Sunday, February 8, 2026
Sunday, February 8, 2026
Home Blog Page 43

Sri Sri Prasannanatha Swamiji ಕೇವಲ ಅಂಕಗಳಿಗೆ ಓದಿನ ಉದ್ದೇಶವಾಗುವುದು ಬೇಡ. ಸಂಸ್ಕೃತಿ – ಸಂಸ್ಕಾರದ ಅರಿವಿರಲಿ-ಶ್ರೀ ಪ್ರಸನ್ನನಾಥಶ್ರೀ.

0

Sri Sri Prasannanatha Swamiji ಕೇವಲ ಅಂಕಗಳಿಗೋಸ್ಕರ ಓದುವುದು ಬೇಡ, ಅದರ ಜೊತೆಗೆ ನಮ್ಮ ಸಂಸ್ಕೃತಿ ಸಂಸ್ಕಾರದ ಅರಿವನ್ನು ಹೊಂದುವುದು ಮುಖ್ಯ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಪೂಜ್ಯ ಶ್ರೀ ಪ್ರಸನ್ನನಾಥಸ್ವಾಮೀಜಿ ಅಭಿಪ್ರಾಯ ಪಟ್ಟರು.
ಅವರು ಶಿವಮೊಗ್ಗ ಗುರುಪುರ ಹೊರ ವಲಯದ ಬಿಜಿಎಸ್ ಶಾಲಾ-ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ, ವಿದ್ಯಾರ್ಥಿಗಳು,ಶಿಕ್ಷಕರು ಹಾಗೂ ಪೋಷಕರು ಹೇಳುವಂತಹ ಮಾತನ್ನು ಪಾಲಿಸಿದಾಗ ಉತ್ತಮ ಭವಿಷ್ಯವನ್ನು ಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ತಾನು ಓದಲು ಕೂರುವ ಸ್ಥಳದಲ್ಲಿ ವೇಳಾ ಪಟ್ಟಿ, ದಿನಚರಿಯ ಪಟ್ಟಿಯನ್ನು ಸದಾ ಕಣ್ಣಿಗೆ ಕಾಣುವಂತೆ ಇರಿಸಿಕೊಳ್ಳಬೇಕು. ತರಗತಿಯಲ್ಲಿ ತನಗಿಂತ ಹೆಚ್ಚು ಅಂಕ ಪಡೆದ ಸಹಪಾಠಿಯನ್ನು ಕಂಡು ಅಸೂಯೆ ಪಡದೆ ಅವನ ಓದಿನ ವಿಧಾನವನ್ನು ಅರಿತು ತಾನೂ ಅದನ್ನು ಕ್ರಮೇಣ ಅಳವಡಿಸಿಕೊಳ್ಳಬಹುದು.ಓದುವಾಗ ಏಕಾಗ್ರತೆ ಹೆಚ್ಚಲು ತನಗೆ ತಾನೆ ಸಕಾರತ್ಮಾಕವಾದ ಅಂಶಗಳನ್ನು ಹೇಳಿಕೊಂಡು ಓದಲು ಕೂರುವ ಮುನ್ನ ಎಲ್ಲವನ್ನು ಬಳೆಯಲ್ಲಿರಿಸಿಕೊಂಡು ಒಂದೆಡೆ ಏಕಾಗ್ರತೆಯಿಂದ ಕೂತು ಕಲಿಯಲು ಪ್ರಯತ್ನಿಸಬೇಕು.
ಪರೀಕ್ಷೆಯ ಸಮಯದಲ್ಲಾಗಲಿ ಇತರ ದಿನಗಳಲ್ಲಾಗಲಿ, ವಿದ್ಯಾರ್ಥಿ 8 ಗಂಟೆಗಳ ನಿದ್ರೆ ಅತ್ಯಾವಶ್ಯಕ, ಪರೀಕ್ಷೆಯ ಸಮಯದಲ್ಲಿ ಓದಿನ ಜೊತೆಗೆ ನಿದ್ರೆಯೂ ಇರಬೇಕು. ಪೋಷಕರು ಮಕ್ಕಳನ್ನು ವಿನಾಕಾರಣ ದೂಷಿಸುವುದಾಗಲಿ, ಮತ್ತೊಬ್ಬರೊಡನೆ ಹೋಲಿಸಿ ಶಿಕ್ಷಿಸುವುದಾಗಲಿ ಮಾಡಬಾರದು ಎಂದು ಕಿವಿಮಾತು ಹೇಳಿದರು.
ವಿಧಾನಪರಿಷತ್ ಸದಸ್ಯರಾದ ಡಾ. ಧನಂಜಯ ಸರ್ಜಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಗುರುಗಳಿದ್ದಾಗ ಮಾತ್ರ ಗುರಿ ತಲುಪಲು ಸಾಧ್ಯ,ನಮ್ಮ ಧರ್ಮ ಒಂದು ಮಹತ್ತರ ಮೈಲಿಗಲ್ಲನ್ನು ತಲುಪಿದೆ ಎಂದು ತಿಳಿಸಿದರು.
ಶ್ರೀ ಆದಿಚುಂಚನಗಿರಿ ವಿದ್ಯಾ ಸಂಸ್ಥೆ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ 450ಕ್ಕೂ ಹೆಚ್ಚು ಎಲ್ಲಾ ಬಗೆಯ ಶಾಲಾ ಕಾಲೇಜುಗಳನ್ನು ನಡೆಸುತ್ತಿದ್ದು, ಸುಮಾರು ಒಂದು ಲಕ್ಷ ನಲವತ್ತು ಸಾವಿರ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿರುವ ವಿಷಯ ತಿಳಿದು ಸಂತೋಷವಾಯಿತು. ಸರ್ಕಾರ ಮಾಡಬೇಕಾದ ಕಾರ್ಯವನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಹಾಗೂ ಗುರುಗಳು ಮಾಡುತ್ತಿದ್ದಾರೆ. ನಿಜಕ್ಕೂ ಈ ವಿಷಯದಲ್ಲಿ ನಾವು ಧನ್ಯರು ಎಂದರು.ನಮ್ಮ ಮಕ್ಕಳಿಗೆ ಹಾಗೂ ಸಮಾಜಕ್ಕೆ ಬೇಕಾಗುವ ಒಂದು ಒಳ್ಳೆಯ ಸಂಸ್ಕೃತಿ, ಸಂಸ್ಕಾರ,ಆತ್ಮವಿಶ್ವಾಸ ಅದನ್ನು ನಿರಂತರವಾಗಿ ಸಮಾಜಕ್ಕೆ ಕೊಡುಗೆಯಾಗಿ ಕೊಡುತ್ತಾ ಬಂದಿದೆ.
ಮಕ್ಕಳ ಅಂತರಾಳವನ್ನು ಅರಿತು ಶಿಕ್ಷಕರು ಮತ್ತು ಪೋಷಕರು ಮಕ್ಕಳಲ್ಲಿರುವ ನಕಾರಾತ್ಮಕ ವಿಚಾರಗಳನ್ನು ತೊಡೆದು ಹಾಕಿ ಒಳ್ಳೆಯ ಸಂಸ್ಕಾರಯುತ ಶಿಕ್ಷಣವನ್ನು ಕೊಟ್ಟಾಗ ಮಾತ್ರ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದರು.
ದೇಹದ ತೂಕ ಇಳಿಸಲು ವ್ಯಾಯಾಮ ಮಾಡಬೇಕು, ಮನಸ್ಸಿನ ಭಾರವನ್ನು ಇಳಿಸಲು ಧ್ಯಾನ ಮಾಡಬೇಕು, ನಿತ್ಯ ನಿರಂತರ ಪರಿಶ್ರಮ ಇದ್ದರೆ ಮಾತ್ರ ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದರು.
Sri Sri Prasannanatha Swamiji ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಾಲಾ ಶಿಕ್ಷಣ ಇಲಾಖೆಯ, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಮಾತನಾಡುತ್ತಾ, ಪೋಷಕರು, ಶಿಕ್ಷಕರ ಜೊತೆಗೆ ಕೈಜೋಡಿಸಿದಾಗ ಮಾತ್ರ ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ ಎಂದರು. ಶಿವಮೊಗ್ಗದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳಿವೆ ಆದರೆ ಶ್ರೀ ಆದಿಚುಂಚನಗಿರಿ ಸಂಸ್ಥೆಗಳಲ್ಲಿ ಶಿಕ್ಷಣ ಮತ್ತು ಸಂಸ್ಕಾರವನ್ನು ಕೊಡುವಂತಹ ಶಾಲೆ ಇದೆ ಅಂದ್ರೆ ಅದು ಗುರುಪುರದ ಬಿಜಿಎಸ್ ಶಾಲೆಯಲ್ಲಿ ಮಾತ್ರ ಕಾಣಬಹುದು. ಇಲ್ಲಿ ಒಂದು ವಿಶೇಷವೇನೆಂದರೆ 200 ಮೀಟರ್ ಗ್ರೌಂಡಿನಲ್ಲಿ ಶಿಕ್ಷಣ ಮತ್ತು ಕ್ರೀಡೆಗೆ ಹೆಚ್ಚು ಹೊತ್ತು ಕೊಡುವುದನ್ನು ಕಾಣಬಹುದು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀಶ್ರೀ ನಾದಮಯಾನಂದನಾಥ ಸ್ವಾಮೀಜಿಯವರು, ಮೆಸ್ಕಾಂ, ಕಾರ್ಯಪಾಲಕ ಅಭಿಯಂತರಾದ ವೀರೇಂದ್ರ ಹೆಚ್. ಆರ್. ಹಾಗೂ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆಯ ನಿರ್ದೇಶಕರಗಳು, ಪ್ರಾಂಶುಪಾಲರು, ಸಿಬ್ಬಂದಿಯ ವರ್ಗದವರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.
ರಾಜ್ಯ ಹಾಗೂ ರಾಷ್ಟ್ರಮತ್ತು ಅಂತರಾಷ್ಟ್ರ ಮಟ್ಟದ ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿದ ಶಾಲಾ ಕಾಲೇಜಿನ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಪೂಜ್ಯರಿಂದ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ, ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಂದ ಕೊನೆಯಲ್ಲಿ ಬಿಜಿಎಸ್ ಸಾಂಸ್ಕೃತಿಕ ಸಿರಿ ಸಂಭ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಇಂದಿನ ಆನ್ಲೈನ್ ಯುಗದಲ್ಲಿ ತಂದೆ ತಾಯಿಯರು ಅನಾಥರಾಗುತ್ತಿದ್ದಾರೆ. ಹಿರಿಯರು ನಿಜಕ್ಕೂ ವ್ಯವಸ್ಥೆಯಿಂದ ದೂರವಾಗುತ್ತಿದ್ದಾರೆ. ಕೋಟ್ಯಾಂತರ ರೂಪಾಯಿ ಹಣ ಇಟ್ಟುಕೊಂಡಿದ್ದರು, ಮಕ್ಕಳು ದೂರದ ಎಲ್ಲೋ ಕೆಲಸಕ್ಕೆ ಎಂದು ಹೋಗಿರುತ್ತಾರೆ.ಆನ್ಲೈನ್ ವ್ಯವಸ್ಥೆಯಲ್ಲಿ ಗ್ಯಾಸ್,ನೀರು,ಊಟ, ಆಸ್ಪತ್ರೆ ಇತ್ಯಾದಿ ವ್ಯವಸ್ಥೆಯನ್ನು ಮಾಡುವಂತಹ ಈ ವ್ಯವಸ್ಥೆ ಹಿರಿಯರನ್ನು ಪ್ರೀತಿಯಿಂದ ವಂಚಿತರನ್ನಾಗಿ ಮಾಡಿದೆ.ಇಡೀ ಪ್ರಪಂಚ ಭಾರತದ ಸಂಸ್ಕೃತಿಯನ್ನು ಮೆಚ್ಚಿಕೊಂಡಿದೆ ಆದರೆ ನಾವು ಸಂಸ್ಕೃತಿಯನ್ನೇ ಮರೆಯುವ ಹಂತಕ್ಕೆ ಹೋಗಿದ್ದೇವೆ. ಹಾಗಾಗಿ ನಮ್ಮ ಸಂಸ್ಕೃತಿ, ಸಂಸ್ಕಾರ ಹಾಗೂ ಗುರುಹಿರಿಯರನ್ನು ಗೌರವಿಸುವ,ರಕ್ಷಿಸುವ ಕಾರ್ಯವನ್ನು ಯಾವುದೇ ಕಾರಣಕ್ಕೂ ಮರೆಯದಿರಿ.

ನಾಗೇಂದ್ರ ಡಿ. ಕಂದಾಯ ವಿಭಾಗದ ಅಧಿಕಾರಿಗಳು, ಶಿವಮೊಗ್ಗ. ಮಹಾನಗರ ಪಾಲಿಕೆ.

Shimoga News ಶಿವಮೊಗ್ಗ ಜಿಲ್ಲಾ ವಿತರಕರ ಸಂಘ ನಿರಂತರ ಸಮಾಜಮುಖಿ- ಅಶ್ವಥ್ಥನಾರಾಯಣ ಶೆಟ್ಟಿ.

0

Shimoga News ಶಿವಮೊಗ್ಗ ಜಿಲ್ಲಾ ವಿತರಕರ ಸಂಘ ನಿರಂತರವಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ಅಶ್ವತ್ಥ್ ನಾರಾಯಣ ಶೆಟ್ಟಿ ಹೇಳಿದರು.

ಶಿವಮೊಗ್ಗ ಜಿಲ್ಲಾ ವಿತರಕರ ಸಂಘದ 2026ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿ, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಂಯೋಜಿತ ಸಂಘಗಳಲ್ಲಿ ಸಕ್ರಿಯ ಸಂಘವಾಗಿದೆ. ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲಾ ವಿತರಕರ ಸಂಘದ ಅಧ್ಯಕ್ಷ ದೇವರಾಜ ಎಂ.ಸಿ ಮಾತನಾಡಿ, ಆರು ವರ್ಷದಿಂದ ಕ್ಯಾಲೆಂಡರ್‌ಗಳನ್ನು 1,260 ವಿತರಕರಿಗೆ ನೀಡುತ್ತಿದ್ದ, ಸಂಘಕ್ಕೆ ಯಾವುದೇ ರೀತಿ ಆರ್ಥಿಕ ಹೊರೆಯಾಗದಂತೆ ಸದಸ್ಯ ವಿತರಕರುಗಳಲ್ಲಿಯೇ ಪ್ರಾಯೋಜಕತ್ವ ಪಡೆದು ಉಚಿತವಾಗಿ ನೀಡಲಾಗುತ್ತಿದೆ ಎಂದರು.

Shimoga News ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ನಮ್ಮ ಸಂಘವು ಹಿಂದೆ ನಡೆದ ಹಲವಾರು ಕಾರ್ಯಕ್ರಮಗಳಿಗೆ ಹೆಚ್ಚಿನ ಸಹಕಾರ ನೀಡಿದ್ದು, ಮುಂಬರುವ ದಿನಗಳಲ್ಲಿ ಅಗತ್ಯ ಸಹಕಾರ ನೀಡಲಾಗುವುದು.2026ರ ಫೆಬ್ರವರಿ 2ರಂದು ನಡೆಯುವ ವಿತರಕರ ದಿನಾಚರಣೆಗೆ ವಿಶೇಷ ಉಡುಗೊರೆಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್ ಕುಮಾರ್, ಕಾರ್ಯದರ್ಶಿ ಸುರೇಶ್, ಖಜಾಂಚಿ ಮನೋಹರ್, ವಿತರಕರ ಸಂಘದ ಗೌರವ ಕಾರ್ಯದರ್ಶಿ ಶ್ರೀನಿವಾಸ್, ಉಪಾಧ್ಯಕ್ಷ ಬದ್ರಿನಾಥ್, ಕಾರ್ಯದರ್ಶಿ ಗಿರೀಶ್ ಒಡೆಯರ್, ಮಹಮದ್ ಇಕ್ಬಾಲ್, ಸುರೇಂದ್ರನಾಥ್, ಸಂಘದ ಪದಾಧಿಕಾರಿಗಳಾದ ಚಂದ್ರಶೇಖರ್, ವೆಂಕಟೇಶ್, ಕುಮಾರ್, ಮೋಹನ್ ಕುಮಾರ್, ಮಹಾರುದ್ರಪ್ಪ, ಸಂಘದ ಸದಸ್ಯರು ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Shimoga News ಸಿಎಸ್ಆರ್, ನಿಧಿಯಿಂದ ಖಾಸಗಿ ಕಂಪನಿಗಳು ಸರ್ಕಾರಿ ಶಾಲೆಗಳನ್ನ ಸುಧಾರಿಸಲಿ- ಭಗವಂತರಾವ್.

0

Shimoga News ಗ್ರಾಮೀಣ ಪ್ರದೇಶ ಮಕ್ಕಳು ಕೀಳರಿಮೆಯಿಂದ ಹೊರಬರಲು ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಮೂಲಸೌಕರ್ಯಗಳನ್ನು ಹೆಚ್ಚಿಸುವುದು ಅಗತ್ಯ ಎಂದು ಜಿಲ್ಲಾ ಸರ್ವೋದಯ ಮಂಡಳಿ ಮಾಜಿ ಅಧ್ಯಕ್ಷ ಭಗವಂತ ರಾವ್ ಹೇಳಿದರು.

ಕರ್ನಾಟಕ ಸರ್ವೋದಯ ಮಂಡಲ ಶಿವಮೊಗ್ಗ ಜಿಲ್ಲಾ ಘಟಕ ರಾಜ್ಯಾದ್ಯಂತ ಎಲ್ಲ ಶಾಲಾ ಕಾಲೇಜುಗಳು ಹಾಗೂ ಸಮುದಾಯ ಸಂಸ್ಥೆಗಳಲ್ಲಿ ಹಮ್ಮಿಕೊಳ್ಳುತ್ತಿರುವ ಗಾಂಧಿ ಚಿಂತನೆ ಕುರಿತು ಜಾಗೃತಿ, ಸಂವಾದ ಭಾಷಣ ಸ್ಪರ್ಧೆ ಕಾರ್ಯಕ್ರಮದ ಅಂಗವಾಗಿ ಮಾಚೇನಹಳ್ಳಿಯ ತುಂಗಾಭದ್ರಾ ಪ್ರೌಢಶಾಲೆ ಶಾಲೆ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಖಾಸಗಿ ಕಂಪನಿಗಳು ಕಾರ್ಪೋರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ನಿಧಿಯನ್ನು ಸರ್ಕಾರಿಗಳ ಶಾಲೆಗಳ ಸುಧಾರಣೆಗೆ ಬಳಸುವ ಅಗತ್ಯವಿದೆ ಎಂದು ತಿಳಿಸಿದರು.

ಎಲ್ಲಾ ವೃತ್ತಿಗಳು ಸಮಾನ ಮೌಲ್ಯ ಹೊಂದಿವೆ. ಶ್ರಮದಾಯಕ ಜೀವನವು ಬದುಕಲು ಯೋಗ್ಯವಾದ ಜೀವನವಾಗಿದೆ. ಸರ್ಕಾರದ ಪ್ರಗತಿಯ ಪ್ರಯೋಜನಗಳು ಸಮಾಜದ ಬಡಜನರಿಗೆ ತಲುಪಬೇಕು. ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ನಿಧಿ ಸಮಾಜವನ್ನು ಸುಧಾರಿಸಲು ಮತ್ತು ಕಂಪನಿಗಳಿಗೆ ಸಕಾರಾತ್ಮಕ ಇಮೇಜ್ ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿವೃತ್ತ ಪ್ರಾಚಾರ್ಯ ಸೋಮಶೇಖರ್, ಸರ್ವೋದಯ ಮಂಡಳಿ ಉದ್ಡೇಶ ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಅಹಿಂಸೆಯನ್ನು ಉತ್ತೇಜಿಸುವ ಮೂಲಕ ಎಲ್ಲರ ಕಲ್ಯಾಣ ಸಾಧಿಸುವುದು. ಗಾಂಧಿ ಆದರ್ಶಗಳು ಮರೆಯಾಗುತ್ತಿರುವ ಆಗುತ್ತಿರುವ ಈ ಸಂದಂರ್ಭದಲ್ಲಿ ಮಕ್ಕಳಲ್ಲಿ ಗಾಂಧೀಜಿ ಅವರ ಸರ್ವೋದಯ ತತ್ವದ ಬಗ್ಗೆ ಅರಿವು ಮೂಡಿಸಲು ಇಂತಹ ಕಾರ್ಯಕ್ರಮಗಳು ಉಪಯುಕ್ತ ಎಂದರು.

Shimoga News ಸರ್ವೋದಯ ಮಂಡಳಿ ಜಿಲ್ಲಾ ಕಾರ್ಯದರ್ಶಿ ಜಿ.ವಿಜಯಕುಮಾರ್ ಮಾತನಾಡಿ, ಮಹಾತ್ಮಾ ಗಾಂಧಿ ಅವರ ಸತ್ಯ, ಶಾಂತಿ ಮತ್ತು ಸರಳತೆ, ಅಹಿಂಸೆ, ಸ್ವರಾಜ್ಯ ಮತ್ತು ಸ್ವದೇಶಿ ಬೋಧನೆಗಳ ಮೂಲಕ ಬದುಕಲು ಶಾಲಾ ಮಕ್ಕಳನ್ನು ಪ್ರೇರೇಪಿಸಲು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಶಾಲೆಗೆ ಕುರ್ಚಿ ಮಕ್ಕಳಿಗೆ, ಪುಸ್ತಕ, ಲೇಖನ ಸಾಮಗ್ರಿ ವಿತರಿಸಲಾಯಿತು. ಜಿಲ್ಲಾ ಸರ್ವೋದಯ ಮಂಡಳಿ ಅಧ್ಯಕ್ಷ ಆರ್.ಮನೋಹರ್, ಖಜಾಂಚಿ ರುದ್ರಪ್ಪ, ಸದಸ್ಯರುಗಳು, ತುಂಗಾಭದ್ರಾ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಸಿದ್ದೇಶ್ವರಪ್ಪ, ಸಂತೋಷ್ ಕುಮಾರ್, ಶಿಕ್ಷಕರು ಉಪಸ್ಥಿತರಿದ್ದರು. ಮಕ್ಕಳಿಗೆ ಸ್ಫರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಿಸಲಾಯಿತು.

Amruthapura ನಮ್ಮ ದೇಗುಲಸಿರಿ. ನಮ್ಮ ಪರಂಪರೆ ಪ್ರತೀಕ. -ಅಮೃತೇಶ್ವರ ದೇವಾಲಯ. – ದಿಲೀಪ್ ನಾಡಿಗ್.

0

Amruthapura ಕರ್ನಾಟಕದ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯುವ ಹೆಮ್ಮೆಯ ಅರಸರು ಎಂದರೆ ಹೊಯ್ಸಳ ಸಾಮ್ರಾಜ್ಯದ ಅರಸರು. ಆಡಳಿತದ ಜೊತೆ ಜೊತೆಗೆ, ಶಿಲ್ಪಕಲೆ, ಸಂಸ್ಕೃತಿಗಳ ಪೋಷಕರೂ, ಆಗಿದ್ದವರು ಹೊಯ್ಸಳ ದೊರೆಗಳು, ತಮ್ಮನ್ನು ತಾವು ವಾಸಂತಿಕಾದೇವಿವರಲಬ್ಧ ಪ್ರಸಾದರೆಂದೂ, ದ್ವಾರಾಪುರಾವರಾಧೀಶ್ವರರೆಂದೂ (ಯಾದವಕುಲತಿಲಕ ಶ್ರೀಕೃಷ್ಣನಿಗೆ ಸಮೀಕರಿಸಿಕೊಂಡವರು,) ಛಲದಲ್ಲೂ, ಬಲದಲ್ಲೂ, ಏಕಮೇವಾದ್ವಿತೀಯರೆನಿಸಿಕೊಂಡವರು ಹೊಯ್ಸಳ ರು. ಹೊಯ್ಸಳರ ಅರಸರಲ್ಲಿ ಎರಡನೇ ಬಲ್ಲಾಳರು ನೂರಾರು ದೇವಾಲಯಗಳನ್ನು ನಿರ್ಮಿಸಿದವರು ಅಲ್ಲದೇ ಅಗ್ರಹಾರಗಳನ್ನೂ, ಯಾತ್ರಿನಿವಾಸಗಳನ್ನೂ, ಯಾತ್ರಿಕರಿಗೆ ಸುಂಕವನ್ನು ವಿಧಿಸದೆ ದೇವಾದಾಯ, ರಾಜಾದಾಯಗಳಿಂದ ಕರ್ನಾಟಕದ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದವರು(ಇದರ ಬಗ್ಗೆ ಹೆಬ್ಬಾಲೆ ಶಾಸನವನ್ನು ಅಧ್ಯಯನ ಮಾಡಿ) ಹೊಯ್ಸಳ ದೊರೆ ಗಳು. ದೊರೆಗಳಲ್ಲದೆ ದೊರೆಗಳ ಖಾಸಾ ವ್ಯಕ್ತಿಗಳು, ಆಶ್ರಿತ ಕವಿಗಳೂ, ದಂಡನಾಯಕರೂ ಸಹ ಕರ್ನಾಟಕದ ಮೂಲೆಮೂಲೆಗಳಲ್ಲಿ ದೇವಾಲಯಗಳನ್ನೂ, ಅಗ್ರಹಾರಗಳನ್ನೂ, ಅರವಟಿಗೆಗಳನ್ನೂ ನಿರ್ಮಿಸಿದ್ದು ಅದರಲ್ಲಿ ಭದ್ರಾ ನದಿಯ ದಡದಲ್ಲಿರುವ ತರೀಕೆರೆಯ ಅಮೃತಾಪುರದ ಅಮೃತೇಶ್ವರ ದೇವಾಲಯವೂ ಒಂದು. ಅಮೃತೇಶ್ವರ ದೇವಾಲಯವನ್ನು ಎರಡನೇ ವೀರಬಲ್ಲಾಳನ ದಂಡನಾಯಕನಾದ ಅಮೃತೇಶ್ವರ ನು ಕ್ರಿ.ಶ.1196 ರಲ್ಲಿ‌ನಿರ್ಮಿಸಿ ಇದಕ್ಕಾಗಿ ಭೂ ದಾನವನ್ನೂ ಮಾಡಿದ್ದನೆಂದು, ಶಾಸಗಳಿಂದ ತಿಳಿಯಬಹುದು. ಶಿಲ್ಪಕಲೆಗೆ ಹೆಸರಾದ ಪ್ರಮುಖ ದೇವಾಲಯ ಇದಾಗಿದ್ದು ದೇವಾಲಯದ ಹೊರ ಭಿತ್ತಿ ಯಲ್ಲಿ ರಾಮಾಯಣ, ಮಹಾಭಾರತ, ಭಾಗವತದ ಎಲ್ಲ ಬಗೆಯ ಶಿಲ್ಪಗಳನ್ನು ಕೆತ್ತಲಾಗಿದ್ದು, ದೇವಾಲಯದ ಸುಖನಾಸಿಯ ಮೇಲ್ಭಾಗದಲ್ಲಿ ನಟರಾಜನ ನೃತ್ಯಭಂಗಿಯ ಕೆತ್ತನೆಯಂತೂ ಶಿಲ್ಪಿಯ ನೈಪುಣ್ಯತೆಯನ್ನು, ಸೂಕ್ಷ್ಮತೆಯನ್ನು ಕಾಣಬಹುದು. ಹೊರಭಾಗದ ಭಿತ್ತಿಯ ಲ್ಲಿ ಕೃಷ್ಣನಿಗೆ ಸಂಬಂಧಿಸಿದ ಕೆತ್ತನೆಗಳು ಕಣ್ಮನ ಸೆಳೆಯುತ್ತದೆ. ಶ್ರೀಕೃಷ್ಣನ ಜನ್ಮಸಮಯದಲ್ಲಿ ವಸುದೇವನು ಕತ್ತೆಯ ಕಾಲನ್ನು ಹಿಡಿದು ಅರಚದಂತೆ ಬೇಡಿಕೊಳ್ಳುವ ಕೆತ್ತನೆಯಂತೂ ಶಿಲ್ಪಿಯ ಕಲೆಯ ನೈಪುಣ್ಯತೆ ಬಗ್ಗೆ ಅಚ್ಚರಿ ಮೂಡಿಸುತ್ತದೆ. (ದೇವಕಿ, ವಸುದೇವರಿಗೆ ಜನಿಸುವ ಮಕ್ಕಳನ್ನು ಕಂಸನು ಕೊಲ್ಲುತ್ತಿದ್ದದ್ದು‌ ಅವನಿಗೆ ಮಕ್ಕಳು ಜನಿಸುವ ವಿಚಾರ ತಿಳಿಯುತ್ತಿದ್ದದ್ದು ಕತ್ತೆಯ ಅರಚುವಿಕೆಯಿಂದಾಗಿ, ಹಾಗಾಗಿ ಕಾರ್ಯವಾಸಿ ಕತ್ತೆಕಾಲು ಹಿಡಿಯಬೇಕೆಂಬ ಗಾದೆ ಜನಜನಿತವಾಗಿದೆ). ಪುಟ್ಟ ಶ್ರೀಕೃಷ್ಣ ಬೆಣ್ಣೆ ಕದಿಯಂತೆ ಬೆಣ್ಣೆ ಕಡೆಯುವ ಕೋಲಿಗೂ, ಒರಳಿಗೂ ಹಗ್ಗದಿಂದ ಕಟ್ಟಿ ಹಾಕುವ ದೇವಕಿಯ ಶಿಲ್ಪ ಕೆತ್ತನೆಯಂತೂ ಬಾಲ ಕೃಷ್ಣನ ಲೀಲೆಗಳನ್ನು ಕಣ್ತುಂಬಿಸಿಕೊಳ್ಳಬಹುದು. (ಜಾತ್ರೆಗಾಗಿ ಜಾತಕ ಪಕ್ಷಿಯಂತೆ ಕಾಯಬೇಕು, ಭಗವಂತನ ದರ್ಶನಕ್ಕೆ ನಂದಿಯಂತೆ ಸಹನೆ ಇರಬೇಕು, ಭಗವಂತನಿಗೆ ಪ್ರದಕ್ಷಿಣೆ ಹಾಕಲು ಗರುಡನಂತೆ ಏಕತಾನತೆ ಇರಬೇಕು.)

Amruthapura ಈ ಅಮೃತೇಶ್ವರನ ಮೂರ್ತಿಯು ದೂರದ ನೇಪಾಳದ ಗಂಡಕೀ ನದಿಯಿಂದ ತಂದಂತಹ ಸಾಲಿಗ್ರಾಮ ಶಿಲೆಯಿಂದ ಮಾಡಲ್ಪಟ್ಟಿದ್ದು ಒಂದೇ ಶಿಲೆಯಲ್ಲಿ ಬ್ರಹ್ಮ, ವಿಷ್ಣು, ಶಿವನನ್ನು ಕಾಣಬಹುದು. ಇಲ್ಲಿ ಅಮೃತೇಶ್ವರ ಪ್ರಮುಖನಾದರೂ ಬ್ರಹ್ಮನಿಗೆ ಅಗ್ರಸ್ಥಾನ ವಿದ್ದು (ಪ್ರಖಾಂಡ ಪಂಡಿತರು, ಅಧ್ಯಾಪಕರು, ಶಿಕ್ಷಣಾರ್ಥಿಗಳೂ 24 ಬ್ರಾಹ್ಮಣ ಕುಟುಂಬಗಳು ಇದ್ದ ಕಾರಣಕ್ಕಾಗಿ ಅಮೃತೇಶ್ವರ‌ ದಂಡನಾಯಕನು ಇಂದಿನ ಅಮೃತಾಪುರಕ್ಕೆ ಬ್ರಹ್ಮಪುರಿ ಅಗ್ರಹಾರವೆಂದು ನಾಮಕರಣ ಮಾಡಿದ್ದನೆಂದು ಶಾಸನದಿಂದ ತಿಳಿದುಬರುತ್ತದೆ.) ಅದಕ್ಕಾಗಿ ಈಶ್ವರನ ಜೊತೆಗೆ ಪಾರ್ವತಿ ಇರದೆ ಶಾರದೆಯನ್ನು ಸ್ಥಾಪಿಸಲಾಗಿದ್ದು, ಈ ಶಾರದೆಯ ಅನುಗ್ರಹದಿಂದ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಆರಂಭಿಸಲು, ಮದುವೆಯಾಗದವರು ಶಾರದೆಗೆ ಬಳೆಗಳನ್ನು ಕೊಡುವ ಹರಕೆ ಹೊತ್ತರೆ ಮದುವೆಯಾಗುವುದೆಂದು ಪ್ರತೀತಿ ಇದೆ..

ದೇವಾಲಯದ ರಚನೆಯು ಹೊಯ್ಸಳ ಶೈಲಿಯ ನಕ್ಷತ್ರಾಕಾರದ ಜಗತಿಯ ಮೇಲೆ ರಚಿತವಾಗಿದ್ದು ಗೋಪುರದಲ್ಲಿ ಹೊಯ್ಸಳನ ಲಾಂಛನವಿದ್ದು ಒಟ್ಟು 52 ಕಂಬಗಳಿಂದ ನಿರ್ಮಿತವಾಗಿದ್ದು ಪ್ರತಿಯೊಂದೂ ಕಂಬವೂ ವಿಭಿನ್ನತೆಯನ್ನು ಹೊಂದಿದೆ. ಒಟ್ಟು 250 ಗೋಪುರವನ್ನು ನಿರ್ಮಿಸಲಾಗಿದೆ. ಅಮೃತೇಶ್ವರನ‌ ಸನ್ನಿಧಿಯಲ್ಲಿ (ಹಲವು ಈಶ್ವರನ ‌ದೇವಾಲಯಗಳಲ್ಲಿದ್ದಂತೆ) ಮಕರಸಂಕ್ರಾಂತಿಯಂದು ಸೂರ್ಯನ ಮೊದಲ ಕಿರಣವು ತ್ರಿಮೂರ್ತಿ ಗಳ ಪಾದಸ್ಪರ್ಶಮಾಡುತ್ತಾನೆ.

ಅದ್ಭುತ ಶಿಲ್ಪಕಲೆಯನ್ನು ಹೊಂದಿರುವ ಅಮೃತೇಶ್ವರ ದೇವಾಲಯದ ಛಾವಣಿಯ ಕೆತ್ತನೆ ಕೆಲಸವನ್ನು ಮಾಡುವ ಮೂಲಕ ತನ್ನ ಮೊದಲ ಶಿಲ್ಪಕಲೆಯ ವೃತ್ತಿಯನ್ನು ಅಪ್ರತಿಮನೂ ಪ್ರಾತಃಸ್ಮರಣೀಯ ಶಿಲ್ಪಿ ಯೂ ಆಗಿದ್ದ ಮಲ್ಲಿತಮ್ಮನು ಆಭಿಸಿದನೆಂದು ತಿಳಿಯುತ್ತದೆ. ಈ ದೇವಾಲಯದ ನಾಲ್ಕೂ ದಿಕ್ಕನ್ನು ವೀಕ್ಷಿಸಿದರೆ ಶಿಲ್ಪಿ (ಸ್ಥಪತಿ) ಗೆ ಇದ್ದ ಗಣಿತ ಸೂತ್ರ, ಸೂರ್ಯಚಲನೆಯ ಸಿದ್ಧಾಂತ, ವಿಜ್ಞಾನದ ಬಗ್ಗೆ ಇದ್ದ ಜ್ಞಾನವನ್ನು ಅರಿಯಬಹುದು. ಇದರ ಬಗ್ಗೆ ಕನ್ನಡದ ಕವಿ ಜನ್ನನು ರಚಿಸಿದ ಶಾಸನದಿಂದ ತಿಳಿದುಬರುತ್ತದೆ. ದೇವಾಲಯದ ಇನ್ನೊಂದು ವಿಶೇಷವೆಂದರೆ 200 ವರ್ಷಗಳಿಂದ ನಿರಂತರವಾಗಿ ಉರಿಯುತ್ತಿರುವ ನಂದಾದೀಪವಿದ್ದು ದೇವಾಲಯದ ಸೌಂದರ್ಯವನ್ನು, ಪೂರ್ವಿಕರ ಭಕ್ತಿ, ಭಾವಗಳನ್ನು ಅರಿಯಬಹುದಾಗಿದೆ.ನಮ್ಮ ಹೆಮ್ಮೆ ನಮ್ಮ ಸಂಸ್ಕೃತಿ ನಮ್ಮ‌ ಕರ್ನಾಟಕ ನಮ್ಮ‌ಹೆಮ್ಮೆ, ನಮ್ಮ‌ದೇವಾಲಯಗಳು‌ನಮ್ಮ ಹೆಮ್ಮೆ, ನಮ್ಮ‌ಶಿಲ್ಪಿಗಳು ಅಮರಶಿಲ್ಪಿಗಳು.

ದಿಲೀಪ್ ನಾಡಿಗ್
ಕಾರ್ಯದರ್ಶಿ

ಮಲೆನಾಡು ಇತಿಹಾಸ ಸಂಶೋಧನೆ ಮತ್ತು ಆದ್ಯಯನ ವೇದಿಕೆ,‌(ನೋಂ) ಶಿವಮೊಗ್ಗ.

6361124316

Shimoga News ಕುಸುಮ್ – ಬಿ ಯೋಜನೆ. ರೈತರಿಗೆ ಆನ್ ಲೈನ್ ಮಾಹಿತಿ. ರಾಜ್ಯ ಸರ್ಕಾರದಿಂದ ಸಹಾಯವಾಣಿ.

0

Shimoga News ಕುಸುಮ್‌ – ಬಿ ಯೋಜನೆಯಿಂದ ರೈತರು ವಂಚಿತರಾಗಬಾರದು ಮತ್ತು ಮಾಹಿತಿ ಕೊರತೆ ನೀಗಿಸಲು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತವು ನಾಗರಬಾವಿ ಕೇಂದ್ರ ಕಚೇರಿಯಲ್ಲಿ ಸಹಾಯವಾಣಿ ಕೇಂದ್ರ ಸ್ಥಾಪಿಸಿದೆ.

Shimoga News ಯೋಜನೆಯ ಕಾಂಪೋನೆಂಟ್‌ ಬಿ ಅಡಿ ಸೋಲಾರ್‌ ಪಂಪ್‌ಸೆಟ್‌ ಹಾಕಿಸಿಕೊಳ್ಳುವ ಕುರಿತು ಮಾಹಿತಿ, ಆನ್‌ಲೈನ್‌ ಪಾವತಿ ಮತ್ತು ಸಂಬಂಧಿತ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ರೈತರು ಮಧ್ಯವರ್ತಿಗಳನ್ನು ಸಂಪರ್ಕಿಸದೆ 080 2220 2100 ಮತ್ತು 80951 32100 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.

H B Manjunath ಭಾರತೀಯ ಮತ್ತು ಕನ್ನಡ ಸಂಸ್ಕೃತಿ ವಿಶ್ವದಲ್ಲೇ ಅನುಪಮ- ಡಾ.ಹೆಚ್.ಬಿ.ಮಂಜುನಾಥ್.

0

H B Manjunath ದಾವಣಗೆರೆ.ಡಿ.28. ನಮ್ಮ ದೇಶದ ಹಾಗೂ ನಮ್ಮ ರಾಜ್ಯದ ಸಂಸ್ಕೃತಿ ವಿಶ್ವದಲ್ಲೇ ಶ್ರೇಷ್ಠ ಹಾಗೂ ಮೌಲ್ಯಯುತವಾಗಿದ್ದು ಇದನ್ನು ಮಕ್ಕಳಲ್ಲಿ ರೂಢಿಸುವ ಕೆಲಸ ಮನೆಗಳಲ್ಲಿ ಪೋಷಕರಿಂದಲೇ ಆಗಬೇಕು ಎಂದು ಹಿರಿಯ ಪತ್ರಕರ್ತ ಡಾ. ಎಚ್.ಬಿ. ಮಂಜುನಾಥ ಕರೆ ಕೊಟ್ಟರು.

ಅವರು ತ್ಯಾವಣಿಗೆ ಶ್ರೀ ಮಾತಾ ವಿದ್ಯಾಸಂಸ್ಥೆಯ ಪ್ರಕೃತಿ ವಿದ್ಯಾಲಯ ಸಿರಿ ಸಂಭ್ರಮ ಸಮಾರೋಪ ಭಾಷಣ ಮಾಡುತ್ತಾ ವಾರ್ಷಿಕ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸುವಲ್ಲಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುತ್ತವೆ ಆದರೆ ಜೀವನ ಪರೀಕ್ಷೆಗಳನ್ನು ಎದುರಿಸುವಲ್ಲಿ ಬೇಕಾಗುವ ಸಂಸ್ಕೃತಿ ಹಾಗೂ ಮೌಲ್ಯಗಳು ಮನೆಗಳಲ್ಲಿ ಪೋಷಕರು ತಾವು ರೂಢಿಸಿಕೊಂಡು ಮಕ್ಕಳಿಗೂ ಹೇಳಿಕೊಡಬೇಕು ಎಂದರು. ಮಾತೃಭಾಷೆಯಾದ ಕನ್ನಡ ಹಾಗೂ ಇದರ ಸಂಸ್ಕೃತಿ ಯಾವತ್ತೂ ಶ್ರೇಷ್ಠ ಆದರೆ ಹೊರ ರಾಜ್ಯ ಮತ್ತು ಹೊರ ದೇಶಗಳಿಗೆ ಹೋಗಿ ಅವಕಾಶಗಳನ್ನು ಪಡೆಯುವಲ್ಲಿ ಆಂಗ್ಲ ಭಾಷೆಯೂ ಬೇಕಾಗುತ್ತದೆ, ಬಹು ಭಾಷೆಗಳನ್ನು ಕಲಿಯುವುದು ಒಳ್ಳೆಯದು ಆದರೆ ಸಂಸ್ಕೃತಿ ಮಾತ್ರ ನಮ್ಮ ಮಾತೃ ಭಾಷೆಯದೇ ಆಗಿರಬೇಕು ಎಂಬುದನ್ನು ನಿದರ್ಶನದ ಮೂಲಕ ಮಂಜುನಾಥ್ ವಿವರಿಸಿದರು. ಭಾರತದ ವಿದ್ಯಾರ್ಥಿಗಳು ಪ್ರಪಂಚದ ಬೇರೆಲ್ಲ ದೇಶಗಳ ವಿದ್ಯಾರ್ಥಿಗಳಿಗಿಂತಲೂ ಬುದ್ಧಿವಂತರು ಆದರೆ ತಮ್ಮ ಈ ಸಾಮರ್ಥ್ಯದ ಅರಿವು ನಮ್ಮ ವಿದ್ಯಾರ್ಥಿಗಳಿಗಿಲ್ಲ, ಇದನ್ನು ಜಾಗೃತಗೊಳಿಸುವ ಕಾರ್ಯವು ಮನೆಗಳಲ್ಲೂ ಆಗಬೇಕಿದೆ ಎಂದರು.

ಮುಖ್ಯ ಅತಿಥಿಗಳಾಗಿ ಚನ್ನಗಿರಿ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್ ಜಯಪ್ಪ ಮಾತನಾಡುತ್ತಾ ತಮ್ಮಲ್ಲಿನ ಸಾಂಸ್ಕೃತಿಕ ಪ್ರತಿಭೆಯ ಪ್ರದರ್ಶನವು ಮಕ್ಕಳ ಹಕ್ಕುಗಳಲ್ಲಿ ಒಂದಾಗಿದ್ದು ಶಾಲಾ ವಾರ್ಷಿಕೋತ್ಸವದಲ್ಲಿ ಇದಕ್ಕೆ ಅವಕಾಶವಾಗುತ್ತದೆ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪೋಷಕರ ಶಿಕ್ಷಕರ ಹಾಗೂ ಗೆಳೆಯರ ಪಾತ್ರವೂ ಪ್ರಮುಖವಾಗಿರುತ್ತದೆ. ತಂದೆಯ ಜವಾಬ್ದಾರಿ ತಾಯಿಯ ಪ್ರೀತಿ ಸೇರಿ ಮಕ್ಕಳ ವ್ಯಕ್ತಿತ್ವ ರೂಪಗೊಳ್ಳುತ್ತದೆ. ವಿದ್ಯೆಯೊಂದಿಗೆ ಪ್ರಾಣಾಯಾಮ ಯೋಗದಂತಹ ಅನುಷ್ಠಾನಗಳು ಅವಶ್ಯ ಎಂದರು.

H B Manjunath ತ್ಯಾವಣಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕರಿಬಸಪ್ಪ ಹೆಚ್ ಬಿ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಕೃತಿ ವಿದ್ಯಾಲಯದ ಸಂಸ್ಥಾಪಕ ಕೆ.ಜಿ ಲೋಹಿತ್ ಕುಮಾರ್ ಅಧ್ಯಕ್ಷತೆಯಲ್ಲಿ ಮುಖ್ಯ ಅತಿಥಿಗಳಾಗಿ ದಾವಣಗೆರೆ ವಿಶ್ವವಿದ್ಯಾನಿಲಯದ ಗಣಿತಶಾಸ್ತ್ರ ಅಧ್ಯಾಪಕರಾದ ಡಾ. ಪ್ರಸನ್ನ ಕುಮಾರ್ ಬಿ ಸಿ, ಪ್ರತಿಭಾ ಪುರಸ್ಕಾರ ನೆರವೇರಿಸಿದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪಿ ಸಿ ಗೋವಿಂದಸ್ವಾಮಿ ಮಾತುಗಳನ್ನಾಡಿದರು. ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಕವಿತಾ ಶಿಕ್ಷಣದ ಧ್ಯೇಯೋದ್ದೇಶಗಳನ್ನು ವಿವರಿಸಿದರು. ಲೋಕೇಶ್ ನಾಯಕ್, ಅತ್ತಿಕೆರೆ ಪ್ರಸನ್ನ ಕುಮಾರ್, ಶ್ವೇತಾ, ಮುಖ್ಯೋಪಾಧ್ಯಾಯ ಮನು ಎಸ್ ಆರ್, ಜಮಾಲ್ ವಲಿ ಎಂ, ಆಶಾ ಹೆಚ್ ಎಸ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಪ್ರತಿಭಾವಂತ ವಿದ್ಯಾರ್ಥಿಗಳ ಪುರಸ್ಕಾರ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನೆರವೇರಿದ ನಂತರ ಶಾಲಾ ಮಕ್ಕಳಿಂದ ಅತ್ಯಾಕರ್ಷಕವಾದ ನೃತ್ಯರೂಪಕಗಳು ನೆರವೇರಿದವು.

Kuvempu “ಸುಂದರ ಕವಿ ಕಾಣೋ”ಕುವೆಂಪು ಸ್ಮರಣೆ.-ಡಾ.ಸುಧೀಂದ್ರ.

0

Kuvempu ಕುವೆಂಪು ಅವರ ಇಂಗ್ಲಿಷ್ ಕವಿತೆಗಳನ್ನು ಓದಿ ಪರಿಶೀಲಿಸಿದ ಐರಿಷ್ ಕವಿ ಕಸಿನ್ಸ್
“ಏನಿದೆಲ್ಲ ಕಗ್ಗ? .
ನಿಮ್ಮನ್ನ ನೋಡಿದರೆ ತಲೆಯಿಂದ ಕಾಲಿನವರೆಗೂ ಸ್ವದೇಶಿಯಾಗಿ ಕಾಣುತ್ತೀರಿ.. ಆದರೆ ಕವಿತೆ ಮಾತ್ರ ಸ್ವದೇಶಿಯಲ್ಲ. ನಿಮ್ಮ ಮಾತೇ ಭಾಷೆಯಲ್ಲಿ ಏನಾದರೂ ಬರೆದಿದ್ದೀರಾ? ಎಂದು ಕೇಳಿದರು.
ನಂತರ ಇಬ್ಬರ ನಡುವೆ ಕಾವ್ಯ, ಇಂಗ್ಲಿಷ್ ಭಾಷೆ ಮತ್ತು ಕನ್ನಡ ಭಾಷೆ ಮೊದಲಾದ ವಿಚಾರಗಳ ಮಾತುಕತೆ ನಡೆಯಿತು.
ಒಟ್ಟಾರೆ ಹೇಲಕಬೇಕೆಂದರೆ ’ಯಾವ ಭಾಷೆಯೂ ತನಗೆ ತಾನೆ ಅಸಮರ್ಥವಲ್ಲ. ಸಮರ್ಥನೊಬ್ಬನು ಬರುವತನಕ ಮಾತ್ರ ಅದು ಅಸಮರ್ಥವೆಂಬಂತೆ ತೋರಬಹುದು, ಸಮರ್ಥನು ಬಂದೊಡನೆ ಅವನ ಕೈಯಲ್ಲಿ ಅದು ಎಂತಹ ಅದ್ಭುತವನ್ನಾದರೂ ಸಾಧಿಸಬಲ್ಲದು’ ಎಂದು ಕಸಿನ್ಸ್ ‌ ಅಭಿಪ್ರಾಯ ಪಟ್ಟರಂತೆ.

ಆಗ ಇಪ್ಪತ್ತರ ಬಿಸಿ ವಯಸ್ಸಿನ ಯುವಕ ಕುವೆಂಪು, ಆಕ್ಷಣಕ್ಕೆ ಸಹಜವಾಗಿಯೇ ಸಿಟ್ಟುಗೊಂಡರಂತೆ. ಅಂತಹ ಕುಪಿತ ಮನಸ್ಥಿತಿಯಲ್ಲೇ ಅಲ್ಲಿಂದ ಜಾಗ ಖಾಲಿಮಾಡಿದರು.

” ಅದೊಂದು ಮಹತ್ವದ ಹಾಗೂ ಸ್ಮರಣೀಯವಾದ ದಿನ!”ಎಂದು ನೆನಪಿನ ದೋಣಿಯಲ್ಲಿ ಕುವೆಂಪು ಆ ಸಂದರ್ಭವನ್ನು ಕುರಿತು ಕಸಿನ್ಸ್ ಅವರ ಹಿತವಚನ ಮೇಲೆಮೇಲೆಕ್ಕೆ ತಿರಸ್ಕೃತವಾಗಿದ್ದರು ಸುದೈವದಿಂದ ನನ್ನ ಅಂತಃಪ್ರಜ್ಞೆ ಅದನ್ನು ಒಪ್ಪಿಕೊಂಡಿತ್ತೆಂದು ತೋರುತ್ತದೆ. ಕನ್ನಡ ವಾಗ್ದೇವಿಯ ಕೃಪೆಯೂ ಆ ಸುಸಂಧಿಯನ್ನು ಉಪಯೋಗಿಸಿಕೊಂಡು ತನ್ನ ಕಂದನನ್ನು ತನ್ನ ಹಾಲೆದೆಗೆ ಎಳೆದುಕೊಂಡಳು! ಹಿಂತಿರುಗಿ ಬರುವಾಗಲೇ ದಾರಿಯಲ್ಲಿ ಏನೋ ಒಂದು ಕನ್ನಡ ಕವಿತೆ ರಚಿಸುತ್ತಾ ಗುನುಗುತ್ತಾ ಬಂದೆ ಎಂದು ಬರೆದಿದ್ದಾರೆ.

Kuvempu ಈ ಬದಲಾವಣೆ ಹೊಂದಿದ ನಂತರ ಕುವೆಂಪು ಗಟ್ಟಿಯಾಗಿಯೇ ಬರೆದರು. ಗದ್ಯಧಾಟಿಯಲ್ಲಂತೂ ಅವರ ಶೈಲಿ
ಮನೋಜ್ಞ.ಅನನ್ಯ.
ಕವಿತೆಗಳಲ್ಲಿ ನಿಸರ್ಗ ನರ್ತಿಸುತ್ತದೆ. ನಿಸರ್ಗಕವಿ ಅಂತಲೇ ನಮಗೆ ಅವರು ಜನಜನಿತ.

ಪದವಿ, ಪದಕ, ಬಿರುದು, ಮಾನ‌ ಸಮ್ಮಾನಗಳು ಅವರನ್ನ ಅರಸಿಕೊಂಡು ಬಂದವು. ಕುವೆಂಪು ಅವರೇ ಹೇಳುವಂತೆ” ಛೀ, ಕೀರ್ತಿ ಶನಿ ತೊಲಗಾಚೆ” ಎಂದು ಅವುಗಳನ್ನ ದೂರ ಸರಿಸಿದರು. ಅಷ್ಟೇ ಮೇಲಕ್ಕೇರಿದರು.
ಇಂದವರ ಜನ್ಮದಿನ.
ಸೂರ್ಯೋದಯ,
ಚಂದ್ರೋದಯ ದೇವರ ದಯ ಕಾಣೋ
ಎಂಬಂತೆ ಮಹಾಕವಿಯ ನೆನಪೇ ನಮಗೆ ಒಂದು ಸುಂದರ
” ಅಕ್ಷರಗಳ ಕವಿ ಕಾಣೋ!” ಎಂಬ ಮಿಡಿತ ನಮಗೆ.

Shimoga News “ಗಾನ ವಿಮಾನ” ಏರಿದ ಸಹೃದಯರು.ಮತ್ತೆಮತ್ತೆನೆನಪಾದ ‘ಶಿವಮೊಗ್ಗ ಸುಬ್ಬಣ್ಣ ‘

0

Shimoga News ದಿನಾಂಕ ೨೮-೧೨-೨೦೨೫ ರ ಭಾನುವಾರ ಕುವೆಂಪು ರಂಗಮಂದಿರದಲ್ಲಿ ಅಭಿರುಚಿ , ಶಾಮಣ್ಣ ಟ್ರಸ್ಟ್, ಕುವೆಂಪು ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಕುವೆಂಪು ವಿರಚಿತ ಹಾಡುಗಳ ಶಿವಮೊಗ್ಗ ಸುಬ್ಬಣ್ಣ ಹಾಡಿರುವ “ಗಾನ ವಿಮಾನ” ಕಾರ್ಯಕ್ರಮ ನಡೆಯಿತು.
ಶಿವಮೊಗ್ಗ ಸುಬ್ಬಣ್ಣ ,ಮಲೆನಾಡಿಗೆ ಚಿರಪರಿಚಿತರು. ಎಲೆಮರೆಯ ಕಾಯಿ ಆಗಿದ್ದ ಪ್ರತಿಭೆ ಹೊರಜಗತ್ತಿಗೆ ಪರಿಚಯವಾಗಲು ಬಹಳ ಕಾಲ ಬೇಕಾಯಿತು.
“ಕಾಡುಕುದುರೆ ” ಚಿತ್ರದ ಗಾಯನಕ್ಕಾಗಿ ಸುಬ್ಬಣ್ಣ ಅವರಿಗೆ ” ರಾಷ್ಟ್ರಪ್ರಶಸ್ತಿಗೆ ಲಭಿಸಿದಾಗ ಇಡೀ ಕನ್ನಡಿಗರೇ ಹೆಮ್ಮೆ ಪಡುವಂತಾಯಿತು.
ಅಲ್ಲಿಂದ ಸುಬ್ಬಣ್ಷ ಹಿಂತಿರುಗಿ ನೋಡಲೇ ಇಲ್ಲ. ಚಿತ್ರಗೀತೆಗಳೇ ಅಲ್ಲದೇ ಭಾವಗೀತೆಗಳಿಗೆ ಜೀವ ತುಂಬಿ ಹಾಡಿದಾಗ.
ಅವರನ್ನ ಮತ್ತಷ್ಟು ಕನ್ನಡ ಸಂಗೀತ ರಸಿಕರು ಮೆಚ್ಚಿಕೊಂಡರು.
ಕನ್ನಡ ಭಾವಗೀತೆಗಳ ಧ್ವನಿಮುದ್ರಣ ಒಂದು ಉದ್ಯಮ ವ್ಯಾಪ್ತಿ ಪಡೆಯುವಲ್ಲಿ ಶಿವಮೊಗ್ಗ ಸುಬ್ಬಣ್ಣ ಅವರ ಕೊಡುಗೆ ಅಪಾರ. ಅವರು ಹಾಡಿದ ಧ್ವನಿಮುದ್ರಿಕೆ,ಕ್ಯಾಸೆಟ್ ಗಳು ಬಿಸಿ ಬಿಸಿ ತಿನಿಸಿನಂತೆ ಮಾರಾಟವಾದವು.
ಕೆಲವು ಧ್ವನಿಮುದ್ರಣ ಕಂಪನಿಗಳು ತಮ್ಮ ಆರ್ಥಿಕ ಪರಿಸ್ಥಿತಿಯನ್ನ ಸುಧಾರಿಸಿಕೊಂಡವು ಎನ್ನಬಹುದು.
ಶಿವಮೊಗ್ಗ ಸುಬ್ಬಣ್ಣ ಅವರನ್ನ ಊರು ಶಿವಮೊಗ್ಗ ಮರೆತಿಲ್ಲ.
ಅದಕ್ಕೆ ಸಾಕ್ಷಿಯಾಗಿ
Shimoga News ” ಗಾನ ವಿಮಾನ” ಕಾರ್ಯಕ್ರಮ ಅತ್ಯಂತ ವಿನೂತನ ,ವಿಶಿಷ್ಟವಾಗಿ
ನಡೆಯಿತು.
ವಿನಯ್ ಶಿವಮೊಗ್ಗ ಅವರ ಸೃಜನ ಶೀಲತೆಗೆ ಈ ಕಾರ್ಯಕ್ರಮ ಮೆರುಗು ತಂದಿತು.
ವಿವಿಧ ಕಲಾವಿದರು ಭಾವಗೀತೆಗಳನ್ನ ಹಾಡಿ,ಸುಮಧುರ ವಾತಾವಣ ಸೃಷ್ಟಿಸಿದರು.
ಕುವೆಂಪ ರಂಗಮಂದಿರ ಮತ್ತೊಮ್ಮೆ ಭಾವಗೀತೆಗಳ ಹಕ್ಕಿಗಳ
ಗೂಡಿನಂತೆ ಶೋಭಿಸಿತೆನ್ನಬಹುದು..

Sigandur Bridge ಸಿಗಂದೂರು ಸೇತುವೆ ಸೌಲಭ್ಯದ ಬಗ್ಗೆ ಯಾತ್ರಿಗಳಿಂದ ಸಂಸದ ರಾಘವೇಂದ್ರ ಅವರ ಮಚ್ಚುಗೆ

0

Sigandur Bridge ಇಂದು ಬೈಂದೂರಿಗೆ ತೆರಳುವಾಗ, ವಿದೇಶಿಯರು ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ಭಕ್ತರು ಭೇಟಿಯಾಗಿ, ‘ಸಿಗಂದೂರು ಸೇತುವೆ’ ಮತ್ತು ಶಿವಮೊಗ್ಗ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸಂಸದ ರಾಘವೇಂದ್ರ ಅವರಿಗೆ ಮುಖತಃ ಮೆಚ್ಚುಗೆ ವ್ಯಕ್ತಪಡಿಸಿದರು.

Sigandur Bridge ನಮ್ಮೂರಿನ ಮೂಲಸೌಕರ್ಯಗಳು ಪ್ರವಾಸಿಗರು ಮತ್ತು ಭಕ್ತಾದಿಗಳ ಪ್ರಯಾಣವನ್ನು ಸುಲಭಗೊಳಿಸಿದೆ ಎಂದು ಕೇಳಿ ಸಾರ್ಥಕ ಭಾವ ಮೂಡಿತು. ನಿಮ್ಮೆಲ್ಲರ ಹಾರೈಕೆ ಸದಾ ಇರಲಿ ಎಂದು ಸಂಸದ ಬಿ.ವೈ.ರಾಘವೇಂದ್ರ. ಭಕ್ತ ಪ್ರಮುಖರೊಡನೆ

Breaking News ಲಾರಿ ಮತ್ತು ಬೈಕ್ ನಡುವೆ ಭೀಕರ ಅಪಘಾತ – ಓರ್ವ ಸಾವು

0

Breaking News ಶಿವಮೊಗ್ಗ ನಗರದ ವಿದ್ಯಾನಗರ ಫ್ಲೈಓವರ್ ನಲ್ಲಿ ಘಟನೆ ನಡೆದಿದೆ. ಫ್ಲೈ ಓವರ್ ನಿಂದ ಇಳಿಯುತ್ತಿದ್ದ ಲಾರಿ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ.
ಡಿಕ್ಕಿಯ ರಭಸಕ್ಕೆ ಬೈಕ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಚೆನ್ನಗಿರಿ ತಾಲೂಕಿನ ಹಿರೆಕೊಗಲೂರು ಮೂಲದ ರಾಘವೇಂದ್ರ (40) Breaking News ಮರಣ ಹೊಂದಿದ ವ್ಯಕ್ತಿಯೆಂದು ಗುರುತಿಸಲಾಗಿದೆ. ಮೃತ ದೇಹವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಯಿತು