ದಿನದ ಒಳ್ಳೆಯಮಾತು(ಯತಿಗಳ ಸ್ಮರಣೆ)
ವಿಜಯೀಂದ್ರತೀರ್ಥ ಗುರುಸಾರ್ವಭೌಮರು
Klive Special Article ಶ್ರೀವಿಜಯೀಂದ್ರತೀರ್ಥಗುರುಗಳು ಕಲಿಯುಗ ಕಲ್ಪತರು ಕಾಮಧೇನು ಎಂದೇ ಪ್ರಖ್ಯಾತರಾಗಿರುವ
ಶ್ರೀರಾಘವೇಂದ್ರತೀರ್ಥರ ಪರಮ ಗುರುಗಳು.
ಶ್ರೀಸುಧೀಂದ್ರತೀರ್ಥರ ಆಶ್ರಮ ಗುರುಗಳು.ಇವರು ಮಹಾನ್ ತಪಸ್ವಿಗಳು ಮತ್ತು ಜ್ಞಾನಿವರೇಣ್ಯ ಯತಿವರ್ಯರು.
ಇವರು ಮೂರು”ವಿ”ಅಕ್ಷರದಿಂದ
ಶೋಭಿತರಾದವರು..
ಮೊದಲನೆಯ “ವಿ”ಅಕ್ಷರ ಅವರ ಜನ್ಮನಾಮ ವಿಠಲಾಚಾರ್ಯರೆಂದು.ಎರಡನೆಯ “ವಿ”ಅಕ್ಷರ ಇವರು ಶ್ರೀವ್ಯಾಸರಾಯರಿಂದ ಸನ್ಯಾಸದೀಕ್ಷೆ ಪಡೆದು
“ವಿಷ್ಣುತೀರ್ಥ”ರೆಂದು ನಾಮಕರಣ ಹೊಂದಿದರು.
ಮೂರನೆಯ “ವಿ”ಅಕ್ಷರ ಇವರು ಶ್ರೀಸುರೇಂದ್ರತೀರ್ಥರ ಶಿಷ್ಯರಾಗಿ ಅವರಿಂದ ದಂಡಪಲ್ಲಟ ಮಾಡಿ ಶ್ರೀವಿಜಯೀಂದ್ರತೀರ್ಥರೆಂದು
ನಾಮಕರಣಗೊಂಡು ಶ್ರೀಸುರೇಂದ್ರತೀರ್ಥರ ಉತ್ತರಾಧಿಕಾರಿಯಾಗಿ ಪಟ್ಟಾಭಿಷಿಕ್ತರಾಗುತ್ತಾರೆ.
ಇವರು ಶ್ರೀಷೋಡಶಬಾಹು ನರಸಿಂಹ ದೇವರ ಅನುಗ್ರಹದಿಂದ ವಿಷಪ್ರಾಶನದಿಂದ ಮೃತ್ಯುವನ್ನೇ ಗೆದ್ದವರು.
ಇವರ ವೇದಾಂತ ಸಿಂಹಾಸನ ರೂಢರಾಗಿದ್ದಾಗ ಬಹಳಷ್ಟು ಮಹಿಮೆಗಳು ನಡೆದಿವೆ.
ಇವರ ಮೂಲಬೃಂದಾವನವಿರುವುದು ತಮಿಳುನಾಡಿನ
ಕುಂಭಕೋಣಂನಗರದಲ್ಲಿ.
Klive Special Article ಇಂತಹ ಮಹಾಮಹಿಮರ ಆರಾಧನೆಯನ್ನು ಜ್ಯೇಷ್ಠ ಬಹುಳ ತ್ರಯೋದಶಿಯಂದು ಆಚರಿಸಲಾಗುತ್ತದೆ.
ಶ್ರೀಗಳವರ ಆರಾಧನೆಯ ಸಂದರ್ಭದಲ್ಲಿ ,ಸ್ಮರಣೆ
ಮಾಡಿ ಭಕ್ತಿಯ ನಮನಗಳನ್ನರ್ಪಿಸಿ ಅವರ ಅನುಗ್ರಹಕ್ಕೆ ಪಾತ್ರರಾಗೋಣ.
