Saturday, February 7, 2026
Saturday, February 7, 2026
Home Blog Page 28

Madhu Bangarappa ಮಹಿಳೆಯರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡಕ್ಕೆ ಸಚಿವರಿಂದ ಸ್ಥಳ ಪರಿಶೀಲನೆ.

0

Madhu Bangarappa ರಾಜ್ಯದ ಶಾಲಾಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರು
ಶಿವಮೊಗ್ಗ ನಗರದಲ್ಲಿ ನೂತನವಾಗಿ ನಿರ್ಮಿಸಲಿರುವ “ಪ್ರಥಮ ದರ್ಜೆ ಮಹಿಳಾ ಕಾಲೇಜು” ಕಟ್ಟಡಕ್ಕೆ ಸ್ಥಳ ಪರಿಶೀಲನೆ ನಡೆಸಿದರು.

Madhu Bangarappa ಈ ವೇಳೆ ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಬಲ್ಕೀಶ್‌ ಬಾನು, ಜಿಲ್ಲಾಧ್ಯಕ್ಷರಾದ ಶ್ರೀ ಆರ್.ಪ್ರಸನ್ನ ಕುಮಾರ್, ಜಿಲ್ಲಾಧಿಕಾರಿ ಶ್ರೀ ಪ್ರಭುಲಿಂಗ ಕವಲಿಕಟ್ಟಿ, ಸಿಇಒ ಶ್ರೀ ಹೇಮಂತ್ ಕುಮಾರ್ ಸೇರಿದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Bharat Scouts and Guides ಜಿಲ್ಲಾ ಸ್ಕೌಟ್ಸ್ & ಗೈಡ್ಸ್ ಶತಮಾನೋತ್ಸವ:ಸಚಿವ ಮಧು ಬಂಗಾರಪ್ಪ ಅವರಿಂದ ಉದ್ಘಾಟನೆ

0

Bharat Scouts and Guides ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿವಮೊಗ್ಗ ಜಿಲ್ಲಾ ಸಂಸ್ಥೆ ಇವರ ಸಹಯೋಗದೊಂದಿಗೆ ಶಿವಮೊಗ್ಗ ಜಿಲ್ಲಾ ಸ್ಕೌಟ್ಸ್ ಭವನದಲ್ಲಿ ಆಯೋಜಿಸಿದ್ದ “ಶಿವಮೊಗ್ಗ ಜಿಲ್ಲಾ ಸಂಸ್ಥೆಯ ಶತಮಾನೋತ್ಸವ ಸಮಾರಂಭ ಹಾಗೂ ದಿII ಟಿ.ವಿ ನಾರಾಯಣ ಶಾಸ್ತ್ರಿಗಳ ಸ್ಮರಣಾರ್ಥವಾಗಿ ಹಮ್ಮಿಕೊಂಡಿದ್ದ “ಜಿಲ್ಲಾ ಮಟ್ಟದ ಸ್ಕೌಟ್ಸ್ – ಗೈಡ್ಸ್ ಮತ್ತು ರೋವರ್ಸ್ – ರೇಂಜರ್ಸ್ ರ್ಯಾಲಿ” ಯನ್ನು ಸಚಿವ ಮಧು ಬಂಗಾರಪ್ಪನವರು ಉದ್ಘಾಟಿಸಿದರು.

Bharat Scouts and Guides ಈ ಸಂದರ್ಭದಲ್ಲಿ ವಿಧಾನಪರಿಷತ್ ಶಾಸಕರಾದ ಶ್ರೀಮತಿ ಬಲ್ಕಿಶ್ ಬಾನು, ಮಾಜಿ ವಿಧಾನಪರಿಷತ್ ಶಾಸಕರಾದ ಶ್ರೀ ರುದ್ರೇಗೌಡ್ರು, ಮಾಜಿ ಸಚಿವರು ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಮುಖ್ಯ ಆಯುಕ್ತರಾದ ಶ್ರೀ ಪಿ.ಜಿ.ಆರ್ ಸಿಂಧ್ಯ ಸೇರಿದಂತೆ ಹಲವು ಗಣ್ಯರು ಮತ್ತು ಜಿಲ್ಲಾ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Rangayana ಶಿವಮೊಗ್ಗ ರಂಗಾಯಣದಲ್ಲಿ ಜನವರಿ 14 ರಿಂದ “ರಂಗ ಸಂಕ್ರಾಂತಿ ನಾಟಕೋತ್ಸವ” ನಾಟಕ ಪ್ರಿಯರಿಗೆ ‘ರಂಗ ಸುಗ್ಗಿ!’

0

Rangayana ರಂಗಾಯಣ, ಶಿವಮೊಗ್ಗವು ರಂಗಬೆಳಕು (ರಿ), ಶಿವಮೊಗ್ಗ ಹಾಗೂ ಕಡೆಕೊಪ್ಪಲ ಪ್ರತಿಷ್ಠಾನ (ರಿ), ಶಿವಮೊಗ್ಗ ಇವರ ಸಹಯೋಗದಲ್ಲಿ ದಿನಾಂಕ:14-01-2026 ರಿಂದ 19-01-2026 ರವರೆಗೆ ‘ರಂಗ ಸಂಕ್ರಾಂತಿ‘ ನಾಟಕೋತ್ಸವ -2026 ಎಂಬ ಹೆಸರಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದೆ. ಆರು ದಿನಗಳು ನಡೆಯಲಿರುವ ಈ ನಾಟಕೋತ್ಸವದಲ್ಲಿ ವಿವಿಧ ನಾಟಕಗಳು ಪ್ರತಿ ದಿನ ಸಂಜೆ 6.30ಕ್ಕೆ ಸುವರ್ಣ ಸಂಸ್ಕೃತಿ ಭವನ, ಅಶೋಕ ನಗರ, ಶಿವಮೊಗ್ಗದಲ್ಲಿ ಪ್ರದರ್ಶನಗೊಳ್ಳಲಿವೆ. ಟಿಕೆಟ್ ದರ ಒಂದು ನಾಟಕಕ್ಕೆ ರೂ.30/- ಎಂದು ಪ್ರಕಟಣೆ ಶಿವಮೊಗ್ಗ ರಂಗಾಯಣದ ತಿಳಿಸುತ್ತದೆ

CM Siddaramaiah ದ್ವೇಷ ಭಾಷಣ ಪ್ರತಿಬಂಧಕ ಮಸೂದೆಯನ್ನ ರಾಜ್ಯಪಾಲರು ತಿಸ್ಕರಿಸಿಲ್ಲ- ಸಿದ್ಧರಾಮಯ್ಯ.

0

CM Siddaramaiah ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಇದನ್ನು ವಾಪಸ್ಸು ಕಳಿಸಿಲ್ಲ, ತಿರಸ್ಕರಿಸಿಯೂ ಇಲ್ಲ ಅಥವಾ ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಮಸೂದೆಯ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

“ಬ್ಯಾನರ್ ತೆರವು ಬಳ್ಳಾರಿ ಘಟನೆಗೆ ಪ್ರಚೋದನೆ” ಎಂದು ಬಳ್ಳಾರಿ ಬ್ಯಾನರ್ ಪ್ರಕರಣದ ಬಗ್ಗೆಯೂ ಅನಿಸಿಕೆ ಹಂಚಿಕೊಂಡರು.

ಬಳ್ಳಾರಿಯಲ್ಲಿ ಕಾನೂನುಬಾಹಿರ ಗಣಿಗಾರಿಕೆ ಮಾಡುತ್ತಿರುವ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಮಾಡಿದಾಗ ರೆಡ್ಡಿ ಸಹೋದರರು ಹಾಗೂ ಯಡಿಯೂರಪ್ಪ ಅವರು ತಾಕತ್ತಿದ್ದರೆ ಬಳ್ಳಾರಿಗೆ ಬರುವಂತೆ ಸವಾಲು ಹಾಕಿದ್ದರು. ಅದಕ್ಕಾಗಿ ಪಾದಯಾತ್ರೆ ಕೈಗೊಳ್ಳಲಾಯಿತು. ಬಿಜೆಪಿ ಪಕ್ಷ ಪಾದಯಾತ್ರೆ ಮಾಡುವ ಅಗತ್ಯ ಏನಿದೆ?

CM Siddaramaiah ಬಳ್ಳಾರಿಯಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ ಉದ್ಘಾಟನೆ ಬಗ್ಗೆ ಹಾಕಿದ್ದ ಬ್ಯಾನರನ್ನು ತೆಗೆಯಬೇಕಾದ ಅಗತ್ಯವೇನಿತ್ತು? ಅದನ್ನು ತೆಗೆದದ್ದೆ ಘಟನೆಗೆ ಕಾರಣವಾಯಿತು. ಜನಾರ್ದನ ರೆಡ್ಡಿ, ಶ್ರೀರಾಮುಲು ಅವರು ಸ್ಥಾನ ಕಳೆದುಕೊಂಡಿದ್ದರ ಮೇಲಿನ ಅಸೂಯೆಯಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳು ನುಡಿದರು.

Shimoga News ಕಳೆದುಕೊಂಡ ಮೊಬೈಲ್ . ಪತ್ತೆ ಮಾಡಿ ವಾರಸುದಾರರಿಗೆ ನೀಡಿದ ಪೊಲೀಸ್ ಇಲಾಖೆ.

0

Shimoga News ಮೊಬೈಲ್ ಕಳೆದಾಕ್ಷಣ ಪೊಲೀಸ್ ಠಾಣೆಗೆ ದೂರು ಕೊಡಬೇಕು. ಆದರೆ ಕಳೆದ ಮೊಬೈಲ್ ಸಿಕ್ಕಿತೆ? ಎಂಬ ಪ್ರಶ್ನೆ ಸಹಜ. ಅದಕ್ಕೆ ಉತ್ತರ ಮಾಳೂರು ಪೊಲೀಸ್ ಠಾಣೆಯಲ್ಲಿ ದೊರೆತಿದೆ .
ದಿನಾಂಕ: 11-01-2026 ರಂದು ಸಾರ್ವಜನಿಕರು ಕಳೆದುಕೊಂಡಿದ್ದ ಮೊಬೈಲ್ ಫೋನ್ ಅನ್ನು ಮಾಳೂರು ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಗಳು CEIR ಪೋರ್ಟಲ್ ನ ಮೂಲಕ ಪತ್ತೆ ಮಾಡಿರುತ್ತಾರೆ.
ನಂತರ ಸದರಿ ಮೊಬೈಲ್ ಫೋನ್ ಅನ್ನು ವಾರಸುದಾರರಿಗೆ ವಾಪಸ್ ನೀಡಿರುತ್ತಾರೆ.

Bharat Scouts and Guides ಪೃಥ್ವಿ ಗಿರಿಮಾಜಿ,ರೇಣುಕಯ್ಯ ಅವರಿಗೆ ರೋವರ್ ವಿಭಾಗ ಮತ್ತು ಸುಶ್ಮಿತಾ ಗೆ ಗೈಡ್ ವಿಭಾಗದಲ್ಲಿ ರಾಷ್ಟ್ರಪತಿ ಪ್ರಶಸ್ತಿ ಪ್ರದಾನ

0

Bharat Scouts and Guides ಬೆಳಗಾವಿಯಲ್ಲಿ ಏರ್ಪಡಿಸಿದ್ದ ಜಾಂಬುರೇಟ್ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ಗಳಿಗೆ ಪಿಜಿಆರ್ ಸಿಂಧ್ಯಾ ಅವರು ರಾಷ್ಟ್ರಪತಿ ಪುರಸ್ಕಾರ ಪ್ರಶಸ್ತಿ ಪತ್ರವನ್ನು ನೀಡಿ ಅಭಿನಂದಿಸಿದರು.

ಮಲ್ನಾಡ್ ಓಪನ್ ಗ್ರೂಪ್ ವತಿಯಿಂದ ಲೀಡರ್ ಟ್ರೈನರ್ ಎ.ವಿ.ರಾಜೇಶ್ ಅವರ ಮಾರ್ಗದರ್ಶನದಲ್ಲಿ ರೋವರ್ ವಿಭಾಗದ ಪೃಥ್ವಿ ಗಿರಿಮಾಜಿ, ರೇಣುಕಯ್ಯ, ಗೈಡ್ ವಿಭಾಗದಲ್ಲಿ ಸುಶ್ಮಿತಾ ರಾಷ್ಟ್ರಪತಿ ಪುರಸ್ಕಾರ ಪ್ರಶಸ್ತಿ ಪತ್ರ ಪಡೆದಿದ್ದಾರೆ. ಸಿಹಿಮೊಗೆ ಓಪನ್ ಗ್ರೂಪ್ ವತಿಯಿಂದ ಲೀಡರ್ ಟ್ರೈನರ್ ಗೈಡ್ ಕಾತ್ಯಾಯಿನಿ ಅವರ ಮಾರ್ಗದರ್ಶನದಲ್ಲಿ ಗೈಡ್ ಅಲ್ಮಾಜ್ ಮತ್ತು ಎ.ಸಿಂಚನಾ ಅವರು ಪ್ರಶಸ್ತಿ ಪತ್ರ ಪಡೆದಿದ್ದಾರೆ.

ಪ್ರಶಸ್ತಿ ಪತ್ರ ಪುರಸ್ಕೃತರಿಗೆ ಜಿಲ್ಲಾ ಸಂಸ್ಥೆ ವತಿಯಿಂದ ಅಭಿನಂದಿಸಲಾಯಿತು. ಸ್ಕೌಟ್ಸ್ ಮತ್ತು ಗೈಡ್ಸ್ ನ ಪ್ರತಿಷ್ಠಿತ ಉನ್ನತ ಪ್ರಶಸ್ತಿ ಪಡೆದ ಮಕ್ಕಳಿಗೆ ಸನ್ಮಾನಿಸಲಾಯಿತು. ಪ್ರಶಸ್ತಿ ಪತ್ರವು ರಾಷ್ಟ್ರಪತಿ ದ್ರೌಪದಿ ಮುರ್ಮು ಸಹಿ ಮಾಡಿರುತ್ತಾರೆ.

Bharat Scouts and Guides ಇದೇ ಸಂದರ್ಭದಲ್ಲಿ ನಾಯಕಿ ತರಬೇತಿ ಪಡೆದಿರುವ ಹೇಮಲತಾ ಅವರನ್ನು ಸನ್ಮಾನಿಸಲಾಯಿತು. ಪಿಜಿಆರ್ ಸಿಂಧ್ಯಾ ಅವರು ಶಿವಮೊಗ್ಗ ದಿನವನ್ನು ಉದ್ಘಾಟಿಸಿ ಜಿಲ್ಲೆಯ ಬಗ್ಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್, ಆಯುಕ್ತ ಎಸ್.ಜಿ.ಆನಂದ್, ಪ್ರಧಾನ ಆಯುಕ್ತೆ ಶಕುಂತಲಾ ಚಂದ್ರಶೇಖರ್, ಗೈಡ್ ಆಯುಕ್ತೆ ಲಕ್ಷ್ಮೀ ಕೆ.ರವಿ, ಮಲ್ಲಿಕಾರ್ಜುನ ಕಾನೂರು, ಹೇಮಲತಾ, ಚೂಡಾಮಣಿ ಪವಾರ್, ಸುಮನ್ ಶೇಖರ್, ಕೆ.ರವಿ, ಶಿವಶಂಕರ್ ಮತ್ತಿತರರು ಇದ್ದರು.

Madhu Bangarappa ಇನ್ಮುಂದೆ ಹೊಳೆಹೊನ್ನೂರು, ಶಿಕಾರಿಪುರ ಆನವಟ್ಟಿಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸುವ ಪ್ರಸ್ತಾವನೆ – ಮಧು ಬಂಗಾರಪ್ಪ.

0

Madhu Bangarappa ಹಸಿವು ಮುಕ್ತ ಕರ್ನಾಟಕ ನಿರ್ಮಾಣ, ಬಡವರು ಮತ್ತು ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದಲ್ಲಿ ಆಹಾರ ನೀಡುವುದು. ನಗರ ಪ್ರದೇಶದ ಬಡವರಿಗೆ ಸಮತೋಲಿತ ಆಹಾರವನ್ನು ಒದಗಿಸುವ ಸದುದ್ದೇಶದಿಂದ ಆಡಳಿತಾರೂಢ ಸರ್ಕಾರವು ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಇಂದಿರಾ ಕ್ಯಾಂಟೀನ್‌ ವ್ಯವಸ್ಥೆಯನ್ನು ರೂಪಿಸಿ ಅನುಷ್ಟಾನಗೊಳಿಸಿದ್ದು, ದಿನನಿತ್ಯ ಸಹಸ್ರಾರು ಸಂಖ್ಯೆಯ ಜನಸಾಮಾನ್ಯರಿಗೆ ಅತಿ ಕಡಿಮೆ ದರದಲ್ಲಿ ಉತ್ತಮ ಊಟೋಪಹಾರ ಒದಗಿಸಲಾಗುತ್ತಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ಹೇಳಿದರು.

ಅವರು ವಿದ್ಯಾನಗರ ಮತ್ತು ಗುತ್ಯಪ್ಪ ಕಾಲೋನಿಗಳಲ್ಲಿ ನೂತನವಾಗಿ ಆರಂಭಿಸಲಾಗಿರುವ ಇಂದಿರಾ ಕ್ಯಾಂಟೀನ್‌ಗಳನ್ನು ಲೋಕಾರ್ಪಣೆಗೊಳಿಸಿದ ನಂತರ ಏರ್ಪಡಿಸಿದ್ದ ಸರಳ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸದರಿ ಯೋಜನೆಯು ಮಾದರಿ ಯೋಜನೆಯಾಗಿದ್ದು, ಇತ್ತೀಚೆಗೆ ಮತ್ತಷ್ಟು ಹೊಸ ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಲು ಮಂಜೂರಾತಿ ನೀಡಿದೆ ಎಂದರು.

ಈಗಾಗಲೇ ಜಿಲ್ಲೆಯಲ್ಲಿ 12 ಇಂದಿರಾ ಕ್ಯಾಂಟೀನ್‌ಗಳು ಸಾರ್ವಜನಿಕ ಸೇವೆಗೆ ಮುಕ್ತವಾಗಿವೆ. ಹೊಳೆಹೊನ್ನೂರು, ಶಿಕಾರಿಪುರ ಮತ್ತು ಆನವಟ್ಟಿ ಕೇಂದ್ರಗಳಲ್ಲಿಯೂ ಶೀಘ್ರದಲ್ಲಿ ಆರಂಭಿಸಲು ದಿನಾಂಕ ನಿಗಧಿಪಡಿಸಲಾಗುವುದು. ಅಲ್ಲದೇ ನಗರದ ಜನನಿಬಿಡ ಸ್ಥಳಗಳಿದ್ದಲ್ಲಿ ಅವುಗಳನ್ನು ಗುರುತಿಸಿ, ವಿಳಂಬಕ್ಕೆ ಅವಕಾಶವಿಲ್ಲದಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದಲ್ಲಿ ಅವುಗಳನ್ನು ಹಂತಹಂತವಾಗಿ ಆರಂಭಿಸಲು ವಿಶೇಷ ಗಮನಹರಿಸಲಾಗುವುದು ಎಂದರು.

ಈ ಯೋಜನೆಯ ಸಮರ್ಪಕ ಅನುಷ್ಟಾನದಿಂದಾಗಿ ಹಸಿದ ಒಡಲಿಗೆ ಅನ್ನ ದೊರೆತು ಅನೇಕ ಜನರ ಹಸಿವು ನೀಗಲಿದೆ. ಅಲ್ಲದೇ ಆರ್ಥಿಕವಾಗಿ ಹಿಂದುಳಿದವರಿಗೆ ಅನುಕೂಲವಾಗಲಿದೆ. ಇಂದಿರಾ ಕ್ಯಾಂಟೀನ್‌ಗಳಲ್ಲಿ ಸಾರ್ವಜನಿಕರಿಗೆ ವಿತರಿಸಲಾಗುವ ಆಹಾರ ಗುಣಮಟ್ಟದ್ದಾಗಿರುವಂತೆ ನೋಡಿಕೊಳ್ಳಬೇಕು. ನಗರದ ಮೆಗ್ಗಾನ್‌ ಆಸ್ಪತ್ರೆಗೆ ಪ್ರತಿದಿನ ಸಹಸ್ರಾರು ಸಂಖ್ಯೆಯ ಜನರು ಚಿಕಿತ್ಸೆಗಾಗಿ ಆಗಮಿಸುತ್ತಿದ್ದು, ಅವರಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಆಹಾರ ದೊರೆತಲ್ಲಿ ಅನುಕೂಲವಾಗಲಿದೆ.

ಇದರಿಂದಾಗಿ ಸರ್ಕಾರಕ್ಕೆ ಒಳ್ಳೆಯ ಹೆಸರು ಬರಲಿದೆ ಎಂದರು.

Madhu Bangarappa ನಗರದ ಬಿ.ಹೆಚ್. ರಸ್ತೆಯಲ್ಲಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಆರಂಭಿಸಲು ಹಾಗೂ ಸೈನ್ಸ್‌ ಕಾಲೇಜಿನ ವಿಶಾಲ ಪ್ರದೇಶದಲ್ಲಿ ಕೆ.ಪಿ.ಎಸ್. ಶಾಲೆಯನ್ನು ಆರಂಭಿಸಲು ಅಗತ್ಯವಿರುವ ಭೂಮಿಯನ್ನು ಪರಿಶೀಲಿಸಿದರು. ಇವುಗಳ ನಿರ್ಮಾಣಕ್ಕೆ ಹಣಕಾಸಿನ ಯಾವುದೆ ಅಡಚಣೆ ಇಲ್ಲ. ನೂತನ ಕಟ್ಟಡಗಳು ಹಾಗೂ ಅನೇಕ ಜನೋಪಯೋಗಿ ಕಾರ್ಯಕ್ರಮಗಳ ಉದ್ಘಾಟನೆಗೆ ಶೀಘ್ರದಲ್ಲಿ ಮಾನ್ಯ ಮುಖ್ಯಮಂತ್ರಿಗಳನ್ನು ಆಹ್ವಾನಿಸಿ ಕಾರ್ಯಕ್ರಮ ನಡೆಸುವ ಉದ್ದೇಶ ಹೊಂದಿರುವುದಾಗಿ ಅವರು ನುಡಿದರು.

ಮಕ್ಕಳಿಗೆ ಶಿಕ್ಷಣ ನೀಡುವುದು ಇಂದಿನ ತುರ್ತು ಅಗತ್ಯ ಕಾರ್ಯಕ್ರಮಗಳಲ್ಲಿ ಪ್ರಧಾನವಾದುದ್ದಾಗಿದೆ. ಶಿಕ್ಷಣ ನೀಡುವುದರಿಂದಾಗಿ ದೇಶದ ಪ್ರಗತಿ ಹಾಗೂ ಮುಂಚೂಣಿ ದೇಶಗಳಲ್ಲಿ ಗುರುತಿಸಲು ಸಾಧ್ಯವಾಗಲಿದೆ. ಎಲ್ಲರಿಗೂ ಸಮಾನತೆಯ ಶಿಕ್ಷಣ ನೀಡುವುದು ಸರ್ಕಾರದ ಪ್ರಮುಖ ಆಶಯವಾಗಿದೆ. ಪ್ರಸಕ್ತ ಸಾಲಿನಲ್ಲಿ ನೂತನವಾಗಿ 50ಪದವಿಪೂರ್ವ ಕಾಲೇಜುಗಳನ್ನು ಆರಂಭಿಸಲು ಸರ್ಕಾರ ಈಗಾಗಲೇ ಮಂಜೂರಾತಿ ನೀಡಿದೆ. ಕಳೆದ ಸಾಲಿನಲ್ಲಿ 173 ಪ್ರೌಢಶಾಲೆಗಳನ್ನು ಆರಂಭಿಸಲು ಅನುಮತಿ ನೀಡಿತ್ತು ಎಂದವರು ನುಡಿದರು.

ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ವಿವಿಧ ಕೊಳಚೆ ಪ್ರದೇಶಗಳಲ್ಲಿನ ಅರ್ಹ ಬಡ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಈಗಾಗಲೇ ಸೂಚಿಸಲಾಗಿದೆ. ಶೀಘ್ರದಲ್ಲಿ ನಗರದ 2000ಜನರಿಗೆ ಹಕ್ಕುಪತ್ರ ವಿತರಿಸಲು ಕಾರ್ಯಕ್ರಮ ರೂಪಿಸಲಾಗುವುದು. ಇದನ್ನು ಒಳಗೊಂಡಂತೆ ಸುಮಾರು 12000ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿದಂತಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಧಾನಪರಿಷತ್‌ ಸದಸ್ಯೆ ಶ್ರೀಮತಿ ಬಲ್ಕೀಸ್‌ ಬಾನು ಅವರು ಮಾತನಾಡಿ, ಈ ಸಾಮಾಜಿಕ ವ್ಯವಸ್ಥೆಯಲ್ಲಿ ಯಾರೊಬ್ಬರೂ ಹಸಿವಿನಿಂದ ಬಳಲುವಂತಾಗಬಾರದು ಎಂಬ ಉದ್ದೇಶದಿಂದ ಮಾನ್ಯ ಮುಖ್ಯಮಂತ್ರಿಗಳು ಕಾರ್ಮಿಕರು, ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಅರ್ಥಪೂರ್ಣವಾದ ಕಾರ್ಯಕ್ರಮವನ್ನು ರೂಪಿಸಿ ಅನುಷ್ಟಾನಗೊಳಿಸಿರುವುದು ಸಹಜವಾಗಿ ಎಲ್ಲರಲ್ಲೂ ಹರ್ಷವೆನಿಸಿದೆ ಎಂದರು.

ಮುಂದಿನ 15ದಿನಗಳೊಳಗಾಗಿ ಉಳಿದ ಇಂದಿರಾ ಕ್ಯಾಂಟೀನ್‌ಗಳನ್ನು ಲೋಕಾರ್ಪಣೆಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಜನಸಾಮಾನ್ಯರು ಈ ಕ್ಯಾಂಟೀನಿನ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ನಿಖಿಲ್‌, ಅಪರ ಜಿಲ್ಲಾಧಿಕಾರಿ ಅಭಿಷೇಕ್‌ ವಿ., ಮಹಾನಗರಪಾಲಿಕೆ ಆಯುಕ್ತ ಮಾಯಣ್ಣಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಚಂದ್ರಭೂಪಾಲ, ಮುಖಂಡರಾದ ಪ್ರಸನ್ನಕುಮಾರ್‌, ಕಲಗೋಡು ರತ್ನಾಕರ ಮತ್ತಿತರರು ಉಪಸ್ಥಿತರಿದ್ದರು.

Shimoga News ಪರಿಸರ ನಾಶದ ವ್ಯಥೆಯೊಂದೇ ಅಲ್ಲ ಪರಿಸರ ಪ್ರೀತಿ ಕವಿತೆಯ ವಸ್ತುವಾಗಬೇಕು- ಡಾ.ಕೃಷ್ಣ ,ಎಸ್.ಭಟ್.

0

Shimoga News ಪರಿಸರ ನಾಸದ ಇಂದು ಅವ್ಯಾಹತ ನಡೆದಿದೆ. ವಾತಾವರಣ ಮಾಲಿನ್ಯದಿಂದಾಗಿ ನಿಸರ್ಗದ ನಿನಾದ ನಮ್ಮ ಕಿವಿಗಳಿಗೆ ಬೀಳುತ್ತಿಲ್ಲ. ಅಷ್ಟು ಭೀಕರ ಶಬ್ದ ಮಾಲಿನ್ಯವೂ ಆಗಿದೆ.
ಸಂಗೀತದ ಸಪ್ತಸ್ವರಗಳನ್ನ. ಮನುಷ್ಯ ನಿಸರ್ಗದ ಸೃಷ್ಟಿಯ ಪ್ರಾಣಿಪಕ್ಷಿಗಳಿಂದಲೇ ಆಯ್ಕೆ ಮಾಡಿದ. ಆದರೆ ಇಂದು ಅಂತಹ ನಿಸರ್ಗದ ಮೇಲೆ ಮನುಷ್ಯನ ಅತ್ಯಾಚಾರ ನಡೆದಿದೆ. ಇದು ವಿಷಾದನೀಯ ಎಂದು
ಡಾ.ಬಿ.ಸಿ.ರಾಯ್ ಪ್ರಶಸ್ತಿ ಪುರಸ್ಕೃತ
ಹಿರಿಯ ವೈದ್ಯಕೀಯ ಬರಹಗಾರ ಡಾ.ಕೃಷ್ಣ ಎಸ್ ಭಟ್ ಅಭಿಪ್ರಾಯ ಪಟ್ಟಿದ್ದಾರೆ.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಜನವರಿ 10 ರ ಶನಿವಾರ ಏರ್ಪಡಿಸಿದ್ದ
“ಪರಿಸರ ಪ್ರೀತಿ” ಕುರಿತ
ಕವಿಗೋಷ್ಠಿಯನ್ನ ಉದ್ಘಾಟಿಸಿ ಮಾತನಾಡುತ್ತಿದ್ದರು.
ಭಾರತೀಯ ಕವಿ ಕಾಳಿದಾಸನೇ ಜಗತ್ತಿನ ಶ್ರೇಷ್ಠಕವಿ. ಅಂತಹ ದೈತ್ಯ ಪ್ರತಿಭೆಯನ್ನ ಶೇಕ್ಸ್ಪಿಯರ್ ಗೆ ಹೋಲಿಸಿ ಹೇಳುವುದು
ಸರಿತೋರುವುದಿಲ್ಲ.
ಪಾಶ್ಚಾತ್ಯ ವಿಮರ್ಶಕರು
ಭಾರತೀಯ ಯುವ ಪೀಳಿಗೆಗೆ ಕವಿ ಕಾಳಿದಾಸ ಮತ್ತು ಪುನರ್ಜನ್ಮ ದ ಬಗ್ಗೆ ಮನವರಿಕೆ ಮಾಡಿಕೊಟ್ಟರೆ ಸಾಕು ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿವರ್ತನೆ ಸಹಜವಾಗಿಯೇ ಆಗುತ್ತದೆ ಎಂದು ಹೇಳೀದ್ದಾರೆ. ಇಂತಹ ಅಮೂಲ್ಯ ಕವಿಗಳ ಪರಂಪರೆಯೇ ನಮ್ಮಲ್ಲಿದೆ.ಅವರೆಲ್ಲರ ಪ್ರಾತಿನಿಧಿಕ ಅರಿವನ್ನ ಇಂದು ಉಂಟು ಮಾಡಬೇಕಿದೆ ಎಂದು ಡಾ.ಕೃಷ್ಣಭಟ್ ಹೇಳಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಈ ದಿಸೆಯಲ್ಲಿ ಭಾರತೀಯ ಸಾಹಿತ್ಯ,ಸಾಂಸ್ಕೃತಿಕ ಪರಂಪರೆಗಳ ಬಗ್ಗೆ ವಿವಿಧ ಚಟುವಟಿಕೆ ಹಮ್ಮಿಕೊಂಡಿರುವುದು
ಶ್ಲಾಘನೀಯ ಎಂದು ಹೇಳಿದರು.
Shimoga News ಶಿವಮೊಗ್ಗದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಶಾಖೆಯು
ಭಾರತೀಯ ತಮ್ಮತನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನ ಆಯೋಜನೆ ಮಾಡಿದೆ. ಅದಕ್ಕೆ ಎಲಗಲರ ಪ್ರೋತ್ಸಾಹ ,ಸಹಕಾರಮತ್ತು ಸಕ್ರೀಯ ಭಾಗವಹಿಸುವಿಕೆಯೂ ಬೇಕಿದೆ ಎಂದರು ಅಭಾಸಾಪ ವಿಭಾಗೀಯ ಸಂಚಾಲಕ ಜಿ.ಹರ್ಷ ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಸಂಪೂರ್ಣ ಸಾಮಾಜಿಕ,ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನ ಯುವ ಪೀಳಿಗೆಗೆ ನೆನಪಿಸುವ ಚಟುವಟಿಕೆಗಳು ನಡೆಯುತ್ತಿವೆ. ಅಭಿವ್ಯಕ್ತಿಗೆ ಪರಿಷತ್ತಿನ ಬಾಗಿಲು ಸದಾ ತೆರೆದಿದೆ.
ಕವಿಗೋಷ್ಠಿಯಲ್ಲಿ ಛಂದೋಬದ್ಧ ಕವಿತೆ ರಚಿಸಿ ಪ್ರಸ್ತುತಪಡಿಸಿದ
ಕೆಲವು ಕವಿಯತ್ರಿಯರ ಪ್ರಯತ್ನ ಸ್ವಾಗತಾರ್ಹ.
ಗೋಷ್ಠಿಯಲ್ಲಿನ ಕವಿತೆಗಳು ವಸ್ತುವಿನ ದೃಷ್ಟಿಯಿಂದ ಮೆಲುಕು ಹಾಕುವಂತಿವೆ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ
ಅಭಾಸಾಪ ಅಧ್ಯಕ್ಷ ಡಾ.ಸುಧೀಂದ್ರ ಅವರು ಹೇಳಿದರು.
ಶೋತೃಗಳ ಪರವಾಗಿ ಉದ್ಯಮಿ ರಮೇಶ್ ಹೆಗಡೆ ಮಾತನಾಡಿ‌ ಭಾರತೀಯರಲ್ಲಿ ಅರ್ಥಶಾಸ್ತ್ರ, ಖಗೋಳ
ಗಣಿತ ಮುಂತಾದ ಕ್ಷೇತ್ರಗಳ ಪರಣಿತರು ಇದ್ದಾರೆ. ಅವರೆಲ್ಲರ ಬಗ್ಗೆ ನಮಗೆ ಹೆಮ್ಮೆ ಇರಬೇಕು ಎಂದರು.
ಹಿರಿಯ ಚಿಂತಕ ಮತ್ತು ಪರಿಸರವಾದಿ ಲಕ್ಷ್ಮೀನಾರಾಯಣ ಕಾಶಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕವಿಗೋಷ್ಠಿಯಲ್ಲಿ ಪುಟ್ಟಮ್ಮ ಶಿವಾನಿ, ಹಾಲಪ್ಪ. ಆರ್.ಕುಮಾರ್, ನಂದಾ ಪ್ರೇಮ್ ಕುಮಾರಿ, ಮಹಾಲಿಂಗಂ , ನರೇಂದ್ರ ಘೋರ್ಪಡೆ, ಸುಮನಾ ಮಂಜುನಾಥ್, ಮುಂತಾದವರು ಕವಿತಾವಾಚನ ಮಾಡಿದರು. ಡಾ.ಮುಕಂದ್ ನಿರೂಪಿಸಿದರು. ಜಯಶ್ರೀ ಗಣೇಶ್ ಪ್ರಾರ್ಥಿಸಿದರು.
ಸಹಕಾರ್ಯದರ್ಶಿ ಶಾಲಿನಿ‌ ಅಜಿತ್ ವಂದಿಸಿದರು.

Shimoga News ಜಿಲ್ಲೆಯ ಕೈಗಾರಿಕಾ ಕ್ಷೇತ್ರಕ್ಕೆ ಎಸ್.ರುದ್ರೇಗೌಡರ ಕೊಡುಗೆ ಅಪಾರ- ಡಿ.ಜಿ.ಬೆನಕಪ್ಪ.

0

Shimoga News ಶಿವಮೊಗ್ಗ ಜಿಲ್ಲೆಯ ಕೈಗಾರಿಕಾ ಕ್ಷೇತ್ರಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡರ ಕೊಡುಗೆ ಅಪಾರ ಎಂದು ಶಿವಮೊಗ್ಗ-ಭದ್ರಾವತಿ ಕೈಗಾರಿಕೆಗಳ ಸಂಘದ ಅಧ್ಯಕ್ಷ ಡಿ.ಜಿ.ಬೆನಕಪ್ಪ ಹೇಳಿದರು.

ಶಾಂತಲಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಸ್.ರುದ್ರೇಗೌಡ ಹಾಗೂ ಮಲ್ನಾಡ್ ಅಲಾಯ್ಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ವೈ.ವಿ.ಮಧುಕರ ಜೋಯ್ಸ್ ಅವರ ಜನ್ಮದಿನದ ಪ್ರಯುಕ್ತ ಶಿವಮೊಗ್ಗ-ಭದ್ರಾವತಿ ಕೈಗಾರಿಕೆಗಳ ಸಂಘ ಮಾಚೇನಹಳ್ಳಿಯಲ್ಲಿ ರೆಡ್ ಕ್ರಾಸ್ ಸಂಜೀವಿನಿ ರಕ್ತನಿಧಿ, ಶಿವಮೊಗ್ಗ ಮಿಡ್ ಟೌನ್ ರೋಟರಿ ರಕ್ತನಿಧಿ ಹಾಗೂ ಸುಬ್ಬಯ್ಯ ಆಸ್ಪತ್ರೆ ರಕ್ತನಿಧಿ ಸಹಕಾರದೊಂದಿಗೆ ಆಯೋಜಿಸಿದ್ದ “ಸ್ವಯಂ ಪ್ರೇರಿತ ರಕ್ತ ದಾನ ಶಿಬಿರ”ದಲ್ಲಿ ಮಾತನಾಡಿದರು.

ಎಸ್.ರುದ್ರೇಗೌಡ ಹಾಗೂ ಮಧುಕರ್ ಜೋಯಿಸ್ ಅವರು ದಾನಿಗಳು ಹಾಗೂ ಕೈಗಾರಿಕಾ ಉದ್ಯಮಿಗಳಾಗಿದ್ದಾರೆ. ಸಾಕಷ್ಟು ಜನರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.

Shimoga News ನಮ್ಮ ವೃತ್ತಿಯ ಜೊತೆಗೆ ಸಮಾಜ ಸೇವೆಯು ಅತಿ ಮುಖ್ಯ. ವಿಶೇಷ ದಿನಗಳಂದು ರಕ್ತದಾನ ಶಿಬಿರ ಆಯೋಜಿಸುವುದರಿಂದ ಸಾಕಷ್ಟು ಅನುಕೂಲವಾಗುತ್ತದೆ. ತುರ್ತು ಸಂದರ್ಭದಲ್ಲಿ ಇರುವವರಿಗೆ ರಕ್ತ ದೊರೆಯಲು ಸಹಕಾರಿಯಾಗುತ್ತದೆ. ರಕ್ತದಾನ ಮಾಡುವುದರಿಂದ ನಮ್ಮ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ ಸದಾ ಆರೋಗ್ಯದಿಂದ ಇರುತ್ತೇವೆ. ಇನ್ನೊಬ್ಬರ ಪ್ರಾಣ ಉಳಿಸಿದ ತೃಪ್ತಿ ಸಿಗುತ್ತದೆ ಎಂದು ತಿಳಿಸಿದರು.

ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದ ಎಲ್ಲಾ ಕೈಗಾರಿಕೆಗಳ ಮಾಲೀಕರು, ಅಧಿಕಾರಿ ಹಾಗೂ ಕಾರ್ಮಿಕ ವರ್ಗ ಪಾಲ್ಗೊಂಡರು. ಒಟ್ಟು ರಕ್ತದ 165 ಯೂನಿಟ್ ಸಂಗ್ರಹವಾಯಿತು. ಚಂದ್ರಶೇಖರ್, ರಾಜೇಶ್, ದಿನೇಶ್, ಸೌರಭ್, ಮಹೇಂದ್ರಪ್ಪ, ಹರ್ಷ, ವಿನಯ್, ಮತ್ತಿತರರು ಇದ್ದರು.

Dr. Raj Award ಜೀವಮಾನ ಸಾಧನೆಗಾಗಿ ಡಾ.ಜಯಮಾಲಾ,ಸಾ.ರಾ.ಗೋವಿಂದು ಅವರಿಗೆ ಡಾ.ರಾಜ್ ಪ್ರಶಸ್ತಿ

0

Dr. Raj Award ಕರ್ನಾಟಕ ಸರ್ಕಾರವು ಚಲನಚಿತ್ರ ರಂಗದಲ್ಲಿನ ಜೀವಮಾನ ಸಾಧನೆಗಾಗಿ ನೀಡುವ ಡಾ.ರಾಜಕುಮಾರ್, ಪುಟ್ಟಣ್ಣ ಕಣಗಾಲ್ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಗಳನ್ನು ಪ್ರಕಟಿಸಿದೆ.

2020 ಹಾಗೂ 2021 ನೇ ಕ್ಯಾಲೆಂಡರ್ ವರ್ಷಗಳ ಪ್ರಶಸ್ತಿಗಳು ಇವುಗಳಾಗಿವೆ.

ಹಿರಿಯ ನಟಿ ಡಾ.ಜಯಮಾಲಾ, ಸಾ.ರಾ.ಗೋವಿಂದು ಅವರಿಗೆ ಡಾ.ರಾಜ್‍ಪ್ರಶಸ್ತಿ, ಎಂ.ಎಸ್.ಸತ್ಯು, ಕೆ.ಶಿವರುದ್ರಯ್ಯ ಅವರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ಹಿರಿಯ ಸಿನಿಮಾ ಛಾಯಾಗ್ರಾಹಕ ಪ್ರಗತಿ ಅಶ್ವತ್ಥನಾರಾಯಣ, ಎಂ.ಕೆ.ಸುಂದರರಾಜ್ ಅವರು ಡಾ.ವಿಷ್ಣುವರ್ಧನ್ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ. ನಿಂಬಾಳ್ಕರ್ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, 2020 ಹಾಗೂ 2021 ರ ಜೀವಮಾನ ಸಾಧನೆ ಪ್ರಶಸ್ತಿಗಳ ಆಯ್ಕೆಗೆ ಹಿರಿಯ ಸಾಹಿತಿ, ಚಲನಚಿತ್ರ ನಿರ್ದೇಶಕ ಪ್ರೊ. ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿಯಲ್ಲಿ, ಹಿರಿಯ ಸಿನೆಮಾಟೋಗ್ರಾಫರ್ ಬಿ.ಎಸ್.ಬಸವರಾಜ, ಹಿರಿಯ ಪತ್ರಕರ್ತ ರಘುನಾಥ ಚ.ಹ., ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶಕಿ ಗಾಯತ್ರಿ ಹಾಗೂ ವಾರ್ತಾ ಇಲಾಖೆಯ ಆಯುಕ್ತರು ಸದಸ್ಯರಾಗಿದ್ದರು, ಸಮಿತಿಯು ವಿಸ್ತøತವಾಗಿ ಚರ್ಚಿಸಿದ ಬಳಿಕ ಸರ್ಕಾರಕ್ಕೆ ಕಳುಹಿಸಿದ್ದ ಸಲಹೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅನುಮೋದನೆ ನೀಡಿದ ಬಳಿಕ ಸರ್ಕಾರದ ಆದೇಶ ಪ್ರಕಟಿಸಲಾಗಿದೆ.

ಈ ಪ್ರಶಸ್ತಿಗಳು ತಲಾ 50 ಗ್ರಾಂ ಚಿನ್ನದ ಪದಕ ಹಾಗೂ ತಲಾ 5 ಲಕ್ಷ ರೂ.ಗಳ ನಗದು ಪುರಸ್ಕಾರ ಒಳಗೊಂಡಿದೆ.

ಪ್ರಶಸ್ತಿ ಪುರಸ್ಕøತರ ಪರಿಚಯ:
ಡಾ.ಜಯಮಾಲಾ- 2020 ರ ಡಾ.ರಾಜಕುಮಾರ್ ಪ್ರಶಸ್ತಿ;

ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ನಾಯಕ ನಟಿ ಜಯಮಾಲಾ. ಪಣಂಬೂರಿನಲ್ಲಿ 1959ರ ಫೆಬ್ರವರಿ 28ರಂದು ಜನಿಸಿದರು. ತಂದೆ ಓಮಯ್ಯ, ತಾಯಿ ಕಮಲಮ್ಮ. ಅವರ ಹಿರಿಯ ಸಹೋದರಿ ರತ್ನಮಾಲಾ ಗಾಯಕ ಮತ್ತು ನಟಿ. ಕಾಲಾನಂತರ ಜಯಮಾಲಾ ಅವರ ತಂದೆ ಚಿಕ್ಕಮಗಳೂರಿಗೆ ವಲಸೆ ಬಂದು ನೆಲೆಸಿದರು. ಪ್ರವೃತ್ತಿಯಲ್ಲಿ ಓಮಯ್ಯ ಯಕ್ಷಗಾನ ಕಲಾವಿದ. ಮನೆಯಲ್ಲಿನ ಕಲೆಯ ವಾತಾವರಣ ಜಯಮಾಲಾ ಅವರಿಗೆ ನಟನೆಯೆಡೆಗಿನ ಆಸಕ್ತಿಗೆ ಪ್ರೇರಣೆಯಾಯಿತು. ಸಂಗೀತದಲ್ಲೂ ಅಪಾರ ಆಸಕ್ತಿ ಇದ್ದ ಜಯಮಾಲಾ ಶಾಲೆ – ಕಾಲೇಜಿನಲ್ಲಿ ಹಾಡುಗಾರಿಕೆಯಿಂದ ಗುರುತಿಸಿಕೊಂಡಿದ್ದರು.

ಮುಂದೆ ತಂದೆ ಅನಾರೋಗ್ಯಕ್ಕೀಡಾದಾಗ ಜಯಮಾಲಾ ಅವರಿಗೆ ದುಡಿಯಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಅಕ್ಕ ರತ್ನಮಾಲಾ ಜೊತೆ ಜಯಮಾಲಾ ಕೂಡ ನಾಟಕಗಳಲ್ಲಿ ಅಭಿನಯಿಸತೊಡಗಿದರು. ‘ಗೀತಾರಹಸ್ಯ’ ನಾಟಕ ಜಯಮಾಲಾ ಅವರಿಗೆ ಹೆಸರು ತಂದುಕೊಟ್ಟಿತು. ನಾಟಕಗಳಲ್ಲಿ ಜಯಮಾಲಾ ಅವರ ಪ್ರತಿಭೆಯನ್ನು ಗಮನಿಸಿದ ತುಳು ನಟ, ನಿರ್ಮಾಪಕ ಆನಂದಶೇಖರ್ ತಮ್ಮ ‘ಕಾಸ್ದಾಯೆ ಕಂಡನೆ’ ತುಳು ಚಿತ್ರದಲ್ಲಿ ಅವಕಾಶ ಕಲ್ಪಿಸಿದರು. ಮುಂದೆ ಜಯಮಲಾ ‘ಯಾನ್ ಸನ್ಯಾಸಿ ಆಪೆ’, ‘ಏರ್ ಮಲ್ತಿನ ತಪ್ಪು, ‘ಬಯ್ಯಮಲ್ಲಿಗೆ’ ತುಳು ಚಿತ್ರಗಳಲ್ಲಿ ಅಭಿನಯಿಸಿದರು.

ಜಯಮಾಲಾ ಕ್ಯಾಮೆರಾ ಎದುರಿಸಿದ ಮೊದಲ ಕನ್ನಡ ಸಿನಿಮಾ ‘ಬೂತಯ್ಯನ ಮಗ ಅಯ್ಯು’. ಮುಂದೆ ‘ಯಾರು ಹಿತವರು’ ಚಿತ್ರದಲ್ಲಿ ನಾಯಕಿಯಾಗಿ ಬಡ್ತಿ ಪಡೆದರು. ವರನಟ ಡಾ. ರಾಜಕುಮಾರ್ ಅವರ ‘ಪ್ರೇಮದ ಕಾಣಿಕೆ’ ಸಿನಿಮಾ ಜಯಾಮಾಲ ಅವರ ವೃತ್ತಿಬದುಕಿಗೆ ತಿರುವು ನೀಡಿತು. ಮುಂದೆ ರಾಜ್ ಅವರೊಂದಿಗೆ ಏಳು ಚಿತ್ರಗಳಲ್ಲಿ ಅಭಿನಯಿಸಿ ಖ್ಯಾತಿ ಗಳಿಸಿದರು. ಜಯಮಾಲಾ ಅವರು ನಾಯಕನಟಿಯಾಗಿ 70ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಪಟ್ಟಿಯಲ್ಲಿ ತೆಲುಗು, ತುಳು, ತಮಿಳು – ಮಲಯಾಳಂ ಚಿತ್ರಗಳೂ ಇವೆ. ಎಂ.ಟಿ.ವಾಸುದೇವನಾಯರ್ ಅವರ ಮಲಯಾಳಂ ಸಿನಿಮಾ ‘ದೇವಲೋಗಂ’ ಅವರಿಗೆ ಹೆಸರು ತಂದುಕೊಟ್ಟಿತು. ಪೆÇೀಷಕ ಕಲಾವಿದೆಯಾಗಿಯೂ ಅವರು ಯಶಸ್ವಿ ನಟಿಯಾಗಿ ಗುರುತಿಸಿಕೊಂಡರು.
ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ತಾಯಿ ಸಾಹೇಬ’, ಜಯಮಾಲಾ ಅವರ ಪ್ರತಿಭೆಯ ಮತ್ತೊಂದು ಮಜಲನ್ನು ಪರಿಚಯಿಸಿತು. ಸ್ವರ್ಣಕಮಲ ರಾಷ್ಟ್ರ ಪ್ರಶಸ್ತಿ ಗಳಿಸಿದ ಸಿನಿಮಾ ಹತ್ತಾರು ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಹತ್ತು – ಹಲವು ಪ್ರಶಸ್ತಿಗಳನ್ನು ಗಳಿಸಿತು. ಪ್ರೇಮದ ಕಾಣಿಕೆ, ಗಿರಿಕನ್ಯೆ, ಬಡವರ ಬಂಧು, ತ್ರಿಮೂರ್ತಿ, ಸಂಗೀತ, ಖಂಡವಿದೆಕೋ ಮಾಂಸವಿದೆಕೋ, ಗಂಗವ್ವ ಗಂಗಾಮಾಯಿ, ಅಂತ, ಚಂಡಿಚಾಮುಂಡಿ, ಮುತ್ತಿನಂಥ ಅತ್ತಿಗೆ, ನಾಗ ಕಾಳ ಭೈರವ, ಜನ್ಮಜನ್ಮದ ಅನುಬಂಧ.. ಅವರ ಕೆಲವು ಪ್ರಮುಖ ಸಿನಿಮಾಗಳು.

Dr. Raj Awardಚಿತ್ರೋದ್ಯಮದ ಒಳಹೊರಗುಗಳನ್ನು ಅರಿತ ಅವರು ಚಿತ್ರ ನಿರ್ಮಣದಲ್ಲೂ ಸೈ ಎನಿಸಿಕೊಂಡರು. ಅಗ್ನಿಪರೀಕ್ಷೆ, ಮಹೇಂದ್ರವರ್ಮ, ಮಿ.ಮಹೇಶ್ ಕುಮಾರ್, ತಾಯಿ ಸಾಹೇಬ, ತುತ್ತೂರಿ… ಅವರ ನಿರ್ಮಾಣದ ಚಿತ್ರಗಳು. ರಾಜಕೀಯ ಕ್ಷೇತ್ರದಲ್ಲೂ ಯಶಸ್ವಿಯಾದ ಜಯಮಾಲಾ ಅವರು ಸಚಿವೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದಾರೆ. ಚಿಕ್ಕಂದಿನಲ್ಲಿ ಓದಲು ಸಾಧ್ಯವಾಗದಿದ್ದ ಅವರು ಮುಂದೆ ರಾಜ್ಯಶಾಸ್ತ್ರದಲ್ಲಿ ಎಂ.ಎ ಪದವಿ ಪಡೆದರು. 2008ರಲ್ಲಿ ಪಿಎಚ್ ಡಿ ಪದವಿ ಗಳಿಸಿದರು.

ಸಾ.ರಾ.ಗೋವಿಂದು-2021 ರ ಡಾ.ರಾಜಕುಮಾರ್ ಪ್ರಶಸ್ತಿ;
ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕಿನ ಸಾಲಿಗ್ರಾಮ ಗ್ರಾಮದಲ್ಲಿ 1953 ರ ಜುಲೈ 13 ರಂದು ರಾಮೇಗೌಡ ಹಾಗೂ ಹನುಮಮ್ಮ ಅವರ ಉದರದಲ್ಲಿ ಜನಿಸಿದ ಗೋವಿಂದು ಅವರು, ಹಾಸನದಲ್ಲಿ ಡಿಪ್ಲೊಮಾ ಮೆಕ್ಯಾನಿಕಲ್ ತರಬೇತಿ ಪಡೆದ ಅವರು, ಉದ್ಯೋಗ ಅರಸಿ ಬೆಂಗಳೂರಿಗೆ ಬಂದ ಅವರು ತಮ್ಮ ಸ್ವಗ್ರಾಮ ಸಾಲಿಗ್ರಾಮದ ಸುಬ್ರಹ್ಮಣ್ಯ ಅವರ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿದರು. ಇವರ ಸಹಪಾಠಿ ಪಾರ್ವತಮ್ಮ ರಾಜಕುಮಾರ್ ಅವರ ಸಹೋದರ ಎಸ್.ಎ.ಗೋವಿಂದರಾಜ ಅವರ ಮೂಲಕ ಡಾ.ರಾಜಕುಮಾರ್ ಅವರ ನಿರ್ಮಾಣ ಸಂಸ್ಥೆ ಪೂರ್ಣಿಮಾ ಎಂಟರ್ ಪ್ರೈಸಸ್‍ನ ಮೊದಲ ಚಿತ್ರ ‘ತ್ರಿಮೂರ್ತಿʼ ಚಲನಚಿತ್ರದ ನಿರ್ಮಾಣದಲ್ಲಿ ತೊಡಗಿಸಿಕೊಂಡರು. ಡಾ.ರಾಜ್ ನಿರ್ಮಾಣ ಸಂಸ್ಥೆಗಳಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸುತ್ತ ಡಾ.ರಾಜ್ ಅಭಿಮಾನಿಗಳ ಸಂಘವನ್ನು ಬಲಗೊಳಿಸಿದರು. ರಾಜ್ಯದಾದದ್ಯಂತ ಸುಮಾರು 17 ಸಾವಿರ ಘಟಕಗಳನ್ನು ಸ್ಥಾಪಿಸಿ, ಗೋಕಾಕ್ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಕನ್ನಡ ನೆಲ, ಜಲ, ನಾಡು, ನುಡಿಯ ವಿಷಯದಲ್ಲಿ ಹೋರಾಡಿದರು. ತನು ಚಿತ್ರ ಹೆಸರಿನ ಸ್ವಂತ ನಿರ್ಮಾಣ ಸಂಸ್ಥೆ ಮೂಲಕ ಏಳು ಸುತ್ತಿನ ಕೋಟೆ, ಲಾಲಿ ಹಾಡು ಸೇರಿದಂತೆ ಸುಮಾರು 16 ಚಿತ್ರಗಳನ್ನು ನಿರ್ಮಿಸಿದ್ದಾರೆ. ಕರ್ನಾಟಕ ಚಲಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಎರಡು ಅವಧಿಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಡಾ.ರಾಜ್ ಹೆಸರಿನ ಪ್ರಶಸ್ತಿಯನ್ನು ಪಡೆಯುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಅವರು ಈ ಪ್ರಶಸ್ತಿಯನ್ನು ಡಾ.ರಾಜಕುಮಾರ್ ಅವರಿಗೆ ಅರ್ಪಿಸುವುದಾಗಿ ಹೇಳಿದ್ದಾರೆ.

ಎಂ.ಎಸ್.ಸತ್ಯು -2020 ರ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ;
ಎಂ. ಎಸ್. ಸತ್ಯು ಎಂದೇ ಹೆಸರಾಗಿರುವ ಮೈಸೂರು ಶ್ರೀನಿವಾಸ ಸತ್ಯು ಅವರು ಪ್ರಸಿದ್ಧ ಭಾರತೀಯ ಚಿತ್ರ ನಿರ್ದೇಶಕ, ಚಿತ್ರಕಥಾ ಬರಹಗಾರ ಮತ್ತು ರಂಗಭೂಮಿ ಕಾರ್ಯಕರ್ತ. ಸಾಮಾಜಿಕ ನ್ಯಾಯ, ಶೋಷಿತ ವರ್ಗಗಳ ಬದುಕು, ಮಾನವೀಯ ಮೌಲ್ಯಗಳು ಅವರ ಚಿತ್ರಗಳ ಮುಖ್ಯ ವಿಷಯಗಳು.

ಮೈಸೂರಿನಲ್ಲಿ 1930 ಜುಲೈ 06 ರಂದು ಜನಿಸಿದ ಮೈಸೂರು ಶ್ರೀನಿವಾಸ ಸತ್ಯು, ಅವರಿಗೆ ಚಿಕ್ಕಂದಿನಿಂದಲೂ ರಂಗಭೂಮಿಯ ಕಡೆ ಒಲವು. ರಂಗಭೂಮಿಯ ಸ್ಟೇಜ್ ಡಿಸೈನರ್. ಕಲಾನಿರ್ದೇಶಕ, ರಂಗಭೂಮಿಯಲ್ಲಿ ನಾಲ್ಕುದಶಕಗಳಿಗೂ ಹೆಚ್ಚು ಕಾಲ ಶ್ರಮಿಸಿರುವ ಎಂ.ಎಸ್.ಸತ್ಯು ಹಿಂದೂಸ್ತಾನಿ ಥಿಯೇಟರ್, ಹಬೀಬ್ ತನ್ನೀರ್ ಅವರ ಥೀಯೇಟರ್ ಹಾಗೂ ದೆಹಲಿಯ ಕನ್ನಡ ಭಾರತಿ ಹಾಗೂ ಇತರ ತಂಡಗಳಲ್ಲಿ ರಂಗಭೂಮಿ ಡಿಸೈನರ್ ಹಾಗೂ ಕಲಾನಿರ್ದೇಶಕರಾಗಿ ಕೆಲಸ ಮಾಡಿದರು. 1952 ರಲ್ಲಿ ಚೇತನ್ ಆನಂದ್ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಎಂ.ಎಸ್.ಸತ್ಯು, ಚೇತನ್ ಆನಂದ್ ಅವರು ನಿರ್ದೇಶಿಸಿದ “ಹಖೀಕತ್” ಚಲನಚಿತ್ರದ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದರು. ಇದು ಅವರ ವೃತ್ತಿ ಬದುಕಿಗೆ ತಿರುವು ನೀಡಿತು. ಈ ಚಿತ್ರದ ಕಲಾನಿರ್ದೇಶನಕ್ಕಾಗಿ ಅವರಿಗೆ ಫಿಲಂ ಫೇರ್ ಪ್ರಶಸ್ತಿ ಲಭಿಸಿತು.

15 ಸಾಕ್ಷ್ಯ ಚಿತ್ರಗಳು ಹಾಗೂ ಎಂಟು ಕಥಾಚಿತ್ರಗಳನ್ನು ನಿರ್ದೇಶಿಸಿರುವ ಎಂ.ಎಸ್.ಸತ್ಯು, ಕನ್ನಡ, ಹಿಂದಿ ಹಾಗೂ ಉರ್ದು ಭಾμÉಗಳಲ್ಲಿ ಚಲನಚಿತ್ರಗಳನ್ನು ಮಾಡಿರುವುದು ಅವರ ವೈಶಿಷ್ಟವೇ ಆಗಿದೆ. 1974 ರಲ್ಲಿ ಅವರು ನಿರ್ದೇಶಿಸಿದ ಭಾರತ ವಿಭಜನೆ ಕಾಲದ ಕಥಾಹಂದರವುಳ್ಳ ಚಿತ್ರ “ಗರಂ ಹವಾ” ಎಂಎಸ್.ಸತ್ಯು ಅವರನ್ನು ಶ್ರೇಷ್ಠ ನಿರ್ದೇಶಕರ ಸ್ಥಾನದಲ್ಲಿ ನಿಲ್ಲಿಸಿತು. ಈ ಚಿತ್ರಕ್ಕೆ 1974 ರಲ್ಲಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಭಾವೈಕ್ಯತೆ ಬಗ್ಗೆ ಅತ್ಯುತ್ತಮ ಕಥಾಚಿತ್ರಕ್ಕೆ ನೀಡುವ ನರ್ಗೀಸ್ ದತ್ ರಾಷ್ಟ್ರೀಯ ಪ್ರಶಸ್ತಿ ನೀಡಿದೆ. ಅಲ್ಲದೆ “ಗರಂ ಹವಾ” ವಿಶ್ವದ ಪ್ರತಿಷ್ಠಿತ ಕಾನ್ ಚಲನಚಿತ್ರೋತ್ಸವದ ಸ್ಪರ್ಧಾತ್ಮಕ ವಿಭಾಗದಲ್ಲಿತ್ತು.
ಸಾಂಪ್ರದಾಯಿಕ ನಿರೂಪಣಾ ಮಾರ್ಗವನ್ನು ಬಿಟ್ಟು ತಾತ್ವಿಕ ನೆಲೆಗಟ್ಟಿನ, ವಸ್ತುನಿಷ್ಠ ನಿರೂಪಣೆಗೆ ಹೆಸರಾದವರು ಎಂ.ಎಸ್.ಸತ್ಯು. ಏಕ್ ಥ ಚೋಟು, ಏಕ್ ಥಾ ಮೋಟು, ಗರಂಹವಾ, ಚಿತೆಗೂ ಚಿಂತೆ, ಕನ್ನೇಶ್ವರ ರಾಮ, ಕಹಾಂ ಕಹಾಂ ಸೇ ಗುಜರ್ಗಯಾ, ಬರ, ಇಜ್ಯೋಡು, ಸೂಖ, ಘಳಿಗೆ, ಕೊಟ್ಟ ಅವರು ನಿರ್ದೇಶಿಸಿದ ಚಲನಚಿತ್ರಗಳು. “ಕಾಕನ ಕೋಟೆ” ಚಲನಚಿತ್ರದ ಕಲಾನಿರ್ದೇಶಕರಾಗಿ ಅವರು ಕೆಲಸ ಮಾಡಿದ್ದಾರೆ. “ಬರ” ಚಿತ್ರದ ನಿರ್ದೇಶನಕ್ಕಾಗಿ ಸತ್ಯು ಅವರು 1981-82 ನೇ ಸಾಲಿನ ಕರ್ನಾಟಕ ರಾಜ್ಯ ಸರ್ಕಾರದ ಚಲನಚಿತ್ರ ಪ್ರಶಸ್ತಿ ಪಡೆದಿದ್ದಾರೆ. ರಂಗಭೂಮಿ ಹಾಗೂ ಚಲನಚಿತ್ರರಂಗಕ್ಕೆ ಎಂ.ಎಸ್.ಸತ್ಯು ಅವರು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಭಾರತ ಸರ್ಕಾರವು 1975 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. 2024 ರಲ್ಲಿ ನಡೆದ 15 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಜೀವಮಾನ ಸಾಧನೆ ಪ್ರಶಸ್ತಿಯ ಗೌರವಕ್ಕೆ ಭಾಜನರಾಗಿದ್ದಾರೆ.

ಶಿವರುದ್ರಯ್ಯ ಕೆ. – 2021 ರ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ;
ಇಂದಿನ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ನೀಲಕಂಠನಹಳ್ಳಿಯಲ್ಲಿ 1953 ರ ಮೇ 15 ರಂದು ಕುನ್ನಯ್ಯ ಹಾಗೂ ತಿರುಮಲಮ್ಮ ನವರ ಪುತ್ರನಾಗಿ ಜನಸಿದ ಶಿವರುದ್ರಯ್ಯ ಅವರು ಈ ಹಿಂದೆ ವಾರ್ತಾ ಇಲಾಖೆಯ ಸಂಗೀತ ಮತ್ತು ನಾಟಕ ವಿಭಾಗದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದವರು. ಚಲನಚಿತ್ರ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು, ದೇವನೂರು ಮಹದೇವ, ಸಾಯಿಸುತೆ, ಅಶ್ವತ್ಥ, ಕೆ.ಸದಾಶಿವ, ಕುಂ.ವೀರಭದ್ರಪ್ಪ, ಈಶ್ವರಚಂದ್ರ, ಚಾಲ್ರ್ಸ್ ಡಿಕೆನ್ಸನ್ ಸೇರಿದಂತೆ ಹಲವು ಲೇಖಕರ ಕೃತಿಗಳನ್ನಾಧರಿಸಿ ಸುಮಾರು 11 ಸಿನೆಮಾಗಳನ್ನು ನಿರ್ದೇಶಿಸಿದ್ದಾರೆ. ಹಲವು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪ್ರಶಸ್ತಿ ಪುರಸ್ಕಾರಗಳು ದೊರಕಿವೆ. ವನ್ಯಜೀವಿ ಛಾಯಾಗ್ರಾಹಣ ಹಾಗೂ ರಂಗಭೂಮಿ ಕ್ಷೇತ್ರದಲ್ಲಿಯೂ ಗಮನಾರ್ಹ ಕಾರ್ಯಗಳನ್ನು ನಿರ್ವಹಿಸಿದ್ದಾರೆ.

ಪ್ರಗತಿ ಅಶ್ವತ್ಥನಾರಾಯಣ -2020 ರ ಡಾ.ವಿಷ್ಣುವರ್ಧನ್ ಪ್ರಶಸ್ತಿ;
ಪ್ರಗತಿ ಅಶ್ವತ್ಥ ನಾರಾಯಣ-ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕ

ಕನ್ನಡ ಚಿತ್ರರಂಗದ ಬೆಳವಣಿಗೆಯ ಹಾದಿಯಲ್ಲಿ ಪ್ರಗತಿ ಸ್ಟುಡಿಯೋ ಹೆಸರು ಕಡ್ಡಾಯವಾಗಿ ಪ್ರಸ್ತಾಪವಾಗುತ್ತದೆ. ಸ್ಥಿರಚಿತ್ರ ಛಾಯಾಗ್ರಹಣದ ಮೂಲಕ ನಾಲ್ಕು ದಶಕಗಳ ಕಾಲ ಕನ್ನಡ ಚಿತ್ರ ಜಗತ್ತಿನ ಭಾಗವಾಗಿದ್ದು ‘ಪ್ರಗತಿ’ಯ ಹೆಮ್ಮೆ. ಅಧಿಕೃತವಾಗಿ ಅಶ್ವತ್ಥರ ಸ್ಥಿರಚಿತ್ರ ಛಾಯಾಗ್ರಹಣ ವೃತ್ತಿ ಆರಂಭವಾಗಿದ್ದು ಮದರಾಸಿನಲ್ಲಿ ‘ಬೆಳ್ಳಿಮೋಡ’ ಚಿತ್ರದೊಂದಿಗೆ. ಅವರು ಛಾಯಾಗ್ರಹಣ ಮಾಡಿದ ಕೊನೆಯ ಚಿತ್ರ ‘ಪ್ರೇಮ ಪ್ರೇಮ ಪ್ರೇಮ’. ‘ಪ್ರಗತಿ’ ಸ್ಟುಡಿಯೋ ಆರಂಭಿಸಿದ ನಂತರ ಸುಮಾರು 275 ಸಿನಿಮಾಗಳಿಗೆ ಅಶ್ವತ್ಥರು ಸ್ಟಿಲ್ ಫೋಟೊಗ್ರಫಿ ಮಾಡಿದ್ದಾರೆ. ಮದರಾಸಿನಲ್ಲಿದ್ದಾಗ ಮಲಯಾಳಂ ಚಿತ್ರಗಳೂ ಸೇರಿದಂತೆ 25ಕ್ಕೂ ಹೆಚ್ಚು ಚಿತ್ರಗಳಿಗೆ ದುಡಿದಿದ್ದರು. ಒಟ್ಟಾರೆ ಸ್ಟಿಲ್ ಫೋಟೊಗ್ರಾಫರ್ ಆಗಿ ಅವರು ಕೆಲಸ ಮಾಡಿದ ಚಿತ್ರಗಳ ಸಂಖ್ಯೆ 300 ದಾಟುತ್ತದೆ.

ಪುಟ್ಟಣ್ಣ ಕಣಗಾಲ್ ನಿರ್ದೇಶನದ ಹನ್ನೊಂದು, ಸಿದ್ದಲಿಂಗಯ್ಯನವರ ಹದಿನಾಲ್ಕು ಸಿನಿಮಾಗಳಿಗೆ ಅಶ್ವತ್ಥರು ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದಾರೆ. ‘ಪ್ರಗತಿ’ಯಲ್ಲಿ ಹತ್ತಾರು ಸ್ಟಿಲ್ ಫೋಟೊಗ್ರಾಫರ್ ಗಳು ತಯಾರಾಗಿದ್ದಾರೆ. ಮೈಲುಗಲ್ಲು ಎನಿಸಿದ ಹಲವಾರು ಕನ್ನಡ ಚಿತ್ರಗಳಿಗೆ ಕಾರ್ಯನಿರ್ವಹಿಸಿರುವ ಅಶ್ವತ್ಥರ ಸಂಗ್ರಹದಲ್ಲಿ ಸುಮಾರು ಎರಡೂವರೆ ಲಕ್ಷಕ್ಕೂ ಹೆಚ್ಚು ಫೋಟೊ ನೆಗೆಟಿವ್ ಇವೆ. ಸಿನಿಮಾ ಸ್ಥಿರಚಿತ್ರ, ಸಿನಿಮಾಗೆ ಸಂಬಂಧಿಸಿದ ಇತರೆ ಫೋಟೊ, ಚಿತ್ರೀಕರಣ ಸಂದರ್ಭದ ಕ್ಲಿಪಿಂಗ್, ಚಿತ್ರೋದ್ಯಮದ ಕಾರ್ಯಕ್ರಮ, ನಟ-ನಟಿಯರ ಭಾವಚಿತ್ರ, ಕಲಾವಿದರ ಕುಟುಂಬಗಳ ವೈಯಕ್ತಿಕ ಸಮಾರಂಭಗಳು… ಹೀಗೆ ಅವರ ಸಂಗ್ರಹದಲ್ಲಿನ ಅಸಂಖ್ಯಾತ ಫೋಟೊಗಳು ಕನ್ನಡ ಚಿತ್ರರಂಗದ ಇತಿಹಾಸ ದಾಖಲಿಸುತ್ತವೆ.

ಎಂ.ಕೆ.ಸುಂದರರಾಜ್ -2021 ರ ಡಾ.ವಿಷ್ಣುವರ್ಧನ್ ಪ್ರಶಸ್ತಿ;
ಹಿರಿತೆರೆ ಹಾಗೂ ಕಿರುತೆರೆಗಳೆರಡರಲ್ಲಿಯೂ ಎಂ.ಕೆ.ಸುಂದರರಾಜ್ ಚಿರಪರಿಚಿತರು, 1951 ರ ಫೆಬ್ರವರಿ 2 ರಂದು ವಿಜಯ ಕೋಮಲಂ ಹಾಗೂ ಎಂ.ಎನ್.ಕೃಷ್ಣಸ್ವಾಮಿ ಅವರ ಮಗನಾಗಿ ಜನಿಸಿದರು. ಬಿಎಸ್ಸಿ ಪದವೀಧರರಾಗಿರುವ ಇವರು, ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ, ರಂಗಭೂಮಿ ದಿಗ್ಗಜ ಬಿ.ವಿ.ಕಾರಂತರ ಪರಿಚಯವಾಗಿ ಅವರ ಶಿಷ್ಯತ್ವದಲ್ಲಿ ಅನೇಕ ನಾಟಕಗಳಲ್ಲಿ ನಟನೆ, ನೇಪಥ್ಯದಲ್ಲಿ ಕರ್ತವ್ಯ ನಿರ್ವಹಿಸಿದರು. ಪ್ರಯೋಗಾತ್ಮಕ ಮತ್ತು ಮುಖ್ಯವಾಹಿನಿ ಎರಡೂ ಪ್ರಕಾರಗಳ ಚಿತ್ರಗಳಲ್ಲಿ ಅಪಾರ ಯಶಸ್ಸು ಪಡೆದಿದ್ದಾರೆ. 1973 ರಲ್ಲಿ ಚಿತ್ರರಂಗ ಪ್ರವೇಶಿಸಿದರು, ಕನ್ನಡ, ತಮಿಳು, ತೆಲುಗು,ಹಿಂದಿ ಸೇರಿದಂತೆ ಈವರೆಗೆ ಸುಮಾರು 300 ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕೆಲವು ಚಿತ್ರಗಳಲ್ಲಿ ಸಹನಿರ್ದೇಶನ, ನಿರ್ಮಾಣ ವ್ಯವಸ್ಥಾಪಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇವರ ಅಭಿನಯದ ಕಾಡು, ಚೋಮನ ದುಡಿ, ತಬ್ಬಲಿಯು ನೀನಾದೆ ಮಗನೇ, ಒಂದಾನೊಂದು ಕಾಲದಲ್ಲಿ ಸೇರಿದಂತೆ ನೂರಾರು ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳು ಮಾತ್ರವಲ್ಲದೇ, ಹಾಸ್ಯ, ಖಳ ಸೇರಿದಂತೆ ಎಲ್ಲ ಬಗೆಯ ಪಾತ್ರಗಳಲ್ಲಿ ಸೈ ಎನಿಸಿಕೊಂಡಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಮುಖ ಪ್ರಶಸ್ತಿ, ಪುರಸ್ಕಾರಗಳ ಗೌರವಕ್ಕೆ ಪಾತ್ರರಾಗಿದ್ದಾರೆ.