Friday, February 20, 2026
Friday, February 20, 2026
Home Blog Page 199

Bharat Scouts and Guides ಕಾರ್ಗಿಲ್ ಯುದ್ಧದ ದಿನಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ- ನಿವೃತ್ತ ಸಾರ್ಜೆಂಟ್ ಎ.ತ್ರಿಲೋಕ್

0

Bharat Scouts and Guides ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದೇ ನನ್ನ ಜೀವನದ ಅತ್ಯುತ್ತಮ ಕ್ಷಣಗಳು. ಕಾರ್ಗಿಲ್ ದಿನಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಭಾರತೀಯ ವಾಯುಸೇನೆಯ ನಿವೃತ್ತ ಸಾರ್ಜೆಂಟ್ ಎ.ತ್ರಿಲೋಕ್ ಹೇಳಿದರು.

ಕುವೆಂಪು ರಂಗಮಂದಿರಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಮಲ್ನಾಡ್ ಓಪನ್ ಗ್ರೂಪ್ ವತಿಯಿಂದ ಆಯೋಜಿಸಿದ್ದ 12ನೇ ವರ್ಷದ ಗೀತಭಾರತಿ-2025 ತಾಯಿ ಭಾರತಿಗೆ ಗೀತೆಗಳ ಆರತಿ ದೇಶ ಭಕ್ತಿಗೀತೆಗಳ ಕಾರ್ಯಕ್ರಮವನ್ನು ಅಮರ್ ಜವಾನ್‌ಗೆ ಗೌರವ ಸಲ್ಲಿಸಿ ದೀಪ ಬೆಳಗಿಸಿ ಉದ್ಘಾಟಿಸಿದರು.

ಎಲ್ಲರಲ್ಲೂ ದೇಶಪ್ರೇಮ ಇರಲಿ, ಕಾರ್ಗಿಲ್ ಯುದ್ಧದಲ್ಲಿ ಯುದ್ಧವಿಮಾನಕ್ಕೆ ಬೇಕಾದ ಎಲ್ಲವನ್ನೂ ಅದಕ್ಕೆ ಅಳವಡಿಸುವುದು, ಜೊತೆಗೆ ವಾಪಸ್ ಬಂದ ವಿಮಾನಗಳನ್ನು ಪರಿಶೀಲಿಸಿ ಅವುಗಳಿಗೆ ಬೇಕಾದ ಎಲ್ಲವನ್ನೂ ಅಳವಡಿಸುವ ಕೆಲಸ ಮಾಡುವುದು ದಿನದ ಚಟುವಟಿಕೆಯಾಗಿತ್ತು ಎಂದು ತಿಳಿಸಿದರು.

ಮಲ್ನಾಡ್ ಓಪನ್ ಗ್ರೂಪ್ ಆಯೋಜಿಸಿರುವ ‘ಗೀತಭಾರತಿ’ ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿ ದೇಶಪ್ರೇಮ ಮೂಡಿಸುವ, ಸೈನಿಕರನ್ನು ಕರೆಯಿಸಿ ಅವರ ಮಾತುಗಳನ್ನು, ಯುದ್ಧದ ಅನುಭವಗಳನ್ನು ತಿಳಿಸುವ ಕಾರ್ಯಕ್ರಮ ವಿನೂತನ ಎಂದು ಶ್ಲಾಘಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ ಮಾತನಾಡಿ, 2012ರಿಂದಲೂ ಕಾರ್ಯಕ್ರಮದ ಭಾಗವಾಗಿದ್ದು, ಕಾರ್ಯಕ್ರಮ ಯಶಸ್ವಿಯಾಗಲಿ ಎಂದರು.

ಆದಿಚುಂಚನಗಿರಿ ಶಾಖಾ ಮಠದ ಶ್ರೀನಾದಮಯಾನಂದ ಸ್ವಾಮೀಜಿ ಮಾತನಾಡಿ, ಮಕ್ಕಳು ಹಾಡುತ್ತಿರುವುದು ಪುಷ್ಪವನ್ನು ತಾಯಿ ಭಾರತಿಗೆ ಅರ್ಪಿಸುವ ರೀತಿಯಲ್ಲಿದೆ. ಶಿಸ್ತಿನಿಂದ ಕೂಡಿದ ಕಾರ್ಯಕ್ರಮ ನಿರಂತರವಾಗಿರಲಿ ಎಂದು ಆಶಿಸಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಮಾತನಾಡಿ, ರಾಜ್ಯ ಮಟ್ಟದಲ್ಲಿ ನಮ್ಮ ಸಂಸ್ಥೆ ‘ಗೀತಗಾಯನ’ ಸ್ಪರ್ಧೆ ಏರ್ಪಡಿಸಲು ಗೀತಭಾರತಿ ಕಾರ್ಯಕ್ರಮವೇ ಮೂಲ ಕಾರಣ. ಇದು ಸದಾ ಹೀಗೆಯೇ ಮಕ್ಕಳಲ್ಲಿ ದೇಶಪ್ರೇಮವನ್ನು ಬೆಳಗಿಸಲಿ ಎಂದರು.

ಇದೇ ಸಂದರ್ಭದಲ್ಲಿ ಗ್ರೂಪ್ ಹಿರಿಯ ಸದಸ್ಯ, ಯುಪಿಎಸ್‌ಸಿನಲ್ಲಿ 615ನೇ ರ‍್ಯಾಂಕ್ ಪಡೆದ ಡಾ. ದಯಾನಂದ ಸಾಗರ್.ಎಲ್ ಅವರನ್ನು ಸನ್ಮಾನಿಸಲಾಯಿತು. ನಾನು ಗ್ರೂಪ್ ಸದಸ್ಯ ಎನ್ನುವುದೇ ಹೆಮ್ಮೆ. ಪ್ರತಿ ಕೆಲಸವನ್ನು ಅಚ್ಚುಕಟ್ಟಾಗಿ ಹೇಳಿಕೊಡುತ್ತಿದ್ದರು. ಪ್ರತಿಯೊಬ್ಬರ ಬೆಳವಣಿಗೆಗೆ ಎಲ್ಲರೂ ಸಹಕರಿಸುತ್ತಾರೆ. ಇದರಿಂದ ನಾನು ರಾಷ್ಟ್ರಪತಿ ಪುರಸ್ಕಾರ ಪಡೆದದ್ದು, ಯುಪಿಎಸ್‌ಸಿ ಪರೀಕ್ಷೆಗೂ ಮಲ್ನಾಡ್ ಓಪನ್ ಗ್ರೂಪ್ ಮಾರ್ಗದರ್ಶನ ನೀಡಿದೆ ಎಂದರು.

ಗ್ರೂಪ್ ಮೊದಲ ಬ್ಯಾಚ್‌ನ ರಾಷ್ಟ್ರಪತಿ ಸ್ಕೌಟ್ ಪುರಸ್ಕಾರ ಪಡೆದ ಲೋಕೇಶ್.ಹೆಚ್ ಮತ್ತು ಹೊನ್ನಾಳಿ ಆಕ್ಸಫರ್ಡ್ ಶಾಲೆಯ ಮುಖ್ಯಶಿಕ್ಷಕಿ ಸುಚಿತ್ರ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಗ್ರೂಪ್ ಅಧ್ಯಕ್ಷ ಶ್ರೀನಿವಾಸ ವರ್ಮ.ಎಸ್.ಟಿ ವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ರಾಜೇಶ್ ಅವಲಕ್ಕಿ ಮತ್ತು ಗ್ರೂಪ್ ಸ್ಕೌಟ್ಸ್-ಗೈಡ್ಸ್ ಸದಸ್ಯರು ಮಾಡಿದರು.

Bharat Scouts and Guides ಕಾರ್ಯಕ್ರಮದಲ್ಲಿ ನಗರದ ವಿವಿಧ ಶಾಲೆಯ 950ಕ್ಕೂ ಹೆಚ್ಚಿನ ಮಕ್ಕಳು ದೇಶಭಕ್ತಿಗೀತೆಗಳನ್ನು ಹಾಡಿದರು. ರಾಜ್ಯ ಕಾರ್ಯದರ್ಶಿ ಕೆ.ಗಂಗಪ್ಪಗೌಡ, ಮಾಚೇನಹಳ್ಳಿಯ ವಿಜಯ್ ಟೆಕ್ನೋಕ್ರಾಟ್ಸ್ನ ವ್ಯವಸ್ಥಾಪಕ ನಿರ್ದೇಶಕ ಹೆಚ್.ಮಹೇಂದ್ರಪ್ಪ, ಜಿಲ್ಲಾ ಮುಖ್ಯ ಆಯುಕ್ತೆ ಶಕುಂತಲಾ ಚಂದ್ರಶೇಖರ್, ಮಲ್ನಾಡ್ ಓಪನ್ ಗ್ರೂಪ್ ನ ಹೆಚ್.ಪರಮೇಶ್ವರ್, ಜಿ.ವಿಜಯಕುಮಾರ್‌, ಎಸ್ ಜಿ ಆನಂದ್. ಕೆ ರವಿ, ಚಂದ್ರಶೇಖರಯ್ಯ ಉಪಸ್ಥಿತರಿದ್ದರು.

Klive Special Article ಶಾಸನ ಪ್ರೀತಿಯ “ರಸಸಿಂಚನ” ಪುಸ್ತಕ ಪರಿಚಯ: ಪ್ರಭಾಕರ ಕಾರಂತ, ಹೊಸಕೊಪ್ಪ

0

Klive Special Article ನೆಲೆ_ಬೆಲೆ 2 ಕೃತಿ ರಚಿಸಿದವರು ಡಾ.ಮಂಜುಳಾ ಹುಲ್ಲಹಳ್ಳಿಯವರು.ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿರುವವವರು. ಆದರೆ ಈ ಜಿಲ್ಲೆಯ ಕುರಿತು ಅವರ ಪ್ರೀತಿ ಅನ್ಯಾದೃಶ. ಹೀಗೆ ಹೊರಗಿನಿಂದ ಬಂದವರಿರಲಿ ಇಲ್ಲೇ ತಲೆತಲಾಂತರದಿಂದ ಇರುವವರೇ ಜಿಲ್ಲೆಯ ಮಹತ್ವವನ್ನು ಎತ್ತಿ ತೋರುವ ಇಂತಹ ಕಾರ್ಯ ಮಾಡಿದ್ದು ನನಗೆ ಗೊತ್ತಿಲ್ಲ. ಹಾಗೆ ನೋಡಿದರೆ ನಾನೂ ಈ ಜಿಲ್ಲೆಗೆ ಹೊರಗಿನಿಂದ ಬಂದವನೇ. ಈ ದೃಷ್ಟಿಯಿಂದಲೇ ಇರಬೇಕು ಮಂಜುಳಾ ರವರ ಕೆಲಸದ ಮಹತ್ವ ನನಗೆ ಹೆಚ್ಚು ಅರ್ಥಪೂರ್ಣವಾಗಿ ಗೋಚರಿಸುತ್ತದೆ.
ನನಗೆ ಮೊದಲು ಶಾಸನಗಳ ಕುರಿತು ಅರಿವು ಗೌರವ ಇರಲಿಲ್ಲ. ಒರಟು ಕಲ್ಲಿನ ಮೇಲೆ ಕೆತ್ತಿದ ಅಕ್ಷರ. ಓದಲೂ ಬಾರದು.ಓದಿದ್ದು ಅರ್ಥವೂ ಆಗದು.ಈಗೇನು ಇದರ ಪ್ರಸ್ತುತತೆ ಎಂದು ಕೊಂಡವ ನಾನು…ಮೂರ್ಖ.ಆದರೆ ಹಿರಿಯ ಗೆಳೆಯ ನಾಗರಾಜ ರಾವ್ ಪುಸ್ತಕ ನನ್ನ ಕಣ್ಣ್ತೆರೆಸಿತು.(ಈ ಪುಸ್ತಕ ಅವರ ಮುನ್ನುಡಿ ಹೊತ್ತಿದೆ). ಅವರನ್ನು ಓದುತ್ತಾ ಹೋದಂತೆ ನನಗೆ ಶಾಸನ ಪ್ರೇಮದ ಹುಚ್ಚು ಹಿಡಿಯಿತು.
ಮಂಜುಳಾ ರವರಂತೂ ಶಾಸನವನ್ನು ಇನ್ನಿಲ್ಲದೇ ಪ್ರೀತಿಸುವವರು. ಅವರ ಪುಸ್ತಕದುದ್ದಕ್ಕೂ ಈ ಪ್ರೀತಿಯ ರಸಸಿಂಚನ ಕಾಣಬಹುದು. ಶಾಸನದಲ್ಲಿ ಭಾಷಾ ಸೊಗಸಿದೆ. ಕಾವ್ಯವಿದೆ. ಎಲ್ಲಕ್ಕೂ ಹೆಚ್ಚಾಗಿ ಅಡಗಿದ ಇತಿಹಾಸ ಸತ್ಯ ಇದೆ.ನೆಲೆ ಬೆಲೆಯಲ್ಲಿ ಇವುಗಳ ಅನಾವರಣ ಆಗಿದೆ.
ಪುಸ್ತಕ ನಾಲ್ಕು ಭಾಗದಲ್ಲಿ ವಿಸ್ತರಿಸಿದೆ. ಮೊದಲ ಭಾಗ “ಪರಂಪರೆ ಸಂಸ್ಕೃತಿಯ ಕಲೆ”.ಇಲ್ಲಿ ಆರು ಲೇಖನಗಳಿವೆ. ಚಿಕ್ಕಮಗಳೂರು,ಸೊಸೆಊರಿನ ಹೊಯ್ಸಳರು, ಸಿಂದಿಗೆರೆಯ ಪರಂಪರೆ, ವೀರಗಲ್ಲಿನ ಸಾಮಾಜಿಕ ಮೌಲ್ಯಗಳು,ಕೆಳಗೂರಿನ ವೀರಗಲ್ಲುಗಳು….,ಸ್ವಾತಂತ್ರ್ಯ ಹೋರಾಟದಲ್ಲಿ ಚಿಕ್ಕಮಗಳೂರು ಹೀಗೆ ಆರು ಲೇಖನಗಳು. ಮಂಜುಳಾ ಈ ನೆಲವನ್ನು ಇದರ ಇತಿಹಾಸವನ್ನು ಇದರ ವೈಭವವನ್ನು ಅದೆಷ್ಟು ಅರ್ಥೈಸಿಕೊಂಡಿದ್ದಾರೆ ಮತ್ತು ಪ್ರೀತಿಸುತ್ತಾರೆ ಎಂಬುದಕ್ಕೆ ಈ ಲೇಖನಗಳು ಸಾಕ್ಷಿ.ಹೀಗೆಂದೇ ಈ ಲೇಖನಗಳು ಬರಡು ಪುರಾಣವಾಗದೇ ಜೀವಂತಿಕೆಯಿಂದ ಪುಟಿಯುತ್ತವೆ.
ನಾನು ಸುತ್ತಮುತ್ತ ಅನೇಕ ವೀರಗಲ್ಲು,ಮಾಸ್ತಿ ಕಲ್ಲುಗಳನ್ನು ಕುತೂಹಲದಿಂದ ನೋಡಿರುವೆ. ಅವುಗಳಲ್ಲಿ ಇಷ್ಟೊಂದು ಶಾಸನವಿದೆ ರೋಚಕ ಕಥೆಯಿದೆ ಎಂಬ ಅರಿವಿರಲಿಲ್ಲ.ಒಂದೊಂದು ಕಲ್ಲಿನ ಹಿಂದೆಯೂ ಇರುವ ಕಥೆಯನ್ನು ಸುಂದರ ಭಾವದಿಂದ ಲೇಖಕಿ ಚಿತ್ರಿಸಿದ್ದಾರೆ.ಐತಿಹಾಸಿಕ ವ್ಯಕ್ತಿಗಳ ಸಾಧನೆಯ ಕುರಿತು ಒಂದು ಹೆಮ್ಮೆ ಮೂಡಿಸುವಲ್ಲಿ ಗೌರವ ವರ್ಧಿಸುವಲ್ಲಿ ಈ ಲೇಖನಗಳು ಯಶಸ್ವಿ ಆಗಿವೆ.
ಭಾಗ 2 ರಲ್ಲಿ ನಾಲ್ಕು ಲೇಖನಗಳಿವೆ. ಶೃಂಗೇರಿಯಲ್ಲಿ ಆದಿ ಶಂಕರಾಚಾರ್ಯರ ಪರಂಪರೆ ಮೊದಲ ಲೇಖನ.ಈ ಪುಸ್ತಕ ಕೈಸೇರಿದ ತಕ್ಷಣ ನಾನು ಮೊದಲು ಓದಿದ ಲೇಖನ.ಶೃಂಗೇರಿಯ ಕುರಿತು, ಶಂಕರಾಚಾರ್ಯರ ಕುರಿತು ನಾನು ಬೇಕಾದಷ್ಟು ಕೃತಿ ಓದಿರುವೆ. ಇವರೇನು ಹೊಸತು ಬರೆದಿರಬಹುದು ಎಂಬ ಕುತೂಹಲ. ಎಂಟು ಪುಟಗಳ ಈ ಪುಟ್ಟ ಲೇಖನ ಓದಿ ನನಗೆ ಆನಂದಾಶ್ಚರ್ಯ ಆಯಿತು. ಇಷ್ಟು ಕಡಿಮೆ ಜಾಗದಲ್ಲಿ ಇಷ್ಟು ಸೊಗಸಾಗಿ ಚಿತ್ರ ಕಟ್ಟುವುದು ಸುಲಭವಲ್ಲ. ಈ ಪುಟ್ಟ ಲೇಖನಕ್ಕೆ ಅವರು ಮಾಸ್ತಿಯವರ ಭಾವ ,ಕುವೆಂಪುರವರ ನೆನಪಿನದೋಣಿ,ಮೈಸೂರಿನ ಮಹಾರಾಜರ ಶಾಸನ ಹೀಗೆ ಎಷ್ಟೆಲ್ಲಾ ಅಧ್ಯಯನ ಮಾಡಿದ್ದಾರೆ. ಎಲ್ಲಿ ಏನನ್ನು ಪೋಣಿಸಬೇಕೋ ಅಲ್ಲದನ್ನು ಇಟ್ಟು ಒಟ್ಟೂ ಲೇಖನಮಾಲೆಯ ಸೌಂದರ್ಯ ಹೆಚ್ಚಿಸಿರುವ ಇಂತಹ ಓದು ತೃಪ್ತಿ ಕೊಡುತ್ತದೆ.
ಹಂತೂರಿನ ಅರ್ಹಂತರು ಲೇಖನವೂ ಶಾಸನೋಕ್ತವೇ ಆಗಿದೆ.ಸುಂದರವಾಗಿದೆ.
Klive Special Article ತರೀಕೆರೆ ಶರಣಮಾತೆ ಅಕ್ಕನಾಗಮ್ಮನ ಅಂತಿಮ ನೆಲೆ ಸಹ ಅಕ್ಕನ ಮಹತ್ವವನ್ನು ಪ್ರತಿ ಸಾಲಿನಲ್ಲೂ ಸಾರುತ್ತದೆ. “ಬಸವಣ್ಣನವರ ಜೀವನವನ್ನು ರೂಪಿಸಿ ಬೆಳೆಸಿದ ಸಾತ್ವಿಕ ಶಕ್ತಿಚೇತನವೇ ಅಕ್ಕನಾಗಮ್ಮ” ಎಂಬ ಮಾತಿಗೆ ಸಾಕಷ್ಟು ಸಮರ್ಥನೆಯನ್ನು ಇಲ್ಲಿ ಲೇಖಕಿ ತೋರಿಸಿಕೊಡುತ್ತಾರೆ. ನುಲಿಯ ಚಂದಯ್ಯನ ಸದ್ಭಾವದ ತಾಣ ನಂದಿಗ್ರಾಮ ಎಂಬ ಲೇಖನದಲ್ಲೂ ವ್ಯಕ್ತಿ ಪರಿಚಯ ಆತ್ಮಕಯವಾಗಿದೆ. ಕಡೆಗೆ ಚಂದಯ್ಯನ ಸ್ಮರಣೆ ಉಳಿಸುವ ಕಾರ್ಯ ನಿರ್ವಹಿಸುತ್ತಿರುವವರಿಗೆ ಪ್ರೋತ್ಸಾಹದ ಮಾತೂ ಇದೆ.
ಮೂರನೇ ಭಾಗ ವ್ಯಕ್ತಿತ್ವಗಳ ಅಲೆ.
ದೇವನೂರಿನ ರುದ್ರಭಟ್ಟ,ಸ್ವಾತಂತ್ರ್ಯ ಹೋರಾಟದ ಸಾಹಸಿಗರು ಸರ್ಜಾ ರಂಗಪ್ಪ ನಾಯಕ ಮತ್ತು ಸರ್ಜಾ ಹನುಮಪ್ಪ ನಾಯಕ,ಅಂಬಳೆ ಕೃಷ್ಣಶಾಸ್ತ್ರಿಗಳು, ಮಾಸ್ತಿಯವರ ಭಾವಲಹರಿ ಲೇಖಕಿ ಮಲ್ಲಿಕಾ ಕಡಿದಾಳು, ಡಾ.ರಾಜಕುಮಾರ್, ರಾಜೇಶ್ವರಿ ತೇಜಸ್ವಿ,ಕಣ್ಣನ್ ಶವಾದ್, ಹೀಗೆ ಹನ್ನೊಂದು ವ್ಯಕ್ತಿಗಳ ಪರಿಚಯ ಇದೆ. ರಾಜೇಶ್ವರಿ ತೇಜಸ್ವಿಯವರ ಕುರಿತು ಓದುವಾಗ ನನಗೆ ಕಣ್ಣು ತೇವವಾಯಿತು. ಕೆಲವರೆಲ್ಲಾ ಅಮರರಾಗಿ ಈ ಭೂಮಿಯಲ್ಲಿ ಸರ್ವಕಾಲಕ್ಕೂ ಇರಬೇಕಾದವರು. ಅಂತಹವರಲ್ಲಿ ಈ ತೇಜಸ್ವಿ ದಂಪತಿಗಳೂ ಸೇರಿದವರು. ಲೋಕಕ್ಕೆ ನಿಜ ಅರ್ಥದಲ್ಲಿ ಇವರ ಅಗಲುವಿಕೆ ತುಂಬಲಾರದ ನಷ್ಟ. ಮಾಸ್ತಿಯವರ ಕುರಿತು ಓದಿದಾಗಲೂ ಹಾಗೇ ಅನಿಸಿತು. ಭಾವಲಹರಿ ನಾನಿನ್ನೂ ಓದಿಲ್ಲ. ಓದಲೇ ಬೇಕು ಎಂಬ ಸಂಕಲ್ಪ ಉಂಟಾಯಿತು.
ನಾಲ್ಕನೇ ಭಾಗ ಸ್ಥಳೀಯ ಔನ್ನತ್ಯದ ನೆಲೆ.
ಇಲ್ಲೂ ಸ್ಥಳ ಪರಿಚಯಕ್ಕೇ ಪ್ರಾಧಾನ್ಯ. ಶಾಸನಗಳ ಸಾಕ್ಷಿ. ಊರನ್ನು ಹೇಗೆ ಪ್ರೀತಿಸಿ ಇತಿಹಾಸ ಕಾಪಿಟ್ಟು ಮುಂದಿನ ತಲೆಮಾರಿಗೆ ಉಳಿಸಬೇಕು ಎಂಬ ಪ್ರೇರಣಾದಾಯಕ ಲೇಖನಗಳು. ಕಡೆಯ ಎಂಟನೇ ಲೇಖನ ಆಶಾಕಿರಣ ಕುರಿತಾದದ್ದು.ಡಾ.ಕೃಷ್ಣೇಗೌಡರ ಸೇವಾ ಸಾಹಸ ಅನಾವರಣ ಗೊಳಿಸುವ ಲೇಖನ.
ಈ ಕೃತಿಯ ಎಲ್ಲಾ ಲೇಖನಗಳೂ ಭಾವಸ್ಪರ್ಶದಿಂದ ಮೌಲ್ಯಯುತವಾಗಿವೆ.ಹೃದಯಸ್ಪರ್ಶಿಯಾಗಿದೆ. ಕಾವ್ಯಾತ್ಮಕವಾಗಿವೆ.ಅರಿವು ವರ್ಧಿಸುತ್ತಿವೆ. ಅನೇಕ ಶಾಸನಗಳನ್ನು ಉಲ್ಲೇಖಿಸುವಾಗ ಈಗವು ಲಭ್ಯವಿಲ್ಲ ಎಂದು ಲೇಖಕಿ ಹೇಳಿದ್ದಾರೆ. ಇದು ನಮ್ಮ ಜನರ ಕಣ್ತೆರಸಬೇಕು. ಈ ಕೃತಿ ಓದಿ ತಮ್ಮ ನೆಲದ ಮಹತ್ವ ಮನದಟ್ಟು ಮಾಡಿಕೊಂಡು ಅದನ್ನು ಸಂರಕ್ಷಿಸುವ ಕಾರ್ಯ ಕೈಗೆತ್ತಿಕೊಳ್ಳುವಂತಾದರೆ ಇದರ ಶ್ರಮ ಸಾರ್ಥಕ ಅನಿಸುತ್ತದೆ.

Klive Special Article ಕ್ಷಣಗಳನ್ನ ಸೆರೆಹಿಡಿವ ಫೋಟೋಗ್ರಫಿಯ ಕಲಾತಪಸ್ವಿ, ಆದಿತ್ಯ ಪ್ರಸಾದ್

0

ಲೇ:ಡಾ.ಮೈತ್ರೇಯಿ ಆದಿತ್ಯ ಪ್ರಸಾದ್

ವಿದ್ಯಾ ವಿನಯ ಸಂಪನ್ನಃ ಕರ್ತವ್ಯ ನಿಷ್ಠಃ ಸಮಃ ಸದಾ| ಲೋಕೇ ಹಿತಂ ಯಃ ಕುರುತೇ ಸ ವೈ ಸತ್ತ್ವಧರಃ ನರಃ ll

Klive Special Article ವಿದ್ಯೆಯುಳ್ಳವನು, ವಿನಯವಂತನು ತನ್ನ ಕರ್ತವ್ಯಕ್ಕೆ ನಿಷ್ಠೆ ಹೊಂದಿರುವವನು ಹಾಗೂ ಸದಾ ಸಮಚಿತ್ತನಾಗಿರುವವನು ಅಲ್ಲದೇ ಯಾವಾಗಲೂ ಇತರರ ಹಿತಕ್ಕಾಗಿ ದುಡಿಯುವವನೇ ನಿಜವಾದ ಸಜ್ಜನ ಹಾಗೂ ಶ್ರೇಷ್ಠ ವ್ಯಕ್ತಿ ಎಂಬರ್ಥದ ಈ ಸುಭಾಷಿತ ಓದಿದಾಗ ನನ್ನ ಸ್ಮರಣೆಗೆ ಬಂದದ್ದು ಸರಳ ಸಜ್ಜನಿಕೆಯ ವ್ಯಕ್ತಿ ಆದಿತ್ಯ ಪ್ರಸಾದ್. ಅವರು ಜನಿಸಿದ್ದು ರಮ್ಯಮನೋಹರವಾದ ಕಡಲೂರಾದ ಕುಂದಾಪುರದ ಸಮೀಪದ ನಾಗೂರಿನಲ್ಲಿ. ತಂದೆ ಮಂಜುನಾಥ್ ಗಜಾನನ ಬಸ್ ನಲ್ಲಿ ನಿರ್ವಾಹಕ ಹಾಗೂ ನಂತರ ಶಾಲಾ ವಾಹನ ಒಂದರ ಚಾಲಕರಾಗಿ ಶಿಸ್ತಿನ ಜೀವನ ನಡೆಸಿ, ತನ್ನೂರಿನಲ್ಲಿ, ತಾನಿದ್ದೆಡೆಯಲ್ಲಿ ನಗು ಹಾಗೂ ತನ್ನ ಕರ್ತವ್ಯ ನಿಷ್ಠೆಯಿಂದಲೇ ಹೆಸರು ಮಾಡಿದ್ದರೆ, ತಾಯಿ ಶಶಿಕಲಾ ಆಚಾರ್ಯ ಇವರು ನೂರಾರು ಜನರಿಗೆ ಉಚಿತ ಹೆರಿಗೆ ಮಾಡಿಸಿ ಅಲ್ಲದೆ ಅನೇಕರ ಆರೋಗ್ಯದ ಸಮಸ್ಯೆಗಳಿಗೆ ತಮ್ಮ ಪರಂಪರೆಯಿಂದ ಬಂದ ನಾಟಿ ಔಷಧಿ ನೀಡುವ ಮೂಲಕ ಪರಿಹಾರ ಒದಗಿಸಿದ ಮಹಾತಾಯಿ. ತನ್ನ ಒಡನಾಟದಲ್ಲಿ ಜೊತೆಯಾದವರು ಅವರಣ್ಣ ಗುರುಪ್ರಸಾದ್ ಅವರು ಸಹ ಸಜ್ಜನಿಕೆಯ ವ್ಯಕ್ತಿ. ಈ ರೀತಿಯ ಕುಟುಂಬದ ಹಿನ್ನೆಲೆಯ ಜೊತೆಗೆ ನಳಿನ, ಸುಧೀರ್ ಹಾಗೂ ಬ್ರಿಜೇಶ್ ಎಂಬ ಸಹೃದಯ ಸ್ನೇಹಿತರ ಬಳಗ ಆದಿತ್ಯರಿಗೆ ಒಳ್ಳೆಯ ಸಂಸ್ಕಾರ ತಂದು ಕೊಟ್ಟಿತ್ತು. ತನ್ನ ಹುಟ್ಟೂರಿನಲ್ಲಂತೂ ಪರೋಪಕಾರದ ಕೆಲಸಗಳಿಂದಲೇ ಹೆಸರುವಾಸಿಯಾಗಿದ್ದವರು. ಯಾರದೋ ಮನೆಯ ಹಿರಿಯರ ಆರೈಕೆ, ಗರ್ಭಿಣಿಯ ಪ್ರಸವಕ್ಕೆ ಆಸ್ಪತ್ರೆಗೆ ಕೊಂಡೊಯ್ಯಲು, ಮನೆ ಕಾವಲಿಗೆ ಹೀಗೆ ಹತ್ತು ಹಲವಾರು ಸಹಾಯದ ಕೆಲಸ ಮಾಡುತ್ತಲೇ ಊರ ತುಂಬಾ ಪ್ರಸಿದ್ಧಿಯಾದವರು.

90ರ ದಶಕದಲ್ಲಿ ಎಲ್ಲವೂ ದುಬಾರಿಯಾಗಿದ್ದ ಕಾಲವದು ಅಂದರೆ ಕಂಪ್ಯೂಟರ್ ಕ್ಯಾಮೆರಾ ಇತ್ಯಾದಿಗಳು. ಅದನ್ನು ತಾನು ದುಬಾರಿಯಾದರೂ ತಂದು ತಾನೇ ಕಲಿತು ಒಳ್ಳೆಯ ಛಾಯಾಗ್ರಾಹಕ ಹಾಗೂ ಡಿಸೈನರ್ರಾಗಿ ರೂಪಗೊಂಡರು. ಛಾಯಾಗ್ರಹಣದಲ್ಲಂತೂ ಏಕಲವ್ಯನ ಹಾಗೆ ಗುರುವಿಲ್ಲದೆ ಕಲಿತವರು. ಗುರು ದ್ರೋಣರ ಹಾಗೆ ಮಂಗಳೂರಿನ ಶ್ರೀ ಯಜ್ಞ ಆಚಾರ್ಯ ಅವರ ಚಿತ್ರಗಳನ್ನು ಮಾದರಿಯಾಗಿಟ್ಟು ಕೊಂಡವರು. ತಾನು ಓದಿದ್ದು ಡಿಪ್ಲೋಮಾ ಐಟಿಐ ಆದರೂ ಆಯ್ಕೆ ಮಾಡಿಕೊಂಡ ಕ್ಷೇತ್ರ ಛಾಯಾಗ್ರಹಣ. ಭಾವನೆಗಳನ್ನು ಸೆರೆ ಹಿಡಿಯುವ ಭಾವಾಭಿವ್ಯಂಜಕ ಚಿತ್ರ ತೆಗೆಯುವಲ್ಲಿ ಪಳಗಿದ ಅವರು ನಂತರದಲ್ಲಿ ವಿವಾಹವಾಗಿ ತನ್ನ ಹೆಂಡತಿಯ ಕರಿಯರ್ರಿಗಾಗಿ ಅಂದೇ ತನ್ನೂರನ್ನು ತ್ಯಜಿಸಿ ಬಂದು ಬದುಕು ಕಟ್ಟಿಕೊಂಡಿದ್ದು ಶಿವಮೊಗ್ಗದಲ್ಲಿ. ಆರಂಭದ ದಿನಗಳಲ್ಲಿ ಅನುಭವಿಸದ ತೊಂದರೆಗಳಿಲ್ಲ, ಪಡದ ಕಷ್ಟಗಳಿಲ್ಲ. ದಿನಗಳದಂತೆ ಊರು ಜನರು ಪರಿಚಿತರಾಗಿ ತನ್ನ ಶ್ರದ್ಧೆಯ ಕಾಯಕದಿಂದಲೇ ನಾವಿಕ ಪತ್ರಿಕೆಯ ( ಆಗ ಚಂದ್ರಕಾಂತ ಅವರ ಸಾರಥ್ಯದಲ್ಲಿ ) ಜಾಹೀರಾತು ವಿಭಾಗದ ಡಿಸೈನರ್ ಕೆಲಸ ಗಿಟ್ಟಿಸಿಕೊಂಡರು. ಅಲ್ಲಿಂದ ಹಿಂತಿರುಗಿ ನೋಡಲೇ ಇಲ್ಲ ಪದೋನ್ನತಿ ಹೊಂದಿ ಹೊಸದಿಗಂತ, ವಿಜಯವಾಣಿ ಅಜೇಯ ಪತ್ರಿಕೆಗಳಲ್ಲಿ ಲೇಔಟ್ ಡಿಸೈನರ್ ಆಗಿ ಕಾರ್ಯನಿರ್ವಹಿಸಿ ನಂತರ ಬಂದು ಕುಳಿತದ್ದು ರಾಯಲ್ ಕಾಫಿ ಅಂಗಡಿಯಲ್ಲಿ. ಇವುಗಳನ್ನು ಹೇಳಲು ಕಾರಣವೇನೆಂದರೆ ಆ ಮನುಷ್ಯ ಯಾವ ವಯಸ್ಸಿನಲ್ಲಿ ಆಗಲೀ ಕಲಿಯುವುದರಲ್ಲಿ ಸದಾ ಮುಂದು. ಹೊಸತೇನಿದ್ದರೂ ಕಲಿಯುವ ಛಾತಿ ಇದ್ದಿದ್ದರಿಂದಲೇ ಸಂಸ್ಕೃತ ಡಿಟಿಪಿ ಕಲಿತು (ಪತ್ನಿಯ ಸಲುವಾಗಿ) ಒಳ್ಳೆಯ ಪುಸ್ತಕ ರಚನೆಕಾರರೂ ಆದರು.

ಡಾ. ಮೈತ್ರೇಯಿ ಆದಿತ್ಯಪ್ರಸಾದ್, ಸಂಸ್ಕೃತ ಉಪನ್ಯಾಸಕರು ಪೇಸ್ ಕಾಲೇಜ್ ಶಿವಮೊಗ್ಗ.

ಅವರ ಕಾಯಕ ನಿಷ್ಠೆ ಹೇಗೆಂದರೆ ಯಾರಾದರೂ ಯಾವುದಾದರೂ ಕೆಲಸ ಹೇಳಿದರೆ ಶ್ರದ್ಧೆಯಿಂದ ಮಾಡುವವರು. ಮೆಲುದನಿ, ಮೃದು ಮಾತು, ಭಾವನೆಗಳನ್ನು ಸೆರೆಹಿಡಿಯುವ ಕ್ಯಾಂಡಿಡ್ ಫೋಟೋ ತೆಗೆಯುವುದರಲ್ಲೇ ಮಾಸ್ಟರ್ ಅವರು. ಒಂದು ಕಾಲದಲ್ಲಿ ಇವರು ಫೋಟೋ ತೆಗೆದ ಕನ್ಯೆ ಅಥವಾ ವರನಿಗೆ ಬೇಗ ಮದುವೆ ಗೊತ್ತಾಗುತ್ತಿತ್ತಂತೆ! ಇತ್ತೀಚಿನ ದಿನಗಳಲ್ಲಂತೂ ಅವರು ತೆಗೆದ ಫೋಟೋ ಅನೇಕರ ವಾಟ್ಸಾಪ್ ಡಿಪಿಗಳಲ್ಲಿ ರಾರಾಜಿಸುತ್ತಿದೆ. ಯಾರೇ ಆಗಲಿ ಎಷ್ಟು ಹೊತ್ತಿಗೆ ಆಗಿರಲಿ ಸಹಾಯ ಕೇಳಿದರೆ ಇಲ್ಲವೆನ್ನದ ವ್ಯಕ್ತಿ. ಪ್ರತಿಯೊಬ್ಬರಿಗಾಗಿಯೂ ಮರುಗುವ ಜೀವ. ಅನೇಕ ಅದ್ಭುತ ಸನ್ನಿವೇಶಗಳನ್ನು ಸೆರೆಹಿಡಿದ ಅವರು, ಬಹುಪಾಲು ಹಣ ತೆಗೆದುಕೊಳ್ಳದೇ ಫೋಟೋಗಳನ್ನು ಉಚಿತವಾಗಿ ನೀಡಿದ ಮಹಾನುಭಾವ.

ಬದುಕಿನ ಸುಂದರ ಕ್ಷಣಗಳನ್ನು ತಮ್ಮ ಕ್ಯಾಮೆರಾದ ಮೂಲಕ ಸೆರೆಹಿಡಿದು ಅದನ್ನು ಶಾಶ್ವತವಾಗಿ ಉಳಿಸುವಂತೆ ಮಾಡುವಲ್ಲಿ ಆದಿತ್ಯ ಪ್ರಸಾದ್ ಅವರದು ಬಹುಪಾಲು ಕೊಡುಗೆ ಇರುತ್ತದೆ. ತಮ್ಮ ಬಳಿ ಕ್ಯಾಮರಾ ಇಲ್ಲದ ಸಮಯದಲ್ಲಿ ಎಲ್ಲರೂ ಡಿಜಿಟಲ್ ಕ್ಯಾಮೆರಾ ಬಳಸುತ್ತಿರುವಾಗ ಇವರು ಎಲ್ಲಿಂದಲೋ ಒಂದು ರೋಲ್ ಕ್ಯಾಮೆರಾ ತಂದು ಪತ್ನಿಯ ಎಂಎ ಪದವಿಯಲ್ಲಿ ರಾಂಕ್ ಪಡೆದ ಕ್ಷಣಗಳನ್ನು ಸೆರೆಹಿಡಿದದ್ದು ಎಂದು ಮರೆಯಲಾಗದ ಘಟನೆ. ಏಕೆಂದರೆ ಎಲ್ಲರೂ ಡಿಜಿಟಲ್ ಕ್ಯಾಮೆರಾ ಕೈಯಲ್ಲಿ ಹಿಡಿದಿದ್ದಾಗ ತಾವು ತೆಗೆಯುವ ಕ್ಷಣವೇ ಟಾಸ್ಕ್ ಆದಂತಿರುವ ಆ ಸಮಯದಲ್ಲಿ ಅಂದರೆ ಚಿತ್ರ ಹೇಗೆ ಬಂದಿದೆ ಎಂದು ತಕ್ಷಣ ನೋಡಲು ಸಾಧ್ಯವಾಗದ್ದು ರೋಲ್ ಕ್ಯಾಮೆರಾ, ಅದು ವಾಶ್ ಆಗಿ ಬಂದಾಗಲೇ ಹೇಗಿದೆ ಎಂದು ತಿಳಿಯುವ ಹೊತ್ತಿನಲ್ಲೂ ಒಂದೇ ಕ್ಲಿಕ್ನಲ್ಲಿ ಅದ್ಭುತ ಛಾಯಾಚಿತ್ರ ಸೆರೆ ಹಿಡಿದ ಹೆಗ್ಗಳಿಕೆ ಅವರದು. ಈ ಘಟನೆ ಅವರ ಛಾಯಾಗ್ರಹಣದಲ್ಲಿ ಪರ್ಫೆಕ್ಟ್ ನೆಸ್ ತೋರಿಸುತ್ತದೆ. ನನ್ನ ಗೆಳತಿ ಚೇತನಾ ಮಾಲತೇಶ್ ಹೇಳುವಂತೆ ಆದಿತ್ಯ ಅವರು ತೆಗೆದ ಫೋಟೋಗಳು ಆ ಕ್ಷಣಗಳನ್ನು ಹಸಿರಾಗಿಸುತ್ತವೆ, ಅದೊಂಥರಾ ಹೇಗೆಂದರೆ ತೆಗೆದ ಫೋಟೋ ಕೇವಲ ದೃಶ್ಯಗಳಾಗಿರದೆ ಹೃದಯದ ಕಥೆಗಳನ್ನು ಹೇಳುವಂತಿರುತ್ತದೆ. ಇಂತಹ ವ್ಯಕ್ತಿ ನಮ್ಮ ನಡುವೆ ಇರುವ ಸಜ್ಜನ.

Klive Special Article ಚಾರಣಪ್ರಿಯ, ಕವಿ, ಸಹೃದಯಿ, ಲೇಖಕ, ಪ್ರವಾಸಗಳೆಂದರೆ ಸದಾ ಮುಂದಿರುವ ಆದಿತ್ಯ ತನ್ನ ಬದುಕು ಕಟ್ಟಿಕೊಳ್ಳಬೇಕಾದರೆ ಎಲ್ಲ ಹೊತ್ತಿನಲ್ಲೂ ಎಲ್ಲದಕ್ಕೂ ತೆರೆದ ಮನಸ್ಸು ಮತ್ತು ಹೃದಯ. ಪತ್ನಿಗಾಗಿ ಸಂಸ್ಕೃತ ಕಲಿತರು, ಓದು…ಬರವಣಿಗೆಯನ್ನು ಕಲಿಸಿತು. ಹೀಗೆ ಯಾವುದೇ ಹೊಸತುಗಳಿಗೆ ಸದಾ ತನ್ನನ್ನು ತಾನು ಹರ್ಷದಿಂದಲೇ ತೆರೆದುಕೊಳ್ಳುವ ಸಜ್ಜನ. ಯಾರನ್ನು ದ್ವೇಷಿಸದ, ಯಾರಲ್ಲಿಯೂ ದ್ವೇಷ ಕಟ್ಟಿಕೊಳ್ಳದ ಅಜಾತಶತ್ರು. ಎಲ್ಲರನ್ನೂ ಸೆಳೆಯುವ ಆಕರ್ಷಕ ವ್ಯಕ್ತಿತ್ವ. ತನ್ನ ಸಜ್ಜನಿಕೆಯಿಂದಲೇ ಎಲ್ಲರಿಗೂ ಪರಿಚಿತನಾದ ವ್ಯಕ್ತಿ. ಒಳ್ಳೆಯ ಡಿಸೈನರ್, ಉತ್ತಮ ಬರಹಗಾರ. ಉಡುಗೊರೆಯ ಸಲುವಾಗಿ ವಿಶಿಷ್ಟ ಮಾದರಿಯ ಕವನಗಳನ್ನು ಬರೆದು ಎಲ್ಲರ ಗಮನ ಸೆಳೆದವ. ತಮ್ಮ ಚಾರಣದ ಅನುಭವಗಳನ್ನು ಬಹು ಸುಂದರವಾಗಿ ಕಥನಗಳಿಂದ ಚಿತ್ರಗಳಿಂದ ಕೂಡಿದ ಪುಸ್ತಕ ಮಾಡಿದವ. ( ಬಿಡುಗಡೆಗೆ ಇನ್ನೂ ಅವಕಾಶ ದೊರೆತಿಲ್ಲ ) ನೋವಿಗೆ ಸ್ಪಂದಿಸುವ, ನಲಿವಿಗೆ ಜೊತೆ ಇರುವವ, ಕಷ್ಟದಲ್ಲಿ ಕೈ ಬಿಡದವ, ಎಲ್ಲರೊಳಗೊಂದಾಗು ಮಂಕುತಿಮ್ಮ ಎಂದು ಬೆರೆತು ಹೋದವ ಬೇರಾರು ಅಲ್ಲ ನನ್ನ ಪತಿದೇವ. ನನ್ನ ಬದುಕಿನಲ್ಲಿ ಹೇಗೆ ತಂದೆಯ ಪಾತ್ರ ಬಹು ಹಿರಿದೋ ಹಾಗೆಯೇ ಮನೆಯವರದ್ದು ಸಹ. ನನ್ನ ಬದುಕಿನ ಯಶಸ್ಸಿನ ಹಿಂದೆ ಗಟ್ಟಿಯಾಗಿ ನೆಲೆ ನಿಂತವ, ನನ್ನೆಲ್ಲಾ ಲೇಖನಗಳ ಮೊದಲ ಓದುಗ. ಯಾರ ಬಳಿಯೂ ಯಾವ ಮಾತನ್ನು ಹೇಳಿಸಿಕೊಳ್ಳದ ವ್ಯಕ್ತಿ. ಅವರಿರುವ ರೀತಿಯೇ ಉಳಿದವರ ಬದುಕಿಗೊಂದು ಪ್ರೇರಣೆಯಾಗಬಹುದೇನೋ ಅನ್ನುವ ಕಾರಣದಿಂದಲೇ ಈ ಲೇಖನ ಬರೆದದ್ದು. ಅವರ ಎಲ್ಲ ಕನಸುಗಳು ನನಸಾಗಲಿ ಇನ್ನಷ್ಟು ಜನರಿಗೆ ಸಂತಸವನ್ನು ಅವರ ಛಾಯಾಗ್ರಹಣದ ಮೂಲಕ ಹಂಚಿ ಎಂದು ಹೇಳುತ್ತಾ ಛಾಯಾಗ್ರಹಣದ ದಿನದ ಈ ಶುಭ ಸಂದರ್ಭದಲ್ಲಿ ಶುಭಾಶಯಗಳನ್ನು ಕೋರುತ್ತಾ ಈ ಲೇಖನವನ್ನು ಅವರಿಗೆ ಅರ್ಪಿಸುತ್ತಿದ್ದೇನೆ.

MESCOM ಆಗಸ್ಟ್ 23. ಹೊಸಮನೆ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ.ಮೆಸ್ಕಾಂ ಪ್ರಕಟಣೆ

0

MESCOM 110/11ಕೆ.ವಿ ಮೆಗ್ಗಾನ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೊದಲನೇ ತ್ರೈಮಾಸಿಕ ನಿರ್ವಹಣ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆ.23 ರಂದು ಬೆಳ್ಳಗ್ಗೆ 10:00 ರಿಂದ ಸಂಜೆ 06:00 ಗಂಟೆಯವರೆಗೆ ಹೊಸಮನೆ, ಹೊಸಮನೆ ಛಾನಲ್ ಏರಿಯಾ, ಶರಾವತಿನಗರ ಎ ಮತ್ತು ಬಿ ಬ್ಲಾಕ್ ಆಯುರ್ವೇದ ಕಾಲೇಜು, ಕುವೆಂಪು ರಸ್ತೆ, ಸಾಗರ ರಸ್ತೆ, ಆಯನೂರು ಗೇಟ್, ಆದಿಚುಂಚನಗಿರಿ ಸಮುದಾಯ ಭವನ, ಯೂನಿಟಿ ಆಸ್ಪತ್ರೆ, ಜೈಲ್ ವೃತ್ತ, ಸುಬ್ಬಯ್ಯ ಆಸ್ಪತ್ರೆ, ಜೈಲ್ ರಸ್ತೆ, ಸತ್ಯಂ ಫೋರ್‌ವಿಂಗ್ಸ್, ಎ.ಆರ್.ಬಿ ಕಾಲೋನಿ, ಅಶೋಕನಗರ, ಅಣ್ಣಾನಗರ, ಪಂಪನಗರ, ರಂಗನಾಥ ಬಡಾವಣೆ, ಮಿಳಘಟ್ಟ, ಟಿಪ್ಪುನಗರ ಬಲಭಾಗ, ಬಿ.ಎಸ್.ಎನ್.ಎಲ್ ಭವನ, ಪಾರ್ಕ್ ಎಕ್ಸ್ಟಷನ್, ದುರ್ಗಿಗುಡಿ, ಜಿಲ್ಲಾ ಪಂಚಾಯತ್ ಕಛೇರಿ, ತಿಲಕ್ ನಗರ, ಆರ್.ಎಂ.ಆರ್ ರಸ್ತೆ, MESCOM ಜಯನಗರ, ಬಸವನಗುಡಿ, ನಂಜಪ್ಪ ಆಸ್ಪತ್ರೆ, ಮ್ಯಾಕ್ಸ್ ಆಸ್ಪತ್ರೆ, ಶಿವಮೂರ್ತಿ ವೃತ್ತ, ಜಿಲ್ಲಾಧಿಕಾರಿಗಳ ಕಛೇರಿ, ಎ.ಎನ್.ಕೆ ರಸ್ತೆ, ಅಚ್ಯುತ್ ರಾವ್ ಬಡಾವಣೆ, ಸವಳಂಗ ರಸ್ತೆ, ರಾಘವೇಂದ್ರ ಸ್ವಾಮಿ ಮಠ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ

Gauri Ganesh festival ಲಿಡ್ಕರ್ ಉತ್ಪನ್ನಗಳಿಗೆ ಗೌರಿ ಗಣೇಶ ಹಬ್ಬದ ಪ್ರಯುಕ್ತ ರಿಯಾಯ್ತಿ ಮಾರಾಟ

0

Gauri Ganesh festival ಗೌರಿ ಗಣೇಶ ಹಬ್ಬದ ಪ್ರಯುಕ್ತ ನಗರದ ನೆಹರು ರಸ್ತೆಯ ಬಸವ ಸದನ ಕಾಂಪ್ಲಕ್ಸ್ ನಲ್ಲಿರುವ ಡಾ. ಬಾಬು ಜಗ ಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ಲಿಡ್‌ಕರ್ ಮಾರಾಟ ಮಳಿಗೆಯಲ್ಲಿ ಅಪ್ಪಟ ಚರ್ಮದ ವಸ್ತುಗಳ ಮೇಲೆ
ಶೇಕಡ 15 ರಿಯಾಯಿತಿ ನೀಡಲಾಗಿದ್ದು,
ಖರೀದಿಗೆ ಆ. 26 ರವರೆಗೆ ಅವಕಾಶವಿದೆ.
ಹೆಚ್ಚಿನ ಮಾಹಿತಿಗಾಗಿ ಮೊ. ಸಂ: 8904510699 ಗೆ ಸಂಪರ್ಕಿಸಬಹುದೆಂದು ಬಾಬು ಜಗ ಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ ವ್ಯವಸ್ಥಾಪಕರು ತಿಳಿಸಿದ್ದಾರೆ.

Backward Classes Welfare Department ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯ ಪ್ರವೇಶ ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಣೆ

0

Backward Classes Welfare Department ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ 2025-26 ನೇ ಸಾಲಿನ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶಾತಿ ಪಡೆಯಲು ಆನ್ಲೈನ್ ಅರ್ಜಿ ಅವಧಿಯನ್ನು ಆ.25 ರವರೆಗೆ ವಿಸ್ತರಿಸಲಾಗಿದೆ.
ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ಹಾಗೂ ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಹೊಸದಾಗಿ ಪ್ರವೇಶ ಬಯಸುವ ಪ್ರವರ್ಗ-1 , 2ಎ, 2ಬಿ, 3ಎ, 3ಬಿ, ಪ.ಜಾ/ಪ.ವರ್ಗಕ್ಕೆ ಸೇರಿದ ಸಾಮಾನ್ಯ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು https://shp.karnataka.gov.in/bcwd ಇಲ್ಲಿ ಅರ್ಜಿ ಸಲ್ಲಿಸಬೇಕು.
ಪ್ರವರ್ಗ-1, ಎಸ್.ಸಿ. ಮತ್ತು ಎಸ್.ಟಿ‌. ಗೆ ಸೇರಿದ ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯವು 2.50 ಲಕ್ಷ ಹಾಗೂ ಪ್ರವರ್ಗ -2ಎ, 2ಬಿ, 3ಎ, 3ಬಿ ಗೆ ಸೇರಿದ ಪೋಷಕರ ವಾರ್ಷಿಕ ಆದಾಯವು 1 ಲಕ್ಷದೊಳಗಿರಬೇಕು.
ತಾಲ್ಲೂಕುವಾರು ವಿದ್ಯಾರ್ಥಿ ನಿಲಯಗಳ ವಿವರ ಹಾಗೂ ವಿದ್ಯಾರ್ಥಿ ನಿಲಯದ ಪ್ರವೇಶಕ್ಕೆ ಇರಬೇಕಾದ ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳ ವಿವರ ಮತ್ತು ಸರ್ಕಾರಿ ಆದೇಶಕ್ಕಾಗಿ ಇಲಾಖೆಯ ವೆಬ್ ಸೈಟ್ https://bcwd.karnataka.gov.in ಗೆ ಭೇಟಿ‌ ನೀಡಬಹುದು.
Backward Classes Welfare Department ಅರ್ಜಿ ಸಲ್ಲಿಸಲು ತಾಂತ್ರಿಕ ದೋಷಗಳು ಉಂಟಾದಲ್ಲಿ ಇಮೇಲ್ ವಿಳಾಸ bcwdhelpline@gmail.com ಮುಖಾಂತರ ಅಥವಾ ಜಿಲ್ಲಾ ಹಾಗೂ ತಾಲ್ಲೂಕು ಅಧಿಕಾರಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಹಾಯವಾಣಿ ಸಂಖ್ಯೆ 8050770004, 8050770005 ನ್ನು ಸಂಪರ್ಕಿಸಬಹುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.

Public Library Department 2022 ರಲ್ಲಿ ಪ್ರಥಮ ಆವೃತ್ತಿಯಾಗಿ ಮುದ್ರಿಸಿದ ಪುಸ್ತಕಗಳ ಆಯ್ಕೆ/ ಆಯ್ಕೆಯಾಗದ ಪಟ್ಟಿ ಗ್ರಂಥಾಲಯ ಇಲಾಖೆಯಿಂದ ಪ್ರಕಟ

0

Public Library Department ಸಾರ್ವಜನಿಕ ಗ್ರಂಥಾಲಯ ಇಲಾಖೆಯು 2022ರಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಆಯ್ಕೆಗಾಗಿ ಸ್ವೀಕರಿಸಿದ ಪುಸ್ತಕಗಳ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಆಯ್ಕೆಯಾದ ಹಾಗೂ ಆಯ್ಕೆಯಾಗದ ಪುಸ್ತಕಗಳ ತಾತ್ಕಾಲಿಕ ಪಟ್ಟಿಯನ್ನು ಜಿಲ್ಲಾ/ನಗರ ಕೇಂದ್ರ ಗ್ರಂಥಾಲಯಗಳ ಕಚೇರಿಯಲ್ಲಿ ಮತ್ತು ಇಲಾಖೆಯ ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಿಸಲು ಕ್ರಮ ಕೈಗೊಳ್ಳಲಾಗಿದ್ದು, ಈ ಕುರಿತು ಆಕ್ಷೇಪಣೆಗಳಿದ್ದಲ್ಲಿ ಆಯುಕ್ತರು, ಸಾರ್ವಜನಿಕರ ಗ್ರಂಥಾಲಯ ಇಲಾಖೆ, ವಿಶ್ವೇಶ್ವರಯ್ಯ ಮುಖ್ಯ ಗೋಪುರ, 4ನೇ ಮಹಡಿ, ಡಾ. ಅಂಬೇಡ್ಕರ್ ವೀದಿ, ಬೆಂಗಳೂರು-560001 ಇಲ್ಲಿಗೆ ಲಿಖಿತವಾಗಿ ಆ.30ರೊಳಗಾಗಿ ಸಲ್ಲಿಸುವಂತೆ ಆಯುಕ್ತರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ಬೆಂಗಳೂರು ಇವರು ತಿಳಿಸಿದ್ದಾರೆ.

Public Library Department ಈ ಪುಸ್ತಕಗಳ ಪ್ರದರ್ಶನವನ್ನು ಆ.20 ರಿಂದ 22 ವರೆಗೆ ಡಾ. ವಿಷ್ಣುವರ್ಧನ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೇಂದ್ರ, ಎಂ.ಸಿ.ಬಡಾವಣೆ, ಡಾ. ಬಾಲಗಂಗಾಧರನಾಥ ಸ್ವಾಮೀಜಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಹತ್ತಿರ, ವಿಜಯನಗರ, ಬೆಂಗಳೂರು ಇಲ್ಲಿ ಏರ್ಪಡಿಸಲಾಗುವುದು.

Institute of Science Technology Research and Arts Progress ಪ್ರಸ್ತುತ ನಮ್ಮ ಮನೆ- ಮನಗಳಿಗೆ ವಿಜ್ಞಾನವೇ ಬರುತ್ತಿದೆ. ಅದನ್ನ ಬಳಸುವ ಮನೋಸ್ಥಿತಿ ನಮ್ಮದಾಗಬೇಕು- ಡಾ.ಹುಲಿಕಲ್ ನಟರಾಜ್

0

Institute of Science Technology Research and Arts Progress ವಿಜ್ಞಾನ ನಿಂತ ನೀರಲ್ಲ. ಸದಾ ಚಲನೆಯಲ್ಲಿರುವ ಅನ್ವೇಷಣೆಯಾಗಿದ್ದು ಇತ್ತೀಚಿನ ದಿನಗಳಲ್ಲಿ ನಮ್ಮ ಮನೆ-ಮನಗಳಿಗೆ ವಿಜ್ಞಾನವೇ ಬರುತ್ತಿದ್ದು ಅದನ್ನು ಬಳಸಿಕೊಳ್ಳುವ ಮನಸ್ಥಿತಿ ನಮ್ಮದಾಗಬೇಕು ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ನ ಅಧ್ಯಕ್ಷರು ಹಾಗೂ ಕೆಎಸ್‌ಟಿಎ ಸದಸ್ಯರಾದ ಡಾ.ಹುಲಿಕಲ್ ನಟರಾಜ್ ನುಡಿದರು.

ವಿಜ್ಞಾನ ತಂತ್ರಜ್ಞಾನ ಸಂಶೋಧನೆ ಮತ್ತು ಕಲಾ ಪ್ರಗತಿ ಸಂಸ್ಥೆ ಹಾಗು ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತಿನ ವತಿಯಿಂದ ಕೆಳದಿ ಶಿವಪ್ಪನಾಯಕ ಕೃಷಿ ತೋಟಗಾರಿಗೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ ಇವರ ಸಹಯೋಗದಲ್ಲಿ ನವುಲೆಯ ಕೃಷಿ ಮಹಾವಿದ್ಯಾಲಯದಲ್ಲಿ ಸೋಮವಾರದಿಂದ ಏರ್ಪಡಿಸಲಾಗಿರುವ ಐದು ದಿನಗಳ ವಿಜ್ಞಾನ ಮತ್ತು ತಂತ್ರಜ್ಞಾನಗಳ ವಸ್ತು ಪ್ರದರ್ಶನ – ಅನ್ವೇಷಣೋತ್ಸವ2025 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭಯ, ಆತಂಕ, ದುಗುಡ, ದುರಾಸೆಯಿಂದ ವಿಜ್ಞಾನ ದೂರವಾಗುತ್ತದೆ. ಆದರೆ ನಾವು ಇವನ್ನೆಲ್ಲ ಮೀರಿ ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಅಭಿವೃದ್ದಿಯೆಡೆ ಹೆಜ್ಜೆ ಹಾಕಬೇಕು. ವಿಜ್ಞಾನಕ್ಕೆ ಸಂಬAಧಿಸಿದAತೆ ಸದಾ ಕುತೂಹಲಿಗಳಾಗಿದ್ದು ಪ್ರತಿ ವಿಷಯಗಳ ಬಗ್ಗೆ ಮಾಹಿತಿ ಪಡೆದು, ವಿಚಾರಿಸಿ ಅದರಲ್ಲಿ ತೊಡಗಿಕೊಳ್ಳಬೇಕೆಂದರು.
ಅನ್ವೇಷಣೋತ್ಸವದಲ್ಲಿ ದೇಶದ ಪ್ರತಿಷ್ಟಿತ 8 ಸಂಸ್ಥೆಗಳು ಪಾಲ್ಗೊಂಡಿದ್ದು ವಿದ್ಯಾರ್ಥಿಗಳಲ್ಲಿನ ಚೈತನ್ಯವನ್ನು ಪುಟಿದೇಳಿಸುವ ಉದ್ದೇಶ ಹೊಂದಿವೆ. ಡಿಆರ್‌ಡಿಒ, ಇಸ್ರೋ, ಪ್ಲಾಸ್ಮಾ ಸಂಶೋಧನಾ ಸಂಸ್ಥೆಗಳಿಗೆ ಸಾಮಾನ್ಯರಿಗೆ ಪ್ರವೇಶ ಕಷ್ಟವಾಗಿದೆ.

ಆದರೆ ಈ ಸಂಸ್ಥೆಗಳು ಈಗ ನಿಮ್ಮ ಮನೆ ಬಾಗಿಲಿಗೆ ಬಂದಿದ್ದು ವಿದ್ಯಾರ್ಥಿಗಳು, ಸಾರ್ವಜನಿಕರು ಈ ಪ್ರದರ್ಶನದ ಸದುಪಯೋಗ ಪಡೆಯಬೇಕು. ಪ್ರತಿ ವಿದ್ಯಾರ್ಥಿಗಳು ವಿಜ್ಞಾನಿಗಳಾಗಬೇಕು. ಹೊಸ ಅನ್ವೇಷಣೆಗಳನ್ನು ಮಾಡಬೇಕು. 24/7 ಅನ್ವೇಷಣೆಯಲ್ಲಿ ತೊಡಗಿದಾಗ ಮಾತ್ರ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದರು.
ಡಿಸಿಎಫ್ ಡಾ.ಅಜ್ಜಯ್ಯ ಜಿ.ಆರ್ ಮಾತನಾಡಿ, ಅನ್ವೇಷಣೆಗಳನ್ನು ಸಂಭ್ರಮಿಸುತ್ತಾ ಯುವನತೆಯಲ್ಲಿ ಹೊಸ ಹೊಸ ವೈಜ್ಞಾನಿಕ ಅನ್ವೇಷಣೆಗಳ ಬಗ್ಗೆ ಪ್ರೇರೇಪಣೆ, ವಿಜ್ಞಾನದ ಬಗ್ಗೆ ಕುತೂಹಲ ಮೂಡಿಸುತ್ತಿರುವ ಇಂತಹ ಕಾರ್ಯಕ್ರಮ ಶ್ಲಾಘನೀಯ. 2047 ರ ಹೊತ್ತಿಗೆ ನಮ್ಮ ದೇಶ ಅಭಿವೃದ್ಧಿ ಹೊಂದಿದ ದೇಶ ಆಗಬೇಕಾದರೆ ಈ ರೀತಿಯ ಕಾರ್ಯಕ್ರಮಗಳು ಬಹು ಮುಖ್ಯ ಎಂದು ಅಭಿಪ್ರಾಯಪಟ್ಟರು.

Institute of Science Technology Research and Arts Progress ಎಸ್‌ಎಎಸ್‌ಟಿಆರ್‌ಎ ಅಧ್ಯಕ್ಷ ಡಾ.ಓಂಕಾರ್ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳಿಗೆ ವಿಜ್ಞಾನವನ್ನು ತಲುಪಿಸುವ ಉದ್ದೇಶದಿಂದ ಹಾಗೂ ಯುವ ಮನಸ್ಸಿನಲ್ಲಿ ವಿಜ್ಞಾನ-ತಂತ್ರಜ್ಞಾನ ಕುತೂಹಲ ಮೂಡಿಸುವುದು, ಭಾರತವು ರಕ್ಷಣಾ ಕ್ಷೇತ್ರದಲ್ಲಿ ಸಾಧಿಸಿರುವ ತಾಂತ್ರಿಕ ಶಕ್ತಿ ಮತ್ತು ಸ್ವಾವಲಂಬನೆ ಪರಿಚಯಿಸುವುದು ಹಾಗೂ ವಿಜ್ಞಾನ ಮತ್ತು ಇಂಜಿನಿಯರಿಂಗ್ ವೃತ್ತಿಗೆ ವಿದ್ಯಾರ್ಥಿಗಳನ್ನು ಪ್ರೇರೇಪಿಸುವುದು, ವಿದ್ಯಾರ್ಥಿಗಳಲ್ಲಿ ಬಾಹ್ಯಾಕಾಶದ ಬಗ್ಗೆ ಕುತೂಹಲ ಬೆಳೆಸುವುದು, ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧಿಸಿದ ಹೆಜ್ಜೆಗುರುತುಗಳನ್ನು ಪರಿಚಯಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.
ಈ ಕಾರ್ಯಕ್ರಮದಲ್ಲಿ ಇಸ್ರೋದ ಉಪಗ್ರಹಗಳ ಮಾದರಿ, ಬಾಹ್ಯಾಕಾಶ ನೌಕೆಗಳ ಚಿತ್ರ-ಮಾದರಿಗಳು, ಬಾಹ್ಯಾಕಾಶ ಸಂಶೋಧನೆಗೆ ಸಂಬAಧಿಸಿದ ಪೋಸ್ಟರ್ ಹಾಗೂ ಮಾಹಿತಿ ಫಲಕಗಳು, ಆಡಿಯೋ-ವಿಜುವಲ್ ಪ್ರದರ್ಶನ ಸೇರಿದಂತೆ 18 ಮಾದರಿಗಳ ಪ್ರದರ್ಶನವಿದೆ.
ಬೆಂಗಳೂರು ವಿಜ್ಞಾನ ಮತ್ತು ತಂತ್ರಜ್ಞಾನ ಸಂಗ್ರಹಾಲಯ (Visvesvaraya Industrial & Technological Museum – VITM) ನಡೆಸುವ “ಸೈನ್ಸ್ ಆನ್ ವೀಲ್ಸ್” ಮೊಬೈಲ್ ಪ್ರದರ್ಶನವಿದ್ದು, ಗ್ರಾಮಾಂತರ ಹಾಗೂ ಅರೆ-ನಗರ ಪ್ರದೇಶಗಳ ಜನತೆಗೆ ವಿಜ್ಞಾನದ ಕೌತುಕವನ್ನು ತಲುಪಿಸುವ ವಿಶಿಷ್ಟ ಯೋಜನೆಯಾಗಿದೆ. ಈ ಬಸ್‌ನಲ್ಲಿ 24 ವೈಜ್ಞಾನಿಕ ಪ್ರದರ್ಶನ ವಸ್ತುಗಳು ಅಳವಡಿಸಲ್ಪಟ್ಟಿದ್ದು, ಜನರು ತಮ್ಮ ಊರುಗಳಲ್ಲಿಯೇ ವಿಜ್ಞಾನದ ಅನುಭವ ಪಡೆಯಬಹುದು. ಹಾಗೂ ಈ ಬಸ್‌ನಲ್ಲಿ ತಾವೇ ಸ್ವತಃ ತಾವೇ ಪ್ರಯೋಗ ಮಾಡಬಹುದು.
ಡಿಆರ್‌ಡಿಓ ಅಭಿವೃದ್ಧಿಪಡಿಸಿದ ಶಸ್ತ್ರಾಸ್ತ್ರ, ರಕ್ಷಣಾ ತಂತ್ರಜ್ಞಾನ, ರೋಬೋಟಿಕ್ಸ್, ರಾಡಾರ್, ಡ್ರೋನ್‌ಗಳು ಇತ್ಯಾದಿಗಳ ಪ್ರದರ್ಶನವಿದ್ದು, ವಿದ್ಯಾರ್ಥಿ ಕಾರ್ಯಾಗಾರಗಳು – ವಿಜ್ಞಾನ-ತಂತ್ರಜ್ಞಾನದಲ್ಲಿ ವೃತ್ತಿ ರೂಪಿಸಲು ಪ್ರೇರಣೆ ನೀಡಲಾಗುವುದು.
ವಿಜ್ಞಾನಿಗಳೊಂದಿಗೆ ಸಂವಾದ ನಡೆಸಲಾಗುವುದು.

ಗುಜರಾತ್‌ನ ಗಾಂಧಿನಗರದಲ್ಲಿರುವ ಪ್ಲಾಸ್ಮಾ ಸಂಶೋಧನಾ ಸಂಸ್ಥೆಯು ಅಣುಶಕ್ತಿ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಪ್ರಮುಖ ಸಂಶೋಧನಾ ಸಂಸ್ಥೆಯಾಗಿದ್ದು, ಪ್ಲಾಸ್ಮಾ ಮತ್ತು ಫ್ಯೂಷನ್ ವಿಜ್ಞಾನದಲ್ಲಿ ದೇಶದ ಮುಂಚೂಣಿಯ ಸಂಸ್ಥೆಯಾಗಿದೆ. ಪ್ಲಾಸ್ಮಾ ಸಂಸ್ಥೆಯು ಪ್ಲಾಸ್ಮಾದ ಜೀವಂತ ಪ್ರದರ್ಶನಗಳು – ವಿವಿಧ ಬಗೆಯ ಪ್ಲಾಸ್ಮಾ ಮತ್ತು ಅವುಗಳ ಪ್ರಾಯೋಗಿಕ ಉಪಯೋಗಗಳು, ತ್ಯಾಜ್ಯ ನಿರ್ವಹಣೆ, ವಸ್ತ್ರೋದ್ಯಮ, ವೈದ್ಯಕೀಯ ಕ್ಷೇತ್ರ, ಫ್ಯೂಷನ್ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರದರ್ಶನಗಳು, ಟೋಕಮಾಕ್ ಮಾದರಿ ಮತ್ತು ಅದರ ಪ್ಲಾಸ್ಮಾ ಬಂಧನ ಕಾಯಿಲ್‌ಗಳು, ಐಟರ್ ಯೋಜನೆಯ ಸ್ಕೇಲ್ ಮಾದರಿ, ಕ್ರಯೊ-ಪಂಪ್ ಹಾಗೂ ಅದರ ಉಪಯೋಗಗಳ ಕುರಿತು 60 ಕ್ಕೂ ಹೆಚ್ಚು ಮಾದರಿಗಳನ್ನು ಪ್ರದರ್ಶಿಸಿದ್ದು ವಿದ್ಯಾರ್ಥಿಗಳು ಈ ಪ್ರದರ್ಶನದ ಸದುಪಯೋಗ ಪಡೆಯುವಂತೆ ಕೋರಿದರು.

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲುದ ಕುಲಪತಿಗಳಾದ ಡಾ.ಆರ್.ಸಿ.ಜಗದೀಶ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾದ ಡಾ.ಕೆ.ಪಿ.ಬಸವರಾಜ್, ಡಾ.ಕುಮಾರಸ್ವಾಮಿ, ದೇವಿಕುಮಾರ್, ಶಶಾಂಕ್, ಡಿಡಿಪಿಯು ಚಂದ್ರಪ್ಪ ಗುಂಡಪಲ್ಲಿ, ಇತರೆ ಅಧಿಕಾರಿಗಳು, 8 ಸಂಸ್ಥೆಗಳ ಅಧಿಕಾರಿ, ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಜರಿದ್ದರು. ವಿವಿ ಡೀನ್ ಡಾ.ತಿಪ್ಪೇಶ ಸ್ವಾಗತಿಸಿದರು.

ಕೌತುಕ ಮೂಡಿಸಿದ ಪ್ರದರ್ಶನ : ಪ್ರದರ್ಶನದ ಆರಂಭದಲ್ಲಿ ವಿಐಟಿಎಂ ನವರ “ಸೈನ್ಸ್ ಆನ್ ವೀಲ್ಸ್” ಎಲ್ಲರ ಗಮನ ಸೆಳೆದು, ಸಾರ್ವಜನಿಕರು, ವಿದ್ಯಾರ್ಥಿಗಳು ಮೊಬೈಲ್ ವಾಹನದೊಳಗೆ ಫಲಕಗಳನ್ನು ಓದಿಕೊಂಡು ಸ್ವತಃ ತಾವೇ ಉತ್ಸಾಹದಿಂದ ಪ್ರಯೋಗ ಮಾಡುತ್ತಿದ್ದರು.
ಇಸ್ರೋದ ಉಪಗ್ರಹಗಳ ಮಾದರಿ, ಬಾಹ್ಯಾಕಾಶ ನೌಕೆಗಳ ಚಿತ್ರ-ಮಾದರಿಗಳು, ಬಾಹ್ಯಾಕಾಶ ಸಂಶೋಧನೆಗಳ ವಿವರಗಳು, ಪ್ಲಾಸ್ಮಾ ಮತ್ತು ಫ್ಯೂಷನ್ ವಿಜ್ಞಾನ ಹಾಗೂ ಪ್ಲಾಸ್ಮಾದ ಜೀವಂತ ಪ್ರದರ್ಶನಗಳು ಮಾಹಿತಿಪೂರ್ಣವಾಗಿದ್ದು ಆಸಕ್ತಿದಾಯಕವಾಗಿವೆ.

ಆರ್ಯಭಟ ಪ್ಲಾನೆಟೊರಿಯಂ ನಲ್ಲಿ ಡೋಮ್ ವಿಜುಯಲ್ಸ್ ಮೂಲಕ ಕಾಸ್ಮಿಕ್ ಜಗತ್ತಿನ ಪರಿಚಯ ಮಾಡಿಸುವುದು ವಿಸ್ಮಯಾತ್ಮಕ ಅನುಭವ ನೀಡುತ್ತದೆ.

CM Siddaramaiah ಹಿರೇಬೆಣಕಲ್ ಪ್ರಾಗೈತಿಹಾಸಿಕ ಛಾಯಾಚಿತ್ರಗಳ ಪ್ರದರ್ಶನ

0

CM Siddaramaiah ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ಮುಂಭಾಗದಲ್ಲಿ, ಆಯೋಜಿಸಲಾದ
ಹಿರೇಬೆಣಕಲ್ ಪ್ರಾಗೈತಿಹಾಸಿಕ ಛಾಯಾಚಿತ್ರಗಳ ಪ್ರದರ್ಶನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು.

CM Siddaramaiah ಈ ಸಂದರ್ಭದಲ್ಲಿ, ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಆಡಳಿತ ಸುಧಾರಣಾ ಸಮಿತಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.

Women and Child Development Department 2025-26 ನೇ ಸಾಲಿನಲ್ಲಿ ಮಕ್ಕಳಿಗೆ & ಮಹಿಳೆಯರಿಗೆ ನೀಡುವ ಹೊಯ್ಸಳ & ಕೆಳದಿ ಚೆನ್ನಮ್ಮ ಪ್ರಶಸ್ತಿಗೆ ಅರ್ಹರಿಂದ ಅರ್ಜಿ ಆಹ್ವಾನ

0

Women and Child Development Department 2025-26ನೇ ಸಾಲಿನಲ್ಲಿ ನಾವಿನ್ಯತೆ, ತಾರ್ಕಿಕ ಸಾಧನೆಗಳು, ಕ್ರೀಡೆ, ಕಲೆ, ಸಾಂಸ್ಕೃತಿ ಮತ್ತು ಸಂಗೀತ ಒಟ್ಟು 4 ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ 5 ರಿಂದ 18 ವರ್ಷಗೊಳಗಿನ ಮಕ್ಕಳಿಗೆ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ವತಿಯಿಂದ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಈ ಪ್ರಶಸ್ತಿಗೆ ಪ್ರತಿ ಕ್ಷೇತ್ರಕ್ಕೆ ಇಬ್ಬರು ಮಕ್ಕಳಂತೆ ಆಯ್ಕೆಯಾದ ಒಟ್ಟು 8 ಮಕ್ಕಳಿಗೆ ತಲಾ ರೂ.10,000 ಗಳ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು.

ಅರ್ಜಿ ಸಲ್ಲಿಸುವವರು ಸೂಚಿತ ಕ್ಷೇತ್ರಗಳಲ್ಲಿ ಅಪ್ರತಿಮ ಪ್ರತಿಭೆಯುಳ್ಳವರಾಗಿದ್ದು, ಅವರು ಸಾಧಿಸಿದ ಪ್ರತಿಭೆಯ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿರಬೇಕು. ಕನಿಷ್ಠ 5 ವರ್ಷ ಕರ್ನಾಟಕ ರಾಜ್ಯದಲ್ಲಿ ನೆಲಸಿರಬೇಕು. ಈ ಬಗ್ಗೆ ಸ್ವಯಂ ದೃಢೀಕರಣ ಪತ್ರ ಸಲ್ಲಿಸುವುದು. ರಾಷ್ಟç, ರಾಜ್ಯ, ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿರುವ, ಪ್ರಶಸ್ತಿ ಪಡೆದಿರುವ ಮಾಹಿತಿಯನ್ನು ಸಲ್ಲಿಸಬೇಕು. ಹಿಂದಿನ ವರ್ಷಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ಪಡೆದ ಮಕ್ಕಳು ಪುನಃ ಅರ್ಜಿ ಸಲ್ಲಿಸುವಂತಿಲ್ಲ.

Women and Child Development Department ಮಕ್ಕಳ ವಯಸ್ಸಿನ ಪ್ರಮಾಣ ಪತ್ರವನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿ ಸಲ್ಲಿಸಬೇಕು.
ಆಸಕ್ತರು ನಿಗದಿತ ಅರ್ಜಿ ನಮೂನೆಗಳನ್ನು ಜಿಲ್ಲೆಯ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿವಮೊಗ್ಗ ಇವರಿಂದ ಪಡೆದುಕೊಂಡು, ಭರ್ತಿ ಮಾಡಿದ ಅರ್ಜಿಯನ್ನು ಸೂಕ್ತ ದಾಖಲೆಗಳೊಂದಿಗೆ ದಿ: 12-09-2025 ರೊಳಿಗೆ ಸಲ್ಲಿಸುವಂತೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆಲ್ಕೋಳ, ಶಿವಮೊಗ್ಗ, ದೂ.ಸಂ.: 08182-295514 ನ್ನು ಸಂಪರ್ಕಿಬಹುದು.