ವೈದ್ಯ ವೃತ್ತಿಯು ಅತ್ಯಂತ ಪವಿತ್ರವಾದ ವೃತ್ತಿಯಾಗಿದ್ದು ಮುಂದಿನ ಜನ್ಮ ಅನ್ನೋದು ಇದ್ದರೆ ನಾನು ಮತ್ತೊಮ್ಮೆ ಡಾಕ್ಟರ್ ಆಗಿ ಜನರ ಸೇವೆ ಸಲ್ಲಿಸಬೇಕೆಂದು ಬಯಸುತ್ತೇನೆ ಎಂದು ಸರ್ಜಿ ಹಾಸ್ಪಿಟಲ್ ಶಿವಮೊಗ್ಗ ದ ಗೈನಾಕಲಜಿಸ್ಟ್
ಡಾ ಸಂಧ್ಯಾ ನುಡಿದರು.
ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ವತಿಯಿಂದ ಶ್ರೀಮತಿ
ಡಾ ಸಂಧ್ಯಾ ಗೈನಾಕಲಜಿಸ್ಟ್, ಸರ್ಜಿ ಹಾಸ್ಪಿಟಲ್ ಶಿವಮೊಗ್ಗ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಶುಭಾಶಯ ಕೋರಲಾಯಿತು
ವೈದ್ಯ ವೃತ್ತಿಯು ಸಾಕಷ್ಟುಆಧುನಿಕ ಬದಲಾವಣೆಯಾಗುತ್ತಾ ಸುಧಾರಣೆಯನ್ನು ಕಂಡಿದೆ ರೋಗಿಗಳ ವಿಶ್ವಾಸ ಹೆಚ್ಚಾಗಲು ಡಾಕ್ಟರ್ ಮೇಲಿನ ನಂಬಿಕೆಗಳು ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ನುಡಿದರು. ಈ ಸಂದರ್ಭದಲ್ಲಿ ನಮ್ಮನ್ನ ಗುರುತಿಸಿ ಗೌರವಿಸಿದ ರೋಟರಿ ಸಂಸ್ಥೆಗೆ ಸದಾ ಚಿರಋಣಿಯಾಗಿರುತ್ತೇನೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ 2026 27ನೇ ಸಾಲಿನ ಉಪಾಧ್ಯರಾದ ಮಾಜಿ ಸಹಾಯಕ ಗೌರ್ನರ್ ವಿಜಯಕುಮಾರ್ ಮಾತನಾಡುತ್ತಾ 30 ವರ್ಷಗಳ ಸುದೀರ್ಘ ವೈದ್ಯಕೀಯ ಸೇವೆಯ ಅನುಭವ ಹೊಂದಿರುವ ಇವರು, 2014 ರಿಂದ ಸರ್ಜಿ ಆಸ್ಪತ್ರೆ ಯಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗವನ್ನು ಶೂನ್ಯದಿಂದ ಆರಂಭಿಸಿ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಈ ಅವಧಿಯಲ್ಲಿ 13,000 ಕ್ಕೂ ಹೆಚ್ಚು ಹೆರಿಗೆಗಳನ್ನು ಯಶಸ್ವಿಯಾಗಿ ಮಾಡಿಸಿದ ಕೀರ್ತಿ ಇವರಿಗಿದೆ. ಬಂಜೆತನ ನಿವಾರಣಾ ಚಿಕಿತ್ಸೆ 22 ವಾರಗಳವರೆಗಿನ ಗರ್ಭಾಶಯದ ಸಂಕೀರ್ಣ ಲ್ಯಾಪರೊಸ್ಕೋಪಿ ಶಸ್ತ್ರಚಿಕಿತ್ಸೆಗಳು, ಅಂಡಾಶಯದ ಸರ್ಜರಿಗಳು ಮತ್ತು ಹಿಸ್ಟರೊಸ್ಕೋಪಿ ಚಿಕಿತ್ಸೆಗಳಲ್ಲಿ ಇವರು ಪರಿಣಿತರು. ಅತ್ಯಂತ ಅಪಾಯಕಾರಿ ಗರ್ಭಾವಸ್ಥೆಯ ಸಂದರ್ಭಗಳಲ್ಲಿ ತಕ್ಷಣದ ಹಾಗೂ ದಕ್ಷ ಚಿಕಿತ್ಸೆ ನೀಡುವ ಮೂಲಕ ಪ್ರಸಿದ್ಧರಾಗಿದ್ದಾರೆ. ರೋಗಿಗಳಿಗೆ ಕಷ್ಟದ ಸಮಯದಲ್ಲಿ ಧೈರ್ಯ ತುಂಬುತ್ತಾ, ಅವರ ನಂಬಿಕೆ ಮತ್ತು ಆಶೀರ್ವಾದಗಳನ್ನೇ ತಮಗೊಲಿದ ದೊಡ್ಡ ಪ್ರಶಸ್ತಿ ಎಂದು ಭಾವಿಸಿರುವ ಇವರ ಸೇವಾ ಪ್ರವೃತ್ತಿ ಅನನ್ಯವಾದದ್ದು. ಎಂದರು
ಇದೇ ಸಂದರ್ಭದಲ್ಲಿ 2026 27ನೇ ಸಾಲಿನ ಅಧ್ಯಕ್ಷರಾದ ಡಿಕೆ ಶೇಷಗಿರಿಯವರು ಮಾತನಾಡುತ್ತಾ ಡಾ. ಸಂಧ್ಯಾ ರವರ ವೈದ್ಯಕೀಯ ವೃತ್ತಿಯ ಸೇವೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು
ಕಾರ್ಯಕ್ರಮದಲ್ಲಿ. ಕಾರ್ಯದರ್ಶಿ ಆರ್ ಮನೋಹರ್.. ಮಾಜಿ ಅಧ್ಯಕ್ಷರಾದ ಸತೀಶ್ ಚಂದ್ರ. ನಿರ್ದೇಶಕರಾದ ಸಿ ಕೆ ವಿಜಯಕುಮಾರ್. ಸಂತೋಷ್ ಕುಮಾರ್. ಡಾಕ್ಟರ್ ಅವಿನಾಶ್. ಉಪಸ್ಥಿತರಿದ್ದರು
