Thursday, February 26, 2026
Thursday, February 26, 2026
Home Blog Page 266

S.N. Channabasappa ಶಿವಮೊಗ್ಗದ 3 ನೇ ವಾರ್ಡಿಗೆ ಶಾಸಕ ಚೆನ್ನಿ ಭೇಟಿ.ಸಾರ್ವಜನಿಕ ಕುಂದುಕೊರತೆ ಪರಿಶೀಲನೆ

0

S.N. Channabasappa ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ. 3ರ ಕುವೆಂಪು ನಗರದ ನವನಗರ ಬಡಾವಣೆಗೆ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಜೂನ್ 27 ರ ಶುಕ್ರವಾರ ಬೆಳಿಗ್ಗೆ ಭೇಟಿ ನೀಡಿದರು.

S.N. Channabasappa ಈ ಸಂದರ್ಭದಲ್ಲಿ ಬಡಾವಣೆಯ ಯುಜಿಡಿ ಹಾಗೂ ರಸ್ತೆಗಳ ಸಮಸ್ಯೆ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳ ಕುರಿತಂತೆ ಸ್ಥಳೀಯ ನಿವಾಸಿಗಳೊಂದಿಗೆ ನೇರವಾಗಿ ಸಂವಾದ ನಡೆಸಿ ಅವರ ಸಮಸ್ಯೆಗಳ ಬಗ್ಗೆ ವಿವರವಾಗಿ ಮಾಹಿತಿ ಸಂಗ್ರಹಿಸಿ, ನಿವಾಸಿಗಳ ಕುಂದು ಕೊರತೆಗಳ ಬಗ್ಗೆ ತಕ್ಷಣವೇ ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

Environmental protection ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ- ಚಂದ್ರಪ್ಪ ಗುಂಡಪಲ್ಲಿ

0

Environmental protection ಚಂದ್ರಪ್ಪ ಗುಂಡಪಲ್ಲಿ. ಉಪ ನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ ಪರಿಸರ ಸಂರಕ್ಷಣೆ ನಮ್ಮ ನಿಮ್ಮೆಲ್ಲರ ಹೊಣೆ ಪರಿಸರ ನಾಶವಾದರೆ ಮನುಕುಲವೇ ನಾಶವಾದಂತೆ. ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಓಪನ್ ನಿರ್ದೇಶಕರಾದ ಚಂದ್ರಪ್ಪ ಗುಂಡಪಲ್ಲಿ ಅವರು ಅಭಿಮತ ವ್ಯಕ್ತಪಡಿಸಿದರು ಅವರು ಇಂದು ಬೆಳಿಗ್ಗೆ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ. ಮತ್ತು ಪರಿಸರ ಅಧ್ಯಯನ ಕೇಂದ್ರ ಶಿವಮೊಗ್ಗ. ರೇಡಿಯೋ ಶಿವಮೊಗ್ಗ. ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪರಿಸರ ಜಾಗೃತಿ ಜನತಾ ವನ್ನು ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಪ್ರಾದೇಶಿಕ ಹಿರಿಯ ಪರಿಸರ ಅಧಿಕಾರಿಗಳಾದ ರಮೇಶ್ ಡಿ ನಾಯಕ್ ರವರು ಪ್ಲಾಸ್ಟಿಕ್ ಮಾಲಿನ್ಯವನ್ನು ಅಂತ್ಯಗೊಳಿಸೋಣ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ ಪರಿಸರ ಮಾಲಿನ್ಯವನ್ನು ಕಾಪಾಡಿಕೊಳ್ಳೋಣ ಎಂದು ಕರೆ ನೀಡಿದರು ಪರಿಸರ ಚಿಂತಕರಾದ ಪ್ರೊಫೆಸರ್ ಬಿ ಎಂ ಕುಮಾರಸ್ವಾಮಿ ಅವರು ಪರಿಸರದ ಬಗ್ಗೆ ಮಕ್ಕಳಿಗೆ ಬಾಲ್ಯದಿಂದಲೇ ಕಾಳಜಿ Environmental protection ಮೂಡಿಸಬೇಕು ಇಂದು ಪರಿಸರ ವಿನಾಶದಿಂದ ಮಾನವನ ಅವನತಿ ಹಾಗೂ ಅನೇಕ ರೋಗ ರುಜನ ಗಳಿಂದ ಬಳಲುತ್ತಿದ್ದೇವೆ ಎಂದು ನೋಡಿದರು ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್ ನಾ ಜಿಲ್ಲಾ ಪ್ರಧಾನ ಆಯುಕ್ತರಾದ. ಶಕುಂತಲಾ ಚಂದ್ರಶೇಖರ್ ಪರಿಸರ ಜಾಗೃತಿಯ ಬಗ್ಗೆ ಮಾತನಾಡಿದರು ಪರಿಸರ ಜಾಗೃತಿ ಜಾತ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿದರು ಕಾರ್ಯಕ್ರಮದಲ್ಲಿ ಸರ್ಕಾರಿ ಬಾಲಕಿಯರ ಕಾಲೇಜಿನ. ಪ್ರಾಂಶುಪಾಲ ಟಿಎಸ್ ಮಹೇಶ್ವರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು ಇನ್ಮುಂದೆ ಪರಿಸರ ಅಧಿಕಾರಿ ವಿ ರಮೇಶ . ಉಪ ಪರಿಸರ ಅಧಿಕಾರಿ ಶಿಲ್ಪಾಕೆ. ಭಾರತ ಸ್ಕೌಟ್ ಅಂಡ್ ಗೈಡ್ಸ್ ನ ಜಿಲ್ಲಾ ಕಾರ್ಯದರ್ಶಿ ಕೇ ವಿ ಚಂದ್ರಶೇಖರಯ್ಯ. ಕೇಂದ್ರ ಸ್ಥಾನಿಕ ಆಯುಕ್ತರಾದ ಜಿ ವಿಜಯಕುಮಾರ್. ರಾಜೇಶ್ ಅವಲಕ್ಕಿ. ಚೂಡಾಮಣಿ ಈ ಪವಾರ್. ಶಿವಶಂಕರ್ ಲಕ್ಷ್ಮಿ ಕೆ ರವಿ. ಉಪಸ್ಥಿತರಿದ್ದರು..

Rotary Club Shimoga ವಸಂತ್ ಹೋಬಳಿದಾರ್‌ಗೆ ರಿವರ್‌ಸೈಡ್ ಕ್ಲಬ್‌ನಿಂದ ಸನ್ಮಾನ

0

Rotary Club Shimoga ರೋಟರಿ ಅಂತರಾಷ್ಟ್ರೀಯ ಮಟ್ಟದ ಸೇವಾ ಸಂಸ್ಥೆಯಾಗಿದ್ದು, ಯಾವುದೇ ಜಾತಿ, ಮತ ಭೇದವಿಲ್ಲದೆ ಸೇವಾ ಮನೋಭಾವನೆ ಹೊಂದಿರುವ ಸಮಾಜಮುಖಿ ವ್ಯಕ್ತಿ ಅತ್ಯುತ್ತಮ ಸೇವೆ ಸಲ್ಲಿಸಬಹುದು ಎಂದು ರೋಟರಿ ನಿಯೋಜಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್ ಹೇಳಿದರು.
ರೋಟರಿ ಜಿಲ್ಲಾ ಗವರ್ನರ್ ಆಗಿ ಚುನಾಯಿತರಾದ ಕಾರಣ ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ವಿಶ್ವಾದ್ಯಂತ 220ಕ್ಕೂ ಹೆಚ್ಚು ದೇಶಗಳಲ್ಲಿ 120 ವರ್ಷಗಳಿಂದ ತನ್ನ ಸೇವಾ ಕಾರ್ಯ ನಡೆಸುತ್ತ ರೋಟರಿ ಸಂಸ್ಥೆಯು ಮನೆಮಾತಾಗಿದೆ. ಸಮುದಾಯಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ತಿಳಿಸಿದರು.
ನಾಲ್ಕು ರೆವೆನ್ಯೂ ಜಿಲ್ಲೆಗಳಾದ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಗಳನ್ನೊಳಗೊಂಡ ರೋಟರಿ ಜಿಲ್ಲೆ 3182ರ ಜಿಲ್ಲಾ ಗವರ್ನರ್ ಆಗಿ ಎಲ್ಲ 87 ರೋಟರಿ ಕ್ಲಬ್ ಗಳು ಶೇ. 95ಗೂ ಹೆಚ್ಚು ಮತಗಳಿಂದ ಚುನಾಯಿಸಿರುವುದಕ್ಕೆ ಧನ್ಯವಾದಗಳು. ನನ್ನ ಅವಧಿಯಲ್ಲಿ ಜಿಲ್ಲೆಯನ್ನು ಸೇವಾ ಕಾರ್ಯಗಳಲ್ಲಿ ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಎಲ್ಲ ರೋಟರಿ ಸದಸ್ಯ ಮಿತ್ರರು ಸಹಕರಿಸಬೇಕು ಎಂದರು.
Rotary Club Shimoga ರೋಟರಿ ರಿವರ್ ಸೈಡ್ ಅಧ್ಯಕ್ಷ ಬಸವರಾಜ ಅವರು ಮಾಡಿದ ಸೇವಾ ಕಾರ್ಯಗಳು ಅರ್ಹ ವ್ಯಕ್ತಿಗಳಿಗೆ ತಲುಪಿದೆ. ರೊಟರಿಯ ಸಾರ್ವಜನಿಕ ಸದಭಿಪ್ರಾಯದ ಏಳಿಗೆಗೆ ಕಾರಣರಾದ ಅವರು ತಮ್ಮ ಮುಂದಿನ ಜೀವನದಲ್ಲಿ ಉನ್ನತ ಸ್ಥಾನಗಳನ್ನು ಪಡೆಯುವಲ್ಲಿ ಮತ್ತು ನಿಭಾಯಿಸುವಲ್ಲಿ ರೋಟರಿ ಅನುಭವ ಅನುಕೂಲಕರವಾಗುತ್ತದೆ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ವಿಜಯರತ್ನ ಪ್ರಶಸ್ತಿ ಪುರಸ್ಕೃತ ರಾಮ ಜೋಯ್ಸ್ ದಂಪತಿಗೆ ಸನ್ಮಾನಿಸಲಾಯಿತು.
ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಎಂ.ಪಿ.ಆನಂದಮೂರ್ತಿ, ಎಂ.ಜಗನ್ನಾಥ, ರವೀಂದ್ರನಾಥ ಐತಾಳ್, ಸಹಾಯಕ ಗವರ್ನರ್ ಎಸ್.ಆರ್.ನಾಗರಾಜ್, ನಿಯೋಜಿತ ಸಹಾಯಕ ಗವರ್ನರ್ ಕೆ.ಪಿ.ಶೆಟ್ಟಿ, ಎಂ.ಆರ್.ಬಸವರಾಜ್, ವಿಶ್ವನಾಥ ನಾಯಕ, ಬಿ.ಜಿ.ಧನರಾಜ್, ಎಸ್.ಪಿ.ಶಂಕರ್, ಮಲ್ಲೇಶ್ ಮತ್ತಿತರರು ಉಪಸ್ಥಿತರಿದ್ದರು.

DC Gurudatta Hegde ಮಾದಕ ವಸ್ತು ವ್ಯಸನದ ವಿರುದ್ಧ ಸೈನಿಕರಂತೆ ಹೋರಾಡಬೇಕು- ಡೀಸಿ ಗುರುದತ್ತ ಹೆಗಡೆ

0

DC Gurudatta Hegde ಏನೇ ಕಷ್ಟ ಬಂದರೂ ನಾನು ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗುವುದಿಲ್ಲ. ಹಾಗೂ ಒಳಗಾದವರನ್ನು ದೂರ ಇಡದೇ ಮುಖ್ಯ ವಾಹಿನಿಗೆ ತರುತ್ತೇನೆಂಬ ಉದ್ದೇಶದಿಂದ ಯುವಜನತೆ ಒಗ್ಗೂಡಿ ಸೈನಿಕರಂತೆ ಮಾದಕ ವಸ್ತುಗಳ ವ್ಯಸನದ ವಿರುದ್ದ ಹೋರಾಡಬೇಕೆಂದು ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ ನೀಡಿದರು.
ಕರ್ನಾಟಕ ರಾಜ್ಯ ಪೊಲೀಸ್ ಶಿವಮೊಗ್ಗ, ಶಿವಮೊಗ್ಗ ಜಿಲ್ಲಾ ಪೊಲೀಸ್ ಇವರ ವತಿಯಿಂದ ಗುರುವಾರ ಅಶೋಕನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಏರ್ಪಡಿಸಲಾಗಿದ್ದ ಅಂತರಾಷ್ಟ್ರೀಯ ಮಾದಕ ವಸ್ತು ವ್ಯಸನ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾದಕ ವಸ್ತುಗಳ ಅಕ್ರಮ ಸಾಗಾಣಿಕೆ ಮತ್ತು ನಿಷೇಧ ಕುರಿತು ಅನೇಕ ಕಾಯ್ದೆ ಕಾನೂನುಗಳು ಇದ್ದು ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದೆ. ಆದರೆ ಯುವಜನತೆ ನಾವು ಮಾದಕ ವಸ್ತುಗಳಿಗೆ ದಾಸರಾಗುವುದಿಲ್ಲವೆಂಬ ಉದ್ದೇಶದಿಂದ ಒಗ್ಗೂಡಬೇಕಿದೆ.
ವೈಯಕ್ತಿಕ, ಕೌಟುಂಬಿಕ, ಮಾನಸಿಕ, ಕೆಲವೊಮ್ಮೆ ಫ್ಯಾಷನ್ ಹೀಗೆ ಇತರೆ ಕಾರಣಗಳಿಂದ ಯುವಜನರಲ್ಲಿ ಮಾದಕ ವಸ್ತುಗಳ ಬಳಕೆ ಶುರುವಾಗಿ ಚಟವಾಗಿ, ಖಾಯಿಲೆಯಾಗುತ್ತದೆ. ಆದರೆ ನಾವು ವ್ಯಸನಿಗಳನ್ನು ಸಮಾಜದಿಂದ ದೂರ ಇಡಬಾರದು. ಬದಲಾಗಿ ಅವರನ್ನು ಮುಖ್ಯವಾಹಿನಿಗೆ ತರಲು ಸಹಾಯ ಮಾಡಬೇಕು. ಬೆಂಬಲಿಸಬೇಕು. ಆಪ್ತಸಮಾಲೋಚನೆಗೆ ಒಳಪಡಿಸಬೇಕು. ವ್ಯಸನದಿಂದ ಹೊರತರಲು ಡಿ-ಅಡಿಕ್ಷನ್ ಕೇಂದ್ರಗಳನ್ನು ಆರಂಭಿಸಬೇಕು. ಆಗ ಇವರನ್ನು ಮುಖ್ಯವಾಹಿನಿಗೆ ತರಲು ಅನುಕೂಲವಾಗುತ್ತದೆ ಎಂದರು.
ರಾಜ್ಯದಲ್ಲೆ ಅತಿ ಹೆಚ್ಚು ಮಾದಕ ವಸ್ತುಗಳನ್ನು ಜಿಲ್ಲೆಯಲ್ಲಿ ಸೀಜ್ ಮಾಡಲಾಗಿದೆ. ಹೆಚ್ಚು ಪ್ರಕರಣಗಳು ಜಿಲ್ಲೆಯಲ್ಲಿವೆ. ಇದನ್ನು ಗಂಭೀರವಾಗಿ ಪರಿಗಣಿಸಿ ಜನರಲ್ಲಿ ಮುಖ್ಯವಾಗಿ ಯುವಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಜೀವನ ಒಂದಲ್ಲ, ಎರಡಲ್ಲ ಹಲವಾರು ಅವಕಾಶಗಳನ್ನು ನೀಡುತ್ತದೆ. ಆದರೆ ಚಟಕ್ಕೆ ಒಳಗಾದರೆ ಅವಕಾಶ ವಂಚಿತರಾದAತೆ ಆಗುತ್ತದೆ. ಆದ್ದರಿಂದ ಯುವಜನತೆ ಕಾರ್ಯಪಡೆಯಾಗಿ ಸೈನಿಕರಂತೆ ಮಾದಕ ವಸ್ತುಗಳ ವಿರುದ್ದ ಹೋರಾಡಬೇಕು ಎಂದು ಅವರು ಕರೆ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ ಎಸ್ ಮಾತನಾಡಿ, ವಿದ್ಯಾರ್ಥಿಗಳು ಉತ್ತಮವಾದ ವಿಷಯಗಳನ್ನು ಗ್ರಹಿಸಿ ಅನುಪಾಲನೆ ಮಾಡಬೇಕು. ಹಾಗೂ ಕೆಟ್ಟದ್ದರ ಕುರಿತು ಮಾಹಿತಿ ಇರಬೇಕು. ಆದರೆ ಇತ್ತೀಚೆಗೆ ಇದು ಉಲ್ಟಾ ಆಗುತ್ತಿದೆ. ಇದು ಆಗಬಾರದು. ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳು ಮಾದಕ ವಸ್ತು ಸೇವನೆ ಮಾಡಲು ಉತ್ತೇಜಿಸುವ ಹಾಗೂ ಒತ್ತಡ ಪಡಿಸುವುದಕ್ಕೆ ಒಳಗಾಗಬಾರದು.
ಮಾದಕ ವಸ್ತುಗಳಿಂದಾಗಿ ಊರು, ಜಿಲ್ಲೆ, ರಾಜ್ಯ ಮತ್ತು ದೇಶವೇ ಅಧೋಗತಿಗೆ ಹೋಗಬಹುದು. ಯುವಜನತೆ ಕೆಟ್ಟದ್ದಕ್ಕೇ ಬೇಗ ಆಕರ್ಷಿತರಾಗುವ ಸಂಭವ ಹೆಚ್ಚಿದೆ. ಆದ್ದರಿಂದ ಮಾದಕ ವಸ್ತುಗಳ ವ್ಯಸನದಿಂದ ಉಂಟಾಗುವ ದುಷ್ಪರಿಣಾಮಗಳು ಮತ್ತು ಇದನ್ನು ತಡೆಯುವ ಕಠಿಣ ಕಾಯ್ದೆಗಳ ಕುರಿತು ತಿಳಿದುಕೊಳ್ಳಬೇಕು. ಎನ್‌ಡಿಪಿಎಸ್ ಕಾಯ್ದೆ ಪ್ರಕಾರ ಮಾದಕ ವ್ಯಸನ ವಸ್ತುಗಳ ಬಳಕೆ, ಸಾಗಾಣೆ ಮಾಡುತ್ತಿರುವುದು ಗೊತ್ತಿದ್ದೂ ಸುಮ್ಮನಿದ್ದರೆ ಆ ಕ್ರಿಯೆಗೆ ಕುಮ್ಮಕ್ಕು ನೀಡಿದಂತೆ, ಇದು ಸಾಬೀತಾದಲ್ಲಿ ಅಂತಹವರಿಗೆ 10 ವರ್ಷ ಶಿಕ್ಷೆ ಮತ್ತು ದಂಡ ವಿಧಿಸಬಹುದು. ಯಾವುದೇ ವ್ಯಸನಿಗಳನ್ನು ದೂರ ಇಡದೇ ಅವರಿಗೆ, ಆಪ್ತ ಸಮಾಲೋಚನೆ, ಡಿ ಅಡಿಕ್ಷನ್ ಇತರೆ ಮೂಲಕ ಸಹಕಾರ ನೀಡಿ ಮುಖ್ಯ ವಾಹಿನಿಗೆ ತರಲು ಕೈಜೋಡಿಸಬೇಕು. ತುರ್ತು ಪರಿಸ್ಥಿತಿಯಲ್ಲಿರುವವರಿಗೆ ಸಹಾಯ ಮಾಡಲು 112 ಕ್ಕೆ ಕರೆ ಮಾಡಬೇಕು ಎಂದ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

DC Gurudatta Hegde ನಮ್ಮ ಸುತ್ತಮುತ್ತಲಿನಲ್ಲಿ ಜನರು, ಆಪ್ತರು ಯಾವುದೇ ರೀತಿಯ ಆಪತ್ತು, ತುರ್ತು ಪರಿಸ್ಥಿತಿಯಲ್ಲಿದ್ದರೆ 112 ಗೆ ಕರೆ ಮಾಡಿ ತಿಳಿಸಬೇಕು. ಹೀಗೆ ಮಾಹಿತಿ ನೀಡುವವರ ಗುರುತನ್ನು ಗೌಪ್ಯವಾಗಿ ಇಡಲಾಗುತ್ತದೆ. 112 ಎಂದರೆ ಒಬ್ಬರಿಗೆ ಒಬ್ಬರು ಜೊತೆಯಾದರೆ ಶಕ್ತಿ ದುಪ್ಪಟ್ಟಾಗುತ್ತದೆ ಎಂದರ್ಥ. ಸಹಕಾರದ ಸಂಕೇತ ಇದು. -ಸಂತೋಷ್ ಎಂ ಎಸ್, ಹಿರಿಯ ಸಿವಿಲ್ ನ್ಯಾಯಾಧೀಶರು

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾತನಾಡಿ, ಮಾದಕವಸ್ತು ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲು 1987 ರಿಂದ ಪ್ರತಿ ವರ್ಷ ಜೂನ್ 26 ರಂದು ಅಂತರಾಷ್ಟಿçÃಯ ಮಾದಕ ವಸ್ತು ವ್ಯಸನ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನ ಆಚರಿಸಲಾಗುತ್ತಿದೆ. ಮಾದಕ ವಸ್ತುಗಳು ವ್ಯಕ್ತಿ, ಕುಟುಂಬ ಮತ್ತು ಸಮಾಜಕ್ಕೆ ಹಾನಿ ಮಾಡುವುದರಿಂದ ಇದನ್ನು ತಡೆಗಟ್ಟುವ ಗುರಿಯೊಂದಿಗೆ ಈ ದಿನವನ್ನು ಆಚರಿಸಲಾಗುತ್ತಿದೆ.
ಶಿವಮೊಗ್ಗದಲ್ಲಿ ಮಾದಕ ವ್ಯಸನದ ಸಾಕಷ್ಟು ಪ್ರಕರಣಗಳು ದಾಖಲಾಗಿವೆ. ಕಳೆದ ಸಾಲಿನಲ್ಲಿ 350 ಕ್ಕೂ ಹೆಚ್ಚು ಮಾದಕವಸ್ತು ಸೇವನೆ ಪ್ರಕರಣಗಳು ಪಾಸಿಟಿವ್ ಬಂದಿವೆ. ಈ ವರ್ಷ ಇಲ್ಲಿಯವರೆಗೆ 200 ಪ್ರಕರಣ ದಾಖಲಾಗಿದೆ. 10 ರಿಂದ 17 ನೇ ವಯಸ್ಸಿನವರು ಶೇ. 6 ಮತ್ತು 18 ದಾಟಿದವರು ಶೇ. 27 ರಷ್ಟು ಯುವಜನತೆಗೆ ಮಾದಕವಸ್ತು ವ್ಯಸನಿಗಳಿದ್ದಾರೆ. ಈ ಮಾದಕ ವಸ್ತುಗಳ ವ್ಯಸನವು ಅವರ ದೇಹದ ಎಲ್ಲ ಅಂಗಾAಗಳ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತದೆ. ಮುಖ್ಯವಾಗಿ ಅವರ ಕುಟುಂಬ ತುಂಬಾ ಕಷ್ಟಕ್ಕೀಡಾಗುತ್ತದೆ. ಒಂದಲ್ಲ ಒಂದು ಮಾದಕವಸ್ತುವಿನ ಬಳಕೆಯ ಪರಿಣಾಮದಿಂದಲೇ ಅಪರಾಧಗಳು ನಡೆಯುತ್ತಿವೆ.
ಒಳ್ಳೆಯವರ ಮೌನ ಒಳ್ಳೆಯದಲ್ಲ. ಮಾದಕ ವಸ್ತು ಅಕ್ರಮ ಸಾಗಾಣಿಕೆ, ಬಳಕೆ ನೋಡಿಯೂ ಸುಮ್ಮನೆ ಇರಬಾರದು. ನಮ್ಮೆಲ್ಲರ ಜವಾಬ್ದಾರಿ ಇದ್ದು, ಈ ಬಗ್ಗೆ ಪೊಲೀಸ್ ಇಲಾಖೆಗೆ ತಿಳಿಸಬೇಕು ಎಂದ ಅವರು ಎಲ್ಲ ಜನ ಮುಖ್ಯವಾಗಿ ಯುವಜನತೆ ದೈಹಿಕ ಫಿಟ್ನೆಸ್ ಬಗ್ಗೆ ಗಮನ ಹರಿಸಬೇಕು. ಪ್ರತಿದಿನ ಕನಿಷ್ಟ 1 ಗಂಟೆ ಕಾಲ ಮಾನಸಿಕ, ದೈಹಿಕ ಚಟುವಟಿಕೆಗೆ ಮೀಸಲಿಡಬೇಕು ಎಂದು ತಿಳಿಸಿದರು.
ಎಎಸ್‌ಪಿ ಅನಿಲ್ ಕುಮಾರ್ ಭೂಮರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಅಂತರಾಷ್ಟಿçÃಯ ಮಟ್ಟದಲ್ಲಿ ಮಾದಕವಸ್ತು ವ್ಯಸನದ ಪಿಡುಗು ವ್ಯಾಪಕವಾಗಿ ಹರಡಿದೆ. ಡ್ರಗ್ಸ್ ಮಾಫಿಯಾನೇ ಇದೆ. ಬೇಕಾದಷ್ಟು ಬಗೆಯ ಮಾದಕವಸ್ತುಗಳು ಲಭ್ಯವಿದ್ದು ಗಾಂಜಾ ಸಾಮಾನ್ಯವಾಗಿ ಎಲ್ಲೆಡೆ ಸಿಗುತ್ತದೆ. ಆದರೆ ಈ ಮಾದಕ ವಸ್ತುಗಳನ್ನು ನಿಷೇಧಿಸಲು, ವ್ಯಾಪಾರ, ವಹಿವಾಟು ನಿಯಂತ್ರಿಸಲು ಎನ್‌ಡಿಪಿಎಸ್ ಕಾಯ್ದೆ ಸೇರಿದಂತೆ ಅನೇಕ ಕಾನೂನುಗಳಿವೆ.
ಮಾದಕವಸ್ತು ಮುಕ್ತ ಕರ್ನಾಟಕ ಮಾಡಲು ತಂತ್ರಾAಶ ಇದೆ. ಯಾವುದೇ ರೀತಿಯ ಮಾದಕವಸ್ತು ಸಾಗಾಣಿಕೆ, ಬಳಕೆ ಬಗ್ಗೆ ಮಾಹಿತಿ ನೀಡುವವರು ಈ ಆ್ಯಪ್ ನ್ನು ಬಳಸಬಹುದು.
ದೇಶ ಸದೃಢವಾಗಿರಬೇಕಾದರೆ ಯುವಜನತೆ ಆರೋಗ್ಯವಾಗಿರಬೇಕು. ಆದರೆ 35 ವರ್ಷದೊಳಗಿನವರೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ವ್ಯಸನಕ್ಕೆ ತುತ್ತಾಗಿದ್ದು, ಮಾನಸಿಕ ಕಾಯಿಲೆಗಳಿಂದಲೂ ಬಳಲುತ್ತಿದ್ದಾರೆ. ಮಾನಸಿಕ, ದೈಹಿಕ, ಕೌಟುಂಬಿಕ, ಸಾಮಾಜಿಕ ಜೀವನದ ಮೇಲೆ ದುಷ್ಪರಿಣಾಮ ಬೀರುವ ಈ ವ್ಯಸನದಿಂದ ದೇಶ ಮುಕ್ತವಾಗಲು ಈ ಕುರಿತಾದ ಶಿಕ್ಷಣ ಮತ್ತು ಅರಿವು ಅತ್ಯಗತ್ಯ ಎಂದರು.
ಅಬಕಾರಿ ಡಿಸಿ ಸುನೀತಾ, ಎಎಸ್‌ಪಿ ಕಾರ್ಯಪ್ಪ, ಸಹಾಯಕ ಡ್ರಗ್ ಕಂಟೋಲರ್ ವಿಶಾಲಾಕ್ಷಿ, ಅಧಿಕಾರಿ, ಸಿಬ್ಬಂದಿಗಳು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Handball Game ಜಿಲ್ಲೆಗೆ ಕೀರ್ತಿತಂದ ಹ್ಯಾಂಡ್ ಬಾಲ್ ಕ್ರೀಡಾಪ್ರತಿಭೆಗಳು.ವಂದನಾ ಗೌಡ & ಈಶಾನ್ಯ

0

Handball Game ಬಿಹಾರದಲ್ಲಿ ನಡೆದ 47 ನೇ ರಾಷ್ಟ್ರ ಮಟ್ಟದ ಜ್ಯೂನಿಯರ್ ವಿಭಾಗದ ಹ್ಯಾಂಡ್ ಬಾಲ್ ನಲ್ಲಿ ಗುರುಪುರದ ಬಿಜಿಎಸ್ ಗುರುಕುಲ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರತಿಭಾನ್ವಿತ ಕ್ರೀಡಾಪಟುಗಳಾದ ವಂದನಾ ಪಿ ಗೌಡ ಮತ್ತು ಈಶಾನ್ಯ ಆರ್. ಪ್ರತಿಭಾನ್ವಿತ ಕ್ರೀಡಾಪಟುಗಳು ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿ, ಉತ್ತಮ ಆಟದ ಪ್ರದರ್ಶನ ನೀಡಿ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ. ಕ್ರೀಡೆಯ ಜೊತೆಗೆ ಓದಿನಲ್ಲಿಯೂ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಉತ್ತಮ ಅಂಕ ಗಳಿಸಿ, ಓದಿನಲ್ಲಿಯೂ ಪ್ರತಿಭಾನ್ವಿತ ಪ್ರತಿಭೆಗಳಾಗಿರುತ್ತಾರೆ.
Handball Game ವಂದನಾ ಪಿ. ಗೌಡ ಶೆಟ್ಟಿಹಳ್ಳಿ ಗ್ರಾಮದ ಪರಮೇಶ್ವರಪ್ಪ ಮತ್ತು ಗೀತಾ. ದಂಪತಿಗಳ ಪುತ್ರಿ. ಈಶಾನ್ಯ ಆರ್. ಗುರಪುರದ ಗ್ರಾಮದ ರಮೇಶ್ ಕೆ.ಎನ್. ಮತ್ತು ಪ್ರೇಮ ಜೆ.ದಂಪತಿಗಳ ಪುತ್ರಿ ಯಾಗಿರುತ್ತಾಳೆ.
ಈ ಪ್ರತಿಭೆಗಳು ಶಿವಮೊಗ್ಗ ಜಿಲ್ಲೆಗೂ ,ರಾಜ್ಯಕ್ಕೂ ಹಾಗೂ ಸಂಸ್ಥೆಗೆ ಕೀರ್ತಿ ತಂದ ಈ ಕ್ರೀಡಾಪಟುಗಳ ಮುಂದಿನ ಕ್ರೀಡಾ ಜೀವನ ಯಶಸ್ವಿಯಾಗಲೆಂದು ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಯವರು, ಪೂಜ್ಯ ಶ್ರೀ ಸಾಯಿನಾಥ ಸ್ವಾಮೀಜಿ, ಆಡಳಿತ ಮಂಡಳಿಯ ಸದಸ್ಯರು, ಕಾಲೇಜಿನ ಪ್ರಾಂಶುಪಾಲರಾದ ಸುರೇಶ್ ಎಸ್. ಎಚ್. ಉಪನ್ಯಾಸಕರು,ಪೋಷಕರು, ವಿದ್ಯಾರ್ಥಿಗಳು ಶುಭ ಹಾರೈಸಿದ್ದಾರೆ.

Klive Special Article ಕೆ ಲೈವ್ ವಿಶೇಷ ಸೇಕ್ರೆಡ್ ಹಾರ್ಟ್: ಭಕ್ತಿ-ಪ್ರೀತಿ-ಕರುಣೆಯ ಸಂಕೇತ… ಲೇಖನ: ರಾಕೇಶ್ ಡಿಸೋಜ

0

Klive Special Article ಯೇಸುವಿನ ಪವಿತ್ರ ಹೃದಯದ ಹಬ್ಬವು ವಿಶ್ವದಾದ್ಯಂತ ಕ್ರೈಸ್ತರು ಜೂನ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಆಚರಣೆಯಾಗಿದೆ. ಇದು ಯೇಸು ಕ್ರಿಸ್ತನ ಅಮಿತ ಪ್ರೇಮ, ಬಲಿದಾನ ಹಾಗೂ ಮಾನವತೆಯ ಆಳವಾದ ಸ್ಪರ್ಶದ ಸಂಕೇತವಾಗಿದೆ.
ಪವಿತ್ರ ಹೃದಯ ಎಂಬುದು ಕೇವಲ ಶರೀರದ ಅಂಗವಲ್ಲ; ಅದು ಆತ್ಮದ ಪರಿಪೂರ್ಣತೆ, ಪ್ರೀತಿಯ ತೀವ್ರತೆ ಮತ್ತು ಪಾಪಿಗಳಿಗಾಗಿ ತೋರಿದ ಸಹಾನುಭೂತಿಯ ದೃಷ್ಟಾಂತವಾಗಿದೆ.
ಸೇಕ್ರೆಡ್‌ಹಾರ್ಟ್ ಭಕ್ತಿಯ ಪ್ರಾರಂಭ ೧೭ನೇ ಶತಮಾನದಲ್ಲಿ ಸಂಭವಿಸಿದೆ. ಈ ಭಕ್ತಿ ಪ್ರಚಾರಕ್ಕೆ ಪ್ರಮುಖ ಕಾರಣರಾದವರು ಸೇಂಟ್ ಮರ್ಗರೆಟ್ ಮೇರಿ ಅಲಾಕೋಕ್ ಎಂಬ ಫ್ರಾನ್ಸ್‌ನ ಧರ್ಮಸಂಸ್ಥೆಯ ಮಹಿಳೆ. ೧೬೭೩ ರಿಂದ ೧೬೭೫ರವರೆಗೆ, ಅವಳು ಯೇಸು ಕ್ರಿಸ್ತನ ಪವಿತ್ರ ಹೃದಯದ ನೈಜ ದರ್ಶನವನ್ನು ಹೊಂದಿದರು ಎಂದು ನಂಬಲಾಗುತ್ತದೆ. ಈ ದರ್ಶನಗಳಲ್ಲಿ ಯೇಸು ತಾನು ಸಹಿಸಿದ ಕಷ್ಟಗಳನ್ನು ವಿವರಿಸುತ್ತಾ, ತನ್ನ ಹೃದಯವನ್ನು ಮಾನವನಿಗೆ ಅರ್ಪಿಸಿದಂತೆ ಭಕ್ತಿಯಿಂದ ಆರಾಧಿಸುವಂತೆ ಹೇಳಿದರು.
ಅಧಿಕೃತವಾಗಿ ಉತ್ಸವ ಆರಂಭ: ೧೮೫೬ರಲ್ಲಿ, ಪೋಪ್ ಪಿಯಸ್ IX (Pope Pius IX) ಅವರು ಸೇಕ್ರೆಡ್ ಹಾರ್ಟ್ ಉತ್ಸವವನ್ನು ಸರ್ವಸಾಮಾನ್ಯ ಕ್ರಿಸ್ತೀಯ ಚರ್ಚ್ (Universal Church)ಗೆ ಅಧಿಕೃತವಾಗಿ ಅಂಗೀಕರಿಸಿದರು. ಇದಕ್ಕಿಂತ ಮುಂಚೆಯೇ ಕೆಲ ದೇಶಗಳಲ್ಲಿ ಅಥವಾ ಧರ್ಮಸಂಸ್ಥೆಗಳಲ್ಲಿ ಉತ್ಸವ ಆಚರಣೆ ನಡೆಯುತ್ತಿದ್ದರೂ, ಪೋಪ್‌ರ ಅಧಿಕೃತ ಆದೇಶದ ನಂತರ ಈ ದಿನಚರಣೆಯು ವಿಶ್ವಮಟ್ಟದಲ್ಲಿ ಆಚರಿಸಲ್ಪಡಲಾಯಿತು.
ಈ ಉತ್ಸವವನ್ನು ಪ್ರತಿ ವರ್ಷ ಕ್ರಿಸ್ತನ ದೇಹ ಮತ್ತು ರಕ್ತ Corpus Christi) ದಿನದ ನಂತರದ ಮೂರನೇ ಶುಕ್ರವಾರಕ್ಕೆ ಆಚರಿಸಲಾಗುತ್ತದೆ. ಅದು ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ಬರುವಂತಾಗುತ್ತದೆ.
ಕ್ತಿಸ್ತ ಯೇಸು ಅವರು ಮರ್ಗರಿಟ್ ಅವರಿಗೆ ದರ್ಶನ ನೀಡಿ ತಮ್ಮ ಹೃದಯವನ್ನು ತೋರಿಸಿzಗಿ ಅವರು ವಿವರಿಸುತ್ತಾರೆ. ಪವಿತ್ರವಾದ ಆ ಹೃದಯ ಬೆಂಕಿಯಿಂದ ಉರಿಯುತ್ತಿದೆ, ಹರಿತವಾದ ಮುಳ್ಳಿನಿಂದ ಆವರಿಸಲಾ ಗಿದೆ ಮತ್ತು ಅದು ಪಾಪಿಗಳಿಗಾಗಿ ನೋವು ಅನುಭವಿಸುತ್ತಿದೆ ಎಂಬ ಸಂದೇಶ ಸಾರಲಾಗಿದೆ.
Klive Special Article ಯೇಸುವಿನ ಪವಿತ್ರ ಹೃದಯದ ಹಬ್ಬವು ಸಾಮಾನ್ಯವಾಗಿ ಯೇಸು ಕ್ರಿಸ್ತನ ದಯಾಮಯ ಹೃದಯದ ಪೂಜೆಯಿಂದ ಆರಂಭವಾಗುತ್ತದೆ. ಭಕ್ತರು ಜಪಸರ ಪ್ರಾರ್ಥನೆ, ಪಶ್ಚಾತ್ತಾಪದ ಆಚರಣೆ, ಪಾಪ ನಿವೇದನೆ, ದಿವ್ಯಬಲಿ ಪೂಜೆ ಹಾಗೂ ಪವಿತ್ರ ಪರಮ ಪ್ರಸಾದದ ಆರಾಧನೆಯ ಮೂಲಕ ತಮ್ಮ ಭಕ್ತಿಯನ್ನು ವ್ಯಕ್ತಪಡಿಸುತ್ತಾರೆ. ಅಂತೆಯೇ ಜೂನ್ ತಿಂಗಳು ಸಂಪೂರ್ಣವಾಗಿ ಈ ಪವಿತ್ರ ಹೃದಯದ ಆರಾಧನೆಗೆ ಮೀಸಲಾಗಿದೆ. ಮನೆಗಳಲ್ಲಿ ಮತ್ತು ಚರ್ಚ್‌ಗಳಲ್ಲಿ ಯೇಸುವಿನ ಪವಿತ್ರ ಹೃದಯದ ಭಾವಚಿತ್ರವನ್ನು ವಿವಿಧ ಹೂಗಳಿಂದ ಅಲಂಕರಿಸಿ ಪೂಜಿಸಲಾಗುತ್ತದೆ.
ಪವಿತ್ರ ಹೃದಯದ ಸಂದೇಶ: ಪ್ರೀತಿ ಮತ್ತು ಕರುಣೆ ಈ ಹಬ್ಬದ ಕೇಂದ್ರ ಬಿಂದುವಾಗಿದೆ. ಕ್ರಿಸ್ತ ಯೇಸು ತನ್ನ ಪವಿತ್ರ ಹೃದಯದ ಮೂಲಕ ಪ್ರತಿಯೊಬ್ಬರಿಗೂ ತೋರಿಸಿದ ಉದಾರ ಪ್ರೀತಿ ಮರೆಯಲಾಗದು. ಅಂತೆಯೇ ನಾವು ನಮ್ಮ ಹೃದಯಗಳನ್ನೂ ದಯಾಮಯ ಮತ್ತು ಪ್ರೀತಿಪೂರ್ಣವಾಗಿಟ್ಟು ಕೊಳ್ಳಬೇಕೆಂಬ ಸಂದೇಶ ಇದಾಗಿದೆ.
ಮಾನವ ಸಂಬಂಧಗಳು ಮಾರುಕಟ್ಟೆಯ ನಿಲುವಿನಲ್ಲಿ ಮೋಸ ಹಾಗೂ ಆತ್ಮಹೀನತೆಯಿಂದ ಕಂಗಾಲಾಗುತ್ತಿರುವ ಈ ಕಾಲದಲ್ಲಿ, ಯೇಸುವಿನ ಪವಿತ್ರ ಹೃದಯವು ನಮಗೆ ಒಂದು ಪರಿಶುದ್ಧ ಹೃದಯದ ಮಾರ್ಗವನ್ನು ತೋರಿಸುತ್ತದೆ. ಇದು ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ ಮಾನವೀಯತೆಯ ಪರಿಪೂರ್ಣತೆಯ ಕಡೆಗೆ ಮುನ್ನಡೆಯಲು ಮಾರ್ಗದರ್ಶಿಯಾಗಿದ.
ಈ ಹಬ್ಬವು ಧಾರ್ಮಿಕ ಪ್ರಾರ್ಥನೆಗೆ ಪೂರಕವಾಗಿರುವುದರ ಜೊತೆಗೆ, ಸಾಂಸ್ಕೃತಿಕ ಪ್ರಭಾವವನ್ನೂ ಹೊಂದಿದೆ. ಕುಟುಂಬಗಳಲ್ಲಿ ಪವಿತ್ರ ಹೃದಯದ ಪೂಜೆ, ಮನ ಪ್ರಾರ್ಥನೆ, ಸಹೃದಯತೆಯ ಚಟುವಟಿಕೆಗಳಾದ ಜೈಲು, ವೃದ್ಧಾಶ್ರಮ, ಅನಾಥ ಆಶ್ರಮಗಳಿಗೆ ಭೇಟಿ ನೀಡಿ ಅವರೊಂದಿಗೆ ಪ್ರೀತಿ ಹಂಚಿಕೊಳ್ಳುವುದು ಈ ಹಬ್ಬದ ಮೌಲ್ಯವನ್ನು ಹೆಚ್ಚಿಸುತ್ತವೆ.
ಯೇಸುವಿನ ಪವಿತ್ರ ಹೃದಯದ ಹಬ್ಬವು ಭಕ್ತರಿಗೆ ದೈವಿಕ ಪ್ರೀತಿಯ ಅನುಭವವನ್ನು ನೀಡುವುದು ಮಾತ್ರವಲ್ಲ, ಅವರ ಜೀವನದಲ್ಲಿ ಸಹಾನುಭೂತಿ, ದಯೆ ಮತ್ತು ಕ್ಷಮೆಯ ಬಿತ್ತನೆ ಮಾಡುತ್ತದೆ. ಇದು ಕೇವಲ ಆಚರಣೆ ಅಲ್ಲ, ಬದುಕಿನ ಒಂದು ನವಚಿಂತನೆಯ ಮಾರ್ಗವಾಗಿದೆ.
ಹಬ್ಬದ ದಿನ ಚರ್ಚುಗಳಲ್ಲಿ ವಿಶೇಷ ಪ್ರಾರ್ಥನೆಗಳು ನಡೆಯುತ್ತವೆ. ಈ ದಿನ ಪಾದ್ರಿಗಳು ಯೇಸುವಿನ ಪವಿತ್ರ ಹೃದಯದ ಮಹತ್ವದ ಕುರಿತು ಧಾರ್ಮಿಕ ಉಪದೇಶ ನೀಡುತ್ತಾರೆ.
ಪವಿತ್ರ ಹೃದಯದ ರಥೋತ್ಸವ: ವಿಶ್ವದೆಲ್ಲೆಡೆ ಚರ್ಚುಗಳಲ್ಲಿ ಪವಿತ್ರ ಹೃದಯದ ಬೃಹತ್ ಭಾವಚಿತ್ರ ಅಥವಾ ಮೂರ್ತಿಯನ್ನು ಭಕ್ತರು ದೀಪ, ಧೂಪ, ಹೂಮಾಲೆಗಳೊಂದಿಗೆ ಅಲಂಕರಿಸಿ ಶ್ರದ್ಧಾಭಕ್ತಿಯಿಂದ ಭಕ್ತಿಗೀತೆ, ಪ್ರಾರ್ಥನೆ ಮತ್ತು ರಾಜಬೀದಿ ಉತ್ಸವದ ಮೂಲಕ ಪವಿತ್ರ ಹೃದಯದ ಸಂದೇಶವನ್ನು ಸಾರುತ್ತಾರೆ.
ಪವಿತ್ರ ಹೃದಯದ ಪ್ರೀತಿಯ ಧರ್ಮವನ್ನು ಕೇವಲ ಧಾರ್ಮಿಕ ಆಚರಣೆಯಲ್ಲಿ ಮಾತ್ರವಲ್ಲದೆ, ಜೀವನದ ಸೇವೆಯಲ್ಲಿ ಅಭಿವ್ಯಕ್ತಿಗೊಳಿಸಲಾಗುತ್ತದೆ. ಈ ಮೂಲಕ ದೇವಪುತ್ರ ಯೇಸುಕ್ರಿಸ್ತರು ನೀಡಿದ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಲು ಇದೊಂದು ಸುವರ್ಣಾವಕಾಶವಾಗಿದೆ.
ವಿಶೇಷವಾಗಿ ಶಿವಮೊಗ್ಗ- ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳನ್ನೊಳಗೊಂಡ ಶಿವಮೊಗ್ಗ ಧರ್ಮ ಕ್ಷೇತ್ರವು ಯೋಸುವಿನ ಪವಿತ್ರ ಹೃದಯಕ್ಕೆ ಸಮರ್ಪಿಸಲಾಗಿದ್ದು, ಅಂತೆಯೇ ಈ ಧರ್ಮಕ್ಷೇತ್ರದ ಪ್ರಧಾನ ದೇವಾಲಯವಾಗಿರುವ ಶಿವಮೊಗ್ಗದ ಸೇಕ್ರೆಡ್ ಹಾರ್ಟ್ ಚರ್ಚ್ ಸೇರಿದಂತೆ ಧರ್ಮಕ್ಷೇತ್ರದ ವಿವಿಧ ಚರ್ಚುಗಳಲ್ಲಿ ಈ ಹಬ್ಬವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ.
ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ಹಬ್ಬದ ಸಂಭ್ರಮ: ಶಿವಮೊಗ್ಗ ನಗರದ ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ಪವಿತ್ರ ಹೃದಯದ ಹಬ್ಬದ ನಿಮಿತ್ತ ಧ್ವಜರೋಹಣದೊಂದಿಗೆ ೩ ದಿನಗಳ ವಿಶೇಷ ಪ್ರಾರ್ಥನೆ ಮೂಲಕ ಹಬ್ಬಕ್ಕೆ ಆಧ್ಯಾತ್ಮಿಕ ಸಿದ್ದತೆ ಮಾಡಿಕೊಳ್ಳಲಾಗಿದೆ ಹಾಗೂ ಜೂನ್ ೨೭ರ ಸಂಜೆ ೫.೩೦ರಿಂದ ಚರ್ಚ್ ಆವರಣದಲ್ಲಿ ಪವಿತ್ರ ಹೃದಯದ ಮೆರವಣಿಗೆ ನಂತರ ಹಬ್ಬದ ಸಂಭ್ರಮದ ಬಲಿಪೂಜೆಯನ್ನು ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ| ಫ್ರಾನ್ಸಿಸ್ ಸೆರಾವೋ ಅವರ ದಿವ್ಯ ಸಾನಿಧ್ಯದಲ್ಲಿ ಶ್ರೇಷ್ಠಗುರು ರೆ|ಫಾ| ಸ್ಟ್ಯಾನಿ ಡಿಸೋಜ ಮತ್ತು ಇನ್ನಿತರ ಗುರುಗಳೊಂದಿಗೆ ನೆರವೇರಿಸಲಿದ್ದು, ಸಮಸ್ತ ಕ್ರೈಸ್ತ ಭಕ್ತರು ಈ ಎಲ್ಲಾ ಪೂಜಾ ವಿಧಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಯೇಸುವಿನ ಪವಿತ್ರ ಹೃದಯದ ಕೃಪೆಗೆ ಪಾತ್ರರಾಗುವಂತೆ ಪಾಲನಾ ಸಮಿತಿ ಕೋರಿದೆ.

World Music Day ಕಲಾವಿದ ಭದ್ರಾವತಿ ವಾಸು ಅವರ ಕಲಾಸೇವೆ ಸ್ಮರಣೀಯ- ಭುಜಂಗಪ್ಪ

0

World Music Day ಐವತ್ತು ವರ್ಷಗಳಿಂದ ನಿರಂತರವಾಗಿ ಕಲಾ ಸೇವೆಯನ್ನು ಮಾಡುತ್ತ ಸಾವಿರಾರು ಜನ ಕಲಾವಿದರಿಗೆ ಸಂಗೀತದ ಶಿಕ್ಷಣವನ್ನು ಭದ್ರಾವತಿ ವಾಸು ನೀಡಿದ್ದಾರೆ ಎಂದು ಭಾವಗಾನ ತಂಡದ ಅಧ್ಯಕ್ಷ ಭುಜಂಗಪ್ಪ ಹೇಳಿದರು.

ವಿಶ್ವ ಸಂಗೀತ ದಿನಾಚರಣೆ ಅಂಗವಾಗಿ ನಗರದ ಮಥುರಾ ಪ್ಯಾರಾಡೈಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭದ್ರಾವತಿ ವಾಸು ಅವರಿಗೆ ಸನ್ಮಾನಿಸಿ ಮಾತನಾಡಿ, ಹಲವಾರು ವೇದಿಕೆಗಳಲ್ಲಿ ಪ್ರತಿಭೆ ಅನಾವರಣಗೊಳಿಸಲು ಹಗಲಿರುಳು ಶ್ರಮಿಸಿದ ಭದ್ರಾವತಿ ವಾಸು ಅವರ ಸೇವೆಗೆ ಬೆಲೆಕಟ್ಟಲು ಆಗುವುದಿಲ್ಲ ಎಂದು ತಿಳಿಸಿದರು.

World Music Day ಮಥುರಾ ರಜತೋತ್ಸವ ಸಮಿತಿ ಸಂಚಾಲಕ ಎನ್.ಗೋಪಿನಾಥ್, ಭಾವಗಾನ ತಂಡ ಮತ್ತು ಎಸ್ ಎಸ್ ಕರೋಕೆ ಗ್ರೂಪ್ ವತಿಯಿಂದ ಭದ್ರಾವತಿ ವಾಸು ಅವರನ್ನು ಸನ್ಮಾನಿಸಲಾಯಿತು. ಸುಗಮ ಸಂಗೀತ ಪರಿಷತ್ ಜಿಲ್ಲಾ ಗೌರವಾಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ವೃತ್ತಿಯ ಜೊತೆಗೆ ಸಂಗೀತವನ್ನು ಪ್ರವೃತ್ತಿಯಾಗಿ ಬಳಸಿಕೊಂಡು ನಿರಂತರವಾಗಿ ಸಂಗೀತ ಸೇವೆ ಮಾಡುತ್ತಾ ಬಂದಿದ್ದಾರೆ. ಅವರ ಕುಟುಂಬ ವರ್ಗದವರು ಅವರ ಕಾಂತಾರ ಚಲನಚಿತ್ರಕ್ಕೆ ಸಂಗೀತ ನೀಡಿರುವುದು ಇಲ್ಲಿ ಗಮನಾರ್ಹ ಎಂದು ನುಡಿದರು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ ವಿಜಯಕುಮಾರ್ ಮಾತನಾಡಿ, ನಾವೆಲ್ಲ ವಾಸು ಅವರ ಗರಡಿಯಲ್ಲಿ ಪಳಗಿದವರು. ಅವರ ಸಂಗೀತ ಶಿಕ್ಷಣ ಇಂದು ರಾಜ್ಯದ ಮೂಲೆ ಮೂಲೆಗೂ ತಲುಪಿದೆ. ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವಾಗ ಅಂದಿನಿಂದಲೂ ಇಂದಿನವರೆಗೂ ಸಹ ಕಲಾ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ ಎಂದು ಅಭಿನಂದಿಸಿದರು.

ಭಾವಗಾನ ತಂಡದ ಕಾರ್ಯದರ್ಶಿ ಪ್ರಶಾಂತ್ ಹದಡಿ, ಉಪಾಧ್ಯಕ್ಷ ರವಿ ಚೌವಾಣ್, ಹೇಮಂತ್, ನವೀನ್ ಕುಮಾರ್, ಪರಶುರಾಮ್, ಲಕ್ಷ್ಮೀದೇವಿ ಗೋಪಿನಾಥ, ಮಥುರಾ ನಾಗರಾಜ್, ಆದ್ಯಾ, ಉಷಾ, ರವಿ, ರಾಜಶೇಖರ್, ಎಸ್ ಎಸ್ ಕರೋಕೆ ತಂಡದ ಪದಾದಿಕಾರಿಗಳು ಉಪಸ್ಥಿತರಿದ್ದರು. ನಂತರ ಸದಸ್ಯರಿಂದ ಹಳೆ ಚಿತ್ರ ಗೀತೆಗಳ ಕಾರ್ಯಕ್ರಮ ಜರುಗಿತು.

District Minority office Shimoga ಯುಪಿಎಸ್ ಸಿ/ಐಎ ಎಸ್ ಪರೀಕ್ಷಾ ಪೂರ್ವ ತರಬೇತಿ ಅಭ್ಯರ್ಥಿ ಆಯ್ಕೆಗೆ ಅರ್ಜಿ ಆಹ್ವಾನ.

0

District Minority office Shimoga ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಬೆಂಗಳೂರಿನ ಹಜ್ ಭವನದಲ್ಲಿ ನಡೆಸುವ ಯುಪಿಎಸ್‌ಸಿ/ಐಎಎಸ್ ಪರೀಕ್ಷಾ ಪೂರ್ವ ತರಬೇತಿಗೆ ಅಲ್ಪಸಂಖ್ಯಾತರ ಸಮುದಾಯದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಜೂ.30 ಕೊನೆಯ ದಿನಾಂಕವಾಗಿದೆ. ಅರ್ಜಿಯನ್ನುhttps://dom.karnataka.gov.in ವೆಬ್‌ಸೈಟ್ ಅಥವಾ ಅಲ್ಪಸಂಖ್ಯಾತರ ನಿರ್ದೇಶನಾಲಯ, ನಂ 16 ಸಿ, ಮಿಲ್ರ‍್ಸ್ ಟ್ಯಾಂಕ್ ಬೆಡ್ ರಸ್ತೆ, ವಸಂತ ನಗರ ಬೆಂಗಳೂರು 560052 ಇಲ್ಲಿಗೆ ಸಲ್ಲಿಸಬಹುದು.
21 ರಿಂದ 35 ವರ್ಷ ವಯಸ್ಸಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು ಯುಜಿಸಿ ಇಂದ ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿರಬೇಕು. ಹಾಗೂ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು, ಅಲ್ಪಸಂಖ್ಯಾತರ ಸಮುದಾಯಗಳಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ದ, ಸಿಖ್, ಪಾರ್ಸಿ ಗೆ ಸೇರಿರಬೇಕು, ಅಭ್ಯರ್ಥಿಗಳು ಕಳೆದ 3 ವರ್ಷಗಳಲ್ಲಿ ಕನಿಷ್ಠ ಒಂದು ಬಾರಿಯಾದರು ಯುಪಿಎಸ್‌ಸಿ/ಐಎಎಸ್ ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವಭಾವಿ ಪರೀಕ್ಷೆಗೆ ಹಾಜರಾಗಿರಬೇಕು. ಈ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿರಬೇಕು. ಕುಟುಂಬದ ವಾರ್ಷಿಕ ಆದಾಯ ರೂ.8 ಲಕ್ಷಕ್ಕಿಂತ ಮೀರಿರಬಾರದು.
District Minority office Shimoga ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಅಲ್ಪಸಂಖ್ಯಾತರ ಜಿಲ್ಲಾ ಮಾಹಿತಿ ಕೇಂದ್ರದ ದೂ.ಸಂ-7676888388, ಭದ್ರಾವತಿ ಅಲ್ಪಸಂಖ್ಯಾತರ ತಾಲ್ಲೂಕು ಮಾಹಿತಿ ಕೇಂದ್ರ-9538853680, ತೀರ್ಥಹಳ್ಳಿ ಅಲ್ಪಸಂಖ್ಯಾತರ ತಾಲ್ಲೂಕು ಮಾಹಿತಿ ಕೇಂದ್ರ-8861982835, ಸೊರಬ ಅಲ್ಪಸಂಖ್ಯಾತರ ತಾಲ್ಲೂಕು ಮಾಹಿತಿ ಕೇಂದ್ರ- 9513815513, ಶಿಕಾರಿಪುರ ಅಲ್ಪಸಂಖ್ಯಾತರ ತಾಲ್ಲೂಕು ಮಾಹಿತಿ ಕೇಂದ್ರ- 7829136724, ಹೊಸನಗರ ಅಲ್ಪಸಂಖ್ಯಾತರ ತಾಲ್ಲೂಕು ಮಾಹಿತಿ ಕೇಂದ್ರ- 9008447029, ಸಾಗರ ಅಲ್ಪಸಂಖ್ಯಾತರ ತಾಲ್ಲೂಕು ಮಾಹಿತಿ ಕೇಂದ್ರ-7338222907 ಗೆ ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.

Yakshagana ಜೂನ್ 29. ಯಕ್ಷ ಪರಂಪರಾ ದಿಂದ”ಕೃಷ್ಣ ಸಂಧಾನ” ತಾಳಮದ್ದಳೆ.

0

Yakshagana ಯಕ್ಷಗಾನ ಅಂದಾಗ ಯಾರಿಗೆ ತಾನೇ ಒಂದು ಬಾರಿ ರೋಮಾಂಚನ ಆಗುವುದಿಲ್ಲ ಹೇಳಿ? ಅಂದಹಾಗೆ ಈಗ ರೋಮಾಂಚನಗೊಳ್ಳುವ ಸರದಿ ಶಿವಮೊಗ್ಗದ ಯಕ್ಷಪ್ರಿಯರದ್ದು. ಯಕ್ಷಗಾನ ತಾಳಮದ್ದಳೆ ಇದು ಯಕ್ಷಗಾನದ ವಿಶಿಷ್ಟ ಕಲಾ ಪ್ರಕಾರ. ಯಕ್ಷಗಾನ ತಾಳಮದ್ದಳೆ ಎಂಬ ಶ್ರವಣಮಾತ್ರ ಕಲೆಯಲ್ಲಿ ಪಾತ್ರಧಾರಿಗಳು ವೇಷ ಭೂಷಣವಿಲ್ಲದೆ ಕೇವಲ ಗದ್ಯ ಪದ್ಯ ಸಂಭಾಷಣೆ ಮತ್ತು ಸಂಗೀತದ ( ಭಾಗವತಿಕೆ ) ಮೂಲಕ ಪೌರಾಣಿಕ ಕಥೆಗಳ ಆಳವಾದ ಅಧ್ಯಯನ ಮತ್ತು ಶಾಸ್ತ್ರೋಕ್ತವಾದ ಚರ್ಚೆ ಮಾಡುವ ಮೂಲಕ ಶೋತ್ರಗಳ ಮನಸ್ಸಿನ ಮೇಲೆ ಗಾಢವಾದ ಪರಿಣಾಮವನ್ನು ಬೀರುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ ಅಂದರೆ ಅದು ಅತಿಶಯೋಕ್ತಿ ಆಗಲಾರದು. ಧಾರ್ಮಿಕ ವಿಷಯಗಳ ಚರ್ಚೆ ಮತ್ತು ಅದರ ಸಾರಾಂಶವನ್ನು ಸ್ಪಷ್ಟವಾಗಿ ನಿರೂಪಿಸುವ ಮೂಲಕ ಕೇಳುಗರಿಗೆ ಪೌರಾಣಿಕ ರಹದೌತಣವನ್ನು ನೀಡುತ್ತಾರೆ. ಈ ಯಕ್ಷಗಾನ ತಾಳಮದ್ದಳೆಯ ಆಳ ಅಗಲ ಮತ್ತು ಅದರ ವಿಸ್ತರತೆಯನ್ನು ಅರಿತವರಿಗೆ ಮಾತ್ರ ಗೊತ್ತಿರುತ್ತದೆ. ಇಲ್ಲಿ ಕಥಾನಾಯಕ…ಧರ್ಮಪಕ್ಷ ಅಥವಾ ಸತ್ಯಪಕ್ಷದ ಪ್ರತಿನಿಧಿಯಾಗಿರುತ್ತಾನೆ ಮತ್ತು ಕಥೆಯ ನೈತಿಕ ಬಲವನ್ನು ಪ್ರತಿಪಾದಿಸುವ ಮೂಲಕ ವಿಷಯವನ್ನು ಆಳವಾಗಿ ಮಂಡಿಸುತ್ತಾ ತನ್ನ ಉದ್ದೇಶ ಧರ್ಮ ನೀತಿ ಹಾಗೂ ತಾತ್ವಿಕ ಭೂಮಿಕೆಯನ್ನು ಬಿಂಬಿಸುತ್ತಾನೆ. ಇಲ್ಲಿ ಭಾಗವತರು ಅಂದರೆ ಸಂಗೀತಗಾರರು ಮತ್ತು ತಾಳ. ಮದ್ದಳೆ ಸಹಿತ ಕಥಾ ಪ್ರಸ್ತುತಿಗೆ ಮನೋರಂಜನೆ ಮತ್ತು ಭಾವನಾತ್ಮಕ ಸ್ಪಂದನೆ ತರುವುದರ ಮೂಲಕ ಸಂವಾದಕ್ಕೆ ಶ್ರವ್ಯ ಸಮತೋಲನ ನೀಡುತ್ತಾರೆ .

ಇಂತಹ ಅತ್ಯದ್ಭುತ ಕಲೆಯ ಅನಾವರಣ ದಿನಾಂಕ 29ನೇ ಜೂನ್ 2025 ನೇ ಭಾನುವಾರ ಸಂಜೆ 5:30ಕ್ಕೆ ಶಿವಮೊಗ್ಗದ ಸುವರ್ಣ ಸಂಸ್ಕೃತಿ ಭವನದಲ್ಲಿ ಅನಾವರಣಗೊಳ್ಳಲಿದೆ.

Yakshagana ಯಕ್ಷಗಾನರಂಗದ ಸ್ನೇಹಜೀವಿ ಹಾಗೂ ಖ್ಯಾತ ಮದ್ದಲೆ ವಾದಕರಾದ ಎ ಪಿ ಪಾಟಕ್ ನೇತ್ರತ್ವದ ” ಪಾಟಕ್ ಯಕ್ಷ ಸಂಸ್ಕೃತಿ ಟ್ರಸ್ಟ್ (ರಿ. ) ಇವರ ಸಂಯೋಜನೆಯಲ್ಲಿ ” ಕೃಷ್ಣ ಸಂಧಾನ ” ಎನ್ನುವ ಪೌರಾಣಿಕ ಆಖ್ಯಾನವು ತಾಳ ಮದ್ದಳೆಯ ರೂಪದಲ್ಲಿ ನೆರವೇರಲಿದೆ.
ಹಿಮ್ಮೇಳ ಮತ್ತು ಅರ್ಥದಾರಿಕೆಯಲ್ಲಿ ತೆಂಕು ಬಡಗಿನ ಸವ್ಯಸಾಚಿ ಕಲಾವಿದರಿದ್ದಾರೆ. ಭಾಗವತರಾಗಿ ಬಡಗಿನ ಶ್ರೇಷ್ಠ ಭಾಗವತರಾದ ಸರ್ವೇಶ್ವರ ಹೆಗಡೆ ಮೂರುರು, ಮದ್ದಳೆಯಲ್ಲಿ ಯಕ್ಷ ಗುರು ಶ್ರೀ ಏ. ಪಿ. ಪಾಟಕ್ ಮತ್ತು ಚಂಡೆ ವಾದನದಲ್ಲಿ ಶ್ರೀ ಭಾರ್ಗವ ಹೆಗ್ಗೋಡು ಭಾಗವಹಿಸಲಿದ್ದಾರೆ.

ಅರ್ಥಧಾರಿಗಳಾಗಿ ಯಕ್ಷಗಾನ ತಾಳಮದ್ದಳೆಯ ದಿಗ್ಗಜರಾದ ಶ್ರೀ ಸುಣ್ಣoಬಳ ವಿಶ್ವೇಶ್ವರ ಭಟ್, ವಿದ್ವಾನ್ ಶ್ರೀ ವಾಸುದೇವ ರಂಗ ಭಟ್, ವಿದ್ವಾನ್ ಸಂಕದಗುಂಡಿ ಗಣಪತಿ ಭಟ್, ಹಾಗೂ ಶ್ರೀ ಸುಹಾಸ್ ಮರಾಠೆ ಪಾತ್ರನಿರ್ವಹಿಸಲಿಕ್ಕಿದ್ದಾರೆ.

ಈ ಕಾರ್ಯಕ್ರಮ ಸಮಯಕ್ಕೆ ಸರಿಯಾಗಿ ಅಂದರೆ ಸಂಜೆ ಘಂಟೆ ಐದು – ಮೂವತ್ತಕ್ಕೆ ಪ್ರಾರಂಭವಾಗುವುದು ಹಾಗೂ ಉಚಿತ ಪ್ರವೇಶವಿರುತ್ತದೆ. ಯಕ್ಷ ಕಲಾಸಕ್ತರು ಈ ಕಾರ್ಯಕ್ರಮಕ್ಕೆ ಸಮಯಕ್ಕೆ ಮುಂಚಿತವಾಗಿ ಆಗಮಿಸಿ ತಮ್ಮ ಸೀಟುಗಳನ್ನು ಕಾಯ್ದಿರಿಸಿಕೊಂಡು ಕಾರ್ಯಕ್ರಮವನ್ನು ಸಂಪೂರ್ಣ ಆಸ್ವಾದಿಸಬೇಕೆಂದು ಶಿವಮೊಗ್ಗದ “ಯಕ್ಷ ಪರಂಪರಾ” ಸಂಘಟನೆಯ ಡಾllರತ್ನಾಕರ್ ಹಾಗೂ ಶ್ರೀ ಲಕ್ಷ್ಮೀನಾರಾಯಣ ಕಾಶಿಯವರು ಕೋರಿರುತ್ತಾರೆ.

District Social welfare office Shimoga ಭದ್ರಾವತಿಯ ವಾಲ್ಮೀಕಿ ಭವನ ನಿರ್ವಹಣಾ ಸಮಿತಿ ಸದಸ್ಯತ್ವಕ್ಕೆ ಅರ್ಜಿ ಆಹ್ವಾನ

0

District Social welfare office Shimoga ಭದ್ರಾವತಿ ತಾಲೂಕು ಕೇಂದ್ರದಲ್ಲಿರುವ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವದ ನಿರ್ವಹಣಾ ಸಮಿತಿಯನ್ನು ರಚಿಸಲು ಪರಿಶಿಷ್ಟ ಪಂಗಡಕ್ಕೆ ಸೇರಿದ 03 ಸದಸ್ಯರನ್ನು ನಾಮ ನಿರ್ದೇಶನ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
District Social welfare office Shimoga ಭದ್ರಾವತಿ ತಾಲೂಕಿನ ಪ.ಪಂ.ಕ್ಕೆ ಸೇರಿದ ಹಾಗೂ ಯಾವುದೇ ಸಮಿತಿಗಳಲ್ಲಿ ನೇಮಕಗೊಳ್ಳದಿರುವ ಸದಸ್ಯರು ಅರ್ಜಿಗಳನ್ನು ಜೂ.30 ರೊಳಗಾಗಿ ಸಲ್ಲಿಸುವಂತೆ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ್ ಕೆ.ಎನ್. ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ತಾಲೂಕು ಪಂಚಾಯಿತಿ ಹಿಂಭಾಗ, ಭದ್ರಾವತಿ ಇವರನ್ನು ಸಂಪರ್ಕಿಸುವುದು.