Wednesday, May 21, 2025
Wednesday, May 21, 2025

State karate championship ರಾಜ್ಯಮಟ್ಟದ ಜೂಡೋ ಕರಾಟೆ ಸ್ಪರ್ಧೆಯಲ್ಲಿ ಶಿಕಾರಿಪುರದ ಸರ್ಕಾರಿ ಹಾಸ್ಟೆಲ್ ವಿದ್ಯಾರ್ಥಿಗಳ ಹೆಮ್ಮೆಯ ಸಾಧನೆ

Date:

State karate championship ಇಲ್ಲಿನ ನೆಹರು ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಜೂಡೋ ಕ್ರೀಡಾಕೂಟದಲ್ಲಿ
ಶಿಕಾರಿಪುರದ ಡಾ.ಬಿ ಆರ್ ಅಂಬೇಡ್ಕರ್ ಪರಿಶಿಷ್ಟಜಾತಿ/ಪಂಗಡಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದ ೧೦ ವಿದ್ಯಾರ್ಥಿಗಳು ಚಿನ್ನ ಮತ್ತು ಬೆಳ್ಳಿಪದಕಗಳನ್ನು ಗಳಿಸಿದ್ದಾರೆ. ಕರ್ನಾಟಕದಲ್ಲಿ ಜೂಡೋ ಮತ್ತು ಕರಾಟೆ ತರಭೇತಿ ನೀಡುತ್ತಿರುವ ಮೊಟ್ಟಮೊದಲ ವಿದ್ಯಾರ್ಥಿನಿಲಯ ಇದಾಗಿದ್ದು, ನಿಲಯದ ವಿದ್ಯಾರ್ಥಿಳ ಈ ಸಾಧನೆ ಶಿವಮೊಗ್ಗ ಜಿಲ್ಲೆಗೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಜಿಲ್ಲಾ ಮಟ್ಟದ ಜುಡೋ ಮತ್ತು ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿಲಯದ ೨೦ ವಿದ್ಯಾರ್ಥಿಗಳಲ್ಲಿ ಗೌತಮ್, ಪವನ, ಅಭಿ. ಬೀರೇಶ್, ಪವನ ಕೆ. ಇವರುಗಳು ಪ್ರಥಮ ಬಹುಮಾನ ವಾಗಿ ಚಿನ್ನದ ಪದಕ ಗಳಿಸಿದ್ದರೆ, ಗಗನ್, ಉಲ್ಲಾಸ್, ವಿಘ್ನೇಶ್, ಗಣೇಶ್ ಜಾನುಲಮಾಣಿ ಮತ್ತು ಕಾರ್ತಿಕ್ ಓ. ಅವರುಗಳು ದ್ವೀತಿಯ ಸ್ಥಾನಪಡೆದು ಬೆಳ್ಳಿ ಪದಕಗಳನ್ನು ಗಳಿಸಿದ್ದಾರೆ.
ಚಿನ್ನದ ಪದಕ ವಿಜೇತ ವಿದ್ಯಾರ್ಥಿಗಳು ಇದೇ ತಿಂಗಳ ದಿ:೧೮, ೧೯ ರಂದು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಜೂಡೋ ಕರಾಟೆ ಕ್ರೀಡಾಕೂಟದಲ್ಲಿ ಭಾಗವಹಿಸಿವರು.
State karate championship ಏಕಲವ್ಯ ಜೂಡೋ ಮತ್ತು ಕರಾಟೆ ತರಭೇತಿ ಸಂಸ್ಥೆಯ ಮಿಥುನ್ ಡಿ.ಬಿ ಇವರ ಸಾರಥ್ಯದಲ್ಲಿ ತರಭೇತಿ ನೀಡಲಾಗಿದ್ದು, ಕೇವಲ ಎರಡು ತಿಂಗಳ ಅವಧಿಯಲ್ಲಿ ನಮ್ಮ ನಿಲಯಾರ್ಥಿಗಳು ಎರಡು ಮೂರು ವರ್ಷಗಳಿಂದ ತರಬೇತಿ ಪಡೆದ ಎದುರಾಳಿಗಳನ್ನು ಮಣಿಸಿ ಅದ್ಭುತ ವಿಜಯ ಸಾಧಿಸಿರುತ್ತಾರೆ.
ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಿರುವ ವಾರ್ಡನ್ ನೃಪತುಂಗಾನಾಯ್ಕ್ ಅವರು ಇದಕ್ಕೆ ಪ್ರೋತ್ಸಾಹಿಸಿದ ರಾಜ್ಯ ಸರ್ಕಾರಕ್ಕೆ , ಪೋಷಕರಿಗೆ ,ಮತ್ತು ವಿದ್ಯಾರ್ಥಿನಿಲಯದ ಅಡುಗೆ ಸಿಬ್ಬಂದಿಗಳಿಗೆ ವಿದ್ಯಾರ್ಥಿನಿಲಯ ದ ವಾರ್ಡನ್ ನೃಪತುಂಗಾನಾಯ್ಕ್ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Santosh Lad ಪತ್ರಿಕಾ ವಿತರಕರ ವಿಮಾ ಯೋಜನೆ. ಕೆಲ ಷರತ್ತುಗಳ ಸಡಿಲಿಕೆಗೆ ಮನವಿ

Santosh Lad ಪತ್ರಿಕಾ ವಿತರಕರ ಅಪಘಾತ ವಿಮಾ ಪರಿಹಾರ ನೀಡುವಲ್ಲಿ ನಿಬಂಧನೆಗಳ...

Shimoga News ವ್ಯಾಪಾರದ ಜೊತೆ ಸಾರ್ವಜನಿಕ ಸೇವೆಯೂ‌ ಮುಖ್ಯ- ಹೆಚ್.ವೈ.ಸತೀಶ್

Shimoga News ವ್ಯಾಪಾರದ ಜತೆಯಲ್ಲಿ ಸಾರ್ವಜನಿಕ ಸೇವೆಯು ಮುಖ್ಯ. ಹಲವಾರು ಎಪಿಎಂಸಿಗಳಲ್ಲಿ...

Guarantee scheme ಕಾಲೇಜಿಗೆ ಹೋಗಿಬರಲು “ಶಕ್ತಿ” ನೀಡಿದ ಪಾಸ್ ನಿಂದನಾನೀಗ ನಿರಾಳ- ದೀಕ್ಷಾ

Guarantee scheme ನಾನು ಗೋಪಾಳದ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೊಮಾ ವ್ಯಾಸಂಗ...

Gruha Lakshmi Scheme ಸಮಾಜಸೇವೆಗೆ ಮನಸ್ಸು ಮಾಡಿದ “ಗೃಹ ಲಕ್ಷ್ಮಿ” ಫಲಾನುಭವಿ ಅನುಪಮಾ

Gruha Lakshmi Scheme ಸಾಕಷ್ಟು ಓದಿಕೊಂಡಿರುವ ನಾನು ಬಡವರಿಗೆ ಸಹಾಯ ಮಾಡುವ,...