Wednesday, July 1, 2026
Wednesday, July 1, 2026

ಜೀವನದ ಕೆಲವು ಆನಂದದ ಕ್ಷಣಗಳನ್ನೂ ಬಿಟ್ಟು ರೋಗಿಗಳ ಸೇವೆ ಮಾಡುತ್ತಿರುತ್ತೇವೆ. ಇದನ್ನ ಪರಿಗಣಿಸಿ ನಮ್ಮನ್ನ ಸನ್ಮಾನಿಸಿದ್ದಕ್ಕೆ ಕೃತಜ್ಞತೆಗಳು- ಡಾ.ಸಾತ್ವಿಕ್

Date:

ಪ್ರತಿ ವರ್ಷ ಜುಲೈ ಒಂದರಂದು ವೈದ್ಯರ ದಿನವೆಂದು ಆಚರಿಸಿ ವೈದ್ಯರನ್ನು ಗೌರವಿಸುವ ರೂಡಿ ನಮ್ಮ ಭಾರತದಲ್ಲಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ವೈದ್ಯರಾಗಿದ್ದ ಡಾಕ್ಟರ್ ಬಿದನರಾಯ ಅವರು ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಲು ಅವರು ಹುಟ್ಟಿದ ದಿನವನ್ನು ವೈದ್ಯರ ದಿನವೆಂದು ಆಚರಿಸಲು ಭಾರತ ಸರ್ಕಾರವು 1991ರಲ್ಲಿ ನಿರ್ಧರಿಸಿತು. ಇವರು ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ಪ್ರಶಸ್ತಿ ಪುರಸ್ಕೃತರು . ಈ ವೈದ್ಯರ ದಿನದಂದು ನಮ್ಮ ರೋಟರಿ ಕ್ಲಬ್ ಶಿವಮೊಗ್ಗ ಉತ್ತರದ ವತಿಯಿಂದ ಹಿರಿಯರಾದ ದುರ್ಗಿಗುಡಿಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾಕ್ಟರ್ ಕೃಷ್ಣಾಜಿ ರಾವ್, ಡಾಕ್ಟರ್ ಬಿ ಆರ್ ತಹಶೀಲ್ದಾರ್, ಆರ್ಥೋಪೆಡಿಕ್ ಸರ್ಜನ್ ಹಾಗೂ ಭಾರತ್ ನೊರೋ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಸಾತ್ವಿಕ್, ನ್ಯೂರೋ ಸರ್ಜನ್ ರವರನ್ನು ಅತ್ಯಂತ ಆತ್ಮೀಯತೆಯಿಂದ ಅವರ ಸೇವೆಯನ್ನು ಗುರುತಿಸಿ ಗೌರವಿಸಿದೆವು. ಗೌರವ ಸ್ವೀಕರಿಸಿ ಮಾತನಾಡಿದ ಡಾಕ್ಟರ್ ಕೃಷ್ಣಾಜಿ ರಾವ್ ರವರು ತಮ್ಮ ಕಾಲದಲ್ಲಿ ಆಧುನಿಕ ಸಲಕರಣೆ ಎಂದರೆ ಬಿಪಿ ಅಳೆಯುವ ಸಾಧನ ಹಾಗೂ ಸ್ಟೆತೋಸ್ಕೋಪ್ ಮಾತ್ರ ಎಂದು ತಿಳಿಸಿದರು. ಈಗ ವೈದ್ಯಕೀಯ ಕ್ಷೇತ್ರ ಬಹಳಷ್ಟು ಬೆಳದಿದೆ ಎಂದು ತಿಳಿಸಿದರು . ಡಾಕ್ಟರ್ ತಹಶೀಲ್ದಾರ್ ಮಾತನಾಡಿ ವೈದ್ಯರು ಎಷ್ಟೇ ಸಮರ್ಪಕವಾಗಿ ಸೇವೆ ಸಲ್ಲಿಸಿದರೂ ಕೆಲವೂಮ್ಮೆ ರೋಗಿಗಳ ಆರೋಗ್ಯದಲ್ಲಿ ತೊಂದರೆ ಆದಾಗ ರೋಗಿಗಳ ಮತ್ತು ಅವರ ಸಂಬಂಧಿಕರ ಆಕ್ರೋಶ ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು. ಹಾಗೆಯೇ ಯುವ ವೈದ್ಯರಾದ ಡಾ. ಸಾತ್ವಿಕ್ ಮಾತನಾಡುತ್ತಾ ತಮ್ಮ ವೈಯುಕ್ತಿಕ ಜೀವನದ ಕೆಲವು ಕ್ಷಣಗಳನ್ನು ಆನಂದಿಸಲು ಸಹ ಬಿಡುವಿಲ್ಲದಂತೆ ನಾವುಗಳು ರೋಗಿಗಳ ಸೇವೆಯನ್ನು ಹಗಲಿರಳು ಮಾಡುತ್ತೇವೆ. ಇದನ್ನೆಲ್ಲ ಪರಿಗಣಿಸಿ ನಮ್ಮನ್ನು ಸನ್ಮಾನಿಸಿ ಈ ದಿನ ನಮ್ಮನ್ನು ಹುರಿದುಂಬಿಸುವ ಕೆಲಸ ಮಾಡಿದ ಎಲ್ಲಾ ರೋಟೇರಿಯನ್ಗಳಿಗೂ, ಎಲ್ಲಾ ಡಾಕ್ಟರ್ ಗಳ ಪರವಾಗಿ ಧನ್ಯವಾದಗಳನ್ನು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಡಾ. ಶಿವಕುಮಾರ್, ಕಾರ್ಯದರ್ಶಿ ಶ್ರೀಧರ್, ಸರ್ಜಾ ಜಗದೀಶ್, ನಾಗರಾಜ. ರವೀಂದ್ರನಾಥ ಐತಾಳ್, ವೆಂಕಟೇಶ್,ರಮೇಶ್, ರೇಖಾ ಸಂಜಯ್ ಮತ್ತು ವಾರಿಜಾ ಜಗದೀಶ್ ಭಾಗವಹಿಸಿದ್ದರು. ಈ ಕಾರ್ಯಕ್ರಮ ಡಾಕ್ಟರ್ ತಹಶೀಲ್ದಾರ್ ಅವರ ಆಸ್ಪತ್ರೆಯಲ್ಲಿ ನಡೆಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related