Friday, September 11, 2026
Friday, September 11, 2026

B. Y. Raghavendra ಕೆರೆ ತುಂಬಿಸಿದ ಏತ ನೀರಾವರಿ: ಉಡುಗಣಿ- ತಾಳಗುಂದ- ಹೊಸೂರು ಗ್ರಾಮಸ್ಥರ ಕಣ್ಣಲ್ಲಿ ಆನಂದ ಭಾಷ್ಪ

Date:

B. Y. Raghavendra ಶಿಕಾರಿಪುರ ತಾಲೂಕಿನ ಕೃಷಿ ರಂಗದ ಇತಿಹಾಸದಲ್ಲೇ ಅತ್ಯಂತ ಕ್ರಾಂತಿಕಾರಿ ಮೈಲಿಗಲ್ಲಾದ “ಉಡುಗಣಿ – ತಾಳಗುಂದ – ಹೊಸೂರು ಹೋಬಳಿಗಳ ಕೆರೆ ತುಂಬಿಸುವ ಏತನೀರಾವರಿ ಯೋಜನೆ” ಇಂದು ರೈತರ ಕಣ್ಣುಗಳಲ್ಲಿ ಆನಂದಭಾಷ್ಪ ತರಿಸಿದೆ ಎಂದು
ಸಂಸದರಾದ ಬಿ.ವೈ‌ರಾಘವೇಂದ್ರ ಅವರು ಈ ಆನಂದಕ್ಕೆ ಕಾರಣೀಭೂತರಾದ ಎಲ್ಲರಿಗೂ ಜನತೆಯ ಪರವಾಗಿ ಧನ್ಯವಾದ ಸಲ್ಲಿಸಿದರು.

ಹಿರೇಕೆರೂರು ತಾಲೂಕಿನ ಚಟ್ನಹಳ್ಳಿ ಗ್ರಾಮದ ಬಳಿ ಹರಿಯುವ ಪವಿತ್ರ ತುಂಗಭದ್ರಾ ನದಿಯಿಂದ ಏತನೀರಾವರಿ ಮೂಲಕ ನೀರನ್ನು ಎತ್ತಿ, ಶಿಕಾರಿಪುರ ತಾಲೂಕಿನ 281 ಕೆರೆಗಳು ಹಾಗೂ ಹಿರೇಕೆರೂರು ತಾಲೂಕಿನ 9 ಕೆರೆಗಳು ಸೇರಿದಂತೆ ಒಟ್ಟು 290 ಕೆರೆಗಳಿಗೆ ನೀರು ತುಂಬಿಸುವ ಈ ₹850 ಕೋಟಿ ವೆಚ್ಚದ ಬೃಹತ್ ಯೋಜನೆ ಇಂದು ಸಾಕಾರಗೊಳ್ಳುತ್ತಿದೆ.

ಈ ಮಹತ್ವಾಕಾಂಕ್ಷಿ ಯೋಜನೆಯ ಯಶಸ್ವಿ ಅನುಷ್ಠಾನದ ಹಿನ್ನೆಲೆಯಲ್ಲಿ, ಇಂದು ಕಡೆನಂದಿಹಳ್ಳಿ ಗ್ರಾಮದ ಕೆರೆಗೆ ಭೇಟಿ ನೀಡಿ, ನದಿಯ ನೀರು ಧುಮ್ಮಿಕ್ಕಿ ಹರಿಯುತ್ತಿರುವುದನ್ನು ಹೆಮ್ಮೆಯ ಅನ್ನದಾತರೊಂದಿಗೆ ಬಿ.ವೈ.ರಾಘವೇಂದ್ರ ಅವರು ವೀಕ್ಷಿಸಿದರು.

ಲಿಫ್ಟ್ ಇರಿಗೇಷನ್ (Lift Irrigation) ವ್ಯವಸ್ಥೆಯನ್ನು ಪರಿಶೀಲಿಸಿದರು.

ಒಣಗಿಹೋಗಿದ್ದ ಕಡೆನಂದಿಹಳ್ಳಿ ಕೆರೆಗೆ ನದಿಯ ನೀರು ಹರಿದುಬಂದು ಭರ್ತಿಯಾಗುತ್ತಿರುವ ಈ ಭವ್ಯ ದೃಶ್ಯವು ಇಡೀ ಭಾಗದ ರೈತ ಬಾಂಧವರಲ್ಲಿ ಹೊಸ ಚೈತನ್ಯ ಹಾಗೂ ಹರ್ಷದ ಅಲೆಯನ್ನು ಮೂಡಿಸಿದೆ.

B. Y. Raghavendra ಸ್ಥಳದಲ್ಲಿದ್ದ ಮುಗ್ಧ ರೈತರು ಈ ಅಪೂರ್ವ ಕ್ಷಣವನ್ನು ಕಣ್ಣುಂಬಿಕೊಂಡು, ನಮ್ಮ ನೆಚ್ಚಿನ ನಾಯಕರಾದ ಮಾಜಿ ಮುಖ್ಯಮಂತ್ರಿ ಶ್ರೀ ಬಿ. ಎಸ್. ಯಡಿಯೂರಪ್ಪ ಅವರನ್ನು “ಆಧುನಿಕ ಭಗೀರಥ” ಎಂದು ಕೊಂಡಾಡಿ, ಅವರ ದೂರದೃಷ್ಟಿಯ ಜನಪರ ನಾಯಕತ್ವವನ್ನು ಕೃತಜ್ಞತೆಯಿಂದ ಸ್ಮರಿಸಿದರು.

ನೀರು – ಕೇವಲ ಸಂಪನ್ಮೂಲವಲ್ಲ, ಅದು ನಮ್ಮ ರೈತರ ಬದುಕಿನ ಆಶಾಕಿರಣ ಮತ್ತು ಮಲೆನಾಡಿನ ಅಭಿವೃದ್ಧಿಯ ಹೊಸ ಅಧ್ಯಾಯ! ಎಂದು ಸಾರ್ಜನಿಕರಿಂದ ಮೆಚ್ಚುಗೆಯ ಮಾತು ಕೇಳಿಬಂದಿದೆ ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S. N. Channabasappa ಶಿವಮೊಗ್ಗದ ವಿವಿಧ ಬಡಾವಣೆಗಳಲ್ಲಿ ಶಾಸಕ ” ಚೆನ್ನಿ” ಅವರಿಂದ ಕಾಮಗಾರಿಗಳಿಗೆ ಭೂಮಿ ಪೂಜೆ

S. N. Channabasappa ಶಿವಮೊಗ್ಗ ನಗರದ ಪ್ರತಿಯೊಂದು ವಾರ್ಡ್ ಹಾಗೂ ಬಡಾವಣೆಗಳಲ್ಲಿ...

Chamber of commerce Shivamogga “ಬೆಂಗಳೂರಿನಾಚೆ ಕೈಗಾರಿಕಾ ಅಭಿವೃದ್ಧಿ” ಗಾಗಿ ಶಿವಮೊಗ್ಗ ನಗರವನ್ನ ಸೇರ್ಪಡಿಸಿ- ಎಸ್.ರುದ್ರೇಗೌಡ

Chamber of commerce Shivamogga ಬೆಂಗಳೂರಿನಾಚೆಗಿನ ಕೈಗಾರಿಕೆಗಳ ಅಭಿವೃದ್ಧಿಗಾಗಿ ಶಿವಮೊಗ್ಗ ನಗರ...