Monday, April 21, 2025
Monday, April 21, 2025

Shivamogga Dasara ಶಿವಮೊಗ್ಗ ದಸರಾ ಅಧಿಕಾರಿಗಳಿಗೆ ಬಿಸ್ಲೇರಿ ನೀರು ಜನಕ್ಕೆ ಕೊಳಕು ನೀರು ಸರಬರಾಜು ಪಾಲಿಕೆ ವೈಚಿತ್ರ್ಯ- ಶಿ.ಜು.ಪಾಶಾ

Date:

Shivamogga Dasara ಹಿಂದೂಗಳ ವಿಶೇಷ ಹಬ್ಬ ದಸರೆಗೆ ಹಿಂದೂ ನಾಯಕರೆಂದೇ ಕರೆಸಿಕೊಳ್ಳುವ ಶಾಸಕ ಚನ್ನಬಸಪ್ಪ @ ಚನ್ನಿ ಕೊಳಕು ಕುಡಿಯುವ ನೀರು ಸರಬರಾಜಾಗುತ್ತಿದ್ದರೂ ಮೌನವಾಗಿರುವುದೇಕೆ?

ಸಂತೋಷದಿಂದಲೇ ನವರಾತ್ರಿ ಹಬ್ಬ ಆಚರಿಸಲು ಸಿದ್ಧರಾದ ಶಿವಮೊಗ್ಗದ ಜನತೆಗೆ ಕೊಳಕು ನೀರನ್ನು ಸರಬರಾಜು ಮಾಡುತ್ತಿದೆ. ಈ ನೀರು ಎಷ್ಟು ಕೊಳಕಿದೆ ಎಂದರೆ, ಸ್ನಾನ ಕೂಡ ಮಾಡಲು ಸಾಧ್ಯವಿಲ್ಲದಷ್ಟು- ಇನ್ನು ಈ ನೀರು ಕುಡಿದುಬಿಟ್ಟರೆ ದೇವರೇಗತಿ; ಆ ನವದುರ್ಗೆಯರೇ ಕಾಪಾಡಬೇಕು!

ಶಿವಮೊಗ್ಗ ನಗರ ನೀರು ಸರಬರಾಜು ವ್ಯವಸ್ಥೆಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ನಿರ್ವಹಿಸಲಾಗುತ್ತಿದ್ದು, ಅ.8ರಂದು ಬಂದ ಮಳೆಯಿಂದಾಗಿ ಗಾಜನೂರು ಡ್ಯಾಂ ಮತ್ತು ತುಂಗಾ ನದಿಯ ನೀರಿನಲ್ಲಿ ಕೆಂಪು ಬಣ್ಣವು (ಟರ್ಬಿಡಿಟಿ) ಹೆಚ್ಚಾಗಿದ್ದು, ನೀರನ್ನು ಸಾರ್ವಜನಿಕರು ಕುದಿಸಿ, ಆರಿಸಿ ಕುಡಿಯುವಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿ ಅದೇ ನೀರಲ್ಲಿ ಕೈತೊಳೆದುಕೊಂಡು ಕಾಣೆಯಾಗಿದ್ದಾರೆ.

ಈ ಕೊಳಕು ನೀರು ಇಡೀ ಶಿವಮೊಗ್ಗಕ್ಕೆ ವಿತರಣೆಯಾಗುತ್ತಿದೆ. ಶಾಸಕ ಚನ್ನಿ, ಆಯುಕ್ತೆ ಕವಿತಾ ಯೋಗಪ್ಪನವರ್, ನೀರು ಸರಬರಾಜು ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರ ಮನೆಗೂ ಇದೇ ಕೊಳಕು ನೀರು ಸರಬರಾಜಾಗುತ್ತಿದೆಯಾ? ಹಾಗೆ ಆಗುತ್ತಿದ್ದರೆ, ಹಿಂದೂಗಳ ವಿಶೇಷ ಹಬ್ಬ ದಸರಾ ಕೊಳಕು ನೀರಲ್ಲೇ ನಡೆಯುತ್ತಿರುವುದೇಕೆ? ಶಾಸಕ ಚನ್ನಿಯವರು ದಸರಾ ಕಾರ್ಯಕ್ರಮಗಳಲ್ಲಿ ಮುಳುಗಿ ಹೋಗಿದ್ದಾರೆ. ಅವರು ಕುಂತಲ್ಲಿ, ನಿಂತಲ್ಲಿ ಬಿಸ್ಲರಿ ವಾಟರ್ ಸಿಗುತ್ತಿದೆ. ಅವರ ಜೊತೆ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ತಮ್ಮ ವ್ಯಾಪ್ತಿಗೇ ಈ ಸಮಸ್ಯೆ ಬರುವುದಿಲ್ಲ ಎಂದು ಅದೇ ಬಿಸ್ಲರಿ ವಾಟರ್ ಕುಡಿಯುತ್ತಾ ದಸರಾದಲ್ಲಿ ಮಗ್ನರಾಗಿದ್ದಾರೆ.

Shivamogga Dasara ಇನ್ನು ಈ ಸಮಸ್ಯೆ ಬಗೆಹರಿಸುವವರು ಯಾರು? ಕೊಳಕು ನೀರು ಕುದಿಸಿ, ಆರಿಸಿ ಕುಡಿಯಲು ಹೋದರೂ ನೀರಿನ ಕೊಳಕು ಬಣ್ಣ ನೋಡಿ ಜನ ಕಂಗಾಲಾಗುತ್ತಿದ್ದಾರೆ. ಕೊಳಕಾತಿ ಕೊಳಕು ನೀರಲ್ಲೇ ದಸರಾ ಮುಗಿಯುತ್ತಿದೆ. ಇನ್ನು, ರೋಗಗಳಿಗೆ ಬಲಿಯಾಗುವುದಷ್ಟೇ ಬಾಕಿ.

ಮಾಜಿ ಸಂಸದರೂ ಆಗಿರುವ ಕಾಂಗ್ರೆಸ್ಸಿನ ರಾಜ್ಯ ವಕ್ತಾರರಾದ ಆಯನೂರು ಮಂಜುನಾಥ್ ರವರು ಶಿವಮೊಗ್ಗ ಜನತೆಗೆ ವಿಶೇಷ ರೀತಿಯಲ್ಲೇ ಶುಭಾಶಯಗಳನ್ನು ಕೋರುತ್ತಾ ನೀರಿನ ಕುರಿತು ಗಮನ ಸೆಳೆದಿದ್ದಾರೆ. ಶಾಸಕರಿಗೂ ಆಯುಕ್ತರಿಗೂ ಮಾತಾಡಿದ್ದಾರೆ.

ಆದರೆ…ನೀರು ಹಾಗೇ ಕೊಳಕಾತಿ ಕೊಳಕಾಗಿಯೇ ಸರಬರಾಜಾಗುತ್ತಿರುವುದು ನಿಂತಿಲ್ಲ ಎಂದು ಶಿವಮೊಗ್ಗದ ಪತ್ರಕರ್ತ ಮತ್ತು ಕವಿ ಶಿ.ಜು.ಪಾಶಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

eAsset ಇ-ಸ್ವತ್ತು ದಾಖಲೀಕರಣ ಸಮಸ್ಯೆಗಳ ಬಗ್ಗೆ ಅಧ್ಯಯನಕ್ಕೆ ಸಮಿತಿ ರಚನೆ- ಪ್ರಿಯಾಂಕ ಖರ್ಗೆ

eAsset ಇ-ಸ್ವತ್ತು ಅನುಷ್ಠಾನದಲ್ಲಿ ಕಾಲಕಾಲಕ್ಕೆ ಎದುರಾಗುವ ಸಮಸ್ಯೆಗಳಿಗೆ ಸರ್ಕಾರದ ಮಟ್ಟದಲ್ಲಿ ಪರಿಹರಿಸಲು...

Sri Chidambara Mahaswami ಗುಬ್ಬಿ ಚಿದಂಬರಾಶ್ರಮದಲ್ಲಿಎಲೆಕ್ಟ್ರಿಷಿಯನ್ ವೃತ್ತಿ ಶಿಕ್ಷಣಕ್ಕೆ ಅರ್ಜಿ ಆಹ್ವಾನ

Sri Chidambara Mahaswami ಶ್ರೀ ಶ್ರೀ ಚಿದಂಬರ ಮಹಾಸ್ವಾಮಿಗಳು ಶ್ರೀ ಚಿದಂಬರಾಶ್ರಮವನ್ನು...

CM Siddharamaih ಪೌರ ಕಾರ್ಮಿಕರ ಸೇವೆ ಖಾಯಂಗೊಳಿಸುವ ಕಾರ್ಯ ನಡೆಯುತ್ತಿದೆ- ಸಿದ್ಧರಾಮಯ್ಯ

CM Siddharamaih ಎಲ್ಲಾ ಪೌರ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸುವ ಕಾರ್ಯ ನಡೆಯುತ್ತಿದೆ.ಈಗಾಗಲೇ...

DC Shivamogga ಪರೀಕ್ಷಾರ್ಥಿಯ ಜನಿವಾರ ತೆಗೆಸಿದ ಪ್ರಕರಣ, ಈರ್ವರು ಗೃಹ ರಕ್ಷಕ ದಳ ಸಿಬ್ಬಂದಿ ಅಮಾನತು-ಗುರುದತ್ತ‌ ಹೆಗಡೆ

DC Shivamogga ಶಿವಮೊಗ್ಗ ನಗರದ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಇತ್ತೀಚಿಗೆ...