Thursday, May 7, 2026
Thursday, May 7, 2026
Home Blog Page 43

Madhu Bangarappa ಎಸ್ಎಸ್ಎಲ್ ಸಿ ಯಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್.ಪಾಸ್- ಫೇಲ್ ಪದ್ಧತಿ ರದ್ದು.- ಮಧು ಬಂಗಾರಪ್ಪ.

0

Madhu Bangarappa  ಎಸ್.ಎಸ್.ಎಲ್.ಸಿಯಲ್ಲಿ ತೃತೀಯ ಭಾಷೆ ಇನ್ಮುಂದೆ ಗ್ರೇಡಿಂಗ್‌; ಪಾಸ್‌-ಫೇಲ್ ಪದ್ಧತಿ ರದ್ದು: ಸಚಿವ ಎಸ್. ಮಧು ಬಂಗಾರಪ್ಪ

ಬೆಂಗಳೂರು: ರಾಜ್ಯದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಮೇಲಿನ ಶೈಕ್ಷಣಿಕ ಒತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಶ್ರೀ ಎಸ್. ಮಧು ಬಂಗಾರಪ್ಪ ಅವರು ಇಂದು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.

ವಿಧಾನಸಭಾ ಅಧಿವೇಶನದ ಮುಕ್ತಾಯದ ಬಳಿಕ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇನ್ಮುಂದೆ ಎಸ್.ಎಸ್.ಎಲ್.ಸಿ ಪರೀಕ್ಷೆಗಳಲ್ಲಿ ‘ತೃತೀಯ ಭಾಷೆ’ಯನ್ನು (Third Language) ಗ್ರೇಡಿಂಗ್ ವ್ಯವಸ್ಥೆಗೆ (Grading System) ಒಳಪಡಿಸಲಾಗುವುದು ಎಂದು ಹೇಳಿದರು.

“ಈವರೆಗೆ 625 ಅಂಕಗಳ ಪರೀಕ್ಷೆಯಲ್ಲಿ ತೃತೀಯ ಭಾಷೆಗೆ 100 ಅಂಕಗಳನ್ನು ನಿಗದಿಪಡಿಸಲಾಗಿತ್ತು. ಇನ್ಮುಂದೆ ತೃತೀಯ ಭಾಷೆಯಲ್ಲಿ ಪಾಸ್ ಅಥವಾ ಫೇಲ್ ಎಂಬ ಪದ್ಧತಿ ಇರುವುದಿಲ್ಲ. ಅಂದರೆ, ಅಂತಿಮ ಫಲಿತಾಂಶದ ಅಂಕಗಳಿಗೆ ತೃತೀಯ ಭಾಷೆಯ ಅಂಕಗಳನ್ನು ಪರಿಗಣಿಸಲಾಗುವುದಿಲ್ಲ. ಬದಲಾಗಿ ಗ್ರೇಡಿಂಗ್ (ಉದಾಹರಣೆಗೆ: ಎ, ಬಿ, ಸಿ, ಡಿ) ನೀಡಲಾಗುತ್ತದೆ,” ಎಂದು ಸಚಿವರು ಸ್ಪಷ್ಟಪಡಿಸಿದರು.

ಹಿಂದಿ, ಸಂಸ್ಕೃತ, ತುಳು, ಮರಾಠಿ, ಅರೇಬಿಕ್ ಸೇರಿದಂತೆ ಪಠ್ಯಕ್ರಮದಲ್ಲಿರುವ ಎಲ್ಲಾ ತೃತೀಯ ಭಾಷೆಗಳಿಗೂ ಈ ನಿಯಮ ಅನ್ವಯವಾಗಲಿದೆ.

ಅಧಿಕೃತ ಆದೇಶವನ್ನು ಶೀಘ್ರದಲ್ಲೇ ಹೊರಡಿಸಲಾಗುವುದು ಎಂದು ತಿಳಿಸಿದರು.

ಮಕ್ಕಳಿಗೆ ‘ನೈತಿಕ ಶಿಕ್ಷಣ’ (Moral Science) ಜಾರಿ: ಪ್ರಸಕ್ತ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳಿಗೆ ಸರ್ಕಾರದಿಂದಲೇ ಉಚಿತವಾಗಿ ‘ನೈತಿಕ ಶಿಕ್ಷಣ’ ಪುಸ್ತಕಗಳನ್ನು ಒದಗಿಸಲಾಗುತ್ತಿದೆ. ಇದು ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸುವ ಸರ್ಕಾರದ ಹೆಜ್ಜೆಯಾಗಿದೆ, ಎಂದು ಹೇಳಿದರು.

Madhu Bangarappa 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ನಿರ್ಬಂಧ: ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಮತ್ತು ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ (Social Media) ಬಳಕೆಯನ್ನು ನಿರ್ಬಂಧಿಸುವ ಮಹತ್ವದ ಪ್ರಸ್ತಾಪವನ್ನು ಸದನದಲ್ಲಿ ಚರ್ಚಿಸಲಾಗಿದ್ದು, ಎಲ್ಲರಿಂದಲೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಈ ಸಮಸ್ಯೆಯು ಕೇವಲ ಸರ್ಕಾರದ ಮಟ್ಟದಲ್ಲಿ ಬಗೆಹರಿಯುವುದಿಲ್ಲ, ಪೋಷಕರು ತಮ್ಮ ಮಕ್ಕಳ ಮೊಬೈಲ್ ಬಳಕೆಯ ಮೇಲೆ ಹೆಚ್ಚಿನ ಜವಾಬ್ದಾರಿ ವಹಿಸಬೇಕು ಎಂದು ಸಚಿವರು ಕಳಕಳಿಯ ಮನವಿ ಮಾಡಿದರು.

“ನಮ್ಮ ಸರ್ಕಾರದ ಪ್ರಮುಖ ಉದ್ದೇಶ ಸರ್ಕಾರಿ ಶಾಲೆಗಳ ಸಬಲೀಕರಣ, ಪಾರದರ್ಶಕತೆ ಕಾಯ್ದುಕೊಳ್ಳುವುದು ಮತ್ತು ವಿದ್ಯಾರ್ಥಿಗಳನ್ನು ಪರೀಕ್ಷಾ ಒತ್ತಡದಿಂದ ಮುಕ್ತಗೊಳಿಸುವುದಾಗಿದೆ. ಈ ನಿಟ್ಟಿನಲ್ಲಿ ವಾರ್ಷಿಕ 3 ಪರೀಕ್ಷೆಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಅಂಕ ಉಳಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ,” ಎಂದು ಸಚಿವ ಶ್ರೀ ಮಧು ಬಂಗಾರಪ್ಪ ಅವರು ತಮ್ಮ ಇಲಾಖೆಯ ಸಾಧನೆ ಮತ್ತು ಮುಂದಿನ ಗುರಿಗಳ ಬಗ್ಗೆ ವಿವರಿಸಿದರು.

Madhu Bangarappa 2026-27 ನೇ ಶೈಕ್ಷಣಿಕ ವರ್ಷದಲ್ಲಿ ಒಂದನೇ ತರಗತಿಗೆ ದಾಖಲಾಗುವ ಮಕ್ಕಳ ವಯೋಮಿತಿಯಲ್ಲಿ 60 ದಿನ ಸಡಿಲಿಕೆ- ಮಧು ಬಂಗಾರಪ್ಪ.

0

Madhu Bangarappa “ಒಂದನೇ ತರಗತಿಗೆ ದಾಖಲಾಗುವ ಮಕ್ಕಳಿಗೆ ಆರು ವರ್ಷ ತುಂಬಿರಲೇಬೇಕು ಎಂಬ ಕಡ್ಡಾಯ ನಿಯಮವನ್ನು 2026-27ನೇ ಶೈಕ್ಷಣಿಕ ಸಾಲಿಗೆ ಅನ್ವಯವಾಗುವಂತೆ ವಿನಾಯಿತಿ ನೀಡಲಾಗಿದೆ. 60 ದಿನಗಳ ಸಡಿಲಿಕೆ ನೀಡಲು ತೀರ್ಮಾನಿಸಲಾಗಿದ್ದು, ಇದಕ್ಕೆ ಪೂರಕವಾಗಿ ದಾಖಲಾತಿ ತಂತ್ರಾಂಶದಲ್ಲಿ ಬದಲಾವಣೆ ಮಾಡಲಾಗುವುದು.” ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ
ಮಧು ಬಂಗಾರಪ್ಪ ವಿಧಾನ ಸಭೆ ಅಧಿವೇಶನದಲ್ಲಿ ತಿಳಿಸಿದ್ದಾರೆ.

MADHU BANGARAPPA ಶಿಕ್ಷಣದಲ್ಲಿ ಹಿಂದಿ ಹೇರಿಕೆ ವಿರೋಧ ಮತ್ತು ‘ಪಾಸ್ ವಿಥೌಟ್ ಹಿಂದಿ’ ಜಾರಿ ಕುರಿತು ಚರ್ಚೆ

0

MADHU BANGARAPPA ರಾಜ್ಯದ ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಮಂತ್ರಿಗಳಾದ ಮಧುಬಂಗಾರಪ್ಪ ಅವರ ಬೆಂಗಳೂರಿನ ನಿವಾಸದಲ್ಲಿ “ಹಿಂದಿ ಹೇರಿಕೆ ವಿರೋಧಿ ಕರ್ನಾಟಕ ಒಕ್ಕೂಟ” ದವರೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಯಿತು.

ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಕನ್ನಡಕ್ಕೆ ಅಗ್ರಸ್ಥಾನವಿರಬೇಕು ಮತ್ತು ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳ ಮೇಲೆ ಅನ್ಯ ಭಾಷೆಯ ಹೇರಿಕೆ ಇರಬಾರದು ಎಂಬುದು ನಮ್ಮ ಸರ್ಕಾರದ ಸ್ಪಷ್ಟ ನಿಲುವಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

“ಪಾಸ್ ವಿಥೌಟ್ ಹಿಂದಿ” (Pass Without Hindi) ಶಾಲಾ ಹಂತದಲ್ಲಿ ಹಿಂದಿ ವಿಷಯದಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿರಬಾರದು ಮತ್ತು ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅಡ್ಡಿಯಾಗಬಾರದು ಎಂಬ ಕಾನೂನು ಜಾರಿಗೊಳಿಸುವ ಕುರಿತು ಒಕ್ಕೂಟವು ಒತ್ತಾಯಿಸಿ, ಸಲ್ಲಿಸಿರುವ ಮನವಿಯನ್ನು ಸಕಾರಾತ್ಮಕವಾಗಿ ಸ್ವೀಕರಿಸಲಾಗಿದ್ದು, ಈ ಕುರಿತು ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಶಿಕ್ಷಣ ಇಲಾಖೆಯ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಇಲಾಖೆಯ ಕ್ರಮದ ಬಗ್ಗೆ ಮಧು ಬಂಗಾರಪ್ಪ ಚರ್ಚೆಯಲ್ಲಿ ತಿಳಿಸಿದರು.

MADHU BANGARAPPA ಕನ್ನಡ ಪರ ಸಂಘಟನೆಗಳು ಪರೀಕ್ಷಾ ಕೇಂದ್ರಗಳಿಗೆ ಮುತ್ತಿಗೆ ಹಾಕುವ ನಿರ್ಧಾರವನ್ನು ತಕ್ಷಣವೇ ಕೈಬಿಡಬೇಕು. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಶಾಂತಿಯುತವಾಗಿ ಸಹಕರಿಸಬೇಕು ಎಂದು ಸಚಿವರು ಮನವಿ ಮಾಡಿದರು .ಇದಕ್ಕೆ‌ಚರ್ಚೆಯಲ್ಲಿ ಭಾಗವಹಿಸಿದ್ದ ಹೋರಾಟಗಾರರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದರು.

ನಮ್ಮ ನೆಲ, ನಮ್ಮ ಭಾಷೆ ಮತ್ತು ನಮ್ಮ ವಿದ್ಯಾರ್ಥಿಗಳ ಭವಿಷ್ಯ ಕಾಪಾಡಲು ಸರ್ಕಾರ ಬದ್ಧವಾಗಿದೆ. ಯಾವುದೇ ಕಾರಣಕ್ಕೂ ಅನ್ಯ ಭಾಷೆಯ ಹೇರಿಕೆಯನ್ನು ಸಹಿಸುವುದಿಲ್ಲ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು

ಈ ಸಂದರ್ಭದಲ್ಲಿ ಹಿರಿಯ ಕನ್ನಡ ಪರ ಹೋರಾಟಗಾರರಾದ ಶ್ರೀ ಸಾ.ರ ಗೋವಿಂದ್, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಧ್ಯಕ್ಷರಾದ ಶ್ರೀ ಶಿವರಾಮೇಗೌಡ, ಶ್ರೀ ರಾಧಾಕೃಷ್ಣ, ಶ್ರೀ ರಾಮಪ್ರಸಾದ್, ಶ್ರೀ ಪಾರ್ವತೀಶ್ ಸೇರಿದಂತೆ ಅನೇಕ ಪದಾಧಿಕಾರಿಗಳು ಹಾಜರಿದ್ದರು.

Morarji Desai Residential School ಜಿಲ್ಲೆಯ ಮೊರಾರ್ಜಿ ದೇಸಾಯಿ‌ ವಸತಿ ಶಾಲೆ 6 ನೆ ತರಗತಿಗೆ ಪ್ರವೇಶ ಪರೀಕ್ಷೆ.

0

Morarji Desai Residential School ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ಎ.ಪಿ.ಜೆ ಅಬ್ದುಲ್ ಕಲಾಂ/ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ 2026-27 ನೇ ಸಾಲಿನ 6ನೇ ತರಗತಿಗೆ ಪ್ರವೇಶಕ್ಕಾಗಿ ಏಪ್ರಿಲ್ 12 ರಂದು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯುತ್ತಿದೆ.
ಏಪ್ರಿಲ್ ಮೊದಲ ವಾರದಲ್ಲಿ ಪ್ರವೇಶ ಪತ್ರವನ್ನು ಅಲ್ಪಸಂಖಾತರ ನಿರ್ದೇಶನಾಲಯದ ಅಧಿಕೃತ ಜಾಲತಾಣದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗದ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ ಮೇಲಿನಹನಸವಾಡಿ ಪ್ರಾಂಶುಪಾಲರ ದೂ.ಸಂ: 9483623537, ಭದ್ರಾವತಿ ದೊಡ್ಡೇರಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿಶಾಲೆ ಪ್ರಾಂಶುಪಾಲರ ದೂ.ಸಂ : 9591237905, ಶಿರಾಳಕೊಪ್ಪ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲರ ದೂ.ಸಂ :8310350361, ಶಿಕಾರಿಪುರ ಉಡಗಣಿಯ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲರ ದೂ.ಸಂ 9036866642, ಶಿವಮೊಗ್ಗ ಅಲ್ಪಸಂಖ್ಯಾತರ ಜಿಲ್ಲಾ ಮಾಹಿತಿ ಕೇಂದ್ರದ ದೂ.ಸಂ : 7676888388, ಭದ್ರಾವತಿ ಅಲ್ಪಸಂಖ್ಯಾತರ ತಾಲ್ಲೂಕು ಮಾಹಿತಿ ಕೇಂದ್ರದ Morarji Desai Residential School ದೂ.ಸಂ :9538853680, ತೀರ್ಥಹಳ್ಳಿ ಅಲ್ಪಸಂಖ್ಯಾತರ ತಾಲ್ಲೂಕು ಮಾಹಿತಿ ಕೇಂದ್ರದ ದೂ.ಸಂ :8861982835, ಸೊರಬ ಅಲ್ಪಸಂಖ್ಯಾತರ ತಾಲ್ಲೂಕು ಮಾಹಿತಿ ಕೇಂದ್ರದ ದೂ.ಸಂ :9513815513, ಶಿಕಾರಿಪುರ ಅಲ್ಪಸಂಖ್ಯಾತರ ತಾಲ್ಲೂಕು ಮಾಹಿತಿ ಕೇಂದ್ರದ ದೂ.ಸಂ :7829136724, ಹೊಸನಗರ ಅಲ್ಪಸಂಖ್ಯಾತರ ತಾಲ್ಲೂಕು ಮಾಹಿತಿ ಕೇಂದ್ರದ ದೂ.ಸಂ :9008447029 ಹಾಗೂ ಸಾಗರ ಅಲ್ಪಸಂಖ್ಯಾತರ ತಾಲ್ಲೂಕು ಮಾಹಿತಿ ಕೇಂದ್ರದ ದೂ.ಸಂ :7338222907 ನ್ನು ಸಂಪರ್ಕಿಸಬಹುದೆAದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.

Mylaralingeshwara Temple Shimoga ಮಾರ್ಚ್ 29. ಮೈಲಾರೇಶ್ವರ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ

0

Mylaralingeshwara Temple in Shimoga ಶಿವಮೊಗ್ಗ ನಗರದಲ್ಲಿನ ಶ್ರೀ ಮೈಲಾರೇಶ್ವರ ದೇವಸ್ಥಾನನಲ್ಲಿ ಮಾ 29ರ ಭಾನುವಾರ ವಿಶೇಷ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆ ಗೋಪಾಲ ಭಟ್ರು ತಿಳಿಸಿದ್ದಾರೆ.

ದೇವಸ್ಥಾನದ ಅರ್ಚಕ ವೃಂದದ ನೇತೃತ್ವದಲ್ಲಿ ಗಂಗಪ್ರಿಯಾ ಕಲ್ಯಾಣ ಮಂದಿರದಲ್ಲಿ ಸಮೂಹ ಆಶ್ಲೇಷ ಬಲಿ ಪೂಜೆ, ನಾಗದರ್ಶನ, ಪಂಚಾಮೃತ ಅಭಿಷೇಕ ಮತ್ತು ಕಾಳಸರ್ಪ ಶಾಂತಿ ಪೂಜೆ ನಡೆಯಲಿದೆ.
ಅಂದು ಬೆಳಿಗ್ಗೆ ಬೆಳಿಗ್ಗೆ 7.30 ಕಾಳಸರ್ಪ ಶಾಂತಿ ಆರಂಭ, ಬೆಳಿಗ್ಗೆ 10.30, ಆಶ್ಲೇಷ ಬಲಿ ಪೂಜೆ, ಮಧ್ಯಾಹ್ನ 12.30 ನಾಗದರ್ಶನ ನಂತರ ಪ್ರಸಾದ ವಿತರಣೆ ನಡೆಯಲಿದ್ದು ಸೇವೆಗೆ ಹಿಂಗಾರ ಮತ್ತು ಎಳನೀರು ಸಲ್ಲಿಸಲು ಭಕ್ತರಿಗೆ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Mylaralingeshwara Temple in Shimoga ಹೆಚ್ಚಿನ ವಿವರಗಳಿಗಾಗಿ ದೂರವಾಣಿ 9480354402 ಸಂಪರ್ಕಿಸಬಹುದು

Online shopping ಆನ್ ಲೈನ್ ಶಾಪಿಂಗ್ ಬಗ್ಗೆ ಬಹಳ ಜಾಗರೂಕರು ಹಾಗು ಜಾಣರಾಗಿರಿ- ಟಿ.ಶಿವಣ್ಣ.

0

Online shopping ಇತ್ತೀಚಿನ ಕಾಲಮಾನದಲ್ಲಿ ಆನ್‌ಲೈನ್ ಶಾಪಿಂಗ್ ಹೆಚ್ಚುತ್ತಿದೆ. ಆನ್‌ಲೈನ್ ಶಾಪಿಂಗ್ ಅನುಕೂಲಕರ ಹಾಗೂ ಲಾಭದಾಯಕ ಎಂದೆನಿಸಿದರೂ ಕೂಡ ವಂಚನೆ, ಗುಣಮಟ್ಟದ ಖಾತ್ರಿಯ ಕೊರತೆ, ನಕಲಿ ಉತ್ಪನ್ನಗಳ ಮಾರಾಟ ಮತ್ತು ಡೇಟಾ ಸೋರಿಕೆಯ ಅಪಾಯಗಳಿರುವುದರಿಂದ ಜಾಗರೂಕರಾಗಿದ್ದು ಜಾಣರಾಗಿರಿ ಎಂದು ಜಿಲ್ಲಾ ನಿವೃತ್ತ ನ್ಯಾಯಾಧೀಶರು ಹಾಗೂ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ. ಶಿವಣ್ಣ ಎಚ್ಚರಿಸಿದರು.

ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ ಹಾಗೂ ಶ್ರೀ ಪಾರ್ಶ್ವನಾಥ ಮಹಿಳಾ ಶಿಕ್ಷಣ ಮಹಾವಿದ್ಯಾಲಯ ಮತ್ತು ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಮಾರ್ಚ್ 26ರ ಗುರುವಾರ ಮಧ್ಯಾಹ್ನ ಕೋಟೆ ರಸ್ತೆಯ ಶ್ರೀ ಪಾರ್ಶ್ವನಾಥ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಗ್ರಾಹಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರವು 1986ರಲ್ಲಿ ಗ್ರಾಹಕ ಹಕ್ಕುಗಳ ಕಾಯ್ದೆ ಜಾರಿಗೊಳಿಸಿದೆ. ದೈನಂದಿನ ಜೀವನದಲ್ಲಿ ಪ್ರತಿಯೊಬ್ಬರೂ ಗ್ರಾಹಕರೇ. ಗ್ರಾಹಕರಿಗೆ ನ್ಯಾಯಯುತ, ಯೋಗ್ಯ ಹಾಗೂ ಗುಣಮಟ್ಟದ ಸರಕು ಮತ್ತು ಸೇವೆಗಳನ್ನು ನೀಡುವ ಜವಾಬ್ದಾರಿ ವ್ಯಾಪಾರಸ್ಥರದ್ದು. ಯಾವುದೇ ವಸ್ತುಗಳನ್ನು ಕೊಡುವವನ ತೃಪ್ತಿಗಾಗಿ ಕೊಳ್ಳುವುದಲ್ಲ, ಅಲ್ಲಿ ಗ್ರಾಹಕರ ಸಂತೃಪ್ತಿಯೇ ಮುಖ್ಯ. ಸುರಕ್ಷತೆ, ಆಯ್ಕೆ ಹಾಗೂ ಆರೋಗ್ಯಪೂರ್ಣ ಪರಿಸರ ಹೊಂದುವ ಹಕ್ಕನ್ನು ಕಾಯ್ದೆಯು ಎಲ್ಲಾ ಗ್ರಾಹಕರಿಗೂ ನೀಡಿದೆ ಎಂದರು.

ಗ್ರಾಹಕರು ಮೋಸ ಹೋದ ಬಳಿಕ ಎಚ್ಚೆತ್ತು ಕೊಳ್ಳುವ ಬದಲು ಜಾಗೃತರಾಗಿರುವುದು ಉತ್ತಮ. ಗ್ರಾಹಕರ ರಕ್ಷಣೆ ಹಾಗೂ ಸಬಲೀಕರಣಕ್ಕಾಗಿ ಗ್ರಾಹಕ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರೂ ಸಹ ಮೋಸ ಹೋಗುವುದು ತಪ್ಪುತ್ತಿಲ್ಲ. ಆಕಸ್ಮಿಕವಾಗಿ ಮೋಸ ಹೋದಾಗ ಗ್ರಾಹಕರ ರಕ್ಷಣೆಗೆ ಇರುವ ಕಾಯ್ದೆಗಳ ಬಗ್ಗೆ ಅರಿವು ಹೊಂದಿ ನ್ಯಾಯ ಪಡೆಯಬೇಕೆಂದರು.

Online shopping ಶ್ರೀ ಪಾರ್ಶ್ವನಾಥ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ.ಎಸ್. ಪ್ರಶಾಂತ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ಬಿ.ಡಿ. ಯೋಗಾನಂದ, ವಾಸವಿ ವಿದ್ಯಾಲಯದ ಕಾರ್ಯದರ್ಶಿ ಎಸ್.ಕೆ. ಶೇ಼಼ಷಾಚಲ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಸಂಚಾಲಕ ಎಂ.ಎಂ. ಜಯಸ್ವಾಮಿ, ಕಾನೂನು ಮಾಪನ ಶಾಸ್ತç ಇಲಾಖೆಯ ಸಹಾಯಕ ನಿಯಂತ್ರಕರಾದ ಸಿ.ಎಂ. ಧನಲಕ್ಷ್ಮೀ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರಾದ ಡಿ. ಸತೀಶ್, ಸಹಾಯಕ ನಿರ್ದೇಶಕರಾದ ಲಕ್ಷ್ಮೀ ಉಪಸ್ಥಿತರಿದ್ದರು.

ಕಾನೂನು ಮಾಪನ ಶಾಸ್ತç ಇಲಾಖೆ ವತಿಯಿಂದ ತೂಕ ಮತ್ತು ಅಳತೆಯ ಬಗ್ಗೆ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿತ್ತು. ಲೋಲಾಕ್ಷಿ ಮತ್ತು ತಂಡ ಸ್ವಾಗತಿಸಿ, ಎಂ. ಮೇಘನಾ ಸ್ವಾಗತಿಸಿದರು.

Shivamogga-Bangalore Train ಬೆಂಗಳೂರು- ತಾಳಗುಪ್ಪ ಇಂಟರ್ ಸಿಟಿ ಎಕ್ಸ್ ಪ್ರೆಸ್ ಗೆ ಹೊಸ ಕೋಚ್ ಗಳ ಸೇರ್ಪಡೆ-ಸಂಸದ ಬಿ.ವೈ.ರಾಘವೇಂದ್ರ.

0

Shivamogga-Bangalore Train ಬೆಂಗಳೂರು ಮತ್ತು ತಾಳಗುಪ್ಪ ನಡುವೆ ಸಂಚರಿಸುವ ರೈಲು ಸಂಖ್ಯೆ 20651/20652 ಕ್ಕೆ ಇಂದಿನಿಂದ (ಮಾರ್ಚ್ 26, 2026) ಅತ್ಯಾಧುನಿಕ ಸೌಲಭ್ಯವುಳ್ಳ ಹೊಸ ಎಲ್‌ಎಚ್‌ಬಿ (LHB) ಬೋಗಿಗಳನ್ನು ಅಳವಡಿಸಿ ಚಾಲನೆ ನೀಡಲಾಗಿದೆ.

ನಮ್ಮ ಶಿವಮೊಗ್ಗ ಕ್ಷೇತ್ರದ ಜನರ ರೈಲ್ವೆ ಬೇಡಿಕೆಗಳನ್ನು ಈಡೇರಿಸಲು ಸತತವಾಗಿ ಶ್ರಮಿಸುತ್ತಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ, ಕೇಂದ್ರ ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಅವರಿಗೆ ಹಾಗೂ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಅವರಿಗೆ ಶಿವಮೊಗ್ಗ ಸಂಸದರಾದ ಬಿ.ವೈ. ರಾಘವೇಂದ್ರ ಅವರು ಹೃತ್ಪೂರ್ವಕ ಧನ್ಯವಾದ ಹೇಳಿದ್ದಾರೆ.

Pallavi G ನಿವೇಶನ ರಹಿತ ಅಲೆಮಾರಿ ಜನಾಂಗದವರಿಗೆ ಮೊದಲ ಆದ್ಯತೆ ನೀಡಿ- ಜಿ.ಪಲ್ಲವಿ.

0

Pallavi G ಶಿವಮೊಗ್ಗ ತಾಲ್ಲೂಕುಗಳಲ್ಲಿನ ಸಮಾಜ ಕಲ್ಯಾಣ ಅಧಿಕಾರಿಗಳು, ತಹಶೀಲ್ದಾರರು, ಇಓ, ಪಿಡಿಓ ಗಳು ನಿವೇಶನ ರಹಿತ ಅಲೆಮಾರಿ ಜನಾಂಗದವರಿಗೆ ನಿವೇಶನ ನೀಡುವುದಕ್ಕೆ ಮೊದಲ ಆದ್ಯತೆ ನೀಡಬೇಕೆಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ದಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ ತಿಳಿಸಿದರು.

ಶಿವಮೊಗ್ಗ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ದಿ ನಿಗಮದಿಂದ ಜಾರಿಯಾದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ಮತ್ತು ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಿವಮೊಗ್ಗ ತಾಲ್ಲೂಕಿನ ಗೋಂದಿಚಟ್ನಹಳ್ಳಿಯಲ್ಲಿ ನಿವೇಶನರಹಿತ ಅಲೆಮಾರಿ ಜನಾಂಗದವರು ತಮಗೆ ನಿವೇಶನ ನೀಡುವಂತೆ ನಿರಂತರವಾಗಿ ಬೇಡಿಕೆ ಇಟ್ಟರೂ, ಅದಕ್ಕೆ ಆದ್ಯತೆ ನೀಡದೇ ಬೇರೆ ಕಾರಣಗಳಿಗೆ ಭೂಮಿ ನೀಡಲು ಮುಂದಾಗಿರುವುದು ತಮ್ಮ ಗಮನಕ್ಕೆ ಬಂದಿದ್ದು, ಇಲಾಖೆ ಅಧಿಕಾರಿಗಳು, ತಹಶೀಲ್ದಾರರು, ಇಓ ಮತ್ತು ಪಿಡಿಓ ಗಳು ಈ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ ಮೊದಲು ನಿವೇಶನರಹಿತ ಅಲೆಮಾರಿಗಳಿಗೆ ನಿವೇಶನ ಗುರುತಿಸಿ ನೀಡುವುದಕ್ಕೆ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದ ಅವರು ನಿಗಮದಲ್ಲಿ ಸುಮಾರು 3300 ವಸತಿ ಸೌಲಭ್ಯ ಕಲ್ಪಿಸಲು ರೂ.100 ಕೋಟಿ ಅನುದಾನ ಲಭ್ಯವಿದ್ದು, ಜಿಲ್ಲೆಯಲ್ಲಿ ಈ ವಸತಿ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.

ಹಾಗೂ ಎಲ್ಲಾ ತಾಲ್ಲೂಕುವಾರು ಸಂಬಂಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ನಿವೇಶನರಹಿತ ಅಲೆಮಾರಿ ಜನಾಂಗದವರ ಪಟ್ಟಿಯನ್ನು ಒಂದು ವಾರದೊಳಗೆ ನೀಡುವಂತೆ ಸೂಚಿಸಿದರು.
ಸಮರ್ಪಕ ಮಾಹಿತಿ ನೀಡಲು ಸೂಚನೆ : ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಪರಿಶಿಷ್ಟ ಜಾತಿ ಮತ್ತು ಪಂಗಡದ ಅಲೆಮಾರಿ ಜಾತಿಗಳ ಕುರಿತು ಹಾಗೂ ತಾಲ್ಲೂಕುವಾರು ನಿವೇಶನ ರಹಿತರ ಮಾಹಿತಿಯನ್ನು ಸಮರ್ಪಕವಾಗಿ ನೀಡಿಲ್ಲ. ಅದನ್ನು ಶೀಘ್ರದಲ್ಲಿ ಸರಿಪಡಿಸಿ ನೀಡಬೇಕು ಎಂದು ತಾಕೀತು ಮಾಡಿದರು.

ವಸತಿ ಮತ್ತು ಇತರೆ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಅಗತ್ಯವಾದ ಮೂಲ ದಾಖಲೆಗಳಾದ, ಆಧಾರ್, ಜಾತಿ ಪ್ರಮಾಣ ಪತ್ರ, ರೇಷನ್ ಕಾರ್ಡ್ನಂತಹ ದಾಖಲೆಗಳು ಬಹಳಷ್ಟು ಅಲೆಮಾರಿ ಜನಾಂಗದವರ ಬಳಿ ಇಲ್ಲ. ಈ ಮೂಲ ದಾಖಲಾತಿಗಳನ್ನು ಒದಗಿಸಲು ತಹಶೀಲ್ದಾರರು ಸಹಕರಿಸಬೇಕು. ಸ್ಥಾನಿಕ ಚೌಕಾಸಿ ಮಾಡಿ ಜಾತಿ ಪ್ರಮಾಣ ಪತ್ರ ನಿಡಬೇಕು ಎಂದು ತಿಳಿಸಿದರು.

Pallavi G 2025-26 ನೇ ಸಾಲಿಗೆ ನಿಗಮದಿಂದ ಅಲೆಮಾರಿ ಜನಾಂಗಗಳಿಗೆ ಜಾರಿಗೊಳಿಸಿರುವ ವಿವಿಧ ಯೋಜನೆಗಳನ್ನು ಅವರಿಗೆ ನಿಗದಿತ ಸಮಯದೊಳಗೆ ತಲುಪಿಸಬೇಕು. ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ದಾಖಲಾತಿಗಳನ್ನು ಒಂದು ತಿಂಗಳಲ್ಲಿ ಸಲ್ಲಿಸದಿದ್ದಲ್ಲಿ ಅಲೆಮಾರಿ ಜನಾಂಗದ ಇತರರಿಗೆ ಅವಕಾಶ ಕೊಡಬೇಕು. ಉದ್ಯಮಶೀಲತಾ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆಗಳಡಿ ಫಲಾನುಭವಿಗಳನ್ನು ನಿಗದಿತ ಅವಧಿಯೊಳಗೆ ಆಯ್ಕೆ ಮಾಡಿ ಸೌಲಭ್ಯ ನೀಡುವಂತೆ ಸೂಚಿಸಿದರು.

ವಸತಿ ಶಾಲೆಗಳಲ್ಲಿ ಅಲೆಮಾರಿ ಜನಾಂಗಗಳಿಗೆ ಶೇ.10 ಮೀಸಲಾತಿಯ ವಿವರ ಪಡೆದ ಅವರು ಅಲೆಮಾರಿ ಜನಾಂಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದರು.
ಬೊಮ್ಮನಕಟ್ಟೆ ಗ್ರಾ ಪಂ ವ್ಯಾಪ್ತಿಯ 12 ಅಲೆಮಾರಿ ಜನಾಂಗದ ಕುಟುಂಬಗಳಿಗೆ ನಿವೇಶನ ಇಲ್ಲ. ಇವರಿಗೆ ನಿವೇಶನ ಒದಗಿಸಲು ಕ್ರಮ ಕೈಗೊಳ್ಳಬೇಕು. ಶಿಕಾರಿಪುರದಲ್ಲಿ ಹಂದಿಜೋಗಿ ಜನಾಂಗದ 7 ಕುಟುಂಬಗಳಿಗೆ ನಿವೇಶನ ಇಲ್ಲ. ಪುರಸಭೆಯವರು ಇವರಿಗೆ ನಿವೇಶನ ಒದಗಿಸಿ ಮಾಹಿತಿ ನೀಡಬೇಕೆಂದರು. ಹೊಸನಗರ ತಾಲ್ಲೂಕಿನ ಜೇನಿ ಗ್ರಾಮದ ಶಿಳ್ಳೇಕ್ಯಾತ ಜನಾಂಗದ 20 ಕುಟುಂಬಗಳಿಗೆ ಮೂಲಭೂತ ಸೌಲಭ್ಯ ಒದಗಿಸುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಿವಮೊಗ್ಗ ತಾಲ್ಲೂಕಿನ ಕಲ್ಲಾಪುರ ಗ್ರಾಮದಲ್ಲಿ ಅಲೆಮಾರಿ ಜನಾಂಗದವರು ಅರಣ್ಯ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದಾರೆಂಬ ಕಾರಣಕ್ಕೆ ಮೂಲಭೂತ ಸೌಕರ್ಯಗಳು ಸಿಗುತ್ತಿಲ್ಲ. ಮೂಲಭೂತ ಸೌಕರ್ಯಗಳು, ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿರುವ ಈ ಜನಾಂಗದವರು ಯಾವ ಜಾಗದಲ್ಲಿ ವಾಸಿಸುತ್ತಿದ್ದಾರೆ ಎಂದು ಖಾತ್ರಿಪಡಿಸಿಕೊಂಡು, ಮೂಲಭೂತ ಸೌಕರ್ಯಗಳು ಮತ್ತು ಸರ್ಕಾರದ ಸೌಲಭ್ಯಗಳು ಸಿಗುವಂತೆ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಅಲೆಮಾರಿ ಜನಾಂಗಗಳು ವಾಸಿಸುತ್ತಿರುವ ಸ್ಥಳಗಳಿಗೆ ಅಧಿಕಾರಿಗಳು ಭೇಟಿ ಅವರನ್ನೆಲ್ಲ ಒಂದೆಡೆ ಸೇರಿಸಿ ಸರ್ಕಾರದ ಸೌಲಭ್ಯಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಮಾಡಬೇಕು. ಐಇಸಿ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಮಾಡಬೇಕು ಎಂದು ತಿಳಿಸಿದರು.

ಮಿಷನ್ ಸುರಕ್ಷಾ ಅಭಿಯಾನದಡಿ ಬಾಲ್ಯ ವಿವಾಹ ಕುರಿತು ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಬೇಕು. ಈಗಾಗಲೇ ಕೈಗೊಂಡಿರುವ ಚಟುವಟಿಕೆಗಳ ಕುರಿತು ವರದಿ ನೀಡಬೇಕು ಎಂದರು.
ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ, ಅಧಿಕಾರಿಗಳು ಸಭೆಗೆ ಸಮರ್ಪಕವಾದ ಮಾಹಿತಿಯನ್ನು ನೀಡಬೇಕು. ಅಲೆಮಾರಿ ಜನಾಂಗಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿಯನ್ನು ಇನ್ನೆರಡು ದಿನಗಳಲ್ಲಿ ತಮಗೆ ನೀಡಬೇಕು. ನಿಗದಿತ ವೇಳೆಯೊಳಗೆ ಸೌಲಭ್ಯ, ಯೋಜನೆಗಳನ್ನು ಅವರಿಗೆ ತಲುಪಿಸಬೇಕು. ಹಾಗೂ ಅಲೆಮಾರಿ ಜನಾಂಗದವರು ತಮ್ಮನ್ನು ನೇರವಾಗಿ ಭೇಟಿಯಾಗಿ ಅಹವಾಲು ನೀಡಬಹುದೆಂದು ತಿಳಿಸಿದರು.

ಸಭೆಯ ನಂತರ ನಿಗಮದ ಅಧ್ಯಕ್ಷರು ಪ.ಜಾ, ಪ.ಪಂ ಗಳ ಅಲೆಮಾರಿ ಸಮುದಾಯದ ಜನರಿಂದ ವಿವಿಧ ರೀತಿಯ ಕುಂದು ಕೊರತೆಗಳ ಅಹವಾಲುಗಳನ್ನು ಸ್ವೀಕರಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ರಮೇಶ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲೇಶಪ್ಪ, ನಿಗಮದ ಸದಸ್ಯರು, ನಿಗಮದ ಕೋಆರ್ಡಿನೇಟರ್ ಆನಂದಕುಮಾರ್, ಎಲ್ಲ ತಾಲ್ಲೂಕುಗಳ ತಹಶೀಲ್ದಾರರು, ಇಓ ಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

Klive.news ಸಂಪಾದಕೀಯ.ಜಗವೇ ನಾಟಕ ರಂಗ..ಡಾ.ಸುಧೀಂದ್ರ.ಪ್ರಧಾನ ಸಂಪಾದಕರು. ಕೆಲೈವ್ .ನ್ಯೂಸ್

0

Klive.news ಜಗದೀಶನಾಡುವ ಜಗವೇ ನಾಟಕ ರಂಗ
ಈ ಹಾಡು ಕೇವಲ ಸಿನಿಮಾ ನೋಡಿ ಅರ್ಥಮಾಡಿಕೊಳ್ಳುವುದಲ್ಲ. ಪ್ರಾಚೀನವಾಗಿ ನಮ್ಮ ಸನಾತನ ತಳಹದಿಯಲ್ಲೇ ಈ ಸಂದೇಶವಿದೆ.
ಭಗವಂತ ವಿಷ್ಣುವಿಗೆ ಜಗನ್ನಾಟಕ ಸೂತ್ರಧಾರಿ. ಜಗನ್ನಾಥ ,ರಂಗನಾಥ ಎಂಬೆಲ್ಲ ಸ್ತುತಿಗಳಿವೆ.

ನಾಟಕದ ಅಂಶಗಳು ನಮ್ಮಲ್ಲಿಲ್ಲವೆ? ಅಂದರೆ ನಮ್ಮದೇ ಮನೋಧರ್ಮಗಳ ಬಿಂಬವೇ ನಾಟಕವಾಗಿ ರಂಗದಮೇಲೆ ಅಭಿನಯವಾಗುತ್ತದೆ.
ಅಂದರೆ ನಮ್ಮಿಂದಲೇ ಆ ವಸ್ತು ,ರಂಗರೂಪ ತಾಳುತ್ತದೆ. ಪಾತ್ರಧಾರಿಗಳು ನಟಿಸುತ್ತಾರೆ.
ಅಂದರೆ ಯಾಕೆ ಈ ಪ್ರಯೋಗ? ಇದು ಬೇಕೆ? ರಂಗರೂಪ ಯಾಕೆ ಪ್ರದರ್ಶಿತವಾಗಬೇಕು? ಅದು ಅನಿವಾರ್ಯವೆ? ಔಚಿತ್ಯವಿದೆಯೆ? ಎಂಬೆಲ್ಲ ಪ್ರಶ್ನೆಗಳು ಕಾಡುತ್ತವೆ.

ಕೇವಲ ರಂಜನೆಯ ಪ್ರಯತ್ನವಾಗಿ ಜನಿಸಿದ ಈ ಮಾದರಿ ಇಂದು ಸಾಮಾಜಿಕರನ್ನ ತಿದ್ದುವ ಹೊಣೆ ಹೊತ್ತಿದೆ.

Rama Navami ಶ್ರೀರಾಮನವಮಿ: ಅರ್ಥಪೂರ್ಣವಾಗಿಸೋಣ.ಲೇ: ಎನ್.ಜಯಭೀಮ ಜೊಯ್ಸ್.

0

Rama Navami ಶ್ರೀವಿಷ್ಣುವಿನ ದಶಾವತಾರಗಳಲ್ಲಿ ಏಳನೆಯ ಅವತಾರ ಶ್ರೀರಾಮಾವತಾರ.ಶ್ರೀರಾಮ ಭರತಖಂಡದಲ್ಲಿ ಆದರ್ಶ ಪುರುಷನಾಗಿ ಬದುಕಿ,ರಾಜ್ಯವನ್ನಾಳಿ ಮಾನವತ್ವದಿಂದ ದೈವತ್ವಕ್ಕೇರಿ,ಮುಂದಿನ ಜನಾಂಗಕ್ಕೆ ಮಾರ್ಗದರ್ಶಕನಾದ.
ನಮ್ಮ ಪ್ರತಿಯೊಬ್ಬರ ಒಳಗೂ ಒಬ್ಬ ರಾಮನಿದ್ದಾನೆ
ಮತ್ತು ಒಬ್ಬ ರಾವಣನಿದ್ದಾನೆ. ರಾಮನು “ಮರ್ಯಾದ ಪುರುಷೋತ್ತಮ”ಅಂದರೆ ಮನುಷ್ಯನು ಮಿತಿಯೊಳಗೆ ಇದ್ದುಕೊಂಡು ಹೇಗೆಶ್ರೇಷ್ಠನಾಗಬಹುದು ಎಂಬುದಕ್ಕೆ ಸಾಕ್ಷಿ.ರಾಮನುಸಾತ್ವಿಕ ಗುಣದ ಪ್ರತೀಕ.ತನ್ನ ತಂದೆಯ ಮಾತನ್ನುಉಳಿಸಲು,ಸಿಗಬೇಕಿದ್ದ ರಾಜಪಟ್ಟವನ್ನೇ ತ್ಯಜಿಸಿ ಕಾಡಿಗೆಷಹೋದವನು ಶ್ರೀರಾಮ.ಇಲ್ಲಿ ರಾಜ್ಯಪಟ್ಟ
ಎಂದರೆ ಲೌಕಿಕ ಸುಖ ಮತ್ತು ಅಧಿಕಾರದ ಸಂಕೇತ.
ಅದನ್ನು ತ್ಯಜಿಸುವುದು ಎಂದರೆಅಹಂಕಾರವನ್ನುಬಿಡುವುದು ಎಂದರ್ಥ.ಮತ್ತೊಂದೆಡೆ,ರಾವಣನುಹತ್ತುತಲೆಗಳಅಸುರ.ಈ ಹತ್ತು ತಲೆಗಳು ಕೇವಲ ದೈಹಿಕ ರೂಪವಲ್ಲ,ಅವು ನಮ್ಮ ಐದು ಜ್ಞಾನೇಂದ್ರಿಯಗಳುlಮತ್ತು ಐದು ಕರ್ಮೇಂದ್ರಿಯಗಳ ಸಂಕೇತ.ರಾವಣನು ಮಹಾನ್ಶಪಂಡಿತ ನಾಗಿದ್ದರೂ,ವೇದ ಪಾರಂಗತನಾಗಿದ್ದರೂ ತನ್ನ ಇಂದ್ರಿಯಗಳ ಮೇಲೆ ಹತೋಟಿ ಹೊಂದಿರಲಿಲ್ಲ.ಯಾವಾಗ ಮನುಷ್ಯ ತನ್ನ ಇಂದ್ರಿಯಗಳಿಗೆ ದಾಸ ನಾಗುತ್ತಾನೋ,ಆಗ ಅವನುಎಷ್ಟೇಜ್ಞಾನಿಯಾಗಿದ್ದರೂ ರಾವಣನಂತೆ ಪತನ ಹೊಂದುತ್ತಾನೆ.ಶ್ರೀರಾಮನು ರಾವಣ
ನಿಂದಶಕಡೆಯ ಉಪದೇಶವನ್ನು ಲಕ್ಷ್ಮಣನಮುಖಾಂತರ ತಿಳಿಯಲಪೇಕ್ಷಿಸಿದಾಗ ಸಾವಿನ ದಡೆಯಲ್ಲಿದ್ದ ರಾವಣನು “ನಾನುಇಂದ್ರಿಯಗಳಿಗೆದಾಸನಾದೆ,ಪರಸ್ತ್ರೀಯನ್ನುವ್ಯಾಮೋಹಿಸಿದೆ,ಇದು ನನ್ನ ವಿನಾಶಕ್ಕೆ ಕಾರಣವಾಯಿತು”ಎಂದು ಅವನು ಒಪ್ಪಿಕೊಳ್ಳುತ್ತಾನೆ.ಇದು ಮಾನವಕುಲಕ್ಕೆ ನೀಡುವ ಎಚ್ಚರಿಕೆ,ಬುದ್ಧವಂತಿಕೆಗಿಂತ ಶೀಲ ಮುಖ್ಯ ಎನ್ನುವುದನ್ನು ಪ್ರತಿಬಿಂಬಿಸುತ್ತದೆ.ಶ್ರೀರಾಮನು ಧರ್ಮವನ್ನು ಎತ್ತಿ ಹಿಡಿಯಲು “ಅರ್ಥ”ಎಂದರೆಸಂಪತ್ತು ಹಾಗೂ ರಾಜ್ಯವನ್ನು ಮತ್ತುಕಾಮಅಂದರೆಆಸೆಹಾಗೂಸುಖವನ್ನುಬದಿಗೊತ್ತಿದನು.
ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಹೇಳುವಂತೆ,”ಧರ್ಮಕ್ಕೆ ಅವಿರೋಧವಾದ ಕಾಮ ನಾನೇ” ಅಂದರೆ,ನಮ್ಮ ಆಸೆಗಳು ಧರ್ಮದ ಚೌಕಟ್ಟಿನಲ್ಲಿದ್ದಾಗ ಮಾತ್ರ ಅವು ಜೀವನಕ್ಕೆಶೋಭೆ ತರುತ್ತವೆ.ರಾವಣನು ಧರ್ಮವನ್ನು ಮೀರಿ ಕಾಮದ ಬೆನ್ನು ಹತ್ತಿದ್ದರಿಂದಲೇ ಸರ್ವನಾಶವಾದನು.ಶ್ರೀರಾಮನ ಚಾರಿತ್ರ್ಯ ಎಂತಆದಹುದುಎಂದರೆ,ಅವನಶತೃಗಳೂಅವನನ್ನುಗೌರವಿಸುತ್ತಿದ್ದರು.ಆಧ್ಯಾತ್ಮಿಕವಾಗಿ ಸೀತೆಯು “ಶಾಂತಿ”ಯಸಂಕೇತ.
ಆ ಶಾಂತಿಯನ್ನು ರಾವಣನೆಂಬ “ಅಹಂಕಾರ” ಮತ್ತು “ಕಾಮ” ಅಪಹರಿಸುತ್ತವೆ.ಆ ಶಾಂತಿಯನ್ನು ಮರಳಿ ಪಡೆಯಲು ರಾಮನೆಂಬ “ಆತ್ಮ ಹನುಮಂತ (ರಾಮನ ಅಂತರಂಗ ಭಕ್ತ) ನೆಂಬ “ಮನಸ್ಸಿನ” ಸಹಾಯದಿಂದ ಲಂಕೆ ಎಂಬ“ದೇಹ”ದಒಳಗೆಹೋಗಿಯುದ್ಧಮಾಡಬೇಕಾಗುತ್ತದೆ.ಈ ಯುದ್ಧವು ಹೊರಗಿನದಲ್ಲ.ನಮ್ಮೊಳಗಿನ ಅಜ್ಞಾನದ ವಿದುದ್ಧದ ಹೊರಾಟ.ರಾಮಾಯಣವು ನಮಗೆಸಂಬಂಧಗಳ ಮೌಲ್ಯವನ್ನುಕಲಿಸುತ್ತದೆ.ರಾಮನುಒಬ್ಬಆದರ್ಶಮಗನಾಗಿ,ಸಹೋದರನಾಗಿ,ಪತಿಯಾಗಿ ಮತ್ತು ರಾಜನಾಗಿ ಹೇಗೆ ವರ್ತಿಸಬೇಕುಎಂಬುದನ್ನುತೋರಿಸಿಕೊಟ್ಟಿದ್ದಾನೆ.ಅಧಿಕಾರಕ್ಕಾಗಿ ಹೊಡೆದಾಡುವ ಈ ಕಾಲದಲ್ಲಿ ತನಗೇ ಬರಬೇಕಾಗಿದ್ದ Rama Navami  ರಾಜ್ಯಪಟ್ಟವನ್ನು ತಮ್ಮ ಭರತನಿಗೆಬಿಟ್ಟುಕೊಡುವ ರಾಮ ಮತ್ತುಅಣ್ಣನಪಾದುಕೆಗಳನ್ನೇಇಟ್ಟುರಾಜ್ಯವಾಳುವಭರತ,ಇವರಿಬ್ಬರೂ ನಿಸ್ವಾರ್ಥತೆಯ ಪಾಠವನ್ನು ಕಲಿಸಿಕೊಡುತ್ತಾರೆ.
ರಾಮಾಯಣವುನಮಗೆನೀಡುವಸಂದೇಶಸ್ಪಷ್ಟವಾಗಿದೆ.”ಹೃದಯದಲ್ಲಿರಾಮನಿರುವಕಡೆಕಾಮವಿರುವುದಿಲ್ಲ,ಕಾಮವಿರುವ ಕಡೆ ರಾಮನಿರುವುದಿಲ್ಲ.ನಾವು ಹೊರಗಿನ ರಾಮನನ್ನು ಪೂಜಿಸುವುದರ ಜೊತೆಗೆ,ನಮ್ಮೊಳಗಿನ ರಾವಣತ್ವವನ್ನು ತೊಲಗಿಸಬೇಕಾಗಿದೆ.ಇಂದ್ರಿಯಗಳನ್ನು ಗೆದ್ದು ಧರ್ಮದ ಹಾದಿಯಲ್ಲಿ ನಡೆದಾಗ ಮಾತ್ರ ನಮ್ಮ ಜೀವನವೂ “ರಾಮರಾಜ್ಯ”ವಾಗಲು ಸಾಧ್ಯ.ರಾಮಾಯಣವು ಕೇವಲ ಹಿಂದಿನ ಕಥೆಯಲ್ಲ,ಅದುನಮ್ಮದೈನಂದಿನಬದುಕಿನಪ್ರತಿಕ್ಷಣ
ನಿರ್ಧಾರಗಳ ಸಂಕಲನ.
ಶ್ರೀರಾಮನವಮಿಆಚರಣೆಬರೇಪಾನಕ,ಕೋಸಂಬರಿ ಹಂಚಿಕೆಗೆ ಸೀಮಿತವಾಗದೇಶ್ರೀರಾಮನ ಆದರ್ಶಗಳನ್ನು
ಸ್ವಲ್ಪವಾದರೂಪಾಲಿಸುತ್ತೇವೆಂದುಪ್ರತಿಜ್ಞೆಮಾಡಿದರೆ,ರಾಮನವಮಿಆಚರಣೆ ಅರ್ಥಪೂರ್ಣವಾದೀತು!.