Sunday, February 8, 2026
Sunday, February 8, 2026
Home Blog Page 42

ATNCC ಎಟಿಎನ್ ಸಿಸಿ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾಗಿಎಸ್.ಎಸ್.‌ವಾಗೇಶ್ ಅಯ್ಕೆ

0

ATNCC ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿ ಸಂಘ(ರಿ)ನ 2025-2030ನೇ ಸಾಲಿನ ಆಡಳಿತ ಮಂಡಳಿಯ ಆಯ್ಕೆ ಪ್ರಕ್ರಿಯೆಯಲ್ಲಿ ಅವಿರೋದವಾಗಿ ಆಯ್ಕೆನಡೆದು
ಅಧ್ಯಕ್ಷರಾಗಿ ಎಸ್.ಎಸ್.ವಾಗೇಶ್, ಉಪಾಧ್ಯಕ್ಷರಾಗಿ ಪ್ರೋ.ಆಶಾಲತ,
ಕೇಶವಮೂರ್ತಿ, ಕಾರ್ಯದರ್ಶಿಯಾಗಿ ಶಿವಾನಂದಸಾನು, ಸಹಕಾರ್ಯದರ್ಶಿಯಾಗಿ
ಸ್ಮೀತಾರೂಪೇಶ್, ಮತ್ತು ದಿಲೀಪ್ ನಾಡಿಗ್ ಖಚಾಂಚಿಯಾಗಿ ಘನಶ್ಯಾಮ್

ನಿರ್ದೇಶಕರಾಗಿ
ಜಿ.ವಿಜಯಕುಮಾರ್,
ಎ.ಎಮ್.ಮಹೇಶ್,
ಪ್ರಕಾಶ್ ಕಮಾರ್ ಸಮನ್ವಯಕಾಶಿ,
ಸುನೀಲ್ ಅಂಬೋರೆ,
ನವೀನ್ ಕುಮಾರ್
ಸಿ.ಎನ್.ಸುರೇಶ್,
ಸೈಯದ್ ಅಬೂತಾಹಿರ್,
ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿಗಳಾಗಿ ಪ್ರಾಂಶುಪಾಲರಾದ ಮಮತಾ.ಪಿ.ಆರ್ ನಡೆಸಿಕೊಟ್ಟರು.

Araga Jnanendra “ಇದೇನು ಧರ್ಮಛತ್ರವಾ? ಬೆಂಗಳೂರು ಜನರ ಗತಿಯೇನು?”- ಆರಗ ಜ್ಞಾನೇಂದ್ರ.

0

Araga Jnanendra ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಬಾಂಗ್ಲಾದೇಶದ ಅಕ್ರಮ ವಲಸಿಗರ ಹಾವಳಿ ಮತ್ತು ಡ್ರಗ್ಸ್ ಜಾಲದ ಬಗ್ಗೆ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಜನರು ಬದುಕು ಕಟ್ಟಿಕೊಳ್ಳುವುವುದು ಕಷ್ಟ ಎಂಬಂತಹ ಸನ್ನಿವೇಶ ನಿರ್ಮಾಣವಾಗುತ್ತಿದೆ. ಮೂರು ಜನ ರಿಕ್ಷಾ ಚಾಲಕರು ಮಾತನಾಡುತ್ತಾರೆ, ಬೆಂಗಳೂರಿನಲ್ಲಿ ಬಾಂಗ್ಲಾದೇಶದ ಯುವಕರು ರಿಕ್ಷಾ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಚೆನ್ನಾಗಿ ಬದುಕು ಕಟ್ಟಿಕೊಂಡಿದ್ದೇವೆ ಎಂದು ಹೇಳುತ್ತಾ ಬಾಂಗ್ಲಾದ ಯುವಕರನ್ನು ಇಲ್ಲಿಗೆ ಬನ್ನಿ ಎಂದು ಕರೆಯುತ್ತಿದ್ಧಾರೆ. ಅವರು ಇಲ್ಲಿಂದಲೇ ತಮ್ಮ ದೇಶದ ಇತರರನ್ನು ಬೆಂಗಳೂರಿಗೆ ಬರುವಂತೆ ಪ್ರೇರೇಪಿಸುತ್ತಿದ್ದಾರೆ. ಇದು ರಾಜ್ಯದ ಭದ್ರತೆಗೆ ದೊಡ್ಡ ಅಪಾಯ. ಇವೆರಲ್ಲಾ ಬರೀ ಆಟೋ ಓಡಿಸಿಕೊಂಡಿದ್ದಾರಾ? ಅಥವಾ ಬೇರೆನೋ ಮಾಡುತ್ತಿದ್ಧಾರಾ? ಇವರನ್ನ ಒಳಕ್ಕೆ ಸರಿಸಿಕೊಂಡು ಗತಿಯೇನು? ಇದೇನು ಧರ್ಮಛತ್ರವಾ? ಬೆಂಗಳೂರು ಜನರ ಗತಿಯೇನು? ಈ ವಿಚಾರ ಕೇಳಿ ಆಶ್ಚರ್ಯವಾಯ್ತು. ಈ ಬಗ್ಗೆ ಪೊಲೀಸರು ಅವರನ್ನ Araga Jnanendra ಅರೆಸ್ಟ್ ಮಾಡಬೇಕು. ಹೀಗೆ ಅಕ್ರಮವಾಗಿ ನೆಲೆಸಿರುವ ಇವರಿಗೆ ಇಲ್ಲಿ ನೆಲೆ ಒದಗಿಸಿದವರು ಯಾರು? ಇವರಿಗೆ ಬೇಕಾದ ದಾಖಲೆಗಳನ್ನು ಸೃಷ್ಟಿಸಿಕೊಟ್ಟವರು ಯಾರು? ಎಂಬ ಬಗ್ಗೆ ಪೊಲೀಸರು ತಕ್ಷಣ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಇತ್ತೀಚೆಗೆ ಮೈಸೂರಿನಲ್ಲಿ ಡ್ರಗ್ಸ್ ಸೀಜ್ ಆಗಿತ್ತು, ಈಗ ಬೆಂಗಳೂರಿನಲ್ಲಿ ಡ್ರಗ್ಸ್ ತಯಾರಿಕಾ ಘಟಕವನ್ನು ಮಹಾರಾಷ್ಟ್ರ ಪೊಲೀಸರು ಬಂದು ಪತ್ತೆ ಮಾಡಿರುವುದು ರಾಜ್ಯ ಪೊಲೀಸರಿಗೆ ನಾಚಿಕೆಗೇಡಿನ ಸಂಗತಿ. ಮಹಾರಾಷ್ಟ್ರ ಪೊಲೀಸರು ಬಂದು ಹಿಡಿಯುತ್ತಾರೆ ಅಂತ ಹೇಳಿದರೆ, ನಮ್ಮ ಪೊಲೀಸರಿಗೆ ಇದ್ಯಾಕೆ ಗೊತ್ತಾಗುತ್ತಿಲ್ಲ. ಗೊತ್ತಾಗುತ್ತೆ, ಆದರೆ ಇಲ್ಲಿ ಕೆಲವರ ಇನ್ವಾಲ್ಮೆಂಟ್​ ಇದೆ. ಭಷ್ಟ್ರಚಾರದ ಮೂಲಕ ಟ್ರಾನ್ಸಫರ್ ಆಗಿರುವುದರ ಫಲ ಇದಾಗಿದೆ ಎಂದ ಸಚಿವರು ಈ ವಿಚಾರ ಗೃಹ ಇಲಾಖೆಗೆ ಅವಮಾನದ ಸಂಗತಿ ಎಂದರು. ಇದು ಸರ್ಕಾರದ ವೀಕ್ ಪಾಯಿಂಟ್, ಸರ್ಕಾರದ ದರಿದ್ರತನ. ಈ ನಿಟ್ಟಿನಲ್ಲಿ ನಮ್​ ಇಲಾಖೆಯ ಪೊಲೀಸರನ್ನೆ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸುತ್ತೇನೆ ಎಂದು ಶಾಸಕ‌ ಆರಗ ಜ್ಞಾನೇಂದ್ರ ಹೇಳಿದರು.

B. Y. Raghavendra ಆಧ್ಯಾತ್ಮಿಕತೆ,ಸಂಸ್ಕೃತಿ ಮತ್ತು ಸಾಮಾಜಿಕ ಸೌಹಾರ್ದತೆ ಬೆಳೆಸುವ ಕಾರ್ಯಕ್ರಮಗಳು ನಿರಂತರ ನಡೆಯಲಿ- ಬಿ.ವೈ.ರಾಘವೇಂದ್ರ.

0

B. Y. Raghavendra ಶಿವಮೊಗ್ಗದ ಅಂಬೇಡ್ಕರ್ ಭವನದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿಗಳ ನೌಕರರ ಸಂಘ, ಶಿವಮೊಗ್ಗ ಹಾಗೂ ಶ್ರೀ ಬಸವೇಶ್ವರ ವೀರಶೈವ–ಲಿಂಗಾಯತ ಸಮಾಜ ಸೇವಾ ಸಂಘ, ಶಿವಮೊಗ್ಗ ಇವರ ಸಹಯೋಗದಲ್ಲಿ ಆಯೋಜಿಸಲಾದ ಮೂರು ದಿನಗಳ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಕೊನೆಯ ದಿನದ ಲಿಂಗತತ್ವ ದರ್ಶನ ಪ್ರವಚನದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಭಾಗವಹಿಸಿದ್ದರು.

ಪರಮಪೂಜ್ಯ ಮಹಾಸನ್ನಿಧಿ ಶ್ರೀಮತ್ ಕಾಶಿ ಜ್ಞಾನ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ವಿದ್ಯಾವಾಚಸ್ಪತಿ ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು, ಜಂಗಮವಾಡಿ ಮಠ, ವಾರಾಣಸಿ ಇವರ ದಿವ್ಯ ವಚನಗಳು ಲಿಂಗತತ್ವದ ಗಾಢ ಅರ್ಥ, ಮಾನವೀಯ ಮೌಲ್ಯಗಳು ಹಾಗೂ ಸಮಾಜದಲ್ಲಿ ಧರ್ಮ–ನೈತಿಕತೆಯ ಮಹತ್ವವನ್ನು ಸ್ಪಷ್ಟವಾಗಿ ತಿಳಿಸಿದವು..

B. Y. Raghavendra ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆಯ ಮಾನ್ಯ ಶಾಸಕರಾದ ಶ್ರೀ ಚನ್ನಬಸಪ್ಪ ಅವರು, ಶ್ರೀ ಸಿ.ಎಸ್. ಷಡಾಕ್ಷರಿ, ಶ್ರೀ ಎಸ್.ಎಸ್. ಜ್ಯೋತಿಪ್ರಕಾಶ್, ಶ್ರೀ ಎಸ್.ಪಿ. ದಿನೇಶ್, ಶ್ರೀ ಬಳ್ಳೇಕೆರೆ ಸಂತೋಷ್ ಹಾಗೂ ಅನೇಕ ಭಕ್ತವೃಂದದವರು ಉಪಸ್ಥಿತರಿದ್ದರು.

ಆಧ್ಯಾತ್ಮಿಕತೆ, ಸಂಸ್ಕೃತಿ ಮತ್ತು ಸಾಮಾಜಿಕ ಸೌಹಾರ್ದತೆಯನ್ನು ಬೆಳೆಸುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂಬುದು ಸಂಸದ ಬಿ.ವೈ.ರಾಘವೇಂದ್ರ ಹಾರೈಸಿದರು

Bannanje 90- Vishwa Namana ಜನವರಿ 4. ಶಿವಮೊಗ್ಗದಲ್ಲಿ”ಬನ್ನಂಜೆ 90- ವಿಶ್ವನಮನ” ಕಾರ್ಯಕ್ರಮ.

0

Bannanje 90- Vishwa Namana ನಾಡು ಕಂಡ ಶ್ರೇಷ್ಠ ವಿದ್ವಾಂಸ , ಅಪ್ರತಿಮ ಉಪನ್ಯಾಸಕಾರ , ಕವಿ, ಪತ್ರಕರ್ತ , ವಿದ್ಯಾ ವಾಚಸ್ಪತಿ ಪದ್ಮಶ್ರೀ ಡಾ. ಬನ್ನಂಜೆ ಗೋವಿಂದಾಚಾರ್ಯರ ಬಹುಮುಖಿ ವ್ಯಕ್ತಿತ್ವವನ್ನು ಸ್ಮರಿಸುವ ಬನ್ನಂಜೆ 90 ವಿಶ್ವನಮನ” ಶಿವಮೊಗ್ಗದಲ್ಲಿ ಬರುವ ಭಾನುವಾರ (04/01/2026) ಸಂಜೆ 4ರಿಂದ ರಾತ್ರಿ 9ರ ವರೆಗೆ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ.

ಬೆಂಗಳೂರಿನ ಬನ್ನಂಜೆ ಪ್ರತಿಷ್ಠಾನ ಹಮ್ಮಿಕೊಂಡಿರುವ ಈ ವಿಶೇಷ ಕಾರ್ಯಕ್ರಮಕ್ಕೆ ಶಿವಮೊಗ್ಗದ ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆ , ಬನ್ನಂಜೆ ಅಭಿಮಾನಿ ಬಳಗ , ನವ್ಯಶ್ರೀ ಈಶ್ವರ ವನ ಚಾರಿಟಬಲ್ ಟ್ರಸ್ಟ್ ಹಾಗು ಅನೇಕ ಸಮಾನ ಮನಸ್ಕ ಸಂಸ್ಥೆಗಳ ಸಹಯೋಗವಿದೆ

Bannanje 90- Vishwa Namana ಸಾಂಸ್ಕೃತಿಕ ಲೋಕದ ಅನೇಕ ಪ್ರಮುಖರು ಈ ಸ್ಮರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ .
ಬನ್ನಿ, ಕೊಂಚ ಹೊತ್ತು ಬನ್ನಂಜೆಯವರ ವಾಜ್ಮಯ ಪ್ರಪಂಚದಲ್ಲಿ ವಿಹರಿಸೋಣ… ಕಾರ್ಯಕ್ರಮದ ನಂತರ ಸಹಭೋಜನ ಮಾಡೋಣ

Hulikal Ghat ಹುಲಿಕಲ್ ಘಾಟಿಯಲ್ಲಿ ಖಾಸಗಿ ಬಸ್ ಅಪಘಾತ: ಮಗು ಸಾವು, ಮೂವರ ಸ್ಥಿತಿ ಗಂಭೀರ

0

Hulikal Ghat ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್
ಘಾಟಿಯಲ್ಲಿ ಖಾಸಗಿ ಬಸ್‌ ಅಪಘಾತ ಸಂಭವಿಸಿ ಮಗುವೊಂದು ಸಾವಿಗೀಡಾಗಿದೆ.
ಮೂವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ದಾವಣಗೆರೆಯಿಂದ ಮಂಗಳೂರಿಗೆ ತೆರಳುತ್ತಿದ್ದ ದುರ್ಗಾಂಬ ಸಂಸ್ಥೆಯ ಬಸ್‌
ಹುಲಿಕಲ್‌ ಘಾಟಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಧರೆಗೆ ಡಿಕ್ಕಿಯಾಗಿದೆ.

ಡಿಕ್ಕಿಯ ತೀವ್ರತೆಗೆ ಬಸ್‌ನ ಮುಂಭಾಗ ಸಂಪೂರ್ಣವಾಗಿ ಜಖಂ
ಆಗಿದೆ.
ಅಪಘಾತದಲ್ಲಿ ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದು, ಶರೀಫಾ ಬಿ (57), ಇಮಾಮ್ ಸಾಬ್ (73) ಹಾಗೂ ಸಫಾನ (28) ಗಾಯಗೊಂಡಿದ್ದಾರೆ.

Hulikal Ghat ಗಾಯಾಳುಗಳನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ರವಾನೆಮಾಡಲಾಗಿದೆ.
ಬೆಳಗಿನ ಜಾವ 3 ಗಂಟೆಗೆ ನಡೆದ ಘಟನೆ ಸಂಭವಿಸಿದೆ.

ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.

Kuvempu ಕುವೆಂಪು ಅವರ ಗೀತೆಗಳು ಸಮಾಜದ ಓರೆಕೋರೆಗಳನ್ನ ತಿದ್ದುವಲ್ಲಿ ಯಶಸ್ವಿಯಾಗಿವೆ- ಶಾಂತಾ ಶೆಟ್ಟಿ

0

Kuvempu ಸಾಹಿತ್ಯ ಕ್ಷೇತ್ರಗಳಲ್ಲಿ ರಾಷ್ಟ್ರಕವಿ ಕುವೆಂಪು ರವರ ಕೊಡುಗೆ ಅವಿಸ್ಮರಣೀಯ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ತು , ಚಿರಂತನ ಯೋಗ ಹಾಗೂ ಸಂಗೀತ ಟ್ರಸ್ಟಿನ ಅಧ್ಯಕ್ಷೆ ಶಾಂತ ಎಸ್ ಶೆಟ್ಟಿ ಹೇಳಿದರು.

ಅವರು ಇಂದು ಕುವೆಂಪುರಂಗ ಮಂದಿರದ ಆವರಣದಲ್ಲಿ ರಾಷ್ಟ್ರಕವಿ ರಸ ಋಷಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ಕರ್ನಾಟಕ ಸುಗಮ ಸಂಗೀತ ಪರಿಷತ್ತು ಜಿಲ್ಲಾ ಘಟಕ ಹಾಗೂ ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾದ ಗೀತಾ ಹಾಗೂ ಕವಿತೆ ನಮನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕುವೆಂಪು ಅವರ ಕ್ರಾಂತಿಕಾರಿ ಗೀತೆಗಳು ಹಾಗೂ ನಾಡಗೀತೆ ಇಂದಿಗೂ ಸಹ ಸಮಾಜದ ಓರೆ ಕೋರೆಗಳನ್ನು ತಿದ್ದುವಲ್ಲಿ ಯಶಸ್ವಿಯಾಗಿವೆ ಹಾಗೆ ಅವರ ಒಂದೊಂದು ಗೀತೆಗಳು ಸಹ ಇಂದು ಅತ್ಯಂತ ಪ್ರಸ್ತುತವಾಗಿದೆ ಎಂದರು.
ಹಾಗೆಯೇ ಈ ನಾಡು ಕಂಡ ಒಬ್ಬ ಶ್ರೇಷ್ಠ ಗಾಯಕ ಸಿ ಅಶ್ವಥ್ ಅವರ ಜನ್ಮದಿನವೂ ಕೂಡ. ಅವರ ಕನ್ನಡವೇ ಸತ್ಯ ಹಾಗೂ ಭಾವಗೀತೆ ಅನೇಕ ಗೀತೆಗಳು ವಿಶ್ವಮಟ್ಟದಲ್ಲಿ ಪ್ರಸಿದ್ಧಿಯಾಗಿವೆ ಎಂದರು.

Kuvempu ಕನ್ನಡ ಸಾರಸ್ವತ ಲೋಕದ ಮೇರು ಸಾಹಿತಿ ಹಾಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಮ್ಮ ಸೃಜನಶೀಲತೆಯನ್ನು ಮೆರೆಯುವಾಗ ಎಲ್ಲಿಯೂ ಸಾಮಾಜಿಕ ನೆಲಗಟ್ಟಿನ ಚಿಂತನೆಗಳನ್ನು ಕಡೆಗಣಿಸದ ವಿಶ್ವ ಮಾನವ ಎಂದರು.
ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ ವಿಜಯಕುಮಾರ್ ಅವರು ಮಾತನಾಡಿ ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟ ಧೀಮಂತ ಸಾಹಿತಿ ,ಕನ್ನಡದ ಎರಡನೇ ರಾಷ್ಟ್ರಕವಿ, ಪಂಪ ಪ್ರಶಸ್ತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಇಂತಹ ಮೇರು ವ್ಯಕ್ತಿತ್ವ ಇರುವ ಕುವೆಂಪು ಅವರು ನಮ್ಮ ಜಿಲ್ಲೆಯವರೇ ಎಂದು ಹೇಳಿಕೊಳ್ಳಲು ತುಂಬಾ ಹೆಮ್ಮೆಯಾಗುತ್ತದೆ, ಕುವೆಂಪು ಅವರ ಗೀತೆಗಳು ಒಂದೊಂದು ಸಾಲುಗಳು ಸಹ ತುಂಬಾ ಅರ್ಥಪೂರ್ಣ ಎಂದರು.
ಕುವೆಂಪು ಅವರು ಕೇವಲ ಕವಿ ಸಾಹಿತಿಯಾಗಿ ಅಷ್ಟೇ ಅಲ್ಲದೆ ಸಾಮಾಜಿಕ ಧಾರ್ಮಿಕ ರಾಜಕೀಯ ಗುರು ಆಗಿ ಪರಿಸರದ ಪ್ರೇಮಿಯಾಗಿ ಮಾರ್ಗದರ್ಶಕರು ಚಿಂತಕರು ಆಗಿ ಸಾಹಿತ್ಯ ಕೃಷಿ ನಡೆಸಿದವರು ಅವರು ಹಾಕಿಕೊಟ್ಟ ಮಂತ್ರ ಮಾಂಗಲ್ಯ ಇಂದಿಗೂ ಸಹ ಜನಪ್ರಿಯತೆ ಪಡೆಯುವುದರ ಜೊತೆಗೆ ಪ್ರಸ್ತುತವಾಗಿದೆ
ಹಾಗೆ ಅವರ ತತ್ವ ಸಿದ್ಧಾಂತ ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳ ಬೇಕು ಎಂದರು.
ಇದೇ ಸಂದರ್ಭದಲ್ಲಿ ಕವಿ ಹಾಗೂ ಪರಿಷತ್ತಿನ ಸಂಚಾರಕರಾದ ಶೋಭಾ ಸತೀಶ್ ಅವರು ತಾವೇ ರಚಿಸಿದ ಕುವೆಂಪು ಕವನವನ್ನು ವಾಚಿಸಿದರು.
ಈ ಸಂದರ್ಭದಲ್ಲಿ ಸದಸ್ಯರು ಪದಾಧಿಕಾರಿಗಳು ಕುವೆಂಪು ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಗೌರವ ಸೂಚಿಸಿದರು.
ಕಾರ್ಯಕ್ರಮದಲ್ಲಿ ಬಿಂದು ವಿಜಯಕುಮಾರ್., ದಾಕ್ಷಾಯಿಣಿ, ರಾಜಕುಮಾರ್ ,
ರಮಾ ಸುಬ್ರಹ್ಮಣ್ಯ, ನಳಿನಾಕ್ಷಿ ರುದ್ರಪ್ಪ ಚೀಲೂರ್. ಸುಶೀಲ ಷಣ್ಮುಗಂ, ಲೀಲಾವತಿ, ಮಂಜು ನಾಯಕ್, ಹಾಗೂ ಗಾಯಕರು ಉಪಸ್ಥಿತರಿದ್ದರು

Madhu Bangarappa ವಿಶ್ವ ಮಾನವತೆ,ವೈಚಾರಿಕತೆ ಮತ್ತು ಕನ್ನಡಾಭಿಮಾನ ಕುವೆಂಪು ಸಾಹಿತ್ಯದ ವಿಶೇಷತೆ- ಮಧು ಬಂಗಾರಪ್ಪ.

0

Madhu Bangarappa ವಿಶ್ವಮಾನವ ಸಂದೇಶ, ವೈಚಾರಿಕತೆ ಮತ್ತು ಕನ್ನಡ ಭಾಷಾಭಿಮಾನ ಕುವೆಂಪುರವರ ಸಾಹಿತ್ಯದ ವಿಶೇಷತೆಯಾಗಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ಬಣ್ಣಿಸಿದರು.
ಅವರು ಇಂದು ತೀರ್ಥಹಳ್ಳಿ ಸಮೀಪದ ಕುಪ್ಪಳಿಯಲ್ಲಿ ರಾಷ್ಟ್ರಕವಿ ಕುವೆಂಪು ಅವರ 121ನೇ ಜನ್ಮದಿನೋತ್ಸವದ ನಿಮಿತ್ತ ಆಚರಿಸಲಾಗುವ ವಿಶ್ವಮಾನದ ದಿನಾಚರಣೆಯಂದು ಖ್ಯಾತ ಕವಿಗಳಿಗೆ ನೀಡಲಾಗುವ ಕುವೆಂಪು ರಾಷ್ಟ್ರೀಯ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಕನ್ನಡದ ಮೇರು ಕವಿ ಕುವೆಂಪುರವರಿಗೆ ಹಾಗೂ ಹಿರಿಯ ನಟ ಡಾ ರಾಜಕುಮಾರ್ ಅವರಿಗೆ ಅಂದಿನ ಮುಖ್ಯಮಂತ್ರಿಗಳಾಗಿದ್ದ ದಿವಂಗತ ಎಸ್. ಬಂಗಾರಪ್ಪನವರು ಕರ್ನಾಟಕ ಪ್ರಶಸ್ತಿ ನೀಡಿ ಗೌರವಿಸಿದ್ದರು. ಕುವೆಂಪುರವರ ಜನ್ಮಸ್ಥಳ ಕುಪ್ಪಳಿಯಲ್ಲಿ ಪ್ರತಿ ವರ್ಷ ಸರ್ಕಾರದ ವತಿಯಿಂದ ನಡೆಸಲಾಗುತ್ತಿರುವ ಕುವೆಂಪು ರಾಷ್ಟ್ರೀಯ ಪುರಸ್ಕಾರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಪ್ರತಿಷ್ಠಾನ ಇಚ್ಚಿಸಿದಲ್ಲಿ ಇನ್ನಷ್ಟು ದೊಡ್ಡ ಮಟ್ಟದಲ್ಲಿ ವಿದ್ವತ್ ಜನರ ಸಮ್ಮುಖದಲ್ಲಿ ಜನಮಾನಸದಲ್ಲಿ ಅಚ್ಚಳಿಯದೇ ಉಳಿಯುವಂತೆ ಆಚರಿಸಲು ಅಗತ್ಯವಿರುವ ಎಲ್ಲಾ ರೀತಿಯ ಸಹಕಾರವನ್ನು ನೂಡಲಾಗುವುದು. ಕುವೆಂಪು ಅವರ ಸ್ಮರಣಾರ್ಥ ಏರ್ಪಡಿಸಲಾಗುವ ಎಲ್ಲಾ ಕಾರ್ಯಕ್ರಮಗಳಿಗೆ ಆಡಳಿತಾರೂಢ ಸರ್ಕಾರಗಳು ಸಕಾಲಿಕವಾಗಿ ಸ್ಪಂದಿಸಿವೆ ಎಂದರು.
ಸಂದ್ಯಾಕಾಲದಲ್ಲಿ ಮೈಸೂರಿನಲ್ಲಿದ್ದ ಕವಿ ಕುವೆಂಪು ಅವರು ತಮ್ಮ ಹುಟ್ಟೂರು ಹಿರೇಕೂಡಿಗೆಗೆ ಹೋಗುವ ಇಂಗಿತವನ್ನು ಅಂದಿನ ಮುಖ್ಯಮಂತ್ರಿಗಳಾಗಿದ್ದ ದಿ.ಎಸ್.ಬಂಗಾರಪ್ಪ ಅವರಲ್ಲಿ ಅರುಹಿದರು. ಎಸ್.ಬಂಗಾರಪ್ಪ ಅವರು ಕೂಡಲೇ ವಿಶೇಷ ಹೆಲಿಕ್ಯಾಪ್ಟರ್‌ಒಂದನ್ನು ಸಿದ್ಧಪಡಿಸಿ, ಹಿರೇಕೂಡಿಗೆಗೆ ಹೋಗಿಬರುವಂತೆ ಹಾಗೂ ತಮ್ಮ ಹೆಸರಿನಲ್ಲಿ ಶಂಕರಘಟ್ಟದಲ್ಲಿ ಆರಂಭಿಸಿರುವ ವಿಶ್ವವಿದ್ಯಾಲಯವನ್ನು ನೋಡಿಬರುವಂತೆ ಮನವಿ ಮಾಡಿದ್ದರು ಎಂಬುದು ಕವಿಗಳ ಮೇಲೆ ಬಂಗಾರಪ್ಪ ಅವರಿಗೆ ಇದ್ದ ಕಾಳಜಿ ಪ್ರೀತಿಯನ್ನು ಎತ್ತಿ ತೋರಿಸುತ್ತದೆ ಎಂದರು.
ಕುವೆಂಪು ಸಾಹಿತ್ಯದ ವಿಶೇಷ ಮಹತ್ವದ ಸಂಗತಿಗಳನ್ನು ಅವರ ಸಾಹಿತ್ಯ ಕೃತಿಗಳಲ್ಲಿ ಕಾಣಬಹುದಾಗಿದೆ. ಕನ್ನಡ ಸಾಹಿತ್ಯಕ್ಕೆ ಅಂತರರಾಷ್ಟ್ರೀಯ ಮಾನ್ಯತೆ ನೀಡಿದ ‘ಶ್ರೀ ರಾಮಾಯಣ ದರ್ಶನಂ’ ಕೃತಿಗೆ ಮೊದಲ ಜ್ಞಾನಪೀಠ ಹಾಗೂ ‘ಜಯ ಭಾರತ ಜನನಿಯ ತನುಜಾತೆ’ ನಾಡಗೀತೆಯ ಮೂಲಕ ಕನ್ನಡಕ್ಕೆ ರಾಷ್ಟ್ರಕವಿ ಬಿರುದು ತಂದುಕೊಟ್ಟಿದ್ದು ಕುವೆಂಪು. ಅವರ ಅವಿರತ ಹಾಗೂ ಮೌಲಿಕ ಸಾಹಿತ್ಯಕೃಷಿಯಿಂದಾಗಿ ಕನ್ನಡ ಸಮೃದ್ಧ ಮತ್ತು ಶ್ರೀಮಂತ ಭಾಷೆಯಾಗಿ ಹೊರಹೊಮ್ಮಿದೆ ಎಂದರು.
ಜಾತಿ, ಮತ, ಧರ್ಮ, ಭೇದಗಳಿಲ್ಲದ ಸರ್ವೋದಯದ ಮಾನವತಾವಾದವನ್ನು ತಮ್ಮ ಸಾಹಿತ್ಯದ ಮೂಲಕ ಸಾರಿದವರು ಕುವೆಂಪು. ಅವರ ‘ವಿಶ್ವಮಾನವ’ ಕಲ್ಪನೆ ಸರ್ವೋತ್ಕೃಷ್ಟವಾದುದು. ಅವರು ಸಾಮಾಜಿಕ ಮೂಢನಂಬಿಕೆಗಳ ವಿರುದ್ಧ ಧ್ವನಿ ಎತ್ತಿ, ಮೌಲ್ಯಗಳನ್ನು ಮರು-ವ್ಯಾಖ್ಯಾನಿಸಲು ಪ್ರೇರೇಪಿಸಿದರು. ಪಾಶ್ಚಾತ್ಯ ಸಾಹಿತ್ಯದ ಪ್ರಭಾವವಿದ್ದರೂ, ಕನ್ನಡತನವನ್ನು ಉಳಿಸಿದವರಲ್ಲಿ ಕುವೆಂಪು ಮೇಲ್ಪಂಕ್ತಿಯಲ್ಲಿ ನಿಲ್ಲುತ್ತಾರೆ ಎಂದರು. ಕುವೆಂಪುರವರ ಸಾಹಿತ್ಯವು ಆಧುನಿಕತೆ, ಮಾನವೀಯತೆ ಮತ್ತು ಕನ್ನಡದ ಭಾಷಾ ಸೌಂದರ್ಯದ ಮಹಾನ್ ಸಂಗಮವಾಗಿದೆ ಮಾತ್ರವಲ್ಲ ಕನ್ನಡ ಸಾಹಿತ್ಯವನ್ನು ಉನ್ನತ ಶಿಖರಕ್ಕೆ ಕೊಂಡೊಯ್ದಿದೆ. ಇಂತಹ ಜಗದಕವಿ, ಯುಗದ ಕವಿ, ಕನ್ನಡದ ಮೇರುಕವಿ ಪುಟ್ಟಪ್ಪನವರು ಜನಿಸಿದ ನೆಲದಲ್ಲಿ ನಾವಿದ್ದೇವೆ ಎಂಬುದೇ ಸಂಭ್ರಮದ ಸಂಗತಿ ಎಂದರು.
ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ಪ್ರಕೃತಿಯ ಮಹತ್ವ ಸಾರಿದ ಕುವೆಂಪು ಅವರ ಆಶಯದಂತೆ ಮಾನವೀಯತೆ, ಮನುಷ್ಯತ್ವವನ್ನು ಪಠ್ಯದಲ್ಲಿ ಅಳವಡಿಸಲಾಗುತ್ತಿದೆ. ಅಲ್ಲದೇ ನೀತಿ ಶಿಕ್ಷಣವನ್ನು ಪ್ರಸಕ್ತ ಸಾಲಿನಿಂದ ಬೋಧಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.
ಕನ್ನಡ ಭಾಷೆಯ ಉಳಿವು-ವಿಕಾಸ, ಶಿಕ್ಷಣಕ್ಕೆ ಒತ್ತು ನೀಡಬೇಕಾಗಿರುವುದು ಸರ್ಕಾರದ ಕರ್ತವ್ಯ. ಪ್ರಸಕ್ತ ಆಡಳಿತಾರೂಢ ಸರ್ಕಾರ ಶಿಕ್ಷಣಕ್ಕಾಗಿ ಪ್ರತಿ ವರ್ಷ 50000ಕೋಟಿ ಮೊತ್ತವನ್ನು ಖರ್ಚು ಮಾಡುತ್ತಿದೆ ಎಂದ ಅವರು, ಒಂದರಿಂದ ಹತ್ತನೆ ತರಗತಿಯವರೆಗಿನ ಎಲ್ಲಾ ಪಠ್ಯಪುಸ್ತಕಗಳಲ್ಲಿ ಕುವೆಂಪು ವಿರಚಿತ ನಾಡಗೀತೆಯನ್ನು,ಗಾಂಧೀಜಿಯವರ ಸಪ್ತಪಾತಕಗಳು ಮತ್ತು ಧ್ಯಾನಸ್ಥ ಗಾಂಧೀಜಿಯವರ ಭಾವಚಿತ್ರವನ್ನು ಮುದ್ರಿಸಲಾಗುತ್ತಿದೆ. ಅಂತೆಯೇ ಜಾತ್ಯಾತೀತ ಭಾವವನ್ನು ಪ್ರತಿಬಿಂಬಿಸುವ ಸಂವಿಧಾನದ ಪೀಠಿಕೆಯನ್ನು ಅಚ್ಚು ಹಾಕಿಸಲು ಉದ್ದೇಶಿಸಲಾಗಿದೆ ಎಂದರು.
ಪ್ರತಿಷ್ಟಾನದಿಂದ ನೀಡಲಾಗುವ 2025ರ ರಾಷ್ಟ್ರೀಯ ಕುವೆಂಪು ಪುರಸ್ಕಾರಕ್ಕೆ ಬಾಜನರಾದ ಕೊಂಕಣಿ ಮತ್ತು ಮರಾಠಿ ದ್ವಿಭಾಷಾ ಕವಿ ಮಹಾಬಳೇಶ್ವರ ಸೈಲ್‌ಅವರು ಕೃತಜ್ಞತೆಯಿಂದ ಪ್ರಶಸ್ತಿಯನ್ನು ಸ್ವೀಕರಿಸಿದ್ದೇನೆ. ಕುವೆಂಪು ಅವರು ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ. ಅವರು ನಾಡಿಗೆ ನೀಡಿದ ಸಂದೇಶ ಸಾರ್ವಕಾಲಿಕವಾಗಿದೆ ಎಂದರು.
ಕುವೆಂಫು ನಾಡುನುಡಿಯನ್ನು ಪ್ರೀತಿಸಿದವರು, ಅವರ ಕೃತಿ ನಮ್ಮೆಲ್ಲರ ಕಿರೀಟಪ್ರಾಯವಾಗಿದೆ. ರಾಮಾಯಣ ಕೃತಿಯಲ್ಲಿ ಊರ್ಮಿಳೆಯ ಪಾತ್ರದ ಕುರಿತು ಕವಿ ಕುವೆಂಪು ಅವರು ವಿಶೇಷ ಬೆಳಕು ಚೆಲ್ಲಿದ್ದಾರೆ. ತಮ್ಮ ಸಾಹಿತ್ಯದ ಮೂಲಕ ಎಲ್ಲರಲ್ಲೂ ವಿಶ್ವಪ್ರೇಮ, ಪ್ರಕೃತಿ ಪ್ರೇಮವನ್ನು ಬೆಳೆಸಿದ್ದಾರೆ. ರಾಮಾಯಣ ದರ್ಶನಂ ಮತ್ತು ಕಾನೂರು ಸುಬ್ಬಮ್ಮ ಹೆಗ್ಗಡಿತಿ ಅವು ಗದ್ಯಮಹಾಕಾವ್ಯಗಳೇ ಆಗಿವೆ. ಅವರ ವೈಚಾರಿಕ ನಿಲುವು ನಮಗೆಲ್ಲರಿಗೂ ಜೀವನ ವಿಧಾನಗಳಾಗಿವೆ ಎಂದರು.

Madhu Bangarappa ಕುವೆಂಪುರವರು ತಮ್ಮ ಸಾಹಿತ್ಯದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಸಾಬೀತುಪಡಿಸಿದ್ದಾರೆ. ಕನ್ನಡ ಭಾಷೆಯ ಹಿರಿಮೆಯನ್ನು ತಮ್ಮ ಸಾಹಿತ್ಯದ ಮೂಲಕ ವಿಶ್ವಕ್ಕೆ ಪರಿಚಯಿಸಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ರಾಷ್ಟ್ರೀಯ ಪ್ರಶಸ್ತಿಯ ಮೂಲಕ ಕುಪ್ಪಳಿ ಎಲ್ಲಾ ಭಾಷಿಕರ ಒಕ್ಕೂಟವಾಗಿ ಪ್ರತಿಬಿಂಬಿತವಾಗಿದೆ. ಡಾ.ಶರತ್‌ಅನಂತಮೂರ್ತಿ, ಕುವೆಂಪು ವಿವಿ ಕುಲಪತಿಗಳು, ಶಂಕರಘಟ್ಟ.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕುವೆಂಪು ಪ್ರತಿಷ್ಟಾನದ ಅ‍ಧ್ಯಕ್ಷ ಡಾ.ಬಿ.ಎಲ್.ಶಂಕರ್‌ ಅವರು ಮಾತನಾಡಿ, ಕವಿಶೈಲ, ಕುಪ್ಪಳಿಯ ವಿಕಾಸಕ್ಕೆ ಮಾಜಿ ಮುಖ್ಯಮಂತ್ರಿ ದಿ.ಎಸ್.ಬಂಗಾರಪ್ಪ ಅವರ ಕೊಡುಗೆ ಅಪಾರ. ವರ್ಷಕ್ಕೆ ಮೂರ್ನಾಲ್ಕು ಲಕ್ಷ ಜನ ಭೇಟಿ ನೀಡುವ ಪ್ರವಾಸಿ ತಾಣವಾಗಿ ಕವಿಮನೆ ಪ್ರಸಿದ್ಧಿ ಪಡೆದಿದೆ. ಪೂರ್ಣಚಂದ್ರ ತೇಜಸ್ವಿಯವರ ಸಲಹೆಯಂತೆ ಅಂದಿನ ಮುಖ್ಯಮಂತ್ರಿ ಜೆ.ಹೆಚ್.ಪಟೇಲ್‌ಅವರು ಕವಿಮನೆಯ ಸುತ್ತಮುತ್ತಲ ಪ್ರದೇಶವನ್ನು ಕುವೆಂಪು ಜೈವಿಕ ಅರಣ್ಯ ಪ್ರದೇಶ ಎಂದು ಘೋಷಿಸಿದರು. ಈ ಸ್ಥಳ ಇತ್ತೀಚಿನ ದಿನಗಳಲ್ಲಿ ಆಯಸ್ಕಾಂತದಂತೆ ಜನರನ್ನು ತನ್ನೆಡೆಗೆ ಸೆಳೆಯುತ್ತಿದೆ ಎಂದರು.
ರಾಜಧಾನಿ ಬೆಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕುವೆಂಪು ಕಲಾಕ್ಷೇತ್ರದ ನಿರ್ಮಾಣಕ್ಕೆ ಅನೇಕ ಜನ ದಾನಿಗಳು ಮುಂದಾಗಿದ್ದಾರೆ. ಆದಾಗ್ಯೂ ಇನ್ನೂ 8-9ಕೋಟಿ. ರೂ.ಗಳ ಅಗತ್ಯವಿದ್ದು, ರಾಜ್ಯ ಸರ್ಕಾರದಿಂದ ಬಿಡುಗಡೆಗೊಳಿಸಲು ಸಹಕಾರ ನೀಡಬೇಕು. ಕುವೆಂಪು ವಿರಚಿತ ನಾಡಗೀತೆಯನ್ನು ಜನಸಾಮಾನ್ಯರು ಅರ್ಥೈಸಿಕೊಳ್ಳುವಂತೆ ಕಾರ್ಯಕ್ರಮವನ್ನು ರೂಪಿಸಬೇಕು. ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲಿ ಕುವೆಂಪು ಸಾಹಿತ್ಯದ ಕುರಿತು ಚರ್ಚೆ, ಕಮ್ಮಟಗಳು, ಪ್ರಬಂಧ ಸ್ಪರ್ಧೆಗಳು ನಡೆಯುವಂತಾಗಬೇಕೆಂದವರು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ ಅವರು ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಶಯದಂತೆ ಶಿವಮೊಗ್ಗ ಸಮೀಪದ ವಿಮಾನ ನಿಲ್ದಾಣಕ್ಕೆ ಕುವೆಂಪು ವಿಮಾನ ನಿಲ್ದಾಣ ಎಂದು ಹೆಸರಿಡಲಾಗಿದೆ. ಕುವೆಂಪು ಅವರು ತಮ್ಮ ಸಾಹಿತ್ಯದಲ್ಲಿ ನೀಡಿದ ಮಾನವೀಯತೆಯ ಸಂದೇಶ ಎಲ್ಲರಿಗೂ ಎಲ್ಲಾ ಕಾಲಕ್ಕೂ ಪ್ರೇರಣದಾಯಿಯಾಗಿದೆ ಎಂದರು.
ಜಾತಿ ಇಂದು ಎಲ್ಲಾ ನಾಯಕರ ಊರುಗೋಲಾಗಿದೆ. ತತ್ವ ಸಿದ್ಧಾಂತಗಳ ಬದಲಾಗಿ ಜಾತಿ ವ್ಯವಸ್ಥೆ ಬಂದು ನಿಂತಿದೆ. ಇಂತಹ ಸಂದರ್ಭದಲ್ಲಿ ಮನುಕುಲಕ್ಕೆ ಮಾರ್ಗದರ್ಶನ ನೀಡಿದ ಕುವೆಂಪು ಅವರ ಸಾಹಿತ್ಯವನ್ನು ಅರಿತು ನಡೆಯುವ ಅಗತ್ಯವಿದೆ ಎಂದವರು ನುಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್‌ಸದಸ್ಯೆ ಶ್ರೀಮತಿ ಬಲ್ಕೀಸ್‌ಬಾನು ಅವರು ಕುವೆಂಪು ಕೃತಿ ಬೊಮ್ಮನಹಳ್ಳಿಯ ಕಿಂದರಿಜೋಗಿ ಕೃತಿ ನೂರನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಕೃತಿಯಿಂದಾದ ಭಾಗಗಳ ಚಿತ್ರಗಳನ್ನು ಮುದ್ರಿಸಿದ 2026ರ ಕ್ಯಾಲೆಂಡರ್‌ನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಕಾಡಾ ಅಧ್ಯಕ್ಷ ಡಾ.ಅಂಶುಮಂತ್‌, ರಾಷ್ಟ್ರಕವಿ ಪೂರ್ಣಚಂದ್ರ ಕನ್ನಡ ಅಧ್ಯಯನ ಕೇಂದ್ರದ ಶೈಕ್ಷಣಿಕ ಸಂಚಾಲಕ ಕೇಶವ ಮಳಗಿ, ದೇವಂಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಗಿರಿಜಾ ಕುಮಾರ್‌, ದೇವಂಗಿ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಮತಿ ಹೆಚ್.ಪಿ.ಸರೋಜ, ನಾಗರಾಜ ಟಿ.ಎಸ್., ಪ್ರತಿಷ್ಟಾನದ ಸಮಕಾರ್ಯದರ್ಶಿ ಕಡಿದಾಳ್‌ಪ್ರಕಾಶ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್‌ಯು.ಹೆಚ್.‌ಸೇರಿದಂತೆ ನಾಡಿನ ಹಿರಿಯ ಕವಿ-ಕಲಾವಿದರು, ಸಾಹಿತ್ಯಾಸಕ್ತರು ಭಾಗವಹಿಸಿದ್ದರು.

Kuvempu ವಿಚಾರ ಕ್ರಾಂತಿಯ ಸ್ಫುರಣೆ. ಕುವೆಂಪು ಒಳ ಚಿಂತನೆಯ ಹರಿವು.ಲೇ- ಡಾ.ರವಿ.ಎಂ.ಸಿದ್ಲಿಪುರ.

0

Kuvempu ಯುಗಚೇತನ, ರಸಋಷಿ ಕುವೆಂಪು ಅವರ ಜನ್ಮದಿನವು ಕೇವಲ ಒಬ್ಬ ವ್ಯಕ್ತಿಯ ಹುಟ್ಟುಹಬ್ಬವಷ್ಟೇ ಅಲ್ಲ; ಅದು ವೈಚಾರಿಕತೆಯ ದೀಪವನ್ನು ಹಚ್ಚಿ, ಅಜ್ಞಾನದ ಕತ್ತಲೆಯನ್ನು ಸರಿಸಿ, ನಾಡಿನ ಚೇತನವನ್ನು ಎಚ್ಚರಿಸುವ ಪವಿತ್ರ ದಿನವಾಗಿದೆ. ಕುವೆಂಪು ಎಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ, ಅದೊಂದು ಅದಮ್ಯ ಶಕ್ತಿ, ಒಂದು ಪ್ರಚಂಡ ವೈಚಾರಿಕ ಆಂದೋಲನ ಮತ್ತು ಅಧ್ಯಾತ್ಮದ ಉನ್ನತ ಶಿಖರ. ಅವರ ಬದುಕು ಮತ್ತು ಬರಹಗಳು ಕೇವಲ ಸಾಹಿತ್ಯದ ಸರಕುಗಳಲ್ಲ, ಬದಲಿಗೆ ಅವು ಬದುಕನ್ನು ಕಟ್ಟಿಕೊಡುವ, ದಾರಿತಪ್ಪಿದ ಸಮಾಜಕ್ಕೆ ಬೆಳಕು ನೀಡುವ ದೀವಿಗೆಗಳು. ಇಂದು ನಾವು ಕೇವಲ ಅವರ ಕವಿತೆಗಳನ್ನು ಹಾಡಿ ಹೊಗಳುವುದಷ್ಟೇ ಸಾಲದು; ಅವರು ತಮ್ಮ ಬರಹಗಳಲ್ಲಿ ಪ್ರತಿಪಾದಿಸಿದ ಪ್ರಖರವಾದ ವಿಚಾರಧಾರೆಗಳನ್ನು, ಯುವಜನತೆಗೆ ನೀಡಿದ ಕರೆಗಳನ್ನು ಮತ್ತು ಶಿಕ್ಷಣ ಹಾಗೂ ಸಂಸ್ಕೃತಿಯ ಕುರಿತಾದ ಅವರ ದಿಕ್ಸೂಚಿಗಳನ್ನು ಮನನ ಮಾಡಿಕೊಳ್ಳುವುದು ಅತ್ಯಗತ್ಯ. ಅವರ ಕೃತಿಗಳಲ್ಲಿ ಹರಡಿರುವ ಚಿಂತನೆಗಳು ಇಂದಿನ ತಲ್ಲಣದ ಬದುಕಿಗೆ ಸಂಜೀವಿನಿಯಂತೆ ಕಾರ್ಯನಿರ್ವಹಿಸಬಲ್ಲವು.

ಕುವೆಂಪು ಅವರ ವ್ಯಕ್ತಿತ್ವವು ಮಲೆನಾಡಿನ ಹಸಿರು ಸಿರಿಯಷ್ಟೇ ರಮಣೀಯವೂ ಮತ್ತು ಸಹ್ಯಾದ್ರಿಯ ಬೆಟ್ಟಗಳಷ್ಟೇ ಗಂಭೀರವೂ ಆಗಿತ್ತು. ಅವರ ಸಾಹಿತ್ಯ ಕೃಷಿಯು ಕೇವಲ ಕಲ್ಪನೆಯ ವಿಲಾಸವಾಗಿರದೆ, ಅದು ಒಂದು ತಪಸ್ಸಾಗಿತ್ತು. ಅವರು ಹೇಳುವಂತೆ, ಸಾಹಿತ್ಯವೆಂಬುದು ಮನೋರಂಜನೆಯ ಸರಕಲ್ಲ, ಅದು ಆತ್ಮಶ್ರೀಯ ಸಾಧನೆಯ ಸೋಪಾನ. ಅದು ಅಜ್ಞಾನದ ಕತ್ತಲೆಯಲ್ಲಿ ತತ್ತರಿಸುತ್ತಿದ್ದ ಸಮಾಜವನ್ನು ಎಚ್ಚರಿಸುವ ರಣಕಹಳೆಯಾಗಬೇಕೆಂದು ಅವರು ಆಶಿಸಿದ್ದರು. ಅವರ ʻವಿಚಾರ ಕ್ರಾಂತಿಗೆ ಆಹ್ವಾನʼ ಕೃತಿಯಲ್ಲಿ ವ್ಯಕ್ತವಾಗಿರುವಂತೆ, ನಮ್ಮ ಸಮಾಜವು ಶತಮಾನಗಳಿಂದ ಮತ, ಮೌಢ್ಯ ಮತ್ತು ಕಂದಾಚಾರಗಳೆಂಬ ಕಬ್ಬಿಣದ ಸರಪಳಿಗಳಲ್ಲಿ ಬಂಧಿಯಾಗಿದೆ. ಯುವಜನತೆಯನ್ನು ಉದ್ದೇಶಿಸಿ ಅವರು ನೀಡಿದ ʻಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿʼ ಎಂಬ ಕರೆ, ಇಂದಿಗೂ ಬೌದ್ಧಿಕ ಸ್ವಾತಂತ್ರ್ಯದ ಮೂಲಮಂತ್ರವಾಗಿದೆ. ಮನುಷ್ಯನಿಗೆ ʻಮತಿʼ ಅಥವಾ ಬುದ್ಧಿಯೇ ಅತ್ಯಂತ ದೊಡ್ಡ ಆಸ್ತಿ. ಆ ಮತಿಯನ್ನು ಯಾವುದೋ ಗುರು ಹೇಳಿದನೆಂದೋ, ಪುರಾತನ ಗ್ರಂಥಗಳಲ್ಲಿ ಬರೆದಿದೆಯೆಂದೋ ಅಥವಾ ಸಂಪ್ರದಾಯದ ಹೆಸರಿನಲ್ಲೋ ಅಡಿಯಾಳು ಮಾಡಬಾರದು ಎಂದು ಕುವೆಂಪು ಘಂಟಾಘೋಷವಾಗಿ ಸಾರಿದರು. ನಿರಂಕುಶ ಪ್ರಭುತ್ವದಂತೆ ನಿರಂಕುಶಮತಿಯು ವಿವೇಚನಾರಹಿತವಾದುದಲ್ಲ; ಬದಲಿಗೆ ಅದು ಸತ್ಯಾನ್ವೇಷಣೆಗೆ ತೆರೆದುಕೊಂಡ, ಸಂಯಮಪೂರ್ಣವಾದ ಮತ್ತು ವೈಜ್ಞಾನಿಕ ದೃಷ್ಟಿಯುಳ್ಳ ಜಾಗೃತ ಪ್ರಜ್ಞೆಯಾಗಿದೆ. ಯಾರು ತಮ್ಮ ಬುದ್ಧಿಯನ್ನು ಮತ್ತೊಬ್ಬರ ಪಾದದಡಿ ಒತ್ತೆಯಿಡುತ್ತಾರೋ ಅವರು ತಮ್ಮ ಆತ್ಮಶ್ರೀಯನ್ನೇ ಕಳೆದುಕೊಳ್ಳುತ್ತಾರೆ ಎಂಬುದು ಅವರ ಖಚಿತ ನಿಲುವಾಗಿತ್ತು.

ಕುವೆಂಪು ಅವರ ಮತ್ತೊಂದು ಪ್ರಮುಖ ಕಾಳಜಿ ಶಿಕ್ಷಣ ಮತ್ತು ಭಾಷಾ ಮಾಧ್ಯಮದ ಕುರಿತಾಗಿತ್ತು. ಇಂಗ್ಲಿಶ್ ಭಾಷೆಯ ವ್ಯಾಮೋಹದಲ್ಲಿ ಸಿಲುಕಿ ಕನ್ನಡದ ಕಂದಮ್ಮಗಳು ಅನುಭವಿಸುತ್ತಿದ್ದ ಯಾತನೆಯನ್ನು ಅವರು ತೀವ್ರವಾಗಿ ಖಂಡಿಸಿದರು. ಇಂಗ್ಲಿಶ್ ಎನ್ನುವುದು ಜ್ಞಾನಾರ್ಜನೆಗೆ ಒಂದು ಕಿಟಕಿ ಮಾತ್ರವಾಗಿರಬೇಕೇ ಹೊರತು, ಅದೇ ಮನೆಯೊಡೆಯನಾಗಬಾರದು ಎಂದು ಅವರು ಪ್ರತಿಪಾದಿಸಿದರು. “ಮಗುವಿನ ಬೆಳವಣಿಗೆಗೆ ಬೇಕಾಗಿರುವುದು ಒಂದು ಬಟ್ಟಲು ಹಾಲು. ಅದನ್ನು ಮಣಭಾರದ ಚಿನ್ನದ ಕಡಾಯಿಯಲ್ಲಿ ಹಾಕಿ ಕೊಟ್ಟರೆ, ಮಗು ಆ ಚಿನ್ನದ ಪಾತ್ರೆಯನ್ನು ಎತ್ತಲಾರದೆ ಅದರಡಿ ಸಿಕ್ಕಿ ನಲುಗುತ್ತದೆ” ಎಂಬ ಅವರ ಉಪಮೆ ಇಂದಿಗೂ ಪ್ರಸ್ತುತ. ಇಂಗ್ಲಿಶ್ ಎಂಬ ಚಿನ್ನದ ಕಡಾಯಿಯ ಭಾರಕ್ಕೆ ಸಿಲುಕಿ, ಜ್ಞಾನವೆಂಬ ಹಾಲನ್ನು ಕುಡಿಯಲಾಗದೆ ಎಷ್ಟೋ ಪ್ರತಿಭಾವಂತ ಗ್ರಾಮೀಣ ಮಕ್ಕಳು ಮತ್ತು ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಅವರು ನೊಂದು ನುಡಿದಿದ್ದರು. ವಿಜ್ಞಾನವಾಗಲಿ, ತತ್ವಶಾಸ್ತ್ರವಾಗಲಿ, ಅದು ಕನ್ನಡದ ಮೂಲಕವೇ ಮಗುವಿನ ಮನಸ್ಸನ್ನು ತಲುಪಬೇಕು. ಆಗ ಮಾತ್ರ ಜ್ಞಾನವು ಬದುಕಿನ ಭಾಗವಾಗಲು ಸಾಧ್ಯ. ಪರಭಾಷೆಯ ಮೂಲಕ ಕಲಿಯುವ ವಿದ್ಯೆ ಕೇವಲ ಗಿಳಿಪಾಠವಾಗುತ್ತದೆಯೇ ಹೊರತು, ಅದು ರಕ್ತಗತವಾಗಿ ಸೃಜನಶೀಲತೆಯನ್ನು ಅರಳಿಸುವುದಿಲ್ಲ ಎಂಬುದು ಅವರ ಶಿಕ್ಷಣ ಮೀಮಾಂಸೆಯಾಗಿತ್ತು. ಇದೇ ಕಾರಣಕ್ಕಾಗಿಯೇ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದಾಗ ಕನ್ನಡದಲ್ಲಿ ಪಠ್ಯಪುಸ್ತಕಗಳ ರಚನೆಗೆ ಮತ್ತು ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣಕ್ಕೆ ಅವರು ಒತ್ತು ನೀಡಿದರು.

Kuvempu ಕುವೆಂಪು ಅವರ ಆಧ್ಯಾತ್ಮಿಕ ಬದುಕು ಶ್ರೀ ರಾಮಕೃಷ್ಣ ಪರಮಹಂಸರು ಮತ್ತು ಸ್ವಾಮಿ ವಿವೇಕಾನಂದರ ಪ್ರಭಾವದಿಂದ ರೂಪುಗೊಂಡಿತ್ತು. ಅವರ ‘ಗುರುಗಳಾದ’ ಶ್ರೀ ರಾಮಕೃಷ್ಣರು ಮತ್ತು ವಿವೇಕಾನಂದರು ಅವರಿಗೆ ಕೇವಲ ಪೂಜ್ಯವಸ್ತುಗಳಾಗಿರಲಿಲ್ಲ, ಬದಲಿಗೆ ಬದುಕಿನ ದಾರಿದೀಪಗಳಾಗಿದ್ದರು. ಮೈಸೂರಿನ ರಾಮಕೃಷ್ಣ ಆಶ್ರಮದೊಂದಿಗಿನ ಅವರ ಒಡನಾಟ, ಅಲ್ಲಿನ ಸ್ವಾಮೀಜಿಗಳಾದ ಸಿದ್ದೇಶ್ವರಾನಂದರೊಂದಿಗಿನ ಸ್ನೇಹ, ಅವರ ಬದುಕಿನ ಗತಿಯನ್ನೇ ಬದಲಿಸಿತು. ಯುವಕನಾಗಿದ್ದಾಗ ಕುವೆಂಪು ಅವರಿಗೆ ಎದುರಾದ ಆಧ್ಯಾತ್ಮಿಕ ಜಿಜ್ಞಾಸೆಗಳಿಗೆ, ಬದುಕಿನ ತೊಳಲಾಟಗಳಿಗೆ ಉತ್ತರ ಸಿಕ್ಕಿದ್ದು ಈ ಗುರು ಪರಂಪರೆಯಿಂದ. ಅವರು ತಮ್ಮ ಗುರುಗಳಾದ ಟಿ.ಎಸ್. ವೆಂಕಣ್ಣಯ್ಯನವರ ಬಗ್ಗೆ ಹೊಂದಿದ್ದ ಅಪಾರ ಗೌರವ ಮತ್ತು ಪ್ರೀತಿ ಅವರ ವ್ಯಕ್ತಿತ್ವದ ವಿನಯಶೀಲತೆಯನ್ನು ತೋರಿಸುತ್ತದೆ. ಒಬ್ಬ ಮಹಾನ್ ಕವಿಯಾಗಿದ್ದರೂ, ತಮ್ಮ ಗುರುಗಳ ಎದುರು ಮಗುವಿನಂತೆ ವರ್ತಿಸುತ್ತಿದ್ದ ಅವರ ಸರಳತೆ ಎಲ್ಲರಿಗೂ ಮಾದರಿ.

ಕುವೆಂಪು ಅವರ ವಿಚಾರ ಕ್ರಾಂತಿಯು ಕೇವಲ ಬೌದ್ಧಿಕ ಕಸರತ್ತಾಗಿರಲಿಲ್ಲ. ಅದು ಸಮಾಜದ ತಳಹದಿಯನ್ನೇ ಅಲುಗಾಡಿಸಿ, ಅಲ್ಲಿನ ಕಲ್ಮಶಗಳನ್ನು ತೊಲಗಿಸುವ ಆಶಯವನ್ನು ಹೊಂದಿತ್ತು. ಜಾತಿ, ಮತ, ಪಂಥಗಳ ಹೆಸರಿನಲ್ಲಿ ನಡೆಯುವ ಶೋಷಣೆಯನ್ನು ಅವರು ಉಗ್ರವಾಗಿ ಖಂಡಿಸಿದರು. “ಮತದ ಹೆಸರಿನಲ್ಲಿ, ಸಮಾಜದ ಕಟ್ಟುಕಟ್ಟಳೆಗಳ ಹೆಸರಿನಲ್ಲಿ, ದೈವ ಪಿಶಾಚಿ ಗ್ರಹಗಳ ಹೆಸರಿನಲ್ಲಿ ದುರ್ವ್ಯಯವಾಗುತ್ತಿರುವ ಸಂಪತ್ತನ್ನು ತಡೆಗಟ್ಟಿ, ಅದನ್ನು ಹೆಚ್ಚು ಅವಶ್ಯಕವಾಗಿರುವ ಮತ್ತು ಹೆಚ್ಚು ಉಪಯೋಗಕರವಾಗಿರುವ ಜೀವನ ಪಥಗಳಲ್ಲಿ ವಿನಿಯೋಗಿಸುವಂತೆ ಮಾಡಬೇಕು” ಎಂಬ ಅವರ ಮಾತುಗಳು ಧಾರ್ಮಿಕ ಮೌಢ್ಯದ ವಿರುದ್ಧದ ಅವರ ಸಿಟ್ಟನ್ನು ತೋರಿಸುತ್ತದೆ. ಪೂಜೆ, ಪುನಸ್ಕಾರಗಳಿಗಿಂತಲೂ ಮಿಗಿಲಾಗಿ ದೀನದಲಿತರ ಸೇವೆಯೇ ನಿಜವಾದ ದೈವಾರಾಧನೆ ಎಂದು ಅವರು ನಂಬಿದ್ದರು.

ಕುವೆಂಪು ಅವರ ಸಾಹಿತ್ಯದ ಮತ್ತೊಂದು ಮಹತ್ವದ ಮುಖವೆಂದರೆ ಅವರ ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯ. ಇದು ಕೇವಲ ವಾಲ್ಮೀಕಿ ರಾಮಾಯಣದ ಭಾಷಾಂತರವಲ್ಲ, ಬದಲಿಗೆ ಇದೊಂದು ‘ದರ್ಶನ’. ಪ್ರಾಚೀನ ಕಾವ್ಯ ಪರಂಪರೆಯನ್ನು ಆಧುನಿಕ ವೈಜ್ಞಾನಿಕ ದೃಷ್ಟಿಕೋನ ಮತ್ತು ಆಧ್ಯಾತ್ಮಿಕ ಅನುಭವದೊಂದಿಗೆ ಬೆರೆಸಿ ರಚಿಸಿದ ಅದ್ಭುತ ಕೃತಿ ಇದು. ಈ ಕೃತಿಯಲ್ಲಿ ಅವರು ಪ್ರತಿಯೊಂದು ಪಾತ್ರವನ್ನೂ ಹೊಸ ದೃಷ್ಟಿಯಲ್ಲಿ ನೋಡಿದ್ದಾರೆ. ರಾವಣನಂತಹ ಖಳನಾಯಕನನ್ನೂ ಕೂಡ ಗುಣಾತ್ಮಕವಾಗಿ ಪರಿವರ್ತಿಸಿ, ಅವನಲ್ಲಿನ ಅಸುರೀ ಶಕ್ತಿಯು ದೈವೀ ಶಕ್ತಿಗೆ ಶರಣಾಗುವಂತೆ ಚಿತ್ರಿಸಿದ್ದಾರೆ. ವಿಶ್ವಸಾಹಿತ್ಯದ ಮೇರು ಕೃತಿಗಳಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ಈ ಮಹಾಕಾವ್ಯವು ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟಿತು. ಆದರೆ ಕುವೆಂಪು ಅವರಿಗೆ ಪ್ರಶಸ್ತಿಗಳಿಗಿಂತಲೂ ಮುಖ್ಯವಾಗಿದ್ದು ಕೃತಿಯು ಓದುಗನ ಮನಸ್ಸಿನಲ್ಲಿ ಉಂಟುಮಾಡುವ ಪರಿವರ್ತನೆ. “ರಾಮಾಯಣದರ್ಶನಂ ಓದುವುದೆಂದರೆ ಅದು ಕೇವಲ ಕಾವ್ಯ ವಾಚನವಲ್ಲ, ಅದೊಂದು ತಪಸ್ಸು” ಎಂದು ಅವರು ಭಾವಿಸಿದ್ದರು.

ಕುವೆಂಪು ಅವರ ವ್ಯಕ್ತಿತ್ವದಲ್ಲಿ ಎದ್ದು ಕಾಣುವ ಮತ್ತೊಂದು ಗುಣವೆಂದರೆ ಅವರ ನಿಷ್ಠುರತೆ ಮತ್ತು ಸತ್ಯಪರತೆ. ಅವರು ಎಂದು ಯಾರ ಓಲೈಕೆಗೂ ಜಗ್ಗಿದವರಲ್ಲ. ಸತ್ಯವನ್ನು ಸತ್ಯವೆಂದೇ ಹೇಳುವ ಧೈರ್ಯ ಅವರಿಗಿತ್ತು. ಅಧಿಕಾರಕ್ಕಾಗಲೀ, ಹಣಕ್ಕಾಗಲೀ ಅಥವಾ ಕೀರ್ತಿಗಾಗಲೀ ಅವರು ತಮ್ಮ ತತ್ವಗಳನ್ನು ಬಲಿಕೊಡಲಿಲ್ಲ. ಮೈಸೂರು ವಿಶ್ವವಿದ್ಯಾನಿಲಯದ ʻಮಾನಸಗಂಗೋತ್ರಿʼಯ ನಿರ್ಮಾಣದ ಸಂದರ್ಭದಲ್ಲಿ ಅವರು ತೋರಿದ ದೂರದೃಷ್ಟಿ ಮತ್ತು ಛಲ ಅವರ ಆಡಳಿತಾತ್ಮಕ ದಕ್ಷತೆಗೆ ಸಾಕ್ಷಿಯಾಗಿದೆ. ಜ್ಞಾನದ ಗಂಗೆಯು ಪ್ರತಿಯೊಬ್ಬರ ಮನದಂಗಳವನ್ನು ತಲುಪಬೇಕು ಎಂಬ ಆಶಯದೊಂದಿಗೆ ಅವರು ‘ಪ್ರಸಾರಾಂಗ’ದ ಮೂಲಕ ಜ್ಞಾನ ಪ್ರಸಾರ ಕಾರ್ಯವನ್ನು ಕೈಗೊಂಡರು.

ಕುವೆಂಪು ಪ್ರತಿಪಾದಿಸಿದ ʻವಿಶ್ವಮಾನವ ಸಂದೇಶʼ ಅವರ ಸಮಗ್ರ ಚಿಂತನೆಯ ಸಾರವಾಗಿದೆ. ಮನುಷ್ಯನು ಹುಟ್ಟುವಾಗ ವಿಶ್ವಮಾನವನಾಗಿಯೇ ಹುಟ್ಟುತ್ತಾನೆ, ಆದರೆ ಬೆಳೆಯುತ್ತಾ ಜಾತಿ, ಮತ, ದೇಶ, ಭಾಷೆಗಳ ಸಂಕೋಲೆಯಲ್ಲಿ ಸಿಲುಕಿ ಅಲ್ಪಮಾನವನಾಗುತ್ತಾನೆ. ಅವನನ್ನು ಮತ್ತೆ ವಿಶ್ವಮಾನವನನ್ನಾಗಿ ಮಾಡುವುದೇ ವಿದ್ಯೆಯ ಮತ್ತು ಸಂಸ್ಕೃತಿಯ ಉದ್ದೇಶವಾಗಬೇಕು ಎಂಬುದು ಅವರ ಆಶಯವಾಗಿತ್ತು. ʻಓ ನನ್ನ ಚೇತನ, ಆಗು ನೀ ಅನಿಗೇತನʼ ಎಂಬ ಅವರ ಕವಿತೆಯ ಸಾಲುಗಳು, ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸೀಮಿತ ಗುರುತುಗಳನ್ನು ಮೀರಿ ಅನಂತದ ಕಡೆಗೆ ಚಲಿಸಬೇಕೆಂಬ ಕರೆಯನ್ನು ನೀಡುತ್ತವೆ.

ಕುವೆಂಪು ಎಂದರೆ ಕೇವಲ ಕವಿಶೈಲದ ತುದಿಯಲ್ಲಿ ಕುಳಿತ ಕವಿ ಮಾತ್ರವಲ್ಲ, ಅವರು ಒಂದು ನಿತ್ಯ ಪ್ರೇರಣೆ. ಅವರ ಸಾಹಿತ್ಯವು ನಮಗೆ ಬದುಕನ್ನು ಪ್ರೀತಿಸುವುದನ್ನು ಕಲಿಸುತ್ತದೆ, ಅನ್ಯಾಯದ ವಿರುದ್ಧ ಸಿಡಿದೇಳುವುದನ್ನು ಕಲಿಸುತ್ತದೆ ಮತ್ತು ಎಲ್ಲದಕ್ಕಿಂತ ಮಿಗಿಲಾಗಿ ಮನುಷ್ಯನು ಮನುಷ್ಯನನ್ನು ಪ್ರೀತಿಸುವುದನ್ನು ಕಲಿಸುತ್ತದೆ. ಅವರ ಜನ್ಮದಿನದಂದು ನಾವು ಅವರಿಗೆ ಸಲ್ಲಿಸಬಹುದಾದ ನಿಜವಾದ ಗೌರವವೆಂದರೆ, ಅವರು ತೋರಿಸಿದ ʻವಿಚಾರ ಕ್ರಾಂತಿʼಯ ಹಾದಿಯಲ್ಲಿ ನಡೆಯುವುದು. ಜಾತಿ ಮತಗಳ ಬೇಲಿಯನ್ನು ಒಡೆದು, ಮೂಢನಂಬಿಕೆಗಳ ಕತ್ತಲೆಯಿಂದ ಹೊರಬಂದು, ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಂಡು, ವಿಶ್ವಮಾನವರಾಗುವತ್ತ ಹೆಜ್ಜೆ ಇಡುವುದೇ ನಾವು ಅವರಿಗೆ ಅರ್ಪಿಸುವ ನಿಜವಾದ ʻಷಷ್ಟಿ ನಮನʼ. ಅವರು ಬೆಳಗಿಸಿದ ಜ್ಞಾನದ ಹಣತೆ ನಮ್ಮೆಲ್ಲರ ಹೃದಯಗಳಲ್ಲಿ ಸದಾ ಉರಿಯುತ್ತಿರಲಿ. ಅವರ ಗಂಭೀರ ಮತ್ತು ಉದಾತ್ತ ಚಿಂತನೆಗಳು ನಮ್ಮ ಬದುಕನ್ನು ಹಸನುಗೊಳಿಸಲಿ. ಈ ಯುಗಪುರುಷನ ಜನ್ಮದಿನದಂದು ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಸಂಕಲ್ಪ ಮಾಡೋಣ.

ವಿಶ್ವಮಾನವ ದಿನಾಚರಣೆಯ ಶುಭಾಶಯಗಳು

ಡಾ. ರವಿ ಎಂ. ಸಿದ್ಲಿಪುರ

MESCOM ಡಿಸೆಂಬರ್ 30.ಶಿವಮೊಗ್ಗದಆರ್ ಎಂ.ಎಲ್. ನಗರದ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ.ಮೆಸ್ಕಾಂ ಪ್ರಕಟಣೆ.

0

MESCOM ಶಿವಮೊಗ್ಗ ನಗರ ಉಪವಿಭಾಗ-2ರ ಘಟಕ 5ರ ವ್ಯಾಪ್ತಿಯ ಆರ್.ಎಂ.ಎಲ್. ನಗರದಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿದ್ದು, ಡಿ. 30 ರಂದು ಬೆಳಗ್ಗೆ 10.00 ರಿಂದ ಸಂಜೆ 5.00ರವರೆಗೆ ಆರ್.ಎಂ.ಎಲ್.ನಗರ 1 ಮತ್ತು 2ನೇ ಹಂತ, ಕಿದ್ವಾಯಿ ಶಾಲೆ, ಅನ್ಸರ್ ಮಸೀದಿ, ಯುನಿಟಿ ಹಾಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾವರ್ಜಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Dr. C.V. Rudraradhya ಡಾ.ಸಿ.ವಿ.ರುದ್ರಾರಾಧ್ಯರಿಗೆ ಮೈಸೂರಿನಲ್ಲಿ “ಶಿಕ್ಷಕರ ಕಲ್ಯಾಣಿ‌ ಪ್ರಶಸ್ತಿ” ಪ್ರದಾನ.

0

Dr. C.V. Rudraradhya ಶರಣು ವಿಶ್ವ ವಚನ ಫೌಂಡೇಶನ್, ಮೈಸೂರು, ಅಂತರಾಷ್ಟ್ರೀಯ ಸಂಸ್ಥೆ, ಹಲವು ವಿಧದ ಸಮಾಜ ಸೇವೆಯಲ್ಲಿ ನಿರತವಾಗಿದೆ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ಗೌರವಿಸುವ ಸಾರ್ಥಕ ಕಾರ್ಯ ಮಾಡುತ್ತಿದೆ.
ಯೋಗಾಚಾರ್ಯ ಡಾ. ಸಿ.ವಿ. ರುದ್ರಾರಾಧ್ಯ , ಸಂಸ್ಥಾಪಕ ಕಾರ್ಯಾಧ್ಯಕ್ಷರು, ಶ್ರೀ ಶಿವಗಂಗಾ ಯೋಗ ಕೇಂದ್ರ ಶಿವಮೊಗ್ಗ ಇವರು ಯೋಗ ಕ್ಷೇತ್ರಕ್ಕೆ ತಮ್ಮ ಬದುಕನ್ನೇ ಅರ್ಪಿಸಿಕೊಂಡು ಸಾಧನೆಯ ಹಿಂದೆ ಇರುವ ತ್ಯಾಗ ಪರಿಶ್ರಮ ನಿಷ್ಠೆ ಮತ್ತು ಸಮಾಜಕ್ಕೆ ಆದರ್ಶವಾಗಿರುವ ಇವರ ಸೇವೆಯನ್ನು ಗುರುತಿಸಿ ಮೈಸೂರಿನಲ್ಲಿ ನೆರವೇರಿದ ಕಾರ್ಯಕ್ರಮದಲ್ಲಿ ಶರಣು ವಿಶ್ವ ವಚನ ಫೌಂಡೇಶನ್ ಅಂತರಾಷ್ಟ್ರೀಯ ಸಂಸ್ಥೆ ತನ್ನ ಹನ್ನೊಂದನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ಇವರ ಸಹಯೋಗದಲ್ಲಿ ಡಿಸೆಂಬರ್ 28ರಂದು ಮೈಸೂರಿನ ಕನ್ನಡ ಸಾಹಿತ್ಯ ಭವನದಲ್ಲಿ ಪೂಜ್ಯರು ಮತ್ತು ಗಣ್ಯರ ಸಮ್ಮುಖದಲ್ಲಿ ರಾಜ್ಯ ಮಟ್ಟದ ಶಿಕ್ಷಕರ ಕಲ್ಯಾಣಿ ಪ್ರಶಸ್ತಿ 2025 ಶರಣು ವಿಶ್ವ ವಚನ ಫೌಂಡೇಶನ್, ಮೈಸೂರು ಇವರು ಪ್ರಧಾನ ಮಾಡಿದರು.

Dr. C.V. Rudraradhya ಈ ಸಂದರ್ಭದಲ್ಲಿ ಶ್ರೀ ಶಿವಗಂಗಾ ಯೋಗ ಕೇಂದ್ರದ ವಿಶ್ವಸ್ಥ ಸಮಿತಿ ಅಧ್ಯಕ್ಷರಾದ ಶ್ರೀಯುತರಾದ ಎಸ್ ರುದ್ರೇಗೌಡರು ಮತ್ತು ಸದಸ್ಯರಾದ ಬಿ.ಸಿ ನಂಜುಂಡ ಶೆಟ್ಟರು, ಹೊಸ ತೋಟ ಸೂರ್ಯನಾರಾಯಣ, ಧನಂಜಯ ಸರ್ಜಿ ಕಲಗೋಡು ರತ್ನಾಕರ್, ಹಾಲಪ್ಪನವರು, ಬಿ.ವೈ. ಅರುಣದೇವಿ, ಎಸ್ ಎಸ್ ಜ್ಯೋತಿ ಪ್ರಕಾಶ್, ಚಂದ್ರಶೇಖರ್ ಪೋಷಕ ಸಮಿತಿ ಸದಸ್ಯರು ಮತ್ತು ಶಿಷ್ಯ ವೃಂದದವರು ಅಭಿನಂದಿಸಿದ್ದಾರೆ