Tuesday, August 4, 2026
Tuesday, August 4, 2026
Home Blog Page 43

ನಗರದ ಹೊರವಲಯ ನವುಲೆ ಮತ್ತು ಇಮಾಂ ಬಾಡ ಪ್ರದೇಶಗಳಲ್ಲಿ ವಸತಿರಹಿತರಿಗೆ ನಿವೇಶನ ವಿತರಣೆ ಕುರಿತು ಸಭೆ

0

ಶಿವಮೊಗ್ಗ ನಗರದ ಹೊರವಲಯ ನವುಲೆ ಮತ್ತು ಇಮಾಮ್‌ಬಾಡದ ಕೊಳಚೆ ಪ್ರದೇಶದಲ್ಲಿ ಹಲವು ವರ್ಷಗಳಿಂದ ವಾಸವಾಗಿರುವ ನಿರ್ವಸತಿಗರಿಗೆ ನಿವೇಶನಗಳನ್ನು ವಿತರಿಸುವ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜವುಳಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಚೇತನ್‌ಗೌಡ ಅವರ ಅಧ್ಯಕ್ಷತೆಯಲ್ಲಿ ಸಮಾಲೋಚನಾ ಸಭೆ ಏರ್ಪಡಿಸಲಾಗಿತ್ತು. ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಅಪರ ಜಿಲ್ಲಾಧಿಕಾರಿ ಅಭಿಷೇಕ್‌ ವಿ., ಉಪವಿಭಾಗಾಧಿಕಾರಿ ಸತ್ಯನಾರಾಯಣ ಸೇರಿದಂತೆ ಕೊಳಚೆ ನಿರ್ಮೂಲನ ಮಂಡಳಿ, ಕಂದಾಯ ಇಲಾಖೆ, ಮಹಾನಗರಪಾಲಿಕೆಯ ಅಧಿಕಾರಿ-ಸಿಬ್ಬಂಧಿಗಳು ಉಪಸ್ಥಿತರಿದ್ದರು.

ಮಹಾನಗರ ಪಾಲಿಕೆಯಲ್ಲಿ ನಾಗರೀಕರಿಗೆ ತಪ್ಪು ಮಾಹಿತಿ ನೀಡಿ ಅಲೆದಾಡಿಸುವ ಸಿಬ್ಬಂದಿ. ಹಿತರಕ್ಷಣಾ ವೇದಿಕೆಯಿಂದ ಪತ್ರ

0

ಮಹಾನಗರ ಪಾಲಿಕೆಯಲ್ಲಿ ಕಂದಾಯ ಕಟ್ಟಲು, ಖಾತಾ ನಕಲು, ಮತ್ತು ಇ ಸ್ವತ್ತಿನ ಕಾಫಿ ಪಡೆಯಲು, ಆಗಮಿಸುವ ಜನರಿಗೆ ಇಲ್ಲಿನ ಡಾಟಾ ಎಂಟ್ರಿ ಆಪರೇಟರ್ ಗಳು ಇದು ವಿನೋಬನಗರ ಜೋನ್ ಬರುತ್ತದೆ ನೀವು ಅಲ್ಲಿ ಕಂದಾಯ ಕಟ್ಟಬೇಕು ಅಲ್ಲಿ ಖಾತ ನಕಲು ಪಡೆಯ ಪಡೆಯಬೇಕು ಎಂದು ಬಿಹೆಚ್ ರಸ್ತೆಯಿಂದ ವಿನೋಬನಗರಕ್ಕೆ ಕಳುಹಿಸುವುದು ವಿನೋಬ ನಗರದಲ್ಲಿ ಕಟ್ಟಲು ಹೋದವರಿಗೆ ನಮ್ಮ ವಲಯಕ್ಕೆ ಬರಲ್ಲ ಬಿ ಎಚ್ ರಸ್ತೆಗೆ ಹೋಗಬೇಕು, ಇದು ಗೋಪಿ ಸರ್ಕಲ್ ವಲಯಕ್ಕೆ ಬರುತ್ತದೆ ಎಂದು ಅಲೆದಾಡಿಸುವುದು ಎಷ್ಟರಮಟ್ಟಿಗೆ ಸರಿ ಎಲ್ಲಿ ಕಂದಾಯ ಕಟ್ಟಿದರು ಮಹಾನಗರ ಪಾಲಿಕೆಯ ಅಕೌಂಟಿಗೆ ತಾನೇ ಹೋಗುವುದು, ಇಲ್ಲಿನ ಆಪರೇಟರ್ಗಳು ಸಮಯಕ್ಕೆ ಸರಿಯಾಗಿ ಮನೆಗೆ ಹೋಗುತ್ತಾರೆ ಅಲ್ಲವೇ ಹೆಚ್ಚಿಗೆ ಏನು ಕೆಲಸ ಮಾಡುವುದಿಲ್ಲ ಹಾಗಾದರೆ ವಿನಾಕಾರಣ ಅಲೆದಾಡಿಸುವುದನ್ನು ನಿಲ್ಲಿಸಲು ತಾವು ಸೂಚಿಸಬೇಕಾಗಿ ತಮ್ಮಲ್ಲಿ ವಿನಂತಿ ಜನಸ್ನೇಹಿ ಮಹಾ ನಗರ ಪಾಲಿಕೆ ಮಾಡಲು ತಮ್ಮಲ್ಲಿ ಕೋರುತ್ತೇನೆ ಎಂದು ಶಿವಮೊಗ್ಗದ ನಾಗರೀಕ ಹಿತರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ
ಶ್ರೀ ವಸಂತಕುಮಾರ್ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ದೇಶದ ಸುಸ್ಥಿರ ಅಭಿವೃದ್ಧಿಗೆ ದತ್ತಾಂಶವನ್ನು ದಿಕ್ಸೂಚಿಯಾಗಿ ಬಳಸಬಹುದು- ಹನುಮಾನಾಯಕ್

0

ಸಾಂಖ್ಯಿಕ ದಿನಾಚರಣೆಯು ಕೇವಲ ಅಂಕಿಅಂಶಗಳನ್ನು ನೆನಪಿಸಿಕೊಳ್ಳುವ ದಿನವಲ್ಲ, ಬದಲಿಗೆ ದೇಶದ ಸುಸ್ಥಿರ ಅಭಿವೃದ್ಧಿಗೆ ದತ್ತಾಂಶವನ್ನು ಹೇಗೆ ದಿಕ್ಸೂಚಿಯನ್ನಾಗಿ ಬಳಸಬಹುದು ಎಂದು ಚಿಂತಿಸುವ ದಿನವಾಗಿದೆ ಎಂದು ಜಿ.ಪಂ. ಮುಖ್ಯ ಯೋಜನಾಧಿಕಾರಿ ಹನುಮಾನಾಯ್ಕ್ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಛೇರಿಯಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಸಾಂಖ್ಯಿಕ ತಜ್ಞರಾದ ಪ್ರೊ.ಪಿ.ಸಿ.ಮಹಾಲನೋಬಿಸ್ ಜನ್ಮ ದಿನ ಹಾಗೂ ಸಾಂಖ್ಯಿಕ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಣಕಾಸಿನ ಎಲ್ಲ ವ್ಯವಹಾರಗಳಿಗೆ ಹಾಗೂ ಪ್ರತಿ ಇಲಾಖೆಗಳ ಯೋಜನೆಗಳು ರೂಪುಗೊಳ್ಳುವುದಕ್ಕೆ ಸಾಂಖ್ಯಿಕ ಇಲಾಖೆಯ ಅಂಕಿಅಂಶಗಳೇ ಆಧಾರ. ಆದ್ದರಿಂದ ಇದನ್ನು ಮೂಲ ಇಲಾಖೆ ಎಂದು ಕರೆಯಬಹುದು.

ಕೇವಲ ಸಾಂಪ್ರದಾಯಿಕ ಸಮೀಕ್ಷೆಗಳ ಮೇಲೆ ಅವಲಂಬಿತವಾಗದೆ, ಈಗಾಗಲೇ ಸರ್ಕಾರದ ಬಳಿ ಇರುವ ಬೃಹತ್ ಆಡಳಿತಾತ್ಮಕ ದತ್ತಾಂಶವನ್ನು ಸರಿಯಾಗಿ ವಿಶ್ಲೇಷಿಸಿದರೆ, ಜನರಿಗೆ ಅಗತ್ಯವಿರುವ ನೈಜ ಯೋಜನೆಗಳನ್ನು ರೂಪಿಸಬಹುದು.
ಹೊಸದಾಗಿ ಮನೆಮನೆಗೆ ಹೋಗಿ ಸಮೀಕ್ಷೆ ನಡೆಸುವುದಕ್ಕೆ ಹೋಲಿಸಿದರೆ, ಲಭ್ಯವಿರುವ ದತ್ತಾಂಶವನ್ನು ಬಳಸುವುದು ಆರ್ಥಿಕವಾಗಿ ಮತ್ತು ಸಮಯದ ದೃಷ್ಟಿಯಿಂದ ಅತ್ಯಂತ ಲಾಭದಾಯವಾಗಿದ್ದು, ಸರ್ಕಾರದ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪುತ್ತಿವೆಯೇ ಇಲ್ಲವೇ ಎಂಬುದನ್ನು ನಿಖರವಾಗಿ ಪತ್ತೆಹಚ್ಚಲು ಮತ್ತು ಸೋರಿಕೆಯನ್ನು ತಡೆಗಟ್ಟಲು ಇದು ನೆರವಾಗುತ್ತದೆ ಎಂದರು.
ಉದ್ಯೋಗಿಗಳು ಸಾಂಖ್ಯಿಕ ಇಲಾಖೆ ಕೆಲಸಗಳನ್ನು ಹೇಗೆ ನಿರ್ವಹಣೆ ಮಾಡಬೇಕು. ಇಲಾಖೆಯಲ್ಲಿರುವ ಸಂಪನ್ಮೂಲ ವ್ಯಕ್ತಿಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂದು ತಿಳಿಸಿದ ಅವರು ಇಲಾಖೆಯಲ್ಲಿ ಕುಂದು ಕೊರತೆಗಳಿದ್ದಲ್ಲಿ ಹಿರಿಯ ಅಧಿಕಾರಿಗಳ ಸಹಕಾರ ಇದ್ದೇ ಇರುತ್ತದೆ ಎಂದ ಅವರು ಇಲಾಖೆಯಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಹೆಚ್ ಇ ಮಹೇಶ್ವರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತದ “ಅಂಕಿಅಂಶಗಳ ಪಿತಾಮಹ” ಎಂದು ಪ್ರಸಿದ್ಧರಾದ ಪ್ರೊ. ಪ್ರಶಾಂತ ಚಂದ್ರ ಮಹಾಲನೋಬಿಸ್ ಅವರ ಜನ್ಮದಿನವಾದ ಜೂನ್ 29 ಅನ್ನು ಭಾರತದಲ್ಲಿ ಪ್ರತಿ ವರ್ಷ “ರಾಷ್ಟ್ರೀಯ ಸಾಂಖ್ಯಿಕ ದಿನಾಚರಣೆ” ಎಂದು ಆಚರಿಸಲಾಗುತ್ತದೆ. ಆರ್ಥಿಕ ಯೋಜನೆ ಮತ್ತು ಸಾಂಖ್ಯಿಕ ಅಭಿವೃದ್ಧಿ ಕ್ಷೇತ್ರಗಳಿಗೆ ಅವರು ನೀಡಿದ ಮಹತ್ತರ ಕೊಡುಗೆಯನ್ನು ಗೌರವಿಸಲು ಭಾರತ ಸರ್ಕಾರವು 2007 ರಿಂದ ಈ ದಿನವನ್ನು ರಾಷ್ಟ್ರೀಯ ದಿನಾಚರಣೆಯಾಗಿ ಘೋಷಿಸಿತು.
ಅವರು ಕೋಲ್ಕತ್ತಾದಲ್ಲಿ ಇಂಡಿಯನ್ ಸ್ಟಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್ ಅನ್ನು ಸ್ಥಾಪಿಸಿದರು. ಭಾರತದ ಎರಡನೇ ಪಂಚವಾರ್ಷಿಕ ಯೋಜನೆಗೆ (ಮಹಾಲನೋಬಿಸ್ ಮಾದರಿ) ಬುನಾದಿ ಹಾಕಿಕೊಟ್ಟರು, ಇದು ದೇಶದ ಕೈಗಾರಿಕೀಕರಣಕ್ಕೆ ವೇಗ ನೀಡಿತು.
ದತ್ತಾಂಶ ಸಂಗ್ರಹ ಮತ್ತು ಯೋಜನೆ ರೂಪಿಸುವಲ್ಲಿ ಪ್ರಮುಖ ಕೊಡುಗೆಗಳನ್ನು ಇವರು ನೀಡಿದ್ದಾರೆ. ಯಾವುದೇ ಯೋಜನೆಗಳಿಗೆ ಅಂಕಿಅಂಶಗಳಗಳು ಬಹಳ ಮುಖ್ಯವಾಗಿದ್ದು ಈ ಅಂಕಿಅಂಶಗಳನ್ನು ಹೇಗೆ ಸಿದ್ದಪಡಿಸಿ, ಬಳಸಿಕೊಳ್ಳಬೇಕೆಂದು ಇವರು ತೋರಿಸಿಕೊಟ್ಟರು ಹಾಗೂ ಹಲವಾರು ಮಾದರಿ ಸಮೀಕ್ಷೆಗಳನ್ನು ಇವರು ನೀಡಿದ್ದು ಇವನ್ನು ಆಧಾರವಾಗಿಟ್ಟುಕೊಂಡು ಜಗತ್ತಿನಾದ್ಯಂತ ಅಳವಡಿಕೆ ಮಾಡಿಕೊಳ್ಳಲಾಗಿದೆ ಎಂದರು.
ರಾಷ್ಟ್ರೀಯ ಸಾಂಖ್ಯಿಕ ದಿನಾಚರಣೆಯ ಸಂದರ್ಭದಲ್ಲಿ ಪ್ರತಿ ವರ್ಷ ಒಂದು ಪ್ರಮುಖ ಧ್ಯೇಯವಾಕ್ಯ ಅಥವಾ ವಿಷಯವನ್ನು ಇಟ್ಟುಕೊಂಡು ಚರ್ಚೆಗಳನ್ನು ನಡೆಸಲಾಗುತ್ತದೆ. “ಅನ್ ಲಾಕಿಂಗ್ ದಿ ಪೊಟೆನ್ಶಿಯಲ್ ಆಫ್ ಅಡ್ಮಿನಿಸ್ಟ್ರೇಟಿವ್ ಡೇಟಾ” (ಆಡಳಿತಾತ್ಮಕ ದತ್ತಾಂಶದ ಸಾಮರ್ಥ್ಯವನ್ನು ಮುಕ್ತಗೊಳಿಸುವುದು) ಎಂಬುದು ಈ ವರ್ಷದ ವಿಷಯವಾಗಿದ್ದು ಅತ್ಯಂತ ಪ್ರಸ್ತುತವಾದ ವಿಷಯವಾಗಿದೆ.
ಸರ್ಕಾರದ ವಿವಿಧ ಇಲಾಖೆಗಳು ತಮ್ಮ ದೈನಂದಿನ ಕೆಲಸ ಕಾರ್ಯಗಳು, ಯೋಜನೆಗಳ ಅನುಷ್ಠಾನ, ನಾಗರಿಕರ ನೋಂದಣಿ (ಉದಾಹರಣೆಗೆ: ಆಧಾರ್, ಪಡಿತರ ಚೀಟಿ, ತೆರಿಗೆ ಪಾವತಿ, ಆರೋಗ್ಯ ದಾಖಲೆಗಳು) ಮುಂತಾದ ಪ್ರಕ್ರಿಯೆಗಳ ಸಮಯದಲ್ಲಿ ಸಂಗ್ರಹಿಸುವ ದತ್ತಾಂಶವೇ ಆಡಳಿತಾತ್ಮಕ ದತ್ತಾಂಶವಾಗಿದೆ ಎಂದರು.
ಇಲಾಖೆಯ ಪ್ರಜ್ಞಾ ಎನ್ ಸ್ವಾಮಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿ, ಪೊಟೆನ್ಶಿಯಲ್ ಅಡಿಮಿನಿಸ್ಟ್ರೇಟಿವ್ ಡೇಟಾ ಎಂದರೆ ಆಡಳಿತಾತ್ಮಕ ಪ್ರಕ್ರಿಯೆಗಳು, ಸರ್ಕಾರಿ ಯೋಜನೆಗಳು ಅಥವಾ ಸಾಂಸ್ಥಿಕ ನಿರ್ವಹಣೆಯ ಸಂದರ್ಭದಲ್ಲಿ ಭವಿಷ್ಯದ ಯೋಜನೆ ಮತ್ತು ನಿರ್ಧಾರ ಕೈಗೊಳ್ಳಲು ಬಳಸಬಹುದಾದ ಸಂಭಾವ್ಯ ಆಡಳಿತಾತ್ಮಕ ದತ್ತಾಂಶವಾಗಿದೆ. ಭವಿಷ್ಯದ ಉತ್ತಮ ಮತ್ತು ದಕ್ಷ ಆಡಳಿತಕ್ಕಾಗಿ ವ್ಯವಸ್ಥಿತವಾಗಿ ಬಳಸಿಕೊಳ್ಳಬಹುದಾದ ಎಲ್ಲಾ ರೀತಿಯ ಸರ್ಕಾರಿ ಹಾಗೂ ಸಾಂಸ್ಥಿಕ ಮಾಹಿತಿಯೇ “ಪೊಟೆನ್ಶಿಯಲ್ ಅಡಿಮಿನಿಸ್ಟ್ರೇಟಿವ್ ಡೇಟಾ” ಆಗಿದೆ.
ಯಾವುದೇ ಒಂದು ಜಿಲ್ಲೆ ಅಥವಾ ಇಲಾಖೆಯ ಆಡಳಿತವನ್ನು ಸುಗಮಗೊಳಿಸಲು ಈ ರೀತಿಯ ಡೇಟಾ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಸರ್ಕಾರಿ ಕಚೇರಿಗಳು, ನಾಗರಿಕ ಸೇವಾ ಕೇಂದ್ರಗಳು ಮತ್ತು ಇಲಾಖೆಗಳು ತಮ್ಮ ದೈನಂದಿನ ಚಟುವಟಿಕೆಗಳ ಮೂಲಕ ಸಂಗ್ರಹಿಸುವ ಮಾಹಿತಿಗಳು, ನಾಗರಿಕರಿಗೆ ತಲುಪುವ ಸೌಲಭ್ಯಗಳು, ಅರ್ಜಿಗಳ ವಿಲೇವಾರಿ ಪ್ರಮಾಣ ಮತ್ತು ಬಾಕಿ ಇರುವ ಕೆಲಸಗಳ ವಿವರಗಳು.
ಜಿಲ್ಲಾ ಮಟ್ಟದಲ್ಲಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಕೆಲಸಗಳನ್ನು ಯೋಜಿಸಲು ಈ ಡೇಟಾ ಸಹಕಾರಿಯಾಗಿದೆ.ಆಡಳಿತದಲ್ಲಿ ಪಾರದರ್ಶಕತೆ ತರಲು ಮತ್ತು ಅಧಿಕಾರಿಗಳ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲು ಇದು ಪ್ರಮುಖ ಆಧಾರವಾಗಿದೆ. ಪ್ರಕೃತಿ ವಿಕೋಪಗಳು ಅಥವಾ ತುರ್ತು ಸಂದರ್ಭದಲ್ಲಿ ತ್ವರಿತ ನಿರ್ಧಾರ ತೆಗೆದುಕೊಳ್ಳಲು ಈ ಮುನ್ಸೂಚನಾ ಡೇಟಾ ನೆರವಾಗುತ್ತದೆ.
ಸಂಗ್ರಹಿಸಿದ ದತ್ತಾಂಶವು ಅತ್ಯಂತ ನಿಖರವಾಗಿರಬೇಕು ಮತ್ತು ಸಾರ್ವಜನಿಕರ ವೈಯಕ್ತಿಕ ಮಾಹಿತಿ ಸುರಕ್ಷಿತವಾಗಿರಬೇಕು. ಡೇಟಾ ನಿರ್ವಹಣೆಯಲ್ಲಿಕೆಲಚಾರು ಸವಾಲುಗಳಿವೆ. ಯೋಜನೆಗಳ ಸ್ವರೂಪ ಬದಲಾದಾಗ, ಮಾಹಿತಿ ಕೊರತೆ, ಡೇಟಾ ಪ್ರೈವಸಿ ಈ ರೀತಿಯ ಸವಾಲುಗಳಿದ್ದು, ಇಲಾಖೆಯು ಡಿಜಿಟಲ್ ಕೌಶಲ್ಯ ಗಳನ್ನು ಅಗತ್ಯವಾಗಿ ಕಲಿತುಕೊಳ್ಳಬೇಕು. ಹಾಗೂ ತಂತ್ರಜ್ಞಾನದ ಜೊತೆ ಜೊತೆಗೆ ಸಾಗಬೇಕಿದೆ ಎಂದರು.
ಇಲಾಖೆಯ ನೌಕರರಾದ ಪ್ರವೀಣ್, ಪ್ರೊ.ಪಿ.ಸಿ.ಮಹಾಲನೋಬಿಸ್ ರವರ ಜೀವನ ಚರಿತ್ರೆ ಹಾಗೂ ಕೊಡುಗೆಗಳ ಬಗ್ಗೆ ಮಾಹಿತಿ ನೀಡಿದರು.
ನಿವೃತ್ತ ಸಾಂಖ್ಯಿಕ ಸಂಗ್ರಹಣಾಧಿಕಾರಿ ಬ್ರಿಜಿತ್ ವರ್ಗೀಸ್ ಮಾತನಾಡಿ, ದತ್ತಾಂಶಗಳು ನಿಖರತೆ ಪಡೆಯಲು ಡಿಜಿಟಲೈಸ್ ಆಗಬೇಕು. ತಂತ್ರಾAಶ ಬಳಕೆಯಿಂದ ಹೆಚ್ಚು ಉಪಯೋಗ ಇದ್ದು, ಇಲಾಖೆಯ ಯುವ ಉದ್ಯೋಗಿಗಳಿಗೆ ತರಬೇತಿಗಳು ಲಭಿಸಿದರೆ ಇನ್ನೂ ಅನುಕೂಲವಾಗುತ್ತದೆ ಎಂದರು.
ನಿವೃತ್ತ ಜಂಟಿ ನಿರ್ದೇಶಕ ಹನುಮಂತಪ್ಪ, ನಿವೃತ್ತ ಡಿಡಿ ಬಾಲರಾಜ್ ಮಾತನಾಡಿದರು.
ಸಾಂಖ್ಯಿಕ ಸಂಗ್ರಹಣೆಯ ಎಲ್ಲಾ ವಿಭಾಗಗಳಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದ ಶಿವಮೊಗ್ಗ ಜಿಲ್ಲೆಯ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಇದೇ ವೇಳೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಎಂ ಎ ಡಿ ಬಿ ಉಪನಿರ್ದೇಶಕ ಶಿವಾನಂದ್ ಕುದರಿ, ಸಾಂಖ್ಯಿಕ ಇಲಾಖೆ ಅಧಿಕಾರಿಗಳು, ನೌಕರರು, ನಿವೃತ್ತ ಅಧಿಕಾರಿಗಳು ಹಾಜರಿದ್ದರು.

ಉತ್ತಮ ಅಭ್ಯಾಸ ಮತ್ತು ಹವ್ಯಾಸ ಗಳ ಮೂಲಕ ವಿದ್ಯಾರ್ಥಿಗಳು ಉತ್ತಮ ಜೀವನ ಕಟ್ಟಿಕೊಳ್ಳಬೇಕು- ನ್ಯಾ.ಎಂ.ಎಸ್.ಸಂತೋಷ್

0

ಜೀವನ ಅಮೂಲ್ಯವಾದದ್ದು, ಅದನ್ನು ಮಾದಕ ವಸ್ತುಗಳಿಗೆ ಬಲಿ ಕೊಡಬೇಡಬಾರದು. ಉತ್ತಮ ಅಭ್ಯಾಸ ಮತ್ತು ಹವ್ಯಾಸಗಳ‌ ಮೂಲಕ ವಿದ್ಯಾರ್ಥಿಗಳು ಉತ್ತಮ ಜೀವನ‌ ಕಟ್ಟಿಕೊಳ್ಳಬೇಕೆಂದು ಹಿರಿಯ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ‌ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ.ಎಸ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಶಿಕ್ಷಣ ಇಲಾಖೆ, ಸರ್ಕಾರಿ ದುರ್ಗಿಗುಡಿ ಶಾಲೆ ಹಾಗೂ ಸುರಭಿ ಮಹಿಳಾ ಮಂಡಳಿ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ದುರ್ಗಿಗುಡಿ ಶಾಲೆಯಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಅಂತರರಾಷ್ಟ್ರೀಯ ಮಾದಕ ವಸ್ತು ಸೇವನೆ ಹಾಗೂ ನಿಷೇಧ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವ್ಯಸನ ಮುಕ್ತ, ಸದೃಢ ಮತ್ತು ಆರೋಗ್ಯವಂತ ಸಮಾಜವನ್ನು ನಿರ್ಮಿಸಲು ಮುಖ್ಯವಾಗಿ ವಿದ್ಯಾರ್ಥಿಗಳು ಜಾಗೃತಿ ಮೂಡಿಸಬೇಕು ಎಂದ ಅವರು ಮಕ್ಕಳು ಸಮಾಜಮುಖಿಯಾಗಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ತಮ್ಮ ಸಜೀವನದ ಉದಾಹರಣೆಗಳ ಮೂಲಕ ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ವಿವರಿಸಿದರು. ಗಾಂಧೀಜಿಯವರು ಕಂಡಂತಹ ನಶ ಮುಕ್ತ ಭಾರತದ ಕನಸಿನೊಂದಿಗೆ ನಾವು ಯಾವ ರೀತಿಯಾಗಿ ನಡೆದುಕೊಳ್ಳಬೇಕು ಮತ್ತು ನಶೆ ಪದಾರ್ಥಗಳ ಸಾಗಾಣಿಕೆಯನ್ನು ತಡೆಯುವಲ್ಲಿ ನಮ್ಮ ಪಾತ್ರವೇನು ಎಂಬ ಪ್ರತಿಜ್ಞಾ ವಿಧಿಯನ್ನು ಎಲ್ಲರಿಗೂ ಬೋಧಿಸಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ಫಲಾನುಭವಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಶಶಿರೇಖಾ, ಅಂಗವಿಕಲ ಮತ್ತು ಹಿರಿಯ ನಾಗರಿಕ ಸಬಲೀಕರಣ ಇಲಾಖೆಯ ಅಧಿಕಾರಿ ಸುವರ್ಣ ನಾಯಕ್, ದುರ್ಗಿಗುಡಿ ಶಾಲೆಯ ಎಸ್ ಡಿ ಎಂ ಸಿ ಸದಸ್ಯರಾದ ಸತೀಶ್, ಬಾಲ ನ್ಯಾಯ ಮಂಡಳಿ ಸದಸ್ಯರು ಹಾಗೂ ಸುರಭಿ ಮಹಿಳಾ ಮಂಡಳಿ ದಾವಣಗೆರೆಯ ನಿರ್ದೇಶಕರಾದ ರೇಖಾ ಜಿ.ಎಂ, ಮತ್ತು ಸುರಭಿ ಐ ಆರ್ ಸಿ ಎ ನಿರ್ದೇಶಕರಾದ ಲತಾ ಎ ವಿ ಉಪಸ್ಥಿತರಿದ್ದು, ಕಾರ್ಯಕ್ರಮದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಶಾಲೆಯ ಮುಖ್ಯ ಶಿಕ್ಷಕರಾದ ಮೋಹನ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥನೆ ನೆರವೇರಿಸಿದರು. ರೇಖಾ ಜಿ.ಎಂ.ಸರ್ವರನ್ನೂ ಸ್ವಾಗತಿಸಿದರೆ, ಲತಾ ಎ ವಿ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸರಸ್ವತಿ ವಂದನಾರ್ಪಣೆ ಮಾಡಿದರು.

ಎಲ್ಲರಿಗೂ ಒಳ್ಳೆಯದಾಗಲಿ ಎಂಬುದೇ ಹಿಂದು ವಿಚಾರಧಾರೆ- ಕೃಷ್ಣ ಪ್ರಸಾದ್

0

ಎಲ್ಲರಿಗೂ ಒಳ್ಳೆಯದಾಗಲಿ ಎಂಬುದೇ ಹಿಂದು ವಿಚಾರಧಾರೆ, ಭಾರತದ ಆತ್ಮವಿದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಬೌದ್ಧಿಕ್ ಪ್ರಮುಖ್ ಕೃಷ್ಣಪ್ರಸಾದ್ ಹೇಳಿದರು.

ಸಾಗರ ನಗರದ ಕುಡುಪಲಿ ಸದಾನಂದ ಸ್ವರಾಲಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷದ ಹಿನ್ನೆಲೆ ನಡೆದ ಪ್ರಮುಖ ನಾಗರಿಕರ ಗೋಷ್ಠಿಯಲ್ಲಿ ಮಾತನಾಡಿದರು.

ದೇಶ ಉಳಿಯಬೇಕಾದರೆ ಹಿಂದುತ್ವ ಉಳಿಯಬೇಕು, ಹಿಂದುತ್ವ ಉಳಿಯಬೇಕಾದರೆ ದೇಶ ಉಳಿಯಬೇಕೆಂಬ ವಿಚಾರದಿಂದ ಸಂಘದ ನಡೆದು ಬಂದಿದೆ. ಸಂಘದ ಶಾಖೆಗೆ ಬಂದವರಿಗೆ ನಾನೊಬ್ಬನಲ್ಲ ನಾವೆಲ್ಲರೂ ಅನಿಸುತ್ತದೆ. ಆ ಮೂಲಕ ಸಮಾಜ ಪರಿವರ್ತನೆ ಕಾರ್ಯ ಆಗುತ್ತಿದೆ ಎಂದರು.

ಪರಕೀಯರ ದಾಸ್ಯಕ್ಕೆ ಒಳಗಾಗಗಲು ಕಾರಣವೇನೆಂದು ಚಿಂತಿಸಿದವರು ಡಾಕ್ಟರ್ ಜೀ. ಪರಸ್ಪರ ಕಿತ್ತಾಟದಿಂದ ಮೈಮರೆತು ಕೀಳರಿಮೆ ಬೆಳೆಯಿತು. ಆತ್ಮಹೀನಾಯತೆ, ಆತ್ಮವಿಸ್ಮತಿಯಿಂದ ದೇಶವನ್ನು ಆಚೆಗೆ ತರುವ ಬಗ್ಗೆ ಯೋಚಿಸಿ ಸಂಘವನ್ನು ಆರಂಭಿಸಿದರು ಎಂದರು.

ಭಾರತದ ರಾಷ್ಟ್ರೀಯತೆಯ ಸತ್ವ ಹಿಂದುತ್ವ. ಅನೇಕ ಮತಗಳಿವೆ, ಸಂಪ್ರದಾಯ, ಆಚರಣೆಗಳಿವೆ ಅವ್ಯಾವು ಕೆಟ್ಟದ್ದನ್ನೇಳಿಲ್ಲ ಅರ್ಥೈಸಿಕೊಂಡ ರೀತಿ ತಪ್ಪಾಗಿರಬಹುದು. ಭಾರತವನ್ನು ತಿಳಿಯಲು ಮಾತೃದೇವೋ ಭವ, ಪಿತೃದೇವೋ ಭವ, ರಾಷ್ಟ್ರದೇವೋ ಭವ ಎಂಬ ವಿಚಾರವನ್ನು ಜೀವನದಲ್ಲಿ ಜೋಡಿಸಿಕೊಳ್ಳಬೇಕು. ಬುದ್ಧ, ಬಸವ, ವಿವೇಕಾನಂದ ಬೋಧನೆಗಳನ್ನು ಅನುಸರಿಸುವುದು ರಾಷ್ಟ್ರೀಯತೆ ಎಂದ ತಿಳಿಸಿದರು.

ಈ ಸಂದರ್ಭದಲ್ಲಿ ಸಗರ ಜಿಲ್ಲಾ ಸಂಘಚಾಲಕ ಕೇಶವ ಸಂಪೆಕೈ ಉಪಸ್ಥಿತರಿದ್ದರು.

ಕೋಟೆ ಶ್ರೀಮಾರಿಕಾಂಬ ದೇವಿಗೆ ಜುಲೈ 3 ರಂದು ಸ್ವರ್ಣಮುಖ ಕವಚ ಹಾಗೂ ರಜತದ್ವಾರದ ಸಮರ್ಪಣೆ

0

ಶಿವಮೊಗ್ಗ ನಗರದ ಇತಿಹಾಸ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬಾ ದೇವಿಗೆ ಸ್ವರ್ಣ ಮುಖ ಕವಚ ಹಾಗೂ ರಜತಾದ್ವಾರ ಸಮರ್ಪಣಾ ಸಮಾರಂಭ ಜು.3 ರಂದು ಬೆಳಿಗ್ಗೆ 12 ಗಂಟೆಗೆ ದೇವಸ್ಥಾನದ ಆವರಣದಲ್ಲಿ ನೆರವೇರಲಿದೆ.

ಹೊರನಾಡು ಅನ್ನಪೂರ್ಣ ದೇವಸ್ಥಾನದ ಧರ್ಮದರ್ಶಿ ಡಾ.ಜಿ ಭೀಮೇಶ್ವರ ಜೋಷಿ ರವರ ದಿವ್ಯಾ ಸಾನಿಧ್ಯದಲ್ಲಿ ಹಾಗೂ ಅವರ ಅಮೃತ ಹಸ್ತದಿಂದ ದೇವಿಗೆ ಸಮರ್ಪಣಾ ಕಾರ್‍ಯಕ್ರಮ ನಡೆಯಲಿದೆ.

ಕಾರ್‍ಯಕ್ರಮದ ಪೂರ್ವಭಾವಿಯಾಗಿ ಜೂ.30 ರಿಂದ ಜು.2ರವರೆಗೆ ವಿವಿಧ ಧಾರ್ಮಿಕ ಕಾರ್‍ಯಕ್ರಮಗಳು , ಗಣಪತಿ ಪೂಜೆ , ಪೂಣ್ಯಾಹ ವಾಚನ ಸೇರಿದಂತೆ ವಿವಿಧ ಕಾರ್‍ಯಕ್ರಮಗಳು ನೆರವೇರಲಿದೆ.
ಜು.3 ರಂದು ಬೆಳಿಗ್ಗೆ 8:30ಕ್ಕೆ ಗಣಪತಿ ಪೂಜೆಯೊಂದಿಗೆ ಸಮರ್ಪಣಾ ಕಾರ್‍ಯಕ್ರಮ ಆರಂಭವಾಗಲಿದ್ದು ಸಾಮೂಹಿಕ ಲಲಿತ ಹೋಮವನ್ನ ದೇವಸ್ಥಾನದ ಪ್ರದಾನ ಆರ್ಚಕ ಸಂತೋಷ್ ಭಾರದ್ವಾಜ್ ನಡೆಸಿಕೊಡಲಿದ್ದಾರೆ.

ಬೆಳಿಗ್ಗೆ 11:30 ಕ್ಕೆ ಪೂರ್ಣಾಹುತಿ ಹಾಗೂ ಅಮ್ಮನವರಿಗೆ ಬಂಗಾರದ ಮುಖ ಕವಚ ಸಮರ್ಪಣೆ ,ಗರ್ಭಗುಡಿಯ ರಜತದ್ವಾರ ಸಮರ್ಪಣೆ ನಡೆಯಲಿದ್ದು ಮಧ್ಯಾಹ್ನ ೧ ಗಂಟೆಗೆ ಮಹಾ ಮಂಗಳಾರತಿ , ಸಭಾ ಕಾರ್‍ಯಕ್ರ ಮ ನೆರವೇರಲಿದೆ.ನಂತರ ಭಕ್ತಾದಿಗಳಾಗಿ ಪ್ರಸಾದ ವಿತರಣೆ ನೆರವೇರಲಿದೆ.
ಸಭಾ ಕಾರ್‍ಯಕ್ರಮದಲ್ಲಿ ಡಾ.ಭೀಮೇಶ್ವರ ಜೋಷಿ ಆರ್ಶೀವಚನ ನೀಡಲಿದ್ದು , ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್ . ಕೆ . ಮರಿಯಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಶಾಸಕ ಎಸ್ . ಎನ್ . ಚನ್ನಬಸಪ್ಪ ,ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ,ಮಾಜಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್ , ಸಮಾಜ ಸೇವಕ ಎಂ.ಶ್ರೀಕಾಂತ್ , ಇವರುಗಳು ಪಾಲ್ಗೊಳ್ಳಲಿದ್ದಾರೆ ಎಂದು ದೇವಸ್ಥಾನ ಸಮಿತಿಯ ಪ್ರಧಾನ ಕಾರ್‍ಯದರ್ಶಿ ಎನ್ . ಮಂಜುನಾಥ್ ತಿಳಿಸಿದ್ದಾರೆ.
ಈ ಕಾರ್‍ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳುವ ಮೂಲಕ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಅವರು ಕೋರಿದ್ದಾರೆ.
ಜೂ.30 ರಿಂದ ಬೆಳಿಗ್ಗೆ 10:30ಯಿಂದ 12:30ವರೆಗೆ ಸಂಜೆ 5:30 ರಿಂದ 7:30 ರವರಗರೆಗೆ ಲಲಿತಾ ಸಹಸ್ರ ನಾಮ ಲಕ್ಷ ಕುಂಕುಮಾರ್ಚನೆ ಮಹಿಳೆಯರಿಗಾಗಿ ನೆರವೇರಲಿದ್ದು ,ಇದರಲ್ಲಿ ಎಲ್ಲಾ ಭಕ್ತಾದಿಗಳು ಪಾಲ್ಗೊಳ್ಳಲು ಕೋರಲಾಗಿದೆ.

ಶಿವಮೊಗದಲ್ಲಿ ತಂಬಾಕು ನಿಯಂತ್ರಣ ಕೋಶದಿಂದ ದಿಢೀರ್ ದಾಳಿ 51 ಪ್ರಕರಣ ದಾಖಲು

0

ಶಿವಮೊಗ್ಗ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ಶಿವಮೊಗ್ಗ ಬಸ್ ನಿಲ್ದಾಣದಲ್ಲಿ COTPA ದಾಳಿಗಳನ್ನು ಹಮ್ಮಿಕೊಳ್ಳಲಾಯಿತು. ಒಟ್ಟು 51 ಪ್ರಕರಣಗಳನ್ನು ದಾಖಲಿಸಿ, 4500 ರೂ ದಂಡದ ಮೊತ್ತವನ್ನು ಸಂಗ್ರಹಿ ಸಲಾಯಿತು. ತಂಬಾಕು ಜಾಹಿರಾತು ಫಲಕಗಳನ್ನು ತೆರವುಗೊಳಿಸಲಾಯಿತು. ತಂಡದಲ್ಲಿ ಜಿಲ್ಲಾ ಸಲಹೆಗಾರರಾದ ಶ್ರೀ ಹೇಮಂತ್ ರಾಜ್ ಅರಸ್, ಸಮಾಜ ಕಾರ್ಯಕರ್ತರಾದ ಶ್ರೀ ರವಿರಾಜ್, ಶ್ರೀ ಪ್ರವೀಣ್, ಮಹಾನಗರಪಾಲಿಕೆಯ ಸಿಬ್ಬಂದಿಗಳು ಹಾಗು ಪೊಲೀಸ್ ಇಲಾಖೆ ಸಿಬ್ಬಂದಿಗಳು ಭಾಗವಹಿ ಸಿದ್ದರು.ಈ ಸಂದರ್ಭದಲ್ಲಿ ತಂಬಾಕು ಮಾರಾಟಗಾರರಿಗೆ ಮತ್ತು ಸಾರ್ವಜನಿಕರಿಗೆ ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು ಹಾಗೂ COTPA ಕಾಯ್ದೆ ಕುರಿತು ಅ ರಿವು ಮೂಡಿಸಲಾಯಿತು.

ಸಂಖ್ಯಾಫಲಕ ಇಲ್ಲದ ವಾಹನಗಳನ್ನ ತಪಾಸಣೆ ಮಾಡಿ ಸವಾರರಿಗೆ ಎಸ್ ಪಿ ನಿಖಿಲ್ ಅವರಿಂದ ಖಡಕ್ ವಾರ್ನಿಂಗ್

0

ಶಿವಮೊಗ್ಗ ನಗರದಲ್ಲಿ ನಂಬರ್ ಪ್ಲೇಟ್ ಇಲ್ಲದೇ ಸುತ್ತಾಡುತ್ತಿದ್ದ 74 ದ್ವಿಚಕ್ರ ವಾಹನಗಳನ್ನು ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸುವ ಮೂಲಕ ವಶಕೆ ಪಡೆದಿದ್ದಾರೆ. ಇತ್ತೀಚೆಗೆ ನಗರದಲ್ಲಿ ಇ-ಚಲನ್ ಸೇರಿದಂತೆ ಸಂಚಾರ ನಿಯಮ ಉಲ್ಲಂಘನೆಗಳಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ನಂಬರ್ ಪ್ಲೇಟ್ ಇಲ್ಲದೆ ಅಥವಾ ನಿಯಮಬಾಹಿರ (ಡಿಫೆಕ್ಟಿವ್) ನಂಬರ್ ಪ್ಲೇಟ್ ಅಳವಡಿಸಿ ಕೆಲವರು ವಾಹನಗಳಲ್ಲಿ ಸಂಚರಿಸುತ್ತಿದ್ದರು.

ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ನಂಬರ್ ಪ್ಲೇಟ್ ಇಲ್ಲದೆ ಅಥವಾ ನಿಯಮಬಾಹಿರ 74 ದ್ವಿಚಕ್ರ ವಾಹನಗಳ ತಪಾಸಣೆ ನಡೆಸಿದ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಬಿ ಅವರು, ವಾಹನ ಸವಾರರಿಗೆ ಖಡಕ್ ಎಚ್ಚರಿಕೆ ನೀಡಿದರು. ಇದು ಕೊನೆಯ ಎಚ್ಚರಿಕೆ. ಸದ್ಯಕ್ಕೆ ವಾಹನ ಮಾಲೀಕರಿಗೆ ದಂಡ ವಿಧಿಸಿ, ನೋಟಿಸ್ ನೀಡಿ ವಾಹನಗಳನ್ನು ಹಿಂತಿರುಗಿಸಲಾಗಿದೆ.

ಆದರೆ ಮುಂದಿನ ದಿನಗಳಲ್ಲಿ ಇದೇ ರೀತಿಯ ಉಲ್ಲಂಘನೆ ಕಂಡುಬಂದರೆ ನೇರವಾಗಿ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಂಬರ್ ಪ್ಲೇಟ್ ಇಲ್ಲದ ಅಥವಾ ನಿಯಮಬಾಹಿರ ನಂಬರ್ ಪ್ಲೇಟ್ ಹೊಂದಿರುವ ವಾಹನಗಳು ಅಪರಾಧ ಕೃತ್ಯಗಳಲ್ಲಿ ಹೆಚ್ಚಾಗಿ ಬಳಕೆಯಾಗುವ ಸಾಧ್ಯತೆ ಇರುವುದರಿಂದ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದರು.

ಟ್ರಾಫಿಕ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ಗಳು ದೇವರಾಜ್, ಸಬ್‌ಇನ್ಸ್‌ಪೆಕ್ಟರ್‌ಗಳು, ಸಿಬ್ಬಂದಿ ಸೇರಿದಂತೆ ಎಲ್ಲಾ ಪೊಲೀಸ್ ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಎಸ್ಪಿ ಮೆಚ್ಚುಗೆ ವ್ಯಕ್ತಪಡಿಸಿದರು.

ಶಿವಮೊಗ್ಗದ ಸರ್ವೋದಯ ಮಂಡಳಿ ಘಟಕವು ರಾಜ್ಯದಲ್ಲೇ ಅತ್ಯಂತ ಕ್ರಿಯಾಶೀಲ- ಡಾ.ಎಸ್.ಹೆಚ್.ಸುರೇಶ್

0

ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಶಿವಮೊಗ್ಗ ಜಿಲ್ಲಾ ಸರ್ವೋದಯ ಮಂಡಳಿ ತುಂಬ ಸಕ್ರಿಯವಾಗಿದ್ದು, ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಪೂರೈಸಿದೆ ಅಲ್ಲದೆ ವಿಶೇಷವಾಗಿ ರಾಜ್ಯಮಟ್ಟದ ಮತ್ತು ರಾಷ್ಟ್ರಮಟ್ಟದ ಸಮ್ಮೇಳನಗಳನ್ನು ಆಯೋಜಿಸಿ ಗಾಂಧಿಜಿಯವರ ತತ್ವ ಸಿದ್ಧಾಂತವನ್ನು ಯುವಜನರಲ್ಲಿ ಬಿತ್ತುವ ಕೆಲಸವನ್ನು ಯಶಸ್ವಿಯಾಗಿ ಮಾಡಿದೆ ಎಂದು ರಾಜ್ಯ ಸರ್ವೋದಯ ಮಂಡಳಿಯ ನಿಕಟ ಪೂರ್ವ ಅಧ್ಯಕ್ಷರಾದ ಡಾ. ಎಚ್ಎಸ್ ಸುರೇಶ್ ತಿಳಿಸಿದ್ದಾರೆ. ಅವರು ವನಿತಾ ವಿದ್ಯಾಲಯದಲ್ಲಿ ಜಿಲ್ಲಾ ಸರ್ವೋದಯ ಮಂಡಳಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಇದೇ ಸಂದರ್ಭದಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರವನ್ನು ಪ್ರೇರಣಾ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಎಂ ಎನ್ ವೆಂಕಟೇಶ್ ಅವರು ನೀಡಿ, ಬಾಲ್ಯದಲ್ಲಿ ತಾವು ಅನುಭವಿಸಿದ ಕಷ್ಟ ಕಾರ್ಪಣ್ಯಗಳು ಇಂದಿನ ಮಕ್ಕಳಲ್ಲಿ ಹೋಗಲಾಡಿಸಲು ಎಲ್ಲರೂ ಸಹಕರಿಸಬೇಕು ಎಂದರು.
ಈ ವರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವನಿತಾ ವಿದ್ಯಾಲಯದ ಮೂರು ವಿದ್ಯಾರ್ಥಿಗಳಿಗೆ ಡಾ. ಉಷಾ ರಮೇಶ್ ಅವರು ನಗದು ಪ್ರೋತ್ಸಾಹ ಧನವನ್ನು ನೀಡುವುದರ ಮೂಲಕ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನೆರವೇರಿಸಿ ಕೊಟ್ಟರು. ಈ ಸಂದರ್ಭದಲ್ಲಿ ಅವರು ಮಾತನಾಡಿ ಪ್ರತಿಭೆ ಎಲ್ಲರ ಮಕ್ಕಳಲ್ಲೂ ಇದೆ. ಅದನ್ನು ಹೊರ ತರುವ ಕಾರ್ಯ ನಮ್ಮ ಶಿಕ್ಷಕರು ಮಾಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಂಗವಾಗಿ ಮತ್ತೊಂದು ಮಹತ್ವಪೂರ್ಣ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು. ಅದೆಂದರೆ ಕರ್ನಾಟಕ ಬ್ಯಾಂಕ್ ಅಧಿಕಾರಿ ಎನ್ ಎಸ್ ಶ್ರೀನಿವಾಸಮೂರ್ತಿ ಅವರು ರಚಿಸಿದ ಶಿಲ್ಪಕಲಾ ದೇವಾಲಯಕ್ಕೆ ದಾರಿ ಎಂಬ ಎಂಟನೇ ಸಂಪುಟದ ಕೃತಿ ಲೋಕಾರ್ಪಣೆ ಕಾರ್ಯಕ್ರಮವು ನಡೆಯಿತು ಪುಸ್ತಕವನ್ನು ಬಿಡುಗಡೆ ಮಾಡಿದ ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊಫೆಸರ್ ಹೆಚ್ ಆರ್ ಶಂಕರ್ ನಾರಾಯಣ ಶಾಸ್ತ್ರಿ ಯವರು ಮಾತನಾಡಿ ಕರ್ನಾಟಕದಲ್ಲಿ ಸುಮಾರು 68,000ಕ್ಕೂ ಹೆಚ್ಚು ದೇವಾಲಯಗಳಿದ್ದು, ಶ್ರೀಯುತ ಶ್ರೀನಿವಾಸಮೂರ್ತಿ ಅವರು ಇದುವರೆಗೂ 1800 ದೇವಾಲಯಗಳ ಪರಿಚಯವನ್ನು ತಮ್ಮ ಕೃತಿಗಳ ಮೂಲಕ ಮಾಡಿಕೊಟ್ಟಿರುವುದು ಒಂದು ಅಚ್ಚರಿಯ ವಿಷಯ ಎಂದು ಶ್ಲಾಘಿಸಿದರು. ದೇವಾಲಯಗಳಿಗೆ ಹೋಗಿ ಬಂದರೆ ಸಾಲದು ಅದರ ಇತಿಹಾಸ, ಪೌರಾಣಿಕ ಹಿನ್ನೆಲೆ, ಕಲೆ ಮತ್ತು ಸಂಸ್ಕೃತಿಯನ್ನು ಪರಿಚಯ ಮಾಡಿಕೊಳ್ಳುವುದು ಅತ್ಯಂತ ಅವಶ್ಯಕ ಈ ನಿಟ್ಟಿನಲ್ಲಿ ಲೇಖಕರು ಪ್ರತಿಯೊಂದು ವಿಷಯವನ್ನು ವಿಷದ ಪಡಿಸಿ ಸುಂದರವಾದ ಛಾಯಾಚಿತ್ರಗಳನ್ನು ಮುದ್ರಿಸಿ, ಉತ್ತಮ ಪುಸ್ತಕವನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ. ಅವರ ಪ್ರಯತ್ನ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸರ್ವೋದಯ ಮಂಡಳಿ ಅಧ್ಯಕ್ಷರಾದ ಆರ್. ಮನೋಹರ್ ರವರು ತಮ್ಮ ಈ ಸಂಸ್ಥೆ ಮುಂದಿನ ದಿನಗಳಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಪ್ರಕಟಿಸಿದರು.
ಪ್ರಾರಂಭದಲ್ಲಿ ಕುಮಾರಿ ಸಂಜನಾ ತಿವಾರಿ ಪ್ರಾರ್ಥನೆ ಮಾಡಿದರು ಸ್ವಾಗತಿಸಿದರು ರೋಟೆರಿಯನ್ ವಿಜಯಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದ ಸರ್ವೋದಯ ಮಂಡಳಿಯ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಶಿಕ್ಷಕರಾದ
ಸಂತೋಷ್ ಮತ್ತು ಸದಾನಂದ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಕೊನೆಯಲ್ಲಿ ಶ್ರೀಮತಿ ಆರತಿ ತಿವಾರಿ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾಂಕಿನ ಹಿರಿಯ ಅಧಿಕಾರಿಗಳು ಮತ್ತು ಸಾಹಿತ್ಯ ಸತ್ತರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Klive Special Article “ಸುಮ್ಮನೆ ಬ್ರಹ್ಮನಾಗುವನೆ?” ಜಿಜ್ಞಾಸೆ ನೀಡಿದ ಅವಧೂತ ಶಿವರಾಮ ಶಾಸ್ತ್ರಿಗಳು ಲೇ: ಪ್ರಸಾದ್ ಶ್ರೀವತ್ಸ.ದಾವಣಗೆರೆ

0

Klive Special Article ನನ್ನ ಬರಹದ ಪಯಣ ಒಂದೊಂದು ಜಾಗಕ್ಕೆ ಒಬ್ಬೊಬ್ಬ ಅಧ್ಯಾತ್ಮ ಜೀವಿಯ ಕಡೆಗೆ ನಡೆದಾಗ ಅಲ್ಲಿನ ವಿಶೇಷತೆ ಹಾಗೂ ಆ ಸಂತರ ಚಮತ್ಕಾರಗಳು, ಅವರ ಕೌಟುಂಬಿಕ ಜೀವನ ಎಲ್ಲವನ್ನೂ ಗಮನಿಸಿದಾಗ ನಾವೇಕೆ ಹಾಗೆ ಆಗಲು ಸಾಧ್ಯವಿಲ್ಲ ಅಥವಾ ನಮ್ಮ ಮತ್ತು ಅವರ ಆಧ್ಯಾತ್ಮಿಕ ಜೀವನವು ಬೇರೆ ಬೇರೆಯೇ ? ಎಂಬ ಅನುಮಾನವೂ ಎಷ್ಟೋ ಬಾರಿ ಬಂದಿದೆ. ನಿಜಕ್ಕೂ ಭಗವಂತನಿಗೆ ಹತ್ತಿರವಾಗಬೇಕಾದರೆ ಎಷ್ಟು ಕಷ್ಟವಾಗುತ್ತದೆಯಲ್ಲವೇ ? ಇಷ್ಟು ಕಷ್ಟ ಪಟ್ಟು ಸಾಧನೆಯನ್ನೇಕೆ ಮಾಡಬೇಕು ? ಎಂಬ ಹಲವಾರು ಪ್ರಶ್ನೆಗಳು ಮನಸಿಗೆ ಬಂದಾಗ ಅರ್ಥವಾಗುತ್ತದೆ. ಬ್ರಹ್ಮಾನುಭವೆಂದರೆ ಸುಮ್ಮನೆಯೇನು ? ಹೀಗೇ ಯೋಚಿಸುತ್ತಾ ಕುಳಿತು ಮೊಬೈಲ್‌ ಸ್ಕ್ರಾಲ್‌ ಮಾಡುತ್ತಿರುವಾಗ “ಸುಮ್ಮನೆ ಬ್ರಹ್ಮವಾಗುವನೆ ? ಮೂಲ ಹಮ್ಮೆಲ್ಲ ಲಯವಾಗಿ ಉಳಿಯದೇ ತಾನೇ ! ಸುಮ್ಮನೆ ಬ್ರಹ್ಮವಾಗುವನೇ ?”ಎಂಬ ಪದ್ಯವನ್ನು ಹಾಕಿದ ನನ್ನ ಸ್ನೇಹಿತನ ವಾಟ್ಸಾಪ್‌ ಸ್ಟೇಟಸ್‌ ನೋಡಿದ ನಾನು ಅವನಿಗೆ ಮೆಸೇಜ್‌ ಮಾಡಿ ಈ ಪದ್ಯ ಯಾರು ಬರೆದರು ಏನು ? ಎಂಬುದಾಗಿ ವಿಚಾರಿಸಿದಾಗ ಅವನು ಇದನ್ನು ಬರೆದವರು ಶಂಕರಾಚಾರ್ಯರು ಎಂದು ತಿಳಿಸಿದ. ಆದರೆ ಶಂಕರಾಚಾರ್ಯರು ಮೂಲತಃ ಕೇರಳದವರು, ಅವರಿಗೆ ಸಂಸ್ಕೃತವೇ ಭಾಷೆಯಾಗಿ, ಅವರ ಎಲ್ಲಾ ರಚನೆಗಳು ಸಂಸ್ಕೃತದ್ದೇ ಆಗಿರುವಾಗ ಇದು ಹೇಗೆ ಸಾಧ್ಯ ಎಂದುಕೊಂಡೆ. ಸರಿ ಇರಬಹುದೇನೋ ಅಥವಾ ಅವರ ಯಾವುದೋ ಒಂದು ಸಂಸ್ಕೃತ ಗೀತೆಯನ್ನು ಕನ್ನಡಕ್ಕೆ ಅನುವಾದಿಸಿರಬಹುದು ಎಂದುಕೊಂಡು, ಅಪ್ಪನ ಬಳಿಗೆ ಬಂದು ಈ ಪದ್ಯವನ್ನು ಹಾಕಿದಾಗ ಅವರು ʼಅರೇ ಇದು ವೇದಾಂತ ಶಿವರಾಮ ಶಾಸ್ತ್ರಿಗಳʼ ಪದ್ಯ ಎಂದರು. ಅವರ ಬಗ್ಗೆ ನಾನು ಮಾಹಿತಿಯನ್ನು ಪಡೆಯುವ ಸಂದರ್ಭದಲ್ಲಿ ಹಲವಾರು ಅಚ್ಚರಿಗಳೂ ಸಹಾ ನನಗೆ ತಿಳಿದವು. ಶಿವರಾಮ ಶಾಸ್ತ್ರಿಗಳು ಯಾರು ? ಎಲ್ಲಿಯವರು ಅವರಿಗೆ ವೇದಾಂತ ಶಿವರಾಮ ಶಾಸ್ತ್ರಿ ಎಂಬ ಹೆಸರು ಹೇಗೆ ಬಂತು ಎಂಬುದಾಗಿ ನೋಡುತ್ತಿರುವಾಗ, ಅವರ ಬೇರೆ ಬೇರೆ ಪದ್ಯಗಳು ನನಗೆ ದೊರೆತವು ಕೆಲವು ಕಾಲಗಳು ಅವರ ಬಗ್ಗೆ ಯೋಚನೆ ಬಿಟ್ಟು ಅವರ ಪದ್ಯಗಳನ್ನೇ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿದೆ. “ಆಹಾ ! ಎಂಥಾ ಅದ್ಭುತವಾದ ಪದ್ಯಗಳು, ವೇದಾಂತವನ್ನು ಕೇವಲ ಆಡುಮಾತಿನಿಂದ ಹೇಳುವುದೆಂದರೇನು, ಅದರ ಅನುಭವವನ್ನು ಕೇಳುಗರಿಗೆ ಸಿಗುವಂತೆ ಮಾಡುವುದು ಕಡಿಮೆ ಮಾತಲ್ಲ. ಹೀಗಾಗಿ ಅವರ ಬಗ್ಗೆ ಬಹಳಷ್ಟು ಮಾಹಿತಿಯನ್ನು ಪಡೆದು ಇಂದಿನ ಈ ಅಂಕಣವನ್ನು ಅವರಿಗಾಗಿ ಮೀಸಲಿಟ್ಟಿದ್ದೇನೆ. ಅಂದು ನನಗೆ ಆ ಹಾಡು ಕೇಳದಿದ್ದರೆ ಇವರ ಬಗ್ಗೆ ತಿಳಿಯಲು ಸಾಧ್ಯವೇ ಆಗುತ್ತಿರಲಿಲ್ಲ ಎನಿಸುತ್ತದೆ.
Klive Special Article ಮೈಸೂರು ಶಿವರಾಮ ಶಾಸ್ತ್ರಿಗಳು ಅಥವಾ ವೇದಾಂತ ಶಿವರಾಮ ಶಾಸ್ತ್ರಿಗಳು ಮೂಲತಃ ಮೈಸೂರಿನವರು. ಆದರೆ ಇವರ ಪೂರ್ವಜರು ಕರ್ನೂಲು ಜಿಲ್ಲೆಯ ಕಡೆಯವರು. ಇವರ ತಾತನವರಾದ ರಾಜೇಶ್ವರ ಶಾಸ್ತ್ರಿಗಳು ಜೀವನ ನಿರ್ವಹಣೆಗಾಗಿ ಮೈಸೂರಿಗೆ ಬಂದರು. ಹೀಗಾಗಿ ಶಾಸ್ತ್ರಿಗಳು ಕರ್ನಾಟಕದವರಾದರು. ಶೃಂಗೇರಿಯ ಅಂದಿನ ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಮಹಾ ಸನ್ನಿಧಾನಂಗಳವರ ಸಮಕಾಲೀನರು. ಮಾತಿನಲ್ಲಿ ಹಾಗೂ ವೇದಾಂತದಲ್ಲಿ ನಿಷ್ಠುರವಾದಿಗಳಾದ ಇವರು ಅತ್ಯಂತ ಕೋಮಲ ಹೃದಯಿಗಳಾಗಿದ್ದರು. 1861 ಮಾರ್ಚ್‌ 23ರಂದು ಮೈಸೂರಿನಲ್ಲಿ ಜನಿಸಿದ ಶ್ರೀ ಶಿವರಾಮ ಶಾಸ್ತ್ರಿಗಳಿಗೆ ತಂದೆ ಶೇಷಾದ್ರಿ ಶಾಸ್ತ್ರಿಗಳು ಮೊದಲ ಗುರು. ತಂದೆ ಪ್ರಖಾಂಡ ಪಂಡಿತರಾಗಿದ್ದರಿಂದ ಶಾಸ್ತ್ರಿಗಳು ಕೂಡಾ ತರ್ಕ ವ್ಯಾಕರಣಗಳಲ್ಲಿ ನಿಷ್ಣಾತರಾಗಿದ್ದರು. ನಿಷ್ಠುರವಾದಿಗಳು, ಹಾಗೂ ಅವಧೂತರ, ಸಂತರ ಬಗೆಗೆ ಒಲವಿದ್ದ ಶಿವರಾಮನನ್ನು ಸಹಜವಾಗಿ ವೇದಾಂತ ಲೋಕವು ಆಕರ್ಷಿಸಿತು. ಆಗ ಅತಿ ಚಿಕ್ಕ ವಯಸ್ಸಿನಲ್ಲಿಯೇ ಇವರು ದೇಶ ಸಂಚಾರಕ್ಕೆ ಹೊರಟುಬಿಡುತ್ತಾರೆ. ನಂತರ ಹಿಂತಿರುಗಿದಾಗ ಇಪ್ಪತ್ತು ವರ್ಷ ಪ್ರಾಯದವರಾಗಿದ್ದರು. ಹಿಂತಿರುಗಿ ಬಂದರಲ್ಲ ಎಂಬ ಸಂತೋಷ ತಂದೆ-ತಾಯಿಯರಿಗಿತ್ತು, ಹಾಗೂ ಇದೇ ಸಮಯದಲ್ಲಿ ಅವರಿಗೆ ಮದುವೆ ಮಾಡಿದರೆ ಇವನು ಸಾಧುವಾಗುವ ಅಥವಾ ಅಧ್ಯಾತ್ಮಿಕತೆಯಿಂದ ಹೊರಬರಬಹುದು ಎಂದು ತಿಳಿದು ಅಕ್ಕಯ್ಯಮ್ಮ ಎಂಬ ಹೆಣ್ಣಿನೊಡನೆ ಮದುವೆ ಮಾಡಿದರೆ. ಆದರೆ ವಿಧಿಯ ಆಟ ಬೇರೆಯೇ ಆಗಿತ್ತು. ಅವರ ಹೆಂಡತಿ ಒಂದು ಹೆಣ್ಣುಮಗುವಿಗೆ ಜನ್ಮವಿತ್ತು ಕಾಲವಾದರು. ಇದು ಶಿವರಾಮನಿಗೆ ಮತ್ತೆ ಹೊರಬೀಳಲು ಅನುಕೂಲವಾಯಿತು. ಆಗ ಅವರು ಉತ್ತರ ಭಾರತದ ಕಡೆಗೆ ಹೊರಟಾಗ ಅದೊಂದು ಕೇವಲ ಪ್ರಪಂಚ ಪರ್ಯಟನೆಯೆನಿಸದೇ ಆಧ್ಯಾತ್ಮಿಕ ಪರ್ಯಟನೆಯಾಗತೊಡಗಿತು. ಮೈಸೂರಿನಿಂದ ನೇಪಾಳದವರೆಗೆ ಶಾಸ್ತ್ರಿಗಳು ಅನೇಕ ಸಾಧುಗಳ ದರ್ಶನ ಪಡೆದು, ಅವರೊಂದಿಗೆ ಅಧ್ಯಾತ್ಮ, ವೇದಾಂತಗಳ ಚರ್ಚೆಯನ್ನು ಮಾಡುತ್ತಾ ನಡೆದಾಗ, ಅಲ್ಲಿ ನಿಜಾನಂದರೆಂಬ ಅವಧೂತರ ದರ್ಶನವಾಗುತ್ತದೆ. ಅದು ಶಿವರಾಮನ ಪಾಲಿಗೆ ಸುಯೋಗವಾಗಿತ್ತು. ಸದಾ ಅವರ ಸೇವೆಯಲ್ಲಿ ಮಗ್ನನಾದ ಈ ಯುವಕನ ಭಕ್ತಿಗೆ ಗುರುಗಳು ಮೆಚ್ಚಿ ಶಿವರಾಮನಿಗೆ ಮಹಾವಾಕ್ಯಗಳ ಉಪದೇಶ ಮಾಡುತ್ತಾರೆ. ಅಲ್ಲಿಂದ ಇವರ ಚರ್ಯೆಯೇ ಬದಲಾಯಿತು. ಅಧ್ಯಾತ್ಮದ ಸಂಪೂರ್ಣ ಅನುಭಾವಿಯಾದ ಇವರು ತಮ್ಮ ಗುರುಗಳಿಗೆ ತಮಗೆ ಸಂನ್ಯಾಸ ನೀಡಬೇಕೆಂದು ಕೇಳಿದರು. ಆಗ ತಂದೆ-ತಾಯಿಗಳ ಅಪ್ಪಣೆಯಿಲ್ಲದೆ ಶಿಷ್ಯನ ಕೋರಿಕೆಯನ್ನು ತಿರಸ್ಕರಿಸಿ, ಗೃಹಸ್ಥನಾಗಲು ಹೇಳಿದರು. “ಗೃಹಸ್ಥನಾಗು, ಗೃಹಸ್ಥನಾಗಿದ್ದುಕೊಂಡೇ ನೀನು ಆತ್ಮ ವಿಚಾರ ಮಾಡು ಹಾಗೂ ಆಚಾರ್ಯ ಶಂಕರರ ತತ್ತ್ವಗಳನ್ನು ತಿಳಿಸುತ್ತಾ ತನ್ಮೂಲಕ ಅವರ ಸೇವೆಯನ್ನು ಮಾಡು” ಎಂದು ತಿಳಿಸಲು ಗುರುವಾಕ್ಯ ಪಾಲನೆಗಾಗಿ ಮಂಡ್ಯದ ಬಳಿಯ ಕೀಲಾರದ ಸೀತಮ್ಮ ಮತ್ತು ಸುಬ್ಬಾಭಟ್ಟರ ಎರಡನೇ ಮಗಳು ಪಾರ್ವತಮ್ಮನವರನ್ನು ವಿವಾಹವಾದರು. ಇದೇ ಸಮಯದಲ್ಲಿ ತಂದೆ-ತಾಯಿಯರು ಕಾಲವಾದರು. ಶಾಸ್ತ್ರಿಗಳ ವೇದಾಂತ ಅಭ್ಯಾಸ ಮತ್ತಷ್ಟು ದ್ವಿಗುಣವಾಯಿತು. ಜಾತಿ-ಧರ್ಮ ಭೇದವಿಲ್ಲದೇ ವೇದಾಂತ ಬೋಧನೆಯನ್ನು ಪ್ರಾರಂಭಿಸಿದರು. ಮೈಮೇಲೆ ಜನಿವಾರವಿಲ್ಲ, ಅವಧೂತ ಚರ್ಯೆಯ ಈ ವ್ಯಕ್ತಿತ್ವ ಯಾರಿಗೆ ತಿಳಿಯಬೇಕು. ಸ್ವಜಾತಿಯಲ್ಲಿ ಅವರಿಗೆ ಅನೇಕರು ವಿರೋಧಿಗಳಾದರು. ಶಾಸ್ತ್ರಿಗಳು ಅವರು ಕೊಡುತತಿದ್ದ ಕೀಟಲೆಗಳನ್ನು ಸಾವಧಾನರಾಗಿ ಸಹಿಸಿಕೊಂಡರು. ಪ್ರತಿದಿನವೂ ಚಾಮುಂಡಿ ಬೆಟ್ಟಕ್ಕೆ ತಾಯಿಯ ದರ್ಶನಕ್ಕೆ ಹೋಗುವುದು ಶಾಸ್ತ್ರಿಗಳ ವಾಡಿಕೆಯಾಗಿತ್ತು. ಹೀಗೇ ಒಮ್ಮೆ ಅವರನ್ನು ಕೀಟಲೆ ಮಾಡುವ ಸಲುವಾಗಿ ಒಬ್ಬ ವ್ಯಕ್ತಿಯು “ಶಾಸ್ತ್ರಿಗಳೇ, ಸದಾ ಬ್ರಹ್ಮಾನುಸಂಧಾನ ಮಾಡುವ ತಾವು ಬ್ರಹ್ಮವನ್ನು ನಿರ್ಗುಣ ಎಂದು ತಿಳಿಸುವಿರಿ ಆದರೆ ಚಾಮುಂಡೇಶ್ವರಿಯ ಮೂರ್ತಿ ಪೂಜೆಯೇಕೆ ?”ಎಂದು ಕೇಳುತ್ತಾರೆ. ಅದಕ್ಕೆ “ಅನುಭಾವಿಗೆ ಎಲ್ಲಾ ವಸ್ತುಗಳೂ ಪರಬ್ರಹ್ಮರೂಪದಲ್ಲಿಯೇ ಗೋಚರಿಸುತ್ತವೆ”ಎಂದರು. ನಂತರ ಆ ವ್ಯಕ್ತಿಯು “ಹಾಗಾದರೆ ಕತ್ತೆಯನ್ನೇಕೆ ಪೂಜಿಸಬಾರದು ?”ಎಂದಾಗ ಶಾಸ್ತ್ರಿಗಳು “ಖಂಡಿತವಾಗಿ ಪೂಜಿಸಬಹುದು ಆದರೆ ಆಗ ಕತ್ತೆಗೆ ಕತ್ತೆಯೆಂಬ ಹೆಸರಿನಿಂದ ಕರೆಯಲು, ನೋಡಲೂ ಸಾಧ್ಯವಾಗುವುದಿಲ್ಲ. ಕತ್ತೆಯನ್ನೂ ಬ್ರಹ್ಮವಸ್ತುವೆಂದು ಪರಿಗಣಿಸಿದಾಗ ಮಾತ್ರ ಸಾಧ್ಯ”ಎಂದರು. ಮುಂದುವರೆದು ಅವರು ತಮ್ಮ ತತ್ತ್ವಪದಗಳ ಮೂಲಕ ಅವನ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ.
ಅಧ್ಯಾತ್ಮವನ್ನೇ ಜೀವನವನ್ನಾಗಿಸಿಕೊಂಡ ಶಾಸ್ತ್ರಿಗಳು ತಮ್ಮ ಪದ್ಯಗಳ ಮೂಲಕವೇ ಸಾಮಾನ್ಯ ಜನರಿಗೆ ಅರ್ಥವಾಗುವಂತೆ, ರಚಿಸಿ ಹಾಡುತ್ತಿದ್ದರು. ಎಷ್ಟೋಜನರಿಗೆ ಇದೇ ಉಪದೇಶವಾಗುತ್ತಿತ್ತು. 1. ವೇದಾಂತ ಮುಕ್ತಿಮಾರ್ಗ ದೀಪಿಕಾ, 2. ಬ್ರಹ್ಮಾನಂದ ಬೋಧೇ 3. ಶ್ರೀ ರುದ್ರಟೀಕಾ 4. ಶಿವಾಧಿಕ್ಯಟೀಕಾ 5. ಶಂಕರಾಮೃತ ಬೋಧೆ 6. ಶಂಕರಾನಂದ ಕಂದ 7. ಶಂಕರಾನಂದ ತತ್ತ್ವ 8. ಶಂಕರಾನಂದ ಪದ್ದತಿ ಹೀಗೆ ಸುಮಾರು 30ಕ್ಕೂ ಅಧಿಕ ಕೃತಿಗಳು ಶಾಸ್ತ್ರಿಗಳಿಂದ ರಚಿಸಲ್ಪಟ್ಟಿವೆ. ಜಾತಿ-ಮತ ಭೇದವಿಲ್ಲದೇ, ಎಲ್ಲರಿಗೂ ಬ್ರಹ್ಮವಿಚಾರ ಮನದಟ್ಟು ಮಾಡುವುದು ಇವರ ಉದ್ದೇಶವಾಗಿತ್ತು. ಶಂಕರಾಚಾರ್ಯರೂ ಸಹಾ ಅದ್ವೈತವನ್ನು ಸಾರಿದ್ದು ಮಾನವ ಕಲ್ಯಾಣಕ್ಕಾಗಿಯೇ ಎಂಬುದು ಶಾಸ್ತ್ರಿಗಳು ಮನಗಂಡಿದ್ದರು. ಅದಕ್ಕಾಗಿ ಅನುಸಂಧಾನ ಹೇಗಿರಬೇಕು ಅದಕ್ಕೆ ಸಾಧಕನ ತೀವ್ರತೆಯೆಷ್ಟಿರಬೇಕು ಎಂಬುದನ್ನು ತಮ್ಮ ಹಾಡುಗಳಲ್ಲಿ ವಿವರಿಸಿದ್ದಾರೆ. ಒಮ್ಮೆ ಅವರ ಶಿಷ್ಯರೊಬ್ಬರು ಶಾಸ್ತ್ರಿಗಳನ್ನು ತಮ್ಮ ಮನೆಗೆ ಗುರುಪೂಜೆಗೆಂದು ಕರೆಯುತ್ತಾರೆ. ಹಾಗೇ ಶಿಷ್ಯನ ಕರೆಗೆ ಓಗೊಟ್ಟ ಶಾಸ್ತ್ರಿಗಳು ಅವರ ಮನೆಗೆ ಹೋಗಿದ್ದಾಗ ಆ ವ್ಯಕ್ತಿಯ ಹೆಂಡತಿಯು ತವರು ಮನೆಗೆ ಹೋಗಿ ಅಂದು ಬರಬೇಕಿರುತ್ತದೆ ಆದರೆ ಬಂದಿರುವುದಿಲ್ಲ ಅದೇ ಸಮಯಕ್ಕೆ ಒಂದು ಟೆಲಿಗ್ರಾಮ್‌ ಬಂದು ತಾವು ಇನ್ನೂ ನಾಲ್ಕುದಿನ ತಡವಾಗಿ ಬರುವುದಾಗಿ ತಿಳಿಸಿದಾಗ ಇವರು ಸಿಟ್ಟಿನಲ್ಲಿ ದೇವರ ಪೂಜೆ ಮಾಡಿ ಬಂದು ನೋಡಿದರೆ ಶಾಸ್ತ್ರಿಗಳಿರುವುದಿಲ್ಲ ಬದಲಾಗಿ ಅವರು “ಬಿಡು ಬಿಡು ರಾಜಸ ಪೂಜೆಯನು”ಎಂಬ ತತ್ತ್ವಪದವೊಂದನ್ನು ಬರೆದಿಟ್ಟು ಹೋಗಿರುತ್ತಾರೆ. ಈ ಶಿಷ್ಯನಿಗೆ ತನ್ನ ತಪ್ಪಿನ ಅರಿವಾಗಿ ಕ್ಷಮೆಯಾಚಿಸುತ್ತಾರೆ.
ಹೀಗೆ ಶಿವರಾಮ ಶಾಸ್ತ್ರಿಗಳು ತಮ್ಮ ಜೀವನವನ್ನು ವೇದಾಂತದ ಅಭ್ಯಾಸ, ಚರ್ಚೆ, ಬೋಧನೆಯಲ್ಲಿಯೇ ತೊಡಗಿಸಿಕೊಂಡಿದ್ದಕ್ಕಾಗಿ ವೇದಾಂತ ಶಿವರಾಮ ಶಾಸ್ತ್ರಿಗಳಾಗುತ್ತಾರೆ. ವೇದಾಂತ ಗುರುಸೇವೆ, ಗುರುವಾಕ್ಯ ಪಾಲನೆ, ಸತ್ಸಂಗ, ಬ್ರಹ್ಮಾನುಸಂಧಾನ, ಹೀಗೆ ಅದ್ವೈತ ಸಿದ್ಧಾಂತವು ಕೇವಲ ಹೇಳುವುದಲ್ಲ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತಹುದಿರುತ್ತದೆ ಎಂದು ತೋರಿಸಿಕೊಟ್ಟವರು. ಇಂದಿಗೂ ಅವರ ಶಿಷ್ಯ ವೃಂದ ಪ್ರತಿತಿಂಗಳೂ ಭಜನೆ ಸತ್ಸಂಗ ಮಾಡುತ್ತಾ ಅವರ ತತ್ತ್ವಪದಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಮೊಮ್ಮಗನಾದ ಶ್ರೀ ಶೇಷಾದ್ರಿ ಸ್ವಾಮಿಗಳು ಒಂದು ಶಾಲೆಯಲ್ಲಿ ಯೋಗಶಿಕ್ಷಕರಾಗಿದ್ದು ಶಾಸ್ತ್ರಿಗಳ ಕೈಂಕರ್ಯದಲ್ಲಿ ಖುಷಿಪಡುತ್ತಾರೆ. ಮೂರು-ನಾಲ್ಕು ವರ್ಷಗಳ ಹಿಂದೆ ನಮ್ಮ ವಿನಂತಿಯ ಮೇರೆಗೆ ನಮ್ಮ ಮನೆಗೆ ದತ್ತ ಜಯಂತಿಯ ಸಂದರ್ಭದಲ್ಲಿ ಬಂದಿದ್ದು, ಅತ್ಯಂತ ಸರಳ ವ್ಯಕ್ತಿತ್ವದ ಇವರು ನಮ್ಮೊಡನೆ ಅತ್ಯಂತ ಪ್ರೀತಿಯಿಂದ ಇರುತ್ತಾ ಹಳ್ಳಿಯ ಮನೆಯೆನ್ನದೇ, ಹಾಸಲು ಹೊದೆಯಲು ಸೌಕರ್ಯವಿಲ್ಲ ಎಂದು ತಿಳಿಯದೇ ನಮ್ಮಲ್ಲಿ ನಮ್ಮಂತೆಯೇ ಇರುವ ಈ ವ್ಯಕ್ತಿತ್ವ ತಾತನವರ ಆಸ್ತಿಯೆನ್ನದೇ ಮತ್ತೇನೆನ್ನಲು ಸಾಧ್ಯ. ?. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ತನ್ನ ಇ-ಬುಕ್‌ನಲ್ಲಿ ಇವರ ಅನೇಕ ಪದ್ಯಗಳನ್ನು ಪ್ರಕಟಿಸಿದೆ. ಶೃಂಗೇರಿ ಸಹೋದರಿಯರು ಇವರ ತತ್ತ್ವ ಪದಗಳನ್ನು ಅತ್ಯುತ್ತಮವಾಗಿ ಹಾಡಿರುವುದೂ ಸಹಾ ಯೂಟ್ಯೂಬ್‌ನಲ್ಲಿ ಲಭ್ಯವಿದೆ. ವೇದಾಂತಾಭ್ಯಾಸಿಗಳಿಗೆ ಹಾಗೂ ತತ್ತ್ವ ಸಾಧಕರಿಗೆ ಇವರ ಜೀವನ ಹಾಗೂ ಪದ್ಯಗಳು ಅವರ ಸಂದೇಹ ನಿವಾರಿಸುವ ಮ್ಯಾಪ್‌ಗಳಾಗಿ, ಆಯಾಸ ನೀಗುವ ಬೋಧೀವೃಕ್ಷಗಳಾಗಿ, ಹಾಗೂ ಆಧ್ಯಾತ್ಮಿಕ ಹಸಿವು ನೀಗಿಸುವ ಸವಿಫಲಗಳಾಗಿವೆ. “ನೀನಾರು ನೋಡು ನೋಡೆಲೊ ಜೀವ ನೀನಾಗ ದೇವ” ಎಂದು ಜೀವ ಮತ್ತು ಪರಬ್ರಹ್ಮ ಬೇರೆಯಲ್ಲ ಎಂದು ಸುಲಭವಾಗಿ ಅರ್ಥ ಮಾಡಿಸುತ್ತಾರೆ. ಆದರೆ ಇವುಗಳನ್ನು ಅರ್ಥ ಮಾಡಿಕೊಳ್ಳಲು ನಮ್ಮ ಅರ್ಹತೆ ಮತ್ತು ಯೋಗ್ಯತೆ ಎಷ್ಟು ಇರಬಹುದು ಎಂದು ನಾನು ಆಗಾಗ ಯೋಚಿಸುತ್ತೇನೆ. ಇವರ ಸ್ಮರಣೆಮಾಡುವುದಷ್ಟೇ ಈ ಜನ್ಮಕ್ಕೆ ನಮಗೆ ಸಿಕ್ಕಿರು ಭಾಗ್ಯವೆನ್ನಬಹುದು.