Friday, February 20, 2026
Friday, February 20, 2026
Home Blog Page 200

Shivamogga District Chamber of Commerce and Industry ಪ್ರಧಾನಮಂತ್ರಿ ವಿಕಸಿತ ಭಾರತ ರೋಜಗಾರ್ ಯೋಜನೆ ಕುರಿತ ಕಾರ್ಯಾಗಾರ

0

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಕೆ.ಟಿ. ಶಾಮಯ್ಯ ಗೌಡ ರಸ್ತೆ, ಸಿಟಿ ಕ್ಲಬ್ ಹಿಂಬಾಗ ದಿನಾಂಕ: 20\08\2025 ನೇ ಬುದವಾರ ಸಂಜೆ 4:30ಕ್ಕೆ ಸರಿಯಾಗಿ ಶಾಂತಲಾ ಸ್ಪೇರೋಕ್ಯಾಸ್ಟ್ ಸಭಾಂಗಣದಲ್ಲಿ”Outreach programme on Pradhan Mantri Viksit Bharath Rozgar Yojana” (PM-VBRY) ಎಂಬ ವಿಶೇಷ ಕಾರ್ಯಾಗಾರವನ್ನು ಏರ್ಪಡಿಸಿದ್ದು, ಕಾರ್ಯಕ್ರಮವನ್ನು ಜಿಲ್ಲಾ ಕೈಗಾರಿಕಾ ಕೇಂದ್ರ, ಶಿವಮೊಗ್ಗದ ಜಂಟಿ ನಿರ್ದೇಶಕರಾದ ಶ್ರೀ ಆರ್ ಗಣೇಶ್‌ರವರು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಬಿ.ಗೋಪಿನಾಥ್‌ರವರು ವಹಿಸಲಿರುವರು. Shivamogga District Chamber of Commerce and Industry ಸರ್ಕಾರದ ಭವಿಷ್ಯನಿಧಿ ನಿಯಮಗಳಲ್ಲಿನ ನೂತನ ಬದಲಾವಣೆಗಳು ಮತ್ತು ಉದ್ಯೋಗದಾತರುಗಳಿಗೆ, ಉದ್ಯೋಗಿಗಳಿಗೆ ಸೌಲಭ್ಯಗಳ ಅನುಕೂಲದ ಬಗ್ಗೆ ಮುಖ್ಯ ಉಪನ್ಯಾಸಕರಾಗಿ ಜಿಲ್ಲಾ ಉದ್ಯೋಗಾಧಿಕಾರಿ, ಶ್ರೀ ಖಲಂದರ್‌ಖಾನ್ ಮತ್ತು ನೌಕರರ ಭವಿಷ್ಯನಿಧಿ ಕಛೇರಿಯ ಲೆಕ್ಕಾಧಿಕಾರಿಯವರಾದ ಶ್ರೀ ಟಿ.ಎಸ್ ಸುನಿಲ್‌ರವರು ಉಪನ್ಯಾಸ ನೀಡಲಿದ್ದಾರೆ ಸಂಘದ ಮಾನ್ಯ ಸದಸ್ಯ ವಾಣಿಜ್ಯೋದ್ಯಮಿಗಳು, ಕೈಗಾರಿಕೋದ್ಯಮಿಗಳು, ಲೆಕ್ಕಪರಿಶೋಧಕರು, ತೆರಿಗೆ ಸಲಹೆಗಾರರು, ವೃತ್ತಿಪರರು, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಗೌರವ ಕಾರ್ಯದರ್ಶಿ ಶ್ರೀ ಎ.ಎಂ. ಸುರೇಶ್‌ರವರು ಸಂಘದ ಪ್ರಕಟಣೆಯಲ್ಲಿ ಕೋರಿದ್ದಾರೆ.

Shivamogga Rangayana ರಂಗಾಯಣ ರೆಪರ್ಟರಿಗೆ ಕಲಾವಿದರ/ ತಂತ್ರಜ್ಞರ ಆಯ್ಕೆ ಪಟ್ಟಿ ಪ್ರಕಟ

0

Shivamogga Rangayana ಶಿವಮೊಗ್ಗ ರಂಗಾಯಣವು ಮುಂದಿನ ಒಂದು ವರ್ಷದ ಅವಧಿಗೆ ರೆಪರ್ಟರಿಗೆ ಕಲಾವಿದರ/ತಂತ್ರಜ್ಞರ ಆಯ್ಕೆಯನ್ನು ಪೂರ್ಣಗೊಳಿಸಿ ಪಟ್ಟಿ ಪ್ರಕಟಿಸಿದೆ
ಬೆಳಕು/ಧ್ವನಿ ತಂತ್ರಜ್ಞರಾಗಿ ಶಿವಮೊಗ್ಗದ ಶಂಕರ್ ಕೆ., ರಂಗಸಜ್ಜಿಕೆ/ವಸ್ತ್ರ ತಂತ್ರಜ್ಞರಾಗಿ ಮೈಸೂರಿನ ಮಧುಸೂಧನ್ ಬಿ.ಆರ್., ಕಲಾವಿದರಾಗಿ ಶಿವಮೊಗ್ಗದ ಸೈಯದ್ ಆಲಿ, ದರ್ಶನ್ ಎಸ್., ಪ್ರಮೋದ್ ಆರ್. ನಾಡಿಗ್, ರಾಯಚೂರಿನ ಭೀಮೇಶ್, ಧಾರವಾಡದ ಪೂಜಾ ಗಜಾಕೋಶ, ದಕ್ಷಿಣ ಕನ್ನಡದ ಅಭಿಷೇಕ್ ವಿ.ಎಲ್., ಕಲ್ಬುರ್ಗಿಯ ಶ್ರೀಕಾಂತ್, ವಿಜಯಪುರದ ಬಸವರಾಜ್ ನಾ ಹುಲ್ಲಳ್ಳಿ, Shivamogga Rangayana ಕೊಪ್ಪಳದ ಸುಮಿತ್ರ, ಮಲ್ಲಿಕಾ ಜೋಗಿ, ಪೂಜಾ, ಹಾಗೂ ಚಿತ್ರದುರ್ಗದ ಧನುಷ್ ಎಸ್. ಆಯ್ಕೆಯಾಗಿದ್ದಾರೆ ಎಂದು ರಂಗಾಯಣದ ಆಡಳಿತಾಧಿಕಾರಿ ಡಾ. ಶೈಲಜಾ ಎ.ಸಿ. ತಿಳಿಸಿದ್ದಾರೆ.

Scheduled Caste Nomadic Semi Nomadic Microscopic ವಿವಿಧ ಯೋಜನೆಗಳ ಮೂಲಕ ಆರ್ಥಿಕ ನೆರವು ಪಡೆಯಲು ಅರ್ಜಿ ಆಹ್ವಾನ

0

Scheduled Caste Nomadic Semi Nomadic Microscopic 2025-26ನೇ ಸಾಲಿನಲ್ಲಿ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ವ್ಯಾಪ್ತಿಗೆ ಬರುವ ಅಲೆಮಾರಿ ಸಮುದಾಯದವರಿಗೆ ಆರ್ಥಿಕ ಅಭಿವೃದ್ಧಿಯನ್ನು ಹೊಂದಲು ವಿವಿಧ ಯೋಜನೆಗಳಾದ ಸ್ವಯಂ ಉದ್ಯೋಗ ನೇರಸಾಲ ಯೋಜನೆ, ಉದ್ಯಮಶೀಲತಾ ಯೋಜನೆ, ಸ್ವಾವಲಂಭಿ ಸಾರಥಿ ಯೋಜನೆ, ಭೂ ಒಡೆತನ ಯೋಜನೆ, ಮೈಕ್ರೋ ಕ್ರೆಡಿಟ್ ಯೋಜನೆ ಹಾಗೂ ಗಂಗಾ ಕಲ್ಯಾಣ ಯೋಜನೆಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಸೇವಾಸಿಂಧು ಪೋರ್ಟಲ್ ಮೂಲಕ ಕರ್ನಾಟಕ ಒನ್, ಗ್ರಾಮಾ ಒನ್‌ಗಳಲ್ಲಿ ಸೆ. 10 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

Rotary Club Shimoga ಇಂಟರ್ಯಾಕ್ಟ್ ಕ್ಲಬ್ ಚಟುವಟಿಕೆಯಿಂದ ಮಕ್ಕಳಲ್ಲಿ ಸಮಯ ಪ್ರಜ್ಞೆ,ನಾಯಕತ್ವ ಗುಣ ಬೆಳವಣಿಗೆ-ಎಚ್.ಎಲ್.ರವಿ.

0

Rotary Club Shimoga ಮಕ್ಕಳು ಉತ್ತಮ ವ್ಯಕಿತ್ವ ರೂಢಿಸಿಕೊಳ್ಳುವಲ್ಲಿ ಇಂಟರಾಕ್ಟ್ ಕ್ಲಬ್ ಸಹಕಾರಿಯಾಗುತ್ತದೆ ಎಂದು ರೋಟರಿ ಜಿಲ್ಲಾ ಮಾಜಿ ಗವರ್ನರ್ ಎಚ್.ಎಲ್.ರವಿ ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ವತಿಯಿಂದ ನಗರದ ಗೋಪಾಳ ಬಡಾವಣೆಯಲ್ಲಿರುವ ರಾಜರಾಜೇಶ್ವರಿ ಶಾಲೆಯಲ್ಲಿ ಹೊಸ ಇಂಟರಾಕ್ಟ್ ಕ್ಲಬ್ ಪ್ರಾರಂಭ ಹಾಗೂ ಉಚಿತವಾಗಿ ದಂತ ತಪಾಸಣೆ ಶಿಬಿರದಲ್ಲಿ ಮಾತನಾಡಿ, ಇಂಟರಾಕ್ಟ್ ಕ್ಲಬ್‌ನಲ್ಲಿ ತೊಡಗಿಸಿಕೊಳ್ಳುವುದರಿಂದ ಮಕ್ಕಳಲ್ಲಿ ಸಮಯ ಪ್ರಜ್ಞೆ, ಶಿಸ್ತು, ನಾಯಕತ್ವ ಗುಣ ಬೆಳೆಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಡಾ. ಶ್ರೀನಿವಾಸ್ ಮಾತನಾಡಿ, ವಿದ್ಯಾರ್ಥಿಗಳಿಗೆ ಹಲ್ಲಿನ ಸ್ವಚ್ಛತೆ ಹಾಗೂ ಆರೋಗ್ಯದ ಬಗ್ಗೆ ಎಲ್ಲ ಮಕ್ಕಳಿಗೆ ತಪಾಸಣೆ ನಡೆಸಿ ಟೂತ್ ಬ್ರಶ್, ಪೇಸ್ಟ್ ವಿತರಿಸಲಾಯಿತು. ಡ್ರಗ್ಸ್ ಗುಟ್ಕಾ ಮಾದಕ ವಸ್ತುಗಳಿಂದ ದೂರ ಇರುವಂತೆ ತಿಳಿಸಿದರು.
Rotary Club Shimoga ವಿದ್ಯಾರ್ಥಿಗಳಿಗೆ ನೋಟ್ ಬುಕ್, ಪೆನ್, ಪೆನ್ಸಿಲ್ ಇತ್ಯಾದಿ ಸಾಮಗ್ರಿಗಳನ್ನು ವಿತರಿಸಲಾಯಿತು. ಪ್ರಕಾಶ್ ಮೂರ್ತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಇಂಟರಾಕ್ಟ್ ವೈಸ್ ಚೇರ್ಮನ್ ಮುಸ್ತಾಕ್ ಅಲಿ ಶಾ ಅವರು ಇಂಟರಾಕ್ಟ್ ಕ್ಲಬ್ ನೂತನ ಅಧ್ಯಕ್ಷ ದರ್ಶನ್ ಅವರಿಗೆ ಪದವಿ ಪ್ರಮಾಣ ನೆರವೇರಿಸಿದರು. ರಾಜರಾಜೇಶ್ವರಿ ಪ್ರೌಢಶಾಲೆ ಮುಖ್ಯಶಿಕ್ಷಕರು, ಸಹಶಿಕ್ಷಕರು, ಸಿಬ್ಬಂದಿ ಹಾಜರಿದ್ದರು.
ಸಹಾಯಕ ಗವರ್ನರ್ ಕೆ.ಪಿ.ಶೆಟ್ಟಿ, ಜೋನಲ್ ಲೆಫ್ಟಿನೆಂಟ್ ರಂಗರಾಜನ್, ವಲಯ ಸಂಯೋಜಕ ಸೂರ್ಯನಾರಾಯಣ ಉಡುಪ, ಯೂತ್ ಸರ್ವಿಸ್ ನಿರ್ದೇಶಕ ಪೀರು ಮಲ್ನಾಡ್, ಸ್ವಪ್ನ, ಸ್ಮಿತಾ, ಕಾರ್ಯದರ್ಶಿ ರಶ್ಮಿ ಎಸ್ ಆರ್ ಮತ್ತಿತರರು ಉಪಸ್ಥಿತರಿದ್ದರು.

Hanagerekatte ಹಣಗೆರೆಕಟ್ಟೆಗೆ ತೆರಳುತ್ತಿದ್ದ ಬಸ್ ಹಿಂದುಗಡೆ ಕಾರು ಢಿಕ್ಕಿ, ಪ್ರಾಣಾಪಾಯದಿಂದ ಎಲ್ಲ ಪಾರು

0

Hanagerekatte ಶಿವಮೊಗ್ಗದಿಂದ ಹಣಗೆರೆಕಟ್ಟೆ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್’ವೊಂದಕ್ಕೆ ಕಾರೊಂದು ವೇಗವಾಗಿ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬಸ್’ನ ಹಿಂಬದಿಯ ಎಲ್ಲ ಟೈರ್’ಗಳು ಕಳಚಿಕೊಂಡು ಅಪಘಾತ ಸಂಭವಿಸಿದೆ.
ಡಿಕ್ಕಿಯಾದ ರಭಸಕ್ಕೆ ಬಸ್ ಹಿಂಬದಿಯ ಎಲ್ಲ ಟೈರ್’ಗಳು ಕಳಚಿಕೊಂಡು ಬಸ್’ನ ಹಿಂಭಾಗ ಸಂಪೂರ್ಣ ನೆಲಕ್ಕೆ ಕುಸಿದಿದೆ. ಆದರೆ ಅದೃಷ್ಟವಶಾತ್ ಈ ದುರ್ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯವಾಗದೇ ಪಾರಾಗಿದ್ದಾರೆ.
ಡಿಕ್ಕಿ ಹೊಡೆದ ಪರಿಣಾಮ, ಬಸ್ ಹಿಂಬದಿ ನಾಲ್ಕು ಟೈರ್’ಗಳು ಸಂಪೂರ್ಣವಾಗಿ ಕಿತ್ತು ಹೋಗಿವೆ. ಕಾರಿನ ಮುಂಭಾಗ ತೀವ್ರವಾಗಿ ಜಖಂಗೊಂಡಿದ್ದರೂ, ಗಂಭೀರ ಗಾಯವಾದ ಬಗ್ಗೆ ವರದಿಯಾಗಿಲ್ಲ.
Hanagerekatte ಘಟನೆ ವೇಳೆ ಬಸ್’ನಲ್ಲಿ ಅನೇಕ ಪ್ರಯಾಣಿಕರಿದ್ದು, ಅವರಿಗೂ ಯಾವುದೇ ರೀತಿಯ ಅಪಾಯವಾಗಿಲ್ಲ. ಎಲ್ಲ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ. ಸ್ವಲ್ಪದರಲ್ಲಿ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.
ಕುಂಸಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ

Klive Special Article ಫೋಟೋಗ್ರಫಿ, ತಂತ್ರವಲ್ಲ, ಬದಲಿಗೆ ಕಲೆ ವಿಜ್ಞಾನ & ಸಂಸ್ಕೃತಿ ಬೆಸೆಯುವ ಮಾಧ್ಯಮ, ವಿಶ್ವ ಛಾಯಾಗ್ರಹಣ ದಿನ

0

ಲೇ: ಆದಿತ್ಯ ಪ್ರಸಾದ್.
ಹವ್ಯಾಸಿ ಛಾಯಾಚಿತ್ರಗ್ರಾಹಕ.
ಶಿವಮೊಗ್ಗ

Klive Special Article ವರ್ಷವೂ ಆಗಸ್ಟ್ 19 ರಂದು ವಿಶ್ವ ಛಾಯಾಗ್ರಹಣ ದಿನ(World Photographic Day) ವೆಂದು ಆಚರಿಸಿಕೊಂಡು ಬರಲಾಗುತ್ತಿದೆ. ಇದು ಬರಿಯ ಛಾಯಾಗ್ರಾಹಕರ ಆಚರಣೆಯ ದಿನವಾಗಿರದೇ ಛಾಯಾಗ್ರಹಣ ಕಲೆಯ ಇತಿಹಾಸ, ತಾಂತ್ರಿಕವಾಗಿ ಹೇಗೆ ಬೆಳೆದು ಅಭಿವೃದ್ಧಿ ಆಯ್ತು ಮತ್ತು ಛಾಯಾಗ್ರಹಣವು ಸಮಾಜದ ಮೇಲೆ ಯಾವ ರೀತಿ ಪ್ರಭಾವವನ್ನು ಬೀರಿದೆ ಎನ್ನುವ ಬಗ್ಗೆಯೂ ಸ್ಮರಿಸುವ ಹಾಗೂ ಛಾಯಾಗ್ರಾಹಕನ ಸೃಜನಶೀಲತೆಯನ್ನು ಗೌರವಿಸುವ ವಿಶೇಷ ಸಂದರ್ಭವಾಗಿದೆ.

ಛಾಯಾಗ್ರಹಣ (Photography) ಕೇವಲ ಚಿತ್ರಗಳನ್ನು ಸೆರೆಹಿಡಿಯುವ ಒಂದು ತಂತ್ರವಲ್ಲ, ಬದಲಿಗೆ ಕಲೆ, ವಿಜ್ಞಾನ ಮತ್ತು ಸಂಸ್ಕೃತಿಯನ್ನು ಬೆಸೆಯುವ ಒಂದು ಮಾಧ್ಯಮ. ಮಾನವಕುಲದ ದೃಶ್ಯ ಸ್ಮರಣೆಯ ದಾಖಲೆಯಾಗಿ, ಛಾಯಾಗ್ರಹಣ ತನ್ನ ಅಸ್ತಿತ್ವವನ್ನು ಕಂಡುಕೊಂಡ ದಿನದಿಂದಲೂ ನಿರಂತರವಾಗಿ ವಿಕಸನಗೊಳ್ಳುತ್ತಿದೆ.
ಅದು ನಿನ್ನೆಯ ಕಥೆಗಳನ್ನು ಹೇಳುವ, ಭಾವನೆಗಳನ್ನು ವ್ಯಕ್ತಪಡಿಸುವ ಮತ್ತು ಇತಿಹಾಸವನ್ನು ದಾಖಲಿಸುವ ಒಂದು ಅದ್ಭುತ ಕಲೆ. ಮನುಷ್ಯನು ಬೆಳಕನ್ನು ಬಳಸಿ ಚಿತ್ರಗಳನ್ನು ರಚಿಸುವ ಕನಸು ಕಂಡ ದಿನದಿಂದ ಇಂದಿನ ಡಿಜಿಟಲ್ ಯುಗದವರೆಗೆ, ಛಾಯಾಗ್ರಹಣವು ನಿರಂತರವಾಗಿ ವಿಕಸನಗೊಂಡು ಬೆಳೆದು ಬಂದಿದೆ. ನಿನ್ನೆಯ ದಿನಗಳು, ಇಂದಿನ ವಾಸ್ತವ ಮತ್ತು ನಾಳೆಯ ನಿರೀಕ್ಷೆಗಳನ್ನು ಅವಲೋಕಿಸುವುದು ಈ ಛಾಯಾಗ್ರಹಣದ ಮಹತ್ವವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಛಾಯಾಗ್ರಹಣವೆಂದರೆ ಅದು ಬೆಳಕಿನೊಂದಿಗೆ ಬರೆದ ಕಥೆಗಳಂತೆ ರೋಮಾಂಚನಕಾರಿ. ಛಾಯಾಗ್ರಹಣದ ಆರಂಭಿಕ ದಿನಗಳು ನಿಜಕ್ಕೂ ಒಂದು ವೈಜ್ಞಾನಿಕತೆಯ ಅದ್ಭುತ ಆವಿಷ್ಕಾರ ಎನ್ನಬಹುದು.
ಛಾಯಾಗ್ರಹಣದ ಇತಿಹಾಸವು ಸುಮಾರು ೧೯ನೇ ಶತಮಾನದ ಆರಂಭದಿಂದಲೇ ಶುರುವಾಗುತ್ತದೆ. ಇದಕ್ಕೂ ಮೊದಲು, ಕಲಾವಿದರು “ಕ್ಯಾಮೆರಾ ಅಬ್ಸ್ಕ್ಯೂರಾ” (Camera Obscura) ಎಂಬ ಸಾಧನವನ್ನು ಬಳಸಿಕೊಂಡು ಚಿತ್ರಗಳನ್ನು ಬಿಡಿಸುತ್ತಿದ್ದರು. ಇದು ಛಾಯಾಗ್ರಹಣದ ಮೂಲ ತತ್ವಕ್ಕೆ ನಾಂದಿ ಹಾಡಿತು.
೧೮೨೬ ಅಥವಾ ೧೮೨೭ರಲ್ಲಿ ಫ್ರೆಂಚ್ ಸಂಶೋಧಕ ಜೋಸೆಫ್ ನೈಸ್‌ಫೋರ್ ನಿಯೆಪ್ಸ್ (Joseph Nicéphore Niépc) ಅವರು “ವ್ಯೂ ಫ್ರಮ್ ದಿ ವಿಂಡೋ ಅಟ್ ಲೆ ಗ್ರಾಸ್” (View from the Window at Le Gras) ಎಂಬ ತಮ್ಮ ಮೊದಲ ಯಶಸ್ವಿ ಛಾಯಾಚಿತ್ರವನ್ನು ತೆಗೆದರು. ಇದು ಹೆಲಿಯೋಗ್ರಾಫಿ (Heliography) ಎಂಬ ಪ್ರಕ್ರಿಯೆಯನ್ನು ಬಳಸಿಕೊಂಡು ಮಾಡಲಾಗಿತ್ತು. ಅಂದಿನ ದಿನಗಳಲ್ಲಿ ಒಂದು ಚಿತ್ರವು ಮೂಡಿಬರಲು ಕೆಲವು ದಿನಗಳೇ ಬೇಕಿತ್ತು.


೧೯ನೇ ಶತಮಾನದ ಆರಂಭದಲ್ಲಿ, ಜೋಸೆಫ್ ನೈಸೆಫೋರ್ ನಿಯೆಪ್ಸ್ (Joseph Nicéphore Niépce) ಅವರು ಪ್ರಪಂಚದ ಮೊದಲ ಶಾಶ್ವತ ಛಾಯಾಚಿತ್ರವನ್ನು ತೆಗೆದರು. ನಂತರ, ಲೂಯಿಸ್ ಡಾಗೆರ್ (Louis Daguerre) ಅವರ ಡಾಗೆರೋಟೈಪ್ (Daguerreotype ) ಪ್ರಕ್ರಿಯೆಯು ಛಾಯಾಗ್ರಹಣವನ್ನು ಸಾರ್ವಜನಿಕರಿಗೆ ಪರಿಚಯಿಸಿತು. ಈ ದಿನಗಳಲ್ಲಿ, ಚಿತ್ರಗಳನ್ನು ಸೆರೆಹಿಡಿಯುವುದು ಬಹಳ ಕಷ್ಟದ ಕೆಲಸವಾಗಿತ್ತು. ದೊಡ್ಡ ಕ್ಯಾಮೆರಾಗಳು, ದೀರ್ಘಾವಧಿಯ ಎಕ್ಸ್ಪೋಶರ್‌ಗಳು ಮತ್ತು ಅಪಾಯಕಾರಿ ರಾಸಾಯನಿಕಗಳ ಬಳಕೆ ಸಾಮಾನ್ಯವಾಗಿದ್ದವು. ಅಂದಿಗೆ ಡಾಗುರೋಟೈಪ್ ತಂತ್ರಜ್ಞಾನವು ಜನಪ್ರಿಯವಾಯಿತು ಮತ್ತು ಛಾಯಾಗ್ರಹಣವನ್ನು ಸ್ವಲ್ಪ ಮಟ್ಟಿಗೆ ಸಾಮಾನ್ಯ ಜನರಿಗೂ ದೊರಕುವಂತಾಯಿತು.


೧೮೪೧ರಲ್ಲಿ ವಿಲಿಯಂ ಹೆನ್ರಿ ಫಾಕ್ಸ್ ಟಾಲ್ಬೋಟ್ (William Henry Fox Talbot ) ಅವರು ಕ್ಯಾಲೋಟೈಪ್ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸಿದರು. ಇದು ನೆಗೆಟಿವ್‌ಗಳಿಂದ (Negatives) ಅನೇಕ ಪಾಸಿಟಿವ್ ಚಿತ್ರಗಳನ್ನು ಮುದ್ರಿಸಲು ಅವಕಾಶ ಮಾಡಿಕೊಟ್ಟಿತು. ನಂತರ, ೧೮೫೦ರ ದಶಕದಲ್ಲಿ, “ವೆಟ್ ಕೊಲೊಡಿಯನ್ ಪ್ಲೇಟ್” (Wet Collodion Plate) ವಿಧಾನವು ಜನಪ್ರಿಯವಾಯಿತು. ಇದು ಉತ್ತಮ ಗುಣಮಟ್ಟದ ಚಿತ್ರಗಳನ್ನು ಒದಗಿಸಿತು, ಆದರೆ ಛಾಯಾಚಿತ್ರಗಳನ್ನು ಸ್ಥಳದಲ್ಲೇ ಅಭಿವೃದ್ಧಿಪಡಿಸಬೇಕಿತ್ತು.


ಈ ಸವಾಲುಗಳ ಹೊರತಾಗಿಯೂ, ಛಾಯಾಗ್ರಾಹಕರು ಪ್ರಪಂಚದಾದ್ಯಂತ ಸಂಚರಿಸಿ, ಯುದ್ಧಗಳ ದೃಶ್ಯಗಳನ್ನು, ಐತಿಹಾಸಿಕ ಘಟನೆಗಳನ್ನು ಮತ್ತು ವಿವಿಧ ಸಂಸ್ಕೃತಿಗಳನ್ನು ದಾಖಲಿಸಿದರು. ಅಬ್ರಹಾಂ ಲಿಂಕನ್ ಅವರ ಭಾವಚಿತ್ರಗಳು, ಅಮೆರಿಕಾದ ಅಂತರ್ಯುದ್ಧದ ದೃಶ್ಯಗಳು, ಇವೆಲ್ಲವೂ ಇಂದಿಗೂ ನಮಗೆ ಇತಿಹಾಸವನ್ನು ನೆನಪಿಸುತ್ತವೆ.ಕಪ್ಪು ಬಿಳುಪು ಛಾಯಾಗ್ರಹಣವು (Black and White Photography) ಆ ಕಾಲದ ಪ್ರಮುಖ ಮಾಧ್ಯಮವಾಗಿತ್ತು, ಇದು ಭಾವನೆಗಳನ್ನು ಮತ್ತು ಆಳವನ್ನು ಅದ್ಭುತವಾಗಿ ಸೆರೆಹಿಡಿಯುತ್ತಿತ್ತು. ೨೦ನೇ ಶತಮಾನದಲ್ಲಿ, ಕೋಡಾಕ್‌ನಂತಹ (ಏoಜಚಿಞ) ಕಂಪನಿಗಳು ಫಿಲ್ಮ್ ಕ್ಯಾಮೆರಾಗಳನ್ನು (ಈiಟm ಅಚಿmeಡಿಚಿs) ಜನಪ್ರಿಯಗೊಳಿಸಿದವು. ಇದರಿಂದ ಛಾಯಾಗ್ರಹಣವು ಹೆಚ್ಚು ಸುಲಭವಾಗಿ ಎಲ್ಲರಿಗೂ ಲಭ್ಯವಾಗುವಂತಾಯಿತು.


೧೮೭೦ರ ದಶಕದಲ್ಲಿ ಡ್ರೈ ಪ್ಲೇಟ್‌ಗಳ ಪರಿಚಯದಿಂದ ಛಾಯಾಗ್ರಾಹಕರಿಗೆ ಹೆಚ್ಚು ಅನುಕೂಲವಾಯಿತು. ೧೮೮೮ರಲ್ಲಿ ಜಾರ್ಜ್ ಈಸ್ಟ್ಮನ್ (Black and White Photography ) ಅವರು “ಕೋಡಾಕ್” (Kodak) ಕ್ಯಾಮರಾವನ್ನು ಪರಿಚಯಿಸಿದರು. ಇದು ಫಿಲ್ಮ್ ರೋಲ್(Film Cameras) ಬಳಸುತ್ತಿದ್ದ ಕಾಲವಾಗಿತ್ತು. ಅಂದು ಕೊಡಾಕ್ “ನೀವು ಬಟನ್ ಒತ್ತಿ, ಉಳಿದದ್ದನ್ನು ನಾವು ನೋಡಿಕೊಳ್ಳುತ್ತೇವೆ” ಎಂಬ ಘೋಷವಾಕ್ಯದೊಂದಿಗೆ ಛಾಯಾಗ್ರಹಣವನ್ನು ಸಾರ್ವಜನಿಕರಿಗೆ ಇನ್ನಷ್ಟು ಸುಲಭಗೊಳಿಸಿತು. ಇದು “ಕ್ಷಣಾರ್ಧದಲ್ಲಿ ತೆಗೆದ ಚಿತ್ರ” ಚಿತ್ರಪರಿಕಲ್ಪನೆಗೆ ಕಾರಣವಾಯಿತು. ಅಂದಿನಿಂದ ಇನ್ನೂ ಹೆಚ್ಚಿನ
ಜನರಿಗೆ ತಲುಪುತ್ತಾ ತನ್ನ ಕ್ಷೇತ್ರವನ್ನು ಜಗತ್ತಿನಾದ್ಯಂತ ಬೆಳೆಸುತ್ತಾ ಹೋಯ್ತು ಎನ್ನಬಹುದು.

೨೦ನೇ ಶತಮಾನದ ಆರಂಭದಲ್ಲಿ ಬಣ್ಣದ ಛಾಯಾಗ್ರಹಣದ ಪ್ರಯೋಗಗಳು ಪ್ರಾರಂಭವಾದವು. ೧೯೩೦ ಮತ್ತು ೪೦ರ ದಶಕಗಳಲ್ಲಿ ಕೋಡಾಕ್ ಕ್ರೋಮ್ (Kodak ) ಮತ್ತು ಎಕ್ತಾಕ್ರೋಮ್ (Film Cameras ) ಫಿಲ್ಮ್ಗಳ ಪರಿಚಯದೊಂದಿಗೆ ಬಣ್ಣದ ಛಾಯಾಗ್ರಹಣವು ಹೆಚ್ಚು ಸುಲಭವಾಗಿ ಜನಸಾಮನ್ಯರಿಗೆ ಲಭ್ಯವಾಯಿತು.
೨೦ನೇ ಶತಮಾನದ ಅಂತ್ಯದಿಂದ ೨೧ನೇ ಶತಮಾನದ ಪ್ರಾರಂಭದವರೆಗಿನ ಅವಧಿಯ ಡಿಜಿಟಲ್ ಕ್ರಾಂತಿ. ಛಾಯಾಗ್ರಹಣದಲ್ಲಿ ಮಹತ್ತರ ಬದಲಾವಣೆಗಳನ್ನು ತಂದಿತು.


೧೯೯೦ರ ದಶಕದಲ್ಲಿ ಡಿಜಿಟಲ್ ಕ್ಯಾಮೆರಾಗಳು ಮಾರುಕಟ್ಟೆಗೆ ಬಂದವು. ಆರಂಭದಲ್ಲಿ ಅವು ದುಬಾರಿ ಬೆಲೆಯದಾಗಿದ್ದವು ಮತ್ತು ಗುಣಮಟ್ಟ ಇಂದಿಗೆ ಹೋಲಿಸಿದರೆ ಕಡಿಮೆ ಗುಣಮಟ್ಟದ್ದಾಗಿತ್ತು. ಆದರೆ ತಂತ್ರಜ್ಞಾನ ಬೆಳೆದಂತೆಲ್ಲ ಡಿಜಿಟಲ್ ಕ್ಯಾಮೆರಾಗಳು ಫಿಲ್ಮ್ ಕ್ಯಾಮೆರಾಗಳನ್ನು ಹಿಂದಿಕ್ಕಿ ಹೆಚ್ಚು ಜನಪ್ರಿಯವಾಗಿ ಬಳಕೆಗೆ ಬಂದವು. ಡಿಜಿಟಲ್ ಕ್ಯಾಮೆರಾಗಳು ಚಿತ್ರಗಳನ್ನು ತಕ್ಷಣವೇ ವೀಕ್ಷಿಸಲು, ಕೂಡಿಡಲು ಮತ್ತು ಹಂಚಿಕೊಳ್ಳಲು ಅನುಕೂಲಕ್ಕೆ ತಕ್ಕಂತೆ ಸುಲಭವಗಿ ಬಳಸಲು ಬರುವಂತೆ ನಿರ್ಮಾಣವಾಯ್ತು.
ಹಾಗೆಯೇ ಸ್ಮಾರ್ಟ್ಫೋನ್‌ಗಳ ಆಗಮನವು ಛಾಯಾಗ್ರಹಣವನ್ನು ಪ್ರತಿಯೊಬ್ಬರ ಕೈಗೆ ತಂದಿತು ಎಂದರೆ ಸುಳ್ಳಾಹಲಾರದು. ಇಂದು, ಹೆಚ್ಚಿನ ಜನರು ತಮ್ಮ ಸ್ಮಾರ್ಟ್ಫೋನ್‌ಗಳಿಂದಲೇ ಚಿತ್ರಗಳನ್ನು ತೆಗೆದುಕೊಳ್ಳುತ್ತಾರೆ. ಮೊಬೈಲ್ ಕ್ಯಾಮೆರಾಗಳು ಉತ್ತಮ ಗುಣಮಟ್ಟದ ಲೆನ್ಸ್ಗಳು, ಇಮೇಜ್ ಸೆನ್ಸರ್‌ಗಳು ಮತ್ತು ಸುಧಾರಿತ ಇಮೇಜ್ ಪ್ರೊಸೆಸಿಂಗ್
ಸಾಮರ್ಥ್ಯಗಳನ್ನು ಹೊಂದಿವೆ. ಇದಕ್ಕೆ ಸೇರ್ಪಡೆಗೊಂಡ ವಿವಿಧ ಫೋಟೋ ಎಡಿಟಿಂಗ್ ಅಪ್ಲಿಕೇಶನ್‌ಗಳು (ಉದಾಹರಣೆಗೆ: instagram, Snapseed, Mobile Lightroom ) ಚಿತ್ರಗಳನ್ನು ತೆಗೆದ ನಂತರವೂ ಅವುಗಳನ್ನು ಸುಲಭವಾಗಿ ಸುಧಾರಿಸಲು ಅನುವು ಮಾಡಿಕೊಡುತ್ತಿವೆ.


Klive Special Article ಇನ್‌ಸ್ಟಾಗ್ರಾಮ್, ಫೇಸ್‌ಬುಕ್, ಟ್ವಿಟರ್, ಸ್ನ್ಯಾಪ್ ಚಾಟ್ ನಂತಹ ಸಾಮಾಜಿಕ ಮಾಧ್ಯಮಗಳು ಛಾಯಾಗ್ರಹಣವನ್ನು ಹಂಚಿಕೊಳ್ಳುವ ಮತ್ತು ಅದನ್ನು ಅನುಭವಿಸುವ ವಿಧಾನವನ್ನು ಸಂಪೂರ್ಣವಾಗಿ ಬದಲಾಯಿಸಿವೆ. ಪ್ರತಿಯೊಬ್ಬರೂ ಈಗ ತಮ್ಮ ದೈನಂದಿನ ಜೀವನದ ಕ್ಷಣಗಳನ್ನು, ಪ್ರಯಾಣದ ಅನುಭವಗಳನ್ನು ಮತ್ತು ಸೃಜನಾತ್ಮಕ ದೃಷ್ಟಿಕೋನಗಳನ್ನು ಲಕ್ಷಾಂತರ ಜನರೊಂದಿಗೆ ಹಂಚಿಕೊಳ್ಳಬಹುದು. ಇದರಿಂದ ‘ವಿಷುಯಲ್ ಸ್ಟೋರಿಟೆಲ್ಲಿಂಗ್’ (Visual Storytelling) ಹೆಚ್ಚು ಜನಪ್ರಿಯವಾಗಿದೆ.
ಇಂದಿನ ಸ್ಮಾರ್ಟ್ಫೋನ್‌ಗಳು ಮತ್ತು ಕ್ಯಾಮೆರಾಗಳು AI ಆಧಾರಿತ ತಂತ್ರಜ್ಞಾನಗಳನ್ನು ಬಳಸುತ್ತವೆ. ಉದಾಹರಣೆಗೆ, ಪೋಟ್ರೈಟ್, ಮೋಡ್, ರಾತ್ರಿ ಮೋಡ್, ದೃಶ್ಯ ಗುರುತಿಸುವಿಕೆ (Scene Recognition) ಮುಂತಾದ ವೈಶಿಷ್ಟ್ಯಗಳು AI ಅನ್ನು ಅವಲಂಬಿಸಿವೆ. ಇವು ಉತ್ತಮ ಗುಣಮಟ್ಟದ ಚಿತ್ರಗಳನ್ನು ಸೆರೆಹಿಡಿಯಲು ಮತ್ತು ಸ್ವಯಂಚಾಲಿತವಾಗಿ ಸುಧಾರಿಸಲು ಸಹಾಯ ಮಾಡುತ್ತವೆ. ಗಣಕೀಯ ಛಾಯಾಗ್ರಹಣವು (Computational Photography) ಅನೇಕ ಚಿತ್ರಗಳನ್ನು ಒಟ್ಟಾಗಿ ಸಂಸ್ಕರಿಸಿ ಒಂದು ಉತ್ತಮ ಗುಣಮಟ್ಟದ ಚಿತ್ರವನ್ನು ಸೃಷ್ಟಿಸುತ್ತದೆ, ಇದು ಕಡಿಮೆ ಬೆಳಕಿನಲ್ಲಿಯೂ ಅದ್ಭುತ ಚಿತ್ರಗಳನ್ನು ಸೆರೆಹಿಡಿಯಲು ಸಾಧ್ಯವಾಗಿಸಿದೆ.
ಛಾಯಾಗ್ರಹಣದ ಭವಿಷ್ಯವನ್ನ ಗ್ರಹಿಸಿ ಹೇಳುವುದಾದರೆ, ನಿರಂತರವಾಗಿ ವಿಕಸನಗೊಂಡು ಇನ್ನಷ್ಟು ಹೊಸ ಹೊಸ ಆವಿಷ್ಕಾರಗಳು ಬರುವ ಸಾಧ್ಯತೆಗಳಿವೆ.


AI ಮತ್ತಷ್ಟು ಉನ್ನತೀರಣಗೊಂಡು, ಚಿತ್ರಗಳ ಸಂಸ್ಕರಣೆ ಮತ್ತು ವರ್ಧನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬಹುಶಃ, ಕಡಿಮೆ ಬೆಳಕಿನಲ್ಲೂ ಅತ್ಯಂತ ಸ್ಪಷ್ಟವಾದ ಚಿತ್ರಗಳನ್ನು ಸೆರೆಹಿಡಿಯುವುದು, ಚಿತ್ರಗಳಲ್ಲಿ ಅನಗತ್ಯ ವಸ್ತುಗಳನ್ನು ಸ್ವಯಂಚಾಲಿತವಾಗಿ ತೆಗೆದುಹಾಕುವುದು ಅಥವಾ ಹೊಸ ಹಿನ್ನೆಲೆ (Background) ಗಳನ್ನು ಸೇರಿಸುವುದು ಸಾಮಾನ್ಯವಾಗಬಹುದು. ಒಂದು ದೃಷ್ಟಿಯಲ್ಲಿ AI ಛಾಯಾಗ್ರಾಹಕರ ಸೃಜನಶೀಲತೆಯನ್ನು ಇನ್ನಷ್ಟು ಹೆಚ್ಚಿಸಲು ಸಹಾಯ ಮಾಡಿದರೆ, ತನ್ನ ಸೃಜನಶೀಲ ಕಲಾತ್ಮಕತೆಯನ್ನ ಕೊನೆಗಾಣಿಸುವ ಭಯವೂ ಇಲ್ಲದಿಲ್ಲ.


ಛಾಯಾಗ್ರಹಣವು AR (Augmented Reality ) ಮತ್ತು ಗಿಖ (Virtual Reality ) ತಂತ್ರಜ್ಞಾನಗಳೊಂದಿಗೆ ಬೆರೆತು ಹೊಸ ಆಯಾಮಗಳನ್ನು ತೆರೆದಿಡುತ್ತಿದೆ. ೩೬೦-ಡಿಗ್ರಿ ಚಿತ್ರಗಳು ಮತ್ತು ವೀಡಿಯೊಗಳು ಇನ್ನಷ್ಟು ವ್ಯಾಪಕವಾಗಬಹುದು, ಮತ್ತು ಜನರು ವರ್ಚುವಲ್ ಪರಿಸರದಲ್ಲಿ ಚಿತ್ರಗಳನ್ನು ಸೃಷ್ಟಿಸಿ ತನ್ನ ಕಲ್ಪನಾ ಲೋಕದ ಚಿತ್ರಗಳನ್ನೇ ಚಿತ್ರಿಸಿ ಅನುಭವಿಸಬಹುದು. AI ಬಳಸಿ, ಚಿತ್ರಗಳನ್ನು ನೈಜ ಪ್ರಪಂಚದಲ್ಲಿ ಅಳವಡಿಸಿ, ಹೊಸ ರೀತಿಯ ದೃಶ್ಯ ಕಥೆಗಳನ್ನು ರಚಿಸಬಹುದು.


ಲೈಟ್ರೋ (Lytro) ನಂತಹ ಕಂಪನಿಗಳು ಈಗಾಗಲೇ ಲೈಟ್ ಫೀಲ್ಡ್ ಕ್ಯಾಮೆರಾಗಳನ್ನು ಪರಿಚಯಿಸಿವೆ, ಅಲ್ಲಿ ಚಿತ್ರ ತೆಗೆದ ನಂತರವೂ ಫೋಕಸ್ ಪಾಯಿಂಟ್ ಅನ್ನು ಬದಲಾಯಿಸಬಹುದು. ಈ ತಂತ್ರಜ್ಞಾನವು ಭವಿಷ್ಯದಲ್ಲಿ ಹೆಚ್ಚು ಪ್ರಚಲಿತಕ್ಕೆ ಬರಬಹುದು, ಈ ತಂತ್ರಜ್ಞಾನ ಛಾಯಾಗ್ರಾಹಕರಿಗೆ ಚಿತ್ರ ತೆಗೆಯುವಲ್ಲಿ ಹೆಚ್ಚಿನ ಸ್ವಾತಂತ್ರ್ಯವನ್ನು ನೀಡುತ್ತದೆ.
ಕ್ಯಾಮೆರಾಗಳು ಮತ್ತಷ್ಟು ಬುದ್ಧಿವಂತಿಕೆಯನ್ನು ಪಡೆದುಕೊಳ್ಳಬಹುದು. ಸ್ವಯಂಚಾಲಿತವಾಗಿ ಅತ್ಯುತ್ತಮ ಸೆಟ್ಟಿಂಗ್‌ಗಳನ್ನು ನಿರ್ಧರಿಸುವುದು, ತಾನು ಚಿತ್ರಿಸಬೇಕಾದ ವಿಷಯಗಳನ್ನು ಗುರುತಿಸಿ ಟ್ರ್ಯಾಕ್ ಮಾಡುವುದು ಅಥವಾ ಡ್ರೋನ್‌ಗಳ ಮೂಲಕ ಚಿತ್ರಗಳನ್ನು ಸೆರೆಹಿಡಿಯುವುದು ಇನ್ನಷ್ಟು ಸುಲಭವಾಗುತ್ತದೆ.


ಕಡಿಮೆ ಬೆಳಕಿನಲ್ಲಿ ಉತ್ತಮ ಕಾರ್ಯಕ್ಷಮತೆ, ಹೆಚ್ಚಿನ ಡೈನಾಮಿಕ್ ರೇಂಜ್ ಮತ್ತು ಬಣ್ಣಗಳ ನಿಖರತೆಯನ್ನು ನೀಡುವ ಹೊಸ ತಲೆಮಾರಿನ ಇಮೇಜ್ ಸೆನ್ಸರ್‌ಗಳನ್ನು ನಾವು ನಿರೀಕ್ಷಿಸಬಹುದು. ಕ್ವಾಂಟಮ್ ಡಾಟ್ (Quantum Dot) ತಂತ್ರಜ್ಞಾನಗಳು ಮತ್ತು ಸಾವಯವ ಸೆನ್ಸರ್‌ಗಳು (Organic Sensors) ಹೊಸ ಸಾಧ್ಯತೆಗಳನ್ನು ಮುಂದಿನ ದಿನಗಳಲ್ಲಿ ಕಾಣಬಹುದು.
ಇತ್ತೀಚಿನ ಬೆಳವಣಿಗೆಯೊಂದರಲ್ಲಿ ನಾನು ಕಂಡಂತೆ ನರವಿಜ್ಞಾನಗಳ ತಂತ್ರಜ್ಞಾನದ ಮೂಲಕ ಮೆದುಳಿನ ವಿವಿಧ ಭಾಗಗಳ ಚಟುವಟಿಕೆ ಮತ್ತು ಕಾರ್ಯ ರಚನೆಯನ್ನು ಅನುಸರಿಸಿ ಮೆದುಳಿನ ನಕ್ಷೆ(Brain mapping) ರಚಿಸುವ ಮೂಲಕ, ಮನುಷ್ಯ ತಾನು ಏನನ್ನು ಗ್ರಹಿಸಿದ್ದಾನೋ ಅದನ್ನೇ ತರಂಗಗಳ ಮೂಲಕ ಕ್ರೋಢೀಕರಿಸಿ ಚಿತ್ರಿಸುವ ಹೊಸ ತಂತ್ರಜ್ಞಾನವೂ ಕೂಡ ಬರಲಿದೆ ಎನ್ನುವುದನ್ನ ನಮ್ಮ ಜೀವಮಾನದಲ್ಲೇ ಕಾಣಬಹುದು.


ಛಾಯಾಗ್ರಹಣವು ಬೆಳೆದಂತೆ, ಗೌಪ್ಯತೆ ಮತ್ತು ನೈತಿಕತೆಯ ಪ್ರಶ್ನೆಗಳು ಇನ್ನಷ್ಟು ಪ್ರಮುಖವಾಗುತ್ತವೆ. ಇಂದಿನ AI ಮೂಲಕ ಚಿತ್ರಗಳನ್ನು ನಿರ್ಮಿಸುವ ಸಾಮರ್ಥ್ಯವು ‘ನಕಲಿ’ ಚಿತ್ರಗಳನ್ನು ಸೃಷ್ಟಿಸಿ ಅಪಾಯವನ್ನು ಹೆಚ್ಚಿಸಬಹುದು. ಸಾರ್ವಜನಿಕ ಸ್ಥಳಗಳಲ್ಲಿ ಚಿತ್ರಗಳನ್ನು ತೆಗೆಯುವ ನಿಯಮಗಳು, ಫೇಸ್ ರೆಕಗ್ನಿಷನ್ (Face Recognition) ತಂತ್ರಜ್ಞಾನದ ಬಳಕೆ ಮುಂತಾದ ವಿಷಯಗಳ ಬಗ್ಗೆ ಚರ್ಚೆಗಳು ಹೆಚ್ಚಾಗುತ್ತವೆ.


ಒಟ್ಟಾರೆಯಾಗಿ ಹೇಳುವುದಾದರೆ, ಛಾಯಾಗ್ರಹಣವು ನಿನ್ನೆಯ ಪ್ರಯೋಗಗಳಿಂದ, ಇಂದಿನ ಡಿಜಿಟಲ್ ಕ್ರಾಂತಿಯ ಮೂಲಕ ನಾಳೆಯ ಅನಂತ ಸಾಧ್ಯತೆಗಳ ಕಡೆಗೆ ಸಾಗುತ್ತಿದೆ. ಇದು ಕೇವಲ ತಂತ್ರಜ್ಞಾನದ ಮುನ್ನಡೆಯಲ್ಲ, ಬದಲಿಗೆ ಮಾನವನ ಸೃಜನಶೀಲತೆ ಮತ್ತು ದೃಷ್ಟಿಕೋನದ ನಿರಂತರ ಅನ್ವೇಷಣೆ ಹೌದೆನ್ನಬಹುದು. ನಮ್ಮ ಸುತ್ತಲಿನ ಪ್ರಪಂಚವನ್ನು ಅರ್ಥಮಾಡಿಕೊಳ್ಳಲು, ನಾಳಿನ ಪೀಳಿಗೆಯು ಹಿಂದಿನ ಇತಿಹಾಸವನ್ನು ತಿಳಿಯಲು ಛಾಯಾಗ್ರಹಣವು ಒಂದು ಶಕ್ತಿಶಾಲಿ ಮಾಧ್ಯಮವಾಗಿ ಮುಂದುವರಿಯುತ್ತಿದೆ. ಭವಿಷ್ಯದಲ್ಲಿ ಇದು ಇನ್ನಷ್ಟು ವೈಯಕ್ತಿಕ, ಸಂವಾದಾತ್ಮಕ ಮತ್ತು ಎಲ್ಲರಿಗೂ ಸುಲಭವಾಗಿ ತಲುಪುವ ಮಾಧ್ಯಮವಾಗಿ ರೂಪುಗೊಳ್ಳಲಿದೆ ಎಂಬುದರಲ್ಲಿ ಸಂಶಯವಿಲ್ಲ.


Acharya Tulsi National College of Commerce ಒತ್ತಡ ಮುಕ್ತ ಜೀವನಕ್ಕೆ ಆಧ್ಯಾತ್ಮ ಶಿಕ್ಷಣ ಮುಖ್ಯ-ಬಿ.ಕೆ.ಸ್ವಾತಿ

0

Acharya Tulsi National College of Commerce ಜೀವನ ನಡೆಸಲು ಆಧ್ಯಾತ್ಮ ಶಿಕ್ಷಣ ಅತ್ಯಂತ ಅಗತ್ಯ ಎಂದು ಬ್ರಹ್ಮಕುಮಾರೀಸ್ ನವುಲೆ ಕೇಂದ್ರದ ಬಿ.ಕೆ.ಸ್ವಾತಿ ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿಯ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಚಂದನ ಸಭಾಂಗಣದಲ್ಲಿ ಯೋಗ ಮುಖೇನ ಒತ್ತಡ ನಿರ್ವಹಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ರಕ್ಷಾಬಂಧನ ಕಟ್ಟಿ ಸಿಹಿ ನೀಡಿ ಮಾತನಾಡಿ, ಮನೋ ಶಾರೀರಿಕ ಕಾಯಿಲೆ ಹಾಗೂ ಮಾನಸಿಕ ಸ್ಥಿತಿ ಸರಿಯಾಗಿ ಇಟ್ಟುಕೊಳ್ಳಲು ಯೋಗ, ಪ್ರಾಣಾಯಾಮ, ಧ್ಯಾನ ಹಾಗೂ ಸಕಾರಾತ್ಮಕ ಚಿಂತನೆಗಳು ಅತಿ ಮುಖ್ಯ ಎಂದು ತಿಳಿಸಿದರು.

ಅನಾವಶ್ಯಕ ಮೊಬೈಲ್ ಉಪಯೋಗವೂ ಸಹ ಒಂದು ಮಾದಕ. ಬೇಡವಾದ ದುರ್ವಿಚಾರ, ದುರ್ನಡತೆ ದೇಹದ ಮೇಲೆ ಅತಿಯಾದ ಒತ್ತಡ ನೀಡುತ್ತವೆ. ದಿನದ 24 ಗಂಟೆಗಳಲ್ಲಿ ನಮಗಾಗಿ ಒಂದು ಗಂಟೆ ಮೀಸಲಿಟ್ಟು ಧ್ಯಾನ, ಪ್ರಾಣಾಯಾಮ, ಯೋಗದಲ್ಲಿ ಪಾಲ್ಗೊಳ್ಳಬೇಕು ಎಂದು ನುಡಿದರು.

ನಮ್ಮ ಮನಸ್ಸನ್ನು, ನಮ್ಮ ದೇಹವನ್ನು, ನಮ್ಮ ಆಂತರಿಕ ಶಕ್ತಿಯನ್ನು ನಾವು ನಂಬಬೇಕು. ಅನಾವಶ್ಯಕವಾಗಿ ಇನ್ನೊಬ್ಬರ ವಿಷಯಗಳಲ್ಲಿ ಮಾತನಾಡುವುದು ಹಾಗೂ ನಿಂದಿಸುವುದು. ಬೇಡವಾದ ವಿಷಯಗಳನ್ನು ಬೆಳಗ್ಗೆ ತುಂಬುವುದರಿಂದ ಅನಾವಶ್ಯಕವಾಗಿ ಒತ್ತಡ ಹೆಚ್ಚುತ್ತದೆ. ಒತ್ತಡದಿಂದ ನಾವು ದೂರವಿದ್ದರೆ ಇಡೀ ಕುಟುಂಬ ವಾತಾವರಣ ಹಾಗೂ ನಾವು ಮಾಡುವ ಕಾರ್ಯಕ್ಷೇತ್ರ ತುಂಬಾ ಚೆನ್ನಾಗಿ ಇರುವುದರ ಜೊತೆಗೆ ನಾವು ಉತ್ತಮ ಜೀವನವನ್ನು ದೀರ್ಘಕಾಲ ನಡೆಸುತ್ತೇವೆ ಎಂದರು.

ಅತಿಯಾದ ಒತ್ತಡದಿಂದ ಚಿಕ್ಕ ಚಿಕ್ಕ ಮಕ್ಕಳು, ವಿದ್ಯಾರ್ಥಿಗಳು ಸಾವನ್ನಪ್ಪುತ್ತಿದ್ದಾರೆ. ಇದೆಲ್ಲ ಕಾರಣಗಳಿಂದ ನಾವು ಹೊರಬರಲು ಇಂತಹ ಆಧ್ಯಾತ್ಮಿಕ ಚಿಂತನೆ ಬಹಳ ಮುಖ್ಯ ಎಂದು ತಿಳಿಸಿದರು.
ಪ್ರೊ. ಮಮತಾ ಪಿ.ಆರ್. ಮಾತನಾಡಿ, ವಿದ್ಯಾರ್ಥಿಗಳು ಸಹ ಒತ್ತಡದಲ್ಲಿ ಕಾಲ ಕಳೆಯುತ್ತಿರುತ್ತಾರೆ. ನಮ್ಮ ಜೀವನಶೈಲಿಯನ್ನು ರೂಪಿಸುವ, ನಮ್ಮ ಕೌಶಲ್ಯಗಳನ್ನು ವೃದ್ಧಿಸುವ ಆಧ್ಯಾತ್ಮಿಕ ಧ್ಯಾನ ತರಬೇತಿಗಳು ಇಂದು ಪ್ರಸ್ತುತ. ಆದ್ದರಿಂದ ಇಂತಹ ತರಬೇತಿಗಳ ಶಿಬಿರಗಳನ್ನು ಪಾಲ್ಗೊಳ್ಳುವುದರ ಜೊತೆಗೆ ನಾವು ಒಳ್ಳೆಯ ಜೀವನ ಕಲೆಯನ್ನು ರೂಪಿಸಿಕೊಳ್ಳೋಣ ಎಂದು ತಿಳಿಸಿದರು.

Acharya Tulsi National College of Commerce ನಿವೃತ್ತ ದೈಹಿಕ ಶಿಕ್ಷಕ ನಿರ್ದೇಶಕ ಪ್ರೊ. ಕೆ.ಎಂ.ನಾಗರಾಜ್ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಆಧ್ಯಾತ್ಮ ಯೋಗ ಶಿಕ್ಷಣ ಅಗತ್ಯ ಎಂದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಎಲ್ಲಾ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಮುಖ್ಯ ಎಂದರು.

ಪ್ರೊ. ಸೌಪರ್ಣಿಕಾ ಉಮೇಶ್, ಪ್ರೊ. ಪ್ರವೀಣ್ ಬಿ ಎನ್, ಪ್ರೊ. ಗಾಯತ್ರಿ ಟಿ, ಶೃತಿ ಕೆ, ಬ್ರಹ್ಮಕುಮಾರಿ ಸಂಸ್ಥೆಯ ಕಾವ್ಯಶ್ರೀ ಕೆ ವಿ, ನೀಲಮ್ಮ, ನಾಗಶ್ರೀ, ಪ್ರೊ. ಭಾರತಿ ಉಪಸ್ಥಿತರಿದ್ದರು.

Rotary Organization ಜೀವನದಲ್ಲಿ ಹೆಚ್ಚು ಸಂತೋಷ ದೊರಕುವುದು, ಸಹಾಯ ಪಡೆದವರು ಹರಸಿದಾಗ- ಡಾ.ಗುಡದಪ್ಪ ಕಸಬಿ

0

Rotary Organization ಮಾನವ ಸ್ನೇಹ ಜೀವಿ, ಇದರ ಅನುಭವ ಪಡೆಯಲು ರೋಟರಿ ಸಂಸ್ಥೆ ಸೇರಿ ಸೇವಾ ಕಾರ್ಯದಲ್ಲಿ ತೊಡಗಿಕೊಂಡಾಗ ಜೀವನದಲ್ಲಿ ಸಾರ್ಥಕತೆ ಹೊಂದಲು ಸಾದ್ಯವಾಗುತ್ತದೆ ಎಂದು ರೋಟರಿ ಜ್ಯೂಬಿಲಿ ವಾರದ ಸಭೆಯ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಅಸಿಸ್ಟೆಂಟ್ ಗೌರ್ನರ್ ಡಾ.ಗುಡದಪ್ಪಕಸಬಿ ಮಾತನಾಡುತ್ತಿದ್ದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ನಿಸ್ವಾರ್ಥ ಸೇವೆಯಲ್ಲಿ ರೋಟರಿ ಮುಂಚೋಣಿಯಲ್ಲಿದೆ. ಪ್ರತಿಯೊಬ್ಬ ಸದಸ್ಯರು ತಮ್ಮ ದುಡಿಮೆಯ ಒಂದು ಪಾಲು ಸೇವೆಗಾಗಿ ಮುಡುಪಿಟ್ಟು, ದೇಣಿಗೆ ನೀಡಿ, ಅವಶ್ಯಕತೆ ಇರುವವರಿಗೆ ಅನುಕೂಲ ಮಾಡಿಕೊಟ್ಟು ಸಂತೋಷ ಹೊಂದುತ್ತಾರೆ. ಜೀವನದಲ್ಲಿ ಅತೀ ಹೆಚ್ಚು ಸಂತೋಷ ದೊರಕುವುದು, ಸಹಾಯ ಪಡೆದವರು ಹರಸಿದಾಗ
ಯಾರು ಯಾವ ಸಮಯದಲ್ಲಿ ಏನನ್ನು ಮಾಡುತ್ತಾರೆ ಗೊತ್ತಾಗೊಲ್ಲ, ವಜ್ರ ತಯಾರಕರಿಬ್ಬರು, ರಾಷ್ಟ್ರಾದ್ಯಂತ ರೈಲ್ವೇಹಳಿ ಕುಲಷಿತ ಗೊಳ್ಳುವುದನ್ನು ತಪ್ಪಿಸಲು ಬಯೋ ಟಾಯ್ಲೆಟ್ ಕಂಡುಹಿಡಿದರು, ಇದರಿಂದ ಸ್ವಚ್ಛ ಭಾರತಕ್ಕೆ ನಂದಿಯಾಯಿತು. ಕೆಲವರು ಜೀವನ ಸುಂದರ ಎನ್ನುತ್ತಾರೆ, ನಾವು ಕಲ್ಪಿಸಿ ಕೊಂಡಂತೆ ಇರುತ್ತದೆ.
ಸರ್ಕಾರ ದೃಷ್ಠಿ ದೋಷ ಮುಕ್ತ ಸಮಾಜ ನಿರ್ಮಾಣಕ್ಕೆ ಪಣ ತ್ತೊಟ್ಟಿದ್ದು, 5.5ಕೊಟಿ ವೆಚ್ಛದ ಕಾರ್ಯಕ್ರಮ, ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಲಾಗುತ್ತದೆ. ಹಲವರಿಗೆ ದೃಷ್ಟಿ ದೊಷ ಇರುವುದರಿಂದ, ಕನ್ನಡಕದ ಅವಶ್ಯಕತೆ ಇರುತ್ತದೆ, ತಮ್ಮ ಕ್ಲಬ್ ವತಿಯಿಂದ ಸರ್ಕಾರದ ಕಾರ್ಯಕ್ರಮ ಆಯೋಜಿಸಿದಲ್ಲಿಗೆ ಬಂದು ಅಗತ್ಯತೆ ಇರುವವರಿಗೆ, ಸ್ಥಳದಲ್ಲೆ ದೊರಕುವ ಕನ್ನಡಕವನ್ನು ವಯೋವೃದ್ದ ಬಡವರಿಗೆ ಕೊಡಸಿದರೆ ಅವರಿಂದ ದೊರಕುವ ಆಶಿರ್ವಾದ ಅವರ್ಣನಿಯ ಅನುಭವ ನೀಡುತ್ತದೆ ಎಂದರು.
Rotary Organization ಅಧ್ಯಕ್ಷತೆಯನ್ನು ರೊ.ಬಿ.ಎಸ್.ಅಶ್ವಥ್ ವಹಿಸಿ ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು, ಕಾರ್ಯದರ್ಶಿ ರೊ.ರೇವಣಸಿದ್ದಪ್ಪ ವಂದಿಸಿದರು, ನವೀನ್, ಭಾರದ್ವಾಜ್, ಸತ್ಯನಾರಾಯಣ್, ನಾಗರಾಜ್ ಉಮಾದೇವಿ, ಉಮೇಶ್, ಜವಳಿ, ವೆಂಕಟರಮಣಭಟ್ ಇತರ ಸದಸ್ಯರು ಭಾಗವಹಿಸಿದ್ದರು.

Friends Center ಸರಿಯಾದ ನಿದ್ರೆ, ಬೆಳಿಗ್ಗೆ ಬೇಗ ಏಳುವುದು, ನಕ್ಕು ನಲಿವುದು ಬಾಳಿಗೆ ದಿವ್ಯೌಷಧ- ಡಾ.ಧನಂಜಯ ಸರ್ಜಿ

0

Friends Center ಪ್ರತಿಯೊಬ್ಬರೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಮುಂದಾಗಬೇಕು. ಸರಿಯಾದ ಜೀವನಶೈಲಿ ಉತ್ತಮ ಆರೋಗ್ಯ ಸಹಕಾರಿ ಎಂದು ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಹೇಳಿದರು.

ಶಿವಮೊಗ್ಗ ನಗರದ ಆಲ್ಕೋಳ ವೃತ್ತ ಸಮೀಪದಲ್ಲಿ ಗೋಪಾಲಗೌಡ ಬಡಾವಣೆಯ ವಿಶಾಲ್ ಮಾರ್ಟ್ ಎದುರಿನಲ್ಲಿ ಫ್ರೆಂಡ್ಸ್ ಸೆಂಟರ್ ನೇತ್ರ ಮತ್ತು ರಕ್ತ ಭಂಡಾರದಲ್ಲಿ ಸುಧೇನು ಆಯುರ್ವೇದ ಪಂಚಕರ್ಮ ಕ್ಲಿನಿಕ್ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಆರೋಗ್ಯ ಕಾಪಾಡಿಕೊಳ್ಳುವಲ್ಲಿ ನಿದ್ರೆಯು ಮುಖ್ಯ. ಸರಿಯಾದ ನಿದ್ರೆಯು ಔಷಧಿ. ಬೆಳಗ್ಗೆ ಬೇಗ ಏಳುವುದು ಸಹ ಔಷಧಿ. ನಗುವುದು, ಕುಟುಂಬದವರೊಂದಿಗೆ ಕುಳಿತು ಊಟ ಮಾಡುವುದು ಕೂಡ ಸಹ ಒಂದು ಔಷಧಿ. ಜೀವನಕ್ರಮದಲ್ಲಿ ಧನಾತ್ಮಕ ಬದಲಾವಣೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಫ್ರೆಂಡ್ಸ್ ಸೆಂಟರ್ 58 ವರ್ಷಗಳಿಂದ ಸೇವಾ ಮನೋಭಾವನೆಯಿಂದ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ರಕ್ತದಾನ ಮತ್ತು ನೇತ್ರದಾನಗಳ ಮಹತ್ವದ ಅರಿವು ಮೂಡಿಸುವ ಕೆಲಸ ಒಳ್ಳೆಯದು. ಒಮ್ಮೆ ರಕ್ತದಾನ ಮಾಡುವುದರಿಂದ ನಾಲ್ಕು ಜನರ ಜೀವ ಉಳಿಸಬಹುದು ಎಂದು ಹೇಳಿದರು.

ವರ್ಷದಲ್ಲಿ ಸಾವಿರಾರು ಜನರು ವಿವಿಧ ಅಂಗಾಂಗಳ ವೈಫಲ್ಯದಿಂದ ಸಾಯುತ್ತಿದ್ದಾರೆ. ಅವರಿಗೆ ಅಂಗಾಂಗ ದಾನ ಸಿಗುವುದರಿಂದ ಎಷ್ಟೋ ಜನರ ಜೀವ ಉಳಿಸಬಹುದು. ಅಂಗಾಂಗ ದಾನ ಮಾಡುವುದರಿಂದ 7 ಜನರ ಜೀವ ಉಳಿಸಬಹುದು ಎಂದು ಹೇಳಿದರು.

Friends Center ಆಯುರ್ವೇದವು ಭಾರತ ದೇಶ ಪ್ರಪಂಚಕ್ಕೆ ನೀಡಿದ ವಿಶೇಷವಾದ ಜ್ಞಾನ ಆಗಿದ್ದು, ಆಯುರ್ವೇದ ಮತ್ತು ಆಲೋಪತಿ ಸೇರಿ ಎಲ್ಲ ಪದ್ಧತಿಯ ಉದ್ದೇಶವು ರೋಗಿಗಳ ಆರೋಗ್ಯ ಕಾಪಾಡುವುದೇ ಆಗಿದೆ ಎಂದು ತಿಳಿಸಿದರು.

ಫ್ರೆಂಡ್ಸ್ ಸೆಂಟರ್ ಅಧ್ಯಕ್ಷ ಬಿ.ಜಿ.ಧನರಾಜ್ ಅಧ್ಯಕ್ಷತೆ ವಹಿಸಿದ್ದರು. ಫ್ರೆಂಡ್ ಸೆಂಟರ್ ನೇತ್ರ ಮತ್ತು ಭಂಡಾರ ಅಧ್ಯಕ್ಷ ವಿ.ನಾಗರಾಜ್, ವೈದ್ಯರಾದ ಡಾ. ಎಂ.ಗಿರೀಶ್‌ಬಾಬು, ಡಾ. ಅಶೋಕ್‌ಕುಮಾರ್, ಡಾ. ಪಲ್ಲವಿ ಕೆ.ಜಿ., ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಎಸ್.ದತ್ತಾತ್ರಿ, ಸ್ವಪ್ನಾ ಬದ್ರಿನಾಥ್, ಎಂ.ಎನ್.ವೆಂಕಟೇಶ್, ಯು.ರವೀಂದ್ರನಾಥ್.ಐತಾಳ್, ಎಲ್.ಎಂ.ಮೋಹನ್, ರಾಜೇಶ್ ಉಪಸ್ಥಿತರಿದ್ದರು.

Bhadra Wildlife Sanctuary ಸಕ್ರೆಬೈಲ್ ಸುತ್ತಮುತ್ತ ಕಾಡಾನೆ ದಾಂಧಲೆ, ರೈತರಿಗೆ ಬೆಳೆ ನಷ್ಟ ಆತಂಕ

0

Bhadra Wildlife Sanctuary ಭದ್ರಾ ಅಭಯಾರಣ್ಯದಿಂದ ತುಂಗಾ ನದಿ ದಾಟಿ ಶಿವಮೊಗ್ಗ ತಾಲೂಕಿನ ಸಕ್ರೆಬೈಲ್​ ಸುತ್ತ ಮುತ್ತ ಒಂಟಿ ಸಲಗ ಪ್ರತ್ಯಕ್ಷವಾಗಿದೆ.
ಅಷ್ಟೇ ಅಲ್ಲದೆ ಸಕ್ರೆಬೈಲ್​ ಸುತ್ತಾಮುತ್ತಾ ಈ ಒಂಟಿ ಸಲಗ ದಾಂಧಲೆ ನಡೆಸುತ್ತಿದ್ದು, ರೈತರು ಬೆಳೆದ ತೆಂಗು ಹಾಗೂ ಬಾಳೆಗಿಡಗಳನ್ನು ನಾಶ ಮಾಡಿದೆ. ಆನೆಯ ಓಡಾಟವನ್ನು ವಿಡಿಯೋದಲ್ಲಿ ಸೆರೆ ಹಿಡಿದಿರುವ ಸಾರ್ವಜನಿಕರು ಅದನ್ನು ಓಡಿಸಲು ಹರಸಾಹಸ ಪಡುತ್ತಿದ್ದಾರೆ. ಆದರೆ ಅದ್ಯಾವುದಕ್ಕೂ ಕ್ಯಾರೇ ಮಾಡದ ಒಂಟಿ ಸಲಗ ತೋಟದಲ್ಲಿ ಸಿಕ್ಕ ವಸ್ತುಗಳನ್ನು ತಿನ್ನುತ್ತಾ ನದಿಯಲ್ಲಿ ಈಜುತ್ತಾ ಆನೆ ನಡೆದಿದ್ದೇ ದಾರಿ ಎಂಬಂತೆ ಓಡಾಡುತ್ತಿದೆ.
Bhadra Wildlife Sanctuary ಈ ಹಿಂದೆಯೂ ಸಹ ಅನೇಕ ಕಾಡಾನೆಗಳು ಭದ್ರಾ ಅಭಯಾರಣ್ಯದಿಂದ ನದಿ ದಾಟಿ ಈಚೆಗೆ ಬಂದಿದ್ದವು. ಕಳೆದ ತಿಂಗಳು ಸಹ ಸಕಲೇಶ್​ಪುರದಿಂದ ರೇಡಿಯೋ ಕಾಲರ್​ ಆನೆಯೊಂದು ಬಂದಿತ್ತು, ನಂತರ ಸಕ್ರೆಬೈಲ್​ನ ಕುಮ್ಕಿ ಆನೆಗಳ ಸಹಾಯದಿಂದ ಅದನ್ನು ಸೆರೆಹಿಡಿಯಲಾಗಿತ್ತು. ಇದೀಗ ಮತ್ತೊಂದು ಆನೆ ಪ್ರತ್ಯಕ್ಷವಾಗಿದ್ದು, ರೈತರಿಗೆ ಸಂಕಟವಾಗಿ ಪರಿಣಮಿಸಿದೆ. ಆನೆಯನ್ನು ಕೂಡಲೇ ಸೆರೆಹಿಡಿಯುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.