Wednesday, May 6, 2026
Wednesday, May 6, 2026
Home Blog Page 23

JCI Sports and Cultural Club ಬಾಕ್ಸ್ ಕ್ರಿಕೆಟ್ ಟೂರ್ನಿ: ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಚಾಂಪಿಯನ್ಸ್

0

JCI Sports and Cultural Club ಜೆಸಿಐ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ವತಿಯಿಂದ ಜೆಸಿಐ ವಲಯ 24ರ ಜೆಎಸಿ ಹಾಗೂ ಜೆಕಾಮ್ ಸಹಯೋಗದಲ್ಲಿ ಆಯೋಜಿಸಿದ್ದ ಬಾಕ್ಸ್ ಕ್ರಿಕೆಟ್ ಟೂರ್ನಮೆಂಟ್ 2.0 ಕ್ರೀಡಾಕೂಟದಲ್ಲಿ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಗಾಡಿಕೊಪ್ಪದ ಸ್ಪೋರ್ಟ್ಸ್ ಜೋನ್‌ನಲ್ಲಿ ಆಯೋಜಿಸಿದ್ದ ಬಾಕ್ಸ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಈ ಬಾರಿ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಸಂಸ್ಥೆಯು ಈ ಸಲ ಕಪ್ ನಮ್ದೆ ಎನ್ನುವ ಘೋಷವಾಕ್ಯದೊಂದಿಗೆ ಕಣಕ್ಕಿಳಿದು ಎರಡನೇ ಬಾರಿಯೂ ಕೂಡ ಪ್ರಥಮ ಸ್ಥಾನ ಪಡೆಯುವುದರ ಮೂಲಕ ಜೆಸಿಐ ಸಂಸ್ಥೆಯಲ್ಲಿ ಇತಿಹಾಸ ಸೃಷ್ಟಿಸಿದೆ.

ಸಹ್ಯಾದ್ರಿ ಸ್ಮ್ಯಾಶರ್ಸ್ ತಂಡದ ನಾಯಕ ಸಂತೋಷ ಕುಮಾರ್ ಉತ್ತಮವಾದ ಪ್ರದರ್ಶನ ನೀಡಿ ಒಟ್ಟು 16 ವಿಕೆಟ್ ಮತ್ತು ಒಟ್ಟು 86 ರನ್ ಹೋಡಿಯುವುದರ ಮೂಲಕ ಹೈಯೆಸ್ಟ್ ವಿಕೆಟ್ ಟೇಕರ್ ಎಂಬ ಪ್ರಶಸ್ತಿ ತಮ್ಮ ಪಾಲಿಗೆ ಪಡೆದುಕೊಂಡಿದ್ದಾರೆ.

ತಂಡದ ಎಲ್ಲ ಆಟಗಾರರಾದ ಈಶ್ವರ್, ನಿತೀನ್, ಸಂತೂ, ಅಭಿಷೇಕ, ಅನುಷ್ ಗೌಡ, ಉಮಾಮಣಿ, ಸಿಂಚನ, ಸಿ.ಕೆ.ವಿಜಯ್ ಕುಮಾರ್, ದಿಗಂತ್ ಮಂಜುನಾಥ್ ಮತ್ತಿತ್ತರು ಉತ್ತಮವಾದ ಪ್ರದರ್ಶನ ನೀಡುವುದರ ಮೂಲಕ ಪ್ರಥಮ ಸ್ಥಾನ ಪಡೆಯಲು ಸಹಕಾರಿಯಾಗಿದೆ. ಸಹ್ಯಾದ್ರಿ ಸ್ಮ್ಯಾಶರ್ಸ್ ತಂಡದ ಮಾಲೀಕ ಸುರೇಂದ್ರ ಕೋಟ್ಯಾನ್ ತಂಡದ ಸಂಪೂರ್ಣ ಜವಾರ್ಬ್ದಾರಿ ಪಡೆದು ಉತ್ತಮವಾದ ಓನರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಲಯ 24ರ ಸಹಾಕಾರದೊಂದಿಗೆ ಕ್ರೀಡಾಕೂಟ ಉತ್ತಮ ಯಶಸ್ವಿಯಾಗಿ ಮೂಡಿಬಂದಿದೆ.

JCI Sports and Cultural Club ಡಿಸಿಎಂ ಕೆ.ಎಸ್.ಈಶ್ವರಪ್ಪ ಕ್ರೀಡಾಕೂಟಕ್ಕೆ ಚಾಲನೆ ನೀಡಿದ್ದರು. ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಜೆಸಿಐ ವಲಯ ನಿರ್ದೇಶಕ ಜಿ.ಗಣೇಶ್ ಮತ್ತಿತರರ ಗಣ್ಯರು ಪಾಲ್ಗೊಂಡಿದ್ದರು.

B.Y. Raghavendra ಭಾರತದಲ್ಲಿ ಮಹಿಳಾ ಮೀಸಲಾತಿಯನ್ನ ಐತಿಹಾಸಿಕವಾಗಿ ಜಾರಿಗೆ ತರಲಾಗುತ್ತಿದೆ- ಬಿ.ವೈ.ರಾಘವೇಂದ್ರ

0

B.Y. Raghavendra ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಬುತ್ವವಾದ ಭಾರತದಲ್ಲಿ ಐತಿಹಾಸಿಕ ಮಹಿಳಾ ಮೀಸಲಾತಿ ಜಾರಿಗೆ ತರಲಾಗುತ್ತಿದೆ.ಮೂಲ ಕಾನೂನಿಗೆ ತಿದ್ದುಪಡಿ ತಂದು ಕ್ಷೇತ್ರ ಮರು ವಿಂಗಡಣೆ ಮಾಡಿ ಮಹಿಳೆಯರಿಗೆ ಸ್ಥಾನ ನೀಡುವ ಕೆಲಸ ಆಗಿದೆ. 33% ಸ್ಥಾನವನ್ನು ಮಹಿಳೆಯರಿಗೆ ಮೀಸಲು ಇಡುವ ಈ ಕಾಯ್ದೆಯಿಂದ ಆಗಲಿದೆ. ಈ ಅದಿಸೂಚನೆ ಕೇವಲ ಕಾಯ್ದೆ ಅಲ್ಲ ದೇಶದ ಮಹಿಳೆಯರಿಗೆ ಕೊಡುತ್ತಿರು ಗೌರವ. ನಾರಿ ಶಕ್ತಿಯು 2026 ಚುನಾವಣೆಯಲ್ಲಿ ಈ ಮೀಸಲಾತಿ ಸಿಗಲಿದೆ ಎಂದು ತಿಳಿಸಿದ್ದಾರೆ.

ಲೋಕಸಭೆಯಲ್ಲಿ ೫೪೩ ರಿಂದ ೮೫೦ ಕ್ಕೆ ಸ್ಥಾನಗಳಿಗೆ ಏರಿಕೆ ಆಗಲಿದೆ. 270 ಕ್ಕೂ ಹೆಚ್ಚು ಸ್ಥಾನಗಳು ಮಹಿಳೆಯರಿಗೆ ಸಿಗಲಿದೆ.ಅಡುಗೆ ಮನೆಯಿಂದ ಅಂತರಿಕ್ಷ ಹೋದ ಮಹಿಳೆಯರಿಗೆ ಈ ಸ್ಥಾನ ಸಿಗಲಿವೆ. ಆರ್ಟಿಕಲ್ ೩೭೦ ಕಿತ್ತು ಒಗೆಯುವ ಸಂದರ್ಭದಿದಂದ ಹಿಡಿದು ಈ ನಾರಿ ಶಕ್ತಿ ಮೀಸಲಾತಿ ನೀಡುವ ವರೆಗೂ ನಾನೂ ಲೋಕಸಭಾ ಸದಸ್ಯನಾಗಿ ಕೆಲಸ ಮಾಡಿದ್ದೇನ. ಇದು ನನ್ನ ಕ್ಷೇತ್ರದ ತಾಯಿಯೆಂದಿರು ನೀಡಿರು ಶಕ್ತಿ. ಅವರಿಗೆ ನಾನೂ ಕೃತಜ್ಞತೆ ಸಲ್ಲಿಸುತ್ತೇವೆ ಎಂದಿದ್ದಾರೆ.

ಇಷ್ಟು ವರ್ಷ ಮಹಿಳೆಯರನ್ನ ರಾಜಕೀಯ ಪಕ್ಷಗಳು ವೋಟ್ ಬ್ಯಾಂಕ್ ಆಗಿ ಮಾಡಿಕೊಂಡಿದ್ದರು. ಪ್ರಧಾನಿ ಮೋದಿಯವರು ಈ ಕಾಯ್ದೆವತರುವಾಗ ಗಿಮಿಕ್ ಎಂದು ವಿರೋಧ ಪಕ್ಷದವರು ಹೇಳಿದ್ರು. ಈ ಐತಿಹಾಸಿಕ ಪರಿವರ್ತನೆ ಮಾಡುತ್ತಿರುವ ಪ್ರಧಾನಿ ಮೋದಿಯವರಿಗೆ ಶಿವಮೊಗ್ಗ ಜನತೆ ಪರವಾಗಿ ಅಭಿನಂದನೆ ತಿಳಿಸುತ್ತೇವೆ ಎಂದು ಹೇಳಿದ್ದಾರೆ.

B.Y. Raghavendra ದಕ್ಷಿಣ ಭಾರತಕ್ಕೆ ಸ್ಥಾನ ಹಂಚಿಕೆ ವಿಚಾರದಲ್ಲಿ ಅನ್ಯಾಯ ವಾಗದಂತೆ ನೋಡಿಕೊಳ್ಳಬೇಕು. ಜನಸಂಖ್ಯೆ ಆಧಾರದಮೇಲೆ ವಿಂಗಡಣೆ ಮಾಡಿದರೆ ದಕ್ಷಿಣಕ್ಕೆ ಅನ್ಯಾಯವಾಗುತ್ತದೆ. ಅದನ್ನು ನಾವು ಸದನದಲ್ಲಿ ಕುಳಿತು ಚರ್ಚೆ ಮಾಡುತ್ತೇವೆ. ಮಹಿಳಾ ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡಿಕೊಂಡು ಬರುತ್ತಿದ್ದಾರೆ. ಅವರ ಕಾಲದಲ್ಲಿ ಈ ಕಾಯ್ದೆ ತರಲು ಮುಂದಾಗಿರಲ್ಲಿಲ್ಲ. ಶಿವಮೊಗ್ಗ ಲೋಕಸಭಾ ಕ್ಷೇತ್ರವೇ ಮಹಿಳಾ ಮೀಸಲಾತಿ ಗೆ ಸಿಕ್ಕರೂ ನನಗೆ ಸಂತೋಷ ಎಂದಿದ್ದಾರೆ.

ಶಿವಮೊಗ್ಗ ರವಿಂದ್ರ ನಗರದ ರೈಲ್ವೆ ಹಳಿ ಸನಿಹ ಯುವತಿಯ ಶವ ಪತ್ತೆ

0

ಶಿವಮೊಗ್ಗ ನಗರದ ರವೀಂದ್ರನಗರ ರೈಲ್ವೆ ಟ್ರ್ಯಾಕ್ ಬಳಿ ಅನುಮಾನಾಸ್ಪದ ರೀತಿಯಲ್ಲಿ ಯುವತಿಯ ಶವ ಪತ್ತೆಯಾಗಿರುವ ಘಟನೆ ನಡೆದಿದೆ.

ರೈಲಿಗೆ ಸಿಲುಕಿ ಸತ್ತಿರುವುದಾ? ಅಥವಾ ಬೇರೆ ರೀತಿ ಸಾವಾಗಿದೇಯಾ ಎಂದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.

ಯುವತಿಯ ಶವದ ಬಳಿ ಮೊಬೈಲ್ ಫೋನ್ ಪತ್ತೆಯಾಗಿದ್ದು , ಸ್ಥಳಕ್ಕೆ ರೈಲ್ವೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ

“ಹಳಗೋಡು” ಮಕ್ಕಳ ಬೇಸಿಗೆ ಶಿಬಿರ, ಒಂದು ವಿನೂತನ ಅನುಭವ- ಮಂಜುಳ ರಾಜು

0

ನಮ್ಮ ಸಮಾಜ ದಲ್ಲಿ ಅನೇಕರು ತಮ್ಮದೇ ರೀತಿಯಲ್ಲಿ
“ಸಮಾಜ ಮುಖಿ” ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವವರಿದ್ದಾರೆ. ಅಂತಹವರು ಸರ್ಕಾರದ ಅಥವಾ ಇನ್ನಿತರರ ಯಾವುದೇ ಸಹಾಯ ಬಯಸದೇ ತಮ್ಮಷ್ಟಕ್ಕೆತಾವೇ ಏನಾದರೊಂದು ಕೆಲಸ ಮಾಡುತ್ತಾ ಅದರಲ್ಲಿ ತಮ್ಮ ಸಾರ್ಥಕತೆಯನ್ನು ಪಡೆಯುತ್ತಾರೆ. ಈ ಮಾತು ಯಾಕೆ ಹೇಳುತ್ತಿದ್ದೇನೆ ಎಂದರೆ.ಸಾಗರದ ಸಮೀಪದ “ಹಳಗೋಡಿ”ನಲ್ಲಿ ನೆಲೆಸಿರುವ ಕೃಷಿಕದಂಪತಿಗಳಾದ ಸುರೇಂದ್ರ ಹಾಗೂ ವಿಜಯಶ್ರೀ, ಮೂಲತಹ ರಂಗಭೂಮಿ ಕಲಾವಿದರಾದ ವಿಜಯಶ್ರೀ ಅವರು ತಮ್ಮ ವೃತ್ತಿ ಕೃಷಿಯೊಂದಿಗೆ,ಹತ್ತಿರದ ಸರಕಾರಿ ಶಾಲೆಗೆ ಹೋಗಿ ಮಕ್ಕಳಿಗೆ ಬರವಣಿಗೆ,ನೃತ್ಯ ಹಾಡು, ರಂಗ ತರಬೇತಿ ನೀಡುತ್ತಾರೆ. ಮತ್ತು ಪ್ರತಿ ವರ್ಷ ಏಪ್ರಿಲ್ ನಲ್ಲಿ ಸುತ್ತಮುತ್ತಲಿನ ಮಕ್ಕಳಿಗೆ ಉಚಿತವಾದ ಬೇಸಿಗೆ ಶಿಬಿರ “ಪಚ್ಚೆಹಬ್ಬ” ನಡೆಸುತ್ತಾರೆ.
ಸಂಪನ್ಮೂಲ ವ್ಯತ್ತಿಗಾಗಿ ಅವರ ಸ್ನೇಹಿತರು ವಿವಿಧ ಕ್ಷೇತ್ರಗಳಲ್ಲಿ ಆಸಕ್ತರಾದವರು ಅವರಿಗೆ ಬೆಂಬಲನೀಡುತ್ತಾರೆ. ರಂಗನಟ ಬರ್ಟಿ ಪ್ರತಿವರ್ಷ ಅವರೊಂದಿಗಿರುತ್ತಾರೆ. ಕಲಾವಿದರು, ಸಂಗೀತಗಾರರು ನೃತ್ಯಪಟುಗಳು ಮಕ್ಕಳನ್ನು ಹತ್ತುದಿನ ವಿವಿಧ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ನಾವು ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದಿಂದ ನಿನ್ನೆ ಹೋಗಿದ್ದೆವು. ಮಕ್ಕಳಿಗೆ ಕಥೆಗಳನ್ನು ಹೇಳಿ, ಆಟ ಆಡಿಸಿ ಕೆಲವು ಹೊಲಿಗೆ. ಕಸೂತಿ ತರಬೇತಿ ನೀಡಿದೆವು ಹಳ್ಳಿಯ ಮುಗ್ಧ ಮಕ್ಕಳೊಂದಿಗೆ ಕಳೆದ ದಿನ ಚೇತೋಹಾರಿಯಾಗಿತ್ತು.ಗ್ರಾಮೀಣ ಪ್ರದೇಶದ ಮಕ್ಕಳಿಗೆ ಹೊರಜಗತ್ತಿನ ಪರಿಚಯ ಈ ಮೂಲಕ ಆಗುತ್ತಿರುವುದು, ಇದಕ್ಕೆ ಅನುವುಮಾಡಿಕೊಟ್ಟ ವಿಜಯಶ್ರೀ ಸುರೇಂದ್ರ ದಂಪತಿಗಳ ಪರಿಶ್ರಮವನ್ನು ಮೆಚ್ಚಲೇ ಬೇಕು.

ಬಾಳೆಬರೆ ಘಾಟ್ :ಬಸ್ಸುಗಳ ಪ್ರಯಾಣಿಕರನ್ನ ಇಳಿಸಿ ಬೇರೆ ಬಸ್ಸಿಗೆ ಹತ್ತಿಸುವ ಪ್ರಕ್ರಿಯೆ ಬಗ್ಗೆಸರ್ಕಾರದ ಮಾರ್ಗಸೂಚಿ

0

ಬಾಳೆಬರೆ ಘಾಟ್‌ನಲ್ಲಿ ಭೂಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಈ ಹಿಂದೆ ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು.

ಪ್ರಸ್ತುತ ಸಾರ್ವಜನಿಕರ ಹಿತದೃಷ್ಟಿಯಿಂದ, ಘಾಟಿಯ ಎರಡು ಬದಿಗಳಿಂದ ಬರುವ ಬಸ್ಸುಗಳ ಪ್ರಯಾಣಿಕರನ್ನು ಪರಸ್ಪರ ಬದಲಾಯಿಸುವ (ಅದಲು-ಬದಲು) ಮೂಲಕ ಪ್ರಯಾಣ ಮುಂದುವರಿಸಲು ಕೆಲವು ಷರತ್ತುಗಳಿಗೆ ಒಳಪಟ್ಟು ತಾತ್ಕಾಲಿಕ ಅನುಮತಿ ನೀಡಿ ಆದೇಶಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ. ತಿಳಿಸಿದ್ದಾರೆ.

ಸಂಚಾರ ನಿಯಮಗಳು ಮತ್ತು ಷರತ್ತುಗಳು :

  • ಈ ವ್ಯವಸ್ಥೆಯು ಕೇವಲ ಸಾರ್ವಜನಿಕ ಸಂಪರ್ಕ (ಸ್ಟೇಜ್ ಕ್ಯಾರೇಜ್) ವಾಹನಗಳಿಗೆ ಮಾತ್ರ ಅನ್ವಯಿಸುತ್ತದೆ. ಕೇವಲ 35 ಆಸನವುಳ್ಳ (432 ಸೆಂ.ಮೀ ಚಕ್ರತಳ ಮೀರದ) ಬಸ್ಸುಗಳಿಗೆ ಮಾತ್ರ ತಿರುಗಲು ಅವಕಾಶವಿರುತ್ತದೆ.
  • ವಾಹನ ಬದಲಾವಣೆ ಮಾಡಲು ಪ್ರಯಾಣಿಕರು ಸುಮಾರು 85 ಮೆಟ್ಟಿಲುಗಳನ್ನು ಕಾಲ್ನಡಿಗೆಯಲ್ಲಿ ದಾಟಬೇಕಾಗುತ್ತದೆ. ಈ ಮೆಟ್ಟಿಲುಗಳು ಕಿರಿದಾಗಿರುವುದರಿಂದ ಕೇವಲ ದೈಹಿಕವಾಗಿ ಸದೃಢರಾಗಿರುವವರಿಗೆ ಮಾತ್ರ ಅವಕಾಶ ನೀಡಲಾಗುವುದು.
  • ಭೂಕುಸಿತ ಸಂಭವಿಸಿದ ಜಾಗಕ್ಕೆ ಸಾರ್ವಜನಿಕರ ಪ್ರವೇಶವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಮಳೆಗಾಲ ಹತ್ತಿರವಿರುವುದರಿಂದ ಮೆಟ್ಟಿಲುಗಳಿಗೆ ಹ್ಯಾಂಡ್ ರೈಲ್‌ಗಳನ್ನು ಅಳವಡಿಸಲು ಮತ್ತು ದುರಸ್ತಿ ಮಾಡಲು ಸೂಚಿಸಲಾಗಿದೆ.
  • ಸ್ಥಳದಲ್ಲಿ ತುರ್ತು ಉಪಚಾರಕ್ಕಾಗಿ ಸೂಕ್ತ ವೈದ್ಯಕೀಯ ವ್ಯವಸ್ಥೆಯನ್ನು ಕಲ್ಪಿಸಲು ಜಿಲ್ಲಾಡಳಿತ ನಿರ್ದೇಶಿಸಿದೆ.

ಮಾರ್ಗ ಬದಲಾವಣೆ ವಿವರ

  • ಶಿವಮೊಗ್ಗ-ಹೊಸನಗರ-ನಗರ-ಮಾಸ್ತಿಕಟ್ಟೆ ಮಾರ್ಗವಾಗಿ ಕುಂದಾಪುರಕ್ಕೆ ತೆರಳುವ ವಾಹನಗಳು ಚಂಡಿಕಾ ದೇವಸ್ಥಾನದವರೆಗೆ ಸಂಚರಿಸಬಹುದಾಗಿದ್ದು, ಅಲ್ಲಿ ಸೂಕ್ಷ್ಮತೆ ಮತ್ತು ಜಾಗರೂಕತೆಯಿಂದ ತಿರುಗಿಸಲು ಅವಕಾಶವಿರುತ್ತದೆ.
  • ಚಂಡಿಕ ದೇವಸ್ಥಾನದ ಒಂದನೇ ತಿರುವಿನಲ್ಲಿ ಭೂ ಕುಸಿತವಾದ ಜಾಗದ ಕೆಳಗಿನ ಮೊದಲನೇ ತಿರುವಿನಲ್ಲಿ ಹಾಲಿ ಇರುವ ಕಾಂಕ್ರಿಟ್ ರಸ್ತೆಯ ಕ್ಯಾರೇಜ್-ವೇ-24 ಅಡಿ ಇದ್ದು ಅದಕ್ಕೆ ಹೊಂದಿಕೊಂಡಿರುವ ರಸ್ತೆಯ ಗ್ರಾವೆಲ್ ಶೋಲ್ಡರ್‌ನ್ನು ಸ್ಥಳೀಯ ಸಾರ್ವಜನಿಕರೇ ಕಾಂಕ್ರಿಟ್ ರಸ್ತೆಗೆ ಸಮನಾಗಿ 18 ಅಡಿ ಅಗಲಕ್ಕೆ ಅಗಲೀಕರಣ ಮಾಡಿ ಎತ್ತರಿಸಿ ಮಟ್ಟ ಮಾಡಿರುವುದು ಕಂಡುಬಂದಿದ್ದು, ವಾಹನಗಳನ್ನು ಸೂಕ್ಷ್ಮತೆ ಮತ್ತು ಜಾಗರೂಕತೆಯಿಂದ ತಿರುಗಿಸಲು ಅವಕಾಶವಿರುತ್ತದೆ.
  • ಪ್ರಯಾಣಿಕರು ವಾಹನ ಬದಲಾವಣೆ ಮಾಡಲು ಕಾಲ್ನಡಿಗೆಯಲ್ಲಿ ಓಡಾಡಲು ಪ್ರಸ್ತಾಪಿಸಿರುವ ಮಟ್ಟಿಲುಗಳು ಕಿರಿದಾಗಿದ್ದು ಮೆಟ್ಟಿಲುಗಳನ್ನು ಹತ್ತುವ ಸಮಯದಲ್ಲಿ ಗೊಂದಲವಿಲ್ಲದೇ ದೈಹಿಕವಾಗಿ ಸದೃಢವಾಗಿರುವ ಪ್ರಯಾಣಿಕರಿಗೆ ಮಾತ್ರ ಓಡಾಡಲು ಅವಕಾಶ ಕಲ್ಪಿಸಬಹುದಾಗಿರುತ್ತದೆ. ಈ ಆದೇಶವು ಏಪ್ರಿಲ್ 14 ರಿಂದ ಜಾರಿಗೆ ಬಂದಿದ್ದು, ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ ಎಂದು ಅವರು ತಿಳಿಸಿದ್ದಾರೆ.

Yadav School of Chess Institute ಚೆಸ್ ಆನ್ ಲೈನ್ ತರಬೇತಿ: ಪ್ರತೀ ತಂಡದಲ್ಲಿ ಆರ್ಥಿಕ ಹಿಂದುಳಿದ ಐದು‌ ಮಂದಿಗೆ ಉಚಿತ ಕಲಿಕೆ

0

Yadav School of Chess Institute ಶಿವಮೊಗ್ಗದ ರವೀಂದ್ರನಗರ ಯಾದವ ಸ್ಕೂಲ್ ಆಫ್ ಚೆಸ್ ಸಂಸ್ಥೆಯಿಂದ ಆಸಕ್ತ ಶಾಲಾ ಮಕ್ಕಳಿಗೆ ಆನ್‌ಲೈನ್ ಹಾಗೂ ಆಫ್‌ಲೈನ್ ನಲ್ಲಿ ಏ. 18ರಿಂದ 30ರವರೆಗೆ ಪ್ರತಿದಿನ ಬೆಳಿಗ್ಗೆ 10:30 ರಿಂದ 11:30 ರವರೆಗೆ ಹಾಗೂ ಸಂಜೆ 4:30 ರಿಂದ 5:30 ರವರೆಗೆ ಮತ್ತು ರಾತ್ರಿ 07ರಿಂದ 08ರವರೆಗೆ ಬೇಸಿಗೆ ಚೆಸ್ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.
ತರಬೇತಿಯನ್ನು ಆನ್‌ಲೈನ್ ವಿವಿಧ ವಿಭಾಗಗಳಲ್ಲಿ ನೀಡಲಾಗುವುದು. ಆರ್ಥಿಕವಾಗಿ ಹಿಂದುಳಿದಿರುವ 05 ಬಡ ಹೆಣ್ಣುಮಕ್ಕಳಿಗೆ ಪ್ರತಿ ತಂಡದಲ್ಲಿ ಉಚಿತವಾಗಿ ತರಬೇತಿಗೆ ಸೇರಿಸಿಕೊಳ್ಳಲಾಗುವುದು. ಹೆಚ್ಚಿನ ಮಾಹಿತಿಗೆ ಪ್ರಾಣೇಶ ಯಾದವ್ ಮೊ. 9242401702, 9743819678ರಲ್ಲಿ ಸಂಪರ್ಕಿಸಬಹುದು.

B.Y. Raghavendra ಶಿವಮೊಗ್ಗದ ಸಂಚಾರ ವ್ಯವಸ್ಥೆ ಸುಧಾರಣೆ ಮಾಸ್ಟರ್ ಪ್ಲಾನ್: ಪ್ರಗತಿ ಪರಿಶೀಲನ ಸಭೆ

0

B.Y. Raghavendra ಶಿವಮೊಗ್ಗ ನಗರದ ಸಂಚಾರ ದಟ್ಟಣೆ ನಿವಾರಣೆ ಹಾಗೂ ರಸ್ತೆಗಳ ಅಭಿವೃದ್ಧಿ ಕುರಿತಂತೆ ಇಂದು ಪ್ರವಾಸಿ ಮಂದಿರದಲ್ಲಿ ಸಂಸದರಾದ ಶ್ರೀ ಬಿ. ವೈ. ರಾಘವೇಂದ್ರ ಅವರ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಶಾಸಕರಾದ ಎಸ್.ಎನ್, ಚೆನ್ನಬಸಪ್ಪನವರು ಪಾಲ್ಗೊಂಡರು.

B.Y. Raghavendra ಈ ಸಂದರ್ಭದಲ್ಲಿ ಸುಬ್ಬಯ್ಯ ಕಾಲೇಜಿನಿಂದ ಎಂ.ಆರ್.ಎಸ್ (NH-13) ಹಾಗೂ ಹರಿಗೆಯಿಂದ ಶ್ರೀರಾಂಪುರದವರೆಗಿನ (NH-206) ರಸ್ತೆಗಳ ಸಮಗ್ರ ಅಭಿವೃದ್ಧಿ ಕುರಿತಂತೆ ಹಾಗೂ ಪಾದಚಾರಿಗಳ ಸುರಕ್ಷತೆಗಾಗಿ ನಗರದ ಪ್ರಮುಖ 5 ಕೇಂದ್ರಗಳಲ್ಲಿ (ಎಂ.ಆರ್.ಎಸ್, ಸಂದೇಶ್ ಮೋಟಾರ್ಸ್, ಬಸ್ ನಿಲ್ದಾಣ, ಪ್ರವಾಸಿ ಮಂದಿರ ವೃತ್ತ ಹಾಗೂ ಗಾಡಿಕೊಪ್ಪ) ಜಪಾನ್ ಮಾದರಿಯ Foot Overbridges ನಿರ್ಮಿಸಲು ತಾಂತ್ರಿಕ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.

ಭಾರತದೇಶ ಕಂಡ ಮಹಾನ್ ವ್ಯಕ್ತಿ ,ಡಾ.ಅಂಬೇಡ್ಕರ್- ಶಕುಂತಲಾ ಚಂದ್ರಶೇಖರ್

0

ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರು ಸಮಾನತೆಯ ಹರಿಕಾರ. ದೇಶದ ಮೊದಲ ಕಾನೂನಿನ ಸಚಿವರು, ಭಾರತ ದೇಶ ಕಂಡ ಮಹಾನ್ ವ್ಯಕ್ತಿ. ಸಂವಿಧಾನ ರಚನೆಯ ಕರಡು ಸಮಿತಿಯ ಅಧ್ಯಕ್ಷರಾಗಿದ್ದರು ಎಂದು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನ ಪ್ರಧಾನ ಆಯುಕ್ತಾರಾದ ಶ್ರೀಮತಿ ಶಕುಂತಲಾ ಚಂದ್ರಶೇಖರ್ ನುಡಿದರು ಅವರು ಸ್ಕೌಟ್ ಭವನದಲ್ಲಿ ಆಯೋಜಿಸಲಾಗಿದ್ದ ಡಾ. ಬಿ ಆರ್ ಅಂಬೇಡ್ಕರ್ ರವರ 135 ನೇ ಜನ್ಮದಿನ ಜಯಂತಿ ಸಭೆಯಲ್ಲಿ ಮಾತನಾಡಿ, ಭಾರತದ ಬೃಹತ್ ಸಂವಿಧಾನಕ್ಕೆ ಇವರ ಕೊಡುಗೆ ಅಪಾರ ಹಾಗೂ ಇವರು ಅದ್ಭುತ ಸಂದೇಶ ನೀಡಿದ್ದಾರೆ. ಇತಿಹಾಸವನ್ನು ಮರೆತವರು ಇತಿಹಾಸ ನಿರ್ಮಿಸಲಾರರು, ಬದುಕು ಸುದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು. ವಿದ್ಯಾವಂತರಾಗಿ ಸಂಘಟಿತರಾಗಿ, ಜ್ಞಾನವು ಪ್ರತಿಯೊಬ್ಬ ವ್ಯಕ್ತಿಯ ಜೀವನಕ್ಕೆ ಆಧಾರವಾಗಿದೆ. ಇದೇ ಸಂದರ್ಭದಲ್ಲಿ ಕೇಂದ್ರ ಸ್ಥಾನಿಕ ಆಯುಕ್ತರಾದ ಆಯುಕ್ತರಾದ ಜಿ ವಿಜಯ್ ಕುಮಾರ್ ಮಾತನಾಡುತ್ತ . ಬಿ.ಆರ್.ಅಂಬೇಡ್ಕರ್ ಅವರು ಭಾರತದ ಇತಿಹಾಸದಲ್ಲಿ ಸ್ಮರಣೀಯ ವ್ಯಕ್ತಿ. ಭಾರತೀಯ ಸಮಾಜಕ್ಕೆ ಅವರ ಕೊಡುಗೆ ಅಪಾರ. ಏ.14ರಂದು ಅವರ ಜಯಂತಿ ಆಚರಣೆ ದೇಶಾದ್ಯಂತ ಆಚರಿಸಲಾಗುತ್ತದೆ. ಅಂಬೇಡ್ಕರ್ ಅವರು ಸಮಾಜ ಸುಧಾರಕರಾಗಿದ್ದರು. ನ್ಯಾಯಶಾಸ್ತ್ರಜ್ಞ ಹಾಗೂ ಅರ್ಥಶಾಸ್ತ್ರಜ್ಞರಾಗಿದ್ದರು ಎಂದರು. ಹಾಗೆ ಅಸ್ಪೃಶ್ಯತೆ ಹೋಗಲಾಡಿಸಲು ವಿಶೇಷ ಹೋರಾಟ ಮಾಡಿದ ಮಹಾನ್ ಸಾಧಕ ಇವರ ತತ್ವ ಆದರ್ಶ ಗುಣಗಳು ಇಂದಿನ ಯುವಕರಿಗೆ ದಾರಿದೀಪವಾಗಿದೆ ಎಂದು ನುಡಿದರು ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಕೆ ವಿ ಚಂದ್ರಶೇಖರಯ್ಯ
ಚುಡಾಮಣಿ ಪವಾರ್, ಕೇಂದ್ರ ಕಾಣಿಕ ಆಯುಕ್ತರಾದ ರಾಘವೇಂದ್ರ ವಿಜಯಪುರದ ರೇಂಜರ್ ಲೀಡರ್ ಶ್ವೇತಾ. ಜಿಲ್ಲಾ ತರಬೇತಿ ಆಯುಕ್ತರಾದ ಶಿವಶಂಕರ್. ಹಾಗೂ ರಾಜ್ಯದಿಂದ ಆಗಮಿಸಿದ ರೋವರ್ ರೇಂಜರ್ಸ್ ಮಕ್ಕಳು ಉಪಸ್ಥಿತರಿದ್ದರು.

ಡಾ.ಸಮೀಕ್ಷಾ ರೆಡ್ಡಿ ಅವರ ಬಲಿ ಪಡೆದ ನೀರಾನೆ ” ಹಂಸಿಣಿ”, ಅನಾರೋಗ್ಯದಿಂದ ಸಾವು

0

ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿದ್ದ 12 ವರ್ಷದ ಹೆಣ್ಣು ಹಿಪ್ಪೊಪೊಟಾಮಸ್ (ನೀರಾನೆ) ‘ಹಂಸಿಣಿ’ ಮಂಗಳವಾರ ಮಧ್ಯಾಹ್ನ ಮೃತಪಟ್ಟಿದೆ.
ಗರ್ಭಿಣಿಯಾಗಿದ್ದ ಹಂಸಿಣಿ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿತ್ತು. ಎಂಟು ತಿಂಗಳ ಗರ್ಭಾವಸ್ಥೆಯ ಅವಧಿ ಮಾರ್ಚ್ ಮಧ್ಯಭಾಗದಲ್ಲೇ ಪೂರ್ಣಗೊಂಡಿದ್ದರೂ, ಪ್ರಸವದ ಯಾವುದೇ ಲಕ್ಷಣಗಳು ಕಂಡುಬಂದಿರಲಿಲ್ಲ. ಈ ನಡುವೆ ಪ್ರಾಣಿಯು ಆಹಾರ ಸೇವನೆ ಕಡಿಮೆ ಮಾಡಿ, ಅತ್ಯಂತ ನಿಶ್ಯಕ್ತಿಯಿಂದ ಕೂಡಿತ್ತು.
ಚಿಕಿತ್ಸೆ ಮತ್ತು ಸೋಂಕು: ಪ್ರಾಣಿಯ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಏಪ್ರಿಲ್ 10 ರಂದು ಮೈಸೂರಿನ ಕರ್ನಾಟಕ ಮೃಗಾಲಯ ಪ್ರಾಧಿಕಾರದ ವನ್ಯಜೀವಿ ಪಶುವೈದ್ಯರ ತಂಡ ಆಗಮಿಸಿ ತಪಾಸಣೆ ನಡೆಸಿತ್ತು. ರಕ್ತ ಮತ್ತು ದ್ರವಗಳ ಪರೀಕ್ಷೆಯ ವರದಿಯಲ್ಲಿ ಗರ್ಭಾಶಯದಲ್ಲಿ ಗಂಭೀರವಾದ ಸೋಂಕು ಇರುವುದು ಪತ್ತೆಯಾಗಿತ್ತು. ಗರ್ಭಾಶಯದ ಒಳಗೇ ಭ್ರೂಣ ಮರಣ ಹೊಂದಿದ್ದು ಇದು ಸೋಂಕಿಗೆ ಕಾರಣವಾಗಿರಬಹುದು ಎಂದು ಪಶುವೈದ್ಯರು ಅಭಿಪ್ರಾಯಪಟ್ಟಿದ್ದರು.
ಕರ್ನಾಟಕ ಮೃಗಾಲಯ ಪ್ರಾಧಿಕಾರ, ಮೈಸೂರು ಪಶುವೈದ್ಯರು ಹಾಗೂ ಪಶುವೈದ್ಯಕೀಯ ಪ್ರಸೂತಿ ತಜ್ಞರ ಮಾರ್ಗದರ್ಶನದಲ್ಲಿ ಹಂಸಿಣಿಗೆ ಸತತವಾಗಿ ಚಿಕಿತ್ಸೆ ಮತ್ತು ಆರೈಕೆ ನೀಡಲಾಗುತ್ತಿತ್ತು. ಆದರೆ, ಸೋಂಕು ಪ್ರಾಣಿಯ ಪ್ರಮುಖ ಅಂಗಾಂಗಗಳ ಮೇಲೆ ತೀವ್ರ ಪರಿಣಾಮ ಬೀರಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಏಪ್ರಿಲ್ 14ರ ಮಧ್ಯಾಹ್ನ 3.08 ಗಂಟೆಗೆ ಹಂಸಿಣಿ ಕೊನೆಯುಸಿರೆಳೆದಿದೆ ಎಂದು ತ್ಯಾವರೆಕೊಪ್ಪ ಹುಲಿ-ಸಿಂಹ ಧಾಮದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

Dr. B.R. Ambedkar ಡಾ.ಅಂಬೇಡ್ಕರ್ ಸರಳ ಜೀವನ ನಡೆಸಿದ ಮಹನ್ ನಾಯಕರು- ಸುರೇಶ್ ವೈ ಹಳ್ಳಿ.

0

Dr. B.R. Ambedkar ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (RSETI), ಹೊಳಲೂರು ಇಲ್ಲಿ 135ನೇ ಅಂಬೇಡ್ಕರ್ ಜಯಂತಿಯನ್ನು ಅತ್ಯಂತ ಗೌರವದಿಂದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಸುರೇಶ್ ವೈ ಹಳ್ಳಿ, ಶ್ರೀಮತಿ ದೀಪ ಜಿ, ಟ್ರೈನರ್ ಕತ್ತುಮನ್ನಿಸಾ, ಹಾಗೂ ಟೈಲರಿಂಗ್ ತರಬೇತಿಯಲ್ಲಿ ಭಾಗವಹಿಸಿದ್ದ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆರಂಭಿಸಲಾಯಿತು. ನಂತರ ಮಾತನಾಡಿದ ಅತಿಥಿಗಳು ಮತ್ತು ಉಪನ್ಯಾಸಕರು ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ ಶೈಲಿ, ಸಾಧನೆಗಳು ಹಾಗೂ ಸಮಾಜಕ್ಕೆ ನೀಡಿದ ಮಹತ್ತರ ಕೊಡುಗೆಗಳ ಕುರಿತು ವಿವರವಾಗಿ ಬೆಳಕು ಚೆಲ್ಲಿದರು.
ಅಂಬೇಡ್ಕರ್ ಅವರು ಸರಳ ಜೀವನ ನಡೆಸಿದ ಮಹಾನ್ ನಾಯಕರು. ಅವರು ಶಿಕ್ಷಣವನ್ನು ಶಕ್ತಿ ಎಂದು ನಂಬಿ, ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಅನೇಕ ಹೋರಾಟಗಳನ್ನು ನಡೆಸಿದರು. ಭಾರತೀಯ ಸಂವಿಧಾನದ ಶಿಲ್ಪಿಯಾಗಿರುವ ಅವರು ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯದ ಮೌಲ್ಯಗಳನ್ನು ಸಮಾಜಕ್ಕೆ ನೀಡಿದ್ದಾರೆ.
Dr. B.R. Ambedkar  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತರಬೇತಿಗಾರರಿಗೆ ಅಂಬೇಡ್ಕರ್ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರಣೆ ನೀಡಲಾಯಿತು. ವಿಶೇಷವಾಗಿ ಶಿಕ್ಷಣದ ಮಹತ್ವ, ಸ್ವಾಭಿಮಾನ ಮತ್ತು ಸ್ವಾವಲಂಬನೆ ಕುರಿತು ತಿಳಿಸಿ, ಜೀವನದಲ್ಲಿ ಮುಂದುವರಿಯಲು ಮಾರ್ಗದರ್ಶನ ನೀಡಲಾಯಿತು.
ಈ ಕಾರ್ಯಕ್ರಮವು ಎಲ್ಲರಿಗೂ ಪ್ರೇರಣಾದಾಯಕವಾಗಿದ್ದು, ಅಂಬೇಡ್ಕರ್ ಅವರ ಚಿಂತನೆಗಳನ್ನು ಮತ್ತೆ ನೆನಪಿಸುವ ಒಂದು ಅರ್ಥಪೂರ್ಣ ಆಚರಣೆಯಾಗಿ నిలಿಯಿತು.