Thursday, February 26, 2026
Thursday, February 26, 2026
Home Blog Page 265

U. T. Khader ಸೆಪ್ಟೆಂಬರ್ 9.ಬೆಂಗಳೂರಿನಲ್ಲಿ 11 ನೇ ಕಾಮನ್ ವೆಲ್ತ್ ಸಂಸದೀಯ ಸಂಘ, ಭಾರತೀಯ ವಲಯ ಸಮ್ಮೇಳನ

0

U. T. Khader ಕರ್ನಾಟಕ ವಿಧಾನ ಸಭಾಧ್ಯಕ್ಷರಾದ ಯು.ಟಿ. ಖಾದರ್ ಫರೀದ್ ಅವರು ಲೋಕಸಭಾಧ್ಯಕ್ಷರಾದ ಓಂ.ಬಿರ್ಲಾ ಅವರನ್ನು ನವ ದೆಹಲಿಯಲ್ಲಿ ಭೇಟಿ ಮಾಡಿ 11ನೇ ಕಾಮನ್ ವೆಲ್ತ್ ಸಂಸದೀಯ ಸಂಘ ಭಾರತ ವಲಯದ ಸಮ್ಮೇಳನವನ್ನು 2025ರ ಸೆಪ್ಟೆಂಬರ್ 9 ಮತ್ತು 10ರಂದು ನಡೆಸಲು ಕರ್ನಾಟಕವನ್ನು ಆಯ್ಕೆ ಮಾಡಿದಕ್ಕಾಗಿ ಕೃತಜ್ಞತೆಗಳನ್ನು ಸಲ್ಲಿಸಿದರು.

ಸಮ್ಮೇಳನದಲ್ಲಿ ಭಾರತದ ಎಲ್ಲಾ ರಾಜ್ಯಗಳ ಪೀಠಾಸೀನ ಅಧಿಕಾರಗಳು ಭಾಗವಹಿಸುವುದಲ್ಲದೇ ಪ್ರಪ್ರಥಮ ಬಾರಿಗೆ ಅಂತರಾಷ್ಟ್ರೀಯ ಮಟ್ಟದ ಕಾಮನ್ ವೆಲ್ತ್ ದೇಶಗಳ ಪೀಠಾಸೀನಾಧಿಕಾರಿಗಳನ್ನು ಆಹ್ವಾನಿಸುವ ಕುರಿತು ಮತ್ತು ಸಮ್ಮೇಳನದಲ್ಲಿ ಚರ್ಚಿಸಬೇಕಾದ ವಿಷಯಗಳ ಕುರಿತು ಸಹ ಸಮಾಲೋಚನೆ ನಡೆಸಿದರು.

ಸಮ್ಮೇಳನದ ಉದ್ಘಾಟನಾ ಸಮಾರಂಭವನ್ನು ಸೆಪ್ಟೆಂಬರ್ 8, 2025 ರಂದು ವಿಧಾನಸೌಧದ ಬೃಹತ್ ಮೆಟ್ಟಲುಗಳ ಮೇಲೆ ಹಮ್ಮಿಕೊಳ್ಳುವ ಬಗ್ಗೆ ಹಾಗೂ ಕರ್ನಾಟಕ ವಿಧಾನಸಭೆಯಲ್ಲಿ ಇತ್ತೀಚೆಗೆ ಜಾರಿಗೆ ತಂದಿರುವ ಅನೇಕ ಪ್ರಗತಿ ಪರ ಬದಲಾವಣೆಗಳನ್ನು ಸಹ ಲೋಸಭಾಧ್ಯಕ್ಷರ ಗಮನಕ್ಕೆ ತಂದರು.

ಬೆಂಗಳೂರು, ಅಂತರಾಷ್ಟ್ರೀಯವಾಗಿ ಸಿಲಿಕಾನ್ ಸಿಟಿಯಾಗಿರುವುದರಿಂದ
ಇಂತಹ ಸಮ್ಮೇಳನಗಳನ್ನು ನಡೆಸುತ್ತಿರುವುದು ಅತ್ಯಂತ ಸೂಕ್ತ ಎಂದು ಲೋಕಸಭಾಧ್ಯಕ್ಷರು ಅಭಿಪ್ರಾಯಪಟ್ಟರು.

U. T. Khader ಈ ಸಂದರ್ಭದಲ್ಲಿ ಕರ್ನಾಟಕ ವಿಧಾನ ಸಭೆಯ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ, ಲೋಕಸಭಾ ಸಚಿವಾಲಯದ ಅಧಿಕಾರಿಗಳು ಹಾಜರಿದ್ದರು.

MESCOM ಶಿವಮೊಗ್ಗದಿಂದ ವ್ಯಕ್ತಿ ನಾಪತ್ತೆ, ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಸಹಕರಿಸಲು ಮನವಿ

0

MESCOM ಶಿವಮೊಗ್ಗ ನಗರದ ಹೊಸಮನೆ ಬಡಾವಣೆ ನಿವಾಸಿ ಅಶೋಕ್ ಕುಮಾರ್ (59) ಅವರು ದೊಡ್ಡಮ್ಮ ದೇವಸ್ಥಾನದ ಹತ್ತಿರ ವಾಸವಾಗಿದ್ದು ಕಳೆದ ನಾಲ್ಕು ದಿವಸದಿಂದ ಕಾಣೆಯಾಗಿದ್ದಾರೆ, ಇವರು ಪ್ರತಿನಿತ್ಯ ಸುತ್ತಮುತ್ತಲಿನ ದೇವಸ್ಥಾನಕ್ಕೆ ಹೋಗಿ ಬರುವ ಅಭ್ಯಾಸವಿದ್ದು, ಕಾಣಿಯಾದ ದಿವಸ ಕೂಡ ದೇವಸ್ಥಾನ ಹೋಗಿ ಬರುವುದಾಗಿ ಹೇಳಿ ಹೋದವರು ಇಲ್ಲಿಯ ತನಕ ಬಂದಿರುವುದಿಲ್ಲ, ಇವರ ಚಹರೆ ವರ್ಷ 59, ಸುಮಾರು 5.5 ಅಡಿ ಎತ್ತರ, ತೆಳವಾದ ಮೈಕಟ್ಟುವ ಕೋಲು ಮುಖ, ಗೋದಿ ಮೈಬಣ್ಣ ಮರಾಠಿ ಹಾಗೂ ಕನ್ನಡ ಭಾಷೆಯನ್ನು ಮಾತನಾಡುತ್ತಾರೆ.

MESCOM ಹೋಗುವಾಗ ಬಿಳಿ ಬಣ್ಣದ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್‌ನ್ನು ಧರಿಸಿದ್ದರು. ಇವರ ಸುಳಿವು ದೊರೆತಲ್ಲಿ, ಹತ್ತಿರದ ಪೊಲೀಸ್ ಠಾಣೆ ಅಥವಾ ಮೊ : 9019952800 ಸಂಖ್ಯೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದ್ದಾರೆ.

Guarantee scheme ಗ್ಯಾರಂಟಿ ಯೋಜನೆಗಳ ಬಗ್ಗೆ ಸಮಸ್ಯೆಗಳಿದ್ದಲ್ಲಿ ಅನುಷ್ಟಾನ ಸಮಿತಿ ನೆರವು ಪಡೆಯಿರಿ- ಹೆಚ್.ಮಧು

0

Guarantee scheme ಶಿವಮೊಗ್ಗ ತಾಲ್ಲೂಕಿನಲ್ಲಿ ಐದು ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಅನುಷ್ಟಾನಗೊಳ್ಳುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಯಾವುದೇ ಸಮಸ್ಯೆಗಳು ಇದ್ದಲ್ಲಿ ಗ್ಯಾರಂಟಿ ಯೋಜನೆಯಗಳ ಅನುಷ್ಟಾನ ಸಮಿತಿಯನ್ನು ಸಂಪರ್ಕಿಸಬಹುದೆಂದು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷರಾದ ಮಧು ಹೆಚ್. ಎಂ ತಿಳಿಸಿದರು.
ಶುಕ್ರವಾರ ನಗರದ ತಾಲ್ಲೂಕು ಕಛೇರಿಯಲ್ಲಿ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನದ ಕುರಿತು ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾದ ಮಹತ್ವಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮಿ, ಶಕ್ತಿ, ಗೃಹಜ್ಯೋತಿ, ಯುವನಿಧಿ ಯೋಜನೆಗಳು ಜನ ಸಾಮಾನ್ಯರನ್ನು ಯಶಸ್ವಿಯಾಗಿ ತಲುಪುತ್ತಿದ್ದು, ಜನ ಜೀವನ ಸುಧಾರಣೆ ಕಾಣುತ್ತಿದೆ ಎಂದರು.
ಸದಸ್ಯರುಗೃಹಲಕ್ಷ್ಮಿ ಯೋಜನೆಯಡಿ ಜಿಎಸ್‍ಟಿ ಗೆ ಸಂಬಂಧಿಸಿದ ಕೆಲವು ಲೋಪದೋಷಗಳು ಕಂಡು ಬರುತ್ತಿರುವುದು ಗಮನಕ್ಕೆ ಬಂದಿದ್ದು ಅವುಗಳನ್ನು ನಿವಾರಣೆ ಮಾಡುವ ಕೆಲಸ ಆಗಬೇಕಿದೆ ಎಂದರು. ಕೆಲವು ಮನೆಗಳಲ್ಲಿ ಮನೆಯ ಯಾಜಮಾನಿಯ ಸಾವು ಆದ ಸಮಯದಲ್ಲಿ ಅದೇ ಮನೆಯ ಬೇರೆ ಸದಸ್ಯರನ್ನು ಮನೆಯ ಯಜಮಾನಿಯನ್ನಾಗಿ ಮಾಡಿ ಸೌಲಭ್ಯ ಮುಂದುವರಿಸುವಂತೆ ಹೇಳಿದರು.
ಅನ್ನಭಾಗ್ಯ ಯೋಜನೆಯು ಸರಿಯಾದ ರೀತಿಯಲ್ಲಿ ಎಲ್ಲಾ ಪಡಿತರ ಕುಟುಂಬಗಳಿಗೆ ಸರಬರಾಜು ಆಗುತ್ತಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿ, ಸರಿಯಾದ ರೀತಿಯಲ್ಲಿ ವಿತರಣೆ ಆಗದ ಪಡಿತರ ಅಂಗಡಿಯ ಮಾಹಿತಿಯನ್ನು ಪಡೆದು, ಸ್ಥಳದಲ್ಲೇ ಅಧಿಕಾರಿಗಳೊಂದಿಗೆ ಮಾತಾನಾಡಿ ಸಮಸ್ಯೆಯನ್ನು ಬಗೆಹರಿಸಿದರು. Guarantee scheme ಶಿವಮೊಗ್ಗ ತಾಲ್ಲೂಕಿನಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಮೇ ಮಾಹೆವರೆಗೆ 107311 ಮಹಿಳೆಯರು ನೋಂದಣಿಯಾಗಿದ್ದು, 99324 ಮಹಿಳೆಯರಿಗೆ ಮೇ ಮಾಹೆವರೆಗೆ ಹಣ ಜಮಾ ಆಗಿರುತ್ತದೆ. ಅನ್ನಭಾಗ್ಯ ಯೋಜನೆಯಡಿ ತಾಲ್ಲೂಕಿನಲ್ಲಿ 43681 ಬಿಪಿಎಲ್ ಕುಟುಂಬಗಳ 144286 ಸದಸ್ಯರು ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ. ಗೃಹಜ್ಯೋತಿ ಯೋಜನೆಯಡಿ ಶಿವಮೊಗ್ಗ ತಾಲ್ಲೂಕಿನಲ್ಲಿ 236023743 ಯುನಿಟ್‍ಗಳ ಬಳಕೆಯಾಗಿದ್ದು ರೂ. 1690231564 ಸಬ್ಸಿಡಿ ದೊರೆತಿದೆ. ಶಕ್ತಿ ಯೋಜನೆಯಡಿ ತಾಲ್ಲೂಕಿನಲ್ಲಿ ಶೇ.61.5 ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದು, ಕೆಎಸ್‍ಆರ್‍ಟಿಸಿಗೆ ಮೇ ಮಾಹೆವರೆಗೆ ರೂ.644765147 ಆದಾಯ ಗಳಿಕೆ ಆಗಿದೆ.

ಯುವನಿಧಿ ಯೋಜನೆಯು ಬಹಳ ಯಶಸ್ವಿಯಾಗಿ ನಡೆಯುತ್ತಿದ್ದು ಇನ್ನೂ ಹೆಚ್ಚು ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಈ ಯೋಜನೆಯಡಿ ಫಲಾನುಭವಿಗಳಾಗುವಂತೆ ಮಾಡಬೇಕು. ಈ ಯೋಜನೆಯ ಬಗ್ಗೆ ಯುವಜನತೆಗೆ ತಿಳಿಯುವಂತೆ ಮಾಡಬೇಕು. ಮೇ ತಿಂಗಳಲ್ಲಿ ಶಿವಮೊಗ್ಗ ತಾಲ್ಲೂಕಿನಲ್ಲಿ 2482 ಜನ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ರೂ.58,81,500 ಹಣ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆಯಾಗಿರುತ್ತದೆ ಎಂದು ಮಾಹಿತಿ ನೀಡಿದರು.
ಈ ಸಭೆಯಲ್ಲಿ ಶಿವಮೊಗ್ಗ ತಾಲ್ಲೂಕು ಸಹಾಯಕ ಲೆಕ್ಕಾಧಿಕಾರಿ ಶ್ರೀಧರ್ ಹಾಗೂ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಯಗಳ ಅನುಷ್ಟಾನ ಸಮಿತಿಯ ಸದಸ್ಯರುಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

CM Siddharamaiah ಕೆಂಪೇಗೌಡರ ಪ್ರತಿಮೆ ಸಿದ್ಧರಾಮಯ್ಯ ಮಾಲಾರ್ಪಣೆ

0

CM Siddharamaiah ನಾಡಪ್ರಭು ಕೆಂಪೇಗೌಡ ರವರ 516ನೇ ಜಯಂತಿಯ ಅಂಗವಾಗಿ, ಬೆಂಗಳೂರಿನ ವಿಧಾನಸೌಧದ ಪೂರ್ವ ದಿಕ್ಕಿನಲ್ಲಿರುವ ಅವರ ಪ್ರತಿಮೆಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಲಾರ್ಪಣೆ ಮಾಡಿದರು.

ಈ ಕಾರ್ಯಕ್ರಮದಲ್ಲಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ.ಮಹದೇವಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ಎಸ್.ತಂಗಡಗಿ, ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮ ನಿಯಮಿತ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.

S.N. Channabasappa ಕೆಂಪೇಗೌಡರ ಜೀವನ ಶೈಲಿ ಅನುಕರಣೀಯ- ಶಾಸಕ ಚನ್ನಬಸಪ್ಪ

0

S.N. Channabasappa ನಾಡಪ್ರಭು ಕೆಂಪೇಗೌಡರು ತಮ್ಮ ದೂರದೃಷ್ಟಿ ಮತ್ತು ಸಾಮೂಹಿಕ ಆಲೋಚನೆಯ ಮೂಲಕ ರಾಜ್ಯವನ್ನು ಕಟ್ಟುವ ಮತ್ತು ಅಭಿವೃದ್ದಿಪಡಿಸುವ ಉತ್ತಮ ಮಾದರಿಯನ್ನು ನೀಡಿದ್ದು, ನಾವೆಲ್ಲರೂ ಇದನ್ನು ಅಳವಡಿಸಿಕೊಳ್ಳಬೇಕಿದೆ ಎಂದು ಶಾಸಕರಾದ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಒಕ್ಕಲಿಗರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಗರದ ಕುವೆಂಪು ರಂಗಮAದಿರಲ್ಲಿ ಆಯೋಜಿಸಿದ್ದ 516 ನೇ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ದೇಶವನ್ನು ಅನೇಕರು ಆಳ್ವಿಕೆ ಮಾಡಿದ್ದಾರೆ. ಆದರೆ ನಮ್ಮ ನೆನಪಿನಲ್ಲಿ ಸದಾ ಉಳಿಯುವುದು ಕೆಂಪೇಗೌಡ ಆಳ್ವಿಕೆಯ ಕಾಲ. ಹಾಗಾಗಿ ಬೆಂಗಳೂರು ಅಂದರೆ ನಮ್ಮ ಕಣ್ಣ ಮುಂದೆ ಬರುವ ಚಿತ್ರಣ ಕೆಂಪೇಗೌಡರದು. ಇವರು ವಿಜಯನಗರ ಸಾಮ್ರಾಜ್ಯದ ಕಾಲಘಟ್ಟದಲ್ಲೆ ರಾಜ್ಯದ ಅಭಿವೃದ್ದಿಗಾಗಿ ಅನೇಕ ಕಾರ್ಯಗಳನ್ನು ಕೈಗೊಂಡಿದ್ದು, ಆ ದೂರದೃಷ್ಟಿಯ ಆಲೋಚನೆಯಿಂದ ಭವಿಷ್ಯ ಬೆಂಗಳೂರನ್ನು ಕಟ್ಟಿದ್ದಾರೆ.
ಕೆಂಪೇಗೌಡರು ನಾಗರೀಕ ಸಮಾಜಕ್ಕೆ ಏನು ಬೇಕು, ಏನು ಬೇಡ ಎಂಬುದನ್ನು ಅರಿತ್ತಿದ್ದರು. ಆ ದೃಷ್ಟಿಯಿಂದ ಬೆಂಗಳೂರಿನ ಜನರಿಗೆ ಕುಡಿಯುವ ನೀರಿಗಾಗಿ ಕೆರೆ ಕಟ್ಟೆಗಳನ್ನು ಕಟ್ಟಿಸಿದ್ದರು. ನಾಗರೀಕರಿಗೆ ಅನುಕೂಲ ಮಾಡಿಕೊಟ್ಟರು. ಅಭಿವೃದ್ದಿ ಜೊತೆಗೆ ಕೆಂಪೇಗೌಡರು ಸಾಂಸ್ಕೃತಿಕ, ಕಲೆ, ಸಾಹಿತ್ಯಕ್ಕೂ ಒತ್ತು ನೀಡಿದ್ದು ಯಕ್ಷಗಾನ ಕೃತಿಯನ್ನು ರಚಿಸಿದ್ದಾರೆ. ಅನೇಕ ಮೈಲಿಗಲ್ಲು ಸ್ಥಾಪಿಸಿದ್ದಾರೆ.
ಕೆಂಪೇಗೌಡರು ರಾಜ್ಯದ ನಾಗರೀಕರಲ್ಲಿ ಸಾಮಾಜಿಕ ಸಾಮರಸ್ಯದ ಆಲೋಚನೆಯನ್ನು ಮೂಡಿಸಿದ್ದರು. ಇಂತಹ ಮಹನೀಯರ ಜೀವನ ಶೈಲಿಯನ್ನು ವರ್ತಮಾನದಲ್ಲಿ ನಾವೆಲ್ಲಾ ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.
ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್ ಮಾತನಾಡಿ, ಸರ್ಕಾರವು ಇಂತಹ ಮಹಾನೀಯರ ಜಯಂತಿ ಮಾಡುವ ಮೂಲಕ ಯುವಪೀಳಿಗೆಗೆ ಇತಿಹಾಸವನ್ನು ತಿಳಿಸುವ ಪ್ರಯತ್ನ ಮಾಡುತ್ತಿದೆ. ಕೆಂಪೇಗೌಡರು ನಡೆಸಿದ ಉತ್ತಮ ಆಡಳಿತ ಈಗಿನ ಜನಪ್ರತಿನಿಧಿಗಳಿಗೆ ಸ್ಪೂರ್ತಿಯಾಗಿದೆ. ಆಗಿನ ಕಾಲದಲ್ಲೇ ದೂರದೃಷ್ಟಿಯುಳ್ಳ ಮುಂದಾಲೋಚನೆಯೊAದಿಗೆ ಜನಪ್ರತಿನಿಧಿಗಳು ಆಡಳಿತ ನಡೆಸುವಲ್ಲಿ ಯಾವ ರೀತಿಯ ಅಂಶ ಹಾಗೂ ಚಿಂತನೆಗಳು ಅವಳಡಿಸಿಕೊಳ್ಳುವುದು ಮುಖ್ಯ ಎಂಬುದು ತಿಳಿಸಿದ್ದಾರೆ.
ಕೆಂಪೇಗೌಡರು ಬೆಂಗಳೂರನ್ನು ಕಟ್ಟುವಾಗ ಎಲ್ಲ ಜಾತಿ, ಜನಾಂಗದವರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನಗರ ನಿರ್ಮಿಸಿದರು. ಇತಿಹಾಸಕ್ಕೆ ಬೇಕಾದ ಎಲ್ಲಾ ಕಾರ್ಯವನ್ನು ಮಾಡಿದ್ದಾರೆ. ಅದರ ಫಲವಾಗಿ ಇಂದು ಬೆಂಗಳೂರನ್ನು ವಿಶ್ವವೇ ತಿರುಗಿ ನೋಡುತ್ತಿದೆ ಎಂದು ಹೇಳಿದರು.
S.N. Channabasappa ಡಿವಿಎಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಡಾ.ಹೆಚ್.ಟಿ.ಕೃಷ್ಣಮೂರ್ತಿ ಉಪನ್ಯಾಸ ನೀಡಿ, ಕೆಂಪೇಗೌಡರು ಒಬ್ಬ ಐತಿಹಾಸಿಕ ವ್ಯಕ್ತಿವಾಗಿದ್ದು, ಇಂತಹ ಜಯಂತಿಗಳ ಮೂಲಕ ಅವರ ಬಗೆಗಿನ ಐತಿಹಾಸಿಕ ಪ್ರಜ್ಞೆಯನ್ನು ಪಡೆದುಕೊಳ್ಳಬೇಕು. ಯುವ ಸಮೂಹವು ಇಂತಹ ಮಹಾನೀಯರ ಬಗ್ಗೆ ಆಸಕ್ತಿ ಮತ್ತು ಆಕರ್ಷಣೆ ಬೆಳಿಸಿಕೊಳ್ಳಬೇಕು. ಇಲ್ಲದಿದ್ದರೆ ಮನುಷ್ಯನ ಬಗ್ಗೆ ಆಸಕ್ತಿ ಕಳೆದುಕೊಳ್ಳಬೇಕಾಗುತ್ತದೆ.
ಇತ್ತೀಚಿಗೆ ಐತಿಹಾಸಿಕ ವ್ಯಕ್ತಿಗಳ ಬಗ್ಗೆ ಅರಿವು ಪಡೆಯುವ ಬದಲು ಅಮಲು ಏರಿಸಿಕೊಳ್ಳುತ್ತಿದ್ದಾರೆ. ಅಂತಹದರಿAದ ದೂರವಿಬೇಕು. ಯಾವುದೇ ವಿಷಯವಾಗಲಿ ಅದು ಬದುಕಿಗೆ ಅರಿವನ್ನು ಮೂಡಿಸುವಂತಾಗಬೇಕು. ಹಾಗಾಗಿ ನಾವೆಲ್ಲಾ ಕೆಂಪೇಗೌಡರ ಇತಿಹಾಸವನ್ನು ಗಮನದಲ್ಲಿಟ್ಟುಕೊಂಡು ಭವಿಷ್ಯ ಕಟ್ಟಬೇಕಿದೆ ಎಂದರು.
ಕೆಂಪೇಗೌಡ ಹಾಕಿಕೊಟ್ಟ ಅಡಿಪಾಯದ ಮೇಲೆ ಬೆಂಗಳೂರು ಸಾಗುತ್ತಿದೆ. ಆದರೆ ಇದನ್ನು ಕಟ್ಟುವಾಗ ಅವರ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಇಡೀ ದಕ್ಷಿಣ ಭಾರತಕ್ಕೆ ಬೆಂಗಳೂರೇ ಕೇಂದ್ರವಾಗಿತ್ತು. ಪೇಟೆಗಳನ್ನು ನಿರ್ಮಿಸಿ ವಾಣಿಜ್ಯ ವಹಿವಾಟುಗಳಿಗೆ ಹಾಗೂ ಕುಶಲಕರ್ಮಿಗಳ ವ್ಯಾಪಾರಕ್ಕೆ ದಾರಿ ಮಾಡಿಕೊಟ್ಟರು. ಹಾಗಾಗಿ ವಿದ್ಯಾರ್ಥಿಗಳು ಕೆಂಪೇಗೌಡರ ಹಾದಿಯನ್ನು ಅರಿತುಕೊಳ್ಳುವುದು ಅವಶ್ಯಕವಾಗಿದೆ ಎಂದರು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಬಿ.ಎ.ರಮೇಶ್ ಹೆಗಡೆ ಮಾತನಾಡಿ, ಕೆಂಪೇಗೌಡರು ಉತ್ತಮ ಆಡಳಿತಗಾರರಲ್ಲದೆ ವಾಸ್ತುಶಿಲ್ಪಿಯೂ ಆಗಿದ್ದರು. ಬೆಂಗಳೂರಿನ ನಾಲ್ಕು ದಿಕ್ಕಿನಲ್ಲಿ ಕೋಟೆ, ಕೆರೆ, ಕಟ್ಟೆ ಕಟ್ಟಿಸಿದರು, ಮಾರುಕಟ್ಟೆ ಕಟ್ಟಿದ್ದರು. ಆ ಮೂಲಕ ಸುಂದರ, ಸೌಹಾರ್ಧ ರಾಜ್ಯವನ್ನು ನಿರ್ಮಿಸಿದರು. ವರ್ತಮಾನದಲ್ಲಿ ಬೆಂಗಳೂರಿಗೆ ಗ್ಲೋಬಲ್ ಸಿಟಿ ಆಗಿ ವಿಶ್ವದಲ್ಲಿ ಮನ್ನಣೆ ಸಿಗುತ್ತಿದೆ ಎಂದರೆ ಅದಕ್ಕೆ ಕೆಂಪೇಗೌಡರೇ ಕಾರಣಕರ್ತರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಎಸ್.ರವಿಕುಮಾರ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಎಸ್.ಚಂದ್ರಭೂಪಾಲ, ತಾಲ್ಲೂಕು ಒಕ್ಕಲಿಗ ಸಂಘದ ಎ.ಎಸ್.ಚಂದ್ರಕಾAತ್, ಹಾಪ್‌ಕಾಮ್ಸ್ ಅಧ್ಯಕ್ಷ ವಿಜಯ್ ಕುಮಾರ್, ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್ ಭೂಮರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಉಮೇಶ್ ಉಪಸ್ಥಿತರಿದ್ದರು.
(ಪೋಟೋ ಇದೆ)

Department of Technical Education karnataka 2025ರ ಯು.ಜಿ.ಸಿ.ಟಿ. ಸೀಟು ಹಂಚಿಕೆ ಮಂಥನ ಕಾರ್ಯಕ್ರಮ

0

Department of Technical Education karnataka ಸರ್ಕಾರಿ ಮಹಿಳಾ ವಸತಿ ಪಾಲಿಟೆಕ್ನಿಕ್, ಸ್ವಾಮಿ ವಿವೇಕಾನಂದ ಬಡಾವಣೆ, ಶಿವಮೊಗ್ಗ ಸಂಸ್ಥೆಯಲ್ಲಿ ಜೂ. 28 ರಂದು ಬೆಳಗ್ಗೆ 9.30 ರಿಂದ 1.30ರ ವರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸಹಯೋಗದೊಂದಿಗೆ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಕೋರ್ಸ್ ಆಯ್ಕೆ ಸಂಬಂಧ “2025ರ ಯು.ಜಿ.ಸಿ.ಇ.ಟಿ. ಸೀಟು ಹಂಚಿಕೆ ಮಂಥನ ಕಾರ್ಯಕ್ರಮ”ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಾಲಿಟೆಕ್ನಿಕ್ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 9480542763, 08971966968. 9880241470, 9731852173ಗಳನ್ನು ಸಂಪರ್ಕಿಸುವುದು.

Shimoga News ಪೌರಕಾರ್ಮಿಕರಿಗೆ ಎಲ್ಲಾ ಅಗತ್ಯ ಸೌಲಭ್ಯ ನೀಡಿ ಸದ್ಬಳಕೆ ಮಾಡಿ- ಚಂದ್ರಕಲಾ

0

Shimoga News ಜಿಲ್ಲೆಯಲ್ಲಿ ಸಫಾಯಿ ಕರ್ಮಚಾರಿಗಳು ಮತ್ತು ಪೌರಕಾರ್ಮಿಕರಿಗೆ ದೊರಕಬೇಕಾದ ಎಲ್ಲ ಸೌಲಭ್ಯಗಳನ್ನು ನೀಡಬೇಕು ಹಾಗೂ ಅವರಲ್ಲಿ ಸೌಲಭ್ಯಗಳ ಕುರಿತು ಅರಿವು ಮೂಡಿಸುವ ಕೆಲಸ ಮಾಡಬೇಕೆಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಕಾರ್ಯದರ್ಶಿಗಳಾದ ಚಂದ್ರಕಲಾ ಸೂಚಿಸಿದರು.
ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಶುಕ್ರವಾರ ಜಿ.ಪಂ.ಸಭಾAಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಚ್ಚತಾ ಕಾರ್ಮಿಕರು ಹಾಗೂ ಪೌರ ಕಾರ್ಮಿಕರ ಕುರಿತಾದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ 22 ಜನ ಮ್ಯಾನುಯಲ್ ಸ್ಕಾö್ಯವೆಂಜರ್‌ಗಳನ್ನು ಗುರುತಿಸಲಾಗಿದೆ. ಆದರೆ ಕ್ಷೇತ್ರ ಭೇಟಿ ಮಾಡಿದಾಗ ಇವರಲ್ಲಿ ಅನೇಕರಿಗೆ ಮನೆ, ಸಾಲ ಇತರೆ ಸೌಲಭ್ಯಗಳು ಸರಿಯಾಗಿ ಸಿಗದೇ ಇರುವುದು ಗಮನಕ್ಕೆ ಬಂದಿದೆ. ಇನ್ನು ಎರಡು ದಿನಗಳ ಒಳಗೆ ಗುರುತಿಸಲಾದ ಮ್ಯಾನುಯಲ್ ಸ್ಕೌಟ್ವೆಂಜರ್‌ಗಳಿಗೆ ಯಾವೆಲ್ಲ ಸೌಲಭ್ಯಗಳನ್ನು ನೀಡಲಾಗಿದೆ ಎಂದು ವರದಿ ನೀಡಬೇಕು ಎಂದು ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮ್ಯಾನುಯಲ್ ಸ್ಕೌಟ್ ವೆಂಜರ್‌ಗಳು ಎಂದು ಗುರುತಿಸಿದ 09 ತಿಂಗಳ ಒಳಗೆ ಅವರಿಗೆ ಪುನರ್ವಸತಿ ಸೌಲಭ್ಯಗಳಾದ ವಸತಿ, ಸಾಲ, ಮಕ್ಕಳಿಗೆ ಶಿಕ್ಷಣ ಸೌಲಭ್ಯ, ಕೌಶಲ್ಯಾಭಿವೃದ್ದಿ ತರಬೇತಿ, ಕಾನೂನಿನ ಸಲಹೆ ಅವಶ್ಯಕತೆ ಇದ್ದಲ್ಲಿ ಅದನ್ನು ನೀಡಬೇಕು. ಆದರೆ ಜಿಲ್ಲೆಯಲ್ಲಿ ಈ ಎಲ್ಲ ಸೌಲಭ್ಯ ನೀಡಿರುವ ಕುರಿತು ಸಮರ್ಪಕವಾದ ವರದಿ, ಮಾಹಿತಿ, ಅಂಕಿ ಅಂಶಗಳನ್ನು ನೀಡಿಲ್ಲ. ನಿಖರವಾಗಿ ಈ ಬಗ್ಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಗುರುತಿಸಲಾದ ಮ್ಯಾನುಯಲ್ ಸ್ಕಾö್ಯವೆಂಜರ್‌ಗಳು ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಲು ರೂ.2 ರಿಂದ 5 ಲಕ್ಷ ಸಾಲ, ವಿವಿಧ ವಸತಿ ಯೋಜನೆಗಳಿಗೆ ಮನೆ ಕಟ್ಟಿಕೊಳ್ಳಲು ಅವಕಾಶ, ಅವರ ಮಕ್ಕಳಿಗೆ ಸಿಇಟಿ ಇಲ್ಲದೇ ವಸತಿ ಶಾಲೆಗಳಿಗೆ ಪ್ರವೇಶ ನೀಡುವ ಅವಕಾಶವಿದೆ.
Shimoga News ಮ್ಯಾನುಯಲ್ ಸ್ಕೌಟ್ ವೆಂಜರ್‌ಗಳಿಗೆ ನೀಡಲಾದ ಸಾಲದ ಮೊತ್ತ ದುರುಪಯೋಗವಾಗಬಾರದು. ಕ್ಷೇತ್ರ ಭೇಟಿ ವೇಳೆ ಸಾಲ ಸದ್ಬಳಕೆ ಕುರಿತು ಸರಿಯಾದ ಮಾಹಿತಿ ಒದಗಲಿಲ್ಲ. ಸಾಲ ಸದುಪಯೋಗ ಆಗಬೇಕು. ಇದರ ಸದ್ಬಳಕೆ ಕುರಿತು ಸಂಬAಧಿಸಿದ ಅಧಿಕಾರಿಗಳು ವರದಿ ನೀಡಬೇಕು ಎಂದರು.
ಪೌರಕಾರ್ಮಿಕರು, ಸಫಾಯಿ ಕರ್ಮಚಾರಿಗಳು, ಲೋಡರ್ಸ್, ಕ್ಲೀನರ್ಸ್, ಡ್ರೆöÊವರ್ಸ್ಗಳಿಗೆ ನಿಗದಿತ ವೇಳೆಯೊಳಗೆ ವೇತನ ಪಾವತಿಸಿ, ವೇತನ ಸ್ಲಿಪ್ ನೀಡಬೇಕು. ಪಿಎಫ್ ಮತ್ತು ಇಎಸ್‌ಐ ಮೊತ್ತ ಸರಿಯಾಗಿ ಕಟಾವಣೆಯಾಗುತ್ತಿದೆಯೇ ಎಂದು ಖಾತ್ರಿಪಡಿಸಿಕೊಳ್ಳಬೇಕು. ಮಾಸ್ಟರ್ ಆರೋಗ್ಯ ತಪಾಸಣೆ ಕಾಲ ಕಾಲಕ್ಕೆ ಮಾಡಿಸಬೇಕು. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್, ವೇತನ ಪ್ಯಾಕೇಜ್ ಸೌಲಭ್ಯ ದೊರೆಯುವಂತೆ ಮಾಡಬೇಕು.
ಏಜೆನ್ಸಿಗಳು ಪೌರಕಾರ್ಮಿಕರಿಗೆ ಅಗತ್ಯವಾದ ಸಮವಸ್ತç, ಗಮ್ ಬೂಟ್, ಕೈಗವಸು, ಮಾಸ್ಕ್ ಮತ್ತು ಇತರೆ ಸುರಕ್ಷಣಾ ಪರಿಕರಗಳನ್ನು ಸಮರ್ಪಕವಾಗಿ ನೀಡಬೇಕು.
ವಾರ್ಡ್ ನಂ 21 ಸೇರಿದಂತೆ ಕೆಲವೆಡೆ ಇಂದು ಕ್ಷೇತ್ರಭೇಟಿ ಮಾಡಿದಾಗ ಪೌರಕಾರ್ಮಿಕರು ಸಮವಸ್ತç, ಗ್ಲೋವ್ಸ್ ಇತರೆ ಸುರಕ್ಷತಾ ಪರಿಕರ ಧರಿಸದೇ ಇರುವುದು ಕಂಡುಬAತು. ಆದ್ದರಿಂದ ಆರೋಗ್ಯ ನಿರೀಕ್ಷಕರು ಮತ್ತು ಮೇಸ್ತಿçಗಳು ಸುರಕ್ಷತಾ ಪರಿಕರಗಳನ್ನು ಧರಿಸುವಂತೆ ಪ್ರೇರೇಪಿಸಬೇಕು. ಹಾಗೂ ಏಜೆನ್ಸಿಗಳು ಮತ್ತು ಪೌರಸಂಸ್ಥೆಗಳು ಧರಿಸುವುದನ್ನು ಕಡ್ಡಾಯಗೊಳಿಸಬೇಕು. ಇಲ್ಲವಾದಲ್ಲಿ ಅನೇಕ ಆರೋಗ್ಯದ ಸಮಸ್ಯೆಗಳು ಉಂಟಾಗಿ ಗಂಭೀರವಾಗಿ ಪರಿಣಿಮಿಸುತ್ತವೆ ಎಂದು ಎಚ್ಚರಿಕೆ ನೀಡಿದರು.
ಪೌರಕಾರ್ಮಿಕರು, ಸಫಾಯಿ ಕರ್ಮಚಾರಿಗಳ ಆರೋಗ್ಯ ಬಹಳ ಮುಖ್ಯ. ಇವರು ನಗರವನ್ನು ಸ್ವಚ್ಚಗೊಳಿಸಿದಂತೆ ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ನಮ್ಮೆಲ್ಲರ ಜವಾಬ್ದಾರಿ ಕೂಡ ಆಗಿದೆ ಎಂದರು.
ಏಜೆನ್ಸಿಯವರು, ಸ್ಪೆçà ಮಾಡುವ ಪೌರಕಾರ್ಮಿಕರಿಗೆ ಆಕ್ಸಿಜನ್ ಮಾಸ್ಕ್ ನೀಡಬೇಕು, ಡಂಪಿAಗ್ ಯಾರ್ಡ್ಗಳಲ್ಲಿ ಕೆಲಸ ಮಾಡುವವರು ಸೇರಿದಂತೆ ಎಲ್ಲ ಪೌರಕಾರ್ಮಿಕರಿಗೆ ಸಮಾನ ಸೌಲಭ್ಯಗಳನ್ನು ನೀಡಬೇಕು. ಮಳೆಗಾಲ ಆರಂಭವಾಗಿದ್ದು ರೈನ್ ಕೋಟ್ ನೀಡಬೇಕು. ಶೌಚಾಲಯಗಳು, ವಿಶ್ರಾಂತಿ ಗೃಹಗಳು ಸಮರ್ಪಕವಾಗಿರುವಂತೆ ನೋಡಿಕೊಳ್ಳಬೇಕು.
481 ಪೌರ ಕಾರ್ಮಿಕರ ಪೈಕಿ 267 ಜನರಿಗೆ ವಸತಿ ಇಲ್ಲವಾಗಿದ್ದು, ಇದೀಗ ವಿವಿಧ ಯೋಜನೆಗಳಡಿ 261 ಜನರಿಗೆ ವಸತಿ ಮಂಜೂರಾಗಿ, ಕಾಮಗಾರಿ ಪ್ರಗತಿಯಲ್ಲಿದ್ದು, ಆದಷ್ಟು ಶೀಘ್ರದಲ್ಲಿ ಗುಣಮಟ್ಟದೊಂದಿಗೆ ಕೂಡಿದ ವಸತಿ ಗೃಹಗಳನ್ನು ಪೌರಕಾರ್ಮಿಕರಿಗೆ ನೀಡಬೇಕೆಂದರು.
ಪಿಎಫ್, ಇಎಸ್‌ಐ, ಕಾರ್ಮಿಕ ಇಲಾಖೆ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಪೌರಕಾರ್ಮಿಕರು ಮತ್ತು ಸಫಾಯಿ ಕರ್ಮಚಾರಿಗಳಿಗೆ ದೊರಕುವ ಸೌಲಭ್ಯಗಳ ಕುರಿತು ಅರಿವು ಕಾರ್ಯಾಗಾರವನ್ನು ಹಮ್ಮಿಕೊಳ್ಳಬೇಕೆಂದು ಸೂಚನೆ ನೀಡಿದರು.
ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣಗಳ ಕಾರ್ಮಿಕರ ವೇತನವನ್ನು ಸರಿಯಾದ ಸಮಯಕ್ಕೆ ನಿಗದಿತಗೊಳಿಸಿದ ಮೊತ್ತವನ್ನು ನೀಡಬೇಕು.
ಮ್ಯಾನುಯಲ್ ಸ್ಕಾö್ಯವೆಂಜರ್‌ಗಳ ಬಗ್ಗೆ ನಿಖರ ಮಾಹಿತಿಯನ್ನು ಸಂಗ್ರಹಿಸಲು ಮೊಬೈಲ್ ಆ್ಯಪ್‌ನ್ನು ಸಿದ್ದಪಡಿಸಲಾಗಿದ್ದು, ಸಮರ್ಪಕ ಮತ್ತು ನಿಖರ ಮಾಹಿತಿ ನೀಡಬೇಕು. ಹೀಗೆ ನೀಡಿದಾಗ ಮಾತ್ರ ಅವರಿಗೆ ದೊರಕಬೇಕಾದ ಸೌಲಭ್ಯಗಳನ್ನು ನೀಡಲು ಸಾಧ್ಯವಾಗುತ್ತದೆ ಎಂದರು.
ಡಿಯುಡಿಸಿ ಪಿಡಿ ರಂಗಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ 11 ನಗರ ಸ್ಥಳೀಯ ಸಂಸ್ಥೆಗಳಿವೆ. 1074 ಪೌರಕಾರ್ಮಿಕರ ಹುದ್ದೆ ಮಂಜೂರಾಗಿದ್ದು, 194 ಪುರುಷ ಮತ್ತು 237 ಮಹಿಳೆ ಖಾಯಂ ಪೌರ ಕಾರ್ಮಿಕರು, 196 ನೇರಪಾವತಿ ಕಾರ್ಮಿಕರಿದ್ದಾರೆ. ಲೋಡರ್ಸ್/ಡ್ರೆöÊವರ್ ಮತ್ತು ಕ್ಲೀನರ್ 50 ಜನ ಖಾಯಂ ಮತ್ತು 551 ಹೊರಗುತ್ತಿಗೆಯಲ್ಲಿದ್ದಾರೆ. 139 ಹುದ್ದೆ ನೇಮಕಾತಿಯಾಗದೇ ಬಾಕಿ ಇದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪೌರಕಾರ್ಮಿಕ ಸಂಘದ ಅಧ್ಯಕ್ಷರಾದ ಗೋವಿಂದಪ್ಪ ಮಾತನಾಡಿ, ಜಿಲ್ಲೆಯಲ್ಲಿ ಪೌರಕಾರ್ಮಿಕರಿಗೆ ವಸತಿ ಒದಗಿಸುವ ಗೃಹಭಾಗ್ಯ ಯೋಜನೆ 2016 ರಲ್ಲಿ ಆರಂಭವಾಗಿದ್ದು ತುಂಬಾ ವಿಳಂಬವಾಗುತ್ತಿದೆ. ಆದ್ದರಿಂದ ವಸತಿ ಕಾಮಗಾರಿಯನ್ನು ಚುರುಕುಗೊಳಿಸಿ ಶೀಘ್ರದಲ್ಲೇ ಮನೆಗಳನ್ನು ಹಂಚಿಕೆ ಮಾಡಬೇಕು. ನೇರಪಾವತಿ ಮತ್ತು ಹೊರಗುತ್ತಿಗೆ ಕಾರ್ಮಿಕರಿಗೂ ಗೃಹಭಾಗ್ಯ ಯೋಜನೆ ಸೌಲಭ್ಯ ನೀಡಬೇಕು. ಹೊರಗುತ್ತಿಗೆ ಕಾರ್ಮಿಕರನ್ನು ನೇರ ಪಾವತಿ ವ್ಯಾಪ್ತಿಗೆ ತರಬೇಕು ಹಾಗೂ ಕಾರ್ಮಿಕರ ಸಿಂಗಾಪುರ ಪ್ರವಾಸ ಕೂಡ ವಿಳಂಬವಾಗುತ್ತಿದ್ದು ಶೀಘ್ರದಲ್ಲೇ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು.
ಸಭೆಯಲ್ಲಿ ಮಹಾನಗರಪಾಲಿಕೆ ಆಯುಕ್ತರಾದ ಕೆ.ಮಾಯಣ್ಣಗೌಡ, ಜಿ.ಪಂ ಉಪಕಾರ್ಯದರ್ಶಿ-2 ಜಯಲಕ್ಷಿö್ಮ, ಆಯೋಗದ ಅಧಿಕಾರಿ ರಾಘವೇಂದ್ರ, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.

MESCOM ಶಿವಮೊಗ್ಗ ತಾಲ್ಲೂಕಿನ ವ್ಯಾಪ್ತಿಯ ಮೆಸ್ಕಾಂ ವಿದ್ಯುತ್ ಸರಬರಾಜು ಇತ್ಯಾದಿ ದೂರುದುಮ್ಮಾನಗಳಿಗೆಸಂಪರ್ಕಿಸ ಬೇಕಾದ ಸಹಾಯ ದೂರವಾಣಿ ಮಾಹಿತಿ

0

MESCOM ಶಿವಮೊಗ್ಗ ತಾಲೂಕಿನ ವ್ಯಾಪ್ತಿಯಲ್ಲಿ ಯಾವುದೇ ತರಹದ ವಿದ್ಯುತ್ಛಕ್ತಿ/ವಿದ್ಯುತ್ ಸರಬರಾಜಿನಲ್ಲಿ ತೊಂದರೆಗಳಿಗೆ ದೂರು/ಸಲಹೆಗಳಿದ್ದಲ್ಲಿ ಇಲ್ಲಿ ನೀಡಿರುವ ಮೆಸ್ಕಾಂ ದೂರವಾಣಿ ಸಂಖ್ಯೆಗಳಿಗೆ ಗ್ರಾಹಕರು ಕರೆ ಮಾಡಿ ತಿಳಿಸುವಂತೆ ಮೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಮೆಸ್ಕಾಂ ವ್ಯಾಪ್ತಿಯಲ್ಲಿನ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದಂತೆ ದೂರುಗಳಿದ್ದಲ್ಲಿ 1912 ನ್ನು ಸಂಪರ್ಕಿಸುವುದು. ಮೆಸ್ಕಾಂ ಶಿವಮೊಗ್ಗ ನಗರ ಪ್ರದೇಶದ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದಂತೆ ದೂರುಗಳಿದ್ದಲ್ಲಿ 08182-225887/222369 ಗಳನ್ನು ಸಂಪರ್ಕಿಸುವುದು.
ಶಿವಮೊಗ್ಗ ಉಪ ವಿಭಾಗಾಧಿಕಾರಿಗಳು ರವೀಂದ್ರ ನಗರ ಉಪವಿಭಾಗ-1 , ಮೊ.ಸಂ.9448289448, ಘಟಕ-1 ರ ಶಾಖಾಧಿಕಾರಿಗಳು- ನವೀನ್ ಕುಮಾರ್ ಮೊ.ಸಂ.9448289662 ಈ ಅಧಿಕಾರಿಗಳ ವ್ಯಾಪ್ತಿಗೆ ಬರುವ ಸ್ಥಳಗಳು ಹರಿಗೆ, ಮಲವಗೊಪ್ಪ, ವಡ್ಡಿನಕೊಪ್ಪ, ಜ್ಯೋತಿನಗರ, ಮೆಹಬೂಬ್ ನಗರ, ವಾದಿಹುದಾ, ಪುಟ್ಟಪ್ಪ ಕ್ಯಾಂಪ್, ಮದಾರಿ ಪಾಳ್ಯ, ಊರುಗಡೂರು, ರತ್ನಮ್ಮ ಲೇಔಟ್, ಸೂಳೆಬೈಲು, ನಿಸರ್ಗ ಲೇಔಟ್, ಗ್ಯಾಸ್ ಗೋಡನ್ ರಸ್ತೆ, ಈದ್ಗ ನಗರ, ಮಳಲಿಕೊಪ್ಪ, ಇಂದಿರಾನಗರ, ಗುರುಪುರ, ಪುರಲೆ, ಹಸೂಡಿ ರಸ್ತೆ, ಚಿಕ್ಕಲ್, ವಿದ್ಯಾನಗರ.
ಘಟಕ-2ರ ಶಾಖಾಧಿಕಾರಿ- ನಂದೀಶ್- ಮೊ.ಸಂ.9448289663 – ಈ ಅಧಿಕಾರಿ ವ್ಯಾಪ್ತಿಗೆ ಬರುವ ಸ್ಥಳಗಳು ಲೂರ್ದುನಗರ, ಬಾಪೂಜಿ ನಗರ, ಜೋಸೆಫ್ ನಗರ, ದುರ್ಗಿಗುಡಿ, ವೆಂಕಟೇಶ್ ನಗರ, ಸೋಮಯ್ಯ ಲೇಔಟ್, ಟ್ಯಾಂಕ್ ಮೊಹಲ್ಲಾ, ಮೆಹಂದಿ ನಗರ, ಬಸವನಗುಡಿ, ವಿನಾಯಕ ನಗರ, ರಾಜೇಂದ್ರ ನಗರ, ರವೀಂದ್ರ ನಗರ, ಗಾಂಧಿನಗರ, ಹನುಮಂತ ನಗರ, ತಿಲಕ ನಗರ, ಜಯನಗರ, ಚನ್ನಪ್ಪ ಲೇಔಟ್, ಅಚ್ಯುತ್ ರಾವ್ ಲೇಔಟ್, ವಿನಾಯಕ ನಗರ, ಜೈಲ್ ರಸ್ತೆ, ಮಲ್ಲೇಶ್ವರ ನಗರ, ಗುಂಡಪ್ಪ ಶೆಡ್, ಶೇಷಾದ್ರಿ ಪುರಂ, ಅಮೀರ್ ಅಹಮ್ಮದ್ ಕಾಲೋನಿ, ನೆಹರು ರಸ್ತೆ, ಪಾರ್ಕ್ ಬಡಾವಣೆ, ದುರ್ಗಿಗುಡಿ.
ಘಟಕ-3 ರ ಶಾಖಾಧಿಕಾರಿ ರವಿಕುಮಾರ್ ಕೆ.ವಿ . ಮೊ.ಸಂ.9448289675- ಈ ಅಧಿಕಾರಿಗಳ ವ್ಯಾಪ್ತಿಗೆ ಬರುವ ಸ್ಥಳಗಳು ಕುವೆಂಪು ನಗರ, ಇನ್ಸ್ಪ್ರಾ ಸಿಟಿ, ಐರಿಷ್ ಕೌಂಟಿ, ಮ್ಯಾಕ್ಸ್ ವರ್ತ್ ಲೇಔಟ್, ಮಧುವನ ಕಾಲೋನಿ, ಎನ್.ಇ.ಎಸ್. ಲೇಔಟ್, ಸವಳಂಗ ರಸ್ತೆ, ಜ್ಯೋತಿ ನಗರ, ಇಂದಿರಾ ಗಾಂಧಿ ಬಡಾವಣೆ, ಶಿವಬಸವ ನಗರ, ವೀರಭದ್ರೇಶ್ವರ ಬಡಾವಣೆ, ಬೊಮ್ಮನಕಟ್ಟೆ ‘ಎ’ ಬ್ಲಾಕ್ ನಿಂದ ‘ಹೆಚ್’ ಬ್ಲಾಕ್, ಹಳೇ ಬೊಮ್ಮನಕಟ್ಟೆ, ಸಾನ್ವಿ ಲೇಔಟ್, ಕೆ.ಎಂ. ಲೇಔಟ್, ವಿನಾಯಕ ಲೇಔಟ್, ಮಹಾರಾಣಿ ಸ್ಕೂಲ್ ಲಿಮಿಟ್, ದೇವಂಗಿ 2ನೇ ಹಂತ, ಪರ್ಫೆಕ್ಟ್ ಅಲಾಯ್, ಜೆ.ಎನ್.ಎನ್.ಸಿ. ಕಾಲೇಜು, ದಿನಕರ ಪಾಲಿಟೆಕ್ನಿಕ್, ರೆಡ್ಡಿ ಲೇಔಟ್, ಶಾಂತಿನಗರ, ಮಲ್ಲಿಕಾರ್ಜುನ ನಗರ, ತ್ಯಾವರೆಚಟ್ನಳ್ಳಿ, ತರಳಬಾಳು ಬಡಾವಣೆ, ಶಾದ್ ನಗರ, ಚೌಡೇಶ್ವರಿ ಕಾಲೋನಿ, ಹೊನ್ನಳ್ಳಿ ರಸ್ತೆ, ಯು.ಜಿ.ಡಿ. ಪ್ಲಾಂಟ್, ದೇವಂಗಿ ತೋಟ, ಎಲ್.ಬಿ.ಎಸ್. ನಗರ, ಅಶ್ವಥ್ ನಗರ, ಕೀರ್ತಿನಗರ, ಬಸವೇಶ್ವರ ನಗರ, ಪವನಶ್ರೀ ಲೇಔಟ್, ಡಾಲರ‍್ಸ್ ಕಾಲೋನಿ, ಕೃಷಿನಗರ, ನವುಲೆ, ಮಾರುತಿ ಬಡಾವಣೆ, ತ್ರಿಮೂರ್ತಿ ನಗರ, ಸರ್ಜಿ ಕನ್ವೆನ್ಷನಲ್ ಹಾಲ್, ವಿಜಯ ಕರ್ನಾಟಕ ಪ್ರೆಸ್.
ನಗರ ಉಪವಿಭಾಗ-2, ಯಶವಂತ್ ನಾಯ್ಕ್, ಮೊ.ಸಂ.9448289449. ಘಟಕ-4ರ ಶಾಖಾಧಿಕಾರಿಗಳು ಶ್ರೇಯಸ್ ಮೊ.ಸಂ.9448289665. ಈ ಅಧಿಕಾರಿಗಳ ವ್ಯಾಪ್ತಿಗೆ ಬರುವ ಸ್ಥಳಗಳು ಬೆಕ್ಕಿನ ಕಲ್ಮಠ, ಕೋಟೆ ರಸ್ತೆ, ಓ.ಬಿ.ಎಲ್. ರಸ್ತೆ, ಪೆನ್ಷನ್ ಮೊಹಲ್ಲಾ, ಸೈನ್ಸ್ ಫೀಲ್ಡ್, ಎಸ್.ಪಿ.ಎಂ. ರಸ್ತೆ, ಕೆರೆದುರ್ಗಮ್ಮ ಕೇರಿ, ಯಲಕಪ್ಪನ ಕೇರಿ, ಬೇಡರ ಕೇರಿ, ಅಶೋಕ ರಸ್ತೆ, ವಿನಾಯಕ ರಸ್ತೆ, ತಿರುಪಾಲಯ್ಯನ ಕೇರಿ, ಲಷ್ಕರ ಮೊಹಲ್ಲಾ, ಅಲೇಮನ್ ಕೇರಿ, ಮೊಹದ್ದೀನ ಗಲ್ಲಿ, ಕರಿದೇವರ ಕೇರಿ, ಗಾಂಧಿ ಬಜಾರ್ ಮುಖ್ಯ ರಸ್ತೆ, ನಾಗಪ್ಪನ ಕೇರಿ, ಅನ್ವೇರಪ್ಪನ ಕೇರಿ, ಎಲೆ ರೇವಣ್ಣನ ಕೇರಿ, ಗಂಗಾ ಪರಮೇಶ್ವರಿ ರಸ್ತೆ, ತುಳುಜಾ ಭವಾನಿ ರಸ್ತೆ, ಸೊಪ್ಪಿನ ಮಾರ್ಕೆಟ್, ಅವಿನ ಕೇರಿ, ಕಸ್ತೂರಬಾ ರಸ್ತೆ, ಎಂ.ಕೆ.ಕೆ.ರಸ್ತೆ, ಕೊಲ್ಲೂರಯ್ಯನ ಬೀದಿ, ಶಿವಾಜಿರಸ್ತೆ, ಧರ್ಮರಾಯನ ಬೀದಿ, ತಿಗಲರ ಕೇರಿ, ರಾಮಣ್ಣ ಶ್ರೇಷ್ಟಿ ಪಾರ್ಕ್, ಅಪ್ಪಾಜಿರಾವ್ ಕಾಂಪೌಡ್, ಕೆ,ಆರ್. ಪುರಂ, ಭರ್ಮಪ್ಪ ನಗರ, ಸಾವರ್ಕರ ನಗರ.
ಘಟಕ-5 ಶಾಖಾಧಿಕಾರಿಗಳು ರಮೇಶ್ ಎಸ್.ಎಸ್. – ಮೊ.ಸಂ.9448289666. ಈ ಅಧಿಕಾರಿಗಳ ವ್ಯಾಪ್ತಿಗೆ ಬರುವ ಸ್ಥಳಗಳು ಪೀಯರ್ ಲೈಟ್ ಇಂಡಷ್ಟಿçಯಲ್ ಎರಿಯಾ, ಎನ್.ಟಿ. ರಸ್ತೆ, ಜೆ.ಸಿ. ನಗರ, ಮಾರ್ನಾಮಿ ಬೈಲು, ಬಿ.ಹೆಚ್. ರಸ್ತೆ, ಜಿ.ಎಸ್.ಕೆ.ಎಂ. ರಸ್ತೆ, ರಾಯಲ್ ಆರ್ಕಿಡ್, ಮಾರ್ಡನ್ ಟಾಕೀಸ್, ಭಾರತಿ ಕಾಲೋನಿ, ಗಾರ್ಡನ್ ಏರಿಯಾ 1ನೇ ರಿಂದ 3ನೇ ತಿರುವು, ಸವರ್‌ಲೈನ್ ರಸ್ತೆ, ನೆಹರು ರಸ್ತೆ, ಆರ್.ಎಲ್.ಎಂ.ನಗರ 1 ಮತ್ತು 2ನೇ ಹಂತ, ಮಿಳಘಟ್ಟ 1ನೇ ತಿರುವು, ಬುದ್ಧಾನಗರ, ಗೌರ್ಮೆಂಟ್ ಬಸ್ಟ್ಯಾಂಡ್, ಪ್ರೈವೆಟ್ ಬಸ್ಟ್ಯಾಂಡ್, ಮಂಜುನಾಥ ಬಡಾವಣೆ, ಆನಂದ್ ರಾವ್ ಬಡಾವಣೆ, ಖಾಜಿ ನಗರ, ಟಿಪ್ಪುನಗರ ಎಡಗಡೆ 1 ರಿಂದ 7 ನೇ ತಿರುವು, ಪದ್ಮಾ ಟಾಕೀಸ್, ಓ.ಟಿ. ರಸ್ತೆ, ಪಂಚವಟಿ ಕಾಲೋನಿ.
MESCOM ಘಟಕ-6 ಶಾಖಾಧಿಕಾರಿಗಳು ರಮೇಶ್ -ಮೊ.ಸಂ.9448289677. ಈ ಅಧಿಕಾರಿಗಳ ವ್ಯಾಪ್ತಿಗೆ ಬರುವ ಸ್ಥಳಗಳು ಗೋಪಿಶೆಟ್ಟಿಕೊಪ್ಪ, ಚಾಲುಕ್ಯನಗರ, ಅಪ್ಪರ್ ತುಂಗಾನಗರ, ಕೆ.ಹೆಚ್.ಬಿ. ಕಾಲೋನಿ, ಗೋಪಿಶೆಟ್ಟಿ ಹಳೆ ಗ್ರಾಮ, ಇಲಿಯಾಸ್ ನಗರ, ಇಲಿಯಾಸ್ ನಗರ 14 ನೇ ತಿರುವು ವರೆಗೆ, ಪೇಪರ್ ಪ್ಯಾಕೇಜ್ ಇಂಡಸ್ಟ್ರೀಯಲ್ ಏರಿಯಾ, ಕಲ್ಲೂರು ಮಂಡ್ಲಿ ಇಂಡಸ್ಟ್ರೀಯಲ್ ಏರಿಯಾ, ಕೃಷ್ಣ ರಾಜೇಂದ್ರ ವಾಟರ್ ವರ್ಕ್ಸ್, ತಿಮ್ಮಣ್ಣನ ಕೊಪ್ಲು, ಕುಂಬಾರಗುಂಡಿ, ಬಿ.ಬಿ.ಸ್ಟ್ರೀಟ್, ಉಪ್ಪಾರ ಕೇರಿ, ಸಿನಿಮಾ ರಸ್ತೆ, ಸಿದ್ದಯ್ಯ ರಸ್ತೆ, ಓ.ಟಿ. ರಸ್ತೆ, ಕೆ.ಆರ್. ಪುರಂ, ಹಳೇಮಂಡ್ಲಿ, ನ್ಯೂಮಂಡ್ಲಿ, ಇಮಾಂಬಡಾ, ಇಲಿಯಾಸ್ ನಗರ, ತುಂಗಾನಗರ, ಆಶ್ರಯ ಬಡಾವಣೆ, ಗಂಧರ್ವನಗರ, ಅರಕೆರೆ, ಕುರುಬರ ಪಾಳ್ಯ, ಸವಾಯಿಪಾಳ್ಯ, ಕೆರೆದುರ್ಗಮ್ಮಕೇರಿ, ಆಜಾದ್ ನಗರ, ರವಿವರ್ಮ ಬೀದಿ.
ಘಟಕ-7ರ ಶಾಖಾಧಿಕಾರಿ ಜಗದೀಶ್ ಎನ್.ಪಿ. – ಮೊ.ಸಂ.9448289664. ಈ ಶಾಖಾಧಿಕಾರಿಗಳ ವ್ಯಾಪ್ತಿಗೆ ಬರುವ ಸ್ಥಳಗಳು ಎ.ಪಿ.ಎಂ.ಸಿ, ಎಸ್.ಜಿ.ಕೆ. ಇಂಡಷ್ಟಿçಯಲ್ ಏರಿಯಾ, ವಿನೋಬ ನಗರ 60 ಅಡಿ ರಸ್ತೆ, ಬಾಲಾಜಿ ಗ್ರಾನೈಟ್, ಸೈಕಲ್ ಲೋಕ, ಶುಭಮಂಗಳ ಕಲ್ಯಾಣ ಮಂಟಪ, ರಾಣಿ ಚೆನ್ನಮ್ಮ ರಸ್ತೆ, ಹೊಸಮನೆ, ಶರಾವತಿ ನಗರ, ಪೊಲೀಸ್ ಚೌಕಿ, ಮೇದಾರ ಕೇರಿ, ಶಿವಾಲಯ, ಲಕ್ಷ್ಮೀ ಟಾಕೀಸ್, ವೀರಣ್ಣ ಲೇಔಟ್, ಹುಚ್ಚರಾಯ ಕಾಲೋನಿ, ಚೇತನ ಪಾರ್ಕ್ ಅರವಿಂದ ನಗರ, ಸೂರ್ಯ ಲೇಔಟ್, ಕನಕ ನಗರ, ಪಿ & ಟಿ ಕಾಲೋನಿ, ದೇವರಾಜು ಅರಸು ಬಡಾವಣೆ, ಶಾರದಮ್ಮ ಲೇಔಟ್, ಮೈತ್ರಿ ಅಪಾರ್ಟಮೆಂಟ್, ಕಾಜಿ ಗಾರ್ಡನ್, ಬೂಸ್ಟರ್ ಪಂಪ್ ಹೌಸ್, ಆಟೋ ಕಾಂಪ್ಲೆಕ್ಸ್, ಶಿವಮೊಗ್ಗ ಟೆಕ್ನೋರಿಂಗ್ ಇಂಡಸ್ಟ್ರೀಯಲ್ ಏರಿಯಾ, ಯುನಿಟಿ ಆಸ್ಪತೆ, ಆದಿಚುಂಚನಗಿರಿ ಕಲ್ಯಾಣ ಮಂಟಪ, ಕುವೆಂಪು ರಸ್ತೆ, ನಂದಿ ಪೆಟ್ರೋಲ್ ಬಂಕ್, ಜೈಲ್ ರಸ್ತೆ, ನರ್ಸ್ ಕ್ವಾಟ್ರಸ್ಸ್, ಆಯುರ್ವೇದ ಕಾಲೇಜು, ಆಯನೂರು ಗೇಟ್, ಸಾಗರ ರಸ್ತೆ, ಸುಬ್ಬಯ್ಯ ಆಸ್ಪತ್ರೆ, ಶಿವಮೊಗ್ಗ ಗ್ಯಾಸ್.
ಘಟಕ-8ರ ಶಾಖಾಧಿಕಾರಿ ಪ್ರಶಾಂತ್ ಕುಮಾರ್ ಕೆ.ಎಂ. ಮೊ.ಸಂ.9448289679. ಈ ಶಾಖಾಧಿಕಾರಿಗಳ ವ್ಯಾಪ್ತಿಗೆ ಬರುವ ಸ್ಥಳಗಳು ಸಾಗರ ರಸ್ತೆ, ಗುತ್ಯಪ್ಪ ಕಾಲೋನಿ, ನೇತಾಜಿ ಸರ್ಕಲ್, ಆಯನೂರು ಗೇಟ್, ಜೆ.ಪಿ. ನಗರ ಶ್ರೀರಾಮ ನಗರ, ವಿಜಯ ನಗರ, ನೀಲಮೇಗಂ ಲೇಔಟ್, ರಾಜಮಹಲ್ ಬಡಾವಣೆ, ಪೋಲೀಸ್ ಲೇಔಟ್, ಗೋಪಾಳ ಗೌಡ ಬಡಾವಣೆ, ಕೆ.ಹೆಚ್.ಬಿ ಕಾಲೋನಿ, ಅಲ್ ಹರೀಂ ಏರಿಯಾ, ಅಣ್ಣ ನಗರ, ಕೊರ್ಮರ ಕೇರಿ, ರಂಗನಾಥ ಬಡಾವಣೆ, ಮಿಳಘಟ್ಟ, ಪದ್ಮಾ ಟಾಕೀಸ್, ಟಿಪ್ಪು ನಗರ ಬಲಭಾಗ, ಮೆಗ್ಗಾನ್ ಆಸ್ಪತ್ರೆ, ಮಿಷನ್ ಕಾಂಪೌಡ್, ಕುವೆಂಪು ರಸ್ತೆ ಬಲಭಾಗ, ದುರ್ಗಿಗುಡಿ, ಜೆ ಪಿ ಎನ್ ರಸ್ತೆ, ಎಲ್‌ಎಲ್‌ಆರ್ ರಸ್ತೆ, ಕಾಮಾಕ್ಷಿ ಬೀದಿ, ಸವಾರ್ ಲೈನ್ ರಸ್ತೆ, ಎ,ಆರ್.ಬಿ. ಕಾಲೋನಿ, ಐ.ಬಿ.ಎಸ್.ಪಿ. ಆಫೀಸ್, ಪೋಲೀಸ್ ಕ್ವಾಟ್ರಸ್ಸ್. ಅಶೋಕ ನಗರ.
ಉಪವಿಭಾಗ-3ರ ನಗರ ಉಪವಿಭಾಗಾಧಿಕಾರಿ ಸುರೇಶ್ – ಮೊ.ಸಂ. 9480841339. ಘಟಕ-9ರ ಶಾಖಾಧಿಕಾರಿ- ವಿಶ್ವನಾಥ್ ಮೊ.ಸಂ.9448289676 . ಈ ಶಾಖಾಧಿಕಾರಿಗಳ ವ್ಯಾಪ್ತಿಗೆ ಬರುವ ಸ್ಥಳಗಳು ಎಸ್.ವಿ. ಬಡವಾಣೆ- ಎ.ಬಿ.ಸಿ.ಡಿ.ಇ.ಫ್ ಬ್ಲಾಕ್, ಆಲ್ಕೋಳ ಪೋಲೀಸ್ ಲೇಔಟ್, ಅಮೃತ ಲೇಔಟ್, ಲಗಾನ್ ಮಂದಿರ, ಸಿಟಿ ಕ್ಲಬ್, ಗಾಡಿಕೊಪ್ಪ, ಉಮೆನ್ಸ್ ಪಾಲಿಟೆಕ್ನಿಕ್, ಜಡ್ಜ್ ಕ್ವಾಟ್ರಸ್ಸ್, ಸ್ನೇಹ ಅಪಾರ್ಟ್ಮೆಂಟ್, ವೃದ್ದಾಶ್ರಮ, ಹನುಮಂತ ನಗರ, ಸಂಭ್ರಮ ಅಪಾರ್ಟ್ಮೆಂಟ್, ಗಾಡಿಕೊಪ್ಪ ತಾಂಡ, ಸಾಗರ ಮುಖ್ಯ ರಸ್ತೆ, ನಂಜಪ್ಪ ಲೈಫ್ ಕೇರ್, ಮಲ್ಲಿಗನಹಳ್ಳಿ, ಶರಾವತಿ ಡೆಂಟಲ್ ಕಾಲೇಜು, ಹರ್ಷ ಫೆರ್ನ್ ಹೋಟೆಲ್, ಗಾಯತ್ರಿದೇವಿ ಬಡಾವಣೆ, ಸಮಾಜ ಕಲ್ಯಾಣ ಲೇಔಟ್, ವಾಜಪೇಯಿ ಬಡಾವಣೆ-ಎ.ಬಿ.ಸಿ.ಡಿ. ಬ್ಲಾಕ್, ಮ್ಯಾಕ್ಸ್ ವರ್ಥ್ ಲೇಔಟ್, ಗಾರ್ಡನ್ ಸಿಟಿ ಲೇಔಟ್, ಸೇಂಟ್ ಡಿಸೋಜ ಚರ್ಚ್, ಅರೇಕಾನಟ್ ಕ್ಲಬ್, ಪುರದಾಳು ರಸ್ತೆ, ವಿಜಯ ಲೇಔಟ್, ಜಯಕಮಲ ಲೇಔಟ್, ಚಿನ್ಮಯ ಡಾಕ್ಟರ್ ಲೇಔಟ್, ಸೋಷಿಯಲ್ ಹಾರ್ಬರ್, ವೀರಣ್ಣ ಲೇಔಟ್, ಕಾಶಿಪುರ, ಜಯದೇವ ಬಡಾವಣೆ, ಪ್ರಿಯದರ್ಶಿನಿ ಲೇಔಟ್, ಶಿವಪ್ಪ ನಾಯಕ ಬಡಾವಣೆ, ಇಂಧಿರಾಗಾಂಧಿ ಲೇಔಟ್, ಕೆ.ಹೆಚ್.ಬಿ. ದಾಮೋದರ್ ಕಾಲೋನಿ, ಚೇತನ ಸ್ಕೂಲ್, ಕಲ್ಲಳಿ, ಕೆ.ಎಸ್.ಆರ್.ಟಿ.ಸಿ ಲೇಔಟ್, ಪ್ರಿಯದರ್ಶಿನಿ ಸ್ಕೂಲ್, ನಾಗಚೌಡೇಶ್ವರಿ ಟೆಂಪಲ್, ಕುರುಮಾರಿಯಮ್ಮ ದೇವಸ್ಥಾನ, ತಮಿಳ್ ಕ್ಯಾಂಪ್, ಕಲ್ಲಳಿ-ಎ ಯಿಂದ ಹೆಚ್ ಬ್ಲಾಕ್, ಕಾಶಿಪುರ ಬಸ್‌ಸ್ಟ್ಯಾಂಡ್, ಮಾಧವ ನೆಲೆ, ಅಣ್ಣ ಹಜಾರೆ ಪಾರ್ಕ್, ಬಸವ ಮಂಟಪ, ಕೆ.ಹೆಚ್.ಬಿ. ಕಛೇರಿ, ತಿಮ್ಮಕ್ಕ ಲೇಔಟ್, ಎಸ್.ಕೆ.ಎನ್. ಸ್ಕೂಲ್, ರೇಣುಕಾಂಬ ಬಡಾವಣೆ, ಹನುಮಂತಪ್ಪ ಬಡಾವಣ್ಣೆ, ಲಕ್ಷ್ಮೀಪುರ, ಕೆಂಚಪ್ಪ ಲೇಔಟ್, ಕೆ.ಹೆಚ್.ಬಿ. ಕ್ವಾಟ್ರಸ್ಸ್, ಸಬ್ ರಿಜಿಸ್ಟಾರ್ ಕಛೇರಿ, ಸೂಡಾ ಕಾಂಪ್ಲೆಕ್ಸ್, ವಿನೋಬ ನಗರ ಪೊಲೀಸ್ ಸ್ಟೇಷನ್, ಆದರ್ಶ ಕಾಲೋನಿ, ಸವಿ ಬೇಕರಿ ಕೆಳಭಾಗ, ವೆಟರ್ನರಿ ಕಾಲೇಜು ರಸ್ತೆ, ಲಕ್ಕಪ್ಪ ಲೇಔಟ್, ಎನ್.ಎಮ್.ಸಿ.ಕಾಂಪೌಂಡ್, ವಿಜಯ ಅವಿನ್ಯೂ, ಬ್ಯಾಂಕ್ ಆಫ್ ಬರೋಡಾ, ವಿಪ್ರ ಟ್ರಸ್ಟ್, ಜೆ.ಹೆಚ್. ಪಟೇಲ್ ಬಡಾವಣೆ, ಎ.ಬಿ.ಸಿ.ಡಿ. ಬ್ಲಾಕ್, ವಿಕಾಸ ಸ್ಕೂಲ್, ಮುನಿಯಪ್ಪ ಲೇಔಟ್, ಸಹ್ಯಾದ್ರಿನಗರ, ಆದಿಶಂಕರ ಲೇಔಟ್, ಸೋಮಿನಕೊಪ್ಪ, ಹೊಂಗಿರಣ್ಣ ಲೇಔಟ್.
ಗ್ರಾಮೀಣ ಉಪವಿಭಾಗಧಿಕಾರಿಗಳು ಪಾಲಾಕ್ಷಿ ಮೊ.ಸಂ.9448289506. ಅಬ್ಬಲಗೆರೆ ಶಾಖಾಧಿಕಾರಿಗಳು ಯತೀಶ್ ಮೊ.ಸಂ.9448289684. ಈ ಅಧಿಕಾರಿಗಳ ವ್ಯಾಪ್ತಿಯಲ್ಲಿ ಬರವ ಸ್ಥಳಗಳು ಅಬ್ಬಲಗೆರೆ, ಹುಣಸೋಡು, ಕಲ್ಲುಗಂಗೂರು, ಮೋಜಪ್ಪ ಹೊಸೂರು, ಬಸವನಗಂಗೂರು, ಮತ್ತೋಡು, ಚನ್ನಮಂಬಾಪುರ, ಕುಂಚೇನಹಳ್ಳಿ, ಕಲ್ಲಾಪುರ, ಬೀರನಕೆರೆ, ಬಿಕ್ಕೋನಹಳ್ಳಿ, ಬೆಳಲಕಟ್ಟೆ, ಗೋಂದಿಚಟ್ನಳ್ಳಿ, ಹೊಳೆಹನಸವಾಡಿ, ಮೇಲಿನಹನಸವಾಡಿ, ಹುಣಸೋಡು ಕ್ರಷರ್ ಇಂಡಸ್ಟ್ರೀಸ್, ರತ್ನಗಿರಿ ನಗರ, ಕೊಮ್ಮನಾಳು, ಬೂದಿಗೆರೆ, ಬನ್ನಿಕೆರೆ, ಮೇಲಿನಕುಂಚೇನಹಳ್ಳಿ, ಕೆಳಗಿನ ಕುಂಚೇನಹಳ್ಳಿ.
ಘಟಕ-2 ಶಾಖಾಧಿಕಾರಿಗಳು ಪರಮೇಶ್ವರ್ ನಾಯ್ಕ್ – ಮೊ.ಸಂ.9448289685. ಈ ಶಾಖಾಧಿಕಾರಿಗಳ ವ್ಯಾಪ್ತಿಗೆ ಬರುವ ಸ್ಥಳಗಳು ಹೊನ್ನವಿಲೆ, ನವಿಲೆಬಸವಾಪುರ, ಅಮರಾವತಿ ಕ್ಯಾಂಪ್, ಮಾಳೇನಹಳ್ಳಿ, ಶೆಟ್ಟಿಹಳ್ಳಿ, ಗುಡ್ರುಗೊಪ್ಪ, ನಿಧಿಗೆ, ಸೋಗಾನೆ, ಬಿದಿರೆ, ಓತಿಘಟ್ಟ, ದುಮ್ಮಳ್ಳಿ, ಹಾರೆಕಟ್ಟೆ, ಮಾಚೇನಹಳ್ಳಿ, ಕೆ.ಎಸ್.ಆರ್.ಪಿ., ಜಯಂತಿಗ್ರಾಮ, ರಾಮಮೂರ್ತಿ ಇಂಡಸ್ಟ್ರೀಸ್, ಸಿದ್ದಮಾಜಿ ಹೊಸೂರು, ಬೆಳಗಲು, ಚಿಕಲಕೆರೆ, ಲಿಂಗಾಪುರ, ಕಾಕನಹಸೂಡಿ, ವಡ್ಡರಕಟ್ಟೆ, ಮಂಡೇನಕೊಪ್ಪ, ಲಕ್ಕಿನಕೊಪ್ಪ ಗೇಟ್, ವಿನಾಯಕ ನಗರ, ತೋಟದ ಕೆರೆ, ಹುರುಳಿಹಳ್ಳಿ, ಗಣಿದಾಳು, ಉಂಬ್ಳೇಬೈಲು, ಕಣಗಲಸರ, ಸಾರಿಗೆರೆ, ಕೈದೊಟ್ಟು, ಸಂತೆಕಡೂರು, ಶ್ರೀರಾಮನಗರ, ಮಳಲಿಕೊಪ್ಪ, ಊರುಗಡೂರು, ಶಿವಮೊಗ್ಗ ವಿಮಾನ ನಿಲ್ದಾಣ, ಕಾಚಿನಕಟ್ಟೆ, ಸಂತೆಕಡೂರು, ದೊಡ್ಡಿಬೀಳು.
ಪಿಳ್ಳಂಗರೆ ಶಾಖಾಧಿಕಾರಿಗಳು ಚೇತನ್ -ಮೊ.ಸಂ.9480841341. ಈ ಶಾಖಾಧಿಕಾರಿಗಳ ವ್ಯಾಪ್ತಿಗೆ ಬರುವ ಸ್ಥಳಗಳು ಯಳವಟ್ಟಿ, ಹಸೂಡಿ, ವೀರಭದ್ರ ಕಾಲೋನಿ, ಬಂಗಾರಪ್ಪ ಕಾಲೋನಿ, ಹೊಸೂರು, ಸದಾಶಿವಪುರ, ಚಿಕ್ಕಮರಡಿ, ಹೊಸಮನೆ, ಹೊಳೆಬೆನವಳ್ಳಿ, ಪಿಳ್ಳಂಗೆರೆ, ರಾಮನಗರ, ಹೊಯ್ಸನಳ್ಳಿ, ಅಬ್ಬರಘಟ್ಟ, ಜಾವಳ್ಳಿ, ತರಗನಹಳ್ಳಿ, ಬಿ.ಬೀರನಹಳ್ಳಿ, ಹಾರೋಬೆನಹಳ್ಳಿ, ತಿಳುವಳ್ಳಿ, ಕೂಡ್ಲಿ, ಭದ್ರಾಪುರ, ಚಿಕ್ಕಕೂಡ್ಲಿ, ಹೊಳಬೆಳಗಲು, ಮಲ್ಲಾಪುರ, ವೆಂಕಟಾಪುರ, ಕಾಟಿಕೆರೆ, ಬುಕ್ಲಾಪುರ, ಸಕ್ರೆಬೈಲು, ಹೊಸಮನೆ ತಾಂಡ, ಹಸೂಡಿ ಫಾರಂ, ವೆಂಕಟೇಶ್ವರನಗರ, ಹಾರೋಬೆನವಳ್ಳಿ ತಾಂಡಾ, ಹರಪನಹಳ್ಳಿ ಕ್ಯಾಂಪ್.
ಗಾಜನೂರು ಶಾಖಾಧಿಕಾರಿ ರಮೇಶ್ – ಮೊ.ಸಂ.9448998728. ಈ ಶಾಖಾಧಿಕಾರಿಗಳ ವ್ಯಾಪ್ತಿಗೆ ಬರುವ ಸ್ಥಳಗಳು ಲಕ್ಷ್ಮೀಪುರ, ಹೊಸಳ್ಳಿ, ಹೊನ್ನಾಪುರ, ಅನುಪಿನಕಟ್ಟೆ, ಪುರದಾಳು, ಹನುಮಂತಾಪುರ, ಶಾಂತಿಪುರ, ಗೋವಿಂದಪುರ, ಬೆಳ್ಳೂರು, ರಾಮಿನಕೊಪ್ಪ, ಕಲ್ಲೂರು, ಅಗಸಹಳ್ಳಿ, ಹೊಸೂರು, ಭಾರತಿನಗರ, ಗೌಲಿಕ್ಯಾಂಪ್ ಗಾಂಧಿನಗರ ದಿಬ್ಬ, ಹಾಯ್ ಹೊಳೆ, ಬಸವಾಪುರ, ಈಚಲವಾಡಿ, ಗಾಜನೂರು, ತಟ್ಟಿಕೆರೆ, ಇಂದಿರಾನಗರ, ಮೊರಾರ್ಜಿ ಸ್ಕೂಲ್, ನಿಸರ್ಗ ಎಕೋ ಪ್ರಾಡೆಕ್ಟ್, ನವೋದಯ ಸ್ಕೂಲ್, ಗಾಜನೂರು ಅಗ್ರಹಾರ, ಮುಳುಕೆರೆ, ಸಕ್ರೆಬೈಲು, ಮತ್ತೂರು, ಹೊಸಕೊಪ್ಪ, ಸಿದ್ದರಹಳ್ಳಿ, ಕುಸ್ಕೂರು, ಕಡೇಕಲ್, ಯರಗನಾಳು, ಹಾಲಲಕ್ಕವಳ್ಳಿ, ವೀರಾಪುರ, ಸಿದ್ದರಹಳ್ಳಿ, ಗಾಜನೂರು ವಾಟರ್ ಸಪ್ಲೆ, ಐ.ಟಿ.ಐ. ಕಾಲೇಜು, ಹರೆಕೆರೆ, ಶ್ರೀಕಂಠಪುರ, ಮಂಡೇನಕೊಪ್ಪ, ತಿಮ್ಕಾಪುರ, ಶೆಟ್ಟಿಹಳ್ಳಿ, ಚಿತ್ರಶೆಟ್ಟಿಹಳ್ಳಿ, ಪುರದಾಳ್ ರಸ್ತೆ, ಬಂಡೆಕಲ್ಲೂರು, ಹನುಮಂತಪುರ, ಕೂಡ್ಲಮನೆ, ಮೂಡ್ಲಮನೆ, ಶಾರದಾ ಕಾಲೋನಿ, ಕಾನೆಹಳ್ಳ, ಹೊಸಹೊನ್ನಪುರ.
ಹೊಳಲೂರು ಶಾಖಾಧಿಕಾರಿ ಪುಟ್ಟಪ್ಪ ಕೆ. -ಮೊ.ಸಂ. 9448289683. ಈ ಶಾಖಾಧಿಕಾರಿಗಳ ವ್ಯಾಪ್ತಿಗೆ ಬರುವ ಸ್ಥಳಗಳು ಆಲದಹಳ್ಳಿ, ಸೋಮಿನಕೊಪ್ಪ, ಸುತ್ತುಕೋಟೆ, ಹರಮಘಟ್ಟ, ರಾಮೇನಹಳ್ಳಿ, ಹೊಳಲೂರು, ಹೊಸಕೆರೆ, ಬುಳ್ಳಾಪುರ, ಹೊಳೆಹಟ್ಟಿ, ಸೂಗೂರು, ಕ್ಯಾತಿನಕೊಪ್ಪ, ಬೇಡರಹೊಸಳ್ಳಿ, ಹಾಡೋನಹಳ್ಳಿ, ಮಡಿಕೆಚೀಲೂರು, ಬಿ.ಕೆ.ತಾವರೆ, ಹೊಳೆಸಾಲು.

Shimoga News ಬ್ಯಾಕ್ ಮ್ಯಾನೇಜರ್ಗಳು ನಿಗದಿತ ಗುರಿ ಸಾಧನೆಗೆ ಶ್ರಮಿಸಬೇಕು- ಎನ್.ಹೇಮಂತ್

0

Shimoga News ಜನಸಾಮಾನ್ಯರ ಭವಿಷ್ಯದ ಬದುಕಿಗೆ ಭದ್ರತೆ ನೀಡುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪ್ರಧಾನಮಂತ್ರಿ ಜೀವನಜ್ಯೋತಿ ನವೀಕರಿಸಬಹುದಾದ ವಿಮಾ ಯೋಜನೆಯಡಿ ಜಿಲ್ಲೆಯ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳ ಜನರನ್ನು ಅದರಲ್ಲೂ ವಿಶೇಷವಾಗಿ ಕೂಲಿ-ಕಾರ್ಮಿಕ ಸಮುದಾಯದವರನ್ನು ವಿಮಾ ವ್ಯಾಪ್ತಿಗೊಳಪಡಿಸಲು ಎಲ್ಲಾ ಬ್ಯಾಂಕುಗಳ ವ್ಯವಸ್ಥಾಪಕರು ಕೂಡಲೇ ಕ್ರಮಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್‌ಅವರು ಹೇಳಿದರು.
ಅವರು ಜಿಲ್ಲಾ ಮಾರ್ಗದರ್ಶಿ ಬ್ಯಾಂಕು ಜಿಲ್ಲಾ ಪಂಚಾಯಿತಿಯ ಅಬ್ದುಲ್‌ನಜೀರ್‌ಸಾಬ್‌ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರಸಕ್ತ ಸಾಲಿನ ಮಾರ್ಚ್‌ಮಾಸಾಂತ್ಯದವರೆಗಿನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಪಿ.ಎಂ.ಜೆ.ಜೆ.ಬಿ.ವೈ. ಯೋಜನೆಯಡಿ ಜಿಲ್ಲೆಯ ಪ್ರಗತಿ ಆಶಾದಾಯಕವಾಗಿಲ್ಲ. ಅತ್ಯಂತ ಪ್ರಯೋಜನಕಾರಿಯಾಗಿರುವ ಈ ಯೋಜನೆಯಡಿ ನಿರೀಕ್ಷಿತ ಪ್ರಮಾಣದಲ್ಲಿ ಜನರು ಹೆಸರು ನೋಂದಾಯಿಸಿಕೊಳ್ಳದಿರುವುದು ವಿಷಾದದ ಸಂಗತಿಯಾಗಿದೆ. ಜಿಲ್ಲೆಯ ಎಲ್ಲಾ ಬ್ಯಾಂಕುಗಳ ವ್ಯವಸ್ಥಾಪಕರು ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಗೊಳಪಡುವ ಗ್ರಾಮಗಳಲ್ಲಿ ಸಮುದಾಯ ಸಂಘಟಕರ ಸಹಯೋಗದೊಂದಿಗೆ ಕಾರ್ಯಕ್ರಮಗಳನ್ನು ರೂಪಿಸಿ, ಜನರಿಗೆ ಪ್ರೇರೇಪಿಸಿ, ಜಾಗೃತಿ ಮೂಡಿಸಬೇಕು ಎಂದವರು ನುಡಿದರು.
ವಿಶೇಷವಾಗಿ ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಾಗಿರುವ ಎಲ್ಲರನ್ನೂ ಈ ಯೋಜನೆಯ ವ್ಯಾಪ್ತಿಗೊಳಪಡಿಸಬೇಕು ಎಂದ ಅವರು, ನಿಗಧಿಪಡಿಸಿದ ಅವಧಿಯೊಳಗಾಗಿ ನವೀಕರಿಸಲು ಹಾಗೂ ನೂತನವಾಗಿ ವಿಮೆ ಮಾಡಿಸಲು ಕ್ರಮ ಕೈಗೊಳ್ಳುವಂತೆ ಅವರು ಸಲಹೆ ನೀಡಿದರು.
Shimoga News ಆಭರಣದ ಮೇಲಿನ ಸಾಲ, ಸ್ವಸಹಾಯ ಗುಂಪುಗಳ ಪ್ರತಿನಿಧಿಗಳಿಗೆ ನೀಡುವ ಸಾಲ ಮತ್ತಿತರ ವಲಯಗಳ ಸಾಲವನ್ನು ಆದ್ಯತಾ ವಲಯ ಕೃಷಿ ಕ್ಷೇತ್ರದ ವ್ಯಾಪ್ತಿಗೊಳಪಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇವುಗಳನ್ನು ಬೇರ್ಪಡಿಸಿ, ಕೃಷಿ, ಆಹಾರ ಸಂಸ್ಕರಣೆ, ಕೃಷಿ ಉತ್ಪಾದಕ ಚಟುವಟಿಕೆಗಳು, ಪಶುಸಂಗೋಪನೆ ಮತ್ತಿತರ ವಿಷಯಗಳನ್ನು ಬೇರ್ಪಡಿಸಿ, ಆಯಾ ಕ್ಷೇತ್ರಗಳಲ್ಲಿ ಬ್ಯಾಂಕುಗಳು ಸಾಧಿಸಿರುವ ಪ್ರಗತಿಯನ್ನು ಗುರುತಿಸಬೇಕೆಂದವರು ನುಡಿದರು.
ಆದ್ಯತಾ ವಲಯಗಳಿಗೆ ಈವರೆಗೆ ಬ್ಯಾಂಕುಗಳು ನೀಡಿರುವ ಸಾಲಸೌಲಭ್ಯಗಳಿಂದಾಗಿ ಜಿಲ್ಲೆಯ ಜನರಲ್ಲಿ ಸೃಜಿಸಲಾಗಿರಬಹುದಾದ ಉದ್ಯೋಗಾವಕಾಶಗಳ ಬಗ್ಗೆಯೂ ಮಾಹಿತಿ ನೀಡುವಂತೆ ಸೂಚಿಸಿದ ಅವರು, ಕೆಲವು ಆಯ್ದ ಬ್ಯಾಂಕುಗಳು ಈಗಾಗಲೇ ನೀಡಲಾಗಿರುವ ಗುರಿ ಪ್ರಮಾಣದ ಸಾಲ ನೀಡುವಲ್ಲಿಯೂ ಹಿಂದುಳಿದಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ. ಅಂತಹ ಬ್ಯಾಂಕುಗಳ ವ್ಯವಸ್ಥಾಪಕರು ತಮ್ಮ ಅಧೀನ ಬ್ಯಾಂಕುಗಳ ವ್ಯವಸ್ಥಾಪಕರಿಗೆ ಸೂಚನೆ ನೀಡಿ, ನಿರೀಕ್ಷಿತ ಗುರಿ ಸಾಧಿಸಲು ಸೂಚಿಸಿ, ನಿಗಧಿತ ಕಾಲಮಿತಿಯಲ್ಲಿ ಪ್ರಗತಿ ಸಾಧಿಸಿ, ವರದಿ ನೀಡುವಂತೆ ಅವರು ಸೂಚಿಸಿದರು.
ಜಿಲ್ಲೆಯ ಹೊಸನಗರ, ತೀರ್ಥಹಳ್ಳಿ ಮತ್ತು ಸಾಗರ ತಾಲೂಕುಗಳ ಗ್ರಾಮೀಣ ಪ್ರದೇಶಗಳಲ್ಲಿನ ಜನರು ಸರ್ಕಾರದ ವಿವಿಧ ವಸತಿ ಯೋಜನೆಗಳಡಿಯಲ್ಲಿ ತಮ್ಮ ಕನಸಿನ ಮನೆಯನ್ನು ಕಟ್ಟಿಕೊಳ್ಳಲು ಸಾಲಸೌಲಭ್ಯಕ್ಕಾಗಿ ಇಂದಿಗೂ ಖಾಸಗಿ ವ್ಯಕ್ತಿಗಳನ್ನು ಅವಲಂಬಿಸಿರುವುದು ಕಂಡುಬರುತ್ತಿದೆ. ಇಷ್ಟೆಲ್ಲಾ ಬ್ಯಾಂಕುಗಳು ನಿರಂತರವಾಗಿ ಸೇವೆ ಸಲ್ಲಿಸುತ್ತಿರುವಾಗ ಜನರು ತಮ್ಮ ಸೌಲಬ್ಯಗಳಿಗಾಗಿ ಬ್ಯಾಂಕುಗಳಿಗೆ ಬರುವಂತೆ ಮಾಡಲು ಬ್ಯಾಂಕುಗಳ ವ್ಯವಸ್ಥಾಪಕರು ಕಾರ್ಯಕ್ರಮಗಳನ್ನು ರೂಪಿಸಿ, ಜನಸ್ನೇಹಿಯಾಗಿ ಕಾರ್ಯನಿರ್ವಹಿಸುವಂತೆ ಅವರು ಕಿವಿಮಾತು ಹೇಳಿದರು.
ಮುಂದಿನ ದಿನಗಳಲ್ಲಿ ಪ್ರತಿ ಬುಧವಾರ ದಿನ ನಿಗಧಿಗೊಳಿಸಿ, ಬ್ಯಾಂಕಿನ ಸಿಬ್ಬಂಧಿಗಳು ಜಿಲ್ಲೆಯ ಗ್ರಾಮ ಪಂಚಾಯಿತಿಗಳಿಗೆ ತೆರಳಿ, ಜನರಲ್ಲಿ ಅರಿವು ಮೂಡಿಸಿ, ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ಸಾಲಸೌಲಭ್ಯಕ್ಕಾಗಿ ರಾಷ್ಟ್ರೀಕೃತ ಬ್ಯಾಂಕುಗಳ ವ್ಯವಸ್ಥಾಪಕರನ್ನೇ ಸಂಪರ್ಕಿಸುವಂತೆ ಸೂಚಿಸಿದ ಅವರು, ಅಸಂಘಟಿತ ವಲಯದಲ್ಲಿನ ರೈತರು, ಉದ್ಯಮಿಗಳನ್ನು ಸಂಘಟಿತ ವಲಯಕ್ಕೆ ಕರೆದೊಯ್ಯುವ ನಿಟ್ಟಿನಲ್ಲಿ ಹಾಗೂ ಪ್ರಗತಿಪರ ರೈತರು ಉದ್ದಿಮೆದಾರರನ್ನು ಉದಯೋನ್ಮುಖ ಉದ್ದಿಮೆದಾರರನ್ನಾಗಿ ಪರಿವರ್ತಿಸುವ ಆತ್ಮನಿರ್ಬರ ಯೋಜನೆಯಡಿ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗಿದೆ. ಅತ್ಯಂತ ಹೆಚ್ಚಿನ ಮೊತ್ತದ ಸಹಾಯಧನದೊಂದಿಗೆ ಆರ್ಥಿಕ ನೆರವು ನೀಡುವ ಯೋಜನೆಯ ಲಾಭ ಪಡೆದುಕೊಳ್ಳಲು ರೈತರು, ಉದ್ಯಮಿಗಳು, ರೈತರ ಉತ್ಪಾದಕ ಸಂಸ್ಥೆಗಳು, ಸ್ವ-ಸಹಾಯ ಸಂಘಗಳು ಹೆಸರು ನೋಂದಾಯಿಸಿಕೊಳ್ಳುವಂತೆ ಬ್ಯಾಂಕುಗಳ ವ್ಯವಸ್ಥಾಪಕರು ಗಮನಹರಿಸುವಂತೆ ಅವರು ಸೂಚಿಸಿದರು.
ಸಭೆಯಲ್ಲಿ ಲೀಡ್‌ಬ್ಯಾಂಕ್‌ನ ಉಪಮಹಾಪ್ರಬಂಧಕ ದೇವರಾಜ್‌ಆರ್., ನಬಾರ್ಡ್‌ನ ಶರತ್‌, ಆರ್.ಬಿ.ಐ.ನ ವ್ಯವಸ್ಥಾಪಕರ ಬಾಬುಲ್‌ಬಾರ್ಡೋಲಿ ಹಾಗೂ ಲೀಡ್‌ಬ್ಯಾಂಕ್‌ವ್ಯವಸ್ಥಾಪಕ ಪಿ.ಹನುಮಂತಪ್ಪ ಸೇರಿದಂತೆ ಜಿಲ್ಲೆಯ ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳ ವ್ಯವಸ್ಥಾಪಕರು ಉಪಸ್ಥಿತರಿದ್ದರು.

MESCOM ಜೂನ್ 29. ಶಿವಮೊಗ್ಗದ ತಿಲಕ್ ರಸ್ತೆ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ.ಮೆಸ್ಕಾಂ ಪ್ರಕಟಣೆ

0

MESCOM ಶಿವಮೊಗ್ಗ ಮೆಸ್ಕಾಂ ಘಟಕ-2ರ ನಗರ ಉಪವಿಭಾಗ 1 ರ ವ್ಯಾಪ್ತಿಯ ರಾಘವೇಂದ್ರ ಸ್ವಾಮಿ ಮಠದ ರಸ್ತೆ ಜಿಲ್ಲಾ ಪಂಚಾಯಿತಿ ಎದುರು ಸ್ಪನ್ ಪೋಲ್ ಸ್ಥಳಾಂತರಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜೂ. 29 ರಂದು ಬೆಳಗ್ತೆ 9 ರಿಂದ ಸಂಜೆ 5 ರವರೆಗೆ ರಾಘವೇಂದ್ರ ಸ್ವಾಮಿ ಮಠದ ರಸ್ತೆ, ತಿಲಕ್‌ನಗರ, ರತ್ನಮ್ಮ ಮಾಧವ ರಾವ್ ರಸ್ತೆ, ಕುವೆಂಪು ರಸ್ತೆ, ಪಾರ್ಕ್ ಬಡಾವಣೆ, ದುರ್ಗಿಗುಡಿ, ಶಿವಮೂರ್ತಿ ಸರ್ಕಲ್ ಹಾಗೂ ಜಿಲ್ಲಾ ಪಂಚಾಯಿತಿ ರಸ್ತೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.