Friday, July 17, 2026
Friday, July 17, 2026

Inner Wheel Club Shivamogga ಮಹಿಳೆಯರ ಮತ್ತು ಮಕ್ಕಳ ಸಬಲೀಕರಣ ನಮ್ಮ ಸಮಾಜಮುಖಿ ಸೇವೆಯ ಅಂಶಗಳಾಗಿರಲಿ- ಹೆಚ್.ಪಿ.ಅಕ್ಷತಾ

Date:

Inner Wheel Club Shivamogga ಇನ್ನರ್ ವೀಲ್ ಕ್ಲಬ್ ಶಿವಮೊಗ್ಗ 2026-27 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಅರ್ಥಪೂರ್ಣವಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಪಿಡಿಸಿ ಹಾಗೂ ಎಫ್ಎಪಿಐ ಶಿವಮೊಗ್ಗದ ಅಧ್ಯಕ್ಷರಾದ ಭಾರತೀ ಚಂದ್ರಶೇಖರ್ ಹಾಗೂ ಮಾಜಿ ಅಧ್ಯಕ್ಷೆ ಲತಾ ಎಂ. ರಮೇಶ್ ಅವರು ನೂತನ ಅಧ್ಯಕ್ಷೆ ಸುನೀತಾ ಮೋಹನ್, ಕಾರ್ಯದರ್ಶಿ ಸುಮಲತಾ ರವಿ ಪಾಟೀಲ್, ಖಜಾಂಚಿ ಶ್ರುತಿ ರಾಕೇಶ್, ಐಎಸ್ಓ ಶ್ವೇತಾ ಗಿರೀಶ್ ಮತ್ತು ಎಡಿಟರ್ ಸೋಮಿಯ ರವರಿಗೆ ನೂತನ ಪದಗ್ರಹಣ ನೆರವೇರಿಸಿ ಅಧಿಕಾರ ಹಸ್ತಾಂತರ ಮಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸೆಂಟರ್ ಅಡ್ಮಿನಿಸ್ಟ್ರೇಷನ್ ಒನ್ ಸ್ಟಾಪ್ ಸೆಂಟರ್ (ಸಖಿ) ಅಕ್ಷತಾ ಹೆಚ್.ಪಿ ಇವರು ಮಹಿಳಾ ಮತ್ತು ಮಕ್ಕಳ ಸಬಲೀಕರಣ, ದೌರ್ಜನ್ಯ ಮುಕ್ತ ಶಿವಮೊಗ್ಗ ಹಾಗೂ ಇತರ ಸಮಾಜ ಸೇವೆಯ ಮಹತ್ವಗಳನ್ನು ಒತ್ತಿ ಹೇಳಿ ಇನ್ನರ್ ವೀಲ್ ಸಂಸ್ಥೆಯ ಸೇವ ಕಾರ್ಯಗಳನ್ನು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷೆ ಸುನೀತಾ ಮೋಹನ್ ಮಾತನಾಡಿ, ತಮ್ಮ ಅಧಿಕಾರವಾಧಿಯಲ್ಲಿ ಮಾಡಬೇಕಾದ ಸಮಾಜಮುಖಿ ಚಟುವಟಿಗಳ ಬಗ್ಗೆ ತಿಳಿಸಿದರು.

ಪದಗ್ರಹಣದ ಸಮಾರಂಭದ ಅಂಗವಾಗಿ ಕ್ಲಬ್ ವತಿಯಿಂದ ಸೇವಾ ಯೋಜನೆ ಕೈಗೊಳ್ಳಲಾಯಿತು. ಲಕ್ಷ್ಮಿ ಯವರ ಪುತ್ರನ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯಧನವನ್ನು ನೀಡಲಾಯಿತು.
ನೇತ್ರಾವತಿ ಯವರ ಪುತ್ರನಿಗೆ ವಿದ್ಯಾಭ್ಯಾಸಕ್ಕೆ ಅಗತ್ಯವಿರುವ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.

Inner Wheel Club Shivamogga ಕಾರ್ಯಕ್ರಮದಲ್ಲಿ ಮಾಜಿ ಪದಾಧಿಕಾರಿಗಳು, ವಿವಿಧ ಇನ್ನರ್ ವೀಲ್ ಕ್ಲಬ್ ಗಳ ಸದಸ್ಯೆಯರು, ಪಿಡಿಸಿ ಗಳು, ರೋಟರಿ ಕ್ಲಬ್ ಶಿವಮೊಗ್ಗ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಇತರ ಗಣ್ಯರ ಉಪಸ್ಥಿತಿಯಲ್ಲಿ ಕ್ಲಬ್ ಬುಲೆಟಿನ್ ಬಿಡುಗಡೆ ಮಾಡಿ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷೆ ಲತಾ ಎಂ. ರಮೇಶ್ ಸ್ವಾಗತಿಸಿದರು, ಶ್ರೀರಂಜಿನಿ ದತ್ತಾತ್ರಿ ನಿರೂಪಣೆ ಹಾಗೂ ಸೀಮಾ ಸದಾನಂದ್ ವಂದನಾರ್ಪಣೆ ಸಲ್ಲಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Aerticle ಚಿನ್ನಕ್ಕಿಂತಲೂ ಚೆನ್ನ, ಚನ್ನಪ್ಪಯ್ಯ ಅವಧೂತರು ...

Klive Special Aerticle ದಾವಣಗೆರೆಯ ಸಮೀಪದ ಆನಗೋಡಿನಿಂದ ಸುಮಾರು 3 ಕಿ.ಮೀ...

ವಾಡಿಕೆಗಿಂತ ಕಡಿಮೆ ಮಳೆ ರೈತರು ಕೃಷಿ ಇಲಾಖೆ ಸೂಚಿಸಿದ ವ್ಯವಸಾಯ ಪದ್ಧತಿ ಅನುಸರಿಸಿ : ಗಿರಿಜಾ ಪಟ್ಟಣಶೆಟ್ಟಿ

ಶಿವಮೊಗ್ಗ ತಾಲ್ಲೂಕಿನಲ್ಲಿ ಈ ಸಾಲಿನ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂದ ಕಡಿಮೆ ಮಳೆಯಾಗಿರುವುದಲ್ಲದೇ,...

S.N. Channabasappa ಸ್ವಚ್ಛತಾ ಸಿಬ್ಬಂದಿಗಳು ಕಡ್ಡಾಯವಾಗಿ ಸುರಕ್ಷತಾ ಕವಚಗಳನ್ನು ಧರಿಸಿ ಕಾರ್ಯನಿರ್ವಹಿಸಿ- ಎಸ್.ಎನ್.ಚನ್ನಬಸಪ್ಪ

S.N. Channabasappa ಶಿವಮೊಗ್ಗ "ನಗರದ ನೈರ್ಮಲ್ಯ ಹಾಗೂ ಸಾರ್ವಜನಿಕರ ಆರೋಗ್ಯ ರಕ್ಷಣೆಯಲ್ಲಿ...