Saturday, February 7, 2026
Saturday, February 7, 2026
Home Blog Page 26

Klive Special Article ಅತ್ತೆ-ಸೊಸೆ ಸ್ಪರ್ಧಿಗಳಲ್ಲ, ಸಂಸಾರದ ಸೌಹಾರ್ದ ಜೀವಿಗಳು

0

ಲೇ: ಶ್ವೇತಾ ಸುಧೀರ್ ಶೃಂಗೇರಿ.

Klive Special Article ಅತ್ತೆ–ಸೊಸೆ ಸಂಬಂಧವನ್ನು ನಮ್ಮ ಸಮಾಜದಲ್ಲಿ ಬಹುಸಾರಿ ಸಂಘರ್ಷದ ಕಣ್ಣಿನಿಂದಲೇ ನೋಡಲಾಗುತ್ತದೆ. “ಅತ್ತೆ–ಸೊಸೆ ಸೌಹಾರ್ದದಿಂದ ಇರುವುದು ಅಸಾಧ್ಯ” ಎಂಬ ಕಲ್ಪನೆ ಪೀಳಿಗೆಗಳಿಂದ ಹರಡಿಕೊಂಡು ಬಂದಿದೆ. ಆದರೆ ಈ ಕಲ್ಪನೆ ನಿಜಕ್ಕೂ ಅಷ್ಟು ಅಚಲವೇ? ಮಾನವ ಸಂಬಂಧಗಳ ಮೂಲ ಸ್ವರೂಪವನ್ನು ನೋಡಿದರೆ, ಅತ್ತೆ–ಸೊಸೆ ನಡುವಿನ ಅಸಮಾಧಾನ ಅನಿವಾರ್ಯವಲ್ಲ; ಅದು ತಪ್ಪು ಕಲ್ಪನೆಗಳು, ಅಹಂಕಾರ, ಮತ್ತು ಪರಸ್ಪರದ ಭಾವನೆಗಳನ್ನು ಅರ್ಥಮಾಡಿಕೊಳ್ಳದಿರುವುದರಿಂದ ಮಾತ್ರ ಉಂಟಾಗುತ್ತದೆ.
ಅತ್ತೆ ಅಮ್ಮನಾದಾಗ, ಸೊಸೆಯೂ ಕೂಡಾ ಮಗಳು ಆಗ್ತಾಳೆ, ಅತ್ತೆಯಾದವರು ಅತ್ತೆಯ ಸ್ಥಾನವನ್ನು ತುಂಬುವ ಭರದಲ್ಲಿ ಅತ್ತೆಯಂತೆ ವರ್ತಿಸಿ ಸೊಸೆಯನ್ನು ದೂರೋದ್ರಲ್ಲಿ ಅರ್ಥ ಇಲ್ಲ ಅಲ್ಲವೇ?
ಅತ್ತೆಯ ದೃಷ್ಟಿಯಲ್ಲಿ, ಸೊಸೆ ತನ್ನ ಮನೆಗೆ ಹೊಸದಾಗಿ ಬಂದವಳು ಮಾತ್ರವಲ್ಲ; ತನ್ನ ಮಗನ ಜೀವನದಲ್ಲಿ ಹೊಸ ಸ್ಥಾನ ಪಡೆದವಳು. ವರ್ಷಗಳ ಕಾಲ ಮಗನನ್ನು ಸಾಕಿ ಬೆಳೆಸಿದ ಅತ್ತೆಗೆ, ಆ ಮಗನ ಮೇಲಿನ ಪ್ರೀತಿ ಮತ್ತು ಹಕ್ಕು ಸಹಜ. ಆದರೆ ಸೊಸೆ ಬಂದ ನಂತರ, ಆ ಹಕ್ಕು ಕಡಿಮೆಯಾಗುತ್ತಿದೆ ಎಂಬ ಭಾವನೆ ಅತ್ತೆಯ ಮನಸ್ಸಿನಲ್ಲಿ ಮೂಡಬಹುದು. ಇದರಿಂದ ಸೊಸೆಯನ್ನು “ಪ್ರತಿಬಂಧಿ”ಯಂತೆ ಕಾಣುವ ಪ್ರವೃತ್ತಿ ಉಂಟಾಗುತ್ತದೆ. ಇದು ಅತ್ತೆಯ ತಪ್ಪಲ್ಲ; ಬದಲಾವಣೆಯ ಭಯ ಮತ್ತು ಬಂಧನದ ಆಳವೇ ಅದರ ಮೂಲ. ಸೊಸೆಯ ಆಯ್ಕೆಯ ಉದ್ದೇಶವೇ ನನ್ನ ಮಗ ಚೆನ್ನಾಗಿ ಇರ್ಬೇಕು ಅನ್ನೋದು ಮನಸಲ್ಲಿ ಇರುವಾಗ, ಸೊಸೆ ಬಂದಮೇಲೆ ಮಗ ದೂರಾಗುತ್ತಾನೆ ಅನ್ನೋ ಭಯದ ಮನಸ್ಥಿತಿ ಏಕೆ ಬೇಕು?
Klive Special Article ಇನ್ನೊಂದು ಕಡೆ, ಸೊಸೆಯ ಮನಸ್ಸಿನಲ್ಲಿ ಬೇರೆ ಚಿಂತನೆ. ಹೊಸ ಮನೆ, ಹೊಸ ಜನ, ಹೊಸ ಜವಾಬ್ದಾರಿಗಳು—ಇವೆಲ್ಲದರ ನಡುವೆ ಗಂಡನ ಪ್ರೀತಿ ತನ್ನದಾಗಿರಬೇಕು ಎಂಬ ಭಾವನೆ ಸಹಜ. ಅತ್ತೆ ಗಂಡನ ಮೇಲೆ ಹೆಚ್ಚು ಪ್ರಭಾವ ಬೀರುತ್ತಿದ್ದಾಳೆ ಎಂಬ ಅನುಮಾನ ಸೊಸೆಗೆ ಮೂಡಬಹುದು. ಇದರಿಂದ ಅತ್ತೆ ತನ್ನ ಗಂಡನನ್ನು ತನ್ನಿಂದ ದೂರ ಮಾಡುತ್ತಿದ್ದಾಳೆ ಎಂಬ ಭಾವನೆ ಬಲವಾಗುತ್ತದೆ. ಈ ಮನಸ್ಥಿತಿಗಿಂತ ಮಗನಿಗೆ ಅಮ್ಮನು ಕೂಡಾ ಮುಖ್ಯ ಅನ್ನೋದನ್ನ ಅರ್ಥ ಮಾಡ್ಕೊಂಡು ಬಿಟ್ರೆ ಜೀವನ ಸ್ವರ್ಗಕ್ಕೆ ಸಮ ಅಲ್ವೇ?
ಆದರೆ ನಿಜವಾಗಿ ನೋಡಿದರೆ, ಈ ಇಬ್ಬರ ನಡುವೆ ಸ್ಪರ್ಧೆ ಇರಬೇಕಾದ ಅಗತ್ಯವೇ ಇಲ್ಲ. ಅತ್ತೆ ತನ್ನ ಮಗನನ್ನು ಮಗುತನದಿಂದಲೇ ಸಾಕಿ ಬೆಳೆಸಿದವಳು; ಅವಳ ಪಾತ್ರ ಅತ್ಯಂತ ಮಹತ್ವದದು. ಆದರೆ ಮದುವೆಯ ನಂತರ, ಆ ಜವಾಬ್ದಾರಿಯ ಒಂದು ಭಾಗವನ್ನು ಸೊಸೆಗೆ ಹಸ್ತಾಂತರಿಸುವುದು ಸಹಜ. ಇದು ಕಳೆದುಕೊಳ್ಳುವಿಕೆ ಅಲ್ಲ—ಹೊಸ ಸಂಬಂಧಕ್ಕೆ ಅವಕಾಶ ನೀಡುವಿಕೆ, ಜವಾಬ್ದಾರಿಯನ್ನ ಸೊಸೆಗೆ ನೀಡಿ ನಿರ್ವಹಣೆ ಮಾಡೋ ಕಲೆಯನ್ನು ಕಲಿಸುವ ಪರಿ, ವಯಸ್ಸು ಆಗ್ತಾ ಹೋದ ಹಾಗೆ ಜವಾಬ್ದಾರಿ ಮಕ್ಕಳಿಗೆ ನೀಡುತ್ತಾ ವೃದ್ಧಾಪ್ಯಕ್ಕೆ ಸಾಗೋದು ಜಗದ ನಿಯಮ ಕೂಡಾ, ಅದೇ ರೀತಿ, ಸೊಸೆಯೂ ಅತ್ತೆಯನ್ನು ಕೇವಲ “ಗಂಡನ ತಾಯಿ”ಯಾಗಿ ನೋಡದೆ, ತಾಯಿಯ ಸ್ಥಾನದಲ್ಲಿ ಕಾಣುವ ಮನೋಭಾವ ಬೆಳೆಸಿದರೆ, ಸಂಬಂಧದಲ್ಲಿ ಮೃದುತ್ವ ಹೆಚ್ಚುತ್ತದೆ.
ಸೌಹಾರ್ದದ ಮೂಲ ಪರಸ್ಪರ ಗೌರವ. ಅತ್ತೆ ಸೊಸೆಯ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು; ಸೊಸೆ ಅತ್ತೆಯ ಜೀವನದಲ್ಲಿ ಬದಲಾವಣೆಗಳು ಸಹಜವೆಂದು ಒಪ್ಪಿಕೊಳ್ಳಬೇಕು. ಮಾತಿನ ಮೃದುತ್ವ, ಪರಸ್ಪರದ ಭಾವನೆಗಳಿಗೆ ಗೌರವ, ಮತ್ತು ಸ್ವಲ್ಪ ಸಹನೆ—ಇವು ಇದ್ದರೆ ಅತ್ತೆ–ಸೊಸೆ ಸಂಬಂಧ ಕಠಿಣವಾಗಬೇಕಾದ ಅಗತ್ಯವೇ ಇಲ್ಲ.
ಅಂತಿಮವಾಗಿ, ಅತ್ತೆ–ಸೊಸೆ ಸಂಬಂಧವು ಸ್ಪರ್ಧೆಯಲ್ಲ; ಅದು ಎರಡು ಮಹಿಳೆಯರ ನಡುವೆ ನಿರ್ಮಾಣವಾಗುವ ಹೊಸ ಬಂಧ. ಈ ಬಂಧವನ್ನು ಪ್ರೀತಿ, ಗೌರವ ಮತ್ತು ಪರಸ್ಪರ ಅರ್ಥಮಾಡಿಕೊಳ್ಳುವಿಕೆಯಿಂದ ಪೋಷಿಸಿದರೆ, ಸೌಹಾರ್ದದಿಂದ ಬದುಕುವುದು ಅಸಾಧ್ಯವಲ್ಲ—ಅದು ಸುಲಭವಾಗಿ ಸಾಧ್ಯವಾಗುವ ಸುಂದರ ವಾಸ್ತವ.
ಶ್ವೇತಾ ಸುಧೀರ್ ಶೃಂಗೇರಿ
ಜಿನೀವಾ, ಸ್ವಿಟ್ಜರ್ಲ್ಯಾಂಡ್ ಇಂದ,

Information and Public Relations Department ರಘುನಾಥ್ ಚ.ಹ., ಬಸವರಾಜ್ ಮೇಗಲಕೇರಿ,ಮತ್ತು ಡಾ.ರಾಜಶೇಖರ ಹತಗುಂದಿ ಅವರಿಗೆ ಚಲನಚಿತ್ರ ಸಾಹಿತ್ಯ ಪ್ರಶಸ್ತಿ ಘೋಷಣೆ.

0

Information and Public Relations Department ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು 2020 ಹಾಗೂ 2021 ನೇ ಕ್ಯಾಲೆಂಡರ್ ವರ್ಷಗಳ ರಾಜ್ಯ ಚಲನಚಿತ್ರ ವಾರ್ಷಿಕ ಸಾಹಿತ್ಯ ಪ್ರಶಸ್ತಿಗಳನ್ನು ಪ್ರಕಟಿಸಿದೆ.

2020 ನೇ ಕ್ಯಾಲೆಂಡರ್ ವರ್ಷದ ಚಲನಚಿತ್ರ ಸಾಹಿತ್ಯ ಪ್ರಶಸ್ತಿಗೆ ಬಳ್ಳಾರಿ ಜಿಲ್ಲೆ ಸಿರಿಗೇರಿಯ ಅನ್ನಪೂರ್ಣ ಪ್ರಕಾಶನ ಪ್ರಕಟಿಸಿದ , ಹಿರಿಯ ಪತ್ರಕರ್ತ ರಘುನಾಥ ಚ.ಹ.ಅವರು ಆಯ್ದ 20 ಸಿನೆಮಾಗಳ ಕುರಿತು ಬರೆದ ಲೇಖನಗಳ ಸಂಗ್ರಹ “ನಮೋ ವೆಂಕಟೇಶ” ಕೃತಿ ಆಯ್ಕೆಯಾಗಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ.ನಿಂಬಾಳ್ಕರ್ ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿಯಲ್ಲಿದ್ದ ಹಿರಿಯ ಪತ್ರರ್ತರಾದ ಡಾ.ರಾಜಶೇಖರ ಹತಗುಂದಿ ಹಾಗೂ ಬಸವರಾಜ ಮೇಗಲಕೇರಿ ಅವರು 2020 ನೇ ಕ್ಯಾಲೆಂಡರ್ ವರ್ಷದ ಕೃತಿಯನ್ನು ಆಯ್ಕೆ ಮಾಡಿದ್ದರು.

2021 ನೇ ಕ್ಯಾಲೆಂಡರ್ ವರ್ಷದ ಚಲನಚಿತ್ರ ವಾರ್ಷಿಕ ಸಾಹಿತ್ಯ ಪ್ರಶಸ್ತಿಗೆ ಬೆಂಗಳೂರಿನ ಸಿರಿಗಂಧ ಪ್ರಕಾಶನ ಪ್ರಕಟಿಸಿರುವ ,ಲೇಖಕ ಹಾಗೂ ಚಲನಚಿತ್ರ ನಿರ್ದೇಶಕ ಪ್ರಕಾಶರಾಜ್ ಮೇಹು ಅವರು ಬರೆದ ಡಾ.ರಾಜಕುಮಾರ್ ಬದುಕಿನ ಕುರಿತ “ಅಂತರಂಗದ ಅಣ್ಣ” ಕೃತಿ ಆಯ್ಕೆಯಾಗಿದೆ. ಸಾಹಿತಿ ಡಾ.ಚಿದಾನಂದ ಸಾಲಿ ಹಾಗೂ ಪತ್ರಕರ್ತ ಡಾ.ಶರಣು ಹುಲ್ಲೂರು ಅವರು ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿದ್ದರು.

Information and Public Relations Department ಪ್ರಶಸ್ತಿಯು ಲೇಖಕರು ಹಾಗೂ ಪ್ರಕಾಶಕರಿಬ್ಬರಿಗೂ ತಲಾ 20 ಸಾವಿರ ರೂ.ನಗದು ಹಾಗೂ 50 ಗ್ರಾಂ ಬೆಳ್ಳಿ ಪದಕಗಳನ್ನು ಒಳಗೊಂಡಿದೆ ಎಂದು ಎಂದು ವಾರ್ತಾ ಇಲಾಖೆ ಜಂಟಿ ನಿರ್ದೇಶಕ ,ಆಯ್ಕೆ ಸಮಿತಿಯ ಸದಸ್ಯ ಕಾರ್ಯದರ್ಶಿ ಮಂಜುನಾಥ ಡೊಳ್ಳಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

S.N.Chennabasappa ಶಿವಮೊಗ್ಗದ 1 & 9 ನೇ ವಾರ್ಡುಗಳಿಗೆ ಶಾಸಕ ಚೆನ್ನಿ ಭೇಟಿ. ಸಾರ್ವಜನಿಕ ಸಮಸ್ಯೆ ಪರಿಹಾರಕ್ಕೆ ಸೂಚನೆ

0

S.N.Chennabasappa ಶಿವಮೊಗ್ಗ ನಗರದ ಶಾರದಮ್ಮ ಬಡಾವಣೆ ಹಾಗೂ ರಾಜೇಂದ್ರ ನಗರದಲ್ಲಿ ಎದುರಾಗಿರುವ ಮೂಲಭೂತ ಸಮಸ್ಯೆಗಳನ್ನು ಕೂಡಲೇ ಪರಿಹರಿಸುವಂತೆ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದರು.

ವಾರ್ಡ್ ನಂಬರ್ 1 ಮತ್ತು 9ರಲ್ಲಿ ಭೇಟಿ ನೀಡಿದ ಅವರು, ಶಾರದಮ್ಮ ಬಡಾವಣೆಯ ರಸ್ತೆ ಮತ್ತು ಯುಜಿಡಿ ಸಮಸ್ಯೆಗಳ ಕುರಿತು ಸ್ಥಳೀಯರಿಂದ ಮಾಹಿತಿ ಪಡೆದರು.

ಒಳಚರಂಡಿ ವ್ಯವಸ್ಥೆ ಹದಗೆಟ್ಟಿರುವುದರಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಗಮನಿಸಿ, ಕೂಡಲೇ ಸರಿಪಡಿಸಲು ಇಂಜಿನಿಯರ್‌ಗಳಿಗೆ ನಿರ್ದೇಶನ ನೀಡಿದರು.

ಬಳಿಕ ರಾಜೇಂದ್ರ ನಗರದ ಪಾರ್ಕ್ ವೀಕ್ಷಣೆ ನಡೆಸಿ, ಉದ್ಯಾನವನಗಳು ಹಿರಿಯ ನಾಗರಿಕರಿಗೆ ಮತ್ತು ಮಕ್ಕಳಿಗೆ ಪೂರಕವಾಗಿರಬೇಕು. ಅಲ್ಲಿನ ಸ್ವಚ್ಛತೆ ಮತ್ತು ನಿರ್ವಹಣೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ತಿಳಿಸಿದರು.

S.N.Chennabasappa ಈ ಸಂದರ್ಭದಲ್ಲಿ ಬಿಜೆಪಿ ನಗರ ಉಪಾಧ್ಯಕ್ಷರು ಹಾಗೂ ಒಂದನೇ ಮಹಾಶಕ್ತಿ ಕೇಂದ್ರದ ಪ್ರಭಾರಿಗಳಾದ ಗಾಡಿಕೊಪ್ಪ ಶ್ರೀ ಕುಮಾರ್, ಬೊಮ್ಮನಕಟ್ಟೆ ರಾಜು, ಪ್ರಮುಖರಾದ ನಾಗರಾಜ್, ಮಹಾನಗರ ಪಾಲಿಕೆಯ ಅಧಿಕಾರಿಗಳು, ಬಡಾವಣೆಯ ಪ್ರಮುಖರು ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.

Rangayana Shimoga ಜನವರಿ 14 ರಿಂದ ನಾಟಕ ಪ್ರಿಯರಿಗೆ ರಂಗಾಯಣದಲ್ಲಿ ರಂಗ-ರಸದೌತಣ

0

Rangayana Shimoga ರಂಗಾಯಣ, ಶಿವಮೊಗ್ಗವು ರಂಗಬೆಳಕು (ರಿ), ಶಿವಮೊಗ್ಗ ಹಾಗೂ ಕಡೆಕೊಪ್ಪಲ ಪ್ರತಿಷ್ಠಾನ (ರಿ), ಶಿವಮೊಗ್ಗ ಇವರ ಸಹಯೋಗದಲ್ಲಿ ದಿನಾಂಕ:14-01-2026 ರಿಂದ 19-01-2026 ರವರೆಗೆ ‘ರಂಗ ಸಂಕ್ರಾಂತಿ’ ನಾಟಕೋತ್ಸವ -2026 ಎಂಬ ಹೆಸರಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದೆ.

ಆರು ದಿನಗಳು ನಡೆಯಲಿರುವ ಈ ನಾಟಕೋತ್ಸವದಲ್ಲಿ ವಿವಿಧ ನಾಟಕಗಳು ಪ್ರತಿ ದಿನ ಸಂಜೆ 6.30ಕ್ಕೆ ಸುವರ್ಣ ಸಂಸ್ಕೃತಿ ಭವನ, ಅಶೋಕ ನಗರ, ಶಿವಮೊಗ್ಗದಲ್ಲಿ ಪ್ರದರ್ಶನಗೊಳ್ಳಲಿವೆ.

Rangayana Shimoga ಟಿಕೆಟ್ ದರ ಒಂದು ನಾಟಕಕ್ಕೆ ರೂ.30/-.

ರಾಜ್ಯಮಟ್ಟದ ವಿವಿಧ ಪುಷ್ಪಾಧಾರಿತ ಕಲೆಗಳ ಸ್ಪರ್ಧೆಗೆ ಅರ್ಜಿ ಆಹ್ವಾನ

0

ಲಾಲ್‌ಬಾಗ್ ಸಸ್ಯ ಶಾಸ್ತ್ರೀಯ ತೋಟದಲ್ಲಿ, ಜನವರಿ-2026 ರ ಗಣರಾಜ್ಯೋತ್ಸವದ ಅಂಗವಾಗಿ ಆಯೋಜಿಸಲಾಗುತ್ತಿರುವ ‘ತೇಜಸ್ವಿ-ವಿಸ್ಮಯ; ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಅವರ ಬದುಕು-ಬರಹ” ವಿಷಯಾಧಾರಿತ 219ನೇ ಫಲಪುಷ್ಪ ಪ್ರದರ್ಶನಕ್ಕೆ ಪೂರಕವಾಗಿ, ವಿವಿಧ ಪುಷ್ಪಾಧಾರಿತ ಕಲೆಗಳ (ಇಕೆಬಾನ ಜಾನೂರ್, ಥಾಯ್ ಆರ್ಟ್, ತರಕಾರಿ ಕೆತ್ತನೆ ಹಾಗೂ ಪುಷ್ಪ ರಂಗೋಲಿ) ಪ್ರದರ್ಶನ ಹಾಗೂ ಸ್ಪರ್ಧೆಗಳನ್ನು ಏರ್ಪಡಿಸಲಾಗಿರುತ್ತದೆ.

ಈ ಸ್ಪರ್ಧೆಗಳಲ್ಲಿ ಭಾಗವಹಿಸಲು ಇಚ್ಛಿಸುವ ಆಸಕ್ತರು ಕಚೇರಿ ವೇಳೆಯಲ್ಲಿ ಅಂದರೆ ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ತೋಟಗಾರಿಕೆ ಅಪರ ನಿರ್ದೇಶಕರ ಕಚೇರಿ (ಯೋಜನೆ), ಲಾಲ್‌ಬಾಗ್, ಬೆಂಗಳೂರು ಇವರಿಂದ ಅರ್ಜಿಗಳನ್ನು ಪಡೆದು, ಪ್ರತಿ ಅರ್ಜಿಗೆ ರೂ. 100/- ಶುಲ್ಕವನ್ನು ಪಾವತಿಸಿ 2026 ನೇ ಜನವರಿ 14 ರ
ಒಳಗಾಗಿ ಅರ್ಜಿಗಳನ್ನು ಸಲ್ಲಿಸಬಹುದು ಎಂದು ಲಾಲ್ ಬಾಗ್ ಸಸ್ಯ ತೋಟ ಉಪನಿರ್ದೇಶಕರು ತಿಳಿಸಿದ್ದಾರೆ.

S.N.Chennabasappa ವಿವೇಕಾನಂದರ ಚಿಂತನೆ,ಜೀವನ ಮೌಲ್ಯಗಳು ಯುವಜನತೆಗೆ ಪ್ರೇರಣೆ- ಎಸ್.ಎನ್.ಚನ್ನಬಸಪ್ಪ.

0

S.N.Chennabasappa ಸ್ವಾಮಿ ವಿವೇಕಾನಂದರು ಕೇವಲ ಒಬ್ಬ ವ್ಯಕ್ತಿಯಲ್ಲ. ಅವರು ಯುವಶಕ್ತಿ. ವೀರ ಸನ್ಯಾಸಿಯಾಗಿದ್ದು ಎಲ್ಲ ಯುವಜನತೆಗೆ ಮಾದರಿಯಾಗಿದ್ದಾರೆ ಎಂದು ಶಾಸಕರಾದ ಎಸ್.ಎನ್.ಚನ್ನಬಸಪ್ಪ ನುಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಸೋಮವಾರ ಕುವೆಂಪು ರಂಗಮAದಿರದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ರಾಷ್ಟ್ರೀಯ ಯುವ ದಿನ ಹಾಗೂ ಯುವ ಸಪ್ತಾಹ ಅಂಗವಾಗಿ ಏರ್ಪಡಿಸಲಾಗಿದ್ದ ಯುವಜನತೆಗೆ ಐಎಎಸ್ ಮತ್ತು ಐಪಿಎಸ್ ಕಾರ್ಯಾಗಾರ ಹಾಗೂ ಮಾದಕ ವ್ಯಸನದ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅವರು ಆಧ್ಯಾತ್ಮಿಕ ಗುರುಗಿಂತ ಹೆಚ್ಚಾಗಿ ವೀರ ಸನ್ಯಾಸಿಯಾಗಿದ್ದರು. ಅವರನ್ನು ನೆನೆದರೆ ಸಾಕು ನಮ್ಮ ಹಿಂದೂ ಸಂಸ್ಕೃತಿ, ಪರಂಪರೆ ಕಣ್ಣ ಮುಂದೆ ಬರುತ್ತದೆ. ಭಾರತ ದೇಶ ಮಾತ್ರವಲ್ಲ ಇದು ಪುಣ್ಯಭೂಮಿ, ಮಾತೃಭೂಮಿ ಎಂಬ ಅರಿವನ್ನು ನೀಡಿದವರು ಅವರು. ನಮ್ಮ ಮಣ್ಣು, ನೆಲ, ಜಲ, ದೇಶದ ಕುರಿತು ಅಪಾರ ಪ್ರೇಮ ಹೊಂದಿದ್ದ ಅವರು ಯುವಜನತೆಯಲ್ಲಿರುವ ಅಪಾರ ಶಕ್ತಿಯ ಕುರಿತು ಒತ್ತಿ ಹೇಳಿ ಅವರಿಗೆ ಪ್ರೇರಕ ಶಕ್ತಿಯಾಗಿದ್ದಾರೆ.
ಚಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಮೂಲೆಯಲ್ಲಿ ಕೂರಿಸಲಾಗಿದ್ದ ವಿವೇಕಾನಂದರು ತಮ್ಮ ಭಾಷಣದ ಸರತಿ ಬಂದಾಗ ಅವರು, ಅಮೇರಿಕಾ ದೇಶದ ಸಹೋದರಿ, ಸಹೋದರಿಯರೇ ಎಂದು ಮಾತನಾಡಲು ಆರಂಭಿಸಿದAತೆಯೇ ಎಲ್ಲರ ಗಮನ ಅವರ ಭಾಷಣದ ಮೇಲೆ ಹರಿಯುತ್ತದೆ, ಅವರು ತಮ್ಮ ಮಾತಿನ ಮೂಲಕ ನಮ್ಮ ದೇಶದ ಸಂಸ್ಕೃತಿಯ ಅನಾವರಣ ಮಾಡುತ್ತಾರೆ.
ಸ್ವಾಮಿ ವಿವೇಕಾನಂದರು ತಮ್ಮ ಜೀವನವನ್ನೇ ದೇಶಕ್ಕಾಗಿ ಸಮರ್ಪಿಸಿಕೊಂಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಅವರೊಂದು ವಿಶ್ವವಿದ್ಯಾಲಯವಾಗಿದ್ದರು. ದೇಶಭಕ್ತಿ, ಪ್ರಾಮಾಣಿಕತೆ ಮತ್ತು ನಂಬಿಕೆಯ ಪ್ರತೀಕ ಅವರು. ನಂಬಿಕೆ ಎಷ್ಟು ಮುಖ್ಯ ಎಂಬುದು ರಾಮಕೃಷ್ಣ ಪರಮಹಂಸ ಮತ್ತು ವಿವೇಕಾನಂದ ಗುರು ಶಿಷ್ಯರ ಮಾತಿನಲ್ಲಿ ಕಾಣುತ್ತದೆ. ಯುವಕರು ತಮ್ಮ ಎಷ್ಟೋ ಪ್ರಶ್ನೆಗಳಿಗೆ ವಿವೇಕಾನಂದರ ಮೂಲಕ ಉತ್ತರ ಕಂಡುಕೊಳ್ಳಬಹುದು. ಈ ನಿಟ್ಟಿನಲ್ಲಿ ಎಲ್ಲ ಯುವಜನತೆ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯನ್ನು ಓದಬೇಕು.
S.N.Chennabasappa ದೇಶದಲ್ಲಿ ಬಡತನ ನಾಶವಾಗಬೇಕು, ನಾವು ಕೊಡುವಂತಹ ದೇಶವಾಗಬೇಕೆಂದು ಹೇಳುತ್ತಿದ್ದರು. ದೇಶದ ಅಭಿವೃದ್ದಿಯಲ್ಲಿ ಯುವಜನತೆಯ ಪಾತ್ರ ಮಹತ್ತರವಾಗಿದೆ ಎಂದು ತಿಳಿಸಿದ್ದ ಅವರ ಚಿಂತನೆಗಳು, ಜೀವನ ಮೌಲ್ಯ ಯುವಕರಿಗೆ ಪ್ರೇರಣೆಯಾಗಿದ್ದು, ನಾವು ಯುವಜನತೆಗೆ ಹೆಚ್ಚಿನ ಶಕ್ತಿಯನ್ನು ತುಂಬಬೇಕಿದೆ ಎಂದರು.
ವಿಧಾನ ಪರಿಷತ್ ಶಾಸಕಿ ಬಲ್ಕೀಶ್ ಬಾನು ಮಾತನಾಡಿ, ಸ್ವಾಮಿ ವಿವೇಕಾನಂದರವರು ಈ ದೇಶದ ಮಹಾನ್ ಯುವಕ, ಸಂತ. ಅಮೇರಿಕಾ ದೇಶದ ಚಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಇವರಿಗೆ ಸಮರ್ಪಕ ಗೌರವ ದೊರಕದಿದ್ದರೂ, ತಮ್ಮ ಭಾಷಣದಲ್ಲಿ ದೃಢವಾಗಿ ಹಿಂದೂ ಧರ್ಮ, ಸಂಸ್ಕೃತಿಯ ಬಗ್ಗೆ ಸ್ಪಷ್ಟವಾಗಿ ತಿಳಿಸಿದರು. ಇಷ್ಟು ಚಿಕ್ಕ ವಯಸ್ಸಿನ ವ್ಯಕ್ತಿಯ ಆ ಭಾಷಣ ಕೇಳಿ ಎಲ್ಲರೂ ಅಚ್ಚರಿಗೊಳ್ಳುತ್ತಾರೆ. ಅಂತಹ ವ್ಯಕ್ತಿತ್ವವನ್ನು ಅವರು ಹೊಂದಿದ್ದರು.
ಸಮಾಜದಲ್ಲಿ ಯುವಕರ ಪಾತ್ರ ದೊಡ್ಡದಿದೆ ಎಂದು ವಿವೇಕಾನಂದರು ತಿಳಿಸಿದ್ದು, ನಮ್ಮ ನಮ್ಮ ಮನೆಯಿಂದಲೇ ಸಮಾಜ ಶುರುವಾಗುತ್ತದೆ. ಅಲ್ಲಿಂದಲೇ ನಮ್ಮ ವ್ಯಕ್ತಿತ್ವ ಉತ್ತಮವಾಗಿ ವಿಕಸನ ಆಗುತ್ತಾ ಹೋಗಬೇಕು. ಯುವಜನತೆ ಒಳ್ಳೆಯ ವ್ಯಕ್ತಿತ್ವ ಬೆಳೆಸಿಕೊಂಡರೆ ಅದೇ ದೇಶಕ್ಕೆ ದೊಡ್ಡ ಕೊಡುಗೆ. ಇಂದಿನ ಯುವಜನತೆಗೆ ಎಲ್ಲ ರೀತಿಯ ಸೌಲಭ್ಯಗಳು ಸಿಗುತ್ತಿದ್ದು ಒಳ್ಳೆಯ ಶಿಕ್ಷಣ ಪಡೆದುಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದ ಅವರು ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯನ್ನು ಯುವಕರೆಲ್ಲ ಓದಿ ತಿಳಿದುಕೊಂಡು ಅವರ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಾಗೂ ಯಾವುದೇ ರೀತಿಯ ಮಾದಕ ವಸ್ತುಗಳಿಂದ ದೂರ ಇರಲು ದೃಢ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.
ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ, ಯುವಜನತೆ ಸೇರಿದಂತೆ ನಮಗೆಲ್ಲರಿಗೂ ಯಾವುದೇ ಕ್ಷೇತ್ರವಿರಲಿ, ಏನೇ ಕೆಲಸ ಮಾಡುತ್ತಿರಲಿ ಜೀವನೋತ್ಸಾಹ ಬಹಳ ಮುಖ್ಯವಾಗಿ ಬೇಕು. ಯಾವುದೇ ಕೆಲಸದಲ್ಲಿ ಮನಸಾರೆ ತೊಡಗಿಕೊಂಡಲ್ಲಿ ಯಶಸ್ಸು ಹೆಚ್ಚಿರುತ್ತದೆ.
ನಾವು ನಮ್ಮ ಆಲಸ್ಯದ ಬಡತನದಿಂದ ಹೊರಬರಬೇಕು. ಸ್ವಾಮಿ ವಿವೇಕಾನಂದರು ಹೇಳಿದಂತೆ ನಾವು ಉತ್ತಮ ವ್ಯಕ್ತಿತ್ವದ, ಉದಾತ್ತ ಚಿಂತನೆಗಳ, ಮೌಲ್ಯಗಳ ಶ್ರೀಮಂತಿಕೆ ಹೊಂದಬೇಕು. ಇದರ ಮುಖೇನ ನಮ್ಮ ಕುಟುಂಬ ಮತ್ತು ಸಮಾಜಕ್ಕೆ ಉತ್ತಮವಾದ ಕೊಡುಗೆಗಳನ್ನು ಸಾಧ್ಯ.
ಯುವಜನತೆ ಸದಾ ಕಲಿಕೆಯಲ್ಲಿ ಉತ್ಸುಕರಾಗಿರಬೇಕು. ಯಾವುದು ಸರಿ ಮತ್ತು ತಪ್ಪು ಎಂದು ನಿರ್ಧರಿಸುವ ಅನಲಿಟಿಕಲ್ ಬುದ್ದಿ ಇರುವ ಕಾಲಘಟ್ಟ ಇದಾಗಿದ್ದು ಈ ವಯಸ್ಸಿನಲ್ಲಿ ಧೈರ್ಯ ಸಹ ಹೆಚ್ಚಿರುವ ಕಾರಣ ತಾವು ತಮ್ಮ ನೆಚ್ಚಿನ ಕ್ಷೇತ್ರಗಳಲ್ಲಿ ಮುಂದೆ ಬರಬೇಕು. ಈ ವಯಸ್ಸಿನಲ್ಲಿ ಕುತೂಹಲಕ್ಕೀಡಾಗಿ ದುಶ್ಚಟಗಳಿಗೂ ಈಡಾಗಬಹುದು, ಉತ್ತಮವಾದ ಮಾರ್ಗವನ್ನೂ ಅನುಸರಿಸಬಹುದು. ಆದ್ದರಿಂದ ಯುವಜನತೆ ಉತ್ತಮ ಮಾರ್ಗ ಹಿಡಿದು ಮಾನಸಿಕವಾಗಿ ಮುತ್ತು ದೈಹಿಕವಾಗಿ ಯಾವುದೇ ದುಶ್ಚಗಳಿಂದ ದೂರ ಇರಬೇಕು. ಹಾಗೂ ವ್ಯಕ್ತಿಕ್ತ ವಿಕಸನ ಎಲ್ಲರಿಗೂ ಅತ್ಯಗತ್ಯವಾಗಿದ್ದು ಯುವಜನತೆ ಸೂಕ್ತ ಮಾರ್ಗದರ್ಶನ ಆಯ್ಕೆ ಮಾಡಿಕೊಂಡು ಉತ್ತಮ ವ್ಯಕ್ತಿಗಳಾಗಿ ಹೊರಹೊಮ್ಮಬೇಕೆಂದು ಕರೆ ನೀಡಿದರು.
ಐಎಎಸ್ ಪ್ರೊಬೇಷನರಿ ಅಧಿಕಾರಿ ನಾಗೇಂದ್ರ ಕುಮಾರ್ ಬಾಬು, ಪಿಪಿಟಿ ಪ್ರದರ್ಶನ ಮೂಲಕ ಐಎಎಸ್ ಪರೀಕ್ಷೆಗೆ ತಯಾರಿ, ಪರೀಕ್ಷೆ, ಸಂದರ್ಶನ ಮತ್ತು ಆಯ್ಕೆ ಪ್ರಕ್ರಿಯೆ ಕುರಿತು ವಿದ್ಯಾರ್ಥಿಗಳಿಗೆ ಸವಿವರವಾದ ಮಾಹಿತಿ ನೀಡಿದರು.
ಐಪಿಎಸ್ ಪ್ರೊಬೇಷನರಿ ಅಧಿಕಾರಿ ಮೇಘಾ ಅಗರ್ವಾಲ್, ಐಪಿಎಸ್ ಪರೀಕ್ಷೆಗೆ ತಯಾರಿ, ಪರೀಕ್ಷೆ, ಸಂದರ್ಶನ, ಆಯ್ಕೆ ಪ್ರಕ್ರಿಯೆ ಕುರುತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಸೈಬರ್ ಕ್ರೈಮ್ ವಿಭಾಗದ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ ಮಾದಕ ವಸ್ತುಗಳ ದುಷ್ಪರಿಣಾಮಗಳು, ಎನ್‌ಡಿಪಿಎಸ್ ಕಾಯ್ದೆ, ಮಾದಕ ವಸ್ತುಗಳಿಂದ ದೂರು ಇರುವ ಬಗೆ ಕುರಿತು ವಿದ್ಯಾರ್ಥಿಗಳಿಗೆ ಕಾರ್ಯಾಗಾರದಲ್ಲಿ ಮಾಹಿತಿ ನೀಡಿದರು.
ಯುವ ಸಪ್ತಾಹದ ಅಂಗವಾಗಿ ತಾಲ್ಲೂಕು ಮಟ್ಟದಲ್ಲಿ ಏರ್ಪಡಿಸಲಾಗಿದ್ದ ಕ್ರೀಡೆ ಮತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ,ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲೇಶಪ್ಪ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಶೋಭಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್, ಇತರೆ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಜರಿದ್ದರು.

ಡಿವಿಎಸ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಕೆ ಬಸಪ್ಪಗೌಡ ಕಾರ್ಯದರ್ಶಿಯಾಗಿ ಎಸ್.ಪಿ.ದಿನೇಶ್ ಆಯ್ಕೆ

0

ದೇಶೀಯ ವಿದ್ಯಾಶಾಲಾ ಸಮಿತಿಯ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಕೆ.ಬಸಪ್ಪ ಗೌಡ ಹಾಗೂ ಕಾರ್ಯದರ್ಶಿಯಾಗಿ ಎಸ್.ಪಿ.ದಿನೇಶ್ ಆಯ್ಕೆಯಾಗಿದ್ದಾರೆ. 2026-2031ನೇ ಸಾಲಿಗೆ ಸೋಮವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಕೆ.ಬಸಪ್ಪ ಗೌಡ, ಕಾರ್ಯದರ್ಶಿಯಾಗಿ ಎಸ್.ಪಿ.ದಿನೇಶ್, ಉಪಾಧ್ಯಕ್ಷರಾಗಿ ಜಿ.ಮಧುಸೂದನ್, ಸಹ ಕಾರ್ಯದರ್ಶಿಯಾಗಿ ಡಾ. ಸತೀಶ್‌ಕುಮಾರ್ ಶೆಟ್ಟಿ, ಕೋಶಾಧ್ಯಕ್ಷರಾಗಿ ಎನ್.ಆರ್.ನಿತಿನ್, ನಿರ್ದೇಶಕರಾಗಿ ಕೆ.ಎನ್.ರುದ್ರಪ್ಪ ಕೊಳಲೆ, ಡಾ. ಡಿ.ಬಿ.ಅವಿನಾಶ್, ಎಂ.ರಾಜು, ಬಿ.ಗೋಪಿನಾಥ್, ಡಾ. ಎಚ್.ಮಂಜುನಾಥ್, ಡಾ. ಕೆ.ಎಸ್.ಪವಿತ್ರಾ, ಶಿಕ್ಷಕ ಪ್ರತಿನಿಧಿಗಳಾಗಿ ಡಾ. ಎಂ.ವೆಂಕಟೇಶ್, ಸವಿತಾ ಎನ್.ರಾವ್ ಆಯ್ಕೆಯಾಗಿದ್ದಾರೆ.

National Youth Day ಭಾರತಕ್ಕೊಂದೇ ಅಲ್ಲ, ಇಡೀ ವಿಶ್ವಕ್ಕೇ ವಿವೇಕಾನಂದರು ಆಧ್ಯಾತ್ಮಿಕ ಗುರು : ಮಹೇಶ್ ಖಾರ್ವಿ

0

National Youth Day ಸ್ವಾಮಿ ವಿವೇಕಾನಂದರು ಭಾರತಕ್ಕೆ ಮಾತ್ರವಲ್ಲದೇ ಪ್ರಪಂಚದ ಇತರೆ ದೇಶಗಳಿಗೂ ಸಹ ಅವರ ತತ್ವಗಳು, ಬದುಕಿದ ಹಾದಿ, ಯುವ ಜನತೆಗೆ ನೀಡಿದ ಸ್ಫೂರ್ತಿಯ ಕರೆಗಳಿಂದ ಅವರು ಇಂದಿಗೂ ಎಂದೆಂದಿಗೂ ಆಧ್ಯಾತ್ಮಿಕ ಗುರು ಎಂದು ಯುವಾ ಬ್ರಿಗೇಡ್ ಜಿಲ್ಲಾ ಸಂಚಾಲಕ ಮಹೇಶ್ ಖಾರ್ವಿ ಹೇಳಿದರು.

ಸೊರಬ ಪಟ್ಟಣದ ಹೊಸಪೇಟೆ ಬಡಾವಣೆಯ ಶ್ರೀ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಯುವಾ ಬ್ರಿಗೇಡ್ ವತಿಯಿಂದ ವಿವೇಕಾನಂದ ಜಯಂತಿ ಅಂಗವಾಗಿ ನಡೆದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸ್ವಾಮಿ ವಿವೇಕಾನಂದರ ಜನ್ಮ ದಿನದಂದು ರಾಷ್ಟ್ರೀಯ ಯುವ ದಿನ ಆಚರಣೆ ಮಾಡಬೇಕು ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ವಿಶ್ವಕ್ಕೆ ಭಾರತದ ಬಗ್ಗೆ ಹೆಮ್ಮೆ ಪಡುವಂತೆ ಚಿಕಾಗೋದಲ್ಲಿ ಭಾಷಣ ಮಾಡಿದರು.

ಹಿಂದೂ ಧರ್ಮವು ಒಂದು ಶ್ರೇಷ್ಠ ಧರ್ಮ ಎಂಬ ಭಾವನೆ ಮೂಡಿಸಿದರು. ಯುವ ಸಮೂಹದ ಶಕ್ತಿ, ಸಾಮರ್ಥ್ಯದ ಬಗ್ಗೆ ವಿಶ್ವಕ್ಕೆ ಸಾರಿ ಹೇಳಿದವರಲ್ಲಿ ಸ್ವಾಮಿ ವಿವೇಕಾನಂದರು ಮೊದಲಿಗರು ಎಂದರು.

National Youth Day ಈ‌ ಸಂದರ್ಭದಲ್ಲಿ ಯುವಾ ಬ್ರಿಗೇಡ್ ತಾಲೂಕು ಸಂಚಾಲಕ ರಂಗನಾಥ ಮೊಗವೀರ್, ಪ್ರಜಾ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಮಂಜುನಾಥ ಶೆಟ್ಟಿ, ಪ್ರಮುಖರಾದ ಬಸವರಾಜ ಪಾಟೀಲ್, ಚಂದ್ರಶೇಖರ ಜೈನ್, ಲಕ್ಷ್ಮೀಶ, ಅಣ್ಣಪ್ಪ, ರಾಘು ಆಚಾರ್, ಶಿವಕುಮಾರ್, ಸಲೀಂ, ಓಂಕಾರಪ್ಪ, ಷಣ್ಮುಖ, ಮಧನ್ ಚಂದ್ರಗುತ್ತಿ, ಮಧನ್ ಕುಮಾರ್, ಚಂದು ತಾವರೆಹಳ್ಳಿ ಸೇರಿದಂತೆ ಇತರರಿದ್ದರು.

Department of School Education and Literacy ಸೊರಬ ತಾಲ್ಲೂಕಿನ ವಿವಿಧೆಡೆ ಅಭಿವೃದ್ಧಿ ಕಾಮಗಾರಿಗೆ ಸಚಿವ ಮಧು ಬಂಗಾರಪ್ಪನವರಿಂದ ಶಂಕುಸ್ಥಾಪನೆ

0

Department of School Education and Literacy ಸೊರಬ ತಾಲೂಕಿನ ತಲ್ಲೂರು ಗ್ರಾಮದ ಶ್ರೀ ಚಿರಂತಪ್ಪ ಇವರ ಮನೆಯಿಂದ ಸುಂಕಪ್ಪ ಇವರ ಮನೆವರೆಗೆ ಸುಮಾರು 20 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆಗೆ ಸನ್ಮಾನ್ಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾದ ಶ್ರೀ ಎಸ್.ಮಧು ಬಂಗಾರಪ್ಪನವರು ನೆರವೇರಿಸಿದರು.

ಇದರೊಂದಿಗೆ ಮಧು ಬಂಗಾರಪ್ಪನವರ ಮತಕ್ಷೇತ್ರ ಸೊರಬ ತಾಲೂಕಿನ ಆನವಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೋಟಿಪುರ ಸೇವಾಲಾಲ್ ದೇವಸ್ಥಾನದಿಂದ ಪಿ.ಡಬ್ಲೂ.ಡಿ ಮುಖ್ಯ ರಸ್ತೆವರೆಗೆ ಸುಮಾರು 15 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಬಾಕ್ಸ್ ಚರಂಡಿ ನಿರ್ಮಾಣದ ಕಾಮಗಾರಿಗೆ ಶಂಕುಸ್ಥಾಪನೆಯನ್ನು ಜನಪ್ರತಿನಿಧಿಗಳು ಹಾಗೂ ಮುಖಂಡರುಗಳೊಂದಿಗೆ ನೆರವೇರಿಸಿದರು.

Chennabasappa ಶಿವಮೊಗ್ಗದ 5ನೇ ವಾರ್ಡಿನಲ್ಲಿ ಜನರ ಸಮಸ್ಯೆ ಆಲಿಸಿ, ತಕ್ಷಣವೇ ಪರಿಹಾರಕ್ಕೆ ಸೂಚಿಸಿದ ಶಾಸಕ ಚೆನ್ನಿ

0

Chennabasappa ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ನಂಬರ್ 5ರ ಗುರುಪುರ ವೆಂಕಟೇಶ ನಗರಕ್ಕೆ ಬೆಳಿಗ್ಗೆ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರು ಭೇಟಿ ನೀಡಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದರು.

ಬಡಾವಣೆಯಲ್ಲಿ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ನಾಗರಿಕರು ಎದುರಿಸುತ್ತಿರುವ ಕುಡಿಯುವ ನೀರಿನ ಪೂರೈಕೆಯ ವ್ಯತ್ಯಯ ಹಾಗೂ ಚರಂಡಿ ನೈರ್ಮಲ್ಯದ ಸಮಸ್ಯೆಗಳ ಕುರಿತು ಸ್ಥಳೀಯ ನಿವಾಸಿಗಳು ಅಹವಾಲು ಸಲ್ಲಿಸಿದರು. ಈ ದೂರುಗಳಿಗೆ ತಕ್ಷಣವೇ ಸ್ಪಂದಿಸಿದ ಅವರು, ಸ್ಥಳದಲ್ಲಿದ್ದ ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಚರ್ಚಿಸಿ , ನೀರಿನ ಪೂರೈಕೆ ಸಮರ್ಪಕಗೊಳಿಸಲು ಹಾಗೂ ಸ್ವಚ್ಛತಾ ಕಾರ್ಯಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಲು ಸೂಚಿಸಿದರು.

ಭೇಟಿಯ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷರಾದ ಶ್ರೀ ಮೋಹನ್ ರೆಡ್ಡಿ, ಪ್ರಮುಖರಾದ ಶ್ರೀ ಮಲ್ಲಿಕಾರ್ಜುನ್, ಶ್ರೀ ಹರೀಶ್, ಶ್ರೀ ಆನಂದ್, ಶ್ರೀ ನಿತಿನ್, ಶ್ರೀ ಮಾಲತೇಶ್ ಸೇರಿದಂತೆ ನಮ್ಮ ಕಾರ್ಯಕರ್ತರು ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.