Saturday, February 7, 2026
Saturday, February 7, 2026
Home Blog Page 27

Lions Club Shimoga ಪತ್ರಕರ್ತರ ಆರೋಗ್ಯ ರಕ್ಷಿಸುವ ಉದ್ದೇಶದ ಸೇವಾ ಚಟುವಟಿಕೆ ಅನುಕೂಲ & ಶ್ಲಾಘನೀಯ- ಎನ್.ಮಂಜುನಾಥ್

0

Lions Club Shimoga ಲಯನ್ಸ್ ಕ್ಲಬ್, ಶಿವಮೊಗ್ಗ ಆಪ್ಟಿಕಲ್ಸ್ ಹಾಗೂ ಪ್ರೆಸ್ ಟ್ರಸ್ಟ್ ಆಶ್ರಯದಲಿ ಮತ್ತು ಶಿವಮೊಗ್ಗ ಆಪ್ಟಿಕಲ್ಸ್‌ನ ನಂದೀಶ್ ಎನ್.ಟಿ. ಅವರ ಮಾರ್ಗದರ್ಶನದಲ್ಲಿ ಪತ್ರಕರ್ತರು ಮತ್ತು ಪತ್ರಿಕಾ ಸಿಬ್ಬಂಧಿಯವರಿಗಾಗಿ ಉಚಿತ ನೇತ್ರ ತಪಾಸಣೆ ಹಾಗೂ ಉಚಿತ ಕನ್ನಡಕ ವಿತರಣೆ ಶಿಬಿರ ಆಯೋಜಿಸಲಾಗಿತ್ತು.

ಟ್ರಸ್ಟ್ ಅಧ್ಯಕ್ಷ ಎನ್. ಮಂಜು ನಾಥ್ ಅವರು ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರ ಆರೋಗ್ಯ ಕಾಪಾಡುವ ಉದ್ದೇಶ ದಿಂದ ಇಂತಹ ಸೇವಾ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳುತ್ತಿರುವುದು ಸಾಕಷ್ಟು ಅನುಕೂಲಕರ ಎಂದ ಅವರು, ಶಿವಮೊಗ್ಗ ಆಪ್ಟಿಕಲ್ಸ್‌ನ ನಂದೀಶ್ ಮತ್ತು ಲಯನ್ಸ್ ಕ್ಲಬ್ ಅವರ ಸೇವಾ ಮನೋಭಾವವನ್ನು ಶ್ಲಾಘಿಸಿದರು.

ಸಮಾಜದ ವಿವಿಧ ವರ್ಗಗಳಿಗೆ ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿ ದವರಿಗೆ ಉಚಿತ ಕನ್ನಡಕ ವಿತರಣೆ ಮೂಲಕ ದೃಷ್ಟಿ ಸಂರಕ್ಷಣೆಗೆ ಲಯನ್ಸ್ ಕ್ಲಬ್ ನೀಡುತ್ತಿರುವ ಕೊಡುಗೆ ಅತ್ಯಂತ ಶ್ಲಾಘನೀಯವಾಗಿದೆ ಎಂದರು. ನಂದೀಶ್ ಎನ್.ಟಿ. ಅವರು ಮಾತನಾಡಿ, ಪತ್ರಕರ್ತರು ದಿನನಿತ್ಯ ಮೊಬೈಲ್, ಕಂಪ್ಯೂಟರ್ ಹಾಗೂ ಕಡಿಮೆ ಬೆಳಕಿನಲ್ಲಿ ಕೆಲಸ ಮಾಡುವು ದರಿಂದ ಕಣ್ಣಿನ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಸಮಾಜದ ಸಮಸ್ಯೆ ಗಳನ್ನು ಮೊದಲು ಗುರುತಿಸುವ ಪತ್ರಕರ್ತರು ತಮ್ಮ ಆರೋಗ್ಯವನ್ನು ನಿರ್ಲಕ್ಷಿಸುವ ಪರಿಸ್ಥಿತಿ ಹೆಚ್ಚಾಗಿದೆ. ಅದಕ್ಕಾಗಿ ಪತ್ರಕರ್ತ ಬಂಧುಗಳಿಗೆ ವಿಶೇಷವಾಗಿ ಈ ನೇತ್ರ ಶಿಬಿರವನ್ನು ಆಯೋಜಿಸಲಾಗಿತ್ತು ಎಂದರು.

Lions Club Shimoga ಇದುವರೆಗೆ 25 ಕ್ಕೂ ಹೆಚ್ಚು ನೇತ್ರ ಶಿಬಿರಗಳನ್ನು ನಡೆಸಲಾಗಿದ್ದು, 4500ಕ್ಕೂ ಹೆಚ್ಚು ಮಂದಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ 3ಸಾವಿರಕ್ಕೂ ಹೆಚ್ಚು ಕನ್ನಡಕಗಳನ್ನು ವಿತರಿಸುವ ಗುರಿಯೊಂದಿಗೆ ಈ ಸೇವೆಯನ್ನು ಇನ್ನಷ್ಟು ವಿಸ್ತರಿಸಲಾಗುವುದು ಎಂದು ಅವರು ಹೇಳಿದರು.

ಲಯನ್ ಅಧ್ಯಕ್ಷ ಶಿವರಾಂ, ಕಾರ್‍ಯದರ್ಶಿ ಕುಮಾರ್, ಡಾ. ಎಸ್.ಐ. ಬಿರಾದಾರ್, ಲಯನ್ಸ್ ಸದಸ್ಯರು ಹಾಗೂ ಶಿವಮೊಗ್ಗ ಆಪ್ಟಿಕಲ್ಸ್ ತಂಡದವರಿದ್ದರು.

B.Y.Raghavendra ಮಾಧ್ಯಮ ಪ್ರಶಸ್ತಿ ಪುರಸ್ಕೃತ ಭರತ್ ರಾಜ್ ಸಿಂಗ್ ಗೆ ಸನ್ಮಾನಿಸಿದ ಸಂಸದ ರಾಘವೇಂದ್ರ

0

B.Y.Raghavendra 2025ನೇ ಸಾಲಿನ ಪ್ರತಿಷ್ಠಿತ ‘ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ’ ಭಾಜನರಾದ ಶಿವಮೊಗ್ಗದ ಹಿರಿಯ ಪತ್ರಕರ್ತರು ಹಾಗೂ ‘ಶಿವಮೊಗ್ಗ ಟೆಲೆಕ್ಸ್’ ಕನ್ನಡ ದಿನಪತ್ರಿಕೆಯ ಉಪಸಂಪಾದಕರಾದ ಶ್ರೀ ಆರ್.ಪಿ. ಭರತ್ ರಾಜ್ ಸಿಂಗ್ ಅವರಿಗೆ ಸಂಸದರಾದ ಬಿ.ವೈ. ರಾಘವೇಂದ್ರ ಅವರು ಹಾರ್ದಿಕವಾಗಿ ಅಭಿನಂದಿಸಿದರು.

CM Siddharamaiah ನಾಡಿನ ಜನರೆಲ್ಲ ವಿವೇಕಾನಂದರ ಚಿಂತನೆಗಳನ್ನ ಅರಿತು ವಿವೇಕ ಬೆಳೆಸಿಕೊಳ್ಳಲಿ- ಸಿದ್ಧರಾಮಯ್ಯ

0

CM Siddharamaiah ಭಾರತ ಬಲಿಷ್ಠವಾಗಿ ಬೆಳೆಯಬೇಕಾದರೆ ಮೊದಲು ಬಡವರಿಗೆ ಹೊಟ್ಟೆ ತುಂಬಾ ಅನ್ನ ಮತ್ತು ಸ್ವತಂತ್ರ ಚಿಂತನೆಗೆ ಅವಕಾಶ ನೀಡುವ ಶಿಕ್ಷಣ ಸಿಗಬೇಕು, ಪುರೋಹಿತಷಾಹಿ ಯಜಮಾನಿಕೆ ಮತ್ತು ಸಾಮಾಜಿಕ ಶೋಷಣೆ ಕೊನೆಗೊಳ್ಳಬೇಕು ಎಂದು ದಿಟ್ಟತನದಿಂದ ಹೇಳಿದವರು ಸ್ವಾಮಿ ವಿವೇಕಾನಂದರು ಎಂದು ಸಿದ್ಧರಾಮಯ್ಯ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

ಭಾರತದಲ್ಲಿ ಹಿಂದೂ ಮತ್ತು ಇಸ್ಲಾಂ ಧರ್ಮಗಳ ಚಿಂತನೆಗಳ ಮಿಲನವಾಗಬೇಕು, ವೇದಾಂತದ ಮೆದುಳು ಮತ್ತು ಇಸ್ಲಾಮಿನ ದೇಹ – ಇದು ನಮ್ಮ ಮುನ್ನಡೆಗೆ ದಾರಿ ತೋರಬೇಕು ಎಂಬ ದಾರ್ಶನಿಕ ನುಡಿಗಳನ್ನಾಡಿದವರು ಸ್ವಾಮಿ ವಿವೇಕಾನಂದರು..

ರಾಜಕಾರಣಿ ಮತ್ತು ಆಡಳಿತಗಾರನಾಗಿ ನಾನು ಕೈಗೊಳ್ಳುತ್ತಾ ಬಂದ ನೀತಿ-ನಿರ್ಧಾರಗಳಲ್ಲಿ ಹಿಂದೂ ಧರ್ಮದ ಸುಧಾರಕ ಸ್ವಾಮಿ ವಿವೇಕಾನಂದರ ಚಿಂತನೆಗಳ ಪ್ರೇರಣೆ ಇದೆ ಎನ್ನುವುದನ್ನು ವಿನೀತನಾಗಿ ಅರಿಕೆ ಮಾಡಿಕೊಳ್ಳುವೆ.

ತಮ್ಮ ಅಲ್ಪಾಯುಷ್ಯದ ಅವಧಿಯ ಪ್ರತಿಯೊಂದು ಗಳಿಗೆಯನ್ನು ಹಿಂದೂ ಧರ್ಮದ ಸುಧಾರಣೆಗಾಗಿ ಅವಿರತವಾಗಿ ಶ್ರಮಿಸಿದ ದಾರ್ಶನಿಕ ಸ್ವಾಮಿ ವಿವೇಕಾನಂದರ ಹುಟ್ಟುಹಬ್ಬದ ದಿನ ಅವರನ್ನು ಗೌರವ ಮತ್ತು ಕೃತಜ್ಞತಾ ಭಾವದಿಂದ ನೆನೆಯುವೆ.

CM Siddharamaiah ನಾಡಿನ ಜನರೆಲ್ಲರು ವಿವೇಕಾನಂದರ ಚಿಂತನೆಗಳನ್ನು ಅರಿತುಕೊಂಡು ವಿವೇಕವನ್ನು ಬೆಳೆಸಿಕೊಳ್ಳಲಿ ಎಂದು ಹಾರೈಸುವೆ ಎಂದು
ನಾಡಿನ ಯುವಜನತೆಗೆ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ರಾಷ್ಟ್ರೀಯ ಯುವದಿನ ಶುಭಾಶಯಗಳನ್ನ ಕೋರಿದ್ದಾರೆ.

Department of Kannada and Culture ಜನವರಿ 14. ಶರಣ ಸಿದ್ಧರಾಮೇಶ್ವರ ಜಯಂತಿಗೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

0

Department of Kannada and Culture ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಭೋವಿ ವಿದ್ಯಾವರ್ಧಕ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ಜ. 14 ರಂದು ಬೆಳಗ್ಗೆ 11.00ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ತಂಗಡಗಿ ಶಿವರಾಜ್ ಸಂಗಪ್ಪ ವಿಶೇಷ ಆಹ್ವಾನಿತರಾಗಿ ಆಗಮಿಸುವರು.
Department of Kannada and Culture ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರಾದ ಎಸ್.ಎನ್.ಚನ್ನಬಸಪ್ಪ ವಹಿಸಲಿದ್ದು, ಭದ್ರಾವತಿ ಶಾಸಕರು ಹಾಗೂ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ದಿ ನಿಗಮದ ಅಧ್ಯಕ್ಷ ಬಿ.ಕೆ.ಸಂಗಮೇಶ್ವರ, ಸಾಗರ ಶಾಸಕರು ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ನಿಯಮಿತದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಉಪಸ್ಥಿತರಿರುವರು.
ಮುಖ್ಯ ಅತಿಥಿಗಳಾಗಿ ಸಂಸದರು, ವಿಧಾನಸಭೆ ಮತ್ತು ವಿಧಾನ ಪರಿಷತ್ ಶಾಸಕರುಗಳು, ವಿವಿಧ ನಿಗಮ/ ಮಂಡಳಿ/ ಪ್ರಾಧಿಕಾರಗಳ ಅಧ್ಯಕ್ಷರುಗಳು, ಜಿಲ್ಲಾ ಮತ್ತು ತಾಲೂಕು ಭೋವಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರುಗಳು, ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ, ಪೊಲೀಸ್ ಅಧೀಕ್ಷಕರು, ಮಹಾನಗರಪಾಲಿಕೆ ಆಯುಕ್ತರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿ, ಸಿಬ್ಬಂದಿ ವರ್ಗ ಮತ್ತು ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಳ್ಳುವರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರು ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯರಾದ ದೇಶಾದ್ರಿ ಹೊಸ್ಮನೆ ವಿಶೇಷ ಉಪನ್ಯಾಸ ನೀಡುವರು.

India Scouts and Guides ನೀತಿ ಬೋಧಕ ಪಾಠವನ್ನು ಪಠ್ಯ ಪುಸ್ತಕದಲ್ಲಿ ಅಳವಡಿಸಲು ಕ್ರಮ – ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ

0

India Scouts and Guides ಸಮಾಜಮುಖಿ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದ್ದು, ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಸ್ಕೌಟ್ಸ್, ಗೈಡ್ ದಳ ಸ್ಥಾಪಿಸಲು ಚಿಂತನೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಶತಮಾನೋತ್ಸವ ಹಾಗೂ ಜಿಲ್ಲಾ ಮಟ್ಟದ ರ‍್ಯಾಲಿ ಉದ್ಘಾಟಿಸಿ ಮಾತನಾಡಿ, ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ದೈಹಿಕವಾಗಿ ಮಾನಸಿಕವಾಗಿ ಸದೃಢರಾಗುತ್ತಾರೆ. ನೀತಿ ಬೋಧನೆ ಮಾಡುವ ಒಂದು ಪಾಠವನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಸಮಾಜ ಸೇವೆಗಳಲ್ಲಿ ತೊಡಗಿಸಿಕೊಳ್ಳಲು ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಉತ್ತಮವಾದ ಅವಕಾಶವಿದೆ. ಸ್ಕೌಟ್ಸ್ ಗೈಡ್ಸ್ ಚಳುವಳಿ ಮನೆ ಮನೆಗಳನ್ನು ತಲುಪಬೇಕು ಎಂದು ಹೇಳಿದರು.

ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಮಾತನಾಡಿ, ಶತಮಾನೋತ್ಸವ ಆಚರಿಸುವ ಸಂದರ್ಭದಲ್ಲಿ ವ್ಯವಸ್ಥಿತವಾಗಿ ಸಂಸ್ಥೆ ಈ ಮಟ್ಟಕ್ಕೆ ಬೆಳೆಯಲು ಶ್ರಮಿಸಿದ ಗಣ್ಯರನ್ನು ನಾವು ನೆನಪು ಮಾಡಿಕೊಳ್ಳಲೇಬೇಕು. ಶಿವಮೊಗ್ಗದ ಜಿಲ್ಲಾ ಸಂಸ್ಥೆ ಶತಮಾನೋತ್ಸವ ಹಾಗೂ ಟಿ.ವಿ.ನಾರಾಯಣಶಾಸ್ತ್ರಿಗಳ ಜನ್ಮ ಶತಮಾನೋತ್ಸವ ಕಾರ್ಯಕ್ರಮ ನಮ್ಮ ರಾಜ್ಯಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ಜಿಲ್ಲಾ ಮುಖ್ಯ ಪ್ರಧಾನ ಆಯುಕ್ತೆ ಶಕುಂತಲಾ ಚಂದ್ರಶೇಖರ್ ಮಾತನಾಡಿ, ಶತಮಾನೋತ್ಸವ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಎಲ್ಲಾ ಜಿಲ್ಲೆಯ ಪದಾಧಿಕಾರಿಗಳಿಗೆ ಸಾರ್ವಜನಿಕರಿಗೆ ದಾನಿಗಳಿಗೆ ಅಭಿನಂದಿಸಿ ಗೌರವಿಸಿದರು. ಸಂಸ್ಥೆ ಕಟ್ಟಿ ಬೆಳೆಸಲು ಸಹಕರಿಸಿದ ನೂರು ಜನ ಪದಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಿದರು.

India Scouts and Guides ಶತಮಾನೋತ್ಸವ ಸಮಿತಿ ಅಧ್ಯಕ್ಷ ಎಸ್.ರುದ್ರೇಗೌಡ, ಎಂಎಲ್‌ಸಿ ಬಲ್ಕಿಶ್ ಬಾನು, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಎಡಿಸಿ ಅಭಿಷೇಕ್, ಭಾರತಿ ಚಂದ್ರಶೇಖರ, ರಾಜ್ಯ ಉಪಾಧ್ಯಕ್ಷ ಮಹೇಶ್, ಆಯುಕ್ತ ಕೆ.ರವಿ, ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್, ಚೂಡಾಮಣಿ ಪವಾರ್, ಎಸ್.ಜಿ.ಆನಂದ್ ಇತರರಿದ್ದರು.

Rotary Club Shimoga ಇಂದಿನ ಕೆಲವು ತಂದೆ-ತಾಯಂದಿರು ಮಕ್ಕಳಿಗೆ ಸಂಸ್ಕಾರ, ಶಿಸ್ತು ಕಲಿಸುವಲ್ಲಿ ವಿಫಲರಾಗಿದ್ದಾರೆ- ಡಾ.ನಾಗೇಶ್ ಬಿದರಗೋಡು

0

Rotary Club Shimoga ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಜತೆಯಲ್ಲಿ ಬಾಲ್ಯದಿಂದಲೇ ಸಂಸ್ಕಾರ ಕಲಿಸಬೇಕು. ಪಾಲಕರು ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಉಪನ್ಯಾಸಕ ಡಾ. ನಾಗೇಶ್ ಬಿದಿರಗೋಡು ಹೇಳಿದರು.

ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಂಪ್ರದಾಯಿಕ ಶಿಕ್ಷಣ ಪದ್ಧತಿ ಮತ್ತು ವೈಜ್ಞಾನಿಕ ಶಿಕ್ಷಣ ಪದ್ಧತಿಗೂ ಬಹಳ ವ್ಯತ್ಯಾಸ ಕಾಣುತ್ತಿದ್ದೇವೆ. ಅಂದು ತಂದೆ ತಾಯಿಯರಿಗೆ ಗೌರವ ಕೊಡುವುದರ ಜತೆ ಸಂಸ್ಕಾರ ತಿಳಿಸಿಕೊಡುತ್ತಿದ್ದರು. ಆದರೆ ತಂದೆ ತಾಯಿಯರು ಸಂಸ್ಕಾರ ಮತ್ತು ಶಿಸ್ತು ಕಲಿಸುವಲ್ಲಿ ವಿಫಲವಾಗಿದ್ದಾರೆ ಎಂದು ತಿಳಿಸಿದರು.

ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಅಧ್ಯಕ್ಷ ಡಿ.ಕಿಶೋರ್‌ಕುಮಾರ್ ಮಾತನಾಡಿ, ಪ್ರತಿ ನಿತ್ಯ ಜೀವನವನ್ನು ಉತ್ತಮವಾಗಿ ಮುನ್ನಡೆಸಬೇಕು. ಅನಾವಶ್ಯಕ ಚಿಂತನೆಗಳನ್ನು ಮಾಡಬಾರದು. ಮಕ್ಕಳಿಗೆ ಹಿರಿಯರು ಅಗತ್ಯ ತಿಳವಳಿಕೆಗಳನ್ನು ಒದಗಿಸಬೇಕು ಎಂದು ಹೇಳಿದರು.

ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯು ನಿರಂತರವಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಜತೆಯಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ಉಚಿತ ಆರೋಗ್ಯ ಶಿಬಿರ ಹಾಗೂ ಜಾಗೃತಿ ಶಿಬಿರಗಳನ್ನು ನಡೆಸುತ್ತಿದೆ. ಸಂಪನ್ಮೂಲ ವ್ಯಕ್ತಿಗಳ ಮುಖಾಂತರ ವೈವಿಧ್ಯ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಧನಂಜಯ ರಾಂಪುರ ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜತೆಯಲ್ಲಿ ಶಿಸ್ತಿನ ಜೀವನಶೈಲಿ ರೂಪಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು. ಉನ್ನತ ಸಾಧನೆ ಮಾಡುವಂತೆ ಪ್ರೇರಣೆ ನೀಡಬೇಕು ಎಂದು ತಿಳಿಸಿದರು.

Rotary Club Shimoga ರೋಟರಿ ಜಿಲ್ಲೆ ನಿಯೋಜಿತ ಗವರ್ನರ್ ವಸಂತ್ ಹೋಬಳಿದಾರ್, ರವಿಶಂಕರ್, ಚಂದ್ರಹಾಸ್ ರಾಯ್ಕರ್, ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಆದಿಮೂರ್ತಿ, ಕೇಶವಪ್ಪ, ಶ್ರೀಕಾಂತ್, ಎ.ಒ.ಮಹೇಶ್, ರಮೇಶ್ ಭಟ್, ಸುವರ್ಣಾ, ಧರಣೇಂದ್ರ ದಿನಕರ್, ಡಿ ಎಸ್ ರವಿಶಂಕರ್, ರೋಟರಿ ಶಿವಮೊಗ್ಗ ಪೂರ್ವ ಸದಸ್ಯರು ಹಾಜರಿದ್ದರು.

Western Ghats ಪಶ್ಚಿಮ ಘಟ್ಟ ಉಳಿಸುವ ಹೋರಾಟದಲ್ಲಿ ನಿಮ್ಮೊಂದಿಗಿದ್ದೇನೆ- ಶಾಸಕ ಭೀಮಣ್ಣ ನಾಯಕ್

0

Western Ghats ಪಶ್ಚಿಮ ಘಟ್ಟವನ್ನು ಉಳಿಸುವುದು ಮತ್ತು ನದಿ ಕಣಿವೆಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ” ಎಂದು ಪರಿಸರ ವಾದಿಗಳು ಮತ್ತು ಆತಂಕದಲ್ಲಿರುವ ಅಪಾರ ಕೃಷಿ ಕುಟುಂಬಗಳ ಸಮಾವೇಶವನ್ನು ಉದ್ದೇಶಿಸಿ ಶಿರಸಿ ಕ್ಷೇತ್ರದ ಶಾಸಕ ಭೀಮಣ್ಣ ನಾಯಕ್ ಮಾತನಾಡಿದರು‌.

Western Ghats ಸೋಂದಾ ಸ್ವರ್ಣವಲ್ಲಿ ಶ್ರೀಗಳು ಹಾಗೂ ಮಲೆಮಠದ ಶ್ರೀಗಳ ಪಾವನ ಸಾನ್ನಿಧ್ಯದಲ್ಲಿ ನಡೆದ ಈ ಬೃಹತ್ ಸಮಾವೇಶದಲ್ಲಿ ‘ಪಶ್ಚಿಮ ಘಟ್ಟ ಉಳಿಸೋಣ, ನದಿ ಕಣಿವೆ ಸಂರಕ್ಷಿಸೋಣ’ ಎಂಬ ಘೋಷವಾಕ್ಯಗಳು ಮೊಳಗಿದವು. ನೈಸರ್ಗಿಕ ಸಮತೋಲನಕ್ಕೆ ಧಕ್ಕೆ ತರುವ ಯೋಜನೆಗಳ ಬಗ್ಗೆ ಸಾರ್ವಜನಿಕರಲ್ಲಿರುವ ಆತಂಕವನ್ನು ಶಮನಗೊಳಿಸುವ ಅಗತ್ಯವಿದ್ದು, ಪರಿಸರ ರಕ್ಷಣೆಯ ಈ ಮಹತ್ವದ ಹೋರಾಟದಲ್ಲಿ ನಾನು ಸದಾ ನಿಮ್ಮೊಂದಿಗಿದ್ದೇನೆ ಎಂದು ಶಾಸಕ ಭೀಮಣ್ಣ ನಾಯಕ್ ಭರವಸೆ ನೀಡಿದರು.

Madhu Bangarappa ಜಿರಲೆಕೊಪ್ಪದಲ್ಲಿ ಸಚಿವ ಮಧು ಬಂಗಾರಪ್ಪ ನೇರ ಜನರೊಂದಿಗೆ ಬೆರೆತು ಸಮಸ್ಯೆ ಆಲಿಸಿದರು

0

Madhu Bangarappa ಸೊರಬ ತಾಲೂಕಿನ ಜಿರಲೆಕೊಪ್ಪ ಗ್ರಾಮದಲ್ಲಿ ಜನವರಿ 11 ರಂದು “ಜನಸಂಪರ್ಕ ಸಭೆ”ಯನ್ನು ನಡೆಯಿತು.

ಜನರಿಂದ ನೇರವಾಗಿ ಸಚಿವ ಮಧುಬಂಗಾರಪ್ಪ ಅಹವಾಲು ಸ್ವೀಕರಿಸಿ, ಅವರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಬಂದಂತಹ ದೂರುಗಳನ್ನು ಪರಿಶೀಲಿಸಿದರು. ಸ್ಥಳದಲ್ಲೇ ಅನೇಕರಿಗೆ ಪರಿಹಾರ ಒದಗಿಸಲಾಯಿತು.

ಕಾನೂನಿನ ಮಿತಿಯೊಳಗಿದ್ದ ಕೆಲವು ಅರ್ಜಿಗಳನ್ನು ಹೊರತುಪಡಿಸಿ ಉಳಿದವರೆಲ್ಲರ ಅರ್ಜಿಗಳನ್ನು ಕಾಲ ಮಿತಿಯೊಳಗೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಸೂಕ್ತ ಪರಿಹಾರ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದಾಗಿ ಸಚಿವ ಮಧು ಬಂಗಾರಪ್ಪ ತಿಳಿಸಿದರು

Madhu Bangarappa ಸಭೆಯಲ್ಲಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ವೀರೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹಾಜರಿದ್ದರು.

ಹೊಸನಗರ ತಾಲ್ಲೂಕು ಯಡೂರಿನಲ್ಲಿ ಚಿರತೆಯ ಕಳೆವರ ಪತ್ತೆ

0

ಹೊಸನಗರ ತಾಲೂಕಿನ ಯಡೂರು ಗ್ರಾಮದಲ್ಲಿ ಚಿರತೆಯೊಂದರ ಮೃತದೇಹ ಪತ್ತೆಯಾಗಿರುವ ಘಟನೆ ನಡೆದಿದೆ.

ಅರಣ್ಯ ಸಿಬ್ಬಂದಿ ಗಸ್ತು ಕಾರ್ಯದಲ್ಲಿ ನಿರತರಾಗಿದ್ದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ. ವೈದ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿ, ಸುಮಾರು ಐದು ವರ್ಷದ ಪ್ರಾಯದ ಚಿರತೆ ಎಂದು ಹೇಳಲಾಗಿದೆ.

ಮೇಲ್ನೋಟಕ್ಕೆ ಇದು ಸ್ವಾಭಾವಿಕ ಸಾವಾಗಿರಬಹುದೆಂದು ಎಂದು ತಿಳಿಸಿದ ಅರಣ್ಯ ಇಲಾಖೆ ತಿಳಿಸಿದ್ದು, ಈ ಕುರಿತು ಅರಣ್ಯ ಇಲಾಖೆ ಸಿಬ್ಬಂದಿ ಆರ್‌ಎಫ್‌ಒ ದಾಖಲಸಿಕೊಂಡಿದ್ದಾರೆ.

ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಚಿರತೆಯ ಮೃತದೇಹ ಪತ್ತೆಯಾದ ಸ್ಥಳದಲ್ಲೇ ನಿಯಮಾನುಸಾರ ಅಂತ್ಯಕ್ರಿಯೆ ನಡೆಸಲಾಗಿದೆ

ಈ ವೇಳೆ ತಹಸೀಲ್ದಾರ್ ಭರತ್ ರಾಜ್, ಎಸಿಎಫ್ ಮೋಹನ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Aghanashini ಅಘನಾಶಿನಿಗೆ ಬಂದಿದೆ ಕುತ್ತು. ಪ್ರಕೃತಿಯ ವರ ಕಾಪಾಡೋಣಲೇ:ಡಾ.ರವಿಕಿರಣ್ ಪಟವರ್ಧನ್.ಶಿರಸಿ

0

Aghanashini ಅಘನಾಶಿನಿ ನದಿಯು ಭಾರತದ ಪರ್ಯಾಯ ದ್ವೀಪದ (Peninsular India) ಅತ್ಯಂತ ಪ್ರಮುಖ ಮತ್ತು ಕೊನೆಯ ಅಣೆಕಟ್ಟು ರಹಿತ (Free-flowing) ನದಿಗಳಲ್ಲಿ ಒಂದಾಗಿದೆ. ಈ ನದಿಯು ಕೇವಲ ಒಂದು ಜಲಮೂಲವಲ್ಲ, ಇದೊಂದು ಸಂಪೂರ್ಣ ಪರಿಸರ ವ್ಯವಸ್ಥೆ (Ecosystem).

​1. ನದಿಯ ಮೂಲ ಮತ್ತು ಭೌಗೋಳಿಕ ಹಾದಿ

  • ​ಮೂಲ: ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ತಾಲೂಕಿನ ‘ಶಂಕರಹೊಂಡ’ದಲ್ಲಿ ಉಗಮಿಸುತ್ತದೆ.ಅಂದರೆ ಶಿರಸಿ ಅಘನಾಶಿನಿಯ ತವರು.
  • ​ಹರಿವು: ಸುಮಾರು 124 ಕಿ.ಮೀ ವರೆಗೆ ಯಾವುದೇ ಅಡೆತಡೆಯಿಲ್ಲದೆ ಹರಿದು ಕುಮಟಾ ತಾಲೂಕಿನಲ್ಲಿ ಅರಬ್ಬಿ ಸಮುದ್ರವನ್ನು ಸೇರುತ್ತದೆ.
  • ​ವಿಶೇಷತೆ: ಮಲೆನಾಡಿನ ಕಡಿದಾದ ಕಣಿವೆಗಳಲ್ಲಿ ಹರಿಯುವ ಈ ನದಿಯು ಸುಮಾರು 116 ಮೀಟರ್ ಎತ್ತರದಿಂದ ಧುಮುಕಿ ವಿಶ್ವಪ್ರಸಿದ್ಧ ಉಂಚಳ್ಳಿ ಜಲಪಾತವನ್ನು ಸೃಷ್ಟಿಸುತ್ತದೆ. ಇದರ ಶಬ್ದವು ಅತ್ಯಂತ ರಭಸವಾಗಿರುವುದರಿಂದ ಇದನ್ನು ‘ಕೆಪ್ಪ ಜೋಗ’ ಎಂದೂ ಕರೆಯುತ್ತಾರೆ.
    ​2. ‘ರಾಮ್‌ಸರ್’ ಮಾನ್ಯತೆ ಮತ್ತು ಜೈವಿಕ ಸಂಪತ್ತು
    ​2024ರಲ್ಲಿ ಅಘನಾಶಿನಿ ಅಳಿವೆಯನ್ನು ಅಂತರಾಷ್ಟ್ರೀಯ ಪ್ರಾಮುಖ್ಯತೆಯುಳ್ಳ ರಾಮ್‌ಸರ್ ತಾಣ (Ramsar Site) ಎಂದು ಘೋಷಿಸಲಾಗಿದೆ.
  • ​ಮ್ಯಾಂಗ್ರೋವ್ ಕಾಡುಗಳು: 120 ಹೆಕ್ಟೇರ್‌ಗಿಂತಲೂ ಹೆಚ್ಚು ವಿಸ್ತೀರ್ಣದಲ್ಲಿರುವ ಕಂಡ್ಲಾ ಕಾಡುಗಳು ಸಮುದ್ರದ ಅಲೆಗಳಿಂದ ಭೂಮಿಯನ್ನು ರಕ್ಷಿಸುತ್ತವೆ. ಇವು ವಾತಾವರಣದ ಇಂಗಾಲವನ್ನು ಹೀರಿಕೊಳ್ಳುವ ‘ಬ್ಲೂ ಕಾರ್ಬನ್’ (Blue Carbon) ತಾಣಗಳಾಗಿವೆ.
  • ​ಜೀವರಾಶಿ: ಇಲ್ಲಿ 80ಕ್ಕೂ ಹೆಚ್ಚು ಜಾತಿಯ ಮೀನುಗಳು, 120ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು (ಉದಾ: ಮಲಬಾರ್ ಪೈಡ್ ಹಾರ್ನ್‌ಬಿಲ್) ಮತ್ತು 20ಕ್ಕೂ ಹೆಚ್ಚು ಜಾತಿಯ ಮ್ಯಾಂಗ್ರೋವ್ ಸಸ್ಯಗಳಿವೆ.
    ​3. ವಿಶಿಷ್ಟ ಕೃಷಿ ಪದ್ಧತಿ ಮತ್ತು ಆರ್ಥಿಕತೆ
    ​ಈ ನದಿಯು ಸುಮಾರು 6,000ಕ್ಕೂ ಹೆಚ್ಚು ಕುಟುಂಬಗಳ ಜೀವನೋಪಾಯಕ್ಕೆ ಆಧಾರವಾಗಿದೆ.
  • ​ಗಜನಿ ಬೇಸಾಯ: ಉಪ್ಪು ನೀರಿನ ಜೌಗು ಪ್ರದೇಶದಲ್ಲಿ ಮಾಡುವ ಸಾಂಪ್ರದಾಯಿಕ ಕೃಷಿ. ಇಲ್ಲಿ ಬೆಳೆಯುವ ‘ಕಗ್ಗ’ ಭತ್ತವು ಉಪ್ಪು ನೀರನ್ನು ತಡೆದುಕೊಳ್ಳುವ ಮತ್ತು ಔಷಧೀಯ ಗುಣವುಳ್ಳ ಜಗತ್ತಿನ ಅಪರೂಪದ ತಳಿಯಾಗಿದೆ.
  • ​ಮತ್ಸ್ಯ ಸಂಪತ್ತು: ಇಲ್ಲಿ ವರ್ಷಕ್ಕೆ ಸುಮಾರು ₹100 ಕೋಟಿಗೂ ಹೆಚ್ಚು ಮೌಲ್ಯದ ಮೀನು ಮತ್ತು ಕೃಳ (Shellfish) ಸಿಗುತ್ತದೆ ಎಂದು ಅಂದಾಜಿಸಲಾಗಿದೆ. ಇದು ಯಾವುದೇ ಹೂಡಿಕೆ ಇಲ್ಲದ ನೈಸರ್ಗಿಕ ಉದ್ಯಮವಾಗಿದೆ.
    ​4. ಸಂರಕ್ಷಣೆಯ ಹೋರಾಟ ಮತ್ತು ಪ್ರಾಮುಖ್ಯತೆ
    ​ಅಘನಾಶಿನಿಯನ್ನು ಅಣೆಕಟ್ಟು ಮುಕ್ತವಾಗಿರಿಸಲು ಪರಿಸರವಾದಿಗಳು ಮತ್ತು ಸ್ಥಳೀಯ ಜನರು ದಶಕಗಳಿಂದ ಹೋರಾಡುತ್ತಿದ್ದಾರೆ.
  • ​ಪರಿಸರ ಸಮತೋಲನ: ಅಣೆಕಟ್ಟು ನಿರ್ಮಿಸಿದರೆ ನದಿಯ ನೀರಿನ ಲವಣಾಂಶ (Salinity) ಬದಲಾಗಿ ಮ್ಯಾಂಗ್ರೋವ್ ಮತ್ತು ಮೀನುಗಳ ಸಂತಾನೋತ್ಪತ್ತಿಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
  • ​ಸವಾಲುಗಳು: ಇತ್ತೀಚಿನ ‘ಅಘನಾಶಿನಿ-ವೇದಾವತಿ ನದಿ ತಿರುವು ಯೋಜನೆ’ ಮತ್ತು ತದಡಿ ಬಂದರು ಯೋಜನೆಗಳು ಪರಿಸರ ಪ್ರೇಮಿಗಳಲ್ಲಿ ಆತಂಕ ಮೂಡಿಸಿವೆ.
    ಅಘನಾಶಿನಿ ಎಂದರೆ ‘ಪಾಪಗಳನ್ನು ನಾಶ ಮಾಡುವವಳು’ ಎಂದರ್ಥ. ಈ ನದಿಯು ದಕ್ಷಿಣ ಭಾರತದ ನದಿಗಳು ಹೇಗೆ ಅಡೆತಡೆಯಿಲ್ಲದೆ ಹರಿದರೆ ಪ್ರಕೃತಿಯನ್ನು ಸಮೃದ್ಧವಾಗಿಡಬಲ್ಲವು ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆಯ (IISc) ಪ್ರಕಾರ, ಇದು ಪಶ್ಚಿಮ ಘಟ್ಟಗಳ ಪ್ರಮುಖ “Hotspot of Biodiversity” ಆಗಿದೆ

ಅಘನಾಶಿನಿ’ ಎಂಬ ಪದವು ಸಂಸ್ಕೃತ ಮೂಲದಿಂದ ಬಂದಿದ್ದು, ಅತ್ಯಂತ ಸುಂದರವಾದ ಮತ್ತು ಅರ್ಥಪೂರ್ಣವಾದ ಹೆಸರನ್ನು ಹೊಂದಿದೆ. ಇದರ ಬಿಡಿಸಿದ ರೂಪ ಮತ್ತು ಅರ್ಥ ಹೀಗಿದೆ:
​ಪದ ವಿಂಗಡಣೆ:

  • ​ಅಘ (Agha): ಎಂದರೆ ಪಾಪ, ದೋಷ ಅಥವಾ ಕೆಡುಕು.
  • ​ನಾಶಿನಿ (Nashini): ಎಂದರೆ ನಾಶ ಮಾಡುವವಳು ಅಥವಾ ಹೋಗಲಾಡಿಸುವವಳು.
    ​ಪೂರ್ಣ ಅರ್ಥ:
    “ಪಾಪಗಳನ್ನು ನಾಶ ಮಾಡುವವಳು” ಅಥವಾ “ಪಾಪ ವಿಮೋಚಕಿ” ಎಂದರ್ಥ.
    ಅಘನಾಶಿನಿ ನದಿ ಗಂಗೆಯಿಗಿಂತ ಅನೇಕ ಪಟ್ಟು ಹೆಚ್ಚು ಮಾಲಿನ್ಯರಹಿತ.
    ಇದು ಭಾವನಾತ್ಮಕ ಮಾತಲ್ಲ — ವೈಜ್ಞಾನಿಕ ಸತ್ಯ
    ಗಂಗಾ:
    ಭಾರತದ ಅತ್ಯಂತ ಪವಿತ್ರ ನದಿ
    ಆದರೆ ವೈಜ್ಞಾನಿಕವಾಗಿ ಅತ್ಯಂತ ಮಾಲಿನ್ಯಗೊಂಡ ನದಿಗಳಲ್ಲಿ ಒಂದು
    ಇಂದು ಗಂಗೆಯಲ್ಲಿ:
    400+ ನಗರಗಳ ಮಲಿನಜಲ
    ಸಾವಿರಾರು ಕೈಗಾರಿಕೆಗಳ ವಿಷಕಾರಿ ನೀರು
    ಶವಸಂಸ್ಕಾರ ಅವಶೇಷಗಳು
    ಪ್ಲಾಸ್ಟಿಕ್, ರಾಸಾಯನಿಕ ತ್ಯಾಜ್ಯ
    👉 ಅನೇಕ ಸ್ಥಳಗಳಲ್ಲಿ ಗಂಗೆಯ ನೀರು ಕುಡಿಯಲು ಅಸಾಧ್ಯ
    👉 ಹಲವೆಡೆ ಸ್ನಾನಕ್ಕೂ ಅಪಾಯಕಾರಿ
    ಅದಕ್ಕಾಗಿ ಸರ್ಕಾರವೇ “Namami Gange” ಎಂಬ ಸಾವಿರಾರು ಕೋಟಿ ರೂ ಯೋಜನೆ ನಡೆಸುತ್ತಿದೆ.
    ಅಘನಾಶಿನಿ ನದಿ – ಭಾರತದ ಕೊನೆಯ ಸ್ವಚ್ಛ ನದಿ ವ್ಯವಸ್ಥೆಗಳಲ್ಲಿ ಒಂದು
    ಅಘನಾಶಿನಿ:
    ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ
    ಯಾವುದೇ ದೊಡ್ಡ ಅಣೆಕಟ್ಟು ಇಲ್ಲದೆ
    ಕೈಗಾರಿಕೆಗಳಿಲ್ಲದೆ
    ನಗರ ಮಾಲಿನ್ಯವಿಲ್ಲದೆ ಸಮುದ್ರ ಸೇರುವ ಅಪರೂಪದ ನದಿ
    ಇಲ್ಲಿ:
    ನೀರು ನೇರವಾಗಿ ಕುಡಿಯಲು ಬಳಸುತ್ತಾರೆ
    ನದಿ ತೀರದಲ್ಲಿ ಶುದ್ಧ ಕೃಷಿ
    ಮ್ಯಾಂಗ್ರೋವ್ ಅರಣ್ಯ
    ಸಮೃದ್ಧ ಮೀನು ಸಂಕುಲ
    👉 ವೈಜ್ಞಾನಿಕವಾಗಿ ಇದನ್ನು “Pristine River System” ಎಂದು ಕರೆಯಲಾಗುತ್ತದೆ.
    ಒಟ್ಟಾರೆ ಯಲ್ಲಿ ಅಘನಾಶಿನಿ ಹೆಸರಿಗೆ ತಕ್ಕಂತೆ ವೈಜ್ಞಾನಿಕವಾಗಿ ಪಾಪನಾಶಿನಿ.

Aghanashini ಆದರೆ ಎಷ್ಟು ವಿರೋಧಾಭಾಸ ಗಂಗಾ ಶುದ್ಧಿ ಕರಣಕ್ಕೆ ಸರ್ಕಾರ ಹಲವು ವರ್ಷಗಳಿಂದ ಸಾವಿರಾರು ಕೋಟಿ ಖರ್ಚಾಮಾಡುತ್ತಿದೆ, ಆದರೂ ಫಲಿತಾಂಶ ಹೂಳೆಯಲ್ಲಿ ಹುಣಸೆಹಣ್ಣು ತೊಳೆದಂತೆ.

ಅಘನಾಶಿನಿ ಹೆಸರಿಗೆ ತಕ್ಕಂತೆ, ವೈಜ್ಞಾನಿಕ ಪವಿತ್ರ ನದಿ ಇದರ ನೈಸರ್ಗಿಕತೆ ಹಾಳುಮಾಡಲು ಸಾವಿರರಾರೂ ಕೋಟಿ ಖರ್ಚು ಮಾಡಲು ಹೊರಟಿದೆ. 124 ಕೀಮೀ ಉದ್ದದ ನದಿಗೆ 194 ಕೀಮೀ ಪೈಪ್ ಅಳವಡಿಸಿ ದೂರು ತೆಗೆದುಕೂಂಡು ಹೋಗುವ ವಿಚಾರ.

​ಸಾಂಸ್ಕೃತಿಕ ಹಿನ್ನೆಲೆ:
ಭಾರತೀಯ ಸಂಸ್ಕೃತಿಯಲ್ಲಿ ನದಿಗಳನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಅಘನಾಶಿನಿ ನದಿಯಲ್ಲಿ ಸ್ನಾನ ಮಾಡುವುದರಿಂದ ಅಥವಾ ಅದರ ನೀರನ್ನು ಸ್ಪರ್ಶಿಸುವುದರಿಂದ ಮನುಷ್ಯನ ಪಾಪಗಳು ತೊಳೆದುಹೋಗುತ್ತವೆ ಎಂಬ ನಂಬಿಕೆ ಈ ಹೆಸರಿನ ಹಿಂದಿದೆ. ಈ ನದಿಯು ಯಾವುದೇ ಅಣೆಕಟ್ಟುಗಳಿಲ್ಲದೆ ಅಡೆತಡೆಯಿಲ್ಲದೆ ಹರಿಯುವುದರಿಂದ, ಇದು ಇಂದಿಗೂ ತನ್ನ “ಪವಿತ್ರ ಮತ್ತು ಶುದ್ಧ” ರೂಪವನ್ನು ಉಳಿಸಿಕೊಂಡಿದೆ ಎಂದು ಜನರು ನಂಬುತ್ತಾರೆ.

ಪೌರಾಣಿಕ ಹಿನ್ನೆಲೆ:
​ಪುರಾಣಗಳ ಪ್ರಕಾರ, ಹಿಂದೆ ಶಿವನು ಪಾರ್ವತಿಯೊಡನೆ ಪಶ್ಚಿಮ ಘಟ್ಟಗಳ ಈ ರಮಣೀಯ ಪ್ರದೇಶದಲ್ಲಿ ಸಂಚರಿಸುತ್ತಿದ್ದಾಗ, ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮಾರುಹೋಗಿ ಲಿಂಗ ರೂಪದಲ್ಲಿ ನೆಲೆಸಿದನು ಎನ್ನಲಾಗುತ್ತದೆ. ಅದೇ ಶಿರಸಿ ದೂಡ್ಡಗಣಪತಿ ದೇವಸ್ಥಾನ ಹತ್ತಿರ ಇರುವ ಈಶ್ವರ್ ದೇವಸ್ಥಾನ.ಸಿರ್ಸಿಯ ‘ಶಂಕರಹೊಂಡ’ ಎಂಬಲ್ಲಿಂದ ಈ ನದಿ ಉಗಮಿಸುತ್ತದೆ.

​ಈ ಹೊಂಡದಲ್ಲಿ ಶಿವನು ನೆಲೆಸಿದ್ದರಿಂದ, ಇಲ್ಲಿ ಹರಿಯುವ ನೀರು ಅತ್ಯಂತ ಪವಿತ್ರವಾಯಿತು. ಈ ನದಿಯಲ್ಲಿ ಸ್ನಾನ ಮಾಡಿದರೆ ಅಥವಾ ಇದರ ಜಲವನ್ನು ಬಳಸಿದರೆ ಮನುಷ್ಯನು ಮಾಡಿದ ಅರಿವಿಲ್ಲದ ತಪ್ಪುಗಳು ಅಥವಾ ‘ಅಘ’ಗಳು (ಪಾಪಗಳು) ನಾಶವಾಗುತ್ತವೆ ಎಂಬ ನಂಬಿಕೆ ಬಲವಾಯಿತು. ಹಾಗಾಗಿ ಇದಕ್ಕೆ ‘ಅಘನಾಶಿನಿ’ ಎಂಬ ಹೆಸರು ಬಂದಿತು.

​ಹೆಸರಿನ ಆಳವಾದ ಅರ್ಥ:
​ ಇದು ಪಾಪಗಳನ್ನು ತೊಳೆಯುವ ನದಿ ಎನಿಸಿಕೊಂಡರೂ, ವೈಜ್ಞಾನಿಕವಾಗಿ ಪರಿಸರದ ದೃಷ್ಟಿಯಿಂದಲೂ ಇದು ತನ್ನ ಹೆಸರನ್ನು ಸಾರ್ಥಕಗೊಳಿಸಿದೆ:

  • ​ನೈಸರ್ಗಿಕ ಶುದ್ಧೀಕರಣ: ಅಣೆಕಟ್ಟುಗಳಿಲ್ಲದ ಕಾರಣ, ಈ ನದಿಯು ತನ್ನ ಹಾದಿಯಲ್ಲಿನ ಕಸ-ಕಡ್ಡಿಗಳನ್ನು ಮತ್ತು ಮಲಿನತೆಯನ್ನು ನೈಸರ್ಗಿಕವಾಗಿಯೇ ಶುದ್ಧೀಕರಿಸುತ್ತಾ ಸಾಗುತ್ತದೆ.
  • ​ಜೀವ ಸಂರಕ್ಷಣೆ: ಸಾವಿರಾರು ಜೀವಿಗಳಿಗೆ ಆಶ್ರಯ ನೀಡಿ, ಸಮುದ್ರದ ಉಪ್ಪು ಮತ್ತು ನದಿಯ ಸಿಹಿ ನೀರಿನ ಸಮತೋಲನ ಕಾಯ್ದುಕೊಳ್ಳುವ ಮೂಲಕ ಇದು ಪ್ರಕೃತಿಯ ದೋಷಗಳನ್ನು (ಇಂಬ್ಯಾಲೆನ್ಸ್) ನಿವಾರಿಸುತ್ತದೆ.
    ​ಉಂಚಳ್ಳಿ ಜಲಪಾತದ ವಿಶೇಷತೆ:
    ​ನದಿಯು ಬೆಟ್ಟಗಳಿಂದ ಧುಮುಕುವಾಗ ಸೃಷ್ಟಿಸುವ ಉಂಚಳ್ಳಿ (Lushington Falls) ಜಲಪಾತವನ್ನು ನೋಡಲು ಎರಡು ಕಣ್ಣು ಸಾಲದು. ಅಲ್ಲಿನ ಭೋರ್ಗರೆಯುವ ಶಬ್ದ ಮತ್ತು ಮಂಜಿನಂತೆ ಹರಡುವ ನೀರಿನ ಹನಿಗಳು ಪ್ರಕೃತಿಯ ಶಕ್ತಿಯನ್ನು ಪ್ರದರ್ಶಿಸುತ್ತವೆ.
    ​ಸಣ್ಣ ಕುತೂಹಲದ ಮಾಹಿತಿ: ಅಘನಾಶಿನಿ ನದಿಯ ತೀರದಲ್ಲಿ ಇಂದಿಗೂ ಅನೇಕ ಪುರಾತನ ಶಿಲೆಗಳು ಮತ್ತು ಶಾಸನಗಳು ಕಂಡುಬರುತ್ತವೆ, ಇವು ಈ ನದಿಯ ಪ್ರಾಚೀನತೆಗೆ ಸಾಕ್ಷಿಯಾಗಿವೆ. ಪ್ರಕೃತಿಯನ್ನು ದೈವವೆಂದು ಪೂಜಿಸುವ ನಮ್ಮ ಸಂಸ್ಕೃತಿಯಲ್ಲಿ, ಜೀವಂತವಾಗಿ ಹರಿಯುವ ನದಿಯನ್ನು ಕಟ್ಟಿಹಾಕುವುದು ಕೇವಲ ಪರಿಸರ ಹಾನಿಯಲ್ಲ, ಅದು ಸಾಂಸ್ಕೃತಿಕ ಮತ್ತು ಧಾರ್ಮಿಕ ಅಧಃಪತನವೂ ಹೌದು.
  1. ಧಾರ್ಮಿಕ ಮತ್ತು ಆಧ್ಯಾತ್ಮಿಕ ಪರಿಣಾಮಗಳು
    ಹಿಂದೂ ಧರ್ಮದಲ್ಲಿ ನದಿಗಳನ್ನು ‘ಜೀವಂತ ದೇವತೆಗಳು’ ಎಂದು ಕರೆಯಲಾಗುತ್ತದೆ. ಅಘನಾಶಿನಿಯಂತಹ ನದಿಗಳು ‘ಅವಿಚ್ಛಿನ್ನ ಧಾರೆ’ಯನ್ನು (ತಡೆಯಿಲ್ಲದ ಹರಿವು) ಹೊಂದಿವೆ.
  • ನದಿ ಬಂಧನ – ದೇವತಾ ಶಾಪ: ಪುರಾಣಗಳ ಪ್ರಕಾರ, ಪವಿತ್ರ ನದಿಯ ಹರಿವನ್ನು ಅನಗತ್ಯವಾಗಿ ತಡೆಯುವುದು ಅಥವಾ ಅದರ ದಿಕ್ಕನ್ನು ಬದಲಿಸುವುದು ಆ ಪ್ರದೇಶದ ‘ನದೀ ದೇವತೆ’ಗೆ ಮಾಡುವ ಅಪಚಾರವೆಂದು ಪರಿಗಣಿಸಲಾಗುತ್ತದೆ. ಇದು ಆ ಭಾಗದಲ್ಲಿ ಪ್ರಾಕೃತಿಕ ವಿಕೋಪಗಳಿಗೆ (ಧಾರ್ಮಿಕ ಭಾಷೆಯಲ್ಲಿ ದೇವತಾ ಕೋಪ) ಕಾರಣವಾಗಬಹುದು ಎಂಬ ನಂಬಿಕೆಯಿದೆ.
  • ಪಾಪ ವಿಮೋಚನೆಯ ಶಕ್ತಿ ಕ್ಷೀಣತೆ: ಹೆಸರೇ ಹೇಳುವಂತೆ ಇದು ‘ಪಾಪ ನಾಶಿನಿ’. ನದಿ ಹರಿಯುತ್ತಿದ್ದರೆ ಮಾತ್ರ ಅದು ತನ್ನ ಶುದ್ಧತೆಯನ್ನು ಕಾಪಾಡಿಕೊಳ್ಳುತ್ತದೆ. ಅಣೆಕಟ್ಟು ಕಟ್ಟಿ ನೀರನ್ನು ನಿಲ್ಲಿಸಿದರೆ, ಅದು ‘ಸ್ಥಗಿತ ಜಲ’ವಾಗಿ (Stagnant water) ತನ್ನ ಪವಿತ್ರತೆಯನ್ನು ಕಳೆದುಕೊಳ್ಳುತ್ತದೆ.
  1. ಜ್ಯೋತಿಷ್ಯ ಮತ್ತು ವಾಸ್ತು ಪರಿಣಾಮಗಳು
    ಜ್ಯೋತಿಷ್ಯ ಶಾಸ್ತ್ರದಲ್ಲಿ ನದಿಗಳು ಚಂದ್ರ ಮತ್ತು ಶುಕ್ರ ಗ್ರಹಗಳ ಕಾರಕತ್ವವನ್ನು ಹೊಂದಿರುತ್ತವೆ.
  • ಚಂದ್ರನ ಬಲ ಕುಸಿತ: ಚಂದ್ರನು ಮನಸ್ಸು ಮತ್ತು ಜಲತತ್ವದ ಸಂಕೇತ. ನೈಸರ್ಗಿಕ ಹರಿವನ್ನು ತಡೆದಾಗ ಆ ಭಾಗದ ಜನರ ಮಾನಸಿಕ ಶಾಂತಿ ಮತ್ತು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಜ್ಯೋತಿಷ್ಯ ಹೇಳುತ್ತದೆ.
  • ವಾಸ್ತು ದೋಷ: ಭೂಮಿಯ ನೈಸರ್ಗಿಕ ಇಳಿಜಾರು ಮತ್ತು ನೀರಿನ ಹರಿವಿನ ದಿಕ್ಕನ್ನು ಬದಲಿಸುವುದು ಇಡೀ ಪ್ರದೇಶದ ‘ಭೂ-ವಾಸ್ತು’ವಿನ ಮೇಲೆ ಪರಿಣಾಮ ಬೀರುತ್ತದೆ. ಪಶ್ಚಿಮಕ್ಕೆ ಹರಿಯುವ ನದಿಯನ್ನು ಬಲವಂತವಾಗಿ ಪೂರ್ವಕ್ಕೆ ತಿರುಗಿಸುವುದು ಪ್ರಕೃತಿಯ ವಿರುದ್ಧದ ಕ್ರಿಯೆಯಾಗಿರುವುದರಿಂದ, ಇದು ಆ ಪ್ರದೇಶದ ಸಮೃದ್ಧಿಯನ್ನು ಕುಂಠಿತಗೊಳಿಸಬಹುದು.
  1. ಪ್ರಕೃತಿಯ ಸಮತೋಲನವೇ ಧರ್ಮ
    “ಧರ್ಮೋ ರಕ್ಷತಿ ರಕ್ಷಿತಃ” – ಅಂದರೆ ನಾವು ಧರ್ಮವನ್ನು (ಪ್ರಕೃತಿಯನ್ನು) ರಕ್ಷಿಸಿದರೆ, ಅದು ನಮ್ಮನ್ನು ರಕ್ಷಿಸುತ್ತದೆ.
  • ಅಘನಾಶಿನಿ ಅಣೆಕಟ್ಟು ರಹಿತವಾಗಿರುವುದರಿಂದಲೇ ಉತ್ತರ ಕನ್ನಡದ ಈ ಭಾಗ ಇಂದಿಗೂ ಸುಭಿಕ್ಷವಾಗಿದೆ.
  • ಅಣೆಕಟ್ಟು ಕಟ್ಟುವ ಮೂಲಕ ಸರ್ಕಾರ ಪ್ರಕೃತಿಯ ನಿಯಮವನ್ನು ಮೀರಿದರೆ, ಅದು ಮಣ್ಣಿನ ಸಾರವನ್ನು ಕುಂದಿಸಿ, ಸಮುದ್ರದ ಉಪ್ಪು ನೀರು ಭೂಮಿಗೆ ನುಗ್ಗುವಂತೆ ಮಾಡುತ್ತದೆ. ಜ್ಯೋತಿಷ್ಯದ ಪ್ರಕಾರ ಇದು ‘ಕ್ಷೇತ್ರ ದೋಷ’ಕ್ಕೆ ಕಾರಣವಾಗಿ ಮುಂದೆ ಸಂತಾನೋತ್ಪತ್ತಿ ಮತ್ತು ಕೃಷಿಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು.
    ಸರ್ಕಾರ ಯಾಕೆ ಈ ‘ಪಾಪ’ ಮಾಡುತ್ತಿದೆ?
    ಸರಳವಾಗಿ ಹೇಳುವುದಾದರೆ, ಸರ್ಕಾರದ ದೃಷ್ಟಿಯಲ್ಲಿ ‘ಅಭಿವೃದ್ಧಿ’ ಎಂದರೆ ಕೇವಲ ಅಂಕಿ-ಅಂಶಗಳು ಮತ್ತು ಸಿಮೆಂಟ್ ಕಟ್ಟಡಗಳು.
  • ಅಲ್ಪಾವಧಿ ಲಾಭ: ತಕ್ಷಣಕ್ಕೆ ಸಿಗುವ ವಿದ್ಯುತ್ ಅಥವಾ ನೀರಿಗಾಗಿ ಅವರು ಸಾವಿರಾರು ವರ್ಷಗಳ ಇತಿಹಾಸವಿರುವ ನೈಸರ್ಗಿಕ ವ್ಯವಸ್ಥೆಯನ್ನು ಬಲಿಕೊಡಲು ಸಿದ್ಧರಾಗುತ್ತಾರೆ.
  • ದೂರದೃಷ್ಟಿಯ ಕೊರತೆ: ಪ್ರಕೃತಿಯನ್ನು ಒಂದು ಯಂತ್ರವೆಂದು ಭಾವಿಸುವ ಆಧುನಿಕ ಇಂಜಿನಿಯರಿಂಗ್ ಮನೋಭಾವ, ಅದರ ಹಿಂದಿರುವ ದೈವಿಕ ಮತ್ತು ಪರಿಸರ ಮೌಲ್ಯವನ್ನು ಅರ್ಥಮಾಡಿಕೊಳ್ಳಲು ವಿಫಲವಾಗಿದೆ. ಅಘನಾಶಿನಿಯಂತಹ ನದಿಗಳು ನಮ್ಮ ಪೂರ್ವಜರು ನಮಗೆ ಬಿಟ್ಟುಹೋದ ಆಸ್ತಿಯಲ್ಲ, ಬದಲಾಗಿ ನಾವು ನಮ್ಮ ಮುಂದಿನ ಪೀಳಿಗೆಯಿಂದ ಪಡೆದ ಸಾಲ. ಈ ಸಾಲವನ್ನು ತೀರಿಸಬೇಕಾದರೆ ನದಿಯನ್ನು ಅದರ ಮೂಲ ರೂಪದಲ್ಲಿ ಉಳಿಸುವುದು ಅನಿವಾರ್ಯ.