International Day Against Drug Abuse ಯುವಕರು ಮಾದಕ ವಸ್ತುಗಳ ಸೇವನೆ ಮಾಡಿದರೆ ಆರೋಗ್ಯ ಹಾಗೂ ಕುಟುಂಬದ ಮೇಲೆ ವ್ಯತಿರಿಕ್ತ ಪರಿಣಾಮ ಬೀಳುತ್ತದೆ ನಮ್ಮ ದೇಶದಲ್ಲಿ ಡ್ರಗ್ಸ್ ನಿಯಂತ್ರಣ ಮಾಡಲು ಕಾಯ್ದೆ ಇದೆ ಗಾಂಜಾ ಹಳ್ಳಿ ಹಳ್ಳಿಗೂ ಕಾಲಿಟ್ಟಿದೆ ಪೊಲೀಸ್ ಇಲಾಖೆ ಇದರ ಬಗ್ಗೆ ತೀವ್ರ ನಿಗಾ ವಹಿಸಿದೆ ವಿದ್ಯಾರ್ಥಿ ದೆಸೆಯಲ್ಲಿ ಓದುವುದೂ ನಮ್ಮ ಧರ್ಮ ದುಶ್ಚಟಗಳಿಗೆ ಬಲಿಯಾದರೆ ಭವಿಷ್ಯ ಹಾಳಾಗಲಿದೆ ಡ್ರಗ್ಸ್ ಸೇವನೆ ಮಾಡಿದ ವ್ಯಕ್ತಿ ಯಾವ ರೀತಿಯ ಹೇಯ ಕೃತ್ಯ ಎಸಗಲು ಹೇಸುವುದಿಲ್ಲ ವಿದ್ಯಾರ್ಥಿಗಳು ದೇಶದ ಆಸ್ತಿ ಎಂದು ಡಿ. ವೈ. ಎಸ್ಪಿ ಸಾಗರ ವಿಭಾಗ ಶ್ರೀ. ಎನ್. ಜೆ. ಬೆನಕ ಪ್ರಸಾದ್ ರವರು ಹೇಳಿದರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ಸಾಗರ ತಾಲೂಕು,ಲಾಲ್ ಬಹುದ್ದೂರು ಕಲಾ ವಿಜ್ಞಾನ ಮತ್ತು ಎಸ್. ಬಿ. ಸೊಲಬಣ್ಣ ಶೆಟ್ಟಿ ವಾಣಿಜ್ಯ ಮಹಾವಿದ್ಯಾಲಯ, ಸಾಗರ, ಶಿವಮೊಗ್ಗ ಜಿಲ್ಲಾ ಪೊಲೀಸ್, ಸಾಗರ ಉಪವಿಭಾಗ, ಸಾಗರ ಗ್ರಾಮಾಂತರ ಪೊಲೀಸ್ ಠಾಣೆ, ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು ಎನ್. ಸಿ. ಸಿ ಜನ ಜಾಗೃತಿ ವೇದಿಕೆ ಶಿರಸಿ ವಿಭಾಗ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಪ್ಪ ಅಮ್ಮ ಕಷ್ಟ ಪಟ್ಟು ಓದಿಸುತ್ತಾರೆ ಆತ್ಮ ಸಾಕ್ಷಿಗೆ ವಿರುದ್ಧವಾಗಿ ಡ್ರಗ್ಸ್ ನ ಮಾಯಾ ಜಾಲಕ್ಕೆ ಒಳಗಾಗಬೇಡಿ ಸಹವಾಸ ದೋಷದಿಂದ ದುಶ್ಚಟಗಳಿಗೆ ಬಲಿಯಾಗಬಾರದು, ಡ್ರಗ್ಸ್ ಮಾರಾಟ ಮಾಡುವುದು ಅಪರಾಧವಾಗುತ್ತದೆ ಸನ್ಮಿತ್ರದ ಮೂಲಕ ಡ್ರಗ್ಸ್ ಗೆ ಬಲಿಯಾದವರನ್ನೂ ಕೌನ್ಸಿಲಿಂಗ್ ಮಾಡಿ ಸಮಾಜದ ಮುಖ್ಯ ವಾಹಿನಿಗೆ ತರಲಾಗುತ್ತಿದೆ ಎಂದರು
ದ್ವಿಚಕ್ರ ವಾಹನ ಚಲಾವಣೆ ವೇಳೆ ತಪ್ಪದೇ ಹೆಲ್ಮೆಟ್ ಧರಿಸಬೇಕು ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
International Day Against Drug Abuse ಸಾಮಾಜಿಕ ಜಾಲತಾಣದ ಬಳಕೆಯ ಬಗ್ಗೆ ಎಚ್ಚರಿಕೆ ವಹಿಸುವ ಬಗ್ಗೆ ಸಲಹೆ ನೀಡಿದರು ಅಧ್ಯಕ್ಷತೆಯನ್ನು ಅಧ್ಯಕ್ಷರು ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ (ರಿ) ಶ್ರೀ. ಬಿ.ಆರ್ . ಜಯಂತ್, ರವರು ವಹಿಸಿದ್ದರು ವೇದಿಕೆಯಲ್ಲಿ
ಡಾ. ಹೆಚ್. ಎಂ.ಶಿವಕುಮಾರ್ ಪ್ರದಾನ ಕಾರ್ಯದರ್ಶಿಗಳು, ಮ. ಅ. ಪ್ರ., ಸಾಗರ, ಡಾ. ನಿರಂಜನ್ ಮೂರ್ತಿ ಟಿ ಪ್ರಭಾರ ಪ್ರಾಂಶುಪಾಲರು ಎಲ್ . ಬಿ. ಮತ್ತು ಎಸ್. ಬಿ.ಎಸ್ ಕಾಲೇಜ್, ಶ್ರೀ ಕೃಷ್ಣಪ್ಪ ಜಿ. ಏ ಎಸ್ . ಐ ಸಾಗರ ವಿಭಾಗ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಗರ ತಾಲೂಕಿನ ಯೋಜನಾಧಿಕಾರಿ ದಯಾನಂದ, ಶ್ರೀಮತಿ ಕಸ್ತೂರಿ ಸಾಗರ್ ಉಪಾಧ್ಯಕ್ಷರು ಜಿಲ್ಲಾ ಜನ ಜಾಗೃತಿ ವೇದಿಕೆ ಶಿರಸಿ ವಿಭಾಗ ಉಪಸ್ಥಿತರಿದ್ದರು. ವಲಯ ಮೇಲ್ವಿಚಾರಕ ರಾದ ಕಲ್ಲೇಶ್, ಸೇವಾ ಪ್ರತಿನಿಧಿ ಲಲಿತಾ ಸಹಕರಿಸಿದರು.
