Klive Special Article ಜನ ಸಂಸ್ಕೃತಿಗಳು ನಿಂತ ನೀರಾದಾಗಲೆಲ್ಲಾ ಅದನ್ನು ಕಲಕಿ, ಹರಿದು ಹೋಗುವಂತೆ ಮಾಡುವ ಕ್ರಾಂತಿಕಾರರು ಜನ್ಮ ತಾಳುವುದು ಸಂಸ್ಕೃತಿಗಳ ಸಮತೋಲನ ಉಳಿಸಿಕೊಳ್ಳಲು ಅಗತ್ಯ. ಜೈನ ಧರ್ಮದ ಸಂಸ್ಥಾಪಕನೆಂದು ಹೇಳಲಾಗುವ ಅಹಿಂಸೆಯ ಪ್ರತಿಪಾದಕ ಮಹಾವೀರನದ್ದು ಜನಸಂಸ್ಕೃತಿಗಳ ಹರಿಯುವಿಕೆಗೆ ದೊಡ್ಡ ಕೊಡುಗೆ.
ಆದರೆ, ಇಂಥ ಇತಿಹಾಸ ಪುರುಷರು, ಸಂಸ್ಕೃತಿಗಳ ಚೈತನ್ಯಗಳು ತಮ್ಮ ತತ್ತ್ವಗಳಿಗೇ ವಿರುದ್ಧವಾಗಿ ಧಾರ್ಮಿಕ ವ್ಯಕ್ತಿಗಳಾಗಿ, ಶಿಲಾಮೂರ್ತಿಗಳಾಗಿ ಗುಡಿ ಗೋಪುರಗಳೊಳಗೆ ಬಂಧಿತರಾಗುವುದು ನಮ್ಮದೇ ನೆಲದ ವೈಚಿತ್ರ್ಯಗಳಲ್ಲೊಂದು.
ನಮಗೆ ಅಧಿಕೃತವಾಗಿ ಲಭ್ಯವಾಗುವ ಮಾಹಿತಿಯ ಪ್ರಕಾರ ಜೈನಧರ್ಮದ ಸ್ಥಾಪಕ ನೆಂದು ಹೇಳಲಾಗುವ ವರ್ಧಮಾನ ಮಹಾವೀರ ಜನ್ಮ ತಳೆದು ಇಂದಿಗೆ 2600 ವರ್ಷಗಳಿಗೂ ಮಿಕ್ಕಿದೆ.
ಕ್ರಿ.ಪೂ. 599ರಲ್ಲಿ ಬಿಹಾರದ ವಿದೇಹದ ರಾಜಧಾನಿ ವೈಶಾಲಿಯ ಕುಂಡಪುರದಲ್ಲಿ ಮಹಾವೀರ ಜನಿಸಿದರು. ತಂದೆ ಸಿದ್ದಾರ್ಥ, ತ್ರಿಶಾಲ ದೇವಿ ಅರಮನೆಯಲ್ಲಿ ಸಕಲ ಸುಖೋಪ ಭೋಗಗಳು, ಮತ್ತೊಂದಡೆ ಹೆತ್ತವರ ಪ್ರೀತಿಯ ಹಾರೈಕೆ, ಮಹಾವೀರನಿಗೆ ಇವೆಲ್ಲ ಬೇಕಾಗಿರಲಿಲ್ಲ.
ತನ್ನ ಸುತ್ತಲಿನ ಸಮಾಜದ ಅತ್ಯಂತ ಕೆಳಸ್ತರದ ಜನರ ನೋವು, ಆಕ್ರಂದನ, ಒಡಿಗೊಳಿಗಾಗಿ ಬಡವರ ಹಾಹಾಕಾರ, ರೋಗ ರುಜಿನಗಳು, ಆರಮನೆ, ಒಡ್ಡೋಲಗ, ಧನಕನಕಕ್ಕಿಂತ ಮಿಗಿಲಹುದು ಮತ್ತೊಂದಿದೆ ಎಂಬ ಜಿಜ್ಞಾಸೆ ಅವರನ್ನು ತೀವ್ರ ವಾಗಿ ಬಾಧಿಸಿತು.
ಮಹಾವೀರ ಬೋದಿಸಿದ ತತ್ವಗಳು, ಅಂದಿನ ಆಡುಭಾಷೆಯಾದ ಅರ್ಥಮಾನದಿಯಲ್ಲಿತ್ತು. ಎಲ್ಲಾ ವರ್ಗದ ಜನರನ್ನು ಒಡಗೂಡಿಸಿ, ‘ಸಮವಸರಣ ಸಭೆಯನ್ನು ರಚಿಸಿದ, ಮಹಾವೀರ ಮಹಾನ್ ದಾರ್ಶನಿಕನೂ ಹೌದು. ಹೊಸದೇನನ್ನೋ ಬೋಧಿಸುವಾಗ ಬರುವ ತೊಂದರೆಗಳು ಮಹಾವೀರನಂಥ ಮಹಾನುಭಾವನನ್ನೂ ಬಿಟ್ಟಿರಲಿಲ್ಲ, ಅದಲ್ಲವನ್ನೂ ಮೀರಿ ಬೆಳೆದು ನಿಂತ ಮಹಾವೀರನ ಜೀವನವೇ ದರ್ಶನ, ಹೆತ್ತವರ ಪ್ರೀತಿಯಿಂದ ವಂಚಿತ ಸಮಾಜದಿಂದ ತಿರಸ್ಕೃತಳಾದ ಮಹಿಳೆಯೋರ್ದಳಿಗೆ ಸಮವಸರಣ ಸಭೆಯಲ್ಲಿ ವಿಶೇಷ ಪ್ರಾತಿನಿಧ್ಯ ನೀಡಿದ್ದು, ನಿಸರ್ಗದಲ್ಲಿರುವ ಗಿಡಮರ ಬಳ್ಳಿಗಳ ಮಹತ್ತ್ವವನ್ನು ಎತ್ತಿ ಹೇಳಿದು, ಬದುಕಿಗೆ ಅವಶ್ಯವಿದ್ದಷ್ಟೇ ಸಂಪಾದಿಸುವಂತೆ ಮನವೊಲಿಸಿದ್ದು, ನಾಲಿಗೆ ಚಪಲಕ್ಕೆ ಪ್ರಾಣಿಹಿಂಸೆ ಮಾಡದಂತೆ ಬುದ್ಧಿ ಹೇಳಿದ್ದು…
ಮೊದಲಾದ ಮಹಾವೀರನ ಕಾರ್ಯಗಳು ಬದುಕನ್ನು ಹಸನುಗೊಳಿಸಲು ಹಸಿಕೊಂಡಿದ್ದರು, ಇದ್ಯಾವದೇ ಧರ್ಮದ ಮನುಷ್ಯರಿಗೆ ಮೂಲಭೂತವಾಗಿ ಇರಬೇಕಾದ ಒಳ್ಳೆಯ ದರ್ಶನ, ಒಳ್ಳೆಯ ಜ್ಞಾನ ಮತ್ತು ಒಳ್ಳೆಯ ನಡವಳಿಕೆ ಕುರಿತು ಬೋಧಿಸಿದ ಮಹಾವೀರ, ತಾನೂ ಬದುಕಿ, ಇತರರನ್ನು ಬದುಕಲು ಬಿಡುವುದೇ ಧರ್ಮ ಎಂದು ಹೇಳಿದರು.
ಶಾಂತಿಪ್ರಿಯರೂ, ಸಾಹಿತ್ಯ-ಕಲೆಗಳ ಆರಾಧಕರ, ಬಂದಿರುವ ಜೈನ ಧರ್ಮೀಯರಿಂದ ಕಲೆ, ಸಾಹಿತ್ಯ, ಸಂಸ್ಕೃತಿಗಳಿಗೂ ಅಪಾರ ಕೊಡುಗೆ ದೊರಕಿದೆ. ತಮಿಳಿನ ಮಹಾಕಾವ್ಯವಾದ ತಿರುಕ್ಕುರುಳ್, ಸಂಸ್ಕೃತದ ಅಮರಕೋಶ ಮತ್ತು ಯಶಸ್ತಿಲಕ ಚಂದ್ರ, ಹತ್ತನೇ ಶತಮಾನದಿಂದ ಮರೆಯುತ್ತಿರುವ ಪಂಪ-ರನ್ನ-ಜನ್ನ, ‘ಬೃಹತ್ಕಥೆ’ ಬರೆದ ಹರಿಷೇಣ, ‘ಅಭಿಜ್ಞಾನಮಾಲಾ’ ಬರೆದ ಹಾಲಾಯುಧ, ‘ಲಕ್ಷ್ಮೀನಾಮಮಾಲಾ’ ಬರೆದ ಧನಪಾಲ ಮತ್ತಿತರರು, ತಮಿಳಿನ ಇಲಿಯಡ್ ಮತ್ತು ಒಬ್ಬ ಎಂದೇ ಹೇಳಲಾಗುತ್ತಿರುವ ‘ಜೀವಕ ಚಿಂತಾಮಣಿ’, ‘ತತ್ವಾರ್ಥ ಸಾರ, ಪಂಚಾಸ್ತಿಕಾಯ’ ಮೊದಲಾದ ಕೃತಿಗಳು ಸಾಹಿತ್ಯದ ಹಿರಿಮೆಯೂ ಹೌದು, ಜನಾಂಗದ ಹಿರಿಮೆಯೂ ಹೌದು, ಪ್ರತಿವರ್ಷ ಸಾಹಿತ್ಯಕ್ಕಾಗಿ ನೀಡಲಾಗುತ್ತಿರುವ ಪ್ರತಿಷ್ಠಿತ “ಜ್ಞಾನಪೀಠ ಪ್ರಶಸ್ತಿ”ಯನ್ನು ಸ್ಥಾಪಿಸಿದವರು ಶಾಂತಿ ಪ್ರಸಾದ್ ಜೈನ್. ಭಗವಾನ್ ಮಹಾವೀರ ಬೋಧಿಸಿದ ಧರ್ಮದ ತಿರುಳುಗಳು, ರಾಜಸ್ಥಾನದ ಉದಯಗಿರಿ, ಖಂಡು, ಉಂತಗಿರಿ, ರಾಜು, ಪಾವಾಪುರಿ, ತಾಲಿಕ್, ಮೌಂಟ್ ಅಬುವಿನಲ್ಲಿ ರುವ ದಿಬ್ಬಾರ ಜೈನ ಬಸದಿ, ಬಿಹಾರದ ಸಮ್ಮೇದ ಶಿಖರ ಅಜಂತ ಮತ್ತು ಎಲ್ಲೋರದಲ್ಲಿರುವ ನೂರಾರು ಕಲಾತ್ಮಕವಾದ ಬಸದಿ ಮತ್ತು ಗುಹಾಂತರ ದೇವಾಲಯಗಳು, ಕರ್ನಾಟಕದ ಶ್ರವಣ ಬೆಳಗೊಳ, ಕಾರ್ಕಳ, ಬೇಲೂರು, ಧರ್ಮಗಳ ಆಗ್ರಾದ ಶೋಣಾದಿನ ಗೊಮ್ಮಟನ ವಿಗ್ರಹಗಳು ಕಲೆ, ಉಹಿತ್ಯ, ಸಂಸ್ಕೃತಿಯ ಬೆಳವಣಿಗೆಯಲ್ಲಿ ಜೈನರ ಕೊಡುಗೆ ಅಪಾರ, ಜೈನ ನಿಂತಿದ್ದರೂ, ಜೈನರು ಇಂದಿಗೂ ಅಲ್ಪಸಂಖ್ಯಾತರು.ದೇವರನ್ನು ಮನುಷ್ಯರತ್ತ ತಂದ ಸಂಸ್ಕೃತಿ ದೇಶದ ಉಳಿದ ಸಂಸ್ಕೃತಿಗಳ ಮೇಲೆ ಪ್ರಭಾವ ಬೀರಿ ಬೆಳೆಸಿದ ಕೀರ್ತಿಯೂ ಜೈನರಿಗೆ ಸಂಸ್ಕೃತಿಗಳ ಕಲೆ, ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಯಲ್ಲಿ ಜೈನರ ಕೊಡುಗೆ ಅಪಾರ, ಜೈನರು ಇಂದಿಗೂ ಅಲ್ಪಸಂಖ್ಯಾತರು. ದೇವರನ್ನು ಮನುಷ್ಯರತ್ತ ತಂದ ಸಂಸ್ಕೃತಿ ದೇಶದ ಉಳಿದ ಸಂಸ್ಕೃತಿಗಳ ಮೇಲೆ ಪ್ರಭಾವ ಬೀರಿ, ಬೆಳೆದ ಕೀರ್ತಿಯೂ ಜೈನರಿಗೆ ಸಲ್ಲಬೇಕು.
ಜೀವನೋತ್ಸಾಹ ಹಾಗೂ ಹಿರಿಯರಲ್ಲಿ ಪ್ರೀತಿ ವಾತ್ಸಲ್ಯ ಹೇಗಿರಬೇಕು ಎಂಬುದಕ್ಕೆ ಇದೊಂದು ಹೃದಯಸ್ಪರ್ಶಿ ನಿದರ್ಶನ. ನಿನ್ನೆ (23-03-2026) ದಾವಣಗೆರೆಯ ಚೌಕಿಪೇಟೆಯಲ್ಲಿ ನೆರವೇರಿದ ಶ್ರೀ ಬಕ್ಕೇಶ್ವರರ ಮಹಾರಥೋತ್ಸವ ವೀಕ್ಷಿಸಲು ಇಷ್ಟಪಟ್ಟ ಅತ್ಯಂತ ವಯೋವೃದ್ಧೆ (ಬಹುಷಃ ತಾಯಿ ಇರಬೇಕು)ಯನ್ನು ವಯಸ್ಸಾದ ಪುರುಷನೋರ್ವ ಜಾತ್ರೆಯ ಜನಜಂಗುಳಿಯಲ್ಲೂ ಗಾಲಿ ಕುರ್ಚಿಯ ಮೇಲೆ ಕರೆದುಕೊಂಡು ಬಂದು ರಥೋತ್ಸವ ಹಾಗೂ ಮೆರವಣಿಗೆ ದೃಶ್ಯಗಳನ್ನು ತೋರಿಸಿದ್ದು ಹಾಗೂ ವಯೋವೃದ್ದೆಯವರು ಆಸಕ್ತಿಯಿಂದ ನೋಡಿದ್ದು ನಿಜವಾಗಿಯೂ ಹೃದಯಸ್ಪರ್ಶಿಯೂ, ಹೃದಯಂಗಮವೂ ಆಗಿತ್ತು. ಅಭಿನವ ಶ್ರವಣಕುಮಾರನಂತಹ ಈ ವ್ಯಕ್ತಿಯ ನಡೆ ಹಾಗೂ ವಯೋವೃದ್ಧೆಯವರ ಜೀವನೋತ್ಸಾಹ, ಬತ್ತದ ಆಸಕ್ತಿ ನಿಜಕ್ಕೂ ಅನುಕರಣೀಯ. ಇಂತಹ ದೃಶ್ಯಗಳು ಹೆಚ್ಚು ಜನರಿಗೆ ಮುಟ್ಟುವುದು ಆರೋಗ್ಯಕರ ಸಮಾಜಕ್ಕೆ ಪ್ರೇರಕ, ಹಂಚಿಕೊಳ್ಳಿ. ಮುಪ್ಪಿನ ಮಾತಾಪಿತರನ್ನು ವೃದ್ಧಾಶ್ರಮಕ್ಕೆ ಸೇರಿಸುವವರು ಇದನ್ನು ನೋಡಿ ಪರಿವರ್ತನೆಗೊಳ್ಳಬೇಕು. -ಡಾ ಎಚ್ ಬಿ ಮಂಜುನಾಥ, ಹಿರಿಯ ಪತ್ರಕರ್ತ, ದಾವಣಗೆರೆ-
CM Siddharamaih ಪೊಲೀಸ್ ಸೇವೆಯಲ್ಲಿ ಶಿಸ್ತು, ಸಂಯಮ, ಪ್ರಾಮಾಣಿಕತೆ, ಮಾನವೀಯತೆ ಬಹಳ ಮುಖ್ಯ. ಸಮಾಜದಲ್ಲಿನ ದೀನ ದಲಿತರ, ಅಶಕ್ತರ, ಮಹಿಳೆಯರ ರಕ್ಷಣೆ ಮಾಡುವುದು ಪೊಲೀಸರ ಜವಾಬ್ದಾರಿ. ಮಧ್ಯರಾತ್ರಿಯಲ್ಲಿ ಮಹಿಳೆಯರು ನಿರ್ಭೀಡೆಯಿಂದ ಓಡಾಡುವಂತಾದಾಗ ಮಾತ್ರ, ನಿಜ ಅರ್ಥದಲ್ಲಿ ಸ್ವಾತಂತ್ರ್ಯ ದೊರೆತಂತೆ ಎಂದು ಮಹಾತ್ಮ ಗಾಂಧಿಯವರು ಹೇಳಿದ್ದರು. ಆದ್ದರಿಂದ ನ್ಯಾಯವನ್ನು ಎತ್ತಿಹಿಡಿಯುವ ಕೆಲಸದಲ್ಲಿ ಪೊಲೀಸರು ಯಾವುದೇ ಕಾರಣಕ್ಕೂ ರಾಜಿಯಾಗಬಾರದು. ಎಲ್ಲರಿಗೂ ರಕ್ಷಣೆ, ಸಮಾನ ಅವಕಾಶಗಳು ದೊರೆಯಬೇಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮೈಸೂರು ಘಟಕದ 46ನೇ ತಂಡದ ಸಿವಿಲ್ ಪೊಲೀಸ್ ಉಪ ನಿರೀಕ್ಷಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು..
ಪೊಲೀಸರು ಸರ್ಕಾರದ ಪ್ರತಿನಿಧಿಯಾಗಿ ಕರ್ತವ್ಯ ನಿರ್ವಹಿಸಬೇಕಿಲ್ಲದೇ, ಕಾನೂನು ಸುವ್ಯವಸ್ಥೆಯನ್ನು ಕಾಯುವಲ್ಲಿ ಮಹತ್ವದ ಪಾತ್ರ ವಹಿಸಬೇಕು.
ತರಬೇತಿಯಲ್ಲಿ ಕಲಿತಿದ್ದನ್ನು ಜ್ಞಾಪಕವಿಟ್ಟುಕೊಂಡು ಜೀವನದಲ್ಲಿ ಪಾಲಿಸಬೇಕು. ತರಬೇತಿಗಳು ಆಗಾಗ್ಗೆ ನಡೆಯಬೇಕಲ್ಲದೆ ತರಬೇತಿ ಜೀವನದ ಅಂಗವಾಗಬೇಕು. 377 ಸಬ್ ಇನ್ಸ್ ಪೆಕ್ಟರ್ ಗಳು ಸೇವೆಗೆ ಸೇರ್ಪಡೆಯಾಗುತ್ತಿದ್ದು, ಖಾಲಿಯಿದ್ದ 4,911 ಹುದ್ದೆಗಳನ್ನು ಮೂರು ವರ್ಷಗಳಲ್ಲಿ ಭರ್ತಿ ಮಾಡಲಾಗಿದೆ. ಖಾಲಿ ಇರುವ 8000 ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಬಜೆಟ್ ನಲ್ಲಿ ಘೋಷಿಸಲಾಗಿದೆ. ಅದನ್ನು ಮಾಡಿಯೇ ತೀರುತ್ತೇವೆ. ಸರ್ಕಾರ ಸದಾ ನಿಮ್ಮೊಂದಿಗಿರುತ್ತದೆ.
ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುವಾಗ ಸರ್ಕಾರ ಹಿಂದೆಮುಂದೆ ನೋಡುವುದಿಲ್ಲ. ಕೆಲಸದಲ್ಲಿರುವ ಸಂದರ್ಭದಲ್ಲಿ ಕುಟುಂಬದವರ ಯೋಚನೆ ಮಾಡುವ ಅಗತ್ಯವಿಲ್ಲ. ಸತ್ಯ, ನಿಷ್ಠೆಯಿಂದ ಸೇವೆ ಸಲ್ಲಿಸುತ್ತೀರಿ ಎಂದು ನಂಬಿದ್ದೇನೆ.
ಮಾದಕವಸ್ತು ಮುಕ್ತ ಸಮಾಜ ನಿರ್ಮಾಣ ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿದ್ದು, ಆ ದಿಕ್ಕಿನಲ್ಲಿ ಆರಕ್ಷಕರು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಮಾದಕವಸ್ತು ತಯಾರಕರು, ಮಾರಾಟ ಮಾಡುವವರ ಮೇಲೆ ಕ್ರಮ ಕೈಗೊಳ್ಳಬೇಕು. ಯುವ ಜನಾಂಗದ ಮೇಲೆ ಮಾದಕ ವಸ್ತುಗಳ ಪರಿಣಾಮ ಮಾರಕವಾಗುತ್ತದೆ. ಇದನ್ನು ನಿರ್ಮೂಲನೆ ಮಾಡದೆ ಹೋದರೆ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯವಿಲ್ಲ. ಆದ್ದರಿಂದ ಈ ದಿಕ್ಕಿನಲ್ಲಿ ಪ್ರಾಮಾಣಿಕ ಪ್ರಯತ್ನ ಅಗತ್ಯ.
CM Siddharamaih ಪೊಲೀಸರು ಮಾನವೀಯತೆಯಿಂದ ಕೆಲಸ ಮಾಡಬೇಕು. ಸಾರ್ವಜನಿಕರ ಜೊತೆಗೆ ಸ್ನೇಹದಿಂದ ಇರಬೇಕು. ಅಪರಾಧಿಗಳಿಗೆ ಕರುಣೆ ತೋರಬೇಕಿಲ್ಲ. ನಿರಪರಾಧಿಗಳಿಗೆ ಕರುಣೆ ತೋರಬೇಕು. ಸೈಬರ್ ಅಪರಾಧಗಳನ್ನು ನಿಗ್ರಹಿಸಲು ಸೂಕ್ತ ತರಬೇತಿ ನೀಡಿದ್ದು, ಅವುಗಳನ್ನು ಬಳಕೆ ಮಾಡಿಕೊಳ್ಳಬೇಕು. ಸಮಾಜದ ದುರ್ಬಲ ವರ್ಗದವರನ್ನು ಮುಖ್ಯವಾಹಿನಿಗೆ ತರಬೇಕು.
ಬಲಾಢ್ಯರ ಕೈಯಲ್ಲಿ ಅಧಿಕಾರವಿದ್ದರೆ ಸಮಸಮಾಜ ನಿರ್ಮಾಣ ಸಾಧ್ಯವಿಲ್ಲ ಎಂದು ಅಂಬೇಡ್ಕರ್ ಹೇಳಿದ್ದರು. ಶ್ರೀಮಂತರು ಹಣಬಲದಿಂದ ದುರುಪಯೋಗ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಅಂಥ ಆಮಿಷಗಳಿಗೆ ಒಳಗಾಗಬಾರದು, ಧೈರ್ಯದಿಂದ ಕೆಲಸ ಮಾಡಿ ಪೋಲಿಸ್ ವೃತ್ತಿಯಲ್ಲಿ ಯಶಸ್ವಿಯಾಗಬೇಕು ಎಂದು ಸಿದ್ಧರಾಮಯ್ಯ ಪ್ರಶಕ್ಷಣಾರ್ಥಿಗಳಿಗೆ ಕಿವಿಮಾತು ಹೇಳಿದರು
Kuvempu University ಎನ್.ಶಾಂತನಾಯ್ಕ ಮಾರ್ಗದರ್ಶನದಲ್ಲಿ ಜೋನ್ ಲೀಲಾ ಮಾಡ್ತಾ ಕಲಾ ಅಧ್ಯಯನ ಪಡಿಸಿದ ಫೇಪ್, ಥೇಟ್ ಮತ್ತು ಪೊರ್ಟಿಟ್ಯುಡ್ ವಿ: ಎ ಕಂಪೆರೇಟಿವ್ ಸ್ಟಡಿ ಆಪ್ ಬಿಬ್ಲಿಕಲ್ ವಿಮೆನ್ ಅಂಡ್ ಏಮಿ ಟ್ಯಾನ್ಸ್ ವಿಮೆನ್ ಎಂಬ ಮಹಾ ಪ್ರಬಂಧವನ್ನು ಪಿಎಚ್.ಡಿಗೆ ಅಂಗೀಕರಿಸಲಾಗಿದೆ ಎಂದು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.
Dr. Dhananjaya Sarji ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಭಾಷಾ ವಿಷಯಗಳ ಆಯ್ಕೆಗೆ ಸಂಬಂಧಿಸಿದಂತೆ ಜಾರಿಗೆ ತರಲಾಗಿರುವ ಕನಿಷ್ಠ 40 ವಿದ್ಯಾರ್ಥಿಗಳ ಸಂಖ್ಯೆಯ ನಿಯಮವನ್ನು ಸಡಿಲಗೊಳಿಸುವಂತೆ ಇಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಮಧು ಬಂಗಾರಪ್ಪ ಅವರೊಂದಿಗೆ ವಿಧಾನ ಪರಿಷತ್ ಸದಸ್ಯರಾದ ಡಾ.ಧನಂಜಯ ಸರ್ಜಿ ಚರ್ಚಿಸಿದರು.
ಸರ್ಕಾರದ ಇತ್ತೀಚಿನ ನಿಯಮದಂತೆ ಪ್ರತಿ ವಿಭಾಗಕ್ಕೆ 40 ವಿದ್ಯಾರ್ಥಿಗಳಿರಬೇಕು ಎಂಬ ಷರತ್ತು ಭಾಷಾ ವಿಷಯಗಳಿಗೂ ಅನ್ವಯವಾಗುತ್ತಿರುವುದು ಪ್ರಾಯೋಗಿಕವಾಗಿ ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ಒಂದು ವಿಭಾಗದಲ್ಲಿ ಒಟ್ಟು 40 ವಿದ್ಯಾರ್ಥಿಗಳಿದ್ದಾಗ, ಅವರು ತಮ್ಮ ಇಷ್ಟದ ವಿವಿಧ ಭಾಷೆಗಳನ್ನು ಹಂಚಿಕೊಂಡರೆ, ಯಾವುದೇ ಒಂದು ಭಾಷಾ ವಿಷಯಕ್ಕೆ ಕನಿಷ್ಠ 40 ವಿದ್ಯಾರ್ಥಿಗಳು ಸಿಗುವುದು ಅಸಾಧ್ಯದ ಮಾತು. ಈ ನಿಯಮದಿಂದಾಗಿ ಭಾಷಾ ಉಪನ್ಯಾಸಕರಿಗೆ ಕಾರ್ಯಭಾರದ ಕೊರತೆ ಉಂಟಾಗಿ, ಅವರು ಅನಿವಾರ್ಯವಾಗಿ ಬೇರೆ ಕಾಲೇಜುಗಳಿಗೆ ನಿಯೋಜನೆಗೊಳ್ಳುವ (Deputation) ಭೀತಿ ಎದುರಾಗಿದೆ. ಅಲ್ಲದೆ, ಖಾಲಿ ಇರುವ ಭಾಷಾ ವಿಷಯಗಳ ಹುದ್ದೆಗಳನ್ನು ಭರ್ತಿ ಮಾಡಲು ಈ ತಾಂತ್ರಿಕ ನಿಯಮವು ದೊಡ್ಡ ಅಡ್ಡಿಯಾಗಿದೆ ಎಂಬ ವಿಷಯವನ್ನ ಸಚಿವರ ಗಮನಕ್ಕೆ ಡಾ.ಧನಂಜಯ ಸರ್ಜಿ ತಂದರು. ವಿದ್ಯಾರ್ಥಿಗಳಿಗೆ ತಮ್ಮ ಇಷ್ಟದ ಭಾಷೆಯನ್ನು ಕಲಿಯುವ ಸ್ವಾತಂತ್ರ್ಯ ಸಿಗಬೇಕು ಮತ್ತು ಭಾಷಾ ಉಪನ್ಯಾಸಕರ ವೃತ್ತಿ ಜೀವನಕ್ಕೆ ಭದ್ರತೆ ಒದಗಿಸಬೇಕು ಎಂಬ ಉದ್ದೇಶದಿಂದ, ಈ ಕೂಡಲೇ ಈ ನಿಯಮದಲ್ಲಿ ಬದಲಾವಣೆ ತರಬೇಕೆಂದು ಸಚಿವರಲ್ಲಿ ಮನವಿಮಾಡಿದರು.
Dr. Dhananjaya Sarji ಈ ವೇಳೆ ವಿಧಾನ ಪರಿಷತ್ ಶಾಸಕರುಗಳಾದ ಎಸ್.ಎಲ್ ಭೋಜೇಗೌಡ ಅವರು, ಕಿಶೋರ್ ಕುಮಾರ್ ಪುತ್ತೂರು ಅವರು, ಶಾಲಾ ಮತ್ತು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ರಶ್ಮಿ ಮಹೇಶ್ ಅವರು, ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಟನೆಯ ಪದಾಧಿಕಾರಿಗಳ ಉಪಸ್ಥಿತರಿದ್ದರು.
Shivamogga Police 2025ನೇ ಸಾಲಿನ ಮುಖ್ಯ ಮಂತ್ರಿಗಳ ಪದಕಕ್ಕೆ ಶಿವಮೊಗ್ಗ ಜಿಲ್ಲಾ ಪೊಲೀಸ್ ನ ಮೂವರು ಅಧಿಕಾರಿ, ಸಿಬ್ಬಂದಿಗಳು ಭಾಜನರಾಗಿರುತ್ತಾರೆ. 1) ಶ್ರೀ ಎಸ್. ರಮೇಶ್ ಕುಮಾರ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಶಿವಮೊಗ್ಗ ಜಿಲ್ಲೆ. 2) ಶ್ರೀ ಅಣ್ಣಪ್ಪ ಎನ್, ಹೆಚ್.ಸಿ 71 ಹೊಳೆಹೊನ್ನೂರು ಪೊಲೀಸ್ ಠಾಣೆ 3) ಶ್ರೀ ರಾಘವೇಂದ್ರ, ಜಿ. ಹೆಚ್.ಸಿ 336, ಹಳೇನಗರ ಪೊಲೀಸ್ ಠಾಣೆ.
ಸದರಿ ಮೂರು ಜನ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂಧಿಗಳಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದುನ್ನತ ಅಧಿಕಾರಿಗಳು
S. N. Channabasappa ‘ಪ್ರೇರಣ ಮಹಿಳಾ ಸಂಘ’ದ 25ನೇ ವರ್ಷದ ‘ಪ್ರೇರಣ ರಜತ ಮಹೋತ್ಸವ’ ಸಂಭ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶಾಸಕರಾದ ಎಸ್.ಎನ್.ಚನ್ನಬಸಪ್ಪ ಪಾಲ್ಗೊಂಡಿದ್ದರು
ಕಳೆದ ಎರಡೂವರೆ ದಶಕಗಳಿಂದ ಮಹಿಳೆಯರ ಸೃಜನಶೀಲತೆ, ಪ್ರತಿಭೆ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಈ ಸಂಸ್ಥೆಯ ಕಾರ್ಯವೈಖರಿ ಶ್ಲಾಘನೀಯ ಎಂದು ಚನ್ನಬಸಪ್ಪ ಹೇಳಿದರು.
S. N. Channabasappa ಮಹಿಳೆಯರನ್ನು ಸಂಘಟಿಸಿ, ಅವರಿಗೆ ವೇದಿಕೆ ಕಲ್ಪಿಸುವ ಮೂಲಕ ಪ್ರೇರಣ ಮಹಿಳಾ ಸಂಘವು ಸಾಂಸ್ಕೃತಿಕವಾಗಿ ಮತ್ತು ಸಾಮಾಜಿಕವಾಗಿ ನಮ್ಮ ನಗರಕ್ಕೆ ಅಪಾರ ಕೊಡುಗೆ ನೀಡುತ್ತಿದೆ ಎಂದು ಶಾಸಕ ಚೆನ್ನಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ರಜತ ಮಹೋತ್ಸವದ ಶುಭ ಸಂದರ್ಭದಲ್ಲಿ ಸಂಘದ ಎಲ್ಲಾ ಪದಾಧಿಕಾರಿಗಳಿಗೆ ಹಾಗೂ ಸದಸ್ಯರಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು
Rotary Shivamogga ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ರಿ., ಶಿವಮೊಗ್ಗ ಮತ್ತು ರೋಟರಿ ಶಿವಮೊಗ್ಗ ಮಿಡ್ ಟೌನ್ ಸಹಯೋಗದಲ್ಲಿ ಮಾರ್ಚ್ ೨೮ ರಂದು ಸಂಜೆ ರೋಟರಿ ಕ್ಲಬ್ ರಕ್ತ ನಿಧಿ ಸಭಾಂಗಣದಲ್ಲಿ ಏರ್ಪಡಿಸಿದ್ದ ೨೪೮ ನೆಯ ತಿಂಗಳ ಸಾಹಿತ್ಯ ಹುಣ್ಣಿಮೆ ಸಂಭ್ರಮ ಕಾರ್ಯಕ್ರಮ ಮತ್ತು ಕಸಾಸಾಂ ವೇದಿಕೆ ಕಾರ್ಯಚಟುವಟಿಕೆ ಮೆಚ್ಚಿ ರೋಟರಿ ಶಿವಮೊಗ್ಗ ಮಿಡ್ ಟೌನ್ ವತಿಯಿಂದ ಸೇವಾರತ್ನ ಪ್ರಶಸ್ತಿ ನೀಡಿ ಡಿ. ಮಂಜುನಾಥ ಮತ್ತು ಬಿ.ಎಚ್. ಭಾಗ್ಯ ದಂಪತಿಗಳನ್ನು ಸನ್ಮಾನಿಸಲಾಯಿತು. ರೋ. ಹರ್ಷಾ ಬಿ. ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಯಾನ್ಸ್ ಅಧ್ಯಕ್ಷರಾದ ಪವಿತ್ರಾ ಹರ್ಷಕಾಮತ್, ರೋ. ಸಂತೋಷ, ಪ್ರೀತಿ ದೀಪಕ್ ಸಾರತಿ, ನಿಕಟಪೂರ್ವ ಅಧ್ಯಕ್ಷರಾಗಿದ್ದ ರೋ. ಡಾ. ಧನಂಜಯ ಅವರು ಭಾಗವಹಿಸಿದ್ದರು.
ಸತತ ಮೂರನೇ ಬಾರಿಗೆ ರಾಜ್ಯ ಸರ್ಕಾರಿ ನೌಕರರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾಗಿ ಶ್ರೀ ಆರ್.ಮೋಹನ್ ಕುಮಾರ್ ಅವಿರೋಧ ಆಯ್ಕೆ
Shivamogga News ಶಿವಮೊಗ್ಗ ಜಿಲ್ಲೆಯ ಪ್ರತಿಷ್ಠಿತ ರಾಜ್ಯ ಸರ್ಕಾರಿ ನೌಕರರ ಸೌಹಾರ್ದ ಸಹಕಾರಿ ಸಂಘ ನಿ. ಶಿವಮೊಗ್ಗ ಈ ಸಹಕಾರಿ ಸಂಘದ 2026-2031ರವರೆಗಿನ ಮುಂದಿನ ಐದು ವರ್ಷಗಳ ಅವಧಿಗೆ ನಡೆದ ಆಡಳಿತ ಮಂಡಳಿಯ ಸಾಮಾನ್ಯ ಚುನಾವಣೆಯಲ್ಲಿ ಸತತ ಮೂರನೇ ಬಾರಿಗೆ ಶ್ರೀ ಆರ್. ಮೋಹನ್ ಕುಮಾರ್ ರವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್.ಷಡಾಕ್ಷರಿರವರು ಸ್ಥಾಪಿಸಿರುವ ಈ ಸಹಕಾರಿ ಸಂಘವು ಕಳೆದ 10 ವರ್ಷಗಳಿಂದ ಶ್ರೀ ಆರ್. ಮೋಹನ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಸರ್ಕಾರಿ ನೌಕರರಿಗೆ ಹಲವು ತರಹದ ಸಾಲ ಹಾಗೂ ಠೇವಣೆ ಸೌಲಭ್ಯಗಳನ್ನು ನೀಡುವುದರ ಮೂಲಕ ಪ್ರಗತಿ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಸಹಕಾರಿ ಸಂಘವು ಪ್ರಸಕ್ತ 80 ಕೋಟಿಗೂ ಅಧಿಕ ವಾರ್ಷಿಕ ವಹಿವಾಟನ್ನು ನಡೆಸುತ್ತಿದ್ದು. 30 ಕೋಟಿಗೂ ಅಧಿಕ ದುಡಿಯುವ ಬಂಡವಾಳವನ್ನು ಹೊಂದಿದೆ. ಕಳೆದ 5 ವರ್ಷವೂ ನಿರಂತರವಾಗಿ 01 ಕೋಟಿಗೂ ಅಧಿಕ ನಿವ್ವಳ ಲಾಭವನ್ನು ಹೊಂದುವ ಮೂಲಕ ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸುವಲ್ಲಿ ಅಧ್ಯಕ್ಷರು ಪ್ರಮುಖ ಪಾತ್ರ ವಹಿಸಿರುತ್ತಾರೆ. ಕಳೆದ 35 ವರ್ಷಗಳಿಂದ ಸಂಘಟನೆಯಲ್ಲಿ ಸೇವೆ ಸಲ್ಲಿಸಿ, ಅಪಾರ ಅನುಭವವನ್ನು ಹೊಂದಿರುವ ಆರ್.ಮೋಹನ್ ಕುಮಾರ್ ರವರು ಕಳೆದ ವರ್ಷ ನಡೆದ ಸರ್ಕಾರಿ ನೌಕರರ ಸಂಘದಲ್ಲಿನ ಚುನಾವಣೆಯಲ್ಲಿಯೂ ಸಹ ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿ ನೌಕರರ ಪರವಾಗಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ.
ಸತತ ಮೂರನೇ ಬಾರಿಗೆ ರಾಜ್ಯ ಸರ್ಕಾರಿ ನೌಕರರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಆರ್. ಮೋಹನ್ ಕುಮಾರ್ ರವರು ಮುಂದಿನ ಐದು ವರ್ಷಗಳಲ್ಲಿ ಜಿಲ್ಲೆಯ ಸರ್ಕಾರಿ ನೌಕರರಿಗೆ ಅನುಕೂಲವಾಗುವಂತೆ ಕಡಿಮೆ ಬಡ್ಡಿದರದಲ್ಲಿ ಹೆಚ್ಚಿನ ಸಾಲ ಸೌಲಭ್ಯಗಳು ಹಾಗೂ ಉಳಿತಾಯ ಯೋಜನೆಗಳನ್ನು ಜಾರಿಗೆ ತರುವ ಅಪೇಕ್ಷೆಯನ್ನು ಹೊಂದಿದ್ದು, ಸಂಘದ ಸದಸ್ಯರ ಆರ್ಥಿಕ ಬೆಳವಣಿಗೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಲವು ನೂತನ ಯೋಜನೆಗಳನ್ನು ರೂಪಿಸುವ ಇಚ್ಛೆಯನ್ನು ಹೊಂದಿದ್ದಾರೆ.
Shivamogga News ರಾಜ್ಯ ಸರ್ಕಾರಿ ನೌಕರರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾಗಿ ಶ್ರೀ ಆರ್.ಮೋಹನ್ ಕುಮಾರ್ ರವರು ಸೇರಿದಂತೆ ಉಪಾಧ್ಯಕ್ಷರಾಗಿ ಶ್ರೀ ಐ.ಬಿ.ಮೋಹನ್ ಕುಮಾರ್, ನಿರ್ದೇಶಕರಾಗಿ ಶ್ರೀ ಸಿ.ಎಸ್.ಷಡಾಕ್ಷರಿ, ಶ್ರೀ ಎಸ್.ಆರ್.ನರಸಿಂಹಮೂರ್ತಿ, ಡಾ.ಸಿ.ಎ.ಹಿರೇಮಠ, ಶ್ರೀ ಎನ್.ಎಂ.ರಂಗನಾಥ, ಶ್ರೀ ಡಿ.ವಿ.ಸತೀಶ್, ಶ್ರೀ ರಾಜು ಲಿಂಬು ಚವ್ಹಾಣ, ಶ್ರೀ ಟಿ.ಕೊಟ್ರೇಶ, ಶ್ರೀ ಪಿ.ಎಲ್.ಮಹೇಶ್, ಶ್ರೀ ಕೆ.ನರಸಿಂಹ ಶ್ರೀ ಜಿ.ಪ್ರವೀಣಕುಮಾರ್, ಶ್ರೀ ಎಂ.ಜಯ, ಶ್ರೀ ಎಸ್.ಪಿ.ರಾಜು, ಶ್ರೀ ಎಸ್.ಶೋಭಿತ್, ಶ್ರೀಮತಿ ರೇಖಾ ಎಸ್ ಹಾಗೂ ಶ್ರೀಮತಿ ಆಶಾ ಕೆ.ಎಂ ರವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.