Sunday, July 12, 2026
Sunday, July 12, 2026

Klive Special Article ಸಕಲ ವಿದ್ಯಾಸಂಪನ್ನ, ಮಹಾಮಹಿಮ ಶ್ರೀವಿಜಯೀಂದ್ರ ತೀರ್ಥರು. ಲೇ: ಎನ್. ಜಯಭೀಮ ಜೊಯ್ಸ್

Date:

ದಿನದ ಒಳ್ಳೆಯಮಾತು(ಯತಿಗಳ ಸ್ಮರಣೆ)

ವಿಜಯೀಂದ್ರತೀರ್ಥ ಗುರುಸಾರ್ವಭೌಮರು

Klive Special Article ಶ್ರೀವಿಜಯೀಂದ್ರತೀರ್ಥಗುರುಗಳು ಕಲಿಯುಗ ಕಲ್ಪತರು ಕಾಮಧೇನು ಎಂದೇ ಪ್ರಖ್ಯಾತರಾಗಿರುವ
ಶ್ರೀರಾಘವೇಂದ್ರತೀರ್ಥರ ಪರಮ ಗುರುಗಳು.
ಶ್ರೀಸುಧೀಂದ್ರತೀರ್ಥರ ಆಶ್ರಮ ಗುರುಗಳು.ಇವರು ಮಹಾನ್ ತಪಸ್ವಿಗಳು ಮತ್ತು ಜ್ಞಾನಿವರೇಣ್ಯ ಯತಿವರ್ಯರು.
ಇವರು ಮೂರು”ವಿ”ಅಕ್ಷರದಿಂದ
ಶೋಭಿತರಾದವರು..
ಮೊದಲನೆಯ “ವಿ”ಅಕ್ಷರ ಅವರ ಜನ್ಮನಾಮ ವಿಠಲಾಚಾರ್ಯರೆಂದು.ಎರಡನೆಯ “ವಿ”ಅಕ್ಷರ ಇವರು ಶ್ರೀವ್ಯಾಸರಾಯರಿಂದ ಸನ್ಯಾಸದೀಕ್ಷೆ ಪಡೆದು
“ವಿಷ್ಣುತೀರ್ಥ”ರೆಂದು ನಾಮಕರಣ ಹೊಂದಿದರು.
ಮೂರನೆಯ “ವಿ”ಅಕ್ಷರ ಇವರು ಶ್ರೀಸುರೇಂದ್ರತೀರ್ಥರ ಶಿಷ್ಯರಾಗಿ ಅವರಿಂದ ದಂಡಪಲ್ಲಟ ಮಾಡಿ ಶ್ರೀವಿಜಯೀಂದ್ರತೀರ್ಥರೆಂದು
ನಾಮಕರಣಗೊಂಡು ಶ್ರೀಸುರೇಂದ್ರತೀರ್ಥರ ಉತ್ತರಾಧಿಕಾರಿಯಾಗಿ ಪಟ್ಟಾಭಿಷಿಕ್ತರಾಗುತ್ತಾರೆ.
ಇವರು ಶ್ರೀಷೋಡಶಬಾಹು ನರಸಿಂಹ ದೇವರ ಅನುಗ್ರಹದಿಂದ ವಿಷಪ್ರಾಶನದಿಂದ ಮೃತ್ಯುವನ್ನೇ ಗೆದ್ದವರು.
ಇವರ ವೇದಾಂತ ಸಿಂಹಾಸನ ರೂಢರಾಗಿದ್ದಾಗ ಬಹಳಷ್ಟು ಮಹಿಮೆಗಳು ನಡೆದಿವೆ.
ಇವರ ಮೂಲಬೃಂದಾವನವಿರುವುದು ತಮಿಳುನಾಡಿನ
ಕುಂಭಕೋಣಂನಗರದಲ್ಲಿ.
Klive Special Article ಇಂತಹ ಮಹಾಮಹಿಮರ ಆರಾಧನೆಯನ್ನು ಜ್ಯೇಷ್ಠ ಬಹುಳ ತ್ರಯೋದಶಿಯಂದು ಆಚರಿಸಲಾಗುತ್ತದೆ.
ಶ್ರೀಗಳವರ ಆರಾಧನೆಯ ಸಂದರ್ಭದಲ್ಲಿ ,ಸ್ಮರಣೆ
ಮಾಡಿ ಭಕ್ತಿಯ ನಮನಗಳನ್ನರ್ಪಿಸಿ ಅವರ ಅನುಗ್ರಹಕ್ಕೆ ಪಾತ್ರರಾಗೋಣ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B. Y. Raghavendra ಕೆರೆ ತುಂಬಿಸಿದ ಏತ ನೀರಾವರಿ: ಉಡುಗಣಿ- ತಾಳಗುಂದ- ಹೊಸೂರು ಗ್ರಾಮಸ್ಥರ ಕಣ್ಣಲ್ಲಿ ಆನಂದ ಭಾಷ್ಪ

B. Y. Raghavendra ಶಿಕಾರಿಪುರ ತಾಲೂಕಿನ ಕೃಷಿ ರಂಗದ ಇತಿಹಾಸದಲ್ಲೇ ಅತ್ಯಂತ...

U.T. Khader ತೀರ್ಥಹಳ್ಳಿ ಸಾರ್ವಜನಿಕ ಆಸ್ಪತ್ರೆಗೆ ಆರೋಗ್ಯ ಸಚಿವ ಖಾದರ್ ಭೇಟಿ: ಪ್ರತೀ ವಾರ್ಡಿನ ರೋಗಿಗಳೊಂದಿಗೆ ಕ್ಷೇಮ ವಿಚಾರಣೆ

U.T. Khader ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಜಯಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆಗೆ ಆರೋಗ್ಯ...