Thursday, February 26, 2026
Thursday, February 26, 2026
Home Blog Page 264

ಹೊಸನಗರ ಹೋಬಳಿ ನಾಡ ಕಛೇರಿಯಲ್ಲಿ ಕೊಡೆ ಹಿಡಿದೇ ಕೆಲಸ

0

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರ ಹೋಬಳಿಯ ನಾಡಕಚೇರಿಯ ಸೋರುತ್ತಿರುವುದು ಬೆಳಕಿಗೆ ಬಂದಿದೆ.
ಕೊಡೆ ಹಿಡಿದು ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣಗೊಂಡಿದ್ದು ನಗರದ ನಾಡ ಕಚೇರಿಯ ಗೋಳು ಕೇಳುವವರಿಲ್ಲದಂತಾಗಿದೆ.

ಕಂಪ್ಯೂಟರ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳ ಮೇಲೂ ನೀರು ಸುರಿಯುತ್ತಿದೆ. ಹೊಸ ಕಚೇರಿ ಮುಂದೆ ಎರಡು ಅಡಿ ನೀರು ನಿಂತರೇ , ಹಳೆ ಕಚೇರಿಯಲ್ಲಿ ನೀರು ಸುರಿಯುತ್ತಲೇ ಇರುತ್ತದೆ. ಹಲವು ಬಾರಿ ಮನವಿ ಮಾಡಿದರೂ ಮೇಲಾಧಿಕಾರಿಗಳು ನಿರ್ಲಕ್ಷ ಧೋರಣೆ ತೋರುತ್ತಿದ್ದಾರೆ . ಕಂಪ್ಯೂಟರ್ಗಳಿಗೆ ಪ್ಲಾಸ್ಟಿಕ್ ಕವರ್ ಮುಚ್ಚಿ ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿದ್ದಾರೆ.

MESCOM ಮೆಸ್ಕಾಂ ದೂರುಗಳಿಗೆ‌ ಶಿವಮೊಗ್ಗ ತಾಲ್ಲೂಕಿನಾದ್ಯಂತ ಸಹಾಯವಾಣಿ ಮಾಹಿತಿ

0

MESCOM ಶಿವಮೊಗ್ಗ ತಾಲ್ಲೂಕಿನ ವ್ಯಾಪ್ತಿಯಲ್ಲಿ ಯಾವುದೇ ತರಹದ ವಿದ್ಯುಚ್ಛಕ್ತಿ/ವಿದ್ಯುತ್ ಸರಬರಾಜಿನಲ್ಲಿ ತೊಂದರೆಗಳಿಗೆ ದೂರುಗಳಿಗೆ ದುರು/ಸಲಹೆಗಳಿದ್ದಲ್ಲಿ ಇಲ್ಲಿ ನೀಡಿರುವ ಮೆಸ್ಕಾಂ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ತಿಳಿಸುವಂತೆ ಮೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ಮೆಸ್ಕಾಂ ವ್ಯಾಪ್ತಿಯಲ್ಲಿನ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದಂತೆ ದೂರುಗಳಿದ್ದಲ್ಲಿ 1912 ನ್ನು ಸಂಪರ್ಕಿಸುವುದು. ಮೆಸ್ಕಾಂ ಶಿವಮೊಗ್ಗ ನಗರ ಪ್ರದೇಶದ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದಂತೆ ದೂರುಗಳಿದ್ದಲ್ಲಿ 08182-225887/222369 ಗಳನ್ನು ಸಂಪರ್ಕಿಸುವುದು.

ಕುಂಸಿ ಉಪವಿಭಾಗಾಧಿಕಾರಿ ಹೇಮ್ಲಾ ನಾಯ್ಕ್- ಮೊ.ಸಂ;9480841340. ಕುಂಸಿ ಶಾಖಾಧಿಕಾರಿ ವಿಷ್ಣು -ಮೊ.ಸಂ:9448289682. ಈ ಅಧಿಕಾರಿ ವ್ಯಾಪ್ತಿಗೆ ಬರುವ ಸ್ಥಳಗಳು ಬಾಲೆಕೊಪ್ಪ, ರೇಚಿಕೊಪ್ಪ, ಹೆಗ್ಗೇರಿ, ಹೊರಬೈಲು, ಸನ್ನಿವಾಸ, ಬ್ಯಾಡನಾಳ, ಕೋಣೆಹೊಸೂರು, ಮುಡುಗೊಪ್ಪ, ಚಿಕ್ಕಮರಸ, ಆಲ್ಕುಣಿ, ಮರಾಠಿ ಕ್ಯಾಂಪ್, ಗುಂಡೂರು, ವಡೇರಕೊಪ್ಪ, ಶೆಟ್ಟಿಕೆರೆ, ಕೊರಗಿ, ಚೋರಡಿ, ಶಾಂತಿಕೆರೆ, ಕುಂಸಿ, ಚಿಕ್ಕಮರಸ, ಬಾಳೆಕೊಪ್ಪ, ತುಪ್ಪೂರು, ಚೋಡನಾಳ.

ಆಯನೂರು ಶಾಖಾಧಿಕಾರಿ ಬಿ.ವಿಜಯ್ ಮೊ.ಸಂ:9448289680. ಈ ಅಧಿಕಾರಿ ವ್ಯಾಪ್ತಿಗೆ ಬರುವ ಸ್ಥಳಗಳು ಆಯನೂರು, ಚಿಕ್ಕದಾನಂದಿ, ದೊಡ್ಡದಾನಂದಿ, ಆಯನೂರು ಕೋಟೆ, ಚೆನ್ನಳ್ಳಿ, ಇಟ್ಟಿಗೆಹಳ್ಳಿ, ಹೊಸೂರು, ವೀರಗಾರನ ಬೈರನಕೊಪ್ಪ, ಮಂಡಘಟ್ಟ, ದ್ಯಾವನಕೆರೆ, ರಾಗಿಹೊಸಳ್ಳಿ, ಅಡಗಡೆ, ಚಿನ್ಮನೆ, ಸೂಡೂರು, ಕುರಂಬಳ್ಳಿ, ಚಿಕ್ಕಮತ್ಲಿ, ದೊಡ್ಡಮತ್ಲಿ, ದೊಡ್ಡ ಆಡಿನಕೊಟ್ಟಿಗೆ, ಕೂಡಿ, ಚಿಲ್ಮೆಜಡ್ಡು, ಶರಾವತಿ ಕಾಲೋನಿ, ಕೆಸುವಿನಹೊಂಡ, ಮುಳುಗದ್ದೆ, ಸಿಂಗನಹಳ್ಳಿ, ಮಾದೇಗೊಪ್ಪ, ಸಿರಿಗೆರೆ, ತಮ್ಮಡಿಹಳ್ಳಿ, ಕಾಚಿಕೊಪ್ಪ, ಬಿಲ್ಗುಣೆ, ಮಂಜರಿಕೊಪ್ಪ, ಮಲೆಶಂಕರ, ಕಲ್ಲಕೊಪ್ಪ, ಆಡಿನಕೊಟ್ಟಿಗೆ, ಗವಟೆತವರು, ಸಿದ್ದಾಪುರ, ಹೊಸೂರು, ಗುಡ್ಡೆಕೊಪ್ಪ.

ಹರ‍್ನಳ್ಳಿ ಶಾಖಾಧಿಕಾರಿ ಪಿ.ನರಸಿಂಹಪ್ಪ -ಮೊ.ಸಂ:9448289681. ಈ ಅಧಿಕಾರಿ ವ್ಯಾಪ್ತಿಗೆ ಬರುವ ಸ್ಥಳಗಳು ಮಲ್ಲಾಪುರ, ನಾರಾಯಣಪುರ, ಹಿಟ್ಟೂರು, ಬೈರನಕೊಪ್ಪ, ಬೈರನಕೊಪ್ಪ ಕ್ಯಾಂಪ್, ರಟ್ಟೆಹಳ್ಳಿ, ಸುತ್ತುಕೋಟೆ, ಕೊಂಡಜ್ಜಿ, ಹರ‍್ನಳ್ಳಿ, ಮುದುವಾಲ, ದೇವಬಾಳು, ತ್ಯಾಜವಳ್ಳಿ, ಕೊನಗವಳ್ಳಿ, ಯಡವಾಲ, ಸೇವಾಲಾಲ್‌ನಗರ, ಎರೇಕೊಪ್ಪ, ಮೈಸವಳ್ಳಿ, ನಾಗರಬಾವಿ, ಬೆನವಳ್ಳಿ, ಚಾಮೇನಹಳ್ಳಿ, ವಿಟಗೊಂಡನಕೊಪ್ಪ, ರಾಮನಗರ, ಕೆಸುವಿನಕಟ್ಟೆ.

ಶ್ರೀರಾಂಪುರ ಶಾಖಾಧಿಕಾರಿ ವಸಂತ್‌ನಾಯ್ಕ್ ಮೊ.ಸಂ:9480841342. ಈ ಅಧಿಕಾರಿ ವ್ಯಾಪ್ತಿಗೆ ಬರುವ ಸ್ಥಳಗಳು ಶ್ರೀರಾಂಪುರ, ಗುಡ್ಡದ ಅರಕೆರೆ, ಆಲದೇವರ ಹೊಸೂರು, ಕೋಟೆಗಂಗೂರು, ಮುದ್ದಿನಕೊಪ್ಪ, ಸಿದ್ಲಿಪುರ, ಭೋವಿ ಕಾಲೋನಿ, ವಿರುಪಿನಕೊಪ್ಪ, ತ್ಯಾವರೆಕೊಪ್ಪ, ಲಯನ್‌ಸಫಾರಿ, ಇಟ್ಟಿಗೆಹಳ್ಳಿ, ವೀರಗಾರನಬೈರನಕೊಪ್ಪ, ಪಿಇಎಸ್ ಕಾಲೇಜು, ಗೆಜ್ಜೇನಹಳ್ಳಿ, ದೇವಕಾತಿಕೊಪ್ಪ, ಶಕ್ತಿಧಾಮ, ಕೆಐಡಿಬಿ ದೇವಕಾತಿಕೊಪ್ಪ ಇಂಡಸ್ಟ್ರೀಯಲ್ ಏರಿಯಾ, ಬೈರನಕೊಪ್ಪ, ಪ್ರೆಸ್ ಕಾಲೋನಿ.

ತೀರ್ಥಹಳ್ಳಿಯ ಉಪವಿಭಾಗಾಧಿಕಾರಿ ಪ್ರಶಾಂತ್‌ಕುಮಾರ್- ಮೊ.ಸಂ:9448289508, ಪಟ್ಟಣ ಶಾಖಾಧಿಕಾರಿ -ವಿಜೇತ್- ಮೊ.ಸಂ:9448289672. ಈ ಅಧಿಕಾರಿ ವ್ಯಾಪ್ತಿಗೆ ಬರುವ ಸ್ಥಳಗಳು ಸೊಪ್ಪುಗುಡ್ಡೆ, ಕೊಪ್ಪ ಸರ್ಕಲ್, ಕುಶಾವತಿ, ಕುರುವಳ್ಳಿ, ಮೇಲಿನಕುರುವಳ್ಳಿ, ಬಾಳೆಬೈಲು, ದೊಡ್ಡಮನೆ ಕೇರಿ, ಚಿತ್ರಕೇರಿ, ರಥಬೀದಿ, ಚಿಟ್ಟಮಕ್ಕಿ, ಸೀಬಿನಕೆರೆ, ಎಡೇಹಳ್ಳಿಕೆರೆ, ಗಾಂಧಿನಗರ, ಇಂದಿರಾನಗರ, ಎ.ಪಿ. ರಸ್ತೆ, ಭಾರತೀಪುರ, ಚಿಟ್ಟೆಬೈಲು, ಕಿತ್ತಿನಗದ್ದೆ, ತುಪ್ಪದಮನೆ, ಇಂದಾವರ, ಮಕ್ಕಿಮನೆ, ತುಡುಕಿ, ಬದನೆಹಿತ್ಲು, ಬುಕ್ಲಾಪುರ, ಹೊರಬೈಲು, ತುಮುಡಿ, ವಿಠಲನಗರ, ಹೆಗ್ಗೆಬೈಲು, ತೀರ್ಥಹಳ್ಳಿ ಗ್ರಾಮಾಂತರ, ಯಡೇಹಳ್ಳಿ, ತೀರ್ಥಹಳ್ಳಿ, ಎಡಗುಡ್ಡ.

MESCOM ಗ್ರಾಮೀಣ ಶಾಖಾಧಿಕಾರಿ ಸುನೀಲ್ ಕುಮಾರ್ ಟಿ.ಎನ್ – ಮೊ.ಸಂ:9448289692. ಈ ಅಧಿಕಾರಿ ವ್ಯಾಪ್ತಿಗೆ ಬರುವ ಸ್ಥಳಗಳು ಮೇಳಿಗೆ, ಹಳೆ ಮೆಳಿಗೆ, ತಳುವೆ, ಕುಂಬಾರ ತಳುವೆ, ಹಡ್ಲಗದ್ದೆ, ಮಟತೋಟ, ದಾಸನಕೂಡಿಗೆ, ಕೆಳಕೆರೆ, ಹೊನ್ನೆಕಣ, ಕುಂಟುವಳ್ಳಿ, ಗಾಡಿಗೆರೆ, ಬಾಳೆಕೊಪ್ಪ, ಕಂತುಗದ್ದೆ, ಮಂಡೊಳ್ಳಿ, ಹೊರಣೆಬೈಲು, ಕೋದೂರು, ಕೌರಿಬೈಲು, ಕಿತ್ಲಗಳಲೆ, ಗರಡಿಗದ್ದೆ, ಹೊರಬೈಲು, ನಿರುಗಾರುಮಕ್ಕಿ, ಗುಮ್ಮನಗದ್ದೆ, ಗೋಪಾಲಪುರ, ಟೆಂಕಬೈಲು, ಚಿಪ್ಪಲಗುಡ್ಡೆ, ನಾಗರಿ, ದೈನೆ, ಕುಂಬಾರಕೊಪ್ಪ, ನಿಲುಗತ್ತಿ, ಹುಣಸೆಮಕ್ಕಿ, ಕೆರೆಮನೆ, ದಾಸನಕೂಡಿಗೆ, ಸುರಳಿ, ಬಾಳೆಬೈಲು, ಶಿವರಾಜಪುರ, ಮುಳಬಾಗಿಲು, ಮೀನುಗೊಂಡ, ರಂಜದಕಟ್ಟೆ, ಹಳ್ಳಿಬೈಲು, ಭೀಮನಕಟ್ಟೆ, ಬಿಳುಕೊಪ್ಪ, ಬಾಳೆಕೊಪ್ಪ, ಗಂಟೆಹಕ್ಲು, ವಿಟ್ಲ, ಚಿತ್ತೂರು, ಆಲಗೆರೆ, ಗುಡ್ಡೆಕೊಪ್ಪ, ಸವಳಿ, ಕೊಳವಳ್ಳಿ, ಬೊಬ್ಬಸಿರಿ, ಕಡೆಮನೆ, ಇಕ್ಕೇರಿ, ಬೆಳ್ಳೂರು, ಕುಕ್ಕರಿ, ಸಸಿತೋಟ, ಹರಳಿಮಠ, ಹಾರೊಗೊಳಿಗೆ, ಕಡಿದಾಳು, ಹುಲಿಸರ, ಚಿಕ್ಕವಳ್ಳಿ, ದುಂಬರಗುಂಡಿ, ಒಳಗೆರೆ, ಗೋರಗಲ್ಲು, ಹೊನ್ನಾಣಿ, ತೋರಳ್ಳಿ, ಹೊಸಗ್ರಹಾರ, ಮೊಸರೂರು, ಹೊಳೆಗದ್ದೆ, ಅಂದಗೆರೆ, ಕೆರೆಕೊಪ್ಪ, ಜಟ್ಟಿನಮಕ್ಕಿ, ಇಂಗಳಾದಿ, ನೆಲ್ಲಿಕೆರೆ, ಹೊಸತೋಟ, ಗುಡ್ಡೆಕೊಪ್ಪ, ದೇವಂಗಿ, ತಳುವೆ, ಕೆರೆಕೊಪ್ಪ, ಬುಕ್ಲಾಪುರ, ಹುಣಸವಳ್ಳಿ, ಕಲ್ಯಾಣಿ ಆಗ್ರಹಾರ, ಕೋಮನೆ, ಮಲ್ಲೂರು, ಹೊರಬೈಲು, ಬಸವಾನಿ, ಹಳವಾನಿ, ಗುರುವಳ್ಳಿ, ಹೊಳೆಕೊಪ್ಪ, ಶುಂಠಿಕೊಪ್ಪ, ಲಕ್ಷ್ಮೀಪುರ, ಹೊಸಹಳ್ಳಿ.

ಮೇಗರವಳ್ಳಿ ಶಾಖಾಧಿಕಾರಿ ಮಂಜುನಾಥ್ -ಮೊ.ಸಂ:9448289694. ಈ ಅಧಿಕಾರಿ ವ್ಯಾಪ್ತಿಗೆ ಬರುವ ಸ್ಥಳಗಳು ಶುಂಠಿಹಕ್ಲು, ಹುರುಳಿ, ಹಣಸ, ಬಿಳುಮನೆ, ಶಿವಳ್ಳಿ, ದಾಸನಕೊಡಿಗೆ, ಮೇಗರವಳ್ಳಿ, ಬಗ್ಗೊಡಿಗೆ, ಶಿರೂರು, ಚಂಗಾರು, ಚಕ್ಕೊಡಬೈಲು, ಹೊಳಲೂರುಬೆಟಗೆರೆ, ಯಡಮನೆ, ಗುಡ್ಡೆಕೊಪ್ಪ, ಕೊಡ್ಲು, ಬೊಗರುಕೊಪ್ಪ, ಹೊರಬೈಲು, ಲಕ್ಕುಂದ, ಶೆಟ್ಟಿಗಳಕೊಪ್ಪ, ಹೊಸಹಳ್ಳಿ, ಕಾಸರವಳ್ಳಿ, ಮುಟ್ಟುವಳ್ಳಿ, ಚಿಕ್ಕಳೂರು, ತೀರ್ಥಮತ್ತೂರು, ಕೊಳಗಿಬೈಲು, ಅರೇಹಳ್ಳಿ, ಕೆಸಲೂರು, ಮಳಲೂರು, ಹೊಸೂರು, ಗಡ್ಡೇಕೇರಿ, ದೋಣಿಹಕ್ಲು, ಹೊನ್ನೆತಾಳು, ತಲ್ಲುರು, ಬಾಳೆಹಳ್ಳಿ, ನಂಟೂರು, ಕುಂದ, ಬಿದರಗೋಡು, ಹೊಸಮನೆ, ಆಗುಂಬೆ, ಕೆಂದಳಬೈಲು, ಕೈಮರ.

ಆರಗ ಶಾಖಾಧಿಕಾರಿ ಗುರುಬಸವಯ್ಯ -ಮೊ.ಸಂ:9480841343. ಈ ಅಧಿಕಾರಿ ವ್ಯಾಪ್ತಿಗೆ ಬರುವ ಸ್ಥಳಗಳು ಆರಗ, ಕಾಳಮ್ಮನ ಗುಡಿ, ಕಡೇಗದ್ದೆ, ಕಬ್ಗಲ್, ಮಿಟ್ಲಗೋಡು, ಬೀಸು, ನೆಕ್ರೆಗೋಡು, ಕಂದಕ, ಬಾಂಡ್ಯ, ನಂದಿಗೋಡು, ಯಮರವಳ್ಳಿ, ಶಂಕಾರಪುರ, ಅರಳಸುರಳಿ, ನೊಣಬೂರು, ಮಲ್ಲೇಸರ, ನರೆಟೂರು, ಸರಳ, ಶಿರುಪತಿ, ಹಿರೇಗದ್ದೆ, ಹಿರೇಸರ, ನಿಜಗೂರು, ಗೇರುವಳ್ಳಿ, ಮುಕ್ತಿಹರಿಹರಪುರ, ಸಾಲೂರು, ಬೊಬ್ಲಿ, ಕವಲೆದುರ್ಗ, ಕಿಮ್ಮನೆ, ಟೆಂಕಬೈಲು, ಹೊಸಕೊಡಿಗೆ, ನೇರಲಮನೆ, ಲಿಂಗಾಪುರ.

ಕಟ್ಟೆಹಕ್ಲು ಶಾಖಾಧಿಕಾರಿ ಭೀಮಾ ನಾಯ್ಕ್ ಮೊ.ಸಂ;8277882837. ಈ ಅಧಿಕಾರಿ ವ್ಯಾಪ್ತಿಗೆ ಬರುವ ಸ್ಥಳಗಳು ದೇವಂಗಿ, ಇಂಗ್ಲಾದಿ, ಹಡಗಿನಮಕ್ಕಿ, ವಟಗಾರು, ಹಳುವಾನಿ, ಬಸವಾನಿ, ಬಂಡಿಗಡಿ, ಗುರುವಳ್ಳಿ, ಬೆಕ್ಕನೂರು, ಕಿರಣಕೆರೆ, ಹೇರಂಬಾಪುರ, ಬೆಳ್ಳಂಗಿ, ಕಬಸೆ, ಬುಕ್ಲಾಪುರ, ಕುಳೂರು, ಸಾಲ್ಗಡಿ, ಕಟುಗಾರು, ಅಂಗಾಳಗೂಡಿಗೆ, ಹಸಂದೂರು, ಮೃಗಾವಧೆ, ಮಣಿಕೊಪ್ಪ, ಕೊಳಿಗೆ, ಶೆಡ್ಗಾರ್, ತುಂಬ್ರಮನೆ, ಪಟ್ಲಮನೆ, ಹೊನ್ನಕೆರೆ, ಆಲ್ಮನೆ, ಮೇಳಿಗೆ, ನಂಬಳ, ಹೊಳೆಕೊಪ್ಪ, ಹೆದ್ದೂರು.

ಬೆಜ್ಜವಳ್ಳಿ ಶಾಖಾಧಿಕಾರಿ ಶೇಷಗಿರಿ ಮೊ.ಸಂ:8277882836 ಈ ಅಧಿಕಾರಿ ವ್ಯಾಪ್ತಿಗೆ ಬರುವ ಸ್ಥಳಗಳು ಬಾಳಗಾರು, ಬೆಕ್ಷಿಕೆಂಜಿಗುಡ್ಡೆ, ಭಾರತೀಪುರ, ಬಿಳುವೆ, ಬಿಳುವೆ ಹರಿಹರಪುರ, ಕೆಸರೆ, ಕುಡುಮಲ್ಲಿಗೆ, ಮಹಿಶಿ, ನೆಲ್ಲಿಸರ, ಬೆಟ್ಟಬಸರವಾನಿ, ಕಣಬೂರು, ನೆರಳಕೊಪ್ಪ, ಯಡಗುಡ್ಡೆ, ಬಂಡ್ಯಾ, ಕುಕ್ಕೆ, ಬಸವನಗದ್ದೆ, ದನಸಾಲೆ, ಗರಗ, ಹಣಗೆರೆ, ಹೊರಬೈಲು, ಹೊಸಬೀಡು, ಜೀರಹಳ್ಳಿ, ಜೋಗಿಕೊಪ್ಪ, ಕವಲತ್ತಿ, ಕನ್ನಂಗಿ, ಕಿಕ್ಕೇರಿ, ಕೊಂಬಿನಕೈ, ಮರಹಳ್ಳಿ, ನಯದವಳ್ಳಿ, ಶೀರನಹಳ್ಳಿ, ಬೆಜ್ಜುವಳ್ಳಿ, ಬೈಲುಬಡಗಿ, ಕಾವೇರಿ, ಕುಚ್ಚುಲು, ಕುಡುವಳ್ಳಿ, ಮಾಲೂರು, ನಂದಗದ್ದೆ, ಶೀಕೆ, ಯಡವತ್ತಿ, ಹುಲುಮಹಿಶಿ, ಹಿರೇತೋಟ, ಕಸಗಾರು, ಹೆಗ್ಗಾರು, ದೋಣಿಕಂಡಿ, ಅಕ್ಕಸಾಲೆಕೊಪ್ಪ, ಕಲ್ಲಹಳ್ಳಿ, ಕಲ್ಲತ್ತಿ, ಮಕ್ಕಿಕೊಪ್ಪ, ಭದ್ರಾರಾಜಪುರ, ಸೀಕೆ, ಶಿಲೇಕುಣಿ, ಕೊಕ್ಕಿನಮನೆ, ಕಿರುವಾಸೆ, ಆರನಲ್ಲಿ, ಕರಕುಚಿ, ಕಲ್ಕೊಪ್ಪ, ಹೊದ್ಲ.

ಬೆಜ್ಜವಳ್ಳಿ ಉಪವಿಭಾಗಾಧಿಕಾರಿ ವಿ.ಎಸ್.ಶ್ರೀಧರ್ ಮೊ.ಸಂ:8277882835. ಕೋಣಂದೂರು ಶಾಖಾಧಿಕಾರಿ ಕಿರಣ್ ಮೊ.ಸಂ:9448289695. ಈ ಅಧಿಕಾರಿ ವ್ಯಾಪ್ತಿಗೆ ಬರುವ ಸ್ಥಳಗಳು ಹಾದಿಗಲ್ಲು, ಹಲವನಹಳ್ಳಿ, ಹುಂಚದಕಟ್ಟೆ, ಮಂಡಕ, ಮಣಿಯೂರು, ಶಂಕರಹಳ್ಳಿ, ಉಂಬ್ಳೆಬೈಲು ದೇಮ್ಲಾಪುರ, ಹಿರೇಕಲ್ಲಳ್ಳಿ, ಹುತ್ತಳ್ಳಿ, ಮೇಲಿನಕಡಗೋಡು, ತೊರೆಬೈಲು, ಯೋಗಿಮಳಲಿ, ಕೆರೆಕೋಡಿ, ಹಾಲೆಸರ, ಕೋಣಂದೂರು, ಸಣ್ಣಿಕೊಪ್ಪ, ಅಗಸಾಡಿ, ಗುಡ್ಡೆಕೊಪ್ಪ, ಹೊಸಕೆರೆ, ಹುಲ್ಲುಕೋಡು, ಜಂಬೆತಲ್ಲೂರು, ಕರಡಿಗ, ಕಟ್ಟೆಕೊಪ್ಪ, ಕೊಳಿಗೆ, ಮರಗಳಲೆ, ತೈರಂದೂರು, ಆಡಿನಸರ, ಆಕ್ಲಾಪುರ, ಹಲ್ಲುಸಾರೆ, ಹುಲ್ಲತ್ತಿ, ಕಿಟ್ಟಂದೂರು, ಸಾಲೆಕೊಪ್ಪ, ಉಡುಕೆರೆ, ವಿರುಪಾಪುರ, ಬಾವಿಕೈಸರ, ಗುಡ್ಡೆಪಾಲ್, ಮಂಡಲಮನೆ, ತರಗೊಳ್ಳಿ, ಕಗ್ಗುಂಡಿ, ಕುಂಬಾರಕೊಪ್ಪ, ಮುನಿಯೂರು, ಹೊಡ್ಲಾಕುತ್ರ, ಮರಡಿ, ತ್ರಿಯಂಬಕಪುರ, ಬಂಡ್ಯಾ ಆಲೂರು, ಹಲುವಾನಿ, ಹೆರಬೈಲು, ಬೀಡೆ, ಆಲೂರು, ಹೊಸಕೊಪ್ಪ.

ಮಂಡಗದ್ದೆ ಶಾಖಾಧಿಕಾರಿ ಜಾನ್ ಇಮ್ಯಾನುಯಲ್ ಪ್ರಜ್ವಲ್ ಮೊ.ಸಂ:9448289693. ಈ ಅಧಿಕಾರಿ ವ್ಯಾಪ್ತಿಗೆ ಬರುವ ಸ್ಥಳಗಳು ಬೆಗುವಳ್ಳಿ, ತೂದೂರು, ಗುತ್ತಿಯಡೆಹಳ್ಳಿ, ಜಂಬುವಳ್ಳಿ, ಯಡೆಹಳ್ಳಿ, ಹೆಮ್ಮಕ್ಕಿ, ಕಣಗಲಕೊಪ್ಪ, ಕೆಲನರಸಿ, ಲಿಂಗಾಪೂರ, ಮೇಲಿನಪದರಹಳ್ಳಿ, ಶಿಂದುವಾಡಿ, ಮಂಡಗದ್ದೆ ವಾಟರ್ ಸಪ್ಲೈ, ಕೆರೆಕೊಪ್ಪ, ತೈಂದೂರು, ಉಬ್ಬೂರು, ಹಲಗ, ಹಲಸವಾಳ, ಹೆಗಲತ್ತಿ, ಕೀಗಡಿ, ಕುಳುಂಡೆ, ಸಿಂಗನಬಿದರೆ, ತಳಲೆ, ತೋಟದಕೊಪ್ಪ, ಮತ್ತಿಗಾರು, ಆಚಪೇಟೆ, ಮುಸ್ಲಿಂಪೇಟೆ, ಬೊಮ್ಮನಹಳ್ಳಿ, ಕುದ್ರೋಣಿ, ಕಾರೆಮಕ್ಕಿ, ಕಿರುವತ್ತಿ, ಕುಡಿಗೆ.

The Mysore Electrical Industries Ltd ರಾಜ್ಯ ಸರ್ಕಾರಕ್ಕೆ ಮೈಸೂರ್ ವಿದ್ಯುಚ್ಛಕ್ತಿ‌ ಕೈಗಾರಿಕೆ ಪರವಾಗಿ₹ 1 ಕೋಟಿ ಚೆಕ್ ಸಲ್ಲಿಕೆ

0

The Mysore Electrical Industries Ltd ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟಿಸ್ ಲಿಮಿಟೆಡ್‌ನ ಪರವಾಗಿ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಂದು ಕೋಟಿ ರೂಪಾಯಿ ಮೊತ್ತದ ಡಿವಿಡೆಂಡ್ ಚೆಕ್ ಅನ್ನು ಸಲ್ಲಿಸಿದರು. ‌

ಈ ಸಂದರ್ಭದಲ್ಲಿ, ಸಚಿವರಾದ ಡಾ.ಹೆಚ್.ಸಿ. ಮಹದೇವಪ್ಪ, ಶಿವರಾಜ್ ಎಸ್. ತಂಗಡಗಿ, ಸಂಸ್ಥೆಯ ಅಧ್ಯಕ್ಷ ಎಸ್.ಮನೋಹರ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ವ್ಯವಸ್ಥಾಪಕ ನಿರ್ದೇಶಕ ಅನಿತಾ.ಸಿ ಹಾಜರಿದ್ದರು.

Karnataka Police Champion ರಾಷ್ಟ್ರೀಯ ಪೊಲೀಸ್ ಕ್ರೀಡಾಕೂಟದಲ್ಲೂ ರಾಜ್ಯ ಪೊಲೀಸ್ ಚಾಂಪಿಯನ್ ಶಿಪ್ ಗಳಿಸಲಿ – ಡಾ.ಜಿ.ಪರಮೇಶ್ವರ

0

Karnataka Police Champion ರಾಷ್ಟ್ರೀಯ ಮಟ್ಟದ ಪೊಲೀಸ್ ಕ್ರೀಡಾ ಕೂಟದಲ್ಲಿ ಕರ್ನಾಟಕ‌ ಪೊಲೀಸ್ ಚಾಂಪಿಯನ್ ಆಗಿ ಹೊರ ಹೊಮ್ಮಬೇಕು. ಈ ನಿಟ್ಟಿನಲ್ಲಿ ಎಲ್ಲ ರೀತಿಯ ಉತ್ತೇಜನವನ್ನು ನೀಡಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ತಿಳಿಸಿದರು.

ಕೋಮಂಗಲದ ಕೆಎಸ್‌ಆರ್‌ಪಿ ಕ್ರೀಡಾಂಗಣದಲ್ಲಿ ನಡೆದ ‘ಕರ್ನಾಟಕ ರಾಜ್ಯ ಪೊಲೀಸ್ ವಾರ್ಷಿಕ ಕ್ರೀಡಾಕೂಟ-2024 ಸಮಾರೋಪ ಸಮಾರಂಭ’ದಲ್ಲಿ ಭಾಗವಹಿಸಿ, ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಕ್ರೀಡೆಯಲ್ಲಿ ಭಾಗವಹಿಸುವವರಿಗೆ ತಯಾರಿ ಬಹಳ‌ ಮುಖ್ಯವಾಗುತ್ತದೆ ಅದಕ್ಕಾಗಿ ವಿಶೇಷ ತರಬೇತಿಯನ್ನು ನೀಡುವಂತೆ ಇಲಾಖೆಯ ಮುಖ್ಯಸ್ಥರಿಗೆ ಸೂಚಿಸುತ್ತೇನೆ. ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಚಾಂಪಿಯನ್ ಗಳಾಗಬೇಕು. ತನಿಖೆಯಲ್ಲಿ ಕರ್ನಾಟಕ ಪೊಲೀಸ್ ಬೆಸ್ಟ್‌ ಪೊಲೀಸ್ ಎಂದು ಹೇಳುತ್ತಾರೆ. ಕ್ರೀಡೆಯಲ್ಲಿಯೂ ಕೂಡ ಕರ್ನಾಟಕ ಪೊಲೀಸ್ ಬೆಸ್ಟ್ ಎಂದು ಹೇಳುವಂತಾಗಬೇಕು ಎಂದರು.

ಮುಖ್ಯಮಂತ್ರಿಯವರು ಪೊಲೀಸ್ ಇಲಾಖೆಯ ನೇಮಕಾತಿಯಲ್ಲಿ ಶೇ. 3 ರಷ್ಟು ಮೀಸಲಾತಿಯನ್ನು ಕಲ್ಪಿಸಿ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಬೇರೆ ಯಾವ ರಾಜ್ಯಗಳು ಸಹ ಇಷ್ಟೊಂದು ಮೀಸಲಾತಿಯನ್ನು ನೀಡಿಲ್ಲ‌‌. ಕೆಎಸ್‌ಆರ್‌ಪಿ ಕ್ರೀಡಾಂಗಣ ನವೀಕರಣಗೊಳಿಸಲು 3 ಕೋಟಿ ರೂ‌. ಅನುದಾನ ನೀಡಲಾಗಿದೆ. ಮುಂದಿನ ವರ್ಷದ ಕ್ರೀಡಾಕೂಟದ ವೇಳೆಗೆ ಸಿಂಥೆಟಿಕ್ ಟ್ರ್ಯಾಕ್ ಸಿದ್ಧವಾಗಲಿದೆ ಎಂದು ಹೇಳಿದರು.

ಪೊಲೀಸ್ ಇಲಾಖೆಗೆ ಕ್ರೀಡಾ ಚಟುವಟಿಕೆಗಳು ಬಹಳ‌ ಮುಖ್ಯ. ಆತ್ಮಸ್ಥೈರ್ಯ, ದೈಹಿಕ ಸದೃಢತೆಯನ್ನು ಹೆಚ್ಚಿಸುತ್ತದೆ. ನಮ್ಮ ಜೀವನದಲ್ಲಿ ಸೋಲು-ಗೆಲುವುಗಳನ್ನು ಸರಿಸಮಾನವಾಗಿ ತೆಗೆದುಕೊಳ್ಳಲು ಕ್ರೀಡೆ ಸ್ಪೂರ್ತಿಯಾಗುತ್ತದೆ. ಕ್ರೀಡಾಕೂಟ ನಿಮ್ಮೆಲ್ಲರ ಆತ್ಮಸ್ಥೈರ್ಯ ಹೆಚ್ಚಿಸಲಿ ಎಂದು ಪೊಲೀಸ್ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.

Karnataka Police Champion ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಎಂ.ಎ. ಸಲೀಂ ಅವರು ರಾಜ್ಯದಲ್ಲಿ ಸಮರ್ಥವಾದ ಪೊಲೀಸ್ ಪಡೆ ಕಟ್ಟಬೇಕು ಎಂಬ ಇಚ್ಛೆ ಹೊಂದಿದ್ದಾರೆ. ಕಳೆದ ಎರಡು ದಿನದಿಂದ‌ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ‌ ಸಮಾವೇಶದಲ್ಲಿ ಪೊಲೀಸ್ ದೂರದೃಷ್ಟಿಯ ಬಗ್ಗೆ ಚರ್ಚಿಸಲಾಯಿತು. ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.

ಪೊಲೀಸ್ ಇಲಾಖೆ ಜನಸಮುದಾಯದ ಜೊತೆ ಹೇಗೆ ಕೆಲಸ ಮಾಡಬೇಕು ಎಂಬುದು ಸೇರಿದಂತೆ ಹಲವು ಮಹತ್ವದ ವಿಚಾರಗಳು ಕುರಿತು ಚರ್ಚಿಸಲಾಗಿದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾ. ಎಂ.ಎ.ಸಲೀಂ, ಕೆಎಸ್‌ಆರ್‌ಪಿ ಎಡಿಜಿಪಿ‌ ಉಮೇಶ್ ಕುಮಾರ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಕೆಎಸ್‌ಆರ್‌ಪಿ ಐಜಿಪಿ ಸಂದೀಪ್ ಪಾಟೀಲ್ ಮುಂತಾದ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Karnataka Education Act ಜಿಲ್ಲೆಯಲ್ಲಿನ ಕೋಚಿಂಗ್ ಸೆಂಟರ್ ಗಳು ಕಡ್ಡಾಯ ನೋಂದಣಿ ಮಾಡಿಸಬೇಕು

0

Karnataka Education Act ಕರ್ನಾಟಕ ಶಿಕ್ಷಣ ಕಾಯ್ದೆ 1983 ಅನುಚ್ಛೆದ 35ರ ಪ್ರಕಾರ ಹಾಗೂ ಕರ್ನಾಟಕ ಟ್ಯುಟೋರಿಯಲ್ ಇನ್ಸ್ಟಿಟ್ಯೂಷನ್ಸ್ ನಿಯಮಗಳು 2001 ಈ ನಿಯಮವು ಸರ್ಕಾರದ ಅಧಿಸೂಚನೆ ಇಡಿ 43 ವಿವಧ 2000, ದಿ: 05/03/2002 ರಿಂದ ಜಾರಿಗೆ ಬಂದಿದ್ದು, ಈ ನಿಯಮಗಳ ಅಡಿಯಲ್ಲಿ ಪದವಿ ಪೂರ್ವ ಶಿಕ್ಷಣಕ್ಕೆಸಂಬಂಧಿಸಿದ ಕೋಚಿಂಗ್ ಸೆಂಟರ್/ ಸಂಸ್ಥೆಗಳನ್ನು ನಡೆಸಲು ಉದ್ದೇಶಿಸಿದ ಹಾಗೂ ಈಗಾಗಲೇ ನಡೆಸುತ್ತಿರುವ ಕೋಚಿಂಗ್ ಸೆಂಟರ್/ಸಂಸ್ಥೆಗಳನ್ನು ಕಡ್ಡಾಯವಾಗಿ ನೋಂದಾಯಿಸಬೇಕಾಗಿದ್ದು, ಮತ್ತು ಪ್ರತಿ ವರ್ಷ ನವೀಕರಿಸಿಕೊಳ್ಳಬೇಕು.

ಅನಧಿಕೃತವಾಗಿ ಕೋಚಿಂಗ್ ಸೆಂಟರ್/ಸಂಸ್ಥೆಗಳನ್ನು ನಡೆಸುತ್ತಿರುವುದು ಕಂಡುಬಂದಲ್ಲಿ ಕಾನೂನು ರೀತ್ಯಾ ಕ್ರಮಗಳನ್ನು ಜರುಗಿಸಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

Karnataka Education Act ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಚೇರಿ, ಪದವಿ ಪೂರ್ವ ಶಿಕ್ಷಣ ಇಲಾಖೆ, ಬಿ.ಹೆಚ್.ರಸ್ತೆ, ಶಿವಮೊಗ್ಗ ಇವರನ್ನು ಸಂಪರ್ಕಿಸುವುದು.

Bharat Scout and Guides ಪ್ಲಾಸ್ಟಿಕ್ ಮಾಲಿನ್ಯ ಪಶ್ಚಿಮ ಘಟ್ಟಗಳಿಗೆ ಮಾರಕ- ಪ್ರೊ.ಬಿ.ಎಂ.ಕುಮಾರಸ್ವಾಮಿ

0

Bharat Scout and Guides ಶಿವಮೊಗ್ಗ ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಶಿವಮೊಗ್ಗ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಅಧ್ಯಯನ ಕೇಂದ್ರ ಮತ್ತು ರೇಡಿಯೋ ಶಿವಮೊಗ್ಗ 90.8, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮತ್ತು ಸ್ಥಳೀಯ ಸಂಸ್ಥೆ ಹಾಗೂ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು.

ವಿಶ್ವ ಪರಿಸರ ದಿನಾಚರಣೆಯ ಸಂಪನ್ಮೂಲ ವ್ಯಕ್ತಿಯಾಗಿ ಖ್ಯಾತ ಪರಿಸರವಾದಿ ಪ್ರೊಫೆಸರ್ ಬಿ.ಎಂ. ಕುಮಾರಸ್ವಾಮಿಯವರು ಭಾಗವಹಿಸಿ ಮಾತನಾಡಿದರು.

“ಜಗತ್ತಿನ ಶ್ವಾಸಕೋಶವಾದ ಪಶ್ಚಿಮ ಘಟ್ಟಗಳು ಅಭಿವೃದ್ಧಿಯ ಅವಾಂತರಕ್ಕೆ ಸಿಕ್ಕಿ ಕುಸಿಯುತ್ತಿದೆ ಪ್ಲಾಸ್ಟಿಕ್ ಮಾಲಿನ್ಯ ಪಶ್ಚಿಮ ಘಟ್ಟಕ್ಕೆ ಕಂಟಕವಾಗಿದೆ ಪಶ್ಚಿಮ ಘಟ್ಟದೊಳಗಿರುವ ನಾವು ಇಂಥ ಸೂಕ್ಷ್ಮತೆಗಳನ್ನು ಗಮನಿಸ ಬೇಕು” ಎಂಬುದನ್ನು ಅಂಕಿ ಅಂಶಗಳ ಮೂಲಕ ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಶಿವಮೊಗ್ಗದ ಪ್ಯಾನಲ್ ಅಡ್ವಕೇಟ್ ಶ್ರೀ ಚಂದ್ರಶೇಖರಪ್ಪ ಎನ್ ಮಾತನಾಡುತ್ತಾ “ಏಕ ಬಳಕೆಯ ಪ್ಲಾಸ್ಟಿಕ್ ನಿಂದ ಬಹಳ ದೊಡ್ಡ ಪರಿಣಾಮ ನಮ್ಮೆಲ್ಲರ ಮೇಲು ಆಗುತ್ತಿದ್ದು ಇಂದಿನ ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯಕ್ಕಾಗಿ ಪ್ಲಾಸ್ಟಿಕ್ ಮಾಲಿನ್ಯವನ್ನು ಬಹಳ ದೊಡ್ಡ ಮಟ್ಟದಲ್ಲಿ ನಿಯಂತ್ರಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ದಂತಹ ಪ್ರಾದೇಶಿಕ ಹಿರಿಯ ಪರಿಸರ ಅಧಿಕಾರಿ ಶ್ರೀ ರಮೇಶ್ ಡಿ ನಾಯಕ್ ರವರು ಮಾತನಾಡುತ್ತಾ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ರೆಫ್ಯೂಸ್, ರೆಡ್ಯೂಸ್, ರೀಯೂಸ್ ಪರಿಕಲ್ಪನೆ ಯೊಂದಿಗೆ ಬಳಸೋಣ ಎಂದು ಕರೆ ನೀಡಿದರು.

Bharat Scout and Guides ನಂತರ ಭಾರತ್ ಸ್ಕೌಟ್ ಅಂಡ್ ಗೈಡ್ಸ್ ನ ಜಿಲ್ಲಾ ಪ್ರಧಾನ ಆಯುಕ್ತರದ ಶಕುಂತಲಾ ಚಂದ್ರಶೇಖರ್ ಪರಿಸರ ಜಾಗೃತಿಯ ಬಗ್ಗೆ ಮಾತನಾಡುತ್ತಾ ಕರ್ನಾಟಕ ರಾಜ್ಯಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತರಾದ ಸನ್ಮಾನ್ಯ ಶ್ರೀ ಪಿ ಜಿ ಆರ್ ಸಿಂಧ್ಯಾ ರವರ ಪರಿಕಲ್ಪನೆಯಂತೆ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ಅದನ್ನು ಪುನರ್ ಬಳಕೆ ಮಾಡುವಂತೆ ತಿಳಿಸಿದ್ದಾರೆ ಅದನ್ನು ಶಿವಮೊಗ್ಗ ಜಿಲ್ಲಾ ಸಂಸ್ಥೆಯು ಸಹ ಅನುಸರಿಸುತ್ತಿದೆ, ವಿದ್ಯಾರ್ಥಿಗಳು ಇದಕ್ಕೆ ಪೂರಕವಾಗಿ ಸ್ಪಂದಿಸಿ ಈ ಅಭಿಯಾನವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಕೋರಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಪರಿಸರ ಅಧ್ಯಯನ ಕೇಂದ್ರದ ವತಿಯಿಂದ ಆಯೋಜಿಸಲಾಗಿದಂತಹ ಚಿತ್ರಕಲೆ, ಪ್ರಬಂಧ ಹಾಗೂ ಸಮೂಹ ಗಾನ ಸ್ಪರ್ಧೆಗಳಲ್ಲಿ ವಿಜೇತರಾದಂತಹ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಪರಿಸರ ಅಧ್ಯಯನ ಕೇಂದ್ರದ ದಿನೇಶ್ ಹೊಸನಗರ ನಡೆಸಿಕೊಟ್ಟರು.

ಕಾರ್ಯಕ್ರಮಕ್ಕೆ ಸ್ವಾಗತವನ್ನು ಕ ರಾ ಮಾ ನಿ ಮಂ ಪ್ರಾದೇಶಿಕ ಕಚೇರಿಯ ಉಪ ಪರಿಸರ ಅಧಿಕಾರಿಯದ ಶ್ರೀಮತಿ ಶಿಲ್ಪ ನಡೆಸಿಕೊಟ್ಟರು.

ಕಾರ್ಯಕ್ರಮಕ್ಕೆ ಪ್ರಾಸ್ತಾವಿಕ ನುಡಿಯನ್ನು ಪರಿಸರ ಅಧಿಕಾರಿಯದ ಶ್ರೀ ವಿ ರಮೇಶ್ ನಡೆಸಿಕೊಟ್ಟರು ಕಾರ್ಯಕ್ರಮದ ಅಧ್ಯಕ್ಷತೆಯನ್ನ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಮಹೇಶ್ವರಪ್ಪ ಟಿ. ಎಸ್. ವಹಿಸಿ ವಿದ್ಯಾರ್ಥಿನಿಯರು ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜನ್ನು ಪ್ಲಾಸ್ಟಿಕ್ ಮುಕ್ತ ಕಾಲೇಜನ್ನಾಗಿ ರೂಪಿಸಲು ಸಹಕರಿಸಬೇಕೆಂದು ಕೋರಿದರು.

ಕಾರ್ಯಕ್ರಮದಲ್ಲಿ ರೇಡಿಯೋ ಶಿವಮೊಗ್ಗದ ಆರ್ ಜೆ ಪವಿತ್ರ ದಿನೇಶ್, ಜೀವ ವೈವಿಧ್ಯದ ಮತ್ತು ಸಂಶೋಧನಾ ಪ್ರಯೋಗಾಲಯದ ಶ್ರೀಮತಿ ರಾಧಾ ಸಂತೋಷ್ ಹಾಗೂ ಶ್ರೀಮತಿ ಸಹನ ,ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ನ ಜಿಲ್ಲಾ ಕಾರ್ಯದರ್ಶಿ ಕೆ ವಿ ಚಂದ್ರಶೇಖರಯ್ಯ, ಕೇಂದ್ರ ಸ್ಥಾನಿಕ ಆಯುಕ್ತರಾದ ಜಿ ವಿಜಯಕುಮಾರ್ ,ಶ್ರೀ ಚೂಡಮನಿ ಪವಾರ್, ಶ್ರೀ ಶಿವಶಂಕರ್, ಶ್ರೀಮತಿ ಲಕ್ಷ್ಮಿ ಕೆ ರವಿ ಮುಂತಾದವರು ಉಪಸ್ಥಿತರಿದ್ದರು.

ಶಿವಮೊಗ್ಗ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಶ್ರೀ ರಾಜೇಶ್ ವಿ ಅವಲಕ್ಕಿ ರವರು ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಹಿರಿಯ ಉಪನ್ಯಾಸಕ, ಉಪನ್ಯಾಸಕಿ ವರ್ಗದವರು ರೇಂಜರ್ಸ್ ಮತ್ತು ವಿದ್ಯಾರ್ಥಿನಿಯರು ಹಾಗೂ ವಿವಿಧ ಶಾಲಾ ಕಾಲೇಜಿನ ಪ್ರಶಸ್ತಿ ವಿಜೇತರು ಭಾಗವಹಿಸಿದ್ದರು. ರಾಷ್ಟ್ರಗೀತೆ ಗಾಯನದೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಳಿಸಲಾಯಿತು.

Lok Adalat ಲೋಕ್‌ ಅದಾಲತ್‌ನಲ್ಲಿ ಹೆಚ್ಚಿನ ಪ್ರಕರಣ ಇತ್ಯರ್ಥಪಡಿಸಲು ಸಹಕರಿಸಲು ಮನವಿ : ನ್ಯಾ.ಮಂಜುನಾಥ್ ನಾಯಕ್

0

Lok Adalat ರಾಜೀಯಾಗಬಹುದಾದ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಸುಲಭವಾಗಿ ಮತ್ತು ಶೀಘ್ರವಾಗಿ ಇತ್ಯರ್ಥಪಡಿಸುವ ಲೋಕ್ ಅದಾಲತ್ ಕಾರ್ಯಕ್ರಮ ಜು..12 ರಂದು ಜಿಲ್ಲೆಯಲ್ಲಿ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ಇತ್ಯರ್ಥವಾಗಿ ಲೋಕ್ ಅದಾಲತ್ ಯಶಸ್ವಿಯಾಗಲು ಎಲ್ಲರೂ ಸಹಕರಿಸಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ್ ನಾಯಕ್ ಮನವಿ ಮಾಡಿದರು.
ಲೋಕ್ ಅದಾಲತ್ ಕುರಿತು ಚರ್ಚಿಸಲು ಗುರುವಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನ್ಯಾಯಾಧೀಶರು, ಅಧಿಕಾರಿಗಳು, ಅಭಿಯೋಜಕರು, ಇನ್ಶೂರೆನ್ಸ್ ಕಂಪೆನಿಗಳ ಅಧಿಕಾರಿಗಳೊಂದಿಗೆ ನಡೆಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಲೋಕ್ ಅದಾಲತ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕಾಗಿ ಬಾಕಿ ಇರುವ ಸಿವಿಲ್, ವೈವಾಹಿಕ, ಮೋಟಾರು ಪರಿಹಾರ ಪ್ರಕರಣಗಳು, ಚೆಕ್‌ಬೌನ್ಸ್ ಪ್ರಕರಣಗಳು ಸೇರಿದಂತೆ ರಾಜೀಯಾಗಬಹುದಾದ ಸಿವಿಲ್, ಕ್ರಿಮಿನಲ್ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗುವುದು. ಬ್ಯಾಂಕುಗಳಿಗೆ ಸಂಬಂಧಿಸಿದ ಸಾಲದ ಹಣದ ವಸೂಲಾತಿ ಪ್ರಕರಣಗಳು. ವಿದ್ಯುಚ್ಛಕ್ತಿ, ಜಲಮಂಡಳಿ ಹಾಗೂ ನ್ಯಾಯಾಲಯಕ್ಕೆ ಬರಬಹುದಾದಂತಹ ಇತರೆ ಯಾವುದೇ ಪ್ರಕರಣಗಳನ್ನು ಪೂರ್ವ ವ್ಯಾಜ್ಯ ಪ್ರಕರಣಗಳೆಂದು ಪರಿಗಣಿಸಿ, ಅವುಗಳಲ್ಲಿ ಸಹ ಉಭಯ ಕಕ್ಷಿದಾರರನ್ನು ಕರೆಸಿಕೊಂಡು ರಾಜಿ ಸಂಧಾನದ ಮೂಲಕ ವಿವಾದಗಳನ್ನು ಬಗೆಹರಿಸಿ ಅವಾರ್ಡ್ ಪಾಸು ಮಾಡಲಾಗುವುದು. ಈ ಬಾರಿ ‘ಸಾಥಿ’ ಅಭಿಯಾನದಡಿ ಪರಿತ್ಯಕ್ತ, ಪೋಷಕರಿಲ್ಲದ ಮಕ್ಕಳಿಗೆ ಆಧಾರ್ ಮಾಡಿಸಲಾಗುತ್ತಿದ್ದು, ಅದಕ್ಕೆ ಅಗತ್ಯವಾದ ಜನನ ಪ್ರಮಾಣ ಪತ್ರವನ್ನು ಪಾಲಿಕೆಯವರು ಮಾಡಿಕೊಡಬೇಕೆಂದರು. ಹಾಗೂ ಇನ್ಶೂರೆನ್ಸ್ ಕಂಪೆನಿಗಳು, ವಿವಿಧ ಇಲಾಖೆಗಳು ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಸಹಕರಿಸಬೇಕೆಂದರು.
Lok Adalat ದಿನಾಂಕ 14-12-2024 ರಂದು ನಡೆದ ಲೋಕ್ ಅದಾಲತ್‌ನಲ್ಲಿ ಒಟ್ಟು 13393 ಪ್ರಕರಣಗಳು ವಿಲೇವಾರಿ ಆಗಿವೆ. ದಿನಾಂಕ 08-03-2025 ರಂದು ನಡೆದ ಲೋಕ್ ಅದಾಲತ್ ನಲ್ಲಿ 13808 ವಿಲೇವಾರಿ ಆಗಿದ್ದು, ದಿನಾಂಕ: 12-07-2025 ರಂದು ನಡೆಯಲಿರುವ ಲೋಕ್ ಅದಾಲತ್‌ಗೆ ಈಗಾಗಲೇ 14014 ಪ್ರಕರಣಗಳನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದ ಅವರು ಕಳೆದ ಬಾರಿ ವಿವಿಧ ಪ್ರಕರಣಗಳನ್ನು ಇತ್ಯರ್ಥಪಡಿಸಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಎಂ.ಎಸ್. ಒಂದನೇ ಮತ್ತು ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ, ಸರ್ಕಾರಿ ಅಭಿಯೋಜಕರು, ಇನ್ಶೂರೆನ್ಸ್ ಕಂಪೆನಿ ಅಧಿಕಾರಿಗಳು, ಅಬಕಾರಿ, ಅರಣ್ಯ, ಮೆಸ್ಕಾಂ, ಬ್ಯಾಂಕುಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

Veerashaiva Kalyana Mandira ಸ್ತನ ಮತ್ತು ಗರ್ಭಕೊರಳಿನ ಕ್ಯಾನ್ಸರ್ ರೋಗವನ್ನ ಆರಂಭದಲ್ಲೇ ಪತ್ತೆ ಮಾಡಿ ಗುಣಪಡಿಸಬಹುದು – ಡಾ.ಬಿ.ಎಸ್.ಗಿರಿಜಾ ಪ್ರಸನ್ನ ಕುಮಾರ್

0

Veerashaiva Kalyana Mandira ಮಹಿಳೆಯರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಡಾ. ಬಿ.ಎಸ್.ಗಿರಿಜಾ ಪ್ರಸನ್ನಕುಮಾರ್ ಹೇಳಿದರು.

ಶಿವಮೊಗ್ಗ ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಆಯೋಜಿಸಿದ್ದ ಕದಳಿ ವನಿತ ಸಮಾಜದ 32ನೇ ವಾರ್ಷಿಕೋತ್ಸವ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಉದ್ಘಾಟಿಸಿ ಮಾತನಾಡಿ, ಕಾಯಿಲೆಯನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸಲು ಸಾಧ್ಯವಿದೆ ಎಂದು ತಿಳಿಸಿದರು.

ಕದಳಿ ವನಿತಾ ಸಮಾಜದ ನೂತನ ಅಧ್ಯಕ್ಷೆ ಸುಜಾತ ಬಸವರಾಜ್ ಮಾತನಾಡಿ, ಮಹಿಳೆಯರಿಗೆ ಇತ್ತೀಚೆಗೆ ಸಾಮಾನ್ಯವಾಗಿ ಕಂಡು ಬರುತ್ತಿರುವ ಸ್ತನ ಕ್ಯಾನ್ಸರ್ ಹಾಗೂ ಗರ್ಭ ಕೊರಳ ಕ್ಯಾನ್ಸರ್ ಇವುಗಳನ್ನು ಪ್ರಾಥಮಿಕ ಹಂತದಲ್ಲಿ ಪತ್ತೆ ಹಚ್ಚಬಹುದಾಗಿದೆ. ಕಾಯಿಲೆ ಗುಣಪಡಿಸುವ ಬಗ್ಗೆ ಸೂಕ್ತ ವೈದ್ಯರಲ್ಲಿ ಮಾರ್ಗದರ್ಶನ ಪಡೆಯಬೇಕು ಎಂದು ತಿಳಿಸಿದರು.

ಅಧ್ಯಕ್ಷೆಯಾಗಿ ಸುಜಾತ ಬಸವರಾಜ್, ಉಪಾಧ್ಯಕ್ಷೆ ಉಮಾ, ಕಾರ್ಯದರ್ಶಿ ಸವಿತಾ, ಸಹಕಾರ್ಯದರ್ಶಿ ಸುರೇಖಾ, ಖಜಾಂಚಿ ನಿರ್ಮಲ, ನಿರ್ದೇಶಕರಾಗಿ ಲತಾ ಶಂಕರ್, ಮಂಜುಳಾ, ವನಜಾಕ್ಷಿ ಹಾಗೂ ಜಯಮ್ಮ ಪದಗ್ರಹಣ ಮಾಡಿದರು.

ಕದಳಿ ವನಿತಾ ಸಮಾಜದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶಿಸಲಾಯಿತು.

Veerashaiva Kalyana Mandira ಅರುಣಾಚಂದ್ರ ಶೇಖರ್, ಸವಿತಾ, ರೂಪ, ಶೈಲ, ಭಾರತಿ, ವಾಸಂತಿ, ಶೋಭಾ, ಗಿರಿಜಾ ಹಾಗೂ ಜ್ಯೋತಿ ಉಪಸ್ಥಿತರಿದ್ದರು.
ಕದಳಿ ವನಿತಾ ಸಮಾಜದಿಂದ ಬಸವೇಶ್ವರ ಪ್ರೌಢಶಾಲೆ ಹಾಗೂ ಪಿಯು ವಿದ್ಯಾರ್ಥಿಗಳಿಗೆ ಹಾಗೂ ಕದಳಿ ಸಮಾಜದ ಸದಸ್ಯನಿಯರ ಮಕ್ಕಳಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ ತೇರ್ಗಡೆ ಆಗಿರುವ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕೊಡಲಾಯಿತು.

Tungabhadra Reservoir ಜುಲೈ 2 ರಿಂದ ನವೆಂಬರ್ 30 ವರೆಗೆ ವಿವಿಧ ಅಳತೆ ನೀರನ್ನುತುಂಗಭದ್ರಾ ಎಡದಂಡೆ ಕಾಲುವೆ ಮೂಲಕ ಬಿಡುಗಡೆಗೆ ವ್ಯವಸ್ಥೆ- ಶಿವರಾಜ ತಂಗಡಗಿ

0

Tungabhadra Reservoir ತುಂಗಭದ್ರಾ ಜಲಾಶಯದಲ್ಲಿ ಪ್ರಸ್ತುತ 57 ಟಿಎಂಸಿ ನೀರಿನ ಸಂಗ್ರಹ ಇದ್ದು, ಜುಲೈ 2 ರಿಂದ ನವೆಂಬರ್ 11ರವರೆಗೆ ಕಾಲುವೆಗಳಿಗೆ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರೂ ಆದ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ್ ತಂಗಡಗಿ ಅವರು ಹೇಳಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ತುಂಗಭದ್ರಾ ಯೋಜನೆ ಹಾಗೂ ವಿಜಯನಗರ ಕಾಲುವೆಗಳ 124ನೇ ನೀರಾವರಿ ಸಲಹಾ ಸಮಿತಿ ಸಭೆಯ ಬಳಿಕ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಜಲಾಶಯದಲ್ಲಿನ‌ ನೀರಿನ ಸಂಗ್ರಹ ಲಭ್ಯತೆಯ ಮೇರೆಗೆ ನೀರಿನ ಬಳಕೆ ಮಾಡಲಾಗುತ್ತಿದೆ.

ತುಂಗಭದ್ರ ಎಡದಂಡೆ ಮುಖ್ಯ ಕಾಲುವೆಗೆ ಜುಲೈ 2 ರಿಂದ ಜುಲೈ 15 ರವರೆಗೆ 2000 ಕ್ಯೂಸೆಕ್ಸ್ ನಂತೆ, ಜುಲೈ 16 ರಿಂದ 31ರವರೆಗೆ 3000 ಕ್ಯೂ ಸೆಕ್ಸ್ ನಂತೆ ಮತ್ತು ಆಗಸ್ಟ್ 1ರಿಂದ ನವೆಂಬರ್ 30ರವರೆಗೆ 4100 ಕ್ಯೂಸೆಕ್ಸ್ ನಂತೆ ನೀರು ಹರಿಸಲಾಗುವುದು ಎಂದು ಹೇಳಿದರು.

ಬಲದಂಡೆ ಮೇಲ್ಮಟ್ಟದ
ಕಾಲುವೆಗೆ ಜುಲೈ 10ರಿಂದ ಜುಲೈ 31ರವರೆಗೆ ಸರಾಸರಿ 700 ಕ್ಯೂ ಸೆಕ್ಸ್ ನಂತೆ ಆಗಸ್ಟ್ 1ರಿಂದ ನವೆಂಬರ್ 30ರವರೆಗೆ 1300 ಕ್ಯೂಸೆಕ್ಸ್, ಬಲದಂಡೆಯ ಕೆಳಮಟ್ಟದ ಕಾಲುವೆಗೆ 500 ಕ್ಯೂಸೆಕ್ಸ್ , ಆಗಸ್ಟ್ 1 ರಿಂದ ನವೆಂಬರ್ 31ರವರೆಗೆ 650 ಕ್ಯೂ ಸೆಕ್ಸ್ ನೀರನ್ನು ಹರಿಸಲಾಗುವುದು.

ರಾಯ ಬಸವಣ್ಣ ಕಾಲುವೆಗೆ 220 ಕ್ಯೂಸೆಕ್ಸ್ ಹಾಗೂ ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಗೆ 25 ಕ್ಯೂಸೆಕ್ ಅಥವಾ ಕಾಲುವೆಯಡಿ ನೀರಿನ ಲಭ್ಯತೆ ಆಧಾರದ ಮೇರೆಗೆ ನೀರು ಹರಿಸಲು ಸಲಹಾ ಸಮಿತಿಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ವಿಸ್ತೃತವಾದ ಚರ್ಚೆ ನಡೆದಿದ್ದು, ಅಣೆಕಟ್ಟೆಯ ಸುರಕ್ಷತೆ ಮತ್ತು ಬೆಳೆ ಸಂರಕ್ಷಣೆ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಾಲ್ಕು ಜಿಲ್ಲೆಯ ಶಾಸಕರು ಹಾಗೂ ರೈತರನ್ನು ಒಳಗೊಂಡಂತೆ ಸಭೆ ನಡೆಸಬೇಕು ರೈತರು ಬೇಡಿಕೆ ಇಟ್ಟಿದ್ದಾರೆ.

ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಜುಲೈ 2ನೇ ವಾರ ಅಥವಾ ಮೂರನೇ ವಾರದಲ್ಲಿ ಸಭೆ ನಡೆಸಲು ದಿನಾಂಕ ನಿಗದಿಪಡಿಸಲಾಗುವುದು ಎಂದರು.

ಬೋರ್ಡಿನ ಕೆಲ ಅಧಿಕಾರಿಗಳು ಈ ಬಾರಿ ಒಂದು ಬೆಳೆಗೆ ಮಾತ್ರ ನೀರು ನೀಡಲಾಗುವುದು ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ ಎಂದು ರೈತರು ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಸಿದ ಸಚಿವರು ಇದೀಗ ಒಂದು ಬೆಳೆಗೆ ನೀರು ನೀಡಲು ತೀರ್ಮಾನ ಕೈಗೊಳ್ಳಲಾಗಿದೆ. ಮುಂದಿನ ಸಭೆಯಲ್ಲಿ ಎರಡನೇ ಬೆಳೆಗೆ ನೀರು ನೀಡುವ ಸಂಬಂಧ ತೀರ್ಮಾನ ಕೈಗೊಳ್ಳಲಾಗುವುದು ರೈತರ ಹಿತಕರ ಪಾಡುವುದು ನಮ್ಮ ಉದ್ದೇಶ. ಇದರಲ್ಲಿ ಯಾರೂ ಕೂಡ ರಾಜಕಾರಣ ಮಾಡಬಾರದು ಎಂದು ಪ್ರಶ್ನೆ ಒಂದಕ್ಕೆ ಉತ್ತರಿಸಿದರು.

Tungabhadra Reservoir ಜಲಾಶಯದ 32 ಗೇಟ್ ಅನ್ನು ಬದಲಾವಣೆ ಮಾಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಲ ಸಂಪನ್ಮೂಲ ಸಚಿವರು ಆದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಚರ್ಚೆ ನಡೆಸಲಾಗುವುದು.

ಈ ಸಭೆಯಲ್ಲಿ ಅಣೆಕಟ್ಟೆಯ ಪರಿಣಿತ ತಜ್ಞರು ಪಾಲ್ಗೊಳ್ಳಲಿದ್ದಾರೆ ಎಂದು ಸಚಿವರು ವಿವರಿಸಿದರು.

ಸಭೆಯಲ್ಲಿ ಸಚಿವರಾದ ಶರಣ್ ಪ್ರಕಾಶ್ ಪಾಟೀಲ್, ಜಮೀರ್ ಅಹ್ಮದ್ ಖಾನ್, ಮಾಜಿ ಸಚಿವ ಬಿ.ನಾಗೇಂದ್ರ, ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ್,
ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್, ಎಚ್.ಆರ್.ಗವಿಯಪ್ಪ, ಹಂಪನಗೌಡ ಬಾದರ್ಲಿ, ಬಸವನಗೌಡ ತುರುವಿಹಾಳ್, ಶಿವರಾಜ್ ಪಾಟೀಲ್, ಬಿ.ಎಂ. ನಾಗರಾಜ್, ರೈತ ಮುಖಂಡರು ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲಾಧಿಕಾರಿಗಳು ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

Nadaprabhu Kempegowda ಕೆಂಪೇಗೌಡರಿಂದಾಗಿ ಬೆಂಗಳೂರು ಜಗತ್ತಿನ ಗಮನ ಸೆಳೆದಿದೆ – ಬಸವರಾಜ ಹೊರಟ್ಟಿ

0

Nadaprabhu Kempegowda ಸರ್ವಶ್ರೇಷ್ಠ ದಾರ್ಶನಿಕ, ಅಪ್ರತಿಮ ಆಡಳಿತಗಾರ, ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಅವರ ದೂರದೃಷ್ಟಿಯುಳ್ಳ ಕ್ರಾಂತಿಕಾರಕ ಆಡಳಿತ ವೈಖರಿಯಿಂದ ಬೆಂಗಳೂರು ಇಡೀ ಜಗತ್ತಿನ ಗಮನ ಸೆಳೆಯುತ್ತಿದೆ ಎಂದು ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ತಮ್ಮ ಸಂದೇಶದಲ್ಲಿ ಬಣ್ಣಿಸಿದ್ದಾರೆ.

ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ ಉತ್ಸವದ ಅಂಗವಾಗಿ ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಗೌರವ ನಮನ ಸಲ್ಲಿಸಿ ಮಾತನಾಡಿದ ಅವರು, ಹಂಪಿಯ ವೈಭವ ಕಂಡು ಬೆರಗಾಗಿದ್ದ ಕೆಂಪೇಗೌಡರು ದೂರದೃಷ್ಟಿಯಿಂದ ನಿರ್ಮಿಸಿರುವ ಬೆಂಗಳೂರು ನಗರ ಇಂದು ಬಹುವಾಗಿ ಬೆಳೆದು ಜಾಗತಿಕ ನಕ್ಷೆಯಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ಪಡೆದುಕೊಂಡಿದೆ.

ಕೆಂಪೇಗೌಡರು ನಿರ್ಮಿಸಿರುವ ಕೆರೆಗಳು, ದೇವಾಲಯಗಳು, ಕೋಟೆ ಕೊತ್ತಲಗಳು ಇಂದಿಗೂ ನಮ್ಮ ಕಣ್ಣ ಮುಂದಿವೆ. ಬೆಂದಕಾಳೂರು ಎಂಬ ನಾಮದಿಂದ ಕರೆಯುತ್ತಿದ್ದ ನಗರ ಇಂದು ಬೆಂಗಳೂರು ನಗರವಾಗಿ ರೂಪುಗೊಂಡಿದ್ದು, ಕೆಂಪೇಗೌಡರ ದೂರದೃಷ್ಟಿಯ ಫಲ ಎಂದು ಶ್ರೀ ಬಸವರಾಜ ಹೊರಟ್ಟಿ ಅಭಿಮಾನದಿಂದ ತಿಳಿಸಿದರು.

ಕೆಂಪೇಗೌಡರ ಬದುಕು, ಹೋರಾಟ ಅವರ ದೂರದೃಷ್ಟಿಯುಳ್ಳ ಪರಿಣಾಮಕಾರಿ ಆಡಳಿತ ಇಂದಿಗೂ ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ, ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಹ ಕೆಂಪೇಗೌಡರ ಅನುಯಾಯಿಯಾಗಿದ್ದು, ಅವರಿಂದ ಪ್ರೇರಣೆ ಪಡೆದು ಕೆಂಪೇಗೌಡರ ಕನಸಿನ ಬೆಂಗಳೂರು ನಗರದ ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಶ್ಲಾಘನೀಯ, ಕೆಂಪೇಗೌಡರ ಹೆಸರನ್ನು ಸ್ವತಃ ತಮ್ಮ ಮಗನಿಗೆ ನಾಮಕರಣ ಮಾಡಿರುವ ಡಿ.ಕೆ. ಶಿವಕುಮಾರ್, ಕೆಂಪೇಗೌಡರ ಬಗೆಗೆ ತಮಗಿರುವ ಭಕ್ತಿ, ಶ್ರದ್ದೆ ಹಾಗೂ ಬದ್ಧತೆಯನ್ನು ಸಾಕ್ಷೀಕರಿಸಿದ್ದಾರೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅಭಿಮಾನ ವ್ಯಕ್ತಪಡಿಸಿದರು.

ಸಾವಿರ ಕೆರೆಗಳ ನಾಡು ಎಂದು ಖ್ಯಾತಿ ಪಡೆದಿರುವ ಬೆಂಗಳೂರನ್ನು ವ್ಯವಸ್ಥಿತ ನಗರವನ್ನಾಗಿ ಬೆಳೆಸುವ ಕನಸು ಹೊತ್ತಿದ್ದ ಕೆಂಪೇಗೌಡರ ದೂರದರ್ಶಿತ್ವ ಇಂದು ನಮಗೆಲ್ಲರಿಗೂ ಮೇಲ್ಪಂಕ್ತಿಯಾಗಿದ್ದು ಕೆಂಪೇಗೌಡರ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕಾಗಿರುವುದು ಇಂದಿನ ತುರ್ತು ಅಗತ್ಯವಾಗಿದೆ, ಬೆಂಗಳೂರಿನ ಸೌಂದರ್ಯವನ್ನು ಉಳಿಸಿ ಅಚ್ಚುಕಟ್ಟಾಗಿ ಬೆಳೆಸುವ ಮೂಲಕ ಕೆಂಪೇಗೌಡರ ಕನಸನ್ನು ನನಸನ್ನಾಗಿಸುವುದು ನಾವೆಲ್ಲರೂ ನಾಡಪ್ರಭುಗಳಿಗೆ ಸಲ್ಲಿಸುವ ನೈಜ ಗೌರವವಾಗಿದೆ.

Nadaprabhu Kempegowda ಈ ನಿಟ್ಟಿನಲ್ಲಿ ಇಂದಿನ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ಮುಂದಡಿ ಇಟ್ಟಿದ್ದಾರೆ ಎನ್ನುವ ವಿಶ್ವಾಸ ನನ್ನದಾಗಿದೆ ಎಂದು ಬಸವರಾಜ ಹೊರಟ್ಟಿ ನುಡಿದರು.