Jawaharlal Nehru New Engineering College ಜವಾಹರಲಾಲ್ ನೆಹರು ನ್ಯೂ ಎಂಜಿನಿಯರಿಂಗ್ ಕಾಲೇಜು (ಜೆಎನ್ಎನ್ಸಿಇ), ಶಿವಮೊಗ್ಗ, ಕನ್ನಡ ರಾಜ್ಯೋತ್ಸವವನ್ನು ಕನ್ನಡದ ಮಹಾನ್ ಸಾಂಸ್ಕೃತಿಕ ವೈಭವ ಮತ್ತು ಕನ್ನಡತನ ಮೌಲ್ಯಗಳ ಸ್ಮರಣೆ ಚಿಂತನೆಗಳಿಂದಿಗೆ ಆಚರಿಸಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ, ಪ್ರಸಿದ್ಧ ಚಿಂತಕ, ರಂಗಭೂಮಿ ಕಾರ್ಯಕರ್ತ, ಚಲನಚಿತ್ರ ನಿರ್ದೇಶಕ ಡಾ. ಸಾಸ್ವೇಹಳ್ಳಿ ಸತೀಶ್ ಅವರು ಆಗಮಿಸಿದ್ದರು. ಡಾ. ಸಾಸ್ವೇಹಳ್ಳಿ ಸತೀಶ್ ತಮ್ಮ ಭಾಷಣದಲ್ಲಿ, ಕನ್ನಡನಾಡು – ಕನ್ನಡ ಸಂಸ್ಕೃತಿಯಲ್ಲಿ ಹುದುಗಿರುವ ಜೀವನ ಮೌಲ್ಯಗಳ ಬಗ್ಗೆ ಮಾತನಾಡಿದರು. ಅವರು ಕನ್ನಡತನದ ಮೂಲಸಾರ ಸರಳತೆ ಎಂಬುದನ್ನು ಒತ್ತಿ ಹೇಳಿದರು. ಐತಿಹಾಸಿಕವಾಗಿ ನಮ್ರತೆ, ಸಮಗ್ರತೆ, ಒಳಗೊಳ್ಳುವಿಕೆ , ಸಾಮಾಜಿಕ ಸಾಮರಸ್ಯ ಕನ್ನಡತನದಲ್ಲಿ ಹಾಸುಹೊಕ್ಕಾಗಿರುವುದನ್ನು ವಿವರಿಸಿದರು. ಕನ್ನಡ ಶಿಕ್ಷಣ, ಸಂಸ್ಕೃತಿ ಮತ್ತು ಸಾಮಾಜಿಕ ಪ್ರಜ್ಞೆಯ ಬೇರುಗಳನ್ನು ಬಲಪಡಿಸಿದ NES (ನ್ಯಾಷನಲ್ ಎಜುಕೇಶನ್ ಸೊಸೈಟಿ) ಯ ಸ್ಥಾಪಕ ಸದಸ್ಯರಾದ ಈಸೂರು ಚಳುವಳಿಯ ಭಾಗವಾಗಿದ್ದ ದಿವಂಗತ ಶ್ರೀ ನಾಗಪ್ಪಶೆಟ್ಟಿ, ದಿವಂಗತ ಶ್ರೀ ದಿನಕರ್ ಮುಂತಾದವರ ಕೊಡುಗೆಗಳನ್ನು ಅವರು ಸ್ಮರಿಸಿದರು. ಅವರ ಆದರ್ಶಗಳು JNNCE ಯಂತಹ ಸಂಸ್ಥೆಗಳಿಗೆ ಮಾರ್ಗದರ್ಶನ ನೀಡುತ್ತಲೇ ಇರುತ್ತವೆ ಎಂದು ಅವರು ಹೇಳಿದರು. ಮುಂದುವರೆಯುತ್ತಾ, ಡಾ. ಸತೀಶ್ ಕನ್ನಡ ಮಾತನಾಡಿದಾಗ ಮಾತ್ರ ಕನ್ನಡ ಬೆಳೆಯುತ್ತದೆ ಎಂದು ಒತ್ತಿ ಹೇಳಿದರು. ಕನ್ನಡದ ಶಕ್ತಿ ಸ್ನೇಹಪರತೆ ಮತ್ತು ಹೊರಗಿನವರನ್ನು ಸಹ ಮುಕ್ತ ತೋಳುಗಳಿಂದ ಸ್ವಾಗತಿಸುವ ಸಾಮರ್ಥ್ಯದಲ್ಲಿದೆ ಎಂದು ಅವರು ಗಮನಿಸಿದರು – ಇದು ಕರ್ನಾಟಕದ ಇತಿಹಾಸದುದ್ದಕ್ಕೂ ಕಂಡುಬರುವ ಸಂಪ್ರದಾಯ. ಪರಂಪರೆ, ಸಾಹಿತ್ಯ ಮತ್ತು ಮಾನವೀಯ ಮೌಲ್ಯಗಳಲ್ಲಿ ನೆಲೆಗೊಂಡಿರುವ ಆಳವಾದ ಸಾಂಸ್ಕೃತಿಕ ಗುರುತಾದ ಕನ್ನಡವು “ಅಸ್ಮಿತೆ”ಯನ್ನು ಹೊಂದಿದೆ ಎಂದು ಅವರು ಪ್ರೇಕ್ಷಕರಿಗೆ ನೆನಪಿಸಿದರು. ಬದಲಾಗುತ್ತಿರುವ ಕಾಲದ ಹೊರತಾಗಿಯೂ, ಕನ್ನಡವು ಎಂದಿಗೂ ಅಳಿಯದ ಭಾಷೆಯಾಗಿದ್ದು, ಅದರ ಭಾಷಿಕರ ಪ್ರೀತಿ ಮತ್ತು ಬದ್ಧತೆಯಿಂದಾಗಿ ನಿರಂತರವಾಗಿ ವಿಕಸನಗೊಳ್ಳುತ್ತಿದೆ ಮತ್ತು ಅಭಿವೃದ್ಧಿ ಹೊಂದುತ್ತಿದೆ ಎಂದು ಅವರು ದೃಢಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು JNNCE ಯ ಪ್ರಾಂಶುಪಾಲರಾದ ಡಾ. ವೈ. ವಿಜಯಕುಮಾರ್ ವಹಿಸಿದ್ದರು. ಅವರು ಅರ್ಥಪೂರ್ಣ ಆಚರಣೆಯನ್ನು ಆಯೋಜಿಸಿದ್ದಕ್ಕಾಗಿ ಸಾಂಸ್ಕೃತಿಕ ಸಮಿತಿಯನ್ನು ಶ್ಲಾಘಿಸಿದರು. Jawaharlal Nehru New Engineering College ಐತಿಹಾಸಿಕ ಮತ್ತು ನೈತಿಕ ಅಡಿಪಾಯಗಳು. ಅವರು ವಿದ್ಯಾರ್ಥಿಗಳು ನಮ್ರತೆ, ಗೌರವ ಮತ್ತು ಸಾಂಸ್ಕೃತಿಕ ಹೆಮ್ಮೆಯ ಮೌಲ್ಯಗಳನ್ನು ಮುಂದುವರಿಸಲು ಪ್ರೋತ್ಸಾಹಿಸಿದರು. ಕಾರ್ಯಕ್ರಮದಲ್ಲಿ ನಡೆದ ವಿವಿಧ ಸ್ಪರ್ಧೆಗಳಿಗೆ ಬಹುಮಾನ ವಿತರಣೆ ಮಾಡಲಾಯಿತು . ಈ ಕಾರ್ಯಕ್ರಮದಲ್ಲಿ ಆರ್ & ಡಿ ಡೀನ್ ಡಾ. ಎಸ್. ವಿ. ಸತ್ಯನಾರಾಯಣ ಮತ್ತು ಡಾ. ಶಶಿಕಿರಣ್, ಸಾಂಸ್ಕೃತಿಕ ಸಮಿತಿ ಸಂಯೋಜಕರು ಉಪಸ್ಥಿತರಿದ್ದರು.
Jawaharlal Nehru New Engineering College ಕನ್ನಡತನದ ಮೂಲಸಾರ ಸರಳತೆ- ಡಾ.ಸಾಸ್ವೆಹಳ್ಳಿ ಸತೀಶ್
Adichunchanagiri ಡಿಸೆಂಬರ್ 12. ಕಾಲಭೈರವಾಷ್ಟಮಿ. ರಾಜ್ಯಮಟ್ಟದ ಭಜನಾ ಮೇಳ
Adichunchanagiri ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ
ಡಿ.12ಕ್ಕೆ ಕಾಲಭೈರವಾಷ್ಟಮಿ ಪ್ರಯುಕ್ತ ಭೈರವಮಾಲೆ ಜೋಗಿ ದೀಕ್ಷೆ, ರಾಜ್ಯಮಟ್ಟದ ಭಜನಾ ಮೇಳ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಳನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಸಾನಿಧ್ಯವಹಿಸಲಿದ್ದು, ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ದಿವ್ಯ ಉಪಸ್ಥಿತಿವಹಿಸುವರು.
ಅಂದು ನಾಡಿನ ಗಣ್ಯರು, ಜನಪ್ರತಿನಿಧಿಗಳು, ವಿವಿಧ ಶಾಖಾ ಮಠದ ಶ್ರೀಗಳು ಭಾಗವಹಿಸುವರು.
ಅಂದು ಬೆಳಗ್ಗೆ 6 ಗಂಟೆಗೆ ಕ್ಷೇತ್ರಾಧಿ ದೇವತೆಗಳ ಅಭಿಷೇಕ ಸೇರಿದಂತೆ ವಿವಿಧ ಪೂಜಾ ಮಹೋತ್ಸವಗಳು ಜರುಗಲಿದ್ದು, ಪೂಜ್ಯ ಮಹಾಸ್ವಾಮಿ ಅವರ ಅಮೃತಹಸ್ತದಿಂದ ಜೋಗಿ ದೀಕ್ಷೆಯನ್ನು ನೀಡಲಾಗುವುದು. 10 ಗಂಟೆಗೆ ಬಿಜಿಎಸ್ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಸಲಾಗುವುದು. ಈ ಪವಿತ್ರ ದಿನದಂದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರಲಾಗಿದೆ.
Adichunchanagiri ಶ್ರೀಕ್ಷೇತ್ರ ಆದಿಚುಂಚನಗಿರಿಯಲ್ಲಿ ಭಜನಾ ಮೇಳವನ್ನು ಆಯೋಜನೆ ಮಾಡಲಾಗಿದ್ದು, ಭಾಗವಹಿಸಲು ಆಸಕ್ತಿ ಹೊಂದಿರುವವರು ಡಿ.12ರ ಶುಕ್ರವಾರ ಬೆಳಗ್ಗೆ 7.30ಕ್ಕೆ ಹೆಸರು ನೋಂದಾಯಿಸಿಕೊಳ್ಳಬೇಕು. ಒಂದು ತಂಡದಲ್ಲಿ ಕನಿಷ್ಠ 8 ರಿಂದ 12 ಜನ ಭಾಗವಹಿಸಲು ಅವಕಾಶವಿರಲಿದ್ದು, ಭಾಗವಹಿಸುವವರು ಭಜನಾ ಪರಿಕರಗಳೊಂದಿಗೆ ಹಾಜರಿರಬೇಕು. ಭಜನೆ ಹಾಡಲು 8 ನಿಮಿಷ ಅವಕಾಶವಿದ್ದು, ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಪ್ರಥಮ ಬಹುಮಾನವಾಗಿ 10 ಸಾವಿರ, ದ್ವೀತಿಯ 7,000. ತೃತೀಯ 5,000 ಹಾಗೂ ಸಮಧಾನಕರ ಬಹುಮಾನಗಳು ಇರುತ್ತವೆ. ಹೆಚ್ಚಿನ ಮಾಹಿತಿಗಾಗಿ –
9945910985, 9448124141, 77602466078 ಮಠದ ಪ್ರಧಾನ ಕಾರ್ಯದರ್ಶಿ ಪೂಜ್ಯ ಶ್ರೀಶ್ರೀ ಪ್ರಸನ್ನನಾಥ ಸ್ವಾಮೀಜಿ ತಿಳಿಸಿದ್ದಾರೆ.
Kuvempu University ಕುವೆಂಪು ವಿವಿಯ ವಿವಿಧ ಕೋರ್ಸ್ ಗಳಿಗಾಗಿ ಪ್ರವೇಶ ಪರೀಕ್ಷೆ ಮಾಹಿತಿ
Kuvempu University ಕುವೆಂಪು ವಿಶ್ವವಿದ್ಯಾಲಯವು 2025-26ನೇ ಸಾಲಿಗೆ ವಿವಿಧ ಸ್ನಾತಕೋತ್ತರ ಪದವಿ/ಡಿಪ್ಲೊಮಾ ಕೊರ್ಸ್ಗಳ ಪ್ರವೇಶಾತಿಗಾಗಿ ಮತ್ತು ಶಂಕರಘಟ್ಟ ಜ್ಞಾನ ಸಹ್ಯಾದ್ರಿ ಹಾಗೂ ಶಿವಮೊಗ್ಗದ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಎಂ.ಬಿ.ಎ. ಪದವಿಗೆ ಪರೀಕ್ಷಾ ಪ್ರಾಧಿಕಾರ (ಕೆಇಎ) ಮೂಲಕ ಹಾಗೂ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆ ಮೂಲಕ ಪ್ರವೇಶಾತಿಗಾಗಿ ಖಾಲಿ ಉಳಿದಿರುವ ಸೀಟುಗಳಿಗೆ ಮತ್ತೊಮ್ಮೆ ಪ್ರವೇಶ ಪರೀಕ್ಷೆ ಮೂಲಕ ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
Kuvempu University ಆಸಕ್ತ ಅರ್ಹ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ವೆಬ್ಸೈಟ್ www.kuvempu.ac.inರಲ್ಲಿ ಪ್ರಕಟಿಸಲಾದ ಆಪ್ಲೈನ್ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಂಡು ಅರ್ಜಿ ಶುಲ್ಕ ರೂ. 400/-(ಸಾ.ವ), ರೂ. 200/- (ಎಸ್ಸಿ/ಎಸ್ಟಿ/ಪ್ರವರ್ಗ-1) ಮತ್ತು ಪ್ರವೇಶ ಪರೀಕ್ಷೆ ಶುಲ್ಕ ರೂ. 400/-(ಸಾ.ವ), ರೂ. 200/- (ಎಸ್ಸಿ/ಎಸ್ಟಿ/ಪ್ರವರ್ಗ-1)ಗಳನ್ನು ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ, ಜ್ಞಾನ ಸಹ್ಯಾದ್ರಿ ಶಾಖೆ, ಶಂಕರಘಟ್ಟ, ಎಸ್.ಬಿ.ಐ. ಸಾಮಾನ್ಯ ಖಾತೆ QR Code ಮೂಲಕ ಪಾವತಿಸಿ ಎಂ.ಬಿ.ಎ. ಅಧ್ಯಯನ ವಿಭಾಗ, ಶಂಕರಘಟ್ಟ, ಇಲ್ಲಿ ದಾಖಲೆಗಳ ಪ್ರತಿಗಳನ್ನು ಹಾಗೂ ಶುಲ್ಕ ಪಾವತಿಸಿದ ಚಲನ್ನ್ನು ಲಗತ್ತಿಸಿ ಡಿ. 06 ರೊಳಗಾಗಿ ಸಲ್ಲಿಸುವಂತೆ ವಿಶ್ವವಿದ್ಯಾಲಯದ ಕುಲಸಚಿವರು ತಿಳಿಸಿದ್ದಾರೆ.
CM Siddharamaiah ಸಿದ್ಧರಾಮಯ್ಯ ಸೀಎಂ ಪೀಠದಲ್ಲೇ ಮುಂದುವರೆಯಲೆಂದು ಅಭಿಮಾನಿಗಳ ಕಾಯಿಸೇವೆ
CM Siddharamaiah ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳು ಎಲ್ಲ ವರ್ಗದ ನಾಯಕ, ಸಾಮಾಜಿಕ ನ್ಯಾಯದ ಹರಿಕಾರ, ಭಾಗ್ಯ ವಿಧಾತ, ಗ್ಯಾರೆಂಟಿಗಳ ಸರದಾರ ಸನ್ಮಾನ್ಯ ಸಿದ್ದರಾಮಯ್ಯನವರನ್ನು ರಾಜ್ಯದ ಮುಖ್ಯಮಂತ್ರಿ ಆಗಿ ಮುಂದುವರಿಸಲು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಗೆ ಆಗ್ರಹಿಸಿ ಹಾಗೂ ಸಿದ್ದರಾಮಯ್ಯನವರಿಗೆ ರಾಜ್ಯದ ಜನರ ಸೇವೆ ಮಾಡಲು ಇನ್ನು ಹೆಚ್ಚಿನ ಶಕ್ತಿಯನ್ನು ನೀಡಲೆಂದು ಶಿವಮೊಗ್ಗ ನಗರದ ಐತಿಹಾಸಿಕ ಕೋಟೆ ಶ್ರೀ ಆಂಜನೇಯ ದೇವಾಲಯದಲ್ಲಿ ಶಿವಮೊಗ್ಗ ಜಿಲ್ಲಾ ಯುವ ಕುರುಬರ ಸಂಘ ಹಾಗೂ ಶೋಷಿತ ವರ್ಗಗಳ ಯುವ ಒಕ್ಕೂಟ ವಿಶೇಷ ಪೂಜೆ ಸಲ್ಲಿಸಿ ಸಿದ್ದರಾಮಯ್ಯನವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ ಈಡುಗಾಯಿ ಸಮರ್ಪಣೆ ಮಾಡಲಾಯಿತು.
ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಬ್ಬ ಬಡವರ ಪರ, ಮಹಿಳೆಯರ ಪರ, ದೀನ ದಲಿತರ ಪರ ನೊಂದವರ ಪರ ದಕ್ಷ ಆಡಳಿತಗಾರರಾಗಿದ್ದು. ಎರಡು ಬಾರಿ ಈ ರಾಜ್ಯದ ಮುಖ್ಯಮಂತ್ರಿ ಗಳಾಗಿ ತಾವು ಘೋಷಿಸಿದಂತಹ ಭಾಗ್ಯದ ಕಾರ್ಯಕ್ರಮಗಳನ್ನು ಹಾಗೂ ಐತಿಹಾಸಿಕ ಪಂಚ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಿ ರಾಜ್ಯದ ಕಟ್ಟ ಕಡೆಯ ವ್ಯಕ್ತಿಯವರೆಗೂ ತಲುಪಿಸುವಂತೆ ನುಡಿದಂತೆ ನಡೆದ ನಾಯಕರಾಗಿ ಭಾರತ ದೇಶವಲ್ಲದೆ ವಿದೇಶಗಳಲ್ಲೂ ಪ್ರಶಂಸೆಯನ್ನು ಹೊಂದಿರುವಂತಹ ಸರ್ಕಾರವನ್ನು ನಡೆಸುತ್ತಿದ್ದು.
ಕೆಲವು ಕಾಣದ ಶಕ್ತಿಗಳು ಕೆಲವು ದಿನಗಳಿಂದ ಕಾಂಗ್ರೆಸ್ ಹೈಕಮಾಂಡ್ ಸಾರ್ವಜನಿಕವಾಗಿ ಅಧಿಕಾರ ಹಂಚಿಕೆ ವಿಚಾರವನ್ನು ಹೇಳದೇ ಇದ್ದರೂ ಗೊಂದಲ ಸೃಷ್ಟಿ ಮಾಡಿ ಸಿದ್ದರಾಮಯ್ಯನವರನ್ನು ವಚನಭ್ರಷ್ಟರು ಎಂದು ಹೇಳುತ್ತಿರುವುದು ಬಾಲಿಶತನದ ಹೇಳಿಕೆ ರಾಜ್ಯದ ಅಹಿಂದ ವರ್ಗದ 70 %ರಿಂದ 80% ಜನರು ಸಿದ್ದರಾಮಯ್ಯನವರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದು. ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಕೂಡಲೇ ಈ ಗೊಂದಲಗಳಿಗೆ ತೆರೆ ಹೇಳಿದ್ದು. ಸಿದ್ದರಾಮಯ್ಯನವರನ್ನು ಈ ರಾಜ್ಯದ ಮುಖ್ಯಮಂತ್ರಿಗಳಾಗಿ ಮುಂದುವರಿಸಬೇಕೆಂದು ಈ ಮೂಲಕ ಅಗ್ರಹಿಸುತೇವೆ ಎಂದಿದ್ದಾರೆ.
CM Siddharamaiah ಈ ಸಂದರ್ಭದಲ್ಲಿ ಕುರುಬರ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಎಂ ರಾಕೇಶ್, ಸಂಘಟನಾ ಕಾರ್ಯದರ್ಶಿ ಕೆ.ಎಲ್. ಪವನ್, ಎಸ್ ಪಿ ಕೇಶವ, ಆಂಜನೇಯ, ಕೆ .ಆರ್. ಸುರೇಶ್ , ರಾಹುಲ್ ಸಿಗೆಹಟ್ಟಿ, ಶೋಷಿತ ವರ್ಗದ ಯುವ ಘಟಕದ ಸಂಚಾಲಕರಾದ ಮೋಹನ್ ಸೋಮಿನಕೊಪ್ಪ, ರಾಜೇಶ್ ಮಂದಾರ, ವೆಂಕಟೇಶ್ ಕಲ್ಲೂರು, ಪ್ರಮುಖರಾದ ಕೆ ಪಿ ದಿನೇಶ್ ಶರಾವತಿ ನಗರ, ಎಸ್ .ಜಿ ಕಿರಣ್, ಚಂದ್ರು ಗೆಡ್ಡೆ, ಮಂಜುನಾಥ್ ಉಪ್ಪಾರ್, ಮಲ್ಲಿಕಾರ್ಜುನ , ಮಂಜು ಸಿಹಗೆಟ್ಟಿ, ಆರ್ ಎಂ ಓಂ, ಬಾಬು, ಚಂದ್ರು, ಶಬರೀಶ್ ಆರ್ಯ, ಸಂಜಯ್, ಸುಹಾಸ್, ಇದ್ದರು
Bhagavad Gita Abhiyan ಭಕ್ತಿಭಾವ ಹೊಮ್ಮಿಸಿದಭಗವದ್ಗೀತೆ “ಮಹಾಸಮರ್ಪಣೆ”
Bhagavad Gita Abhiyan ಶ್ರೀಮಜ್ಜಗದ್ಗುರು ಶಂಕರುಾಚಾರ್ಯರವರ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶಿರಸಿ; ಶ್ರೀ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ (ರಿ.), ಶಿರಸಿ; ಸ್ವರ್ಣರಶ್ಮಿ ಟ್ರಸ್ಟ್ (ರಿ.), ಶಿವಮೊಗ್ಗ ಮತ್ತು ಶ್ರೀ ಭಗವದ್ಗೀತಾ ಅಭಿಯಾನ ಜಿಲ್ಲಾ ಸಮಿತಿ, ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಶ್ರೀ ಭಗವದ್ಗೀತಾ ಅಭಿಯಾನ–2025 ರ ರಾಜ್ಯಮಟ್ಟದ ಮಹಾಸಮರ್ಪಣೆ ಇಂದು ಅತ್ಯಂತ ವೈಭವಶಾಲಿಯಾಗಿ ನೆರವೇರಿತು.
ಈ ಮಹೋತ್ಸವದಲ್ಲಿ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು, ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶಿರಸಿ; ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳು, ಶ್ರೀ ಆದಿಶಂಕರಾಚಾರ್ಯ ಶ್ರೀ ಶಾರದಾ ಲಕ್ಷ್ಮೀನೃಸಿಂಹ ಪೀಠಂ, ಹರಿಹರಪುರ; ಪರಮಪೂಜ್ಯ ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಡಾ. ಶ್ರೀ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು, ಮುರುಘಾಮಠ ಮಹಾಸಂಸ್ಥಾನ, ಆನಂದಪುರ–ಬೆಕ್ಕಿನಕಲ್ಮಠ, ಶಿವಮೊಗ್ಗ; ಹಾಗೂ ಪರಮಪೂಜ್ಯ ಶ್ರೀ ಶ್ರೀ ನಾದಮಯಾನಂದನಾಥ ಮಹಾಸ್ವಾಮಿಗಳು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠ, ಶಿವಮೊಗ್ಗ — ಇವರ ಮಂಗಳಮಯ ಸಾನ್ನಿಧ್ಯವು ಕಾರ್ಯಕ್ರಮಕ್ಕೆ ಆಧ್ಯಾತ್ಮಿಕ ವೈಶಿಷ್ಟ್ಯವನ್ನಿತ್ತಿತು.
ಕಾರ್ಯಕ್ರಮವನ್ನು ಗೌರವಾನ್ವಿತ ಶ್ರೀ ರಾಜೇಂದ್ರ ವಿಶ್ವನಾಥ ಅರೇಕರ್, ಘನತೆವೆತ್ತ ಕೇರಳ ರಾಜ್ಯಪಾಲರು, ಉದ್ಘಾಟಿಸಿ ಮಹಾಸಮರ್ಪಣೆಗೆ ಭವ್ಯ ಆರಂಭ ಕೊಟ್ಟರು.
Bhagavad Gita Abhiyan ಮಾಜಿ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಸನ್ಮಾನ್ಯ ಶ್ರೀ ಎಚ್.ಡಿ. ಕುಮಾರಸ್ವಾಮಿ, ಹಿರಿಯ ನಾಯಕ ಸನ್ಮಾನ್ಯ ಶ್ರೀ ಕೆ.ಎಸ್. ಈಶ್ವರಪ್ಪ, ಶ್ರೀ ಡಿ.ಎಸ್. ಅರುಣ್, ಸನ್ಮಾನ್ಯ ಶ್ರೀ ಅಶೋಕ್ ಜಿ. ಭಟ್ ಹಿರಿಯ ವಕೀಲರು ಹಾಗೂ ಕಾರ್ಯಧ್ಯಕ್ಷರು, ಶ್ರೀ ಭಗವದ್ಗೀತಾ ಅಭಿಯಾನ ಜಿಲ್ಲಾ ಸಮಿತಿ, ಶಿವಮೊಗ್ಗ, ಶ್ರೀ ಸಿ.ಎಂ. ಉದಯಶಂಕರ, ಹಾಗೂ ಭಗವದ್ಗೀತಾ ಅಭಿಯಾನ ಜಿಲ್ಲಾ ಸಮಿತಿಯ ಗಣ್ಯರು ಉಪಸ್ಥಿತರಿದ್ದು ಗೀತೆಯ ಶಾಶ್ವತ ಸಂದೇಶಕ್ಕೆ ಮತ್ತಷ್ಟು ಭವ್ಯತೆಯನ್ನು ನೀಡಿದರು.
ಭಗವದ್ಗೀತೆಯ ಶಾಶ್ವತ ಸಂದೇಶ—ಧರ್ಮ, ಜ್ಞಾನ, ಶಾಂತಿ ಮತ್ತು ಮಾನವೀಯತೆ—ಇವುಗಳನ್ನು ಮತ್ತೊಮ್ಮೆ ಸಮಾಜಕ್ಕೆ ಪ್ರಸರಿಸಿದ ಮಹಾಸಮರ್ಪಣೆ, ಸಾವಿರಾರು ಭಕ್ತರ ಮನಗಳಲ್ಲಿ ಭಕ್ತಿಭಾವದ ಹೊಸ ಬೆಳಕನ್ನು ಹಚ್ಚಿತು.

Shimoga News ಅಂದುಕೊಳ್ಳಬಲ್ಲ, ಮಾಡಬಲ್ಲ ಏಕೈಕ ಜೀವಿ, ಮನುಷ್ಯ.- ಚೇತನ್ ರಾಂ.
Shimoga News ಜೀವ ಜಗತ್ತಿನಲ್ಲಿ ಏನನ್ನಾದರೂ ಅಂದುಕೊಳ್ಳಬಲ್ಲ ಹಾಗೂ ಅಂದುಕೊಂಡದ್ದನ್ನು ಮಾಡಬಲ್ಲ ಸಾಮರ್ಥ್ಯವಿರುವ ಏಕೈಕ ಜೀವಿ ಮನುಷ್ಯ, ಆದ್ದರಿಂದ ಉತ್ತಮವಾದುದನ್ನು ಅಂದುಕೊಳ್ಳಬೇಕು ಅದನ್ನು ಮತ್ತಷ್ಟು ಉತ್ತಮವಾಗಿ ಮಾಡಬೇಕು ಎಂದು ಅಂತಾರಾಷ್ಟ್ರೀಯ ವ್ಯಕ್ತಿತ್ವ ವಿಕಸನ ಸಂಪನ್ಮೂಲ ವ್ಯಕ್ತಿ ಮೈಸೂರಿನ ಚೇತನ್ ರಾಮ್ ಆರ್ ಎ ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.
ಅವರಿಂದು ಲೇಕ್ ವ್ಯೂ ನ ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಶನ್ ಬಿಸಿಎ ವತಿಯಿಂದ ವಿವಿಧ ಜಿಲ್ಲೆಗಳ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಏರ್ಪಾಡಾಗಿದ್ದ ‘ಪರೀಕ್ಷೆ ಒಂದು ಹಬ್ಬ- ಬನ್ನಿ ಆಚರಿಸೋಣ’ ಎಂಬ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಸಿಕ್ಕಿರುವುದನ್ನು ಸಂತೋಷದಿಂದ ಅನುಭವಿಸದೆ ಸಿಗದಿರುವ ಬಗ್ಗೆ ಕೊರಗುವುದೇ ಈಗಿನ ಪೀಳಿಗೆಯ ಸ್ಥಿತಿಯಾಗಿದೆ, ನಗುವಿನಿಂದಲೇ ಜೀವನದಲ್ಲಿ ಯಶ ಸಾಧಿಸಬಹುದು, ಪರೀಕ್ಷೆಗೂ ಭಯ ಪಡದೆ ನಗುನಗುತ್ತ ಓದಿ ಬರೆಯಬೇಕು ಎಂದರು.
Shimoga News ಮತ್ತೋರ್ವ ಸಂಪನ್ಮೂಲ ವ್ಯಕ್ತಿ ಮೂಡುಬಿದರೆಯ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ ಸದಾಕತ್ ಮಾತನಾಡುತ್ತಾ ಸಾಧನೆಯ ಹೆಜ್ಜೆಯಲ್ಲಿ ನಿರ್ಧಾರಗಳು ಮುಖ್ಯ, ಕಲಿಕೆಯು ಭಾರವಲ್ಲ ಸಂತಸದಾಯಕ, ಸಮಯ ಪಾಲನೆ, ಶಿಸ್ತು, ಕಠಿಣ ಪರಿಶ್ರಮ ಯಶಸ್ಸಿಗೆ ಬೇಕು ಎಂದರು. ಹಿರಿಯ ತಂತ್ರಾಂಶ ತಜ್ಞರುಗಳು ಹಾಗೂ ಕಾಲೇಜಿನ ಹಳೆಯ ವಿದ್ಯಾರ್ಥಿಗಳೂ ಆದ ಮಂಜುನಾಥ ಮಸ್ಕಿ ಹಾಗೂ ಹರ್ಷ ಗೋಪಾಲರಾವ್ ಮಾತನಾಡಿ ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಕಾಲೇಜಿನ ಚೇರ್ಮನ್ ಅಥಣಿ ಎಸ್ ವೀರಣ್ಣನವರು ಕೃತಕ ಬುದ್ಧಿಮತ್ತೆ ಬಂದ ನಂತರ ಹೊಸ ಹೊಸ ಅವಕಾಶಗಳು ಹೆಚ್ಚಾಗಿ ಒದಗಲಿವೆ, ಇದರ ಅನುಕೂಲ ಪಡೆಯುವ ಕೌಶಲ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕಾಗಿದೆ ಎಂದರು. ಕಾಲೇಜಿನ ಬಗ್ಗೆ ಪ್ರಾಂಶುಪಾಲ ಡಾ. ಬಿ ವೀರಪ್ಪನವರು ಮಾತನಾಡಿದರು. ಕಾಲೇಜಿನ ನಿರ್ದೇಶಕ ಡಾ. ಸ್ವಾಮಿ ತ್ರಿಭುವನಾನಂದ ಹೆಚ್ ವಿ, ಸಂಪನ್ಮೂಲ ವ್ಯಕ್ತಿ ಮಹಾಬಲೇಶ್ವರ ತುಂಗಾ, ಪ್ರೊ. ಸಿದ್ಧಲಿಂಗಪ್ಪ ಕೆ, ಪ್ರೊ. ಬಕ್ಕೇಶ್ ಮುಂತಾದವರು ಉಪಸ್ಥಿತರಿದ್ದು ಶ್ರಾವಣಿ ಪ್ರಾರ್ಥನೆ ಹಾಡಿದರೆ ಜ್ಯೋತಿಕಾ, ಕೀರ್ತಿ, ಸಂತೋಷ, ಕೀರ್ತನ ಹಾಗೂ ಪ್ರಶಾಂತಿನಿ ಬಿ ಎಂ ಅತಿಥಿಗಳ ಪರಿಚಯ ಮಾಡಿದರು. ವಿವಿಧ ಜಿಲ್ಲೆಗಳ 17ಕ್ಕೂ ಹೆಚ್ಚು ಪದವಿಪೂರ್ವ ಕಾಲೇಜುಗಳ 1300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
Roller Skating ರೋಲರ್ ಸ್ಕೇಟಿಂಗ್ ಸಂಸ್ಥೆಯಿಂದ ರಾಷ್ಟ್ರಮಟ್ಟದ ಸ್ಕೇಟಿಂಗ್ ಪಂದ್ಯಕ್ಕೆ ಆಯ್ಕೆ ಪ್ರಕ್ರಿಯೆ.
Roller Skating ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ನಿಂದ ಡಿಸೆಂಬರ್ 6 ಮತ್ತು 7 ರಂದು ರಾಜ್ಯಮಟ್ಟದ ಸ್ಕೇಟಿಂಗ್ ಪಟುಗಳನ್ನು ರಾಷ್ಟ್ರ ಮಟ್ಟದ ಸ್ಕೇಟಿಂಗ್ ಪಂದ್ಯಾವಳಿಗೆ ಆಯ್ಕೆ ಪ್ರಕ್ರಿಯೆಯನ್ನು ನಗರದ ಗೋಪಾಳದಲ್ಲಿರುವ ಕ್ರೀಡಾ ಸಂಕೀರ್ಣದಲ್ಲಿ ನಡೆಸಲಾಗುತ್ತಿದೆ.
Roller Skating ಕರ್ನಾಟಕ ಸ್ಪೀಡ್ ಸ್ಕೇಟಿಂಗ್ ಅಸೋಸಿಯೇಷನ್ ಅವರು ರಾಜ್ಯಮಟ್ಟದ ಟೆನಾಸಿಟಿ, ಫ್ಯಾನ್ಸಿ ಇನ್ಲೈನ್, ಕ್ವಾಡ್, ಇನ್ಲೈನ್ ಸ್ಕೇಟಿಂಗ್ ಪಟುಗಳನ್ನು ಆಯ್ಕೆ ಮಾಡಿ ರಾಷ್ಟ್ರೀಯ ಮಟ್ಟದಲ್ಲಿ ಸ್ಕೇಟಿಂಗ್ ಕ್ರೀಡೆಗಳನ್ನು ನಡೆಸಲು ಉದ್ದೇಶಿಸಿದ್ದು, ಅದಕ್ಕೆ ಕ್ರೀಡಾಸಕ್ತರು ಭಾಗವಹಿಸಿ ಇದರ ಸದುಪಯೋಗ ಪಡೆಯಲು ಅಧ್ಯಕ್ಷ ಗಿರೀಶ್ ಮತ್ತು ಕಾರ್ಯದರ್ಶಿ ಕೆ.ಎಂ. ಶೇಖರ್ (ಬಾಬು) ಕೋರಿದ್ದಾರೆ. ಮಾಹಿತಿಗೆ ಮೊ. 7483885457, 9480294366 ರಲ್ಲಿ ಸಂಪರ್ಕಿಸಿ.
MESCOM ಸಾಗರ ಮೆಸ್ಕಾಂ ಕಛೇರಿಯಲ್ಲಿ ಡಿಸೆಂಬರ್ 2 ರಂದು ಜನಸಂಪರ್ಕ ಸಭೆ
MESCOM ಸಾಗರ ಮೆಸ್ಕಾಂ ಗ್ರಾಮೀಣ ಉಪವಿಭಾಗ ಕಛೇರಿಯಲ್ಲಿ ಡಿ. 02 ರಂದು ಬೆಳಿಗ್ಗೆ 11.00 ರಿಂದ 01.00 ಗಂಟೆಯವರೆಗೆ ಜನಸಂಪರ್ಕಸಭೆ ನಡೆಯಲಿದೆ. ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದು, ಸಂಬAಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರುಸದು ಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಸಂಪರ್ಕಿಸಬಹುದಾದ ದೂರವಾಣಿಸಂಖ್ಯೆ ; 9480880595.
Agricultural irrigation project ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಪಡೆಯಲು ಅರ್ಜಿ ಆಹ್ವಾನ
Agricultural irrigation project ಶಿಕಾರಿಪುರ ಹಿರಿಯ ಸಹಾಯಕ ತೋಟಗಾರಿಕೆ ಇಲಾಖೆಯಿಂದ 2025-26 ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಶಿಕಾರಿಪುರ ತಾಲೂಕಿಗೆ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸಿಕೊಳ್ಳಲು ಎಲ್ಲಾ ವರ್ಗದ ರೈತರಿಗೆ ಶೇ. 90 ಸಹಾಯಧನ ಲಭ್ಯವಿರುತ್ತದೆ. ಈಗಾಗಲೇ ಮಳೆಗಾಲ ಮುಕ್ತಾಯವಾಗಿದ್ದು, ಮುಂದಿನ ದಿನಗಳಲ್ಲಿ ಬೇಸಿಗೆ ಹಂಗಾಮು ಪ್ರಾರಂಭವಾಗಲಿರುವುದರಿಂದ ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಿದೆ.
2018-19 ನೇ ಸಾಲಿನ ಹಿಂದೆ ಹನಿ ನೀರಾವರಿ ಘಟಕ ಅಳವಡಿಸಿಕೊಂಡವರು ಘಟಕ ಹಾಳಾಗಿದ್ದರೆ ಪುನಃ ಹೊಸದಾಗಿ ಹನಿ ನೀರಾವರಿ ಅಳವಡಿಸಿಕೊಳ್ಳಲು ಇಚ್ಛಿಸುವ ಎಲ್ಲಾ ವರ್ಗದ ರೈತರಿಗೂ ಪುನಃ ಶೇ. 90 ರ ಸಹಾಯಧನ ನೀಡಲು ಅವಕಾಶವಿರುವುದರಿಂದ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Agricultural irrigation project ಹೆಚ್ಚಿನ ಮಾಹಿತಿಗಾಗಿ ಆಯಾ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸುವುದು. ಅಂಜನಾಪುರ-8861994178, ತಾಳಗುಂದ – 7975515575, ಕಸಬಾ-9113812090, ಉಡುಗಣಿ – 9108548454, ಹೊಸೂರು – 6363095898 ಗಳನ್ನು ಸಂಪರ್ಕಿಸುವುದು.
