Monday, August 10, 2026
Monday, August 10, 2026

ಓರ್ವ ವ್ಯಕ್ತಿ , ವ್ಯಕ್ತಿತ್ವದಿಂದ ದೊಡ್ಡವನಾಗುತ್ತಾನೆ ಹೊರತು ಆಸ್ತಿ ಅಂತಸ್ತಿನಿಂದಲ್ಲ- ಎಂ.ಎನ್.ಸುಂದರರಾಜ್

Date:

ಭೂಪಾಳಂ ವಿಜಯಕುಮಾರ್ ಒಬ್ಬ ಸಾತ್ವಿಕ ಭಾವಜೀವಿ ಆಗಿದ್ದರು ಸದಾ ಹಸನ್ಮುಖಿಯಾಗಿ ಎಲ್ಲರೊಡನೆ ಸ್ನೇಹದಿಂದ ಇದ್ದ ಒಬ್ಬ ಸಜ್ಜನ. ಒಳ್ಳೆಯ ಕವಿಯಾಗಿ ಉತ್ತಮ ವೀಣಾ ವಾದಕರಾಗಿ ಮತ್ತು ಪ್ರಗತಿಪರ ರೈತರಾಗಿ ಎಲ್ಲಕ್ಕಿಂತ ಹೆಚ್ಚಾಗಿ ಆತ್ಮೀಯರಾಗಿ ಬಾಳಿದವರು. ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ಕವನವಾಚನ ಮಾಡುವಾಗ ಸಹವೇ ಆ ಕವನಗಳಿಗೆ ರಾಗ ಸಂಯೋಜಿಸಿ ಹಾಡುತ್ತಿದ್ದರು. ತಮ್ಮ ಭೂಪಾಳ0 ವಂಶದ ಬಗ್ಗೆ ಅಪಾರ ಗೌರವವನ್ನು ಇಟ್ಟುಕೊಂಡಿದ್ದವರು. ತಮ್ಮ ಮನೆಯಲ್ಲಿ ಆಗಾಗ ಸಾಹಿತ್ಯ ಮತ್ತು ಸಂಗೀತದ ಕಾರ್ಯಕ್ರಮಗಳನ್ನು ಆಯೋಜಿಸಿ ತಮ್ಮ ಗೆಳೆಯರನ್ನು ಆಹ್ವಾನಿಸಿ ರಂಜಿಸುತ್ತಿದ್ದರು ಎಂದು ಸಾಹಿತಿ ಎಂ ಎನ್ ಸುಂದರರಾಜ್ ತಿಳಿಸಿದ್ದಾರೆ. ಅವರು ವಿಜಯಪಥ ಅಡಿಯಲ್ಲಿ ನಡೆದ ವಿಜಯ್ ಕುಮಾರ್ ಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಒಬ್ಬ ವ್ಯಕ್ತಿ ತನ್ನ ವ್ಯಕ್ತಿತ್ವದಿಂದ ದೊಡ್ಡವನಾಗುತ್ತಾನೆ ಹೊರತಾಗಿ ಆತನ ಆಸ್ತಿ ಅಂತಸ್ತಿ ನಂದಲ್ಲ ಎಂದು ಈ ಸಂದರ್ಭದಲ್ಲಿ ಹೇಳಿ ವಿಜಯ್ ಕುಮಾರ್ ಅವರ ಜೀವನದ ಕೆಲವು ಘಟನೆಗಳನ್ನು ತಿಳಿಸಿಕೊಟ್ಟರು. ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ಉದ್ಯಮಿ ಟಿಆರ್ ಅಶ್ವತ ನಾರಾಯಣ ಶೆಟ್ಟಿ ಅವರು ನಡೆಸಿಕೊಟ್ಟರು. ಅವರು ಮಾತನಾಡುತ್ತಾ ವಿಜಯಕುಮಾರ್ ತಮ್ಮ ಅಪೂರ್ವ ವ್ಯಕ್ತಿತ್ವ ಮತ್ತು ಕವಿ ಮನಸ್ಸಿನಿಂದ ಹೆಚ್ಚು ಪ್ರಸಿದ್ಧರಾಗಿದ್ದರು ಎಂದು ತಿಳಿಸಿದರು.
ಮತ್ತೋರ್ವ ಮುಖ್ಯ ಅತಿಥಿ ಶಿವಮೊಗ್ಗ ಟೈಮ್ಸ್ ನ ಸಂಪಾದಕರಾದ ಎಸ್ ಚಂದ್ರಕಾಂತ್ ಅವರು ಮಾತನಾಡಿ ವಿಜಯಕುಮಾರ್ ಅನೇಕ ಬಾರಿ ಕವನ ವಾಚನ ಮಾಡಿದ್ದನ್ನು ತಾವು ಕೇಳಿರುವುದಾಗಿ ತಿಳಿಸಿ ಅವರ ಎರಡು ಕವನ ಸಂಕಲನಗಳನ್ನು ತಮಗೆ ನೀಡಿದ್ದನ್ನು ನೆನಪು ಮಾಡಿಕೊಂಡರು. ಹಾಗೆ ಭೂಪಾಳ0 ಚಂದ್ರಶೇಖರಯ್ಯನವರು ತಮಗೆ ಪತ್ರಿಕೋದ್ಯಮದ ಒಳ ತಿರುವುಗಳನ್ನು ತಿಳಿಸಿಕೊಟ್ಟ ಮಹಾನುಭಾವರು ಎಂಬುದನ್ನು ಬಿಚ್ಚಿಟ್ಟರು. ಭೂಪಾಳಂ ಕುಟುಂಬದವರು ಕೋವಿಡ್ ಸಮಯದಲ್ಲಿ ಸುಮಾರು ಐದು ಕೋಟಿ ರೂಪಾಯಿಗಳ ನೆರವನ್ನು ಮೆಗ್ಗಾನ್ ಆಸ್ಪತ್ರೆಗೆ ನೀಡಿದ್ದನ್ನು ಸ್ಮರಿಸಿದರು.
ಅಧ್ಯಕ್ಷತೆ ವಹಿಸಿದ್ದ ಸುವರ್ಣ ವಿಜಯಕುಮಾರ್ ಅವರು ಮಾತನಾಡಿ ಇಂದಿಗೂ ತಮ್ಮ ಪತಿ ಬಗ್ಗೆ ಇಷ್ಟೊಂದು ಅಭಿಮಾನ ಇರುವುದು ತಮಗೆ ಸಂತಸ ತಂದಿದೆ ಎಂದು ಹೇಳಿದರು. ಕೌಟುಂಬಿಕವಾಗಿ ಅತ್ಯಂತ ಪ್ರೀತಿ ಹೊಂದಿ ತಮ್ಮ ಬಗ್ಗೆಯೂ ಒಂದು ಕವನವನ್ನು ಬರೆದಿದ್ದನ್ನು ಅಭಿಮಾನದಿಂದ ಹೇಳಿಕೊಂಡರು.
ಪ್ರಾರಂಭದಲ್ಲಿ ಪ್ರತಿಭಾ ನಾಗರಾಜ್ ಅವರಿಂದ ಪ್ರಾರ್ಥನೆ ನಡೆಯಿತು ದೀಪಿಕಾ ಸ್ವಾಗತಿಸಿದರು ಕಾರ್ಯಕ್ರಮ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟವರು ಶಾಂತಾ ಶೆಟ್ಟಿಯವರು.
ಕಾರ್ಯಕ್ರಮದ ಅಂಗವಾಗಿ ಜಯಶ್ರೀ ಶ್ರೀಧರ್ ವಸಂತ ವೇಣುಗೋಪಾಲ್ ಉಮಾ ದಿಲೀಪ್ ಲಕ್ಷ್ಮಿ ಮಹೇಶ್ ವಿಜಯ್ ಕುಮಾರ್ ಅವರ ಗೀತೆಗಳ ನ್ನು ಸುಶ್ರಾವ್ಯವಾಗಿ ಹಾಡಿದರು ಶೋಭಾ ಸತೀಶ್ ಅವರು ಸ್ವರಚಿತ ಕವನ ವಾಚನ ಮಾಡಿದರು. ಕೊನೆಯಲ್ಲಿ ಶರತ್ ಅವರು ವಂದನಾರ್ಪಣೆ ನಡೆಸಿಕೊಟ್ಟರು. ಒಟ್ಟಿನಲ್ಲಿ ಈ ಒಂದು ಕಾರ್ಯಕ್ರಮ ಅತ್ಯಂತ ಸ್ನೇಹದ ವಾತಾವರಣದಲ್ಲಿ ನಡೆದು ಎಲ್ಲರನ್ನೂ ಭಾವುಕತೆಯ ತ್ತ ಕರೆದು ವೈದಿತು.
ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಜಿ ವಿಜಯಕುಮಾರ್ ಸಹಿತ 12 ಗಣ್ಯರಿಗೆ ಗೌರವಾರ್ಪಣೆ ನಡೆಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಮುಂದೆ ಯಾವುದೇ ರೀತಿ ಭೂಕುಸಿತ ಆಗದಂತೆ ಮುನ್ನೆಚ್ಚರಿಕೆ ವಹಿಸಿ- ಸಚಿವ ಮಧು ಬಂಗಾರಪ್ಪ

Madhu Bangarappa ಇತ್ತೀಚಿಗೆ ಬಿದ್ದ ಭಾರಿ ಮಳೆಯಿಂದಾಗಿ ತೀರ್ಥಹಳ್ಳಿಯ ಗಾಂಧಿನಗರದಲ್ಲಿ ನಡುರಾತ್ರಿ...

Madhu Bangarappa ತೀರ್ಥಹಳ್ಳಿ ಬಳಿ ಗುಡ್ಡ ಕುಸಿತದಿಂದ ಸಾವಿನ ಅವಘಡ: ಸಚಿವ ಮಧು ಬಂಗಾರಪ್ಪ ಮೌಖಿಕ ಪರಿಶೀಲನೆ, ಪರಿಹಾರಕ್ಕೆ ಶೀಘ್ರ ಕ್ರಮ

Madhu Bangarappa ತೀರ್ಥಹಳ್ಳಿಯಲ್ಲಿ ಭೂಕುಸಿತದಿಂದ ಮೂವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ...

Madhu Bangarappa ಗ್ರಾಮೀಣರಲ್ಲಿ ವಿಬಿ-ಜಿ ರಾಮ್ ಜಿ ಯೋಜನೆ ಬಗ್ಗೆ ಮನವರಿಕೆ ಮಾಡಿ, ಹೆಚ್ಚಿನ ಜನಕ್ಕೆ ಕೆಲಸ ನೀಡಿ- ಮಧು ಬಂಗಾರಪ್ಪ

Madhu Bangarappa ಬರಗಾಲದ ಹಿನ್ನೆಲೆಯಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯಡಿ ಗ್ರಾಮೀಣ...