Thursday, June 11, 2026
Thursday, June 11, 2026
Home Blog Page 201

Adarsh ​​Super Specialty Eye Hospital ಎಲ್ಲರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳಬೇಕು- ಜಿ.ವಿಜಯ ಕುಮಾರ್

0

Adarsh ​​Super Specialty Eye Hospital ಸಕ್ಕರೆ ಕಾಯಿಲೆಯಿಂದ ನಿಮ್ಮ ದೃಷ್ಟಿ ಹಾನಿಯಾಗದಂತೆ ಕಾಪಾಡಿಕೊಳ್ಳುವುದು ಅತ್ಯಂತ ಅವಶ್ಯಕ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಹೇಳಿದರು.

ಶಿವಮೊಗ್ಗ ನಗರದ ಆದರ್ಶ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ವತಿಯಿಂದ ಲಕ್ಷ್ಮೀದೇವಿ ಚಿಟ್ಟ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಡಯಾಬಿಟಿಸ್ ಸಂಬಂಧಿತ ಕಣ್ಣಿನ ರೆಟಿನಾ ತಪಾಸಣಾ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಉತ್ತಮ ಜೀವನಶೈಲಿ ರೂಢಿಸಿಕೊಳ್ಳಬೇಕು. ಪೂರಕವಾದ ಆಹಾರಕ್ರಮವನ್ನು ಪಾಲಿಸಬೇಕು ಎಂದು ತಿಳಿಸಿದರು.

ಆದರ್ಶ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ರೆಟಿನಾ ತಜ್ಞೆ ಡಾ. ದೀಪಾ ಎಂ.ಜೆ. ಮಾತನಾಡಿ, ದೀರ್ಘಕಾಲದ ಸಕ್ಕರೆ ಕಾಯಿಲೆಯಿಂದ ಕಣ್ಣಿನ ರೆಟಿನಾದ ರಕ್ತನಾಳಗಳು ಹಾನಿಗೊಳ್ಳುತ್ತವೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯದಿದ್ದರೆ ದೃಷ್ಟಿ ಹಾನಿಯಾಗಬಹುದು ಅಥವಾ ಕುರುಡುತನ ಉಂಟಾಗಬಹುದು ಎಂದು ಹೇಳಿದರು.

ಟೈಪ್ 1 ಅಥವಾ ಟೈಪ್ 2 ಡಯಾಬಿಟಿಸ್ ಇರುವವರಿಗೆ, ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಿದ್ದರೆ, ಬಿಪಿ ನಿಯಂತ್ರಣದಲ್ಲಿ ಇಲ್ಲದಿದ್ದರೆ, ದೀರ್ಘಕಾಲದ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರೆ, ಧೂಮಪಾನಿಗಳು ಮತ್ತು ರಕ್ತದಲ್ಲಿ ಕೊಬ್ಬಿನಾಂಶ ಇದ್ದರೆ ಅಪಾಯ ಹೆಚ್ಚಿರುತ್ತದೆ ಎಂದರು.

Adarsh ​​Super Specialty Eye Hospital ಏಕಾಏಕಿ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ದೃಷ್ಟಿ ಅಸ್ಪಷ್ಟವಾಗುವುದು ಅಥವಾ ಬದಲಾವಣೆ ಕಾಣುವುದು. ಕಣ್ಣ ಮುಂದೆ ಕಪ್ಪು ಕಲೆಗಳು ಕಾಣುವುದು. ರಾತ್ರಿ ಸಮಯದಲ್ಲಿ ದೃಷ್ಟಿ ಕಡಿಮೆ ಆಗುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದರು.
ಆರಂಭಿಕ ಹಂತಗಳಲ್ಲಿ ಯಾವುದೇ ಲಕ್ಷಣಗಳು ಕಾಣಿಸದೇ ಇರಬಹುದು. ಆದರೆ ನಿಯಮಿತ ಕಣ್ಣಿನ ತಪಾಸಣೆ ಮುಖ್ಯ ಎಂದರು. ಮಧುಮೇಹ ಇರುವ ರೋಗಿಗಳಿಗೆ ಕಣ್ಣಿನ ತಪಾಸಣೆ, ಡಯಾಬಿಟಿಕ್ ರೆಟಿನೋಪತಿ ಬಗ್ಗೆ ತಜ್ಞ ವೈದ್ಯರಿಂದ ಉಚಿತ ಸಮಾಲೋಚನೆ ನಡೆಸಲಾಯಿತು.

ಡಾ. ಮೇಘರಾಜ್ ಚಿಟ್ಟ, ಡಾ. ಅಶೋಕ್ ಟಿ., ಮಲ್ಲಿಕಾರ್ಜುನ್ ಕಾನೂರು ಮತ್ತಿತರರು ಉಪಸ್ಥಿತರಿದ್ದರು.

B.Y.Raghavendra ರೈತರಿಗೆ ಕೆಲವು ಬೆಳೆಗಳಿಗೆ ವಿಮಾ ಪರಿಹಾರ ಇನ್ನೂ ಸಿಕ್ಕಿಲ್ಲ-ಸಂಸದ ಬಿ.ವೈ.ರಾಘವೇಂದ್ರ

0

B.Y.Raghavendra ಶಿವಮೊಗ್ಗ ‌ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರಯವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ರೈತರಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಘೋಷಣೆ ಮಾಡಿದ್ದರು.ಆ 2024-25 ಪ್ರಕಾರ ಜಿಲ್ಲೆಯ 89,611ರೈತರಿಗೆ 113 ಕೋಟಿ 25 ಲಕ್ಷ ಪರಿಹಾರ ಬಿಡುಗಡೆ ಆಗಿದೆ ಎಂದರು.

ಅಡಕೆ, ಮಾವು, ಕಾಳು ಮೆಣಸು ಬೆಳೆಗಳಿಗೆ ವಿಮೆ ಸಿಕ್ಕಿದೆ.ಅದರೆ ಕೆಲವೆಡೆ ದೂರು ಬರುತ್ತಿದೆ.ರೈತರು ತಾವು ಕಟ್ಟಿದ ಪ್ರಿಮೀಯಂ‌ ಕಂತಿನ ಹಣದಷ್ಟೂ ಪರಿಹಾರ ಸಿಕ್ಕಿಲ್ಲ ಎಂದು ದೂರುತ್ತಿದ್ದಾರೆ.
ಈ ಬಗ್ಗೆ ರೈತರೊಂದಿಗೆ ಸಭೆ ನಡೆಸಿದಾಗ ಶಿವಮೊಗ್ಗ ಕ್ಷೇತ್ರಕ್ಕೆ ಇನ್ನೂ 100 ಕೋಟಿಯಷ್ಟು ಪರಿಹಾರ ಬೇಕಿತ್ತು ಎಂದು ಹೇಳಿದರು.

ಪ್ರತಿ ೩ ವರ್ಷಕ್ಕೊಮ್ಮೆ ಸಿದ್ಧಪಡಿಸುವ ಟರ್ಮ್ ಶೀಟ್ ನಲ್ಲಿ ೩ ಸೆ.ಮೀ. ಮಳೆ ೧೦ ದಿನ‌ ನಿಗದಿಪಡಿಸಲಾಗಿದೆ.
ಆದರೆ ಅದಕ್ಕಿಂತ ಹಿಂದೆ ೩ ಸೆ.ಮೀ.ಮಳೆ ೫ ದಿನ ಬೀಳಬೇಕು ಎಂದಿತ್ತು.
ಜಿಲ್ಲೆಯ ಬಹಳಷ್ಟು ಮಳೆ ಮಾಪನ ಕೇಂದ್ರಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಹೇಳಿದರು.

ಇದರಿಂದಾಗಿ ವಿಮೆ ಕಂಪನಿಗಳಿಗೆ ಲಾಭ ಅಗುತ್ತಿದೆ, ರೈತರಿಗೆ ಅನ್ಯಾಯ ಆಗುತ್ತಿದೆ.
ನಮ್ಮ ಪಕ್ಷದ ವತಿಯಿಂದ ಈ ಬಗ್ಗೆ ಗಮನ‌ ಹರಿಸಲಾಗುತ್ತದೆ.
ನಾನೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ ಎಂದು ತಿಳಿಸಿದರು.

ಉತ್ತರ ಕರ್ನಾಟಕ ರೈತರಿಗೆ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಪ್ರೀಮಿಯಂ‌ನ್ನು ನಮ್ಮ ಜಿಲ್ಲೆಯ ರೈತರು ಪಾವತಿಸಿದ್ದಾರೆ.
ಕೆಡಿಪಿ ಸಭೆಯಲ್ಲಿ ಮಳೆ ಮಾಪನ ಕೇಂದ್ರದ ಸ್ಥಿತಿಗತಿ ಬಗ್ಗೆ ಚರ್ಚೆ ನಡೆದಿದೆ.
ಆದರೂ ಯಾವುದೇ ದುರಸ್ತಿ ಕೆಲಸ ಆಗಿಲ್ಲ.ಇದರಿಂದಾಗಿ ನಮ್ಮ ರೈತರಿಗೆ ಅನ್ಯಾಯ ಆಗುತ್ತಿದೆ, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.

B.Y.Raghavendra ವಿಐಎಸ್ಎಲ್ ಅಭಿವೃದ್ಧಿ ಕುರಿತು ಕೇಂದ್ರ ಸಚಿವ ಕುಮಾರಸ್ವಾಮಿ ಕಾರ್ಖಾನೆಗೆ ಭೇಟಿ ನೀಡಿದ್ದಾರೆ.ಅಭಿವೃದ್ಧಿ ಕುರಿತು ಮೆಕಾನ್ ಸಂಸ್ಥೆಗೆ ವಹಿಸಲಾಗಿದೆ. ಅದೇ ರೀತಿ ಮೆಟಿರಿಯಲ್ಸ್ ಖರೀದಿಗೆ ಮೆಗಾನೆ ಸಂಸ್ಥೆಯನ್ನು ನಿಗದಿ ಮಾಡಿದೆ. ಕಾರ್ಖಾನೆಯ ವಿವಿಧ ವಿಭಾಗವನ್ನು ಏಕ ಕಾಲಕ್ಕೆ ಆರಂಭಿಸುವ ಚಿಂತನೆ ಇದೆ ಎಂದರು.

Shivamogga Trupti Clinic ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆ ಜ್ಞಾನ, ವಿಜ್ಞಾನ‌ & ಸಂಸ್ಕಾರ ಅತಿ ಮುಖ್ಯ- ಎ.ಎಸ್.ಚಂದ್ರಶೇಖರ್

0

Shivamogga Trupti Clinic ವಿದ್ಯಾರ್ಥಿಗೆ ಶಿಕ್ಷಣ ಪಡೆಯುವುದು ಮಾತ್ರ ಮುಖ್ಯವಲ್ಲ ಅದರ ಜೊತೆ ಜ್ಞಾನ ವಿಜ್ಞಾನ ಹಾಗೂ ಸಂಸ್ಕಾರ ಅತಿ ಮುಖ್ಯ ಎಂದು ಶಿವಮೊಗ್ಗದ ತೃಪ್ತಿ ಕ್ಲಿನಿಕ್ ನ ಕಿಡ್ನಿ ಹಾಗೂ ಮೂತ್ರ ಕೋಶ ಶಸ್ತ್ರ ಚಿಕಿತ್ಸಕರಾದ ಡಾ. ಎಸ್. ಚಂದ್ರಶೇಖರ್ ತಿಳಿಸಿದರು.

ಅವರು ಶಿವಮೊಗ್ಗ ಅನುಪಿನಕಟ್ಟೆಯಲ್ಲಿರುವ ಶ್ರೀ ರಾಮಕೃಷ್ಣ ಗುರುಕುಲ ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಜ್ಞಾನ ವಿಜ್ಞಾನ ಹಾಗೂ ಸೃಜನಶೀಲ ದಿನಾಚರಣೆ ಯನ್ನು ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣದ ಜೊತೆ ಜೊತೆಗೆ ಜ್ಞಾನ ಮತ್ತು ಸಂಸ್ಕಾರದ ಪರಿಪಾಠವನ್ನು ಶಿಕ್ಷಕರು ಹಾಗೂ ಪೋಷಕರು ನೀಡುವುದು ಅತ್ಯಗತ್ಯ ಈ ಮೂರರಿಂದ ಆ ಮಗು ಉನ್ನತ ಮಟ್ಟದಲ್ಲಿ ಗುರುತಿಸಿಕೊಂಡು ಬೆಳೆದು ಸಾಧನೆಯ ತೋರಲು ಸಾಧ್ಯ ಎಂದರು. ನಯ ವಿನಯ ಸಭ್ಯತೆ ಹಾಗೂ ಸಂಸ್ಕೃತಿ ನಮ್ಮ ಪರಿಪಾಠವಾಗಬೇಕು ಎಲ್ಲದನ್ನು ತಿಳಿದುಕೊಳ್ಳಲು ಕೇಳುವ ಮನೋಭಾವ ಮನೋಸ್ಥಿತಿ ನಮ್ಮಲ್ಲಿ ಬೆಳೆಯಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.

ಸಂಸ್ಥೆಯ ಕಾರ್ಯದರ್ಶಿ ಶೋಭಾ ವೆಂಕಟರಮಣ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಮಕ್ಕಳ ಬೇಕು- ಬೇಡಗಳನ್ನು ನಾವು ಅವಲೋಕಿಸಿ ಅವರನ್ನು ಕಲಿಕೆಯತ್ತ ಹಾಗೂ ಸೃಜನಶೀಲತೆಯತ್ತ ಬೆಳೆಸಿದಾಗ ಅವರ ಜೀವನ ಸಮರ್ಪಕವಾಗುತ್ತದೆ ಹಾಗೂ ಹೊಸ ಸಾಧನೆಗೆ ದಾರಿದೀಪವಾಗುತ್ತದೆ.

ಈ ನಿಟ್ಟಿನಲ್ಲಿ ರಾಮಕೃಷ್ಣ ವಿದ್ಯಾಸಂಸ್ಥೆ ಆರಂಭದಿಂದಲೂ ಎಲ್ಲಾ ಶಾಲೆಗಳಲ್ಲಿ ಪ್ರತಿವರ್ಷ ಇಂತಹ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದೆ ಎಂದು ಹೇಳಿದರು.

Shivamogga Trupti Clinic ಕಾರ್ಯಕ್ರಮದಲ್ಲಿ ಸಂಚಾಲಕರಾದ ಎಚ್. ಕೆ. ಅರುಣ್ ಹಾಗೂ ಕೆ.ಡಿ. ಶರತ್ ಮತ್ತು ಮುಖ್ಯ ಶಿಕ್ಷಕರಾದ ವೆಂಕಟೇಶ್, ತೀರ್ಥೇಶ್, ಗಜೇಂದ್ರನಾಥ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪಠ್ಯ ವಿಷಯಗಳಿಗೆ ಸಂಬಂಧಪಟ್ಟಂತೆ ವಿಜ್ಞಾನ, ಗಣಿತ, ಸಮಾಜ ಹಾಗೂ ಭಾಷೆಯ ಮಾಡಲ್ ಪ್ರದರ್ಶನಗಳೊಂದಿಗೆ ಚಿತ್ರಕಲೆ, ಅಕ್ಷರ ಬರಹ ಸೇರಿದಂತೆ 2100 ಕ್ಕೂ ಹೆಚ್ಚು ಮಾಡೆಲ್ ಗಳು ಅತ್ಯಂತ ವಿಶೇಷವಾಗಿದ್ದವು.

ಆರೋಗ್ಯ ಸಂಪತ್ತಿನ ಮುಂದೆ ಬೇರೆ ಸಂಪತ್ತು ಯಾವುದೂ ಇಲ್ಲ- ವಾಗ್ದೇವಿ ಬಸವರಾಜ್

0

ಆರೋಗ್ಯ ಸಂಪತ್ತಿನ ಮುಂದೆ ಬೇರೆ ಸಂಪತ್ತು ಯಾವುದು ಇಲ್ಲ ಪ್ರತಿಯೊಬ್ಬರೂ ಸಕಾಲದಲ್ಲಿ ನಿರಂತರವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ ಆಧುನಿಕ ಯುಗದಲ್ಲಿ ದೈಹಿಕ ಚಟುವಟಿಕೆ ಇಲ್ಲದಿರುವುದು ಹಾಗೂ ಒತ್ತಡದ ಜೀವನದಲ್ಲಿ ಬದುಕುತ್ತಿರುವ ನಾವುಗಳು ಆರೋಗ್ಯವನ್ನು ಸರಿಯಾಗಿ ಇಟ್ಟುಕೊಳ್ಳಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ವಾಗ್ದೇವಿ ಬಸವರಾಜ್ ಅವರು ನುಡಿದರು.

ಅವರು ಶಕ್ತಿಧಾಮ ಬಡಾವಣೆಯ ನಮ್ಮ ಕ್ಲಿನಿಕ್ ನಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಮಹಿಳಾ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗ ಉಚಿತ ಆರೋಗ್ಯ ತಪಾಸಣಾ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಹಿಳೆಯರು ತಮ್ಮ ಮನೆಯ ಒತ್ತಡದ ಕೆಲಸದಲ್ಲಿ ಆರೋಗ್ಯದ ಕಡೆ ಗಮನಹರಿಸುವುದು ಕಡಿಮೆಯಾಗಿ ಸಾಕಷ್ಟು ತೊಂದರೆಗಳನ್ನು ಅನುಭವಿಸುವುದನ್ನು ನೋಡುತ್ತಾ ಬಂದಿದ್ದೇವೆ ಇಂತಹ ಆರೋಗ್ಯ ತಪಾಸಣಾ ಶಿಬಿರಗಳನ್ನು ಸಾರ್ವಜನಿಕರು ಸದಾ ಉಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಡಾಕ್ಟರ್ ಗುಡದಪ್ಪ ಕಸಬಿ ಯವರು ಮಾತನಾಡುತ್ತಾ ನಮ್ಮ ಕ್ಲಿನಿಕ್ ನಲ್ಲಿ ಉಚಿತವಾಗಿ ವೈದ್ಯಕೀಯ ಅನುಕೂಲತೆಗಳು ಸಿಗುವದರಿಂದ ಅವುಗಳನ್ನು ಬಳಸಿಕೊಂಡು ಸದಾ ಆರೋಗ್ಯವಂತರಾಗಿ ಜೀವನ ನಡೆಸೋಣ ಪ್ರತಿನಿತ್ಯ ನಿರಂತರವಾಗಿ ಯೋಗ ಪ್ರಾಣಾಯಾಮ ಧ್ಯಾನ ವಾಕಿಂಗ್ ಇವುಗಳನ್ನು ಅಳವಡಿಸಿಕೊಳ್ಳುವುದರ ಮುಖಾಂತರ ನಾವು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರಾಗಬೇಕು ಎಂದು ಕರೆ ನೀಡಿದರು.

ಶಿಬಿರದಲ್ಲಿ ಮಹಿಳಾ ಘಟಕದ ಉಪಾಧ್ಯಕ್ಷರಾದ
ಲಾವಣ್ಯ ಶಶಿಧರ್, ಪ್ರದಾನ
ಕಾರ್ಯದರ್ಶಿ ಆಶಾ ಆನಂದ್.
ಕಾರ್ಯದರ್ಶಿ ಬಿಂದು ವಿಜಯಕುಮಾರ್. ನಿರ್ದೇಶಕರುಗಳಾದ ಗೀತಾ ಬಸವ ಕುಮಾರ್. ಶಕುಂತಲಾ ಹವಳದ. ಶಶಿಕಲಾ
ಜಿಲ್ಲಾ ಘಟಕದ ಅಧ್ಯಕ್ಷರಾದ ರುದ್ರಮುನಿ ಸಜ್ಜನ್. ಮಲ್ಲಿಕಾರ್ಜುನ್ ಕಾನೂರ್.
ಜಿ ವಿಜಯಕುಮಾರ್ ಮಾಧ್ಯಮ ಘಟಕದ ಅಧ್ಯಕ್ಷರಾದ
ಸೋಮನಾಥ್ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸ್ವಾಶಕೋಶ ತಜ್ಞರು ಮತ್ತು ಪಿಜೆಶಿಯನ್. ಡಾಕ್ಟರ್ ಅಭಿಷೇಕ್ ನುಚ್ಚಿನ್. ಮೂಳೆ ವೈದ್ಯರಾದ ಡಾಕ್ಟರ್ ಬಿ ಸುರೇಶ್. ಪ್ರಸುತಿ ಮತ್ತು ಶ್ರೀ ರೋಗ ತಜ್ಞರಾದ ಡಾಕ್ಟರ್ ಮಾಧುರ್ಯ ಆರ್ ಎಂ
ಸಾಕಷ್ಟು ಆರೋಗ್ಯದ ಬಗ್ಗೆ ಸಲಹೆ ನೀಡಿ ತಪಾಸಣೆ ನಡೆಸಿ ಉಚಿತ ಔಷಧವನ್ನು ವಿತರಣೆ ಮಾಡಿದರು ಇನ್ನೂರಕ್ಕೂ ಹೆಚ್ಚು ಜನ ಶಿಬಿರದಲ್ಲಿ ಭಾಗವಹಿಸಿದ್ದರು.

Jawaharlal Nehru New Engineering College ಕನ್ನಡತನದ ಮೂಲಸಾರ ಸರಳತೆ- ಡಾ.ಸಾಸ್ವೆಹಳ್ಳಿ ಸತೀಶ್

0

Jawaharlal Nehru New Engineering College ಜವಾಹರಲಾಲ್ ನೆಹರು ನ್ಯೂ ಎಂಜಿನಿಯರಿಂಗ್ ಕಾಲೇಜು (ಜೆಎನ್‌ಎನ್‌ಸಿಇ), ಶಿವಮೊಗ್ಗ, ಕನ್ನಡ ರಾಜ್ಯೋತ್ಸವವನ್ನು ಕನ್ನಡದ ಮಹಾನ್ ಸಾಂಸ್ಕೃತಿಕ ವೈಭವ ಮತ್ತು ಕನ್ನಡತನ ಮೌಲ್ಯಗಳ ಸ್ಮರಣೆ ಚಿಂತನೆಗಳಿಂದಿಗೆ ಆಚರಿಸಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ, ಪ್ರಸಿದ್ಧ ಚಿಂತಕ, ರಂಗಭೂಮಿ ಕಾರ್ಯಕರ್ತ, ಚಲನಚಿತ್ರ ನಿರ್ದೇಶಕ ಡಾ. ಸಾಸ್ವೇಹಳ್ಳಿ ಸತೀಶ್ ಅವರು ಆಗಮಿಸಿದ್ದರು. ಡಾ. ಸಾಸ್ವೇಹಳ್ಳಿ ಸತೀಶ್ ತಮ್ಮ ಭಾಷಣದಲ್ಲಿ, ಕನ್ನಡನಾಡು – ಕನ್ನಡ ಸಂಸ್ಕೃತಿಯಲ್ಲಿ ಹುದುಗಿರುವ ಜೀವನ ಮೌಲ್ಯಗಳ ಬಗ್ಗೆ ಮಾತನಾಡಿದರು. ಅವರು ಕನ್ನಡತನದ ಮೂಲಸಾರ ಸರಳತೆ ಎಂಬುದನ್ನು ಒತ್ತಿ ಹೇಳಿದರು. ಐತಿಹಾಸಿಕವಾಗಿ ನಮ್ರತೆ, ಸಮಗ್ರತೆ, ಒಳಗೊಳ್ಳುವಿಕೆ , ಸಾಮಾಜಿಕ ಸಾಮರಸ್ಯ ಕನ್ನಡತನದಲ್ಲಿ ಹಾಸುಹೊಕ್ಕಾಗಿರುವುದನ್ನು ವಿವರಿಸಿದರು. ಕನ್ನಡ ಶಿಕ್ಷಣ, ಸಂಸ್ಕೃತಿ ಮತ್ತು ಸಾಮಾಜಿಕ ಪ್ರಜ್ಞೆಯ ಬೇರುಗಳನ್ನು ಬಲಪಡಿಸಿದ NES (ನ್ಯಾಷನಲ್ ಎಜುಕೇಶನ್ ಸೊಸೈಟಿ) ಯ ಸ್ಥಾಪಕ ಸದಸ್ಯರಾದ ಈಸೂರು ಚಳುವಳಿಯ ಭಾಗವಾಗಿದ್ದ ದಿವಂಗತ ಶ್ರೀ ನಾಗಪ್ಪಶೆಟ್ಟಿ, ದಿವಂಗತ ಶ್ರೀ ದಿನಕರ್ ಮುಂತಾದವರ ಕೊಡುಗೆಗಳನ್ನು ಅವರು ಸ್ಮರಿಸಿದರು. ಅವರ ಆದರ್ಶಗಳು JNNCE ಯಂತಹ ಸಂಸ್ಥೆಗಳಿಗೆ ಮಾರ್ಗದರ್ಶನ ನೀಡುತ್ತಲೇ ಇರುತ್ತವೆ ಎಂದು ಅವರು ಹೇಳಿದರು. ಮುಂದುವರೆಯುತ್ತಾ, ಡಾ. ಸತೀಶ್ ಕನ್ನಡ ಮಾತನಾಡಿದಾಗ ಮಾತ್ರ ಕನ್ನಡ ಬೆಳೆಯುತ್ತದೆ ಎಂದು ಒತ್ತಿ ಹೇಳಿದರು. ಕನ್ನಡದ ಶಕ್ತಿ ಸ್ನೇಹಪರತೆ ಮತ್ತು ಹೊರಗಿನವರನ್ನು ಸಹ ಮುಕ್ತ ತೋಳುಗಳಿಂದ ಸ್ವಾಗತಿಸುವ ಸಾಮರ್ಥ್ಯದಲ್ಲಿದೆ ಎಂದು ಅವರು ಗಮನಿಸಿದರು – ಇದು ಕರ್ನಾಟಕದ ಇತಿಹಾಸದುದ್ದಕ್ಕೂ ಕಂಡುಬರುವ ಸಂಪ್ರದಾಯ. ಪರಂಪರೆ, ಸಾಹಿತ್ಯ ಮತ್ತು ಮಾನವೀಯ ಮೌಲ್ಯಗಳಲ್ಲಿ ನೆಲೆಗೊಂಡಿರುವ ಆಳವಾದ ಸಾಂಸ್ಕೃತಿಕ ಗುರುತಾದ ಕನ್ನಡವು “ಅಸ್ಮಿತೆ”ಯನ್ನು ಹೊಂದಿದೆ ಎಂದು ಅವರು ಪ್ರೇಕ್ಷಕರಿಗೆ ನೆನಪಿಸಿದರು. ಬದಲಾಗುತ್ತಿರುವ ಕಾಲದ ಹೊರತಾಗಿಯೂ, ಕನ್ನಡವು ಎಂದಿಗೂ ಅಳಿಯದ ಭಾಷೆಯಾಗಿದ್ದು, ಅದರ ಭಾಷಿಕರ ಪ್ರೀತಿ ಮತ್ತು ಬದ್ಧತೆಯಿಂದಾಗಿ ನಿರಂತರವಾಗಿ ವಿಕಸನಗೊಳ್ಳುತ್ತಿದೆ ಮತ್ತು ಅಭಿವೃದ್ಧಿ ಹೊಂದುತ್ತಿದೆ ಎಂದು ಅವರು ದೃಢಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು JNNCE ಯ ಪ್ರಾಂಶುಪಾಲರಾದ ಡಾ. ವೈ. ವಿಜಯಕುಮಾರ್ ವಹಿಸಿದ್ದರು. ಅವರು ಅರ್ಥಪೂರ್ಣ ಆಚರಣೆಯನ್ನು ಆಯೋಜಿಸಿದ್ದಕ್ಕಾಗಿ ಸಾಂಸ್ಕೃತಿಕ ಸಮಿತಿಯನ್ನು ಶ್ಲಾಘಿಸಿದರು. Jawaharlal Nehru New Engineering College ಐತಿಹಾಸಿಕ ಮತ್ತು ನೈತಿಕ ಅಡಿಪಾಯಗಳು. ಅವರು ವಿದ್ಯಾರ್ಥಿಗಳು ನಮ್ರತೆ, ಗೌರವ ಮತ್ತು ಸಾಂಸ್ಕೃತಿಕ ಹೆಮ್ಮೆಯ ಮೌಲ್ಯಗಳನ್ನು ಮುಂದುವರಿಸಲು ಪ್ರೋತ್ಸಾಹಿಸಿದರು. ಕಾರ್ಯಕ್ರಮದಲ್ಲಿ ನಡೆದ ವಿವಿಧ ಸ್ಪರ್ಧೆಗಳಿಗೆ ಬಹುಮಾನ ವಿತರಣೆ ಮಾಡಲಾಯಿತು . ಈ ಕಾರ್ಯಕ್ರಮದಲ್ಲಿ ಆರ್ & ಡಿ ಡೀನ್ ಡಾ. ಎಸ್. ವಿ. ಸತ್ಯನಾರಾಯಣ ಮತ್ತು ಡಾ. ಶಶಿಕಿರಣ್, ಸಾಂಸ್ಕೃತಿಕ ಸಮಿತಿ ಸಂಯೋಜಕರು ಉಪಸ್ಥಿತರಿದ್ದರು.

Shivamogga Legal Services Authority ಶಿವಮೊಗ್ಗ ನಗರದ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಗೆ ನ್ಯಾ.ಎಂ.ಎಸ್.ಸಂತೋಷ್ ಅವರ ಅನಿರೀಕ್ಷಿತ ಭೇಟಿ

0

Shivamogga Legal Services Authority ಶಿವಮೊಗ್ಗ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾಗಿರುವ ಶ್ರೀ ಸಂತೋಷ್ ಎಂ ಎಸ್ ರವರು ಶಿವಮೊಗ್ಗ ನಗರದ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಗೆ ಅನಿರೀಕ್ಷಿತ ಭೇಟಿ ನೀಡಿ ಇಲ್ಲಿಯವರೆಗೂ ಶಿವಮೊಗ್ಗ ಜಿಲ್ಲೆಯಲ್ಲಿ ಈ ಚಲಾನ್ ಮೂಲಕ ವಿಧಿಸಲಾದ ದಂಡದ ಪಾವತಿಯಲ್ಲಿನ ಪ್ರಗತಿಯನ್ನು ಪರಿಶೀಲಿಸಿದರು.

ಕರ್ನಾಟಕ ಸರ್ಕಾರದ ಅಧಿಸೂಚನೆಯಂತೆ ದಿನಾಂಕ ದಿನಾಂಕ 12.12.2025 ರವರೆಗೆ ಈ ಚಲನ್ ಮೂಲಕ ಪಾವತಿಗಾಗಿ ಬಾಕಿ ಇರುವ ದಂಡದ ಮೊತ್ತದಲ್ಲಿ 50% ಕಡಿತಗೊಳಿಸಿ ಕಡಿಮೆ ಮೊತ್ತದ ದಂಡ ಪಾವತಿ ಮಾಡಿದಲ್ಲಿ ಅಂತಹ ಪ್ರಕರಣವನ್ನು ವಿಲೇ ಮಾಡಲಾಗುವುದು.

ಆದ್ದರಿಂದ ಸಾರ್ವಜನಿಕರು ಈ ಸವಲತ್ತನ್ನು ಯಾವ ರೀತಿ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಬಗ್ಗೆ ಪರಿಶೀಲಿಸಲಾಯಿತು.

ಬೆಟ್ಟಿ ಸಮಯದಲ್ಲಿ ಹಾಜರಿದ್ದ ಸಂಚಾರಿ ಪೊಲೀಸ್ ಠಾಣಾಧಿಕಾರಿಗಳು ನೀಡಿದ ವಿವರದಂತೆ ಇಲ್ಲಿಯವರೆಗೂ ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 2,00,508 ಪ್ರಕರಣಗಳು ದಾಖಲಾಗಿದ್ದು ಅದರ ದಂಡದ ಒಟ್ಟು ಮೊತ್ತ ರೂ. 16,33,91,250/- ಆಗಿದ್ದು ಅವುಗಳ ಪೈಕಿ ಒಟ್ಟು 1,527 ಈ ಚಲನ್ ಪ್ರಕರಣಗಳು ಮುಕ್ತಾಯಗೊಂಡಿದ್ದು ಒಟ್ಟು ರೂ. 6,14,750/- ರಷ್ಟು ಹಣ ಪಾವತಿ ಮಾಡಲಾಗಿದೆ.

ದಿನಾಂಕ 13.12.2025 ರಂದು ಅಂದರೆ ಇದೇ ತಿಂಗಳ ಎರಡನೇ ಶನಿವಾರದಂದು ರಾಷ್ಟ್ರೀಯ ಲೋಕ ಅದಾಲತ್ ಶಿವಮೊಗ್ಗ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಆಯೋಜಿಸಲಾಗಿದ್ದು ಅದರ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಈ ಚಲನ್ ಮೂಲಕ ವಿಧಿಸಲಾದ ದಂಡದ ಮೊತ್ತದಲ್ಲಿ 50% ಕಡಿಮೆ ಮಾಡಿ ದಂಡದ ಮೊತ್ತವನ್ನು ಪಾವತಿ ಮಾಡುವಂತೆ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿರುವ ಯೋಜನೆಯು ಇನ್ನು ಕೇವಲ 10 ದಿನ ಜಾರಿಯಲ್ಲಿ ಇರುವ ಕಾರಣ ಅತಿ ಹೆಚ್ಚು ಪ್ರಕರಣಗಳಲ್ಲಿ ಕಡಿಮೆ ಮೊತ್ತದ ದಂಡ ಪಾವತಿ ಮಾಡಿ ಸಾರ್ವಜನಿಕರು ಅವಕಾಶದ ಸದ್ಬಳಕೆ ಮಾಡಿಕೊಳ್ಳಬೇಕೆಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಶಿವಮೊಗ್ಗದಿಂದ ಹೊರಡಿಸಲಾದ ಪತ್ರಿಕಾ ಪ್ರಕಟಣೆಯಲ್ಲಿ ಸದಸ್ಯ ಕಾರ್ಯದರ್ಶಿಗಳು ಕೋರಿಕೊಂಡಿದ್ದಾರೆ.

Shivamogga Legal Services Authority ಸಾರ್ವಜನಿಕರು ದಂಡದ ಮೊತ್ತದಲ್ಲಿ 50% ಕಡಿಮೆ ಮೊತ್ತದ ಹಣವನ್ನು ಶಿವಮೊಗ್ಗ ನಗರದ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ಹಾಗೂ ಪೂರ್ವ ಸಂಚಾರಿ ಪೊಲೀಸ್ ಠಾಣೆ ಮತ್ತು ಭದ್ರಾವತಿ ನಗರದ ಸಂಚಾರಿ ಪೊಲೀಸ್ ಠಾಣೆ ಅಲ್ಲದೆ ರಸ್ತೆಯ ವೃತ್ತದಲ್ಲಿ ಇರುವಂತಹ ಸಂಚಾರಿ ಪೊಲೀಸ್ ಅಧಿಕಾರಿ ಆಗಿರುವಂತಹ ಸಹಾಯಕ ಪೊಲೀಸ್ ನಿರೀಕ್ಷಕರ ಬಳಿ ಇರುವ ಈ ವಿ ಎಂ ಯಂತ್ರಗಳ ಮೂಲಕ ಸಾರ್ವಜನಿಕರು ದಂಡದ ಮೊತ್ತವನ್ನು ಪಾವತಿ ಮಾಡಲು ಅನುಕೂಲ ಮಾಡಲಾಗಿದ್ದು ಈ ಅವಕಾಶದ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ಕೋರಿದ್ದಾರೆ.

Adichunchanagiri ಡಿಸೆಂಬರ್ 12. ಕಾಲಭೈರವಾಷ್ಟಮಿ. ರಾಜ್ಯಮಟ್ಟದ ಭಜನಾ ಮೇಳ

0

Adichunchanagiri ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ
ಡಿ.12ಕ್ಕೆ ಕಾಲಭೈರವಾಷ್ಟಮಿ ಪ್ರಯುಕ್ತ ಭೈರವಮಾಲೆ ಜೋಗಿ ದೀಕ್ಷೆ, ರಾಜ್ಯಮಟ್ಟದ ಭಜನಾ ಮೇಳ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಳನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಸಾನಿಧ್ಯವಹಿಸಲಿದ್ದು, ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ದಿವ್ಯ ಉಪಸ್ಥಿತಿವಹಿಸುವರು.
ಅಂದು ನಾಡಿನ ಗಣ್ಯರು, ಜನಪ್ರತಿನಿಧಿಗಳು, ವಿವಿಧ ಶಾಖಾ ಮಠದ ಶ್ರೀಗಳು ಭಾಗವಹಿಸುವರು.
ಅಂದು ಬೆಳಗ್ಗೆ 6 ಗಂಟೆಗೆ ಕ್ಷೇತ್ರಾಧಿ ದೇವತೆಗಳ ಅಭಿಷೇಕ ಸೇರಿದಂತೆ ವಿವಿಧ ಪೂಜಾ ಮಹೋತ್ಸವಗಳು ಜರುಗಲಿದ್ದು, ಪೂಜ್ಯ ಮಹಾಸ್ವಾಮಿ ಅವರ ಅಮೃತಹಸ್ತದಿಂದ ಜೋಗಿ ದೀಕ್ಷೆಯನ್ನು ನೀಡಲಾಗುವುದು. 10 ಗಂಟೆಗೆ ಬಿಜಿಎಸ್ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಸಲಾಗುವುದು. ಈ ಪವಿತ್ರ ದಿನದಂದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರಲಾಗಿದೆ.
Adichunchanagiri ಶ್ರೀಕ್ಷೇತ್ರ ಆದಿಚುಂಚನಗಿರಿಯಲ್ಲಿ ಭಜನಾ ಮೇಳವನ್ನು ಆಯೋಜನೆ ಮಾಡಲಾಗಿದ್ದು, ಭಾಗವಹಿಸಲು ಆಸಕ್ತಿ ಹೊಂದಿರುವವರು ಡಿ.12ರ ಶುಕ್ರವಾರ ಬೆಳಗ್ಗೆ 7.30ಕ್ಕೆ ಹೆಸರು ನೋಂದಾಯಿಸಿಕೊಳ್ಳಬೇಕು. ಒಂದು ತಂಡದಲ್ಲಿ ಕನಿಷ್ಠ 8 ರಿಂದ 12 ಜನ ಭಾಗವಹಿಸಲು ಅವಕಾಶವಿರಲಿದ್ದು, ಭಾಗವಹಿಸುವವರು ಭಜನಾ ಪರಿಕರಗಳೊಂದಿಗೆ ಹಾಜರಿರಬೇಕು. ಭಜನೆ ಹಾಡಲು 8 ನಿಮಿಷ ಅವಕಾಶವಿದ್ದು, ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಪ್ರಥಮ ಬಹುಮಾನವಾಗಿ 10 ಸಾವಿರ, ದ್ವೀತಿಯ 7,000. ತೃತೀಯ 5,000 ಹಾಗೂ ಸಮಧಾನಕರ ಬಹುಮಾನಗಳು ಇರುತ್ತವೆ. ಹೆಚ್ಚಿನ ಮಾಹಿತಿಗಾಗಿ –
9945910985, 9448124141, 77602466078 ಮಠದ ಪ್ರಧಾನ ಕಾರ್ಯದರ್ಶಿ ಪೂಜ್ಯ ಶ್ರೀಶ್ರೀ ಪ್ರಸನ್ನನಾಥ ಸ್ವಾಮೀಜಿ ತಿಳಿಸಿದ್ದಾರೆ.

Kuvempu University ಕುವೆಂಪು ವಿವಿಯ ವಿವಿಧ ಕೋರ್ಸ್ ಗಳಿಗಾಗಿ ಪ್ರವೇಶ ಪರೀಕ್ಷೆ ಮಾಹಿತಿ

0

Kuvempu University ಕುವೆಂಪು ವಿಶ್ವವಿದ್ಯಾಲಯವು 2025-26ನೇ ಸಾಲಿಗೆ ವಿವಿಧ ಸ್ನಾತಕೋತ್ತರ ಪದವಿ/ಡಿಪ್ಲೊಮಾ ಕೊರ್ಸ್‌ಗಳ ಪ್ರವೇಶಾತಿಗಾಗಿ ಮತ್ತು ಶಂಕರಘಟ್ಟ ಜ್ಞಾನ ಸಹ್ಯಾದ್ರಿ ಹಾಗೂ ಶಿವಮೊಗ್ಗದ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಎಂ.ಬಿ.ಎ. ಪದವಿಗೆ ಪರೀಕ್ಷಾ ಪ್ರಾಧಿಕಾರ (ಕೆಇಎ) ಮೂಲಕ ಹಾಗೂ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆ ಮೂಲಕ ಪ್ರವೇಶಾತಿಗಾಗಿ ಖಾಲಿ ಉಳಿದಿರುವ ಸೀಟುಗಳಿಗೆ ಮತ್ತೊಮ್ಮೆ ಪ್ರವೇಶ ಪರೀಕ್ಷೆ ಮೂಲಕ ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

Kuvempu University ಆಸಕ್ತ ಅರ್ಹ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ವೆಬ್‌ಸೈಟ್ www.kuvempu.ac.inರಲ್ಲಿ ಪ್ರಕಟಿಸಲಾದ ಆಪ್‌ಲೈನ್ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಂಡು ಅರ್ಜಿ ಶುಲ್ಕ ರೂ. 400/-(ಸಾ.ವ), ರೂ. 200/- (ಎಸ್‌ಸಿ/ಎಸ್‌ಟಿ/ಪ್ರವರ್ಗ-1) ಮತ್ತು ಪ್ರವೇಶ ಪರೀಕ್ಷೆ ಶುಲ್ಕ ರೂ. 400/-(ಸಾ.ವ), ರೂ. 200/- (ಎಸ್‌ಸಿ/ಎಸ್‌ಟಿ/ಪ್ರವರ್ಗ-1)ಗಳನ್ನು ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ, ಜ್ಞಾನ ಸಹ್ಯಾದ್ರಿ ಶಾಖೆ, ಶಂಕರಘಟ್ಟ, ಎಸ್.ಬಿ.ಐ. ಸಾಮಾನ್ಯ ಖಾತೆ QR Code ಮೂಲಕ ಪಾವತಿಸಿ ಎಂ.ಬಿ.ಎ. ಅಧ್ಯಯನ ವಿಭಾಗ, ಶಂಕರಘಟ್ಟ, ಇಲ್ಲಿ ದಾಖಲೆಗಳ ಪ್ರತಿಗಳನ್ನು ಹಾಗೂ ಶುಲ್ಕ ಪಾವತಿಸಿದ ಚಲನ್‌ನ್ನು ಲಗತ್ತಿಸಿ ಡಿ. 06 ರೊಳಗಾಗಿ ಸಲ್ಲಿಸುವಂತೆ ವಿಶ್ವವಿದ್ಯಾಲಯದ ಕುಲಸಚಿವರು ತಿಳಿಸಿದ್ದಾರೆ.

CM Siddharamaiah ಸಿದ್ಧರಾಮಯ್ಯ ಸೀಎಂ ಪೀಠದಲ್ಲೇ ಮುಂದುವರೆಯಲೆಂದು ಅಭಿಮಾನಿಗಳ ಕಾಯಿಸೇವೆ

0

CM Siddharamaiah ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳು ಎಲ್ಲ ವರ್ಗದ ನಾಯಕ, ಸಾಮಾಜಿಕ ನ್ಯಾಯದ ಹರಿಕಾರ, ಭಾಗ್ಯ ವಿಧಾತ, ಗ್ಯಾರೆಂಟಿಗಳ ಸರದಾರ ಸನ್ಮಾನ್ಯ ಸಿದ್ದರಾಮಯ್ಯನವರನ್ನು ರಾಜ್ಯದ ಮುಖ್ಯಮಂತ್ರಿ ಆಗಿ ಮುಂದುವರಿಸಲು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಗೆ ಆಗ್ರಹಿಸಿ ಹಾಗೂ ಸಿದ್ದರಾಮಯ್ಯನವರಿಗೆ ರಾಜ್ಯದ ಜನರ ಸೇವೆ ಮಾಡಲು ಇನ್ನು ಹೆಚ್ಚಿನ ಶಕ್ತಿಯನ್ನು ನೀಡಲೆಂದು ಶಿವಮೊಗ್ಗ ನಗರದ ಐತಿಹಾಸಿಕ ಕೋಟೆ ಶ್ರೀ ಆಂಜನೇಯ ದೇವಾಲಯದಲ್ಲಿ ಶಿವಮೊಗ್ಗ ಜಿಲ್ಲಾ ಯುವ ಕುರುಬರ ಸಂಘ ಹಾಗೂ ಶೋಷಿತ ವರ್ಗಗಳ ಯುವ ಒಕ್ಕೂಟ ವಿಶೇಷ ಪೂಜೆ ಸಲ್ಲಿಸಿ ಸಿದ್ದರಾಮಯ್ಯನವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ ಈಡುಗಾಯಿ ಸಮರ್ಪಣೆ ಮಾಡಲಾಯಿತು.

ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಬ್ಬ ಬಡವರ ಪರ, ಮಹಿಳೆಯರ ಪರ, ದೀನ ದಲಿತರ ಪರ ನೊಂದವರ ಪರ ದಕ್ಷ ಆಡಳಿತಗಾರರಾಗಿದ್ದು. ಎರಡು ಬಾರಿ ಈ ರಾಜ್ಯದ ಮುಖ್ಯಮಂತ್ರಿ ಗಳಾಗಿ ತಾವು ಘೋಷಿಸಿದಂತಹ ಭಾಗ್ಯದ ಕಾರ್ಯಕ್ರಮಗಳನ್ನು ಹಾಗೂ ಐತಿಹಾಸಿಕ ಪಂಚ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಿ ರಾಜ್ಯದ ಕಟ್ಟ ಕಡೆಯ ವ್ಯಕ್ತಿಯವರೆಗೂ ತಲುಪಿಸುವಂತೆ ನುಡಿದಂತೆ ನಡೆದ ನಾಯಕರಾಗಿ ಭಾರತ ದೇಶವಲ್ಲದೆ ವಿದೇಶಗಳಲ್ಲೂ ಪ್ರಶಂಸೆಯನ್ನು ಹೊಂದಿರುವಂತಹ ಸರ್ಕಾರವನ್ನು ನಡೆಸುತ್ತಿದ್ದು.

ಕೆಲವು ಕಾಣದ ಶಕ್ತಿಗಳು ಕೆಲವು ದಿನಗಳಿಂದ ಕಾಂಗ್ರೆಸ್ ಹೈಕಮಾಂಡ್ ಸಾರ್ವಜನಿಕವಾಗಿ ಅಧಿಕಾರ ಹಂಚಿಕೆ ವಿಚಾರವನ್ನು ಹೇಳದೇ ಇದ್ದರೂ ಗೊಂದಲ ಸೃಷ್ಟಿ ಮಾಡಿ ಸಿದ್ದರಾಮಯ್ಯನವರನ್ನು ವಚನಭ್ರಷ್ಟರು ಎಂದು ಹೇಳುತ್ತಿರುವುದು ಬಾಲಿಶತನದ ಹೇಳಿಕೆ ರಾಜ್ಯದ ಅಹಿಂದ ವರ್ಗದ 70 %ರಿಂದ 80% ಜನರು ಸಿದ್ದರಾಮಯ್ಯನವರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದು. ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಕೂಡಲೇ ಈ ಗೊಂದಲಗಳಿಗೆ ತೆರೆ ಹೇಳಿದ್ದು. ಸಿದ್ದರಾಮಯ್ಯನವರನ್ನು ಈ ರಾಜ್ಯದ ಮುಖ್ಯಮಂತ್ರಿಗಳಾಗಿ ಮುಂದುವರಿಸಬೇಕೆಂದು ಈ ಮೂಲಕ ಅಗ್ರಹಿಸುತೇವೆ ಎಂದಿದ್ದಾರೆ.

CM Siddharamaiah ಈ ಸಂದರ್ಭದಲ್ಲಿ ಕುರುಬರ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಎಂ ರಾಕೇಶ್, ಸಂಘಟನಾ ಕಾರ್ಯದರ್ಶಿ ಕೆ.ಎಲ್. ಪವನ್, ಎಸ್ ಪಿ ಕೇಶವ, ಆಂಜನೇಯ, ಕೆ .ಆರ್. ಸುರೇಶ್ , ರಾಹುಲ್ ಸಿಗೆಹಟ್ಟಿ, ಶೋಷಿತ ವರ್ಗದ ಯುವ ಘಟಕದ ಸಂಚಾಲಕರಾದ ಮೋಹನ್ ಸೋಮಿನಕೊಪ್ಪ, ರಾಜೇಶ್ ಮಂದಾರ, ವೆಂಕಟೇಶ್ ಕಲ್ಲೂರು, ಪ್ರಮುಖರಾದ ಕೆ ಪಿ ದಿನೇಶ್ ಶರಾವತಿ ನಗರ, ಎಸ್ .ಜಿ ಕಿರಣ್, ಚಂದ್ರು ಗೆಡ್ಡೆ, ಮಂಜುನಾಥ್ ಉಪ್ಪಾರ್, ಮಲ್ಲಿಕಾರ್ಜುನ , ಮಂಜು ಸಿಹಗೆಟ್ಟಿ, ಆರ್‌ ಎಂ ಓಂ, ಬಾಬು, ಚಂದ್ರು, ಶಬರೀಶ್ ಆರ್ಯ, ಸಂಜಯ್, ಸುಹಾಸ್, ಇದ್ದರು

Bhagavad Gita Abhiyan ಭಕ್ತಿಭಾವ ಹೊಮ್ಮಿಸಿದಭಗವದ್ಗೀತೆ “ಮಹಾಸಮರ್ಪಣೆ”

0

Bhagavad Gita Abhiyan ಶ್ರೀಮಜ್ಜಗದ್ಗುರು ಶಂಕರುಾಚಾರ್ಯರವರ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶಿರಸಿ; ಶ್ರೀ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ (ರಿ.), ಶಿರಸಿ; ಸ್ವರ್ಣರಶ್ಮಿ ಟ್ರಸ್ಟ್ (ರಿ.), ಶಿವಮೊಗ್ಗ ಮತ್ತು ಶ್ರೀ ಭಗವದ್ಗೀತಾ ಅಭಿಯಾನ ಜಿಲ್ಲಾ ಸಮಿತಿ, ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಶ್ರೀ ಭಗವದ್ಗೀತಾ ಅಭಿಯಾನ–2025 ರ ರಾಜ್ಯಮಟ್ಟದ ಮಹಾಸಮರ್ಪಣೆ ಇಂದು ಅತ್ಯಂತ ವೈಭವಶಾಲಿಯಾಗಿ ನೆರವೇರಿತು.

ಈ ಮಹೋತ್ಸವದಲ್ಲಿ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು, ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶಿರಸಿ; ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳು, ಶ್ರೀ ಆದಿಶಂಕರಾಚಾರ್ಯ ಶ್ರೀ ಶಾರದಾ ಲಕ್ಷ್ಮೀನೃಸಿಂಹ ಪೀಠಂ, ಹರಿಹರಪುರ; ಪರಮಪೂಜ್ಯ ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಡಾ. ಶ್ರೀ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು, ಮುರುಘಾಮಠ ಮಹಾಸಂಸ್ಥಾನ, ಆನಂದಪುರ–ಬೆಕ್ಕಿನಕಲ್ಮಠ, ಶಿವಮೊಗ್ಗ; ಹಾಗೂ ಪರಮಪೂಜ್ಯ ಶ್ರೀ ಶ್ರೀ ನಾದಮಯಾನಂದನಾಥ ಮಹಾಸ್ವಾಮಿಗಳು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠ, ಶಿವಮೊಗ್ಗ — ಇವರ ಮಂಗಳಮಯ ಸಾನ್ನಿಧ್ಯವು ಕಾರ್ಯಕ್ರಮಕ್ಕೆ ಆಧ್ಯಾತ್ಮಿಕ ವೈಶಿಷ್ಟ್ಯವನ್ನಿತ್ತಿತು.

ಕಾರ್ಯಕ್ರಮವನ್ನು ಗೌರವಾನ್ವಿತ ಶ್ರೀ ರಾಜೇಂದ್ರ ವಿಶ್ವನಾಥ ಅರೇಕರ್, ಘನತೆವೆತ್ತ ಕೇರಳ ರಾಜ್ಯಪಾಲರು, ಉದ್ಘಾಟಿಸಿ ಮಹಾಸಮರ್ಪಣೆಗೆ ಭವ್ಯ ಆರಂಭ ಕೊಟ್ಟರು.

Bhagavad Gita Abhiyan ಮಾಜಿ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಸನ್ಮಾನ್ಯ ಶ್ರೀ ಎಚ್.ಡಿ. ಕುಮಾರಸ್ವಾಮಿ, ಹಿರಿಯ ನಾಯಕ ಸನ್ಮಾನ್ಯ ಶ್ರೀ ಕೆ.ಎಸ್. ಈಶ್ವರಪ್ಪ, ಶ್ರೀ ಡಿ.ಎಸ್. ಅರುಣ್, ಸನ್ಮಾನ್ಯ ಶ್ರೀ ಅಶೋಕ್ ಜಿ. ಭಟ್ ಹಿರಿಯ ವಕೀಲರು ಹಾಗೂ ಕಾರ್ಯಧ್ಯಕ್ಷರು, ಶ್ರೀ ಭಗವದ್ಗೀತಾ ಅಭಿಯಾನ ಜಿಲ್ಲಾ ಸಮಿತಿ, ಶಿವಮೊಗ್ಗ, ಶ್ರೀ ಸಿ.ಎಂ. ಉದಯಶಂಕರ, ಹಾಗೂ ಭಗವದ್ಗೀತಾ ಅಭಿಯಾನ ಜಿಲ್ಲಾ ಸಮಿತಿಯ ಗಣ್ಯರು ಉಪಸ್ಥಿತರಿದ್ದು ಗೀತೆಯ ಶಾಶ್ವತ ಸಂದೇಶಕ್ಕೆ ಮತ್ತಷ್ಟು ಭವ್ಯತೆಯನ್ನು ನೀಡಿದರು.

ಭಗವದ್ಗೀತೆಯ ಶಾಶ್ವತ ಸಂದೇಶ—ಧರ್ಮ, ಜ್ಞಾನ, ಶಾಂತಿ ಮತ್ತು ಮಾನವೀಯತೆ—ಇವುಗಳನ್ನು ಮತ್ತೊಮ್ಮೆ ಸಮಾಜಕ್ಕೆ ಪ್ರಸರಿಸಿದ ಮಹಾಸಮರ್ಪಣೆ, ಸಾವಿರಾರು ಭಕ್ತರ ಮನಗಳಲ್ಲಿ ಭಕ್ತಿಭಾವದ ಹೊಸ ಬೆಳಕನ್ನು ಹಚ್ಚಿತು.