಹಾಗೂ ಮಹಾತ್ಮ ಗಾಂಧಿ ನಗರೋತ್ಥಾನ ಯೋಜನೆಯ ಅಡಿಯಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲು ಅಧಿಕಾರಿಗಳಿಗೆ ತಾಕೀತು ಮಾಡಲಾಯಿತು.

ಸಭೆಯಲ್ಲಿ ಮಹಾನಗರ ಪಾಲಿಕೆಯ ಆಯುಕ್ತರಾದ ಶ್ರೀ ರಾಯಣ್ಣ ಗೌಡ ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

VISL Bhadravati ಮೃತ ವಿನೋದ ಕುಮಾರ್ ಕುಟುಂಬಸ್ಥರಿಗೆ, ಗುತ್ತಿಗೆದಾರರ ಕಡೆಯಿಂದ ₹8 ಲಕ್ಷ ಪರಿಹಾರ – ಶಾಸಕ ಬಿ.ಕೆ.ಸಂಗಮೇಶ್ವರ್

0

VISL Bhadravati ವಿ ಐ ಎಸ್ ಎಲ್ ಕಾರ್ಖಾನೆಯಲ್ಲಿ ಸೋಮವಾರ ಕ್ರೇನ್ ಮೂಲಕ ಸಾಮಗ್ರಿಗಳನ್ನು(ಬಿಲ್ಲೆಡ್) ಇಳಿಸುವ ಸಂದರ್ಭದಲ್ಲಿ ಕೇಬಲ್ ತುಂಡಾಗಿ ಸಂಭವಿಸಿದ ದುರದೃಷ್ಟಕರ ಅಪಘಾತದಲ್ಲಿ, ಭದ್ರಾವತಿ ಗುತ್ತಿಗೆ ಕಾರ್ಮಿಕ ಸಂಘದ ಮಾಜಿ ಉಪಾಧ್ಯಕ್ಷರಾದ ಶ್ರೀ ವಿನೋದ್ ಕುಮಾರ್ ಅವರು ತೀವ್ರವಾಗಿ ಗಾಯಗೊಂಡು ಮೃತಪಟ್ಟಿರುವ ಸುದ್ದಿ ಕೇಳಿ ಮನಸ್ಸಿಗೆ ತೀವ್ರ ನೋವುಂಟಾಗಿದೆ ಎಂದು ಭದ್ರಾವತಿ ಕ್ಷೇತ್ರದ ಶಾಸಕ ಬಿ.ಕೆ.ಸಂಗಮೇಶ್ವರ ಸಂತಾಪ ವ್ಯಕ್ತಪಡಿದ್ದಾರೆ.

ಈ ಸಂಬಂಧ ವಿನೋದ್ ರವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ವಿ ಐ ಎಸ್ ಎಲ್ ಕಾರ್ಖಾನೆಯ ಅಧಿಕಾರಿಗಳು ಮತ್ತು ಗುತ್ತಿಗೆ ಕಾರ್ಮಿಕರೊಂದಿಗೆ ಚರ್ಚಿಸಿ ಹಾಗೂ ಗುತ್ತಿಗೆದಾರರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಮೃತ ಗುತ್ತಿಗೆ ಕಾರ್ಮಿಕರ ಕುಟುಂಬದವರಿಗೆ ಸೂಕ್ತ ಪರಿಹಾರ ನೀಡಲು ಸೂಚಿಸಿದರು.

VISL Bhadravati ಕಾರ್ಮಿಕರ ಪರವಾಗಿ ಸದಾ ಧ್ವನಿಯೆತ್ತುತ್ತಿದ್ದ ವಿನೋದ್ ರವರ ಕುಟುಂಬದವರಿಗೆ ಅರ್ಥಿಕವಾಗಿ ಅನೂಕೂಲವಾಗುವ ಸಲುವಾಗಿ ಭಾರತೀಯ ಉಕ್ಕು ಪ್ರಾಧಿಕಾರದ ಉನ್ನತ ಅಧಿಕಾರಿಗಳ ಜೊತೆ ಮಾತನಾಡಿ, ಅವಲಂಬಿತರಿಗೆ ಶಾಶ್ವತ ಉದ್ಯೋಗ, ಗುತ್ತಿಗೆದಾರನ ಕಡೆಯಿಂದ ಮಾತನಾಡಿ 8 ಲಕ್ಷ ಪರಿಹಾರ ಕೊಡಿಸಿ ವೈಯಕ್ತಿಕವಾಗಿ ಹಣ ಸಹಾಯ ಮಾಡಿದ್ದಾರೆ. ಇದಲ್ಲದೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಮೂಲಕ (
ಸಿ.ಎಂ ಫಂಡ್ ನಲ್ಲಿ) ಗರಿಷ್ಠ ಹಣ ಕೊಡಿಸುವುದಾಗಿ ಶಾಸಕ ಸಂಗಮೇಶ್ವರ್ ಘೋಷಿಸಿದರು.

ಈ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲ್ಲೂಕು ಅಧ್ಯಕ್ಷ ಬಿ ಎಸ್ ಗಣೇಶ್, ವಿ ಐ ಎಸ್ ಎಲ್ ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ವಿ. ಐ ಎಸ್ ಎಲ್ ಕಾರ್ಖಾನೆಯ ಅಧಿಕಾರಿಗಳು ಮುಂತಾದವರು ಉಪಸ್ಥಿತರಿದ್ದರು.

Klive Special Article ಆನಂದವನದ ಆಧ್ಯಾತ್ಮಿಕ ಮೇರು- ಶ್ರೀಶೇಷಾಚಲ ಸದ್ಗುರು. ಲೇ: ಶ್ರೀವತ್ಸ ಪ್ರಸಾದ್ .ದಾವಣಗೆರೆ.

0

Klive Special Article “ನಮ್ರತೆಯ ಸಂತ – ಅಗಡಿ ಆನಂದವನದ ಶ್ರೀ ಶೇಷಾಚಲ ಸದ್ಗುರುಗಳು”
“ಸಾಧು ನೋಡೆಲೋ ಇವನು ಸಾಧು ನೋಡೆಲೋ | ವೇದತೀತ ವಾದತೀತ ನಾದತೀತ ಬ್ರಹ್ಮನೀತ || “ ಎಂದು ಸಂತ ಶಿಶುನಾಳ ಶರೀಫರು ಹಾಡುತ್ತಾರೆ. ಅದನ್ನು ಮುಂದುವರೆಸುತ್ತಾ “ಎಂಟು ಮದಗಳನ್ನು ತುಳಿದು ಕುಂಟನಾದನು”ಎಂದಾಗ ಒಮ್ಮೆ ಅರ್ಥಮಾಡಿಕೊಳ್ಳುವುದು ಕಠಿಣವಾಗುತ್ತದೆ. ಹೌದು! ಇದು ಅಗಡಿ ಆನಂದವನದ ಶ್ರೀ ಶೇಷಾಚಲ ಸದ್ಗುರು ಮಹಾರಾಜರನ್ನು ಕುರಿತು ಹಾಡಿದುದು.
ಅಗಡಿ ಇಂದಿನ ಹಾವೇರಿ ಜಿಲ್ಲೆಯಲ್ಲಿರುವ ಸಣ್ಣ ಹಳ್ಳಿ. ಅಲ್ಲಿ ಚಕ್ರವರ್ತಿ ರಾಮಭಟ್ಟ ಮತ್ತು ಲಕ್ಷ್ಮಿದೇವಿ ದಂಪತಿಗಳ ಜ್ಯೇಷ್ಠ ಪುತ್ರನಾಗಿ 1848 ರಲ್ಲಿ ಶೇಷಾಚಲನ ಜನನವಾಯ್ತು. ತಾತ ನರಸಿಂಹ ಭಟ್ಟರ ಜೊತೆಗೆ ಶೇಷಾಚಲನು ಬೆಳೆಯುತ್ತಿರುವಾಗ, ತಾತನವರು ಕಾಲವಶರಾದರು. ವೈದಿಕ ವಿದ್ಯಾ ಪ್ರವೀಣನಾಗಲಿ ಎಂದು ಇವರನ್ನು ವೇದಾಧ್ಯಯನಕ್ಕೆ ಕಳುಹಿಸಿದಾಗ ಎಲ್ಲವನ್ನೂ ಕಲಿತರೂ ಸಹಾ ಏನೂ ಅರಿಯದವನಂತಿರುತ್ತಿದ್ದ ಶೇಷಾಚಲನನ್ನು ಎಲ್ಲರೂ ಹೀಯಾಳಿಸುವರು, ಬೈಯ್ಯುವರು, ಮೂದಲಿಸುವರು. ಆದರೆ ಈ ಹುಡುಗ ಮಾತ್ರ ಯಾವುದಕ್ಕೂ ಕ್ರೋಧವಶನಾಗದೇ ಅತ್ಯಂತ ವಿಧೇಯತೆಯಿಂದ ನಗು ನಗುತ್ತಾ ಇರುತ್ತಿದ್ದ. ಅದು ಹುಟ್ಟಿದಾಗಿನಿಂದ ಸಮಸ್ಯೆಯಿತ್ತೋ ಅಥವಾ ಸಾಧನೆಯ ಸಂದರ್ಭದಲ್ಲಿ ಆಯಿತೋ ತಿಳಿಯದು ಶೇಷಾಚಲನು ಒಂದು ಕಾಲನ್ನು ಎಳೆದುಕೊಂಡು ಅಥವಾ ಸ್ವಲ್ಪ ಕುಂಟುತ್ತಾ ನಡೆಯುತ್ತಿದ್ದುದರಿಂದ ಅವನನ್ನು ʼಕುಂಟ ಶೇಷʼ ಎಂದು ಕೂಡಾ ಕರೆಯುತ್ತಾ ಜನರು ವಿಕೃತ ಸಂತೋಷಪಡುತ್ತಿದ್ದರು. ತಾತ ವೇದ-ವೇದಾಂತ ಸಂಪನ್ನ, ತಂದೆ ಅದ್ವಿತೀಯ ವೈದಿಕ ಶ್ರೇಷ್ಠರಾದರೆ ಮಗ ಮಂಕನಾಗಿದ್ದಾನೆ ಎಂದು ಬಂಧು-ಮಿತ್ರರೆಲ್ಲರೂ ಆಡುವ ಮಾತನ್ನು ಕೇಳಿ ಶೇಷನ ತಂದೆ ತಾಯಿಗಳಿಗೆ ಅತೀವ ದುಃಖವಾಗುತ್ತಿತ್ತು. ಆದರೆ ಅದನ್ನು ಮಗನೆದುರಿಗೆ ತೋರಿಸಿರಲಿಲ್ಲ. ಶೇಷಾಚಲನು ಮಾತ್ರ ತಂದೆಯೆಂದರೆ ಅತ್ಯಂತ ಭಕ್ತಿ ಕೈಲಾಗಲಿ ಬಿಡಲಿ ತಂದೆಗೆ ಸಹಾಯ ಮಾಡುವ ಪರಿಪಾಠ ಹೊಂದಿದ್ದನು. ಹೀಗಿರುವಾಗ ರಾಮಭಟ್ಟರೊಟ್ಟಿಗೆ ಶೇಷಾಚಲನೂ ಹೊರಟ. ಅಲ್ಲಿ ರಂಗೂತಾಯಿ ಎಂಬ ಹೆಂಗಸು ಮನಸೋ ಇಚ್ಛೆ ಶೇಷನನ್ನು ದಡ್ಡ, ಮೂರ್ಖ ಎಂದು ಹೀಯಾಳಿಸಿದಳು. ಆದರೂ ಶೇಷಾಚಲ ಬೇಸರ ಮಾಡಿಕೊಳ್ಳಲಿಲ್ಲ ಆದರೆ ಹೆತ್ತ ಕರುಳು ತಡೆಯಲು ಸಾಧ್ಯವೇ ? ತಾಯಿ ಲಕ್ಷ್ಮಮ್ಮನವರು “ಶೇಷಣ್ಣ ಇನ್ನೂ ಎಷ್ಟು ದಿನ ಈ ಮೌನ, ಎಷ್ಟು ದಿನ ಈ ತಮಾಷೆಯ ಕಾಲಹರಣ, ನೀನು ದೈವಾಂಶ ಸಂಭೂತ ಎಂದು ನಮಗಷ್ಟೇ ತಿಳಿದರೆ ಸಾಲದು, ನಿನ್ನ ಜ್ಞಾನಪ್ರಕಾಶತೆ ಜಗತ್ತಿಗೆ ತಿಳಿಯುವುದು ಯಾವಾಗ ?”ಎಂದು ಮಗನ ಮೈದಡವಿ ಕೇಳಿದಾಗಲೂ ಮಗನಿಂದ ಉತ್ತರವಿಲ್ಲ. ಕೆಲವೇ ದಿವಸಗಳಲ್ಲಿ ಮತ್ತೆ ಹಿಂದೆ ಅವಮಾನವಾದ ಸ್ಥಳದಲ್ಲಿಯೇ ಮತ್ತೊಂದು ವಿವಾಹ ಕಾರ್ಯಕ್ಕಾಗಿ ರಾಮಭಟ್ಟರೊಂದಿಗೆ ಶೇಷಾಚಲನೇ ಹೋದನು. ಆದರೆ ಈ ಬಾರಿ ಅಲ್ಲಿ ಯಾರಿಗೂ ಹೀಯಾಳಿಸುವ ಅವಕಾಶವೇ ದೊರೆಯದಾಯಿತು. ಬ್ರಹ್ಮಚಾರಿಯು ಅಸ್ಖಲಿತನಾಗಿ ಕಾರ್ಯಗಳನ್ನು ಮಾಡಿಸುತ್ತಿರುವಾಗ ಈ ಹಿಂದೆ ಹೀಯಾಳಿಸಿದ, ಚುಚ್ಚಿ ಮಾತನಾಡಿದ ರಂಗೂತಾಯಿಗೆ ಮಾತು ಬರದಂತಾಯಿತು ಬಾಲಕನ ಪೌಢಿಮೆ ಅವಳ ಕಣ್ಣುಗಳನ್ನು ತೆರೆಸಿ ಕಾರ್ಯಕ್ರಮವೆಲ್ಲ ಮುಗಿದಮೇಲೆ ಶೇಷಾಚಲ “ನೀನು ಮಾನವ ಮಾತ್ರನಲ್ಲ ಕಣಪ್ಪ,ನಿಜಕ್ಕೂ ಚಿದಂಬರನ ಅವತಾರ”ಎಂದು ಕಣ್ಣೀರಿಟ್ಟಳು. ಆಗಲೂ ಬಾಲಕನು ಮರು ಮಾತನ್ನಾಡದೇ ವಿನಮ್ರನಾಗಿ ಅವರ ಹೊಗಳಿಕೆಯನ್ನು ಬದಿಗಿರಿಸಿ ಊರಿಗೆ ಹೊರಟು ಬಂದ.
Klive Special Article ಮುಂದೆ ತಮ್ಮ 23-24ನೇ ವಯಸ್ಸಿನಲ್ಲಿ ಮರೋಳದ ಭೀಮರಾಯರ ಪುತ್ರಿ ತುಳಸೀದೇವಿಯವರೊಂದಿಗೆ ವಿವಾಹವಾಯಿತು. ಪತಿಗೆ ತಕ್ಕ ಪತ್ನಿ. ಯಾವುದರಲ್ಲಿಯೂ ಯಾವುದೇ ಕಿರಿಕಿರಿಯಿಲ್ಲ. ತಮ್ಮ ಮನೆಯ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದರು. ಶೀಘ್ರಕೋಪಿಗಳಂತೆ ಕಾಣುವ ತುಳಸೀದೇವಿಯವರು ಅಂತಃಕರಣದಿಂದ ಅತ್ಯಂತ ಕೋಮಲರಾಗಿದ್ದರು. ಚಿದಂಬರನ ಉಪಾಸಕರಾದ ಪತಿ-ಪತ್ನಿಯರು ಎಲ್ಲರಿಗೂ ಆದರ್ಶ ಪ್ರಾಯರಾಗಿದ್ದರು. ಸರಿ ಸಾಧುಗಳಿಗೆ ಪರೀಕ್ಷಾ ಸಮಯವೇನೋ ಎಂಬಂತೆ, ಆ ವರ್ಷ “ಡವಗಿಬರ” ಶುರುವಾಗಿ ಎಲ್ಲೆಡೆ ಹಾಹಾಕಾರವೆದ್ದಿತು. ಎಲ್ಲೆಂದರಲ್ಲಿ ಜನ ಸಾಯುತ್ತಿದ್ದಾರೆ, ಅದೆಷ್ಟೋ ಹೆಣಗಳಿಗೆ ಸಂಸ್ಕಾರವಿಲ್ಲ, ಎಲುಬು-ತಲೆಬುರುಡೆಗಳ ರಾಶಿ ರಾಶಿಗಳನ್ನು ಕಾಣುವಂತಹ ಪರಿಸ್ಥಿತಿ ಮೂಡಿತು. ರಾಮಭಟ್ಟರ ಕುಟುಂಬ ದೊಡ್ಡದು ಅಂದರೆ ಮನೆಯಲ್ಲಿ 10-15ಜನರಿದ್ದರು. ಪೂರ್ವ ಯೋಜನೆಯಂತೆ ಸಂಗ್ರಹಿಸಿದ ಧಾನ್ಯಗಳಿಂದ ಬರಗಾಲದ ಭೀಕರತೆ ಈ ಮನೆಯಲ್ಲಿ ಸ್ವಲ್ಪ ಕಡಿಮೆಯಿತ್ತು. ಪ್ರತಿದಿನ ಮಾಡಿದ ಅಡುಗೆಯನ್ನು ಸಮಪ್ರಮಾಣದಲ್ಲಿ ಮನೆಯ ಸದಸ್ಯರಿಗೆ ಹಂಚಿದಾಗೆ ಎಲ್ಲರೂ ಊಟ ಮಾಡಿದರೆ ಶೇಷಾಚಲ ಸದ್ಗುರುಗಳು ಮಾತ್ರ ತಮ್ಮ ಪಾಲಿಗೆ ಬಂದ ಅನ್ನದಲ್ಲಿ ಅರ್ಧವನ್ನು ಹಸಿದವರಿಗೆ ಅಥವಾ ಬಡವರಿಗೆ ಕೊಟ್ಟು ಉಳಿದದ್ದನ್ನು ಮಾತ್ರ ತಿನ್ನುತ್ತಿದ್ದರು. ಕೆಲವು ವರ್ಷಗಳ ನಂತರ ಬರದ ಛಾಯೆ ಕಡಿಮೆಯಾಗಲು ತೀರ್ಥ ಯಾತ್ರೆಗಾಗಿ ಹೊರಟು, ಉಡುಪಿ ಪರ್ಯಾಯವನ್ನು ಮುಗಿಸಿ ಶೃಂಗೇರಿಯ ಶಾರದಾಪೀಠಕ್ಕೆ ಬಂದರು. ಆಗ ಅಲ್ಲಿ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತಿ ಮಹಾಸ್ವಾಮಿಗಳವರು ಪೀಠಾಧ್ಯಕ್ಷರು. ಅವರ ಅನುಗ್ರಹವಾಗಬೇಕೆಂದು ಪ್ರತಿದಿನ ಶೇಷಾಚಲ ಮಹಾರಾಜರು ಮಹಾಸನ್ನಿಧಾನಂಗಳ ಊಟವಾದ ನಂತರ ಅವರು ಕೈಕಾಲು ತೊಳೆದುಕೊಂಡು ಹೋಗುತ್ತಿದ್ದರು. ಆ ಮಹಾತ್ಮರ ಪಾದೋದಕವನ್ನು ತಮ್ಮ ಮುಖ ಮೈಗಳಿಗೆ ಹಚ್ಚಿ ನಂತರ ಪ್ರಸಾದ ಸ್ವೀಕರಿಸುತ್ತಿದ್ದರು. ಹೀಗಿರುವಾಗ ಒಂದು ದಿನ ಇದ್ದಕ್ಕಿದ್ದಂತೆ ಮಹಾ ಸನ್ನಿಧಾನಂಗಳು ತಮ್ಮ ಪಕ್ಕದಲ್ಲಿ ಇನ್ನೊಂದು ಎಲೆಯನ್ನು ಹಾಕಿಸಿ ಅಲ್ಲಿ ಮಹಾರಾಜರನ್ನು ಕರೆಸಿ ಊಟಕ್ಕೆ ಕೂಡಿಸಿ ತಮ್ಮ ಎಲೆಯಲ್ಲಿಂದ ಮೂರು ತುತ್ತುಗಳನ್ನು ಪ್ರಸಾದ ರೂಪದಲ್ಲಿ ಅನುಗ್ರಹಿಸಿದರು. ಅದರ ನಂತರ ಅವರೇ ನೇರವಾಗಿ ಶೇಷಾಚಲ ಸಾಧುಗಳಿಗೆ ಉಪದೇಶ ನೀಡಿದರು. ಅಲ್ಲಿಂದ ಹೊರಟು ಹಲವಾರು ಪುಣ್ಯ ಕ್ಷೇತ್ರ ಸಂಚರಿಸುತ್ತಾ ಸಾಧುಗಳು ಅಗಡಿಗೆ ಬಂದರು. ಅಲ್ಲಿಂದ ಅವರ ಶಿಷ್ಯರ ಸಂಖ್ಯೆ ಬೆಳೆಯುತ್ತಾ ಹೋದಂತೆ ಲಿಂಗೂ ಭಗವಾನರು, ನಾರಾಯಣ ಭಗವಾನರು ಹಾಗೂ ಶಂಕರ ಭಗವಾನರು ಶೇಷಾಚಲ ಮಹಾರಾಜರ ಅಂತರಂಗ ಶಿಷ್ಯರಾದರು.
1910ರಲ್ಲಿ ಗಳಗನಾಥದಲ್ಲಿ ಶ್ರೀ ಬ್ರಹ್ಮಚೈತನ್ಯ ಗೋಂದವಲೇಕರ ಮಹಾರಾಜರ ದರ್ಶನವಾಯಿತು. ಸಂಜೆ ಶೇಷಾಚಲ ಮಹಾರಾಜರು ಬ್ರಹ್ಮ ಚೈತನ್ಯರನ್ನು ಕಂಡು ದೂರದಿಂದಲೇ ದೀರ್ಘದಂಡ ಸಾಷ್ಟಾಂಗ ನಮಸ್ಕಾರ ಮಾಡಿದರು. ಅವರನ್ನು ಕಂಡು ಸಂತೋಷದಿಂದ ನಮಸ್ಕರಿಸಿದರು. ಆಗ ಹೀಗೇಕೆ ಮಾಡುತ್ತಿರುವಿರಿ ಎಂದು ಕೇಳಲು ಬ್ರಹ್ಮಚೈತನ್ಯ ಮಹಾರಾಜರು “ಅರೇ ಅಲ್ಲಿ ಪ್ರತ್ಯಕ್ಷ ರಾಮನೇ ಕಣ್ಣೆದುರಿಗೆ ಬರಲು ನಮಸ್ಕರಿಸದೇ ಇರಲು ಹೇಗೆ ಸಾಧ್ಯ ?”ಎಂದು ನುಡಿದು ಶೇಷಾಚಲ ಸಾಧುಗಳನ್ನು ಮತ್ತೆ ಪ್ರೀತಿಯಿಂದ ಆಲಂಗಿಸಿಕೊಂಡು ಸುಮಾರು ಒಂದು ಒಂದೂವರೆಗಂಟೆ ಮಾತನಾಡಿ ನಂತರ ಬೀಳ್ಕೊಟ್ಟರು. ಇದರ ನಂತರದಲ್ಲಿ ಹುಬ್ಬಳ್ಳಿಯ ಸಿದ್ಧಾರೂಢ ಮಹಾಸ್ವಾಮೀಜಿಯವರು ಶೇಷಾಚಲ ಸಾಧುಗಳನ್ನು ಭೇಟಿಯಾಗುವ ಸಂದರ್ಭ ಬಂತು. ಹುಬ್ಬಳ್ಳಿಯ ಪ್ರಸಿದ್ಧ ವಕೀಲರಾದ. ರಾ.ರಾ.ಜೋಶಿಯವರ ಮಗಳ ಮದುವೆಗೆ ಶೇಷಾಚಲ ಮಹಾರಾಜರು ಹೋಗಿದ್ದರು. ಅಲ್ಲಿಗೆ ಮಹಾತ್ಮರಾದ ಸಿದ್ಧಾರೂಢರೂ ಸಹಾ ಬಂದು ಮುಹೂರ್ತದ ನಂತರ ಹಿಂತಿರುಗುವಾಗ ಶೇಷಾಚಲ ಮಹಾರಾಜರು ಅವರನ್ನು ಬೀಳ್ಕೊಡಲು ಬಂದು “ಮಹರಾಜ್‌ ತಮ್ಮ ದರ್ಶನದಿಂದ ಬಹಳ ಸಂತೋಷವಾಯ್ತು “ಎನ್ನಲು ಸಿದ್ಧಾರೂಢರು “ಸಾಧುಗಳೇ ತಮ್ಮ ಸಾಕ್ಷಾತ್ಕಾರ ಬಲದಿಂದ ಪರಬ್ರಹ್ಮನ ದರ್ಶನ ಪ್ರತಿನಿತ್ಯವೂ ಆಗುತ್ತಿರುವಾಗ ಈ ಜಡ ದೇಹದ ದರ್ಶನದಿಂದ ಸಂತೋಷವೇನು?”ಎಂದು ಮುಗುಳ್ನಕ್ಕರು. ಆಗ ಮಹಾರಾಜರು ಆರೂಢರಿಗೆ, ಅವರ ಎತ್ತು-ಗಾಡಿಗಳಿಗೆ, ಗಾಡಿಯ ಚಾಲಕನಿಗೆ ಎಲ್ಲರಿಗೂ ನಮಸ್ಕರಿಸಿ ಅವರನ್ನು ಬೀಳ್ಕೊಟ್ಟರು. ಇದೀಗ ಶೇಷಾಚಲ ಸಾಧುಗಳು ನಮಸ್ಕರಿಸಿದಾಗ ಆರೂಢರು ಪ್ರತಿನಮಸ್ಕರಿಸಲಿಲ್ಲ ಸಾಧುಗಳಿಗಿಂತಲೂ ಆರೂಢರು ಶ್ರೇಷ್ಠ ಎಂದು ತಮ್ಮೊಳಗೆ ಗುನುಗುತ್ತಿರುವುದು ಆರೂಢರ ಕಿವಿಗೆ ಬಿದ್ದು ಶಿಷ್ಯರಿಗೆ ತಿಳಿಸಿದರು “ ನೋಡಿದಿರಾ ಆ ಸಾಧು ತನ್ನ ನಮಸ್ಕಾರದಿಂದ ನಮ್ಮನ್ನು ಹೇಗೆ ಕಡೆಗಣಿಸಿದರು. ಅದಕ್ಕೆ ಶಿಷ್ಯರು “ಸಾಧುಗಳು ನಿಮಗೆ ಎರಡೆರಡು ಬಾರಿ ನಮಸ್ಕರಿಸಿದರಲ್ಲವೆ, ಅಂದಮೇಲೆ ಹೇಗೆ ಕಡೆಗಣಿಸಿದಂತಾಯಿತು ?”ಎನ್ನಲು ಆರೂಢರು “ನೋಡು, ನನಗೆ ಕೈ ಮುಗಿದರು ನಾನು ಪ್ರತಿ ನಮಸ್ಕರಿಸಲಿಲ್ಲ, ಎತ್ತು ಗಾಡಿಗಳಿಗೂ ನಮಸ್ಕರಿಸಿದರು ಅವೂ ಸುಮ್ಮನಿದ್ದವು, ಹಾಗಾದರೆ ಮನುಷ್ಯರೂ ಪಶುಗಳೂ ಒಂದೇ ಎಂಬಂತಾಗಲಿಲ್ಲವೇ ?” ಅದರರ್ಥ ಇಷ್ಟೇ ಪ್ರತಿ ಜೀವಿಯೂ ಪರಬ್ರಹ್ಮ ಸ್ವರೂಪ. ಸಾಧುಗಳು ಸಾಧುತನದಿಂದ ಮತ್ತು ಆರೂಢರು ಆರೂಢತನದಿಂದ ನಡೆದುಕೊಂಡರು. ಹೀಗಾಗಿ ಇಬ್ಬರೂ ದೊಡ್ಡವರೇ. ಅಜ್ಞಾನಿಗಳಾದವರು ಆಕ್ಷೇಪಿಸುತ್ತಾರೆ. ಎಂದು ತಿಳಿಸಿದರು.
ಇದೇರೀತಿ ತಮ್ಮ ಕೈಂಕರ್ಯಗಳನ್ನು ಅತ್ಯಂತ ನಮ್ರತೆಯಿಂದ ಯಾರಿಗೂ ಕೇಡು ಬಯಸದೇ, ನೋವು ಮಾಡದೇ ತುಚ್ಛವಾಗಿ ಕಾಣದೇ “ಸಾಧು” ಎಂದರೆ ಶೇಷಾಚಲ ಸಾಧು ಎಂದು ಪ್ರತಿಯೊಬ್ಬರ ಬಾಯಿಂದ ಕರೆಸಿಕೊಂಡು ನಂತರ ಎಲ್ಲವನ್ನೂ ಎಲ್ಲರನ್ನೂ ಈಶ್ವರ ಸ್ವರೂಪ ಎಂದು ಭಾವಿಸಿ ಮಕ್ಕಳಾಗಲಿ-ದೊಡ್ಡವರಾಗಲಿ, ಬುದ್ಧಿವಂತ-ದಡ್ಡ, ವಿವೇಕಿ-ಅವಿವೇಕಿ, ಗಂಡು-ಹೆಣ್ಣು ಎಲ್ಲರನ್ನೂ ಸಮಭಾವದಿಂದ ತಾಯಿ, ಮಹಾರಾಜ ಎಂದು ಸಂಬೋಧಿಸಿ ಜಗತ್ತಿಗೆ ವಿನಯ ಶೀಲತೆಯ ಪ್ರಭಾವ ತೋರಿಸಿದ ಈ ಸಾಧುಗಳನ್ನು ಏನೆಂದು ಹೆಸರಿಸಲು ಸಾಧ್ಯ ? ಸಂತರಾದವರಿಗೆ ಚಮತ್ಕಾರಗಳು ಮುಖ್ಯವಲ್ಲ ಮನುಕುಲದ ಉದ್ಧಾರವೇ ಮೂಲ ಧ್ಯೇಯ ಎಂಬುದು ಇವರ ಜೀವನದ ಉದ್ದೇಶವಾಗಿತ್ತು. ಹಾಗೂ “ವಿದ್ಯಾ ದದಾತಿ ವಿನಯಂ ವಿನಯಾದ್ಯಾತಿ ಪಾತ್ರತಾಂ” ಎಂಬ ಉಕ್ತಿಗೆ ಜ್ವಲಂತ ಉದಾಹರಣೆ ನಾವು ಶೇಷಾಚಲ ಸಾಧುಗಳನ್ನು ಕಾಣಬಹುದು. ತಮ್ಮ ವಿನಯದಿಂದಲೇ ಜಗತ್ತಿಗೆ ಆದರ್ಶವಾದವರು. ಎಲ್ಲ ವಿದ್ಯೆಯೂ ತಮ್ಮಲ್ಲರುವಾಗ ಕಾಮ, ಕ್ರೋಧ, ಮೋಹ, ಲೋಭ, ಮದ-ಮತ್ಸರಗಳೆಂಬ ಅಹಂಕಾರವನ್ನು ತುಳಿದು ಕುಂಟನಾನಾದನು ಎಂದು ಶರೀಫ ಸಾಹೇಬರು ಹಾಡಿದ್ದುದರಲ್ಲಿ ಯಾವುದೇ ಉತ್ಪ್ರೇಕ್ಷೆಯಿಲ್ಲ.
ನಂತರ ಗಳಗನಾಥರಿಗೆ ಗುರುಗಳ ಆದೇಶವಾಗಿ ಸಂಸ್ಕೃತ ಪಾಠಶಾಲೆ ಪ್ರಾರಂಭವಾಯಿತು. ಗೋ-ರಕ್ಷಣಗೆಗಾಗಿ ಗೋಶಾಲೆ ಪ್ರಾರಂಭವಾಯಿತು. ಪಾಠಶಾಲೆಯ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆಗಾಗಿ “ಮುಷ್ಠಿಭಿಕ್ಷಾ”ಅಂದರೆ ಭಕ್ತರು ತಮ್ಮ ಮನೆಯಲ್ಲಿ ಒಂದು ಸಣ್ಣ ಕೈಚೀಲವನ್ನಿರಿಸಿ ಪ್ರತಿದಿನ ಅದಕ್ಕೆ ಒಂದು ಹಿಡಿ ಅಕ್ಕಿಯನ್ನು ಹಾಕಬೇಕು ಮತ್ತು ಪ್ರತಿ ತಿಂಗಳಲ್ಲಿ ನಿರ್ದಿಷ್ಟ ದಿನದಂದು ಅದನ್ನು ಆನಂದವನಕ್ಕೆ ತಂದು ನೀಡಬೇಕು. ಈ ಪದ್ದತಿಯನ್ನು ನಾವು ಈಗಲೂ ಕಾಣಬಹುದಾಗಿದೆ. ಅದರಂತೆ ಹತ್ತು ಸಾವಿರ ಜನರು ಒಮ್ಮೆ ಊಟ ಮಾಡಲು ಅನುಕೂಲವಾಗುವಂತಹ ʼಅನ್ನಬ್ರಹ್ಮʼ ಎಂಬ ದಾಸೋಹ ಭವನವಿದೆ. ಅಗಡಿಯಲ್ಲಿ ಒಂದು ವಾರಗಳ ಕಾಲ ಗುರುಗಳ ಜಯಂತಿಯ ಸಂದರ್ಭ ಸದಾ ಸಂತರ್ಪಣೆಯಿರುತ್ತದೆ. ಸಾವಿರ ಸಾವಿರ ಭಕ್ತರು ಬಂದು ಸೇರುತ್ತಾರೆ. ಇವರ ಮುಮ್ಮಗ ಶ್ರೀ ಚಿದಂಬರ ಮೂರ್ತಿ ಚಕ್ರವರ್ತಿಗಳೂ ಕೂಡ ಶೇಷಾಚಲ ಮಹಾರಾಜರ ಸಂಪ್ರದಾಯದಂತೆ ಆಶ್ರಮದ ದೇಖ-ರೇಖಿ ನೋಡಿಕೊಂಡು ಬಂದರು. ಪ್ರಸ್ತುತ ಆಶ್ರಮದಲ್ಲಿ ಯಾವುದೇ ಕೈಂಕರ್ಯಗಳು ನಿಂತಿಲ್ಲ ಗುರುನಾಥನ ಆಶಯದಂತೆ ಅವನ ಆಶೀರ್ವಾದದಿಂದ ಎಲ್ಲವೂ ನಡೆಯುತ್ತಿದೆ. ಪ್ರತಿಯೊಬ್ಬರೂ ನೋಡಲೇಬೇಕಾದ ತಾಣ ಅದು ಅಗಡಿಯ ಆನಂದವನ. ಪ್ರತಿಯೊಂದು ಮಗುವಿಗೂ ಸಹಾ ಶೇಷಾಚಲ ಮಹಾರಾಜರ ಪರಿಚಯವಾಗಬೇಕು. ಅವರ ಆದರ್ಶಗಳು ಎಲ್ಲರಿಗೂತ ತಿಳಿಸಬೇಕು ಎಂಬುದು ಈ ಲೇಖನದ ಉದ್ದೇಶವಾಗಿದೆ. ಈ ಮಹಾತ್ಮರ ಬಗ್ಗೆ ನಾನು ತೃಪ್ತಿಯಾಗುವಷ್ಟು ಹೇಳಿಬಿಡುವೆ ಎನ್ನಲು ಸಾಧ್ಯವಿಲ್ಲ. ಏಕೆಂದರೆ ಸಮುದ್ರದ ಮುಂದೆ ನಿಂತು ಈ ನೀರೆಲ್ಲವೂ ನನ್ನದೇ ಎಲ್ಲವನ್ನೂ ಕುಡಿದುಬಿಡುತ್ತೇನೆ ಎಂದು ಸಾಹಸ ಮಾಡಿದಂತಾಗಬಹುದು. ದೊಡ್ಡ ಆನೆಯನ್ನು ಕನ್ನಡಿಯಲ್ಲಿ ಹಿಡಿದಿಡುವ ಪ್ರಯತ್ನ ಮಾಡಿರುವ ಈ ಬಾಲಕನಿಗೆ ಪ್ರೋತ್ಸಾಹವಿರಲಿ. ತಪ್ಪುಗಳಿದ್ದಲ್ಲಿ ತಮ್ಮ ಅನಿಸಿಕೆಗಳನ್ನು-ಅಭಿಪ್ರಾಯಗಳನ್ನು ವೈಯಕ್ತಿಕವಾಗಿ ಮೊಬೈಲ್‌ ಕರೆಯ ಮೂಲಕವೋ ಅಥವಾ ಇ-ಮೇಲ್‌ ಮೂಲಕವೋ ದಯವಿಟ್ಟು ತಿಳಿಸಿ.

ಗೋವನ್ನು ಕಾಪಾಡುವುದು ಪ್ರತಿಯೊಬ್ಬ ಹಿಂದುವಿನ ಕರ್ತವ್ಯ- ಜೆ.ಎಸ್.ಚಿದಾನಂದ ಗೌಡ

0

ಗೋಮಾತೆಯ ಗೌರವದ ಅಭಿಯಾನದ ಅಂಗವಾಗಿ ಪಟ್ಟಣದಲ್ಲಿ ಗೋ ಸಂರಕ್ಷಣಾ ಹೋರಾಟ ಸಮಿತಿ ನೇತೃತ್ವದಲ್ಲಿ ಸೋಮವಾರ ಪಟ್ಟಣದ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಮುಖಾಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಗೋ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ ಮಾತನಾಡಿ, ಗೋವು ಭಾರತೀಯ ಸಂಸ್ಕೃತಿಯಲ್ಲಿ ಪೂಜ್ಯ ಸ್ಥಾನ ಹೊಂದಿದ್ದು, ಕೃಷಿ ಹಾಗೂ ಗ್ರಾಮೀಣ ಆರ್ಥಿಕತೆಯ ಪ್ರಮುಖ ಭಾಗವಾಗಿದೆ. ಹಾಲು, ಗೊಬ್ಬರ, ಗೋಮೂತ್ರ ಸೇರಿದಂತೆ ಹಲವು ರೀತಿಯಲ್ಲಿ ಮಾನವ ಜೀವನಕ್ಕೆ ಉಪಯುಕ್ತವಾಗಿರುವ ಗೋವುಗಳನ್ನು ಕಾಪಾಡುವುದು ಪ್ರತಿಯೊಬ್ಬ ಹಿಂದುವಿನ ಕರ್ತವ್ಯವಾಗಿದೆ ಎಂದರು.

ಗೋಮಾತೆಯನ್ನು ರಾಷ್ಟ್ರ ಮಾತೆಯೆಂದು ಘೋಷಿಸಬೇಕು. ಗೋ ಸೇವೆಗೆ ಸಂಬಂಧಿಸಿದಂತೆ ಕೇಂದ್ರಿಯ ಮಟ್ಟದಲ್ಲಿ ಸಮಗ್ರ ಕಾನೂನು ಜಾರಿಗೆ ತರಬೇಕು ಹಾಗೂ ದೇಶದಾದ್ಯಂತ ಗೋಹತ್ಯೆಯನ್ನು ಸಂಪೂರ್ಣ ನಿಷೇಧಿಸಬೇಕು ಎಂದು ಒತ್ತಾಯಿಸಿದರು.

ಗೋ ಹತ್ಯೆಯಲ್ಲಿ ತೊಡಗಿದವರಿಗೆ ಜೀವಾವಧಿ ಶಿಕ್ಷೆ ನೀಡಬೇಕು. ಗೋ ಸಾಗಾಣೆಯಲ್ಲಿ ತೊಡಗುವ ವಾಹನಗಳನ್ನು ಶಾಶ್ವತವಾಗಿ ಮುಟ್ಟುಗೋಲು ಹಾಕಬೇಕು. ಪ್ಲಾಸ್ಟಿಕ್ ಕವರ್‌ಗಳ ಬಳಕೆಯನ್ನು ಕಡ್ಡಾಯವಾಗಿ ನಿಷೇಧ ಹೇರಬೇಕು. ಪ್ರಾಣಿಗಳ ಜಾತ್ರೆಯ ಹೆಸರಲ್ಲಿ ನಡೆಯುವ ಅಕ್ರಮ ಗೋ ಸಾಗಾಣೆ ನಿಯಂತ್ರಿಸಲು ಕೇಂದ್ರದಿಂದ ಕಾನೂನು ರೂಪಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಇದಕ್ಕೂ ಮೊದಲು ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಗೋ ಹತ್ಯೆ ನಿಷೇಧಕ್ಕೆ ಆಗ್ರಹಿಸಿ ಸಹಿ ಸಂಗ್ರಹ ಮಾಡಲಾಯಿತು.

ಸಮಿತಿಯ ಗೌರವಾಧ್ಯಕ್ಷ ಕೆ.‌ಪ್ರಭಾಕರ್ ರಾಯ್ಕರ್, ಪ್ರಧಾನ ಕಾರ್ಯದರ್ಶಿ ವೀರೇಂದ್ರ ಗೌಡ ಜೇಡಗೇರಿ,ಉಪಾಧ್ಯಕ್ಷ ಶರತ್ ಸ್ವಾಮಿ, ಬಸವರಾಜಪ್ಪ, ರಾಜಣ್ಣ ನಡಹಳ್ಳಿ, ಶಿವನಗೌಡ, ಸುಧೀರ್ ಭಟ್, ಹಾಲಪ್ಪ ಗೌಡ, ಮಂಜುನಾಥ ಆರೇಕೊಪ್ಪ, ಸತೀಶ್, ಸೈಯದ್ ಶಫೀವುಲ್ಲಾ, ಸುರೇಶ್ ನಡಹಳ್ಳಿ, ಚಂದ್ರು ಪಾಟೀಲ್ ಸೇರಿದಂತೆ ಇತರರಿದ್ದರು

Nalanda Chess Academy ನಳಂದಾಚೆಸ್ ಅಕಾಡೆಮಿಯಿಂದ ಚೆಸ್ ಬೇಸಿಕ್ ಸಮ್ಮರ್ ಕ್ಯಾಂಪ್

0

Nalanda Chess Academy ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯಲ್ಲಿರುವ ನಳಂದಾ ಚೆಸ್ ಅಕಾಡೆಮಿಯಿಂದ ಮೇ. 01 ರಿಂದ 10 ರವರೆಗೆ ಬೇಸಿಕ್ ಸಮ್ಮರ್ ಚೆಸ್ ಕ್ಯಾಂಪ್‌ನ್ನು (ಆರಂಭಕ್ಕೆ ಚೆಸ್ ಕಲಿಯಲು ಬಯಸುವವರಿಗೆ) ಪ್ರತಿದಿನ ಬೆಳಿಗ್ಗೆ 9:30ರಿಂದ 11 ಹಾಗೂ ಸಂಜೆ 5:15ರಿಂದ 6;15 ರವರೆಗೆ ಉನ್ನತ ಚೆಸ್ ತರಬೇತಿ ಶಿಬಿರ ನಡೆಯಲಿದೆ.
ಮೇ 02 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 01 ರವರೆಗೆ ಸಂಜೆ 3;30 ರಿಂದ 5ಗಂಟೆವರೆಗೆ ಆರ್ಟ್ ಕ್ರಾಫ್ಟ್, ನೃತ್ಯ, ಗುಂಪು ಹಾಡು, ಸಂಸ್ಕೃತ ಚಟುವಟಿಕೆಗಳು ಅಂದು ಬೆಳಿಗ್ಗೆ 11ರಿಂದ 12;.30 ಹಾಗೂ 01 ರವರೆಗೆ ನಡೆಯಲಿವೆ. ಮಾಹಿತಿಗೆ ಹಾಗೂ ಹೆಸರು ನೊಂದಾಯಿಸಲು ಮೊ. 9844436276, 9945809662, 9916910411ರಲ್ಲಿ ಸಂಪರ್ಕಿಸಿ.

ಎನ್.ಸಿ.ವಿ‌.ಟಿ. ಯೋಜನೆಯಡಿ ಐಟಿಐ ಪ್ರವೇಶಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ

0

ಶಿವಮೊಗ್ಗ ಜಿಲ್ಲಾ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯು ಭದ್ರಾವತಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿನ ವಿವಿಧ ವೃತ್ತಿಗಳಿಗೆ 2026-27ನೇ ಸಾಲಿನ ಎನ್.ಸಿ.ವಿ.ಟಿ. ಯೋಜನೆಯಡಿ ಐಟಿಐ ಪ್ರವೇಶಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಎಸ್.ಎಸ್.ಎಲ್.ಸಿ. ಪಾಸ್/ಫೇಲ್ ಆದ ವಿದ್ಯಾರ್ಥಿಗಳು ವೆಬ್‌ಸೈಟ್ www.cite.karnataka.gov.in ಮೂಲಕ ಮೇ 09 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08282-200080/ 9980129595/ 9880085914 ಗಳನ್ನು ಸಂಪರ್ಕಿಸುವುದು

ಶಿವಮೊಗ್ಗದ ಪಿಯು ಪರೀಕ್ಷೆ ಟಾಪರ್ಸ್ ಗೆ ಸದ್ಭಾವನಾ ಟ್ರಸ್ಟಿನಿಂದ ಅಭಿನಂದನೆ ಕಾರ್ಯಕ್ರಮ

0

ಛಲವಿದ್ದರೆ ಜೀವನದಲ್ಲಿ ಸಾಧನೆ ಸಾಧ್ಯ. ಸಾಧನೆಗೆ ಏನೇನು ಬೇಕೋ ಅದೆಲ್ಲವೂ ನಮ್ಮೊಳಗೇ ಇದೆ. ನಾವು ಪ್ರಯತ್ನ ಪಡಬೇಕು ಎಂದು ಸದ್ಭಾವನ ಟ್ರಸ್ಟ್‌ನ ಅಧ್ಯಕ್ಷರು, ಕಾಂಗ್ರೆಸ್‌ನ ಮುಖಂಡ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ. ಶ್ರೀಕಾಂತ್ ಹೇಳಿದರು.
ಅವರು ಇಂದು ಬೆಳಗ್ಗೆ ಸದ್ಭಾವನ ಟ್ರಸ್ಟ್‌ನಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಬೃಂದಾ 590(98.33) , ರಂಜಿತಾ ಜಿ. 596(99.33), ವಶಿಷ್ಟ ಎನ್.ಎಸ್. 595 (99.17), ಮಹಿನ್ ಖಾನಂ ಆಫ್ರಿದಿ 596 (99.33) ಹಾಗೂ ಸೋನಿಯಾ ಅವರ ಮನೆಗೆ ಭೇಟಿ ನೀಡಿ ಅಭಿನಂದಿಸಿ ಮಾತನಾಡಿದರು.
ಸಾಧನೆ ಮಾಡಿದವರನ್ನು ಗುರುತಿಸಿ ಶುಭಹಾರೈಸುವುದರ ಜೊತೆಗೆ ಸನ್ಮಾನಿಸಿ ಪ್ರೇರಣೆ ನೀಡಿದರೆ ಅವರು ಇನ್ನಷ್ಟು ಸಾಧನೆ ಮಾಡಲು ಸಾಧ್ಯವಾಗುತ್ತದೆ. ಉತ್ತಮವಾಗಿ ಅಧ್ಯಯನ ಮಾಡಿ ಉನ್ನತ ಹುದ್ದೆ ಅಲಂಕರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ಯಮುನಾ ರಂಗೇಗೌಡ, ಶಿವಮೊಗ್ಗ ಯುವ ಕಾಂಗ್ರೆಸ್ ಮುಖಂಡ ವಿನಯ್ ತಾಂದ್ಲೆ, ತಾಲೂಕು ಗ್ಯಾರಂಟಿ ಸಮಿತಿಯ ಸದಸ್ಯ ಬಸವರಾಜ ಹಾಗೂ ಮಂಜುನಾಥ್ ನವುಲೆ, ಜಿಲ್ಲಾ ಅಲೆಮಾರಿ ನಿಗಮದ ಅನುಷ್ಠಾನ ಸಮಿತಿಯ ಸದಸ್ಯ ಸಂದೀಪ್, ಶಿವಕುಮಾರ್, ಅನಿಲ್ ಆಚಾರ್, ಭರತ್, ಅವಿನಾಶ್, ಕುರುವಳ್ಳಿ ನಾಗರಾಜ್ ಆರೋಗ್ಯ ಸ್ಥಾಯಿ ಸಮಿತಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.