Wednesday, May 6, 2026
Wednesday, May 6, 2026
Home Blog Page 27

ನೀನಾಸಂ ಶಿಬಿರಕ್ಕೆ ಏಪ್ರಿಲ್ 20 ಕೊನೆಯ ದಿನಾಂಕ. ಆನ್ ಲೈನ್ ಮೂಲಕ ಹೆಚ್ಚು ಅರ್ಜಿ ಬಂದಲ್ಲಿ ಮುನ್ನವೇ ಪ್ರವೇಶ ಕೋರಿಕೆ ಅಸ್ವೀಕಾರ.

0

ಕಳೆದ ಎರಡೂವರೆ ದಶಕಗಳಿಂದ ರಂಗತರಬೇತಿ ನಡೆಸುತ್ತಿರುವ ನೀನಾಸಮ್ ರಂಗಶಿಕ್ಷಣ ಕೇಂದ್ರವು ಇದೇ 2026 ಮೇ 11ರಿಂದ 31ರ ವರೆಗೆ 21 ದಿನಗಳ ರಂಗತರಬೇತಿ ಶಿಬಿರವೊಂದನ್ನು ನಡೆಸುತ್ತಿದೆ. ಈ ಶಿಬಿರದಲ್ಲಿ ರಂಗಶಿಕ್ಷಣ ಕೇಂದ್ರದ ಅಧ್ಯಾಪಕರು ಮತ್ತು ಅತಿಥಿ ಅಧ್ಯಾಪಕರು ತರಬೇತಿ ನಡೆಸಿಕೊಡುತ್ತಾರೆ. ರಂಗಮಾಧ್ಯಮದ ಪ್ರಾಯೋಗಿಕ ಮತ್ತು ಸೈದ್ಧಾಂತಿಕ ವಿಚಾರಗಳ ಬಗ್ಗೆ ಈ ಶಿಬಿರದಲ್ಲಿ ಮಾಹಿತಿಗಳನ್ನು ನೀಡುವ ಜತೆಗೆ ಶಿಬಿರಾರ್ಥಿಗಳಿಗೆ ನುರಿತ ನಿರ್ದೇಶಕರಿಂದ ರಂಗನಾಟಕ ಪ್ರಯೋಗಗಳನ್ನೂ ಮಾಡಿಸಲಾಗುತ್ತದೆ. ಈ ಶಿಬಿರವು ರಂಗಭೂಮಿಯನ್ನು ಪ್ರವೇಶಿಸಬಯಸುವ ಹೊಸಬರಿಗೆ ಮತ್ತು ರಂಗಭೂಮಿಯಲ್ಲಿ ಅನುಭವವಿದ್ದು ಅದನ್ನು ಬೆಳೆಸಿಕೊಳ್ಳಲು ಬಯಸುವವರಿಗೆ ಉಪಯುಕ್ತವಾಗುತ್ತದೆ.

ಅರ್ಜಿ ಸಲ್ಲಿಸಲು ಕಡೆಯ ದಿನಾಂಕ: 20 ಏಪ್ರಿಲ್ 2026
ಹೆಚ್ಚಿನ ಸಂಖ್ಯೆಯ ಅರ್ಜಿಗಳು ಬಂದ ಪಕ್ಷದಲ್ಲಿ ಆನ್-ಲೈನ್ ಅರ್ಜಿ ಸೌಲಭ್ಯವನ್ನು ಈ ದಿನಾಂಕಕ್ಕೆ ಮೊದಲೇ ಮುಚ್ಚಲಾಗುತ್ತದೆ.

ಶಿವಮೊಗ್ಗದ ಬಾಡಿಗೆ ಕೊಠಡಿಯಲ್ಲಿ ಪುರುಷನ ಶವ ಪತ್ತೆ. ಪೊಲೀಸ್ ಪ್ರಕಟಣೆ

0

ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಮನೆ 2ನೇ ಕ್ರಾಸ್ ವೆಂಕಟೇಶ್ವರ ನಿಲಯದ ಬಾಡಿಗೆ ರೂಂ ನಂ. 06 ರಲ್ಲಿ 13 ತಿಂಗಳಿನಿಂದ ವಾಸವಾಗಿದ್ದ ಸುಮಾರು 65 ವರ್ಷದ ರಾಮಚಂದ್ರ ರಾವ್ ಎಂಬುವವರ ಶವ ಪತ್ತೆಯಾಗಿದೆ.

ಈತನ ವಾರಸುದಾರರು ಯಾರು ಇರದೆ ಪಾರ್ಕ್ ಬಡಾವಣೆಯ ಕಾರ್ತಿಕ್ ಭವನ ಹೋಟೆಲ್ ಹಾಗೂ ಕುವೆಂಪು ರಸ್ತೆಯ ಪಾಕಶಾಲೆ ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಿದ್ದರು.
ಈ ಮೃತನ ಚಹರೆ 5.6 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ದುಂಡುಮುಖ ಹೊಂದಿರುತ್ತಾರೆ. ಈ ಮೃತ ವ್ಯಕ್ತಿಯ ವಾರಸುದಾರರು ಇದ್ದಲ್ಲಿ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-221414/ 9916882544 ಗಳನ್ನು ಸಂಪರ್ಕಿಸುವಂತೆ ಪೊಲೀಸ್ ತಿಳಿಸಿದೆ.

S.N. Channabasappa ಶಾಸಕರಿಗೆ ನೀಡುವ ಅನುದಾನದಲ್ಲಿ ಪ್ರತೀ ವರ್ಷ ₹10 ಲಕ್ಷ ವಿಶೇಷಚೇತನರ ಅಭಿವೃದ್ಧಿಗೆ ನೀಡುವೆ- ಶಾಸಕ ಎಸ್.ಎನ್.ಚನ್ನಬಸಪ್ಪ

0

S.N. Channabasappa ವಿಶೇಷಚೇತನರ ಸಾಧನೆಗಳು ಕೂಡ ವಿಶೇಷವಾಗಿದ್ದು, ಅವರ ಸಾಧನೆಗಳನ್ನು ಉತ್ತೇಜಿಸಿ, ಅವರಲ್ಲಿ ಆತ್ಮಸ್ಥೆöÊರ್ಯವನ್ನು ತುಂಬಬೇಕು ಎಂದು ಶಾಸಕರಾದ ಎಸ್ ಎನ್ ಚನ್ನಬಸಪ್ಪ ತಿಳಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಐಕ್ಯೂಎಸಿ ಮಾರ್ಗದರ್ಶನದಲ್ಲಿ ಸಬಲ ವಿಶೇಷಚೇತನರ ಸಬಲೀಕರಣ ಕೋಶ, ಸಿಬಿಆರ್ ಕಾನೂನು ಕಾಲೇಜು ಮತ್ತು ದಿವ್ಯಾಂಗರ ಸಬಲೀಕರಣಕ್ಕಾಗಿ ಸಮರ್ಪಿತ ಸಕ್ಷಮ್ ಸಂಸ್ಥೆ ಹಾಗೂ ಸಿಸಿಪಿಡಿ, ನವವದೆಹಲಿ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ-2016’ರ ಕುರಿತು ಏರ್ಪಡಿಸಲಾಗಿದ್ದ ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ 9 ಲಕ್ಷ ವಿಶೇಷಚೇತನರಿದ್ದಾರೆ. ಅವರ ಶ್ರೇಯೋಭಿವೃದ್ದಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ನೀಡುತ್ತಾ ಬಂದಿದೆ. ನಮ್ಮ ಜಿಲ್ಲೆಯಲ್ಲಿ 23,200 ವಿಶೇಷಚೇತನರು ಇದ್ದು, ಇವರ ಅಭಿವೃದ್ದಿ ಮೊದಲು ನಮ್ಮ ಜಿಲ್ಲೆಯಿಂದಲೇ ಶುರುವಾಗಬೇಕು. ಈ ನಿಟ್ಟಿನಲ್ಲಿ ನಾವೇಲ್ಲೂರು ಶ್ರಮಿಸೋಣ ಎಂದ ಅವರು ತಮ್ಮ ಅನುದಾನದಲ್ಲಿ ಪ್ರತಿ ವರ್ಷ ವಿಶೇಷಚೇತನರ ಅಭಿವೃದ್ದಿಗಾಗಿ ರೂ.10 ಲಕ್ಷ ನೀಡಲಾಗುವುದು ಎಂದು ಭರವಸೆ ನೀಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ.ಎಸ್ ಮಾತನಾಡಿ, ವಿಕಲಚೇತನ ವ್ಯಕ್ತಿಗಳ ಕಾನೂನು ಮತ್ತು ಹಕ್ಕುಗಳ ಬಗ್ಗೆ ಅಧ್ಯಯನ ಕೈಗೊಳ್ಳಬೇಕು ಹಾಗೂ ಅವರಿಗೆ ಅವರ ಹಕ್ಕುಗಳ ಬಗ್ಗೆ ತಿಳಿಸಿಕೊಡಬೇಕು. ವಿದ್ಯಾರ್ಥಿಗಳು ನಿರಂತರ ಕಲಿಕೆಯಲ್ಲಿ ತೊಡಗಿಕೊಳ್ಳಬೇಕು. ಇತಿಹಾಸದಿಂದ ಶುರುವಾಗಿ ಭವಿಷ್ಯದ ಕಡೆಗೆ ನಮ್ಮನ್ನು ಕೊಂಡೊಯ್ಯುವ ಇಂತಹ ವಿಶೇಷ ಕಾರ್ಯಾಗಾರಗಳು ಇನ್ನೂ ಹೆಚ್ಚೆಚ್ಚು ನಡೆಯಬೇಕು ಎಂದ ಅವರು ವಿದ್ಯಾರ್ಥಿಗಳು ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕೆಂದರು.

S.N. Channabasappa ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಶಶಿಧರ್ ಎಸ್, ನವದೆಹಲಿಯ ಸಿಸಿಪಿಡಿ ಆಯುಕ್ತರಾದ ಗೋವಿಂದರಾಜ್, ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳಾದ ಸುವರ್ಣ ನಾಯಕ್, ಐಕ್ಯೂಎಸಿ ಸಂಚಾಲಕರರಾದ ವಿದ್ಯಾ ಮರಿಯಾ ಜೋಸೆಫ್, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ.ಸುರೇಶ್ ಅನಗವಾಡಿ ,ಸಕ್ಷಮ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಉಮೇಶ್ ಅಂದಾರೆ ಉಪಸ್ಥಿತರಿದ್ದರು.

ಏಪ್ರಿಲ್ 12. ಶಿವಮೊಗ್ಗದ ವಿನಾಯಕ ನಗರ, ರವೀಂದ್ರ ನಗರ‌ ಸುತ್ತಮುತ್ತ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

0

ಶಿವಮೊಗ್ಗ ನಗರ ಉಪವಿಭಾಗ-1, ಘಟಕ-2ರ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬ ತೆರವುಗೊಳಿಸುವ ಕಾಮಗಾರಿ ಹಮ್ಮಿಕೊಂಡಿದ್ದು, ಏ.12 ರಂದು ಬೆಳಗ್ಗೆ 10.00 ರಿಂದ ಮಧ್ಯಾಹ್ನ 2.00 ರವರೆಗೆ ಉಷಾ ನರ್ಸಿಂಗ್ ಹೋಂ ವೃತ್ತದಲ್ಲಿನ ಅಗಲೀಕರಣ ಕಾಮಗಾರಿ ಹಮ್ಮಿಕೊಂಡಿದ್ದು, ವಿನಾಯಕನಗರ, ಹನುಮಂತನಗರ, ರವೀಂದ್ರನಗರ, ರಾಜೇಂದ್ರನಗರ, ಸವಳಂಗ ರಸ್ತೆ, ಉಷಾ ನರ್ಸಿಂಗ್ ಹೋಂ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

DC shivamogga ಹುಲಿಕಲ್ ಘಾಟಿ ಮಣ್ಣಿನ ಕುಸಿತ. ಮೃತ ಕಾರ್ಮಿಕರ ಕುಟುಂಬಗಳಿಗೆ ಡೀಸಿ ಪ್ರಭುಲಿಂಗ ಕವಳಿಕಟ್ಟಿ ಸಾಂತ್ವನ

0

DC shivamogga ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಹುಲಿಕಲ್ ಬಾಳೆಬರೆ ಘಾಟಿ ಬಳಿ ಕಾಮಗಾರಿ ನಡೆಯುತ್ತಿದ್ದ ವೇಳೆ ಸಂಭವಿಸಿದ ಮಣ್ಣು ಕುಸಿತದ ಘಟನೆಯಲ್ಲಿ ಮೂರು ಜನ ಕಾರ್ಮಿಕರು ಮೃತಪಟ್ಟಿದ್ದು, ಘಟನಾ ಸ್ಥಳಕ್ಕೆ ಶುಕ್ರವಾರ ಬೆಳಿಗ್ಗೆ ಶಾಸಕರಾದ ಆರಗ ಜ್ಞಾನೇಂದ್ರ ಮತ್ತು ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಮಣ್ಣು ಕುಸಿತದ ದುರ್ಘಟನೆಯಲ್ಲಿ ಹೊಸನಗರ ತಾಲ್ಲೂಕಿನ ಕೋಟೆ ಶಿರೂರಿನ ಓರ್ವ ಕಾರ್ಮಿಕ ಮತ್ತು ಹಾವೇರಿ ತಾಲ್ಲೂಕಿನ ನೆಲೊಗಲ್ಲು ಗ್ರಾಮದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, ನಾಲ್ಕು ಜನ ಕಾರ್ಮಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ನಗರ, ತೀರ್ಥಹಳ್ಳಿ ಮತ್ತು ಮಣಿಪಾಲದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಜಿಲ್ಲಾಧಿಕಾರಿಗಳು ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು, ಮುಂದಿನ ಕ್ರಮದ ಕುರಿತು ಸೂಚನೆಗಳನ್ನು ನೀಡಿದರು. ನಂತರ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಮೃತರ ಸಂಬಧಿಕರೊಂದಿಗೆ ಮಾತನಾಡಿ, ಸಾಂತ್ವನ ಹೇಳಿದರು. ಹಾಗೂ ಮೃತ ಕಾರ್ಮಿಕರ ಕುಟುಂಬಕ್ಕೆ ಸರ್ಕಾರದ ವತಿಯಿಂದ ಸೂಕ್ತ ಪರಿಹಾರವನ್ನು ನೀಡಲಾಗುವುದು ಎಂದು ತಿಳಿಸಿದರು.
ಈ ವೇಳೆ ಸಾಗರ ಉಪವಿಭಾಗದ ಎಸಿ ವೀರೇಶ್, ಹೊಸನಗರ ತಹಶೀಲ್ದಾರ್ ಭರತ್ ಕುಮಾರ್, ಪಿಡಬ್ಲುö್ಯಡಿ ಮುಖ್ಯ ಅಭಿಯಂತರರು, ಎಇಇ ಇತರೆ ಅಧಿಕಾರಿಗಳು ಹಾಜರಿದ್ದರು.

ಕರವೇ , ಕಾವಲು ಪಡೆಗೆ ಪದಾಧಿಕಾರಿಗಳ ಆಯ್ಕೆ

0

ಕರವೇ ಕವಲು ಪಡೆ ನೂತನ ಪದಾಧಿಕಾರಿಗಳ ಆಯ್ಕೆ ಕರ್ನಾಟಕ ರಕ್ಷಣಾ ವೇದಿಕೆ (ರಿ) ಕಾವಲು ಪಡೆ ಶಿವಮೊಗ್ಗ ಜಿಲ್ಲೆ ಶಿವಮೊಗ್ಗ.
ಶಿವಮೊಗ್ಗ ಜಿಲ್ಲಾ ನೂತನ ಜಿಲ್ಲಾಧ್ಯಕ್ಷರು ಮತ್ತು ಎಲ್ಲಾ ಪದಾಧಿಕಾರಿಗಳ ಮತ್ತು ಮಹಿಳಾ ಮಹಿಳಾ ಜಿಲ್ಲಾಧ್ಯಕ್ಷರು ಮತ್ತು ಪದಾಧಿಕಾರಿಗಳ ಹಾಗೂ ಸದಸ್ಯರ ಸೇರ್ಪಡೆ ಕಾರ್ಯಕ್ರಮ ಶಿವಮೊಗ್ಗ ನಗರದ ಪ್ರವಾಸಿ ಮಂದಿರದಲ್ಲಿ ನೆರವೇರಿಸಲಾಯಿತು.
ಸಂಸ್ಥಾಪಕ -ರಾಜ್ಯಾಧ್ಯಕ್ಷರು : ಡಾll ಎಚ್ ಸುರೇಶ್
ಜಿಲ್ಲಾ ಗೌರವಾಧ್ಯಕ್ಷರು : ವಿ ಮೂರ್ತಿ ಜ್ವಾಲಾಮುಖಿ (ಡಾಕ್ಟರ್ ರಾಜಕುಮಾರ್ ಅಭಿಮಾನಿಗಳ ಸಂಘ)
ಶಿವಮೊಗ್ಗ ಜಿಲ್ಲಾ ಅಧ್ಯಕ್ಷರು: ಶಿವಕುಮಾರ್ ಎಸ್ ಬಿ.
ಜಿಲ್ಲಾ ಉಪಾಧ್ಯಕ್ಷರು: ರಮೇಶ್ ಮಲ್ಲಿಗೇನಹಳ್ಳಿ
ಜಿಲ್ಲಾ ಪ್ರಧಾನ ಕಾರ್ಯದರ್ಶಿ: ಕೆಬಿ ಉಮೇಶ್.
ಜಿಲ್ಲಾ ಸಂಘಟನಾ ಕಾರ್ಯದರ್ಶಿ: ವೈ ಎಸ್ ಜಗದೀಶ್.
ನಗರ ಕಾರ್ಯದರ್ಶಿ: ಪಂಚಾಕ್ಷರಿ ಎಂವಿ
ಸಾಗರ ತಾಲೂಕು ಅಧ್ಯಕ್ಷರು ಸಾಗರ ತಾಲೂಕು ಅಧ್ಯಕ್ಷರು & ಜಿಲ್ಲಾ ಸಂಚಾಲಕರು: ಕುಮಾರ್ ಎನ್ ಬಿ
ಮಾಲತೇಶ್ ಟಿ
ಗಣೇಶ್ ಆರ್
ಮೋಹನ್ ದುಮ್ಮಳ್ಳಿ
ರಾಜೇಶ್.
ಸಂಸ್ಕೃತಿ ಘಟಕದ ರಾಜ್ಯಾಧ್ಯಕ್ಷರು: ಮಂಜುನಾಥ್ ಪಾಂಡವಪುರ.
ಬಳ್ಳಾರಿ ಯುವ ಸಂಘಟಕ ಅಧ್ಯಕ್ಷರು: ವಿ ಎಸ್ ಸಾಗರ್.
ಸಂಡೂರು ತಾಲೂಕು ಅಧ್ಯಕ್ಷರು: ಶ್ರೀನಿವಾಸ್.
ಬಳ್ಳಾರಿ ನಗರ ಯುವ ಘಟಕ ಅಧ್ಯಕ್ಷರು: ಶಮಿದ್ ಅಲಿ.
ಶಿವಮೊಗ್ಗ ಜಿಲ್ಲಾ ಮಹಿಳಾ ಅಧ್ಯಕ್ಷರು: ಶಾರದಾ ಶ್ರೀಧರ್ ಮೂರ್ತಿ.
ಮಹಿಳಾ ಜಿಲ್ಲಾ ಉಪಾಧ್ಯಕ್ಷರು: ಅನ್ನಪೂರ್ಣ .ಡಿ.
ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ: ಶಿಲ್ಪಾ ಎನ್ ಪಿ

Mescom ಏಪ್ರಿಲ್ 12. ಶಿವಮೊಗ್ಗದ ವಿನಾಯಕ ನಗರ, ರವೀಂದ್ರ ನಗರ‌ ಸುತ್ತಮುತ್ತ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

0

Mescom ಶಿವಮೊಗ್ಗ ನಗರ ಉಪವಿಭಾಗ-1, ಘಟಕ-2ರ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬ ತೆರವುಗೊಳಿಸುವ ಕಾಮಗಾರಿ ಹಮ್ಮಿಕೊಂಡಿದ್ದು, ಏ.12 ರಂದು ಬೆಳಗ್ಗೆ 10.00 ರಿಂದ ಮಧ್ಯಾಹ್ನ 2.00 ರವರೆಗೆ ಉಷಾ ನರ್ಸಿಂಗ್ ಹೋಂ ವೃತ್ತದಲ್ಲಿನ ಅಗಲೀಕರಣ ಕಾಮಗಾರಿ ಹಮ್ಮಿಕೊಂಡಿದ್ದು, ವಿನಾಯಕನಗರ, ಹನುಮಂತನಗರ, ರವೀಂದ್ರನಗರ, ರಾಜೇಂದ್ರನಗರ, ಸವಳಂಗ ರಸ್ತೆ, ಉಷಾ ನರ್ಸಿಂಗ್ ಹೋಂ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

Health & Family welfare Shimoga ಹೊಸನಗರ ಎನ್.ಪಿ‌.ಎನ್.ಸಿ.ಡಿ. ವಿಭಾಗದಲ್ಲಿ ತಾಲ್ಲೂಕು ಆಸ್ಪತ್ರೆಗೆ ಪ್ರಯೋಗಶಾಲಾ ತಂತ್ರಜ್ಞರ ನೇಮಕಾತಿ: ನೇರ ಸಂದರ್ಶನಕ್ಕೆ ಕರೆ.

0

Health & Family welfare Shimoga ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಅಧೀನದ ಎನ್.ಪಿ.ಎನ್.ಸಿ.ಡಿ. ಕಾರ್ಯಕ್ರಮದಲ್ಲಿ ಹೊಸನಗರ ತಾಲೂಕು ಆಸ್ಪತ್ರೆಯಲ್ಲಿ ಖಾಲಿಯಿರುವ ಪ್ರಯೋಗಶಾಲಾ ತಂತ್ರಜ್ಞರ 2 ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇರನೇಮಕಾತಿ ಮಾಡಿಕೊಳ್ಳಲು ನೇರ ಸಂದರ್ಶನಕ್ಕೆ ಕರೆ ನೀಡಲಾಗಿದೆ.
ಆಸಕ್ತರು ಏ.17 ರಂದು ಬೆಳಗ್ಗೆ 11.00 ರಿಂದ ಮಧ್ಯಾಹ್ನ 5.00ರವರೆಗೆ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣ, ಬಿ.ಹೆಚ್.ರಸ್ತೆ, ಶಿವಮೊಗ್ಗ ಇಲ್ಲಿ ನಡೆಯುವ ನೇರ ಸಂದರ್ಶನಕ್ಕೆ ತಮ್ಮ ದಾಖಲೆಗಳ ಮೂಲಪ್ರತಿ ಮತ್ತು ಛಾಯಾಪ್ರತಿಗಳೊಂದಿಗೆ ಹಾಜರಾಗುವಂತೆ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Health & Family welfare Shimoga ಪ್ರಯೋಗಶಾಲಾ ತಂತ್ರಜ್ಞರ ಹುದ್ದೆಗೆ ಎಸ್.ಎಸ್.ಎಲ್.ಸಿ. + ಪಿ.ಯು.ಸಿ. ಹಾಗೂ ಪ್ರಯೋಗಶಾಲಾ ತಂತ್ರಜ್ಞರ ತರಬೇತಿ ಹೊಂದಿದ್ದು, 2 ವರ್ಷ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿರುವ ಅನುಭವವಿರಬೇಕು. ವಾರ್ಡ್ ಪ್ರೊಸೆಸ್ಸಿಂಗ್, ಡೇಟಾ ಪ್ರೊಸೆಸ್ಸಿಂಗ್ ನಂತರ ಕಂಪ್ಯೂಟರ್‌ನ ಮೂಲಭೂತ ಜ್ಞಾನ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು. ಈ ನೇಮಕಾತಿಯು ಎನ್.ಹೆಚ್.ಎಂ ನಿಯಮಾವಳಿ, ಷರತ್ತು ಮತ್ತು ನಿಬಂಧನೆಗಳಿಗೆ ಮತ್ತು ಆಯ್ಕೆ ಸಮಿತಿಯ ತೀರ್ಮಾನಕ್ಕೆ ಒಳಪಟ್ಟಿರುತ್ತದೆ

Krishnashastry ಶ್ವೇತವಸ್ತ್ರದ ಸಂತ, ಬೆಳಗೆರೆ ಕೃಷ್ಣಶಾಸ್ತ್ರಿಗಳು.

0

ಲೇ: ಪ್ರಸಾದ್ ಶ್ರೀವತ್ಸ.
ದಾವಣಗೆರೆ.

Krishnashastry ಅದು ನಾನು ಹತ್ತನೇ ತರಗತಿಯನ್ನು ಮುಗಿಸಿ, ಪಿಯುಸಿಯ ಮೆಟ್ಟಿಲೇರುವ ಸಮಯ. ಕೇವಲ ಹಳ್ಳಿಯ ಶಾಲೆಗಳಲ್ಲೇ ಓದಿ ಬರೆದ ನಾನು ಸ್ವಲ್ಪ ದಡ್ಡನಾದ್ದರಿಂದ ಅಂದರೆ town ನಲ್ಲಿ ಓದಿದ್ದರೆ ಬುದ್ಧಿವಂತನಾಗಿರುತ್ತಿದ್ದೆ ಎಂದಲ್ಲ. ಪಿಯುಸಿ ಯಲ್ಲಿ ಎಲ್ಲರಂತೆ science ಓದಬೇಕು ಎಂಬ ಇಚ್ಛೆಯಿಂದ ಶಿರಾ ನಗರದ ಕಾಲೇಜೊಂದರಲ್ಲಿ science ಮುಗಿಸಿದೆ. ಆದರೆ ಅದು ಅಪೂರ್ಣವೆನಿಸಿತು. ಆಗ commerce ವಿಭಾಗಕ್ಕಿದ್ದ demand ನನ್ನನ್ನು ಆಕರ್ಷಿಸಿತು. ಆ ಸಂದರ್ಭದಲ್ಲಿ ನನ್ನ ಮನಸ್ಸು ಕೂಡ ವ್ಯಗ್ರವಾಗಿತ್ತು. ಅದಕ್ಕೆ ಕಾರಣವೇನೋ ಗೊತ್ತಿಲ್ಲ. ಅಪ್ಪ ತುಂಬಾ ಭಾವುಕರು ಅದರಲ್ಲೂ ನನ್ನ ವಿಷಯದಲ್ಲಿ ಅವರಿಗೆ ತುಂಬಾ ಕಾಳಜಿ. ಸರಿ, ಮಗ ಕಣ್ಮುಂದೆ ಓದಲಿ ಅಂತ ಬೆಳಗೆರೆ ಕಾಲೇಜಿಗೆ ಮತ್ತೆ ಕಾಮರ್ಸ್ ಓದಲು admission ಮಾಡಿಸಿದರು‌. ಎರಡು ವಿಭಾಗಗಳಲ್ಲಿ ಪಿಯುಸಿ ಮಾಡಿದವನು ನಾನೇ‌ ಏನೋ ತಿಳಿಯದು. ಬೆಳಗೆರೆ ಎಂದರೆ ಕೃಷ್ಣಶಾಸ್ತ್ರಿಗಳ ಬಗ್ಗೆ ಕೇಳಿದ್ದೆ. ಆ ವ್ಯಕ್ತಿ ಹೇಗಿರಬಹುದು..? ಅಪ್ಪ ಯಾವಾಗ್ಲೂ ಹೇಳ್ತಿರ್ತಾರೆ ” ಶಾಸ್ತ್ರಿ ಮೇಷ್ಟ್ರು ಸಿಕ್ಕಿದ್ರು. ಅವರ ಜೊತೆ ಮಾತಾಡಿ ಬಂದೆ ಸ್ವಲ್ಪ late ಆಯ್ತು” ಅಂತ ರಾತ್ರಿಯ ಕೊನೆಯ ಬಸ್ಸಿಗೆ ಬಂದ ಅದೆಷ್ಟೋ ಘಟನೆಗಳು ನೆನಪಿದೆ. ಮನಸ್ಸಿನಲ್ಲಿ ಹಲವಾರು ಬಾರಿ ಅನಿಸುತ್ತಿತ್ತು, ಯಾರು ಈ ಶಾಸ್ತ್ರಿ ಮೇಷ್ಟ್ರು…? ಕೊನೆಗೂ ಅವರನ್ನು ಭೆಟ್ಟಿಯಾಗುವ ದಿನ ಬಂದಿತು‌.
ಕಾಲೇಜಿಗೆ ಹೋಗುವ ದಿನ ಅಪ್ಪನೂ ನನ್ನ ಜೊತೆಗೆ ಬಂದಿದ್ದರು. ನಮ್ಮೂರಿನ RTS(Manjunatha) ಬಸ್ಸಿಗೆ ಹೋಗಿ ಅಲ್ಲಿ ನಾಗಭೂಷಣರಾಯರು ನಮ್ಮಿಬ್ಬರನ್ನೂ ಕಾಲೇಜಿನ ಬಳಿಗೆ ಕರೆದುಕೊಂಡು ಹೋದರು. ಬಹುಶಃ ನಾನು ನಾರಾಯಣಪುರ ಬೆಳಗೆರೆಯನ್ನು ನೋಡಿದ್ದು ಆಗಲೇ. ಅಲ್ಲಿಯ ತನಕ ಬರೀ ಹೆಸರು ಕೇಳಿ ಖುಷಿಪಟ್ಟಿದ್ದಾಗಿತ್ತು. ಸರಿ ನಾಗಭೂಷಣರಾಯರು ಸೀದಾ ಶಾಸ್ತ್ರಿ ಮೇಷ್ಟ್ರ ಮನೆಗೆ ಕರೆದುಕೊಂಡು ಹೋದರು‌.
ಒಳಗೆ ಹೋದೆವು ನಾಗಭೂಷಣರಾಯರು ಮೊದಲು ಒಳಗೆ ಹೋದರು ” ಸಾರ್ ! ಕಣಜನಹಳ್ಳಿಯಿಂದ ನಾಗರಾಜ್ ಬಂದಿದಾರೆ.” ಎಂದರು. ಒಳಗಿದ್ದ ವ್ಯಕ್ತಿ ಹೊರಗೆ ಬಂದರು. ಒಂದು ಬಗಲುಗಸೆ ಬನಿಯನ್ನು, ಹೊಲಿಸಿದ ಒಂದು ನಿಕ್ಕರ್ ನಲ್ಲಿದ್ದ ಆ ವ್ಯಕ್ತಿಯನ್ನು ಕಂಡು ಅಪ್ಪ ಅವರ ಕಾಲಿಗೆ ನಮಸ್ಕಾರ ಮಾಡಿದರು, ನಾನೂ ನಮಸ್ಕಾರ ಮಾಡಿದೆ. ಆ ವ್ಯಕ್ತಿ ಹೇಳಿದರು ” ಹೇ ! ಇದೇ ನಂಗೆ ಆಗಲ್ಲ ನೋಡಿ. ನೀವು ನಂಗೆ ನಮಸ್ಕಾರ ಮಾಡ್ಬಾರ್ದು ನಾಗರಾಜ್ ” ಎಂದರು. ಅದಕ್ಕೆ ಅಪ್ಪ ” ನಾನೆಲ್ಲಿ ನಿಮಗೆ ನಮಸ್ಕಾರ ಮಾಡಿದೆ ನನಗೆ ನಾನೇ ನಮಸ್ಕಾರ ಮಾಡ್ಕೊಂಡೆ‌ ಸರ್” ಅಂದರು. ಆ ವ್ಯಕ್ತಿ ನಾಗಭೂಷಣರಾಯರ ಕಡೆಗೆ ನೋಡಿ ” ನೋಡ್ರೀ ನಾಗಣ್ಣ ಇದಕ್ಕೇನ್ ಹೇಳಲಪ್ಪ.” ಅಂತ ನಕ್ಕರು. ಒಳಗೆ ಹೋದೆವು. ಅಪ್ಪ ಆಗ ಹೇಳುತ್ತಾರೆ ಇವರೇ ಕಣೋ ಕೃಷ್ಣಶಾಸ್ತ್ರಿಗಳು ಅಂತ. ನನಗೆ ಖುಷಿ ಆಶ್ಚರ್ಯ ಒಟ್ಟಿಗೆ ಆದವು. ಮತ್ತೆ ನಮಸ್ಕಾರ ಮಾಡಿದೆ. ಶಾಸ್ತ್ರಿಗಳು ನಕ್ಕು ನನ್ನ ತಲೆ ಸವರಿದರು. ಇಬ್ಬರ ಉಭಯ ಕುಶಲೋಪರಿಗಳು ನಡೆದವು. ಅಪ್ಪ ಹೇಳಿದರು ” ಸಾರ್ ! ಇವನೇ ನನ್ನ ಮಗ ನಿಮ್ಮ ಕಾಲೇಜಿಗೆ ಹಾಕಿದೀನಿ. ಇನ್ನು ನೀವು ಉಂಟು ಇವನು ಉಂಟು ” ಶಾಸ್ತ್ರಿಗಳು ಹೇಳಿದರು ” ನೋಡಪ್ಪಾ ! ಅಪ್ಪ ಹೇಳಿದ್ದು ಕೇಳಿದ್ಯಾ..? ಇನ್ನು ನಾನು ನೀನು ಇಬ್ಬರೇ, ಸರಿಯಾಗಿ ಮಾತು ಕೇಳದಿದ್ದರೆ ಬೀಳ್ತಾವೆ” ಅಂತ ನಕ್ಕರು. ನಾನೂ ನಕ್ಕುಬಿಟ್ಟೆ. ಹೊರಗೆ ಬಂದು ಎಷ್ಟು ಹೊತ್ತಾದರೂ ಆ ಆಕರ್ಷಣೆ ನನ್ನನ್ನು ಬಿಡಲಿಲ್ಲ. ಅವರನ್ನು ಸರ್ ಎನ್ನಲೂ ಮನಸಾಗಲಿಲ್ಲ.

Krishnashastry ಶಾಸ್ತ್ರೀಜಿಯವರು ಗಾಂಧೀವಾದಿಗಳಾದ್ದರಿಂದ ಗಾಂಧೀಜಿಯವರ ತತ್ತ್ವಗಳನ್ನು ಪಾಲಿಸುತ್ತಿದ್ದರು. ಸದಾ ಶ್ವೇತ ವಸ್ತ್ರಧಾರಣೆ ಮಾಡುತ್ತಿದ್ದ ಅವರು ನಾನು ನೋಡುತ್ತಿರುವಾಗ 92 ವರ್ಷ ವಯಸ್ಸಿನವರು. ಆ ವಯಸ್ಸಿನಲ್ಲಿಯೂ ಪ್ರತಿದಿನವೂ ಎರಡು ಬಾರಿ ಅವರು ಶಾಲೆ ಮತ್ತು ಕಾಲೇಜಿಗೆ ಭೇಟಿ ನೀಡಿ ಸ್ವತಃ ತರಗತಿಗಳನ್ನು ವೀಕ್ಷಿಸುತ್ತಿದ್ದರು. ಹಾಗೇ ಒಮ್ಮೆ ನಾನು ಹೊರಗೆ ನಿಂತಾಗ (ತರಗತಿಯ ಅವಧಿಯಲ್ಲಿ) ನನ್ನನ್ನು ಕರೆದು ಕೇಳಿದರು ಏಕೆ ಇಲ್ಲಿದ್ದೀಯ ? ನಾಣು ಹೇಳಿದೆ “ ಕ್ಲಾಸ್‌ ನಡೀತಿಲ್ಲ ತಾತಾ “. ಸರಿ ಅಂದು ಹೋದರು. ನಂತರ ನಾನು ಹೇಳಿದ ಸುಳ್ಳು ಎಷ್ಟು ಬಾಧಿಸತೊಡಗಿತೆಂದರೆ ತಡೆಯಲಾರದೇ ಮನೆಗೆ ಹೋಗಿ ತಾತನ ಕೋಣೆಯಲ್ಲಿ ಕುಳಿತೆ ಆಗಲೂ ಅವರು ನನ್ನ ನೋಡಿ ಮುಗುಳ್ನಕ್ಕರು ಆ ನಗುವಿನಲ್ಲಿ ನಾನು ಹೇಳಿದ್ದು ಸುಳ್ಳು ಎಂಬ ಕನ್ನಡಿಯಿತ್ತು. “ತಪ್ಪಾಯ್ತು ತಾತ ನಾನು ಸುಳ್ಳು ಹೇಳಿದೆ. ಕ್ಲಾಸ್‌ಗೆ ಹೋಗೋಕೆ ಮನಸಿರಲಿಲ್ಲ ಹಾಗಾಗಿ” ಎನ್ನುವಾಗ ತಪ್ಪಿತಸ್ಥ ಭಾವ ದುಃಖವಾಗಿ ಉಮ್ಮಳಿಸಿತು. ಆಗ ನನ್ನ ಹೆಗಲ ಮೇಲೆ ಕೈಹಾಕಿ ಹೇಳಿದರು “ ಉಪ್ಪನೇ ಸವಿದವನು ಸಕ್ಕರೆಯನೇನ್‌ ಬಲ್ಲ ಬೆಪ್ಪನವ ಸಕ್ಕರೆಯ ಉಪ್ಪೆಂಬನು “ ಅಂದರೆ “ಯಾವಾಗಲೂ ಸುಳ್ಳು ಅನ್ನೋ ಉಪ್ಪು ತಿನ್ನೋನಿಗೆ ಸಕ್ಕರೆಯ ರುಚಿ ಹೇಗೆ ಗೊತ್ತಾಗಬೇಕು. ಸಕ್ಕರೆ ಅಂದ್ರೆ ಆ ತಪ್ಪನ್ನ ತಿದ್ಕೊಳೋದು. ಸುಳ್ಳು ತಪ್ಪು ಮಾಡೋದು ಧೈರ್ಯಶಾಲಿ ಲಕ್ಷನವಲ್ಲ ಕಣೋ ಅದನ್ನ ಒಪ್ಕೊಂಡು ಮತ್ತೆ ಆ ತಪ್ಪು ಮಾಡೋದಿಲ್ಲ ಅಂತ ನಿರ್ಧಾರ ಮಾಡಿ ಅದನ್ನ ಬಿಟ್ಟು ಬಿಡ್ತೀವಿ ನೋಡು ಅದು ಧೈರ್ಯಶಾಲಿಯ ಲಕ್ಷಣ” ಆ ಕ್ಷಣದಿಂದ ನಾನು ಈ ಕ್ಷಣದವರೆಗೆ ಸುಳ್ಳು ಹೇಳುವ ಸಾಹಸ ಮಾಡಿಲ್ಲ. ʼಸತ್ಯಮಪ್ರಿಯಂ ಭೂಯಾತ್‌ ʼ ಎನ್ನುವಂತೆ ಅಪ್ರಿಯವಾದ ಸತ್ಯವನ್ನು ಹೇಳುವಾಗ ಒಮ್ಮೆ ಯೋಚಿಸುತ್ತೇನೆ.

ದಿನ ಕಳೆದವು. ದಿನೇ ದಿನೇ ಶಾಸ್ತ್ರಿ ಮೇಷ್ಟ್ರ ಸಹವಾಸ ಮತ್ತೆ ಮತ್ತೆ ಬೇಕೆನಿಸತೊಡಗಿತು. ವಾರದಲ್ಲೊಮ್ಮೆ ಏನಾದರೂ ನೆಪ ಮಾಡಿ ಅರ್ಧಗಂಟೆ ಅವರೊಂದಿಗೆ ಮಾತಾಡಲು ನಿರ್ಧಾರ ಮಾಡಿದೆ. ಸಂದರ್ಭ ತಾನಾಗಿಯೇ ಬಂತು. ನನಗೆ ಮೊದಲಿನಿಂದಲೂ ಹಾಡುವ ಹುಚ್ಚು ಮನ ಬಂದಂತೆ ಹಾಡುವ ನಾನು ಸನ್ಮಾನ – ಅವಮಾನ ಎರಡನ್ನೂ ಈ ನನ್ನ ಸಂಗೀತ ಸಾಧನೆಯಲ್ಲಿ ಅನುಭವಿಸಿದೆ. ಇರಲಿ. ಒಮ್ಮೆ ಯಾವುದೋ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಪ್ರಾರಂಭವಾಗುವವರೆಗೂ ಸಮಯವಿದ್ದುದರಿಂದ “ಯಾರಾದ್ರೂ ಹಾಡು ಹೇಳ್ತೀರೇನೋ ?” ಅಂತ ನಮ್ಮ ಪ್ರಿನ್ಸಿಪಾಲ್ ಕೇಳಿದರು. ನಮ್ಮಕ್ಕನ ಮಗ ಶ್ರೀನಾಥ ನಾನೂ ಒಂದೇ ವಯಸ್ಸಿನವರು ಇಬ್ಬರೂ ಜೊತೆಗೇ ಪಿಯುಸಿ ಮುಗಿಸಿದವರು. ಅವನು ” ಲೇ ! ಹೋಗಲೇ ನೀನು ಹಾಡು ಹೇಳು ” ಅಂದ. ಹೋದೆ ” ಆಡಿಸಿ ನೋಡು ಬೀಳಿಸಿನೋಡು ” ಹಾಡಿದೆ. ಎಲ್ಲರ ಮೆಚ್ಚುಗೆ ಪಡೆದೆ. ಅದಾದ ನಂತರ ಇನ್ನೊಂದು ಕಾರ್ಯಕ್ರಮದಲ್ಲಿ ಅರವಿಂದ್ ಸರ್, ವಿನಯ್ ಸರ್, ಪ್ರಿನ್ಸಿಪಾಲ್ ಮತ್ತು ಗಿರೀಶ್ ಸರ್ ನನ್ನ ಕರೆದು ” ಸಂಸ್ಥೆಯ ಪ್ರಾರ್ಥನಾ ಗೀತೆಯನ್ನು ಕೈಗಿಟ್ಟು ” ಇವತ್ತು ನೀನೇ ಹಾಡೋ. ” ಅಂದರು. ಗಾಬರಿಯಾಯ್ತು ಏಕೆಂದರೆ ನಾನೇನು ಕುಮಾರ ಗಂಧರ್ವರ ಗ್ವಾಲಿಯರ್ ಘರಾನದಲ್ಲಿನ ಗಾಯಕನಲ್ಲ. ಆದರೂ ಖುಷಿಯಿಂದ ಆಯ್ತು ಎಂದೆ. ಕಾರ್ಯಕ್ರಮ ಪ್ರಾರಂಭ ಪ್ರಾರ್ಥನೆಯೊಂದಿಗೆ ಅಂತ ನನ್ನ ಹೆಸರು ಹೇಳಿಯೇಬಿಟ್ಟರು. ಶಾಸ್ತ್ರಿಗಳು ನನ್ನನ್ನೇ ಗಮನಿಸಿದ್ದು ನಾನು ನೋಡಲಿಲ್ಲ ಹಾಡಿದೆ ಹೊರಗೆ ಬಂದೆ. ಕಾರ್ಯಕ್ರಮವೆಲ್ಲ ಮುಗಿದ ನಂತರ. ಪ್ರಾಂಶುಪಾಲರಿಂದ ಬುಲಾವ್ ಬಂತು ಹೋದೆ.ಅಲ್ಲಿ ಶಾಸ್ತ್ರಿಗಳು, ಪ್ರಿನ್ಸಿಪಾಲರು, ಮತ್ತು ಎಲ್ಲ ಉಪನ್ಯಾಸಕರೂ ಇದಾರೆ ನನ್ನ ಜಂಘಾಬಲ ಅಡಗಿಹೋಯ್ತು. ಏಕೆಂದರೆ ಅದರ‌ ಹಿಂದಿನ ದಿನ ಮೊಬೈಲ್ ಕಾಲೇಜಿಗೆ ಒಯ್ದು ನಮ್ಮ ಧನಂಜಯ( ಆರ್.ಡಿ) ಸರ್‌ ಅದನ್ನು ನೋಡಿ, ಸುಮ್ಮನಾಗಿದ್ದರು. ಅದರ ವಿಷಯವೇನೋ ಒಂದುವೇಳೆ ಅದೇ ಆಗಿದ್ದರೆ ?! ಮುಗೀತು ಇನ್ನು ನನ್ನ ಕಥೆ ಅನ್ನಿಸಿತು. ಆದರೆ ಅಲ್ಲಿ ಕುಳಿತ ಶಾಸ್ತ್ರಿಗಳು ” ಬಾ ಇಲ್ಲಿ ” ಅಂದರು. ಹೋದೆ ನಗುತ್ತಾ ಹೇಳಿದರು ” ತುಂಬಾ ಚೆನ್ನಾಗಿ ಹಾಡ್ತೀಯ.ಇನ್ಮುಂದೆ prayer ನೀನೇ ಹಾಡು” ಅಂದರು. ಸರಿ ಎಂಬಂತೆ ತಲೆಯಲ್ಲಾಡಿಸಿದೆ. ಹೊರಬಂದೆ ಮುಂದೆ ನನಗೆ ಅವರನ್ನು ಸರ್ ಎನ್ನಲು ಮನಸಾಗಲಿಲ್ಲ. ತಾತಾ ಎಂದೇ ಕರೆಯುತ್ತಿದ್ದೆ. ಅವರ ಒಡನಾಟ ಹೆಚ್ಚಾಯಿತು, ಅವರು ನನಗೆ ತಿಳಿಸಿದ ಅದೆಷ್ಟೋ ವಿಷಯಗಳು ನನ್ನ ಮಸ್ತಕ ಗ್ರಂಥಾಲಯಕ್ಕೆ ಕೊಡುಗೆ ನೀಡಿದ‌ ಪುಸ್ತಕಗಳಂತೆ ಆದವು. ಅವರೊಮ್ಮೆ ಹೇಳಿದರು ” ನೋಡು ಪ್ರಸಾದು, ನೀನು ಜಗತ್ತನ್ನ ಸರಿ‌ ಮಾಡ್ತೀನಿ ಅಂತ ಹೋಗ್ಬೇಡ. ಯಾಕಂದ್ರೆ ನೀನು ಅದು ಮಾಡು ಇದು ಮಾಡು ಅಂದ್ರೆ ಯಾರೂ ಕೇಳಲ್ಲ. ನೀನು ಕೆಲಸ ಮಾಡು ideal ಆಗು ಅಂದರೆ ಜಗತ್ತು ನಿನ್ನ ಅನುಸರಿಸೋಕೆ ಶುರು ಮಾಡುತ್ತೆ” ಆ ದಿನ ಏನೂ ಅರ್ಥವಾಗಲಿಲ್ಲ. ಇಂದು ಅವರು ನನಗೆ ಹೇಳಿದ ಪ್ರತಿ ಶಬ್ದದ ಅನುಭವವಾಗುತ್ತಿದೆ. ಆ ಬೆಳಗೆರೆಯ ಸಂಸ್ಥೆಗೆ ತನ್ನ ಇಡೀ ಜೀವನವನ್ನೇ ಸವೆಸಿದ ಆ ತಾತನಿಗೆ ಏನೆನ್ನಬೇಕು..? ಸಂತನೆಂದೇ ಅನ್ನಬೇಕು. ಜಾತಿ ಮತಗಳಿಗೆ ಅವಕಾಶ ಕೊಡದೇ, ಎಲ್ಲರನ್ನೂ ಒಂದೆಡೆ ಸೇರಿಸಿ ಇಡೀ ಕರ್ನಾಟಕದ ಮೂಲೆ ಮೂಲೆಯಿಂದ ಬಡ ವಿದ್ಯಾರ್ಥಿಗಳು ಬಂದು ಹೋದರು. ಅವರೆಲ್ಲರೂ ಇಂದಿಗೂ ಸಂಸ್ಥೆಯ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಾರೆ. ಇಂದು ಸರ್ಕಾರದ ಅನುದಾನ ಸಿಕ್ಕರೆ ಸಾಕು ಎಂದು ತಿಂದು ತಿಂದು ತೇಗುತ್ತಿರುವ ಎಷ್ಟೋ ವಿದ್ಯಾಸಂಸ್ಥೆಗಳ ಮಧ್ಯೆ ಸರ್ಕಾರದ ಒಂದು ರೂಪಾಯಿ ಅನುದಾನವಿಲ್ಲದೇ ಇಡೀ ಸಂಸ್ಥೆಯನ್ನು ನಡೆಸಿದ ಇವರು ಅತ್ಯಂತ ಸರಳರು. ನಾನೂ ಬಹಳಷ್ಟು ಬಾರಿ ಇಂದಿಗೂ ಹಲವಾರು ಕಾರ್ಯಕ್ರಮಗಳಲ್ಲಿ ಬೆಳಗೆರೆಯ ಸಂಸ್ಥೆಯಲ್ಲಿ ಪ್ರಾರ್ಥನಾ ಗೀತೆಯನ್ನು ಹಾಡುತ್ತೇನೆ. ಇಂದು ಶಾಸ್ತ್ರಿಗಳು ಇಲ್ಲ ಆದರೆ ಒಂದು ಖುಷಿಯೆಂದರೆ ನಾನು ಪ್ರಾರ್ಥನೆಯನ್ನು ಪ್ರಾರಂಭಿಸುತ್ತಿದ್ದಂತೆ ಶಾಸ್ತ್ರಿಗಳ ಭಾವಚಿತ್ರಕ್ಕೆ ಹಾಕಿದ ಹೂಮಾಲೆಯು ಪ್ರಸಾದ ರೂಪದಲ್ಲಿ ಕೆಳಗೆ ಬೀಳುತ್ತದೆ‌. ಇಡೀ ಸಂಸ್ಥೆಯ ಎಲ್ಲರೂ ಶಾಸ್ತ್ರಿಗಳ ಹಾಗೆಯೇ ಇಂದಿಗೂ ನನ್ನನ್ನು ಪ್ರೀತಿಯಿಂದ ಕಾಣುತ್ತಾರೆ. ಇಂಥ ಸುಮಧುರ ಕ್ಷಣಗಳನ್ನು ಮರೆಯಲಾದೀತೇ…. ನಿಮ್ಮೊಂದಿಗೆ ನೆನಪುಗಳ ಮಣಿಹಾರದ ಒಂದೆರೆಡು ಮಣಿಗಳನ್ನು ನಿಮ್ಮೆದುರು ಇಟ್ಟಿದ್ದೇನೆ. ಮತ್ತಷ್ಟು ವಿಷಯಗಳೊಂದಿಗೆ ಇನ್ನೊಮ್ಮೆ‌ ನಿಮ್ಮನ್ನು ಬೇಸರಗೊಳಿಸುವೆ. ಕೃಪೆಯಿರಲಿ.

JCI Shimoga ಜೇಸಿಸ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ವತಿಯಿಂದ “ಬಾಕ್ಸ್ ಕ್ರಿಕೆಟ್ ಪಂದ್ಯಾವಳಿ” ಟ್ರೋಫಿ ಅನಾವರಣ.

0

JCI Shimoga ಜೇಸಿಸ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್, ಶಿವಮೊಗ್ಗ ವತಿಯಿಂದ ದಿನಾಂಕ 11 ಮತ್ತು 12ರಂದು ಆಯೋಜಿಸಿರುವ “ಬಾಕ್ಸ್ ಕ್ರಿಕೆಟ್ ಟೂರ್ನಮೆಂಟ್ 2.0” ಕ್ರೀಡಾಕೂಟದ ಅಂಗವಾಗಿ, ನಗರದ ಆದಿ ಗ್ರ್ಯಾಂಡ್ ಹಾಲ್, ಹೋಟೆಲ್ ಶುಭಂನಲ್ಲಿ ಟ್ರೋಫಿ ಮತ್ತು ಟಿ-ಶರ್ಟ್ ಬಿಡುಗಡೆ ಸಮಾರಂಭವನ್ನು ಅದ್ದೂರಿಯಾಗಿ ಯಾಗಿ ನೆರವೇರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಎಚ್ಚರಿಕೆ ಪತ್ರಿಕೆಯ ಸಂಪಾದಕರಾದ ಸೂರ್ಯನಾರಾಯಣ ಅವರು ಭಾಗವಹಿಸಿ ಟ್ರೋಫಿ ಹಾಗೂ ಟಿ-ಶರ್ಟ್ ಅನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂತಹ ಕ್ರೀಡಾಕೂಟಗಳು ಯುವಕರಲ್ಲಿ ಕ್ರೀಡಾಸಕ್ತಿ ಹೆಚ್ಚಿಸುವುದರ ಜೊತೆಗೆ ಒಗ್ಗಟ್ಟು ಮತ್ತು ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುತ್ತವೆ ಎಂದು ಅಭಿಪ್ರಾಯಪಟ್ಟರು.
ವಲಯ ಅಧ್ಯಕ್ಷರಾದ ಜೆ ಸಿ ಮಧುಸೂಧನ್ ನಾವುಡ , ಹಿರಿಯ ಜೆ ಸಿ ಗಳಾದ ವಸಂತಕುಮಾರ್ ಹಾಗೂ ವಿಲಿಯಂ ಡಿಸೋಜ ಅವರು ಕ್ರೀಡಾಕೂಟದ ಯಶಸ್ಸಿಗೆ ಶುಭ ಹಾರೈಸಿದರು.
ಸಂಸ್ಥೆಯ ಅಧ್ಯಕ್ಷರಾದ ಜೆಸಿ ಚಂದ್ರಹಾಸ್ ಹಾಗೂ ಉಪಾಧ್ಯಕ್ಷರಾದ ಜೆಸಿ ಸುದರ್ಶನ್ ತಾಯಿಮನೆ ಅವರು, ಬಾಕ್ಸ್ ಕ್ರಿಕೆಟ್ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಲು ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿಕೊಂಡರು.
JCI Shimoga ಪದಾಧಿಕಾರಿಗಳಾದ ಶ್ರೀನಾಗ್, ಜಗದೀಶ್, ಮೋಹನ್ ಕಲ್ಪತರು, ಪರಮೇಶ್ವರ್, ಉದಯ ಕದಂಬ, ಆದರ್ಶ್, Jc ಸ್ಮಿತಾ ಮೋಹನ್, ಸುಗುಣಾ ಸತೀಶ್, ಪೂರ್ಣಿಮಾ ಸುನಿಲ್ ಹಾಗೂ ಮಮತಾ ರಘು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಕ್ಲಬ್‌ನ ಎಲ್ಲಾ ಪದಾಧಿಕಾರಿಗಳು, ವಲಯ 24ರ ಆಡಳಿತ ಮಂಡಳಿ ಸದಸ್ಯರು, JAC, JCOM, ಸಹ ಪ್ರಾಯೋಜಕರು, ಶಿವಮೊಗ್ಗದ ಹಿರಿಯ ಹಾಗೂ ಕಿರಿಯ ಜೇಸಿ ಸದಸ್ಯರು, ಕ್ರಿಕೆಟ್ ತಂಡಗಳ ಮಾಲೀಕರು ಮತ್ತು ಆಟಗಾರರು ಭಾಗವಹಿಸಿದ್ದರು.