ಯೋಗ ಪ್ರಾಣಾಯಾಮ ಧ್ಯಾನ ಹಾಗೂ ಉತ್ತಮ ಜೀವನ ಶೈಲಿ ಹಾಗೂ ಆಹಾರ ಪದ್ಧತಿ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದು ಪ್ರಧಾನ ಕಾರ್ಯದರ್ಶಿಗಳಾದ ಎಚ್ ಎಮ್ ಚಂದ್ರಶೇಖರಯ್ಯ ನುಡಿದರು ಅವರು ಕೃಷಿ ನಗರದ ಗಣಪತಿ ದೇವಸ್ಥಾನದ ಯೋಗ ಶಾಖೆಯಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಯೋಗ ನಮ್ಮ ಜೀವನವನ್ನು ಸುಂದರವಾಗಿ ಹಾಗೂ ಸದಾ ಆರೋಗ್ಯವಂತರನ್ನಾಗಿ ಇಡಲು ಬಹಳ ಪ್ರಮುಖವಾದ ಪಾತ್ರವಹಿಸಿದೆ ಎಷ್ಟೋ ಬಾರಿ ವೈದ್ಯರಿಂದ ಕಾಯಿಲೆಯನ್ನು ಗುಣಪಡಿಸಲಾಗದೆ ಇದ್ದಾಗ ಯೋಗದಲ್ಲಿ ಉತ್ತಮ ಪರಿಹಾರ ಸಿಕ್ಕಿದೆ ಎಂದು ಹಲವಾರು ನಿದರ್ಶನಗಳನ್ನು ತಿಳಿಸಿದರು. ಪ್ರತಿನಿತ್ಯ ಯೋಗ ಅಭ್ಯಾಸ ಮಾಡುವುದರಿಂದ ದೇಹ ಸದೃಢವಾಗುವುದರ ಜೊತೆಗೆ ಮನಸ್ಸು ಉಲ್ಲಾಸಿತವಾಗಿರುತ್ತದೆ. ಹಾಗೆ ಶಾಖೆಗಳಲ್ಲಿ ಪ್ರತಿನಿತ್ಯ ಭಜನೆ ಒಳ್ಳೆಯ ಆರೋಗ್ಯ ಮಾಹಿತಿ ಜೊತೆಗೆ ಉತ್ತಮ ಸಂಸ್ಕಾರದಿಂದ ಮನುಷ್ಯ ಪರಿಪಕ್ವವಾಗುತ್ತಾನೆ. ಈಗಾಗಲೇ ಶಿವಗಂಗಾ ಯೋಗ ಕೇಂದ್ರ ನಗರದ 42 ಕಡೆ ಉಚಿತವಾಗಿ ಯೋಗ ಪ್ರಾಣಾಯಾಮ ಧ್ಯಾನ ತರಗತಿಗಳನ್ನು ನಡೆಸುತ್ತಾ ಬರುತ್ತಿದೆ ಇದಕ್ಕೆಲ್ಲಾ ನಮ್ಮ ಕೇಂದ್ರದ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಡಾಕ್ಟರ್ ಸಿವಿ ರುದ್ರಾರಾಧ್ಯರವರು ಹಾಗೂ ಟ್ರಸ್ಟಿಗಳು ಮತ್ತು ಪೋಷಕರ ಮಾರ್ಗದರ್ಶನ ಅತ್ಯಂತ ಪ್ರಮುಖವಾಗಿದೆ ಪ್ರತಿನಿತ್ಯ ಸಾವಿರಾರು ಜನರು ಉಚಿತವಾಗಿ ಯೋಗಭ್ಯಾಸ ಮಾಡುತ್ತಿದ್ದಾರೆ ಎಂದು ನುಡಿದರು. ಕೃಷಿ ನಗರ ಗಣಪತಿ ದೇವಸ್ಥಾನದ ಶಾಖೆಯ ಶಿಕ್ಷಕರಾದ ನೀಲಕಂಠರಾವ್ ಅವರು ಮಾತನಾಡುತ್ತಾ ಕ್ರಮಬದ್ಧವಾಗಿ ಯೋಗಭ್ಯಾಸ ನಮ್ಮ ಬದುಕನ್ನು ಹಸನಾಗಿಸುತ್ತದೆ ಹಾಗೆ ನಮ್ಮನ್ನು ದೀರ್ಘಾಯುಷ್ಯ ಉಳ್ಳವರನ್ನಾಗಿಸುತ್ತದೆ. ಆದ್ದರಿಂದ ಬಾಲ್ಯದಲ್ಲೇ ಮಕ್ಕಳಿಗೆ ಯೋಗಭ್ಯಾಸವನ್ನು ಪರಿಚಯಿಸಬೇಕು ಯೋಗ ಮಾಡುವವರು ಆಸ್ಪತ್ರೆಯಿಂದ ಸದಾ ದೂರವಿರುತ್ತಾರೆ ಹಾಗೆ ಯೋಗಭ್ಯಾಸ ಮಾಡುವವರ ಮುಖದಲ್ಲಿ ಸದಾ ಶಾಂತಿ ಹಾಗೂ ತೇಜಸ್ಸು ತುಂಬಿರುತ್ತದೆ ಎಂದು ನುಡಿದರು. ಶಿಬಿರದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ ವಿಜಯಕುಮಾರ್ ಬಿಂದು ವಿಜಯಕುಮಾರ್, ಶಿಕ್ಷಕರಾದ ಮಹಾಬಲೇಶ್ವರ ಹೆಗಡೆ, ಅನಿಲ್. ಗಣಪತಿ, ಪರಮೇಶ್ವರಪ್ಪ. ರವಿಕುಮಾರ್. ಸುಮಾ ನಟರಾಜ್, ನಾಗರತ್ನಮ್,. ಜಾನಕಮ್ಮ ಹಾಗೂ ಯೋಗ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಯೋಗ ನಮ್ಮ ಜೀವನವನ್ನುಸುಂದರ ಮತ್ತು ಆರೋಗ್ಯವಾಗಿಡುತ್ತದೆ: ಎಚ್.ಎಂ.ಚಂದ್ರಶೇಖರಯ್ಯ
Date:
