Sunday, February 8, 2026
Sunday, February 8, 2026
Home Blog Page 41

SHIMOGA CAKE MANE ಶಿವಮೊಗ್ಗ ರವೀಂದ್ರ ನಗರದಲ್ಲಿ ಕೇಕ್ ತಯಾರಿಕಾ ಘಟಕದಲ್ಲಿಗುಣಮಟ್ಟದಲ್ಲಿ ನ್ಯೂನತೆ: ನೋಟೀಸ್ ಜಾರಿ.

0

SHIMOGA CAKE MANE ಉಪವಿಭಾಗಾಧಿಕಾರಿಗಳು ಹಾಗೂ ಜಿಲ್ಲಾ ಅಂಕಿತ ಅಧಿಕಾರಿಗಳಾದ ಸತ್ಯನಾರಾಯಣ್, ಆಹಾರ ಸುರಕ್ಷತಾ ಇಲಾಖೆ, ಉಪ ನಿರ್ದೇಶಕರಾದ ಅವಿನ್ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮತ್ತು ತಾಲೂಕು ವೈದ್ಯಾಧಿಕಾರಿ ಡಾ.ಚಂದ್ರಶೇಖರ್ ಒಳಗೊಂಡ ತಂಡವು ಇಂದು ಶಿವಮೊಗ್ಗ ನಗರದ ರವೀಂದ್ರನಗರದ ಕೇಕ್ ಮನೆ, ಕೇಕ್ ತಯಾರಿಕಾ ಕೇಂದ್ರದ ತಪಾಸಣೆ ನಡೆಸಿದ್ದು,ಈ ಸಮಯದಲ್ಲಿ ಕಂಡು ಬಂದ ನ್ಯೂನ್ಯತೆಗಳನ್ನು ಪರಿಶೀಲಿಸಿ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಯಿತು.

Shimoga News ಸಮಾಜದ ಅಭಿವೃದ್ಧಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಮರೆಯಬೇಕು- ಮರಿಯೋಜಿ ರಾವ್.

0

Shimoga News ಒಂದು ಸಮಾಜ ಅಭಿವೃದ್ಧಿ ಹೊಂದಬೇಕಾದರೆ ಆರೋಗ್ಯಕರ ಸಂಘಟನೆಯಿಂದ ಮಾತ್ರ ಸಾಧ್ಯ. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ಒಗ್ಗೂಡಿ ಸಮಾಜದ ಏಳ್ಗೆಗೆ ಅಣಿಯಾಗಬೇಕು ಎಂದು ಮರಾಠ ಅಭಿವೃದ್ಧಿ ನಿಗಮದ ಅಧ್ಯಕ್ಷ ಮರಿಯೋಜಿ ರಾವ್ ಹೇಳಿದರು.
ಅವರು ಮರಾಠ ಸಮಾಜದ ಶ್ರೇಯೋಭಿವೃದ್ಧಿಗಾಗಿ ಕೈಗೊಂಡಿದ್ದ ಶಿವಮೊಗ್ಗ ಜಿಲ್ಲಾ ಪ್ರವಾಸದ ಸಮಯದಲ್ಲಿ ಆಯೋಜಿಸಿದ್ದ ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡುತ್ತಾ, ಸಮಾಜದ ಮುಖಂಡರು ಪಕ್ಷಾತೀತವಾಗಿ ಒಂದಾದರೆ ಸಮಾಜ ಎಲ್ಲ ಕ್ಷೇತ್ರಗಳಲ್ಲೂ ಸದೃಢ ಆಗುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದರು.

ಸಮಾಜದಲ್ಲಿ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತಿವೆ. ಶಿವಾಜಿ ಮಹಾರಾಜರ ಕಾಲದಿಂದಲೂ ಭಿನ್ನಾಭಿಪ್ರಾಯ ಕೊನೆಯಾಗಿಲ್ಲ. ಎಲ್ಲ ಕಡೆ ಪ್ರವಾಸ ಮಾಡಿ ಒಗ್ಗಟ್ಟಿಗೆ ಶ್ರಮಿಸಲಾಗುವುದು ಎಂದರು.
ಜೀಜಾಬಾಯಿ ಸಮಾಜಕ್ಕೆ ಪುಣ್ಯ ಪುರುಷರನ್ನು ಕೊಡುಗೆ ನೀಡಿದ ಸ್ಮರಣೆಗಾಗಿ ಜೀಜಾ ಉಜ್ವಲ ಭಾಗ್ಯ ಯೋಜನೆ ಜಾರಿಗೆ ತರಲಾಗಿದೆ. ಸಮಾಜದ ಪೂರ್ವಿಕರನ್ನು ಎಂದಿಗೂ ಮರೆಯಬಾರದು. ವಿಧಾನಸಭೆಗೆ ೪೦-೫೦ ಶಾಸಕರನ್ನು ಕೊಡುಗೆ ನೀಡುವಷ್ಟು ಮರಾಠರು ಸಬಲರಾಗಿದ್ದೇವೆ. ೩೬ ತಾಲೂಕುಗಳಲ್ಲಿ ನಮ್ಮ ಸಮಾಜದ ಮತಗಳೇ ನಿರ್ಣಾಯಕವಾಗಿವೆ ಎಂದು ಅಭಿಪ್ರಾಯಪಟ್ಟರು.
ಯಾವುದೇ ಕಾರಣಕ್ಕೂ ಸಮಾಜ ನಿರ್ಮಾಣದಲ್ಲಿ ರಾಜಕೀಯ ತಲೆದೋರಬಾರದು.
ಸಮಾಜಗಳಲ್ಲಿ ಭಿನ್ನಾಭಿಪ್ರಾಯ ಗಣನೆಗೆ ತೆಗೆದುಕೊಳ್ಳದೆ, ಸ್ಥಳೀಯವಾಗಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ. ವೈಯಕ್ತಿಕ ಹಿತಾಸಕ್ತಿಗಳು ಸಮಾಜ ಒಡಕಿಗೆ ಕಾರಣವಾಗದಂತೆ ಎಚ್ಚರವಹಿಸಿ ಎಂದು ಸಲಹೆ ನೀಡಿದರು.

ಜಿಲ್ಲಾ ಕ್ಷತ್ರಿಯ ಮರಾಠ ಸಂಘದ ಜಿಲ್ಲಾಧ್ಯಕ್ಷ ಸಚಿನ್ ಸಿಂದ್ಯಾ ಮಾತನಾಡಿ, ಸಮಾಜಗಳು ಶೈಕ್ಷಣಿಕ ಸಾಮಾಜಿಕವಾಗಿ ಬೆಳವಣಿಗೆಯಾಗಬೇಕು. ಸರ್ಕಾರದ ಯೋಜನೆಯ ಫಲಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು. ನಮ್ಮ ಮಕ್ಕಳನ್ನು ಶೈಕ್ಷಣಿಕವಾಗಿ ಬಲಾಡ್ಯರನ್ನಾಗಿಸಬೇಕಿದೆ. ಪ್ರತಿಮೆ ಸ್ಥಾಪನೆ ಹಾಗೂ ಭವನಗಳ ನಿರ್ಮಾಣದಿಂದ ಮಾತ್ರ ಸಮಾಜ ಬಲಶಾಲಿಯಾಗುತ್ತದೆ ಎಂಬ ಕಲ್ಪನೆ ತಪ್ಪು. ಅಧಿಕಾರ ಇದ್ದಾಗ ನಾಲ್ಕಾರು ಜನರಿಗೆ ಸಹಾಯ ಮಾಡುವುದನ್ನು ಮರೆಯಬಾರದು ಎಂದು ತಿಳಿಸಿದರು.

Shimoga News ಮರಾಠ ಅಭಿವೃದ್ಧಿ ನಿಗಮದ ಅಧ್ಯಕ್ಷ ಮರಿಯೋಜಿ ರಾವ್ ಅವರು ಶಿವಮೊಗ್ಗ ಜಿಲ್ಲಾಯಾದ್ಯಂತ ಪ್ರವಾಸ ಕೈಗೊಂಡು ಸಮಾಜದ ಮುಖಂಡರ ಸಭೆಗಳಲ್ಲಿ ಭಾಗವಹಿಸಿ ಸಮಾಜದ ಸಂಘಟನೆಯ ಬಗ್ಗೆ ಮಾಹಿತಿಗಳನ್ನು ನೀಡುವುದರ ಜೊತೆಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಲು ಮನವಿ ಮಾಡಿದರು.

ಮರಾಠ ಸಮಾಜದ ಜಿಲ್ಲಾ ಉಪಾಧ್ಯಕ್ಷ ಸತೀಶ್ ಸಾವಂತ್, ಭದ್ರಾವತಿ ಅಧ್ಯಕ್ಷ ಲೋಕೇಶ ರಾವ್, ಜಿಲ್ಲಾ ಮಹಿಳಾ ಅಧ್ಯಕ್ಷೆ ಕವಿತಾ ಥೋರತ್, ದಿನೇಶ್ ರಾವ್, ಚಂದ್ರರಾವ್ ಗಾರ್ಗೆ, ಗೀತಾ ಬಾಯಿ, ಬಾಳೋಜಿ ಕೃಷ್ಣಜಿ ರಾವ್, ಎಲ್.ಕೆ.ಚಂದ್ರಪ್ಪ, ಶಾಂತಕುಮಾರ್, ಭೀಮರಾವ್, ಹಾಲೋಜಿ ರಾವ್, ರಮೇಶ ರಾವ್, ಮೋಹನ ರಾವ್, ಸತ್ಯನಾರಾಯಣ, ಯಶವಂತರಾವ್ ಘೋರ್ಪಡೆ, ದೇವರಾಜ್ ಸಿಂಧೆ, ಮಲ್ಲೇಶಪ್ಪ, ಬಸವರಾಜ್, ಅಶೋಕ ರಾವ್, ಕಿರಣ ಮೋರೆ ಇತರರಿದ್ದರು.

RM Manjunath Gowda ಮಲೆನಾಡು ಅಭಿವೃದ್ಧಿ ಮಂಡಳಿಗೆ ಕಳೆದ ಸಾಲಿಗಿಂತ ₹7 ರಿಂದ ₹8‌ ಕೋಟಿ ಹೆಚ್ಚು ಅನುದಾನ ಬಂದಿದೆ – ಆರ್.ಎಂ.ಮಂಜುನಾಥ ಗೌಡ.

0

RM Manjunath Gowda ಐತಿಹಾಸಿಕ, ಸಾಂಸ್ಕೃತಿಕ, ಶೈಕ್ಷಣಿಕ, ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಉನ್ನತಿಗೆ ವಿಶಿಷ್ಟ ಕೊಡುಗೆಗಳನ್ನು ನೀಡುತ್ತಾ ಬಂದಿರುವ ಮಲೆನಾಡು ಪ್ರದೇಶ ಅಭಿವೃದ್ದಿ ಮಂಡಳಿಯ 26ನೇ ವರ್ಷದ ದಿನಚರಿಯನ್ನು ಬಿಡುಗಡೆಗೊಳಿಸಲಾಗುತ್ತಿದೆ ಎಂದು ಮಲೆನಾಡು ಪ್ರದೇಶ ಅಭಿವೃದ್ದಿ ಮಂಡಳಿಯ ಅಧ್ಯಕ್ಷರಾದ ಆರ್.ಎಂ.ಮಂಜುನಾಥಗೌಡ ತಿಳಿಸಿದರು.

ಮಲೆನಾಡು ಪ್ರದೇಶ ಅಭಿವೃದ್ದಿ ಮಂಡಳಿಯ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಮಂಡಳಿಯ 2026-27 ನೇ ಸಾಲಿನ ಹೊಸ ದಿನಚರಿ ಬಿಡುಗಡೆ ಕಾರ್ಯಕ್ರಮದಲ್ಲಿ ದಿನಚರಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಮಲೆನಾಡು ಪ್ರದೇಶ ಅಭಿವೃದ್ದಿ ಮಂಡಳಿಯು ಪ್ರಸ್ತುತ 10 ಜಿಲ್ಲೆಗಳನ್ನು, 54 ತಾಲ್ಲೂಕುಗಳ 64 ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿಯನ್ನು ಹೊಂದಿದೆ. 09 ಲೋಕಸಭಾ ಸದಸ್ಯರು, 46 ವಿಧಾನಸಭಾ ಸದಸ್ಯರು, 18 ವಿಧಾನ ಪರಿಷತ್ ಸದಸ್ಯರು, ತಲಾ 10 ಜಿ.ಪಂ ಅಧ್ಯಕ್ಷರು ಮತ್ತು ಸರ್ಕಾರದಿಂದ ನಾಮ ನಿರ್ದೇಶನಗೊಂಡ ಸದಸ್ಯರು, 01 ಕಾರ್ಯದರ್ಶಿ ಮತ್ತು 10 ಜಿಲ್ಲಾಧಿಕಾರಿಗಳು ಸೇರಿದಂತೆ 104 ಸದಸ್ಯರನ್ನು ಒಳಗೊಂಡಿದೆ.

2025-26 ನೇ ಸಾಲಿಗೆ ಮಂಡಳಿಗೆ ರೂ.33 ಕೋಟಿ ಅನುದಾನ ಬಂದಿದ್ದು, ಕಳೆದ ಬಾರಿಗಿಂತ 7 ರಿಂದ 8 ಕೋಟಿ ಹೆಚ್ಚು ಅನುದಾನ ಬಂದಿದೆ. ಈ ಅನುದಾನವನ್ನು ಪಿಡಬ್ಲುö್ಯಡಿ, ಜಿಲ್ಲಾ ಪಂಚಾಯತ್ ಕಾಮಗಾರಿಗಳನ್ನು ಹೊರತುಪಡಿಸಿ ವಿಶೇಷವಾಗಿ ಮಲೆನಾಡು ಭಾಗಕ್ಕೆ ಅಗತ್ಯವಿರುವ ರಸ್ತೆ, ಕಾಲುಸಂಕ, ಚೆಕ್‌ಡ್ಯಾಂ ಗಳಿಗೆ ಬಳಕೆ ಮಾಡಲಾಗುತ್ತಿದೆ.

ಈಗಾಗಲೇ 100 ಕಾಲುಸಂಕ ಕಾಮಗಾರಿ ಮುಗಿದಿದ್ದು ನಬಾರ್ಡ್ ವಿಶೇಷ ಅನುದಾನದಲ್ಲಿ 350 ರಿಂದ 400 ಕಾಲುಸಂಕ ನಿರ್ಮಾಣಕ್ಕೆ ಕ್ರಿಯಾ ಯೋಜನೆ ರೂಪಿಸಿ ಸಲ್ಲಿಸಲಾಗಿದೆ.
ರೂ.33 ಕೋಟಿ ಅನುದಾನದಲ್ಲಿ ಶಾಸಕರುಗಳಿಗೆ ಹಾಗೂ ರಚನಾತ್ಮಕ ಕಾರ್ಯಕ್ರಮಗಳಿಗೆ ವಿನಿಯೋಗಿಸಲು ಹಂಚಿಕೆಯಾಗಿದ್ದು ತೀರ್ಥಹಳ್ಳಿಯ ಕುಡುಮಲ್ಲಿಗೆಯ ಶತಮಾನೋತ್ಸವ ಶಾಲೆಯ ಅಭಿವೃದ್ದಿಗೆ ರೂ.2.5 ಕೋಟಿ, ಸಾಗರ ಕ್ಷೇತ್ರಕ್ಕೆ 75 ಲಕ್ಷ, ತರೀಕೆರೆಗೆ ರೂ.1 ಕೋಟಿ, ತೀರ್ಥಹಳ್ಳಿಗೆ ಹೆಚ್ಚುವರಿ ರೂ.1 ಕೋಟಿ ಸೇರಿದಂತೆ ವಿವಿಧ ರಚನಾತ್ಮಕ ಕಾಮಗಾರಿ, ಕೆಲಸಗಳಿಗೆ ಅನುದಾನ ಹಂಚಿಕೆ ಮಾಡಲಾಗಿದೆ.

RM Manjunath Gowda ಹೆಚ್ಚುವರಿ ಅನುದಾನಕ್ಕೆ ಬೇಡಿಕೆ : 2026-27 ನೇ ಸಾಲಿಗೆ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಇಟ್ಟಿದ್ದು, ಮಂಜೂರು ಮಾಡುವುದಾಗಿ ಮಾನ್ಯ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಮಂಡಳಿಗೆ ರೂ.78.43 ಕೋಟಿ ಅನುದಾನವನ್ನು ಮುಂದಿನ ಆಯವ್ಯಯದಲ್ಲಿ ಹಂಚಿಕೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ನಬಾರ್ಡ್ ನೆರವು : ನಬಾರ್ಡ್ ಸಂಸ್ಥೆಯಿಂದ ಆರ್ಥಿಕ ನೆರವು ಪಡೆದು ರಚನಾತ್ಮಕ ಕಾರ್ಯಕ್ರಮಗಳಡಿ ತೂತು ಸೇತುವೆ, ಕಾಲುಸಂಕ ಮತ್ತು ಬೃಹತ್ ಸೇತುವೆ ಕಾಮಗಾರಿಗಳನ್ನು ಮಂಡಳಿಯಿಂದ ಅನುಷ್ಟಾನಗೊಳಿಸಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ರೂ.10 ಕೋಟಿಯಂತೆ ಕಾಮಗಾರಿ ಪ್ರಸ್ತಾವನೆ ಪಡೆದು ಕ್ರಿಯಾ ಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿಸಲು ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ತಿಳಿಸಿದರು.

ಮಂಡಳಿ ಸಾಧನೆ :1993-94 ನೇ ಸಾಲಿನಿಂದ 2024-25 ರವರೆಗೆ ತೂಗು ಸೇತುವೆ, ಕಾಲು ಸೇತುವೆ, ಕಾಂಕ್ರಿಟ್ ಮತ್ತು ಡಾಂಬರು ರಸ್ತೆ, ಶಾಲಾ ಕಟ್ಟಡ, ಅಂಗನವಾಡಿ ಕಟ್ಟಡ, ಕುಡಿಯುವ ನೀರು ಸರಬರಾಜು ಯೋಜನೆ, ಸಣ್ಣ ನೀರಾವರಿ ಯೋಜನೆ, ಸಾರ್ವಜನಿಕ ಸಮುದಾಯ ಭವನ, ಬಸ್ ನಿಲ್ದಾಣ, ಇತರೆ ಕಟ್ಟಡಗಳನು ಸೇರಿದಂತೆ ಒಟ್ಟು 64,638.71 ಲಕ್ಷದ 20568 ಅಭಿವೃದ್ದಿ ಕಾಮಗಾರಿಗಳನ್ನು ಮಲೆನಾಡಿನ ಎಲ್ಲಾ ಭಾಗಗಳಲ್ಲೂ ವ್ಯವಸ್ಥಿತವಾಗಿ ಅನುಷ್ಟಾನಗೊಳಿಸಲಾಗಿದೆ ಎಂದರು.

ಸಭೆಯಲ್ಲಿ ಎಂಎಡಿಬಿ ಅಧೀನ ಕಾರ್ಯದರ್ಶಿ ಹನುಮನಾಯ್ಕ್, ಉಪನಿರ್ದೇಶಕ ಶಿವಾನಂದ್, ಅಕ್ಷತಾ ಹಾಜರಿದ್ದರು.

New Year 2026 ಇಂದಿನ ಕವಿತೆ.ನಾಳಿನ ಹಾರೈಕೆ.ಕವಿ: ಶೋಭಾ ಸತೀಶ್.

0

New Year 2026 ಹೊಸ ವರುಷ
ಹೊಸ ವರುಷವು ಬಂದಿತು
ಎಲ್ಲೆಡೆ ಸಂಭ್ರಮ ತಂದಿತು
ನವ ಉಲ್ಲಾಸವ ಮೂಡಿಸಿತು
ಅರಿವು ಮೂಡಿಸಲು ಮುಂದಾಯಿತು

ತಿಳಿ ಆರೋಗ್ಯವೇ ಭಾಗ್ಯವು
ಇರಲಿ ನಿತ್ಯ ಯೋಗ ಧ್ಯಾನವು
ಪಂಚೇಂದ್ರಿಯಗಳ ನಿಗ್ರಹವು
ಸೇವಿಸುವ ಸಮತೋಲನ ಆಹಾರವು

ಅನುಭವಅಧ್ಯಯನದಿ ಸುಜ್ಞಾನಿಯಾಗು
ಸರ್ವರಿಗೂ ಸ್ಪೂರ್ತಿ ನೀನಾಗು
ಕಾಯಕದಲ್ಲೇ ಕೈಲಾಸ ಕಾಣುವಂತವನಾಗು
ಪರಿಸರದ ಸಂರಕ್ಷಕ ನಿನಾಗು

New Year 2026 ಮೂರು ದಿನದ ಬಾಳುನೋಡು
ಬಯಸಬೇಡ ಯಾರಿಗೂ ಕೇಡು
ದುಷ್ಟ ಗುಣಗಳ ಸುಟ್ಟು ಬಿಡು
ಗುರು ಹಿರಿಯರಿಗೆ ಗೌರವ ಕೊಡು

ಸ್ವಾರ್ಥವೇ ಗುರಿಯಾಗದಿರಲಿ
ಹಂಚಿ ತಿಂದು ಕೂಡಿ ಬಾಳುತ್ತಿರಲಿ
ಸುಜ್ಞಾನವ ಎಲ್ಲೆಡೆ ಹಂಚುತ್ತಿರಲಿ
ಅಹಂ ಎಂಬುದು ಎಂದಿಗೂ ಸುಳಿಯದಿರಲಿ

ಶೋಭಾ ಸತೀಶ್ ಶಿಕ್ಷಕಿ
ಸ ಹಿ ಪ್ರಾ ಶಾಲೆ ಚಿಲಕಾದ್ರಿಹಳ್ಳಿ
ಶಿವಮೊಗ್ಗ
ದೂ. ಸಂಖ್ಯೆ 8762603511

Shimoga News ಅರ್ಚಕ ವೃತ್ತಿಯಲ್ಲಿ ಭಾವ ಬೇಕು.ಭಕ್ತರಲ್ಲಿ ಭಕ್ತಿ ಬೇಕು- ಡಾ.ಹೆಚ್.ಬಿ.ಮಂಜುನಾಥ್.

0

Shimoga News ಅಂದುಕೊಳ್ಳುವುದು ಸಂಕಲ್ಪವಾದರೆ ಅದರಂತೆ ಮಾಡುವುದು ಸಾಧನೆ, ಸಂಕಲ್ಪ ಮತ್ತು ಸಾಧನೆಗಳ ಉದ್ದೇಶ ಒಳ್ಳೆಯದಾಗಿದ್ದರೆ ಅದು ಸುಕೃತಿ ಎನಿಸಿಕೊಳ್ಳುತ್ತದೆ ಎಂದು ಹಿರಿಯಪತ್ರಕರ್ತ ಡಾ.ಎಚ್ ಬಿ ಮಂಜುನಾಥ ಅಭಿಪ್ರಾಯ ಪಟ್ಟರು.

ಕರ್ನಾಟಕ ದೇವಾಲಯ ಸಂವರ್ಧನಾ ಸಮಿತಿ ವತಿಯಿಂದ ಹೊನ್ನಾಳಿ ಚಂದ್ರಗಿರಿ ಪ್ರತಿಷ್ಠಾನದ ಸಹಯೋಗದೊಂದಿಗೆ ಹಿರೇಕಲ್ಮಠದಲ್ಲಿ ಏರ್ಪಾಡಾಗಿದ್ದ ದೇವಾಲಯ ಅರ್ಚಕರುಗಳ ಪ್ರಶಿಕ್ಷಣ ಶಿಬಿರದಲ್ಲಿ ಸಂಪ್ರದಾಯಗಳ ಕುರಿತಾಗಿ ಮಾತನಾಡುತ್ತಾ ಅಂದುಕೊಳ್ಳುವುದು ಅಂದುಕೊಂಡಂತೆ ಮಾಡುವುದು ಈ ಎರಡೂ ಸಾಮರ್ಥ್ಯ ಪ್ರಪಂಚದಲ್ಲಿ ಮಾನವ ಜೀವಿಗಳಿಗೆ ಮಾತ್ರವೇ ಇದ್ದು ಒಳ್ಳೆಯದನ್ನೇ ಅಂದುಕೊಳ್ಳಬೇಕು ಅದರಂತೆ ಒಳ್ಳೆಯದನ್ನೇ ಮಾಡಬೇಕು, ಅರ್ಚಕರುಗಳು ಸಹಾ ಭಕ್ತರ ಪರವಾಗಿ ಸದುದ್ದೇಶದ ಸಂಕಲ್ಪಗಳನ್ನು ಮಾಡಿ ಅದರಂತೆ ಪೂಜಾ ಕಾರ್ಯವನ್ನು ನೆರವೇರಿಸಬೇಕು. ಇದಕ್ಕೆಲ್ಲಾ ಯೋಗ್ಯವಾಗಿ ದೇವಸ್ಥಾನ ನಿರ್ಮಿಸುವಲ್ಲಿ ಬುದ್ಧಿ ಬೇಕು, ಅರ್ಚಕ ವೃತ್ತಿಯಲ್ಲಿ ಭಾವ ಬೇಕು, ಭಕ್ತರರಲ್ಲಿ ಭಕ್ತಿ ಬೇಕು, ಇದಕ್ಕೆ ಪೂರಕವಾಗಿ ಅನಾದಿಕಾಲದಿಂದಲೂ ಸನಾತನರು ಹೇಳಿರುವ ಸಂಪ್ರದಾಯಗಳಿದ್ದು ಇದರಲ್ಲಿ ಅನೇಕವು ವೈಜ್ಞಾನಿಕ ವೈಚಾರಿಕವಾಗಿಯೂ ಸಮರ್ಥನೀಯವಾಗಿದ್ದು ಅಂತವುಗಳನ್ನು ಪಾಲಿಸಿಕೊಂಡು ಬರಬೇಕು ಎಂಬುದನ್ನು ಉದಾಹರಣೆಗಳ ಸಹಿತ ವಿವರಿಸಿದರು.

Shimoga News ಹೊನ್ನಾಳಿ ತಾಲೂಕು ಹಾಗೂ ವಿವಿಧೆಡೆಗಳಿಂದ ಅನೇಕ ದೇವಾಲಯಗಳ ಅರ್ಚಕರುಗಳು ಈ ಶಿಬಿರದಲ್ಲಿ ಭಾಗವಹಿಸಿದ್ದರು. ಕರ್ನಾಟಕ ದೇವಾಲಯ ಸಂವರ್ಧನಾ ಸಮಿತಿಯ ಪ್ರಮುಖರಾದ ಮನೋಹರ ಮಠದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

S. Rudre Gowda ರಮಣ ಮಹರ್ಷಿಗಳ‌ ಜೀವನ ನಮಗೆಲ್ಲ ಪ್ರೇರಕ ಶಕ್ತಿ- ಎಸ್.ರುದ್ರೆಗೌಡ

0

S. Rudre Gowda ರಮಣ ಮಹರ್ಷಿಗಳ ಜೀವನ ಸಂದೇಶ ನಮಗೆಲ್ಲ ಪ್ರೇರಣೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ ಹೇಳಿದರು.

ಬಸವ ಕೇಂದ್ರದಲ್ಲಿ ಶ್ರೀ ರಮಣ ಕೇಂದ್ರದ ವತಿಯಿಂದ ರಮಣ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಡಿ.ಜಿ.ಶಿವಣ್ಣಗೌಡ ದತ್ತಿನಿಧಿ ಕಾರ್ಯಕ್ರಮದಲ್ಲಿ ಮಾತನಾಡಿ, ಭಗವಾನ್ ಶ್ರೀ ರಮಣರು ಮೌನವಾಗಿದ್ದುಕೊಂಡೇ ಸಮಾಜವನ್ನು ತಿದ್ದಿದರು. ಅಂತಹವರ ಬಗ್ಗೆ ಶಿವಮೊಗ್ಗದಲ್ಲಿ ಒಂದು ಉತ್ತಮ ಕಟ್ಟಡ ನಿರ್ಮಾಣ ಮಾಡಲು ಮುಂದಿನ ದಿನಗಳಲ್ಲಿ ಪ್ರಯತ್ನಿಸೋಣ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ಇಂದಿನ ಜೀವನದ ತೊಳಲಾಟದಲ್ಲಿ ರಮಣರ ತತ್ವಗಳು ಮನಶಾಂತಿ ನೀಡುತ್ತದೆ ಎಂಬುದನ್ನು ಅರಿಯಬೇಕು. ಇಂದಿನ ಕಾರ್ಯಕ್ರಮ ಅರ್ಥಪೂರ್ಣ ಎಂದು ಹೇಳಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಮಾತನಾಡಿ, ಶಾಲಾ ಪಠ್ಯದಲ್ಲಿ ರಮಣರ ಬಗ್ಗೆ ತಿಳಿಸುವ ಪಠ್ಯ ಸೇರಿಸಬೇಕು. ಶಿವಮೊಗ್ಗದಲ್ಲಿ ಒಂದು ಶಾಶ್ವತವಾದ ರಮಣ ಕೇಂದ್ರ ಸ್ಥಾಪಿಸಲು ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದರು.

ಶಾಂತಿಯನ್ನು ಅರಸಿಕೊಂಡು ಹೋಗಬೇಕಿಲ್ಲ. ಅದು ನಮ್ಮಲ್ಲಿಯೇ ಇದೆ ಎಂಬ ರಮಣರ ಮಾತು ನಮಗೆ ಮಾರ್ಗದರ್ಶನವಾಗಬೇಕು ಎಂದು ತಿಳಿಸಿದರು.

S. Rudre Gowda ವಿದ್ವಾನ್ ರಾಘವೇಂದ್ರ ಭಟ್ ಮಾತನಾಡಿ, ರಮಣ ಮಹರ್ಷಿಗಳು ನಿದ್ರೆಯಲ್ಲಿಯೂ ಸದಾ ಜಾಗೃತವಾಗಿದ್ದ ಮಹಾಸಾಧಕರಾಗಿದ್ದರು. ಅರುಣಾಚಲ ಎಂಬ ಹೆಸರನ್ನು ಕೇಳಿ ಪುಳಕಿತರಾದ ಬಾಲಕ ರಮಣ ಇಡೀ ತನ್ನ ಜೀವನವನ್ನು ತಿರುವಣ್ಣಾಮಲೈನಲ್ಲಿ ಕಳೆದ ರೀತಿ ಇತರರಿಗೆ ಮಾದರಿಯಾಗಿದ್ದಾರೆ. 71 ವರ್ಷ ಜೀವಿಸಿದ್ದ ಮಹಾ ಸಾಧಕರು ಇರುವಷ್ಟು ದಿನವೂ ಸಕಲ ಪ್ರಾಣಿ ಪಕ್ಷಿಗಳನ್ನು, ಎಲ್ಲ ಜೀವಿಗಳನ್ನೂ ಒಂದೇ ರೀತಿಯಲ್ಲಿ ಕಾಣುವ ಮನಸ್ಸನ್ನು ಹೊಂದಿದ್ದರು ಎಂದರು.

ಲಲಿತಮ್ಮ ಮತ್ತು ಸಂಗಡಿಗರಿಂದ ಭಕ್ತಿಗೀತೆಗಳ ಕಾರ್ಯಕ್ರಮ ನಡೆಯಿತು. ರತ್ನಮ್ಮ ಪ್ರಾರ್ಥಿಸಿದರು. ರಮಣ ಕೇಂದ್ರದ ವಿನಾಯಕ ಸ್ವಾಗತಿಸಿದರು. ಎಂ.ಎನ್.ಸುಂದರ್ ರಾಜ್ ಪ್ರಾಸ್ತಾವಿಕ ಮಾತನಾಡಿದರು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ವಂದಿಸಿದರು. ಶಾಂತಮ್ಮ, ವಿನಯ್, ಚನ್ನಪ್ಪ, ಡಿ.ಎಸ್.ಚಂದ್ರಶೇಖರ್, ಶೀಲಾ ಚಂದ್ರಶೇಖರ್, ಎ.ಎಲ್.ಚಂದ್ರಶೇಖರ ಉಪಸ್ಥಿತರಿದ್ದರು.

Vaikuntha Ekadashi ಮುಕ್ಕೋಟಿ ಏಕಾದಶಿ…ಲೇ: ಎನ್.ಜಯಭೀಮ ಜೊಯ್ಸ್.ಶಿವಮೊಗ್ಗ

0

Vaikuntha Ekadashi ಇಂದು ವೈಕುಂಠ ಏಕಾದಶಿ.ಇದನ್ನು ಮುಕ್ಕೋಟಿ ಏಕಾದಶಿಯೆಂದೂ ಕರೆಯುತ್ತಾರೆ.ಅಲ್ಲದೇ ಈ ಏಕಾದಶಿಯನ್ನು ಪುತ್ರದಾಏಕಾದಶೀ ಎಂದೂ ಕರೆಯುತ್ತಾರೆ.
ಚಿತ್ತಶುದ್ಧಿ,ಭಾವಶುದ್ಧಿ ಆಧ್ಯಾತ್ಮದ ಹಾದಿಯ
ಮೊದಲ ಹೆಜ್ಜೆ.ಆ ಭಗವಂತನ ಅನುಗ್ರಹ ಪಡೆಯಲು ಏಕಾದಶಿ ಉಪವಾಸ ಸುಲಭದಮಾರ್ಗ ಎಂದು ನಮ್ಮ ಹಿರಿಯರು ಗುರುತಿಸಿದ್ದಾರೆ.ಉಪವಾಸದಿಂದ ಆ ಭಗವಂತನ ಆರಾಧನೆಮಾಡಬೇಕು,ನಮ್ಮೊಳಗೆ ಸಂವಾದ ನಡೆದು ವಿಚಾರಗಳು ಮಥನಗೊಳ್ಳಲು ಅವಕಾಶ ಕೊಡುವ ಮೌನದ ಆಚರಣೆಯಿಂದ ಮನಸ್ಸು ಮೃದುವಾಗಿ ಒಳ ಹೊರಗೆ ತುಂಬಿಕೊಂಡಿರುವ “ನಾರಾಯಣ”ನನ್ನು ಅನುಭವಿಸಲು ಇದು ಸಾಧನ.
ಏಕಾದಶ ಅಂದರೆ11 ಎಂದರ್ಥ.ಪ್ರತಿ ಮಾಸದಲ್ಲಿ (ತಿಂಗಳು) ಎರಡು ಏಕಾದಶಿಗಳು ಬರುತ್ತವೆ.
ಆದರೆ ಪುಷ್ಯ ಮಾಸದ ಶುಕ್ಲಪಕ್ಷದಲ್ಲಿ ಬರುವ ಏಕಾದಶಿಯು ವೈಕುಂಠ ಏಕಾದಶಿ ಎಂದೇ
ಪ್ರಸಿದ್ಧಿ ಪಡೆದಿದೆ.
ಅಂದು ವೈಕುಂಠದ ಉತ್ತರ ಬಾಗಿಲ ಮೂಲಕ
Vaikuntha Ekadashi ನಾರಾಯಣ ಮುಕ್ಕೋಟಿ ದೇವತೆಗಳಿಗೆ ದರ್ಶನ ನೀಡುತ್ತಾನೆ ಎಂದು ಪ್ರತೀತಿ ಇದೆ.
ಅದೇ ಕಾರಣಕ್ಕೆ ವೈಷ್ಣವ ಆಲಯಗಳಲ್ಲಿ ವಿಶೇಷವಾಗಿ ವೈಕುಂಠದ್ವಾರ ರೂಪಿಸಿಭಕ್ತರಿಗೆಪ್ರವೇಶಕಲ್ಪಿಸಿರುತ್ತಾರೆ. ವೈಕುಂಠ ಏಕಾದಶಿ ಒಂದೇ ಅಲ್ಲ,ಎಲ್ಲ ಏಕಾದಶಿಗಳೂ ಉಪವಾಸ ವ್ರತಕ್ಕೆ ಶ್ರೇಷ್ಠವಾದವು. ಆದರೆ ವೈಕುಂಠ ಏಕಾದಶಿಯಂದುಉಪವಾಸಮಾಡಿದ ಫಲ ನೂರ್ಮಡಿ ಯಾಗಿರುತ್ತದೆ.ಅಂದುನಿಟ್ಟುಪವಾಸವೇ
ಶ್ರೇಷ್ಠವಾದುದು.ಹಸಿವಾದತಕ್ಷಣಉಣ್ಣುವುದನ್ನು,ಅನ್ನಿಸಿದ ತಕ್ಷಣ ಮಾತಾಡುವುದನ್ನು ಕಲಿತ ಮನಸ್ಸು ಮತ್ತು ದೇಹಗಳು ಒಂದು ದಿನದ ಮಟ್ಟಿಗಾದರೂ ದೇವರ ಸ್ಮರಣೆ ಮಾಡುತ್ತಾ, ಭಗವಂತನ ಚಿಂತನೆಯಲ್ಲಿ ತೊಡಗಬೇಕುಎನ್ನುವುದೇನಮ್ಮಹಿರಿಯರುಹಾಕಿಕೊಟ್ಟ
ಏಕಾದಶಿಯ ಮಹತ್ವ.
ವೈಕುಂಠಏಕಾದಶಿಯಯದಿನವಾದಇಂದುಆಭಗವಂತನು(ಶ್ರೀಹರಿ)ಎಲ್ಲರಿಗೂಸನ್ಮಂಗಳವನ್ನುದಯಪಾಲಿಸಲಿ ಎಂತ ಪ್ರಾರ್ಥಿಸೋಣ.

Kuvempu ಜನಮನ ಕನ್ನಡ ರಕ್ಷಣಾ ವೇದಿಕೆಯಿಂದ ಕುವೆಂಪು ಜಯಂತಿ ಆಚರಣೆ.

0

Kuvempu ಜನಮನ ಕನ್ನಡ ರಕ್ಷಣಾ ವೇದಿಕೆ ರಾಜ್ಯ ಸಂಘಟನೆ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನ ವನ್ನು ಶಿವಮೊಗ್ಗ ನಗರದ ಶಿವಪ್ಪ ನಾಯಕನ ಪ್ರತಿಮೆಯ ಮುಂದೆ ಸಂಭ್ರಮದಿಂದ ಆಚರಿಸಲಾಯಿತು, ಈ ಕಾರ್ಯಕ್ರಮದಲ್ಲಿ ಜನಮನ ಕರವೇ ರಾಜ್ಯ ಸಂಘಟನೆಯ ರಾಜ್ಯಾಧ್ಯಕ್ಷರಾದ ಜನಾರ್ದನ ಸಾಲಿಯನ್, ಕಜಾಂಚಿ ಸಿದ್ದಣ್ಣ, ಪ್ರಧಾನ ಕಾರ್ಯದರ್ಶಿ ಎನ್, ಮಾಲತೇಶ್, Kuvempu ಪತ್ರಕರ್ತರು ಹಾಗೂ ಸಾಹಿತಿಗಳಾದ ಗಾ,ರಾ, ಶ್ರೀನಿವಾಸ್, ಅನಿಲ್, ಪದಾಧಿಕಾರಿಗಳಾದ ಕಿರಣ್, ರಾಮಣ್ಣ ರಾಗಿಗುಡ್ಡ, ರಾಮು, ಪಾರ್ತಿಬನ್, ಮುರುಗನ್, ಪ್ರದೀಪ್, ಗಣೇಶ್, ಪ್ರೇಮ್, ವೀಣಾ, ಹೆಚ್, ಸುಮಾ ಕೆ, ಎಸ್, ಸುಜಾತ, ಪುಷ್ಪ ಒಡೆಯರ್, ಶೋಭಾ, ಪುಷ್ಪ, ಇನ್ನು ಮುಂತಾದವರು ಭಾಗವಹಿಸಿದ್ದರು.

Shimoga News ಮಾನ್ಯತೆ ಪಡೆದ ಪತ್ರಕರ್ತರ ಬಸ್ ಪಾಸ್ ಮಾನ್ಯತಾ ಅವಧಿ ವಿಸ್ತರಣೆ

0

Shimoga News ಮಾನ್ಯತೆ ಪಡೆದ ಪತ್ರಕರ್ತರಿಗೆ ವಿತರಿಸಲಾಗಿರುವ ಸ್ಮಾರ್ಟ್‌ ಕಾರ್ಡ್‌ಗಳ
ಮಾನ್ಯತಾ ಅವಧಿಯು ದಿನಾಂಕ: 31.12.2025 ಕ್ಕೆ ಕೊನೆಗೊಳ್ಳಲಿದ್ದು, 2026 ಮತ್ತು 2027ನೇ ಸಾಲಿನ ಮಾನ್ಯತೆ
ಪಡೆದ ಪತ್ರಕರ್ತರ ಸ್ಮಾರ್ಟ್‌ ಕಾರ್ಡ್‌ಗಳನ್ನು ಜರೂರಾಗಿ ಮುದ್ರಿಸಿ ನೀಡುವಂತೆ ಕೋರಿರುತ್ತಾರೆ.
ಮಾನ್ಯತೆ ಪಡೆದ ಪತ್ರಕರ್ತರ ಬಸ್ ಪಾಸುಗಳನ್ನು ಮುದ್ರಿಸಲು ಕಾಲಾವಕಾಶದ ಅವಶ್ಯಕತೆ ಇರುವುದರಿಂದ,
ಕ.ರಾ.ರ.ಸಾ.ನಿಗಮದ ವತಿಯಿಂದ ವಿತರಿಸಲಾಗಿರುವ ಸ್ಮಾರ್ಟ್‌ ಕಾರ್ಡ್ ಬಸ್‌ಪಾಸ್‌ಗಳ ಮಾನ್ಯತಾ ಅವಧಿಯನ್ನು
ಸೂಕ್ತಾಧಿಕಾರಿಗಳ ಅನುಮೋದನೆಯಂತೆ ದಿನಾಂಕ: 28.02.2026 ರವರೆಗೆ ವಿಸ್ತರಿಸಲಾಗಿದೆ.

ಎಂದು ಆಯುಕ್ತರು, ವಾರ್ತಾ ಮತ್ತು
ಸಾರ್ವಜನಿಕ ಸಂಪರ್ಕ ಇಲಾಖೆ ರವರ ಪ್ರಕಟಣೆ ತಿಳಿಸುತ್ತದೆ

Priyank Kharge ಪಂಚಮಿತ್ರ ಪೋರ್ಟಲ್ ಯಶಸ್ವಿ ನಿರ್ವಹಣೆ- ಸಚಿವ ಪ್ರಯಾಂಕ ಖರ್ಗೆ.

0

Priyank Kharge ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಸೇವೆಗಳನ್ನು ನೀಡುವ ‘ಪಂಚಮಿತ್ರ’ ಪೋರ್ಟಲ್ ಮತ್ತು ವಾಟ್ಸಪ್ ಚಾಟ್‌ ಮೂಲಕ ಜನರು ತಮ್ಮ ಕುಂದುಕೊರತೆಗಳ ಬಗ್ಗೆ ಅಹವಾಲುಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸುವ ವಿನೂತನ ಯೋಜನೆ ಪ್ರಾರಂಭಿಸಲಾಗಿತ್ತು. ಜನರು ಮನೆಯಲ್ಲಿಯೇ ಕುಳಿತು ವಾಟ್ಸಪ್ ಮೂಲಕ ಅಹವಾಲು ಸಲ್ಲಿಸಲು ಸಹಾಯವಾಣಿ ಸಂಖ್ಯೆ 8277506000 ಪ್ರಾರಂಭಿಸಲಾಗಿತ್ತು. ಇದು ದೇಶದಲ್ಲೇ ಈ ರೀತಿಯ ಪ್ರಥಮ ಪ್ರಯತ್ನವಾಗಿದ್ದು, ಇದೀಗ ಅತ್ಯಂತ ಯಶಸ್ವಿ ಯೋಜನೆಯಾಗಿ ಹೊರಹೊಮ್ಮಿದೆ.

ಗ್ರಾಮೀಣ ಪ್ರದೇಶಗಳ ಜನರು ವಿವಿಧ ಕೆಲಸಗಳಿಗಾಗಿ ತಾಲೂಕು ಕೇಂದ್ರಗಳಲ್ಲಿನ ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವುದಕ್ಕಾಗಿ ಗ್ರಾಮ ಪಂಚಾಯತಿಗಳಲ್ಲಿಯೇ ಅಗತ್ಯ ಸೇವೆಗಳನ್ನು ಒದಗಿಸಲಾಗುತ್ತಿದೆ. ಇದರೊಂದಿಗೆ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಈ ಯೋಜನೆ ಸಹಕಾರಿಯಾಗಿದೆ.

Priyank Kharge ರಾಜ್ಯದಲ್ಲಿ ಈವರೆಗಿನ ಪಂಚಮಿತ್ರ ವಾಟ್ಸಪ್ ಚಾಟ್ ಬಾಟ್ ಬಳಕೆದಾರರ ವರದಿ ಹೀಗಿದೆ :

➧ ರಾಜ್ಯದ ಒಟ್ಟು ಬಳಕೆದಾರರು : 1,21,535

➧ ಎಲ್ಲಾ ಜಿಲ್ಲೆಗಳಿಂದ ಅಹವಾಲು ಸ್ವೀಕಾರ : 12,771

➧ ಅಹವಾಲುಗಳ ವಿಲೇವಾರಿ : 12,708

ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದ ಮಾಹಿತಿ, ಸೇವೆಗಳು ಮತ್ತು ಕುಂದುಕೊರತೆಗಳ ಅಹವಾಲು ಸಲ್ಲಿಸಲು ಸುಲಭ ಮಾರ್ಗ ಇದಾಗಿದೆ. ಗ್ರಾಮೀಣ ಜನರು ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿ ಕೋರುತ್ತೇನೆ ಎಂದು‌ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ , ತಂತ್ರಜ್ಞಾನ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ಮನವಿಮಾಡಿದ್ದಾರೆ.