Santhosh MS ದಿನಾಂಕ 11.08.2025 ಸೋಮವಾರದಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರು ಆದ ಸಂತೋಷ್ ಎಂ ಎಸ್ ರವರು ಶಿಕಾರಿಪುರ ತಾಲೂಕಿನ ಬೆಂಡೆಕಟ್ಟೆ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರ ಒಂದು ಮತ್ತು ಎರಡಕ್ಕೆ ಅನಿರೀಕ್ಷಿತ ಭೇಟಿ ಕೊಟ್ಟು ಅಲ್ಲಿ ತಪಾಸಣೆ ನಡೆಸಿ ಅಂಗನವಾಡಿ ಕಾರ್ಯಕರ್ತರು Santhosh MS ಹಾಗೂ ಸಹಾಯಕರಿಂದ ಮಕ್ಕಳ ಪಾಲನೆ ಪೋಷಣೆ ಮತ್ತು ಅಂಗನವಾಡಿಯಲ್ಲಿನ ವ್ಯವಸ್ಥೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.
Shimoga News ಹಿಂದುಳಿದ ವರ್ಗಗಳ ಮಾಧ್ಯಮ ಮಾನ್ಯತೆ ಪಡೆದ ಪತ್ರಕರ್ತರಿಂದ ಮೀಡಿಯಾ ಕಿಟ್ ಗೆ ಅರ್ಜಿ ಆಹ್ವಾನ
Shimoga News ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸೇರಿರುವ ಪತ್ರಕರ್ತರನ್ನು ಪ್ರೋತ್ಸಾಹಿಸುವ ಸಲುವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ 2025-26ನೇ ಸಾಲಿಗೆ ಮಾಧ್ಯಮ ಮಾನ್ಯತೆ ಹೊಂದಿರುವ ಪತ್ರಕರ್ತರಿಗೆ “ಮೀಡಿಯಾ ಕಿಟ್” ವಿತರಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಪತ್ರಕರ್ತರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸುದ್ದಿ ಮತ್ತು ಪತ್ರಿಕಾ ವಿಭಾಗದಿಂದ ಅಥವಾ ಅಯಾ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿಗಳಿಂದ ಅರ್ಜಿ ನಮೂನೆಯನ್ನು ಪಡೆದುಕೊಳ್ಳುವುದು. ಇಲಾಖೆಯ ಮಾನ್ಯತಾ ಕಾರ್ಡು (Accriditation Card) ಹೊಂದಿದ ಪತ್ರಕರ್ತರು ತಮ್ಮ ಹೆಸರು, ಜನ್ಮ ದಿನಾಂಕ, ಖಾಯಂ ವಿಳಾಸ, ವಿದ್ಯಾರ್ಹತೆ, ಜಾತಿ (ಉಪಜಾತಿ), ಪತ್ರಿಕಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೇವಾನುಭವ, ವೇತನ ವಿವರಗಳನ್ನೊಳಗೊಂಡ ಮಾಹಿತಿಯನ್ನು ಭರ್ತಿ ಮಾಡಿ ಸ್ವ-ವಿಳಾಸವಿರುವ ಲಕೋಟೆಯೊಂದಿಗೆ ಅರ್ಜಿಯನ್ನು ಸಲ್ಲಿಸುವುದು.
ಅರ್ಜಿ ಸಲ್ಲಿಸಬಯಸುವವರು ಅರ್ಜಿಯೊಂದಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ 2025-26ನೇ ಸಾಲಿನಲ್ಲಿ ವಿತರಿಸಲಾಗಿರುವ ಮಾಧ್ಯಮ ಮಾನ್ಯತಾ ಕಾರ್ಡು ಹೊಂದಿರುವ ಬಗ್ಗೆ ದೃಢೀಕೃತ ಜೆರಾಕ್ಸ್ ಪ್ರತಿ, ಜಾತಿ ದೃಢೀಕರಣಕ್ಕಾಗಿ ಚಾಲ್ತಿಯಲ್ಲಿರುವ ಜಾತಿ ಪ್ರಮಾಣ ಪತ್ರದ ದೃಢೀಕೃತ ಜೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ಲಗತ್ತಿಸಬೇಕು. ಹಾಗೂ ಅರ್ಜಿಯಲ್ಲಿ ನಮೂದಿಸಲಾಗಿರುವ ಎಲ್ಲಾ ಮಾಹಿತಿಗಳಿಗೆ ಅಧಿಕೃತ ಪೂರಕ ದಾಖಲೆಗಳ ದೃಢೀಕೃತ ಪ್ರತಿಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದೊಳಗಾಗಿ ಸಲ್ಲಿಸಬೇಕು. ನಿಗದಿತ ದಿನಾಂಕದ ನಂತರ ಸಲ್ಲಿಸಲಾಗುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಸರ್ಕಾರದ ವ್ಯಾಪ್ತಿಗೆ ಒಳಪಡುವ ನಿಗಮ, ಮಂಡಳಿಗಳಿಂದ ಹಾಗೂ ಸರ್ಕಾರದ ಯಾವುದೇ ಇಲಾಖೆಗಳಿಂದ ಈ ಯೋಜನೆಯಡಿ ಮಾಧ್ಯಮ ಕಿಟ್ಗಳನ್ನು ಪಡೆದಿರುವುದಿಲ್ಲ ಎಂದು ರೂ. 200 ರ ಬಾಂಡ್ನಲ್ಲಿ ಮುಚ್ಚಳಿಕೆ ಪತ್ರವನ್ನು ಸಲ್ಲಿಸಬೇಕು.
Shimoga News ಮಾಧ್ಯಮ ಕಿಟ್ ಒದಗಿಸಲು ಪತ್ರಕರ್ತರ ಸೇವಾ ಹಿರಿತನ, ವಯೋಮಿತಿ ಹಾಗೂ ಸೇವಾನುಭವದ ಗರಿಷ್ಠತೆಯನ್ನು ಪರಿಗಣಿಸಲಾಗುವುದು. ಅರ್ಜಿಯೊಂದಿಗೆ ಕರ್ತವ್ಯ ನಿರ್ವಹಿಸುತ್ತಿರುವ ಮಾಧ್ಯಮ ಸಂಸ್ಥೆಯ ವಿವರ, ಪ್ರಸಾರ ಸಂಖ್ಯೆ, ಪತ್ರಿಕೆಯ ಮಾಧ್ಯಮ ಪಟ್ಟಿಯ ವಿವರ, ಜಾತಿ ಪ್ರಮಾಣ ಪತ್ರ, ವಿಳಾಸ ಹಾಗೂ ವಯಸ್ಸನ್ನು ದೃಢೀಕರಿಸುವ ದಾಖಲೆಗಳ ಪ್ರತಿಯನ್ನು ಲಗತ್ತಿಸಿ 2025ನೇ ಆಗಸ್ಟ್ 22 ರ ಸಂಜೆ 5:00 ಗಂಟೆಯೊಳಗೆ ಆಯುಕ್ತರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಂ.17, ವಾರ್ತಾ ಸೌಧ, ಭಗವಾನ್ ಮಹಾವೀರ ರಸ್ತೆ (ಇನ್ಫೆಂಟ್ರಿ ರಸ್ತೆ), ಬೆಂಗಳೂರು-560001 ಇವರಿಗೆ ಸಲ್ಲಿಸಬೇಕು. ಲಕೋಟೆಯ ಮೇಲ್ಬಾಗದಲ್ಲಿ “ನೋಂದಾಯಿತ ಪತ್ರಕರ್ತರಿಗೆ ಮೀಡಿಯಾ ಕಿಟ್ ಗಾಗಿ ಅರ್ಜಿ” ಎಂದು ನಮೂದಿಸಿರಬೇಕು.
ಹೆಚ್ಚಿನ ಮಾಹಿತಿಗಾಗಿ ಆಯಾ ಜಿಲ್ಲೆಗಳ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿಯನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Klive Special Article ಶ್ರೀರಾಘವೇಂದ್ರ ಪ್ರಿಯ ಶ್ರೀಸುಜ್ಞಾನೇಂದ್ರ ತೀರ್ಥರು ಲೇ: ಎನ್.ಜಯಭೀಮ ಜೊಯ್ಸ್.ಶಿವಮೊಗ್ಗ.
Klive Special Article “ಸುಧಾಸಾರಾರ್ಥ ತತ್ತ್ವಜ್ಞಂ ಸುರದೃಮಸಮಂ ಸತಾಂ/
ಸುರಾಧಿಪ ಗುರುಪ್ರಖ್ಯಂ ಸುಜ್ಞಾನೇಂದ್ರ ಗುರುಂಭಜೇ//
ಓಂ…ಓಂ….ಓಂ
ಇದು ಓಂ ಶಬ್ದ ಶ್ರೀರಂಗಪಟ್ಟಣದ ಕಾವೇರಿ
ನದಿಯಲ್ಲಿದ್ದ ಕಲ್ಲಿನಿಂದ ಕೇಳಿಬರುತ್ತಿದ್ದ
“ಓಂ” ಶಬ್ದದ ಮಂಗಳ ಧ್ವನಿ.
ನಿತ್ಯ ಕಾವೇರಿನದಿಯಲ್ಲಿ ಬಟ್ಟೆಒಗೆಯುವ
ಕಾಯಕ ಮಾಡುತ್ತಿದ್ದ ವ್ಯಕ್ತಿಗೆ ಒಂದು ದಿನ
ನದಿಯ ಕಲ್ಲಿನ ಮೇಲೆ ಬಟ್ಟೆ ಒಗೆಯುತ್ತಿದ್ದಾಗ
ಪ್ರತಿ ಬಟ್ಟೆ ಒಗೆತಕ್ಕೂ ಕಲ್ಲಿನಿಂದ “ಓಂ” ಶಬ್ದ
ಕೇಳಿ ಬರುತ್ತಿತ್ತು.ಅವನು ಆದಿನ ಕಲ್ಲಿಗೆ ಭಕ್ತಿ
ಯಿಂದ ಕೈಮುಗಿದು ಹೋಗುತ್ತಾನೆ. ಆ ದಿನ ರಾತ್ರಿ ರಾಯರು ಅವನ ಕನಸಿನಲ್ಲಿ ಆ ಶಿಲೆಯನ್ನು ಆ ಊರಿನ ಪಂಡಿತರೊಬ್ಬರಿಗೆ ತಲುಪಿಸುವಂತೆ ತಿಳಿಸುತ್ತಾರೆ.ಅದೇ ದಿನ ಪಂಡಿತರಿಗೂ ಕನಸಿನಲ್ಲಿ ಬಟ್ಟೆ ಒಗೆಯುವವನು ತಂದು ಕೊಡುವ ಶಿಲೆಯನ್ನು ನಂಜನಗೂಡಿನಲ್ಲಿರುವ ಮಠದ ಪೀಠಾಧಿಪತಿಗಳಿಗೆ ತಲುಪಿಸುವಂತೆ ಸೂಚಿಸುತ್ತಾರೆ. ಶ್ರೀರಾಯರ ಚಿತ್ರ ಮೂಡಿರುವ ಆಶಿಲೆಯು ಪಂಡಿತರಿಂದ ಶ್ರೀಮಠದ ಪೀಠಾಧಿಕಾರಿಗಳಿಗೆ ತಲುಪುತ್ತದೆ.
ಆಪೀಠಾಧಿಕಾರಿಗಳೇ ಶ್ರೀಸುಜ್ಞಾನೇಂದ್ರ ತೀರ್ಥರು ಶ್ರೀಸುಜ್ಞಾನೇಂದ್ರ ತೀರ್ಥರು ಮಂತ್ರಾಲಯ ಕ್ಷೇತ್ರದಲ್ಲಿರುವ ಶ್ರೀರಾಘವೇಂದ್ರ ಸ್ವಾಮಿಗಳವರ ಮಠದ ಪೀಠದಲ್ಲಿ ಶ್ರೀರಾಯರ ನಂತರ 12 ನೆಯ ಯತಿಗಳಾಗಿ 25 ವರ್ಷಗಳ ಕಾಲ ವೇದಾಂತ ಸಾಮ್ರಾಜ್ಯವನ್ನಾಳಿದ ಯತಿಕುಲ ಚಕ್ರವರ್ತಿಗಳು.
ಜ್ಞಾನಿಗಳು ಹೇಳುವ ಹಾಗೆ ಸುಜ್ಞಾನೇಂದ್ರ ತೀರ್ಥರು ಶ್ರೀರಾಯರಿಗೆ ಬಹಳ ಪ್ರೀತಿಪಾತ್ರರಾಗಿದ್ದ ಯತಿಗಳು.ಇವರು ಮಹಾ ತಪಸ್ವಿಗಳು.ಇವರ ಪರಮಗುರುಗಳಾದ “ಶ್ರೀವಾದೀಂದ್ರತೀರ್ಥರು”
“ಗುರುಗುಣ ಸ್ತವನ”ವೆಂಬ ಸುಂದರ ಕಾವ್ಯವನ್ನು ಬರೆದಿದ್ದಾರೆ. ಶ್ರೀವಾದೀಂದ್ರ ತೀರ್ಥರಪೂರ್ವಾಶ್ರಮದ ಪುತ್ರರಾಗಿದ್ದ ಜಯರಾಮಾಚಾರ್ಯರು(ಶ್ರೀರಾಯರ ಮಠದ ಪರಂಪರೆಯಲ್ಲಿ ಬರುವ ಶ್ರೀಧೀರೇಂದ್ರತೀರ್ಥರು)ಆ ಪದ್ಯ ಸಂಕಲನಕ್ಕೆ ವ್ಯಾಖ್ಯಾನವನ್ನು ಬರೆದಿದ್ದಾರೆ.
ಶ್ರೀಧೀರೇಂದ್ರತೀರ್ಥರ ಪೂರ್ವಾಶ್ರಮದ ಮರಿ ಮೊಮ್ಮಗನೇ” ಶ್ರೀಸುಜ್ಞಾನೇಂದ್ರತೀರ್ಥರು”. ತಮ್ಮಲ್ಲಿ ವೇದಾಧ್ಯಯನಕ್ಕೆ ಬಂದ ಅನೇಕ ಶಿಷ್ಯರಿಗೆ ಗುರುರಾಯರ ಚಂದ್ರಿಕಾಪ್ರಕಾಶ,ಪರಿಮಳ,ಸುಧಾ ಮುಂತಾದ ಶ್ರೇಷ್ಠ ಗ್ರಂಥಗಳಪಾಠಮಾಡಿಸುಮಾರು 9ಸಾರಿಗ್ರಂಥಗ ಳಪಾಠದ ಮಂಗಳ ಮಹೋತ್ಸವವನ್ನುಆಚರಿಸಿದ ಕೀರ್ತಿ ಶ್ರೀಸುಜ್ಞಾನೇಂದ್ರ ತೀರ್ಥರಿಗೆ ಸಲ್ಲುತ್ತದೆ.
ಶ್ರೀರಾಯರು ತಮ್ಮಲ್ಲಿ ಮುಕ್ತಿಯನ್ನು ಬಯಸಿ ಬಂದ ಭಕ್ತನಿಗೆ ಸುಜ್ಞಾನೇಂದ್ರತೀರ್ಥರ ಮೂಲಕ ಮೋಕ್ಷ ಕೊಡಿಸುತ್ತಾರೆ.
ನಿತ್ಯದಂತೆ ಒಂದುದಿನ ಶ್ರೀಸುಜ್ಞಾನೇಂದ್ರತೀರ್ಥರು ಜಪದ ಪೀಠದ ಮೇಲೆಕುಳಿತು ಧ್ಯಾನಾಸಕ್ತರಾಗಿದ್ದರು.ಧ್ಯಾನ ಮುಗಿಸಿ ಕಣ್ಣು ಬಿಟ್ಟಾಗ ಅವರ ದೃಷ್ಟಿಗೆ ಬಿದ್ದ ಗುಬ್ಬಚ್ಚಿಯೊಂದು ತಕ್ಷಣವೇ ಸುಟ್ಟುಬೂದಿಯಾಗುತ್ತದೆ. ಶ್ರೀಗುರುಗಳ ದರ್ಶನಕ್ಕಾಗಿಮಠಕ್ಕೆ ಬಂದ ಭಕ್ತರೆಲ್ಲರೂ ಇದನ್ನು ನೋಡಿ ಬೆರಗಾಗುತ್ತಾರೆ.
ಶ್ರೀಗಳವರು ಈ ಪ್ರಸಂಗದಿಂದ ಬಹಳಷ್ಟು ವಿಚಲಿತ
ರಾಗುತ್ತಾರೆ.ಅಯ್ಯೋ!ಎಂತಹ ಕೆಲಸವಾಯಿತಲ್ಲ,ನ ನ್ನಿಂದಾಗಿ ಒಂದು ಮೂಕ ಪಕ್ಷಿಯ ಪ್ರಾಣ ಹಾನಿ ಆಯಿತಲ್ಲ ಎಂದುನೊಂದುಕೊಂಡರು.ಅಂದು ಭಿಕ್ಷೆಯನ್ನ ಸ್ವೀಕರಿಸದೇ ಮೌನಕ್ಕೆಶರಣಾಗಿಧ್ಯಾನಕ್ಕೆ ಮೊರೆಹೋಗುತ್ತಾರೆ.
ಇಡೀ ಮಠದಲ್ಲಿ ಮೌನವಾತಾವರಣವಿಯುತ್ತದೆ. ಅಂದು ರಾತ್ರಿರಾಯರು ಸ್ವಪ್ನದಲ್ಲಿ ಪ್ರತ್ಯಕ್ಷರಾಗಿ ಅವರನ್ನುಸಂತೈಸಿದರು. ಸುಜ್ಞಾನೇಂದ್ರತೀರ್ಥರಿಗೆ”ಸುಜ್ಞಾನೇಂದ್ರ!ನನ್ನ ಭಕ್ತನೊಬ್ಬ ಈ ಹಿಂದೆ ಸರ್ಪರೂಪದಿಂದ ನನ್ನಬಳಿಗೆ ಬಂದು ತನ್ನಸದ್ಗತಿಗಾಗಿ ಬೇಡಿಕೊಂಡನು”.ಆದರೆ ಅವನಕರ್ಮವಿನ್ನೂ ಸವೆದಿಲ್ಲವಾದ ಕಾರಣ ಮುಂದೆ ನಮ್ಮ ಶಿಷ್ಯನ ಮೂಲಕ ನಿನಗೆ ಆಗಿನ “ಗುಬ್ಬಚ್ಚಿ”ರೂಪದಿಂದ ಮುಕ್ತಿ ಕರುಣಿಸುವೆವು ಎಂದು ಹೇಳಿದ್ದರೆಂತ ತಿಳಿಸುತ್ತಾರೆ.ಈಗ ನಿನ್ನ ದೃಷ್ಟಿ ಬಿದ್ದ ಕೂಡಲೇ ಭಸ್ಮವಾದ ಗುಬ್ಬಚ್ಚಿಯು ಆ ನನ್ನ ಭಕ್ತನೇ ಎಂದುತಿಳಿಸುತ್ತಾರೆ. ಅವನಿಗೆ ನಿನ್ನಿಂದ ಮುಕ್ತಿ ದೊರಕಿತು ಎಂದು ಹೇಳಿ ಅದೃಶ್ಯರಾಗುತ್ತಾರೆ. ಆಗ ಮೈಸೂರು ಸಾಮ್ರಾಜ್ಯವನ್ನು ಶ್ರೀ ಮುಮ್ಮಡಿ ಕೃಷ್ಣರಾಜಒಡೆಯರ್ರವರು ಆಳುತ್ತಿದ್ದರು. ಮಹಾರಾಜರಿಗೆ ಶ್ರೀಗಳವರಲ್ಲಿ ಅನನ್ಯವಾದ ಭಕ್ತಿ ಮತ್ತು ಗೌರವಗಳನ್ನಿಟ್ಟುಕೊಂಡಿದ್ದರು. ಶ್ರೀಸುಜ್ಞಾನೇಂದ್ರತೀರ್ಥರ ಕಾಲದಲ್ಲಿ ಪಂಡಿತರೊಬ್ಬರು ಶ್ರೀವ್ಯಾಸರಾಯರ”ಚಂದ್ರಿಕಾ” ಗ್ರಂಥವನ್ನು ಖಂಡಿಸಿ ಟೀಕಾ ಗ್ರಂಥವನ್ನು ಬರೆದಿದ್ದರಂತೆ.
Klive Special Article ಶ್ರೀಸುಜ್ಞಾನೇಂದ್ರತೀರ್ಥರು ಪಂಡಿತರ ಖಂಡನಾ ಗ್ರಂಥಕ್ಕೆ ಉತ್ತರವಾಗಿ ಖಂಡನಾ ಖಂಡನಗ್ರಂಥವನ್ನು ರಚಿಸುತ್ತಾರೆ.ಇವರು ರಚಿಸಿದ ಆ ಅಸಾಧಾರಣ ಗ್ರಂಥವೇ “ಚಂದ್ರಿಕಾಭೂಷಣಮ್”ಎಂಬಗ್ರಂಥ .ಸುಜ್ಞಾನೇಂದ್ರ ತೀರ್ಥರ ಕಾಲದಲ್ಲಿ ರಾಜ್ಯ ಬ್ರಿಟಿಷರ ಆಡಳಿತದಲ್ಲಿತ್ತು. ಒಂದುಸಂದರ್ಭದಲ್ಲಿ ಶ್ರೀಗಳವರು ಮಠದ ಸಂಬಂಧದ ವಿಷಯದಲ್ಲಿ ಬ್ರಿಟಿಷ್ಅ ಧಿಕಾರಿಯನ್ನುಕಾಣಬೇಕಾಗಿಬರುತ್ತದೆ.
ಶ್ರೀಗಳವರೇ ಬ್ರಿಟಿಷ್ ಅಧಿಕಾರಿಯನ್ನು ಕಾಣಲು ಹೋಗಬೇಕೆಂದಿದ್ದಾಗ,ಆಅಧಿಕಾರಿಯೇ ಶ್ರೀಗಳವರ ಬಳಿ ಬಂದು ಭಕ್ತಿಯಿಂದ ನಮಸ್ಕಾರ ಮಾಡಿ ಕೆಲಸ
ಮಾಡಿ ಕೊಟ್ಟುಹೋಗುತ್ತಾನೆ. ಇದು ಶ್ರೀಗಳ ತಪಃಶಕ್ತಿಯ ಮಹಿಮೆಯಿಂದಾದ ಕೆಲಸ.ಶ್ರೀಕಂಠೇಶ್ವರನ ದಿವ್ಯಕ್ಷೇತ್ರವಾದ ನಂಜನಗೂಡಿನಲ್ಲಿ ಶ್ರೀರಾಘವೇಂದ್ರಸ್ವಾಮಿಗಳವರು ಬಂದು ನೆಲೆಸಿದ್ದರ ಹಿಂದೆ ಒಂದು ರೋಚಕ ಕಥೆಯಿದೆ.
ಸುಜ್ಞಾನೇಂದ್ರತೀರ್ಥರು ತಮ್ಮ ಅಂತಿಮ ಕಾಲವನ್ನು ಮಂತ್ರಾಲಯದಲ್ಲಿ ಗುರುರಾಯರ ಬಳಿಯಲ್ಲೇ ಕಳೆಯಲು ಹಂಬಲಿಸಿದ್ದರು. ಶ್ರೀಗಳಿಗೆ ರಾಯರು ಸ್ವಪ್ನದ ಮೂಲಕ” ನೀನಿದ್ದಲ್ಲಿಗೆ ನಾನೇ ಬರುವೆ”ಎಂದು ಸೂಚಿಸುತ್ತಾರೆ.
ಶ್ರೀರಂಗಪಟ್ಟಣದ ಕಾವೇರಿಯಮಡಿಲಲ್ಲಿ ದೊರಕಿದ ಶಿಲಾಪ್ರತೀಕವೇ ಶ್ರೀರಾಯರ ಪ್ರತಿರೂಪ.ಈ ಶಿಲಾ ಪ್ರತೀಕವನ್ನು ಮುಮ್ಮಡಿ ಕೃಷ್ಣ ರಾಜ ಒಡೆಯರ್ರವರ ನೇತೃತ್ವದಲ್ಲಿ ಶ್ರೀಸುಜ್ಞಾನೇಂದ್ರ ತೀರ್ಥರಿಂದ ನಂಜನಗೂಡಿನಲ್ಲಿ ಪ್ರತಿಷ್ಠಾಪನೆಯಾಗುತ್ತದೆ. ನಂಜನಗೂಡಿನಲ್ಲಿ ಮಠದ ಕಟ್ಟಡ ನಿರ್ಮಾಣಗೊಂಡು ಶ್ರೀರಾಯರ ಶಿಲಾ ಪ್ರತೀಕ ಪ್ರತಿಷ್ಠಾಪನೆಯ ಜವಾಬ್ದಾರಿ ಮುಮ್ಮಡಿಕೃಷ್ಣ ರಾಜಒಡೆಯರ್ರವರದ್ದಾಗಿರುತ್ತೆ. ಶ್ರೀಸುಜ್ಞಾನೇಂದ್ರತೀರ್ಥರು ಶ್ರೀಗುರುರಾಯರಲ್ಲಿ ತಮಗೆ ಮಂತ್ರಾಲಯದಲ್ಲಿ ಸ್ಥಾನವನ್ನುಕೇಳುತ್ತಾರೆ. ಶ್ರೀರಾಯರು ತಮ್ಮ ಪಕ್ಕದಲ್ಲಿಯೇ ಸ್ಥಾನ ಬೇಡಿದ ಸುಜ್ಞಾನೇಂದ್ರ ತೀರ್ಥರಿಗೆತ ಮ್ಮಆರಾಧನೆಯ ಮರುದಿನವನ್ನೇ ಕೊಡುತ್ತಾರೆ.ಹಾಗಾಗಿಭಕ್ತರು ತಮ್ಮಆರಾಧನೆಯತರು ವಾಯಶ್ರೀಸುಜ್ಞಾನೇಂದ್ರತೀರ್ಥರ ಆರಾಧನೆಯನ್ನು ನೆರವೇರಿಸುವಂತೆ ಅನುಗ್ರಹಿಸಿದ್ದಾರೆ.
ಶ್ರೀಸುಜ್ಞಾನೇಂದ್ರತೀರ್ಥರು ಕ್ರಿ ಶ 1861ರ ಶ್ರಾವಣ ಬಹುಳ ಚತುರ್ಥಿಯಂದುನಂಜನಗೂಡಿನಲ್ಲಿ ಹರಿಪದವನ್ನೈದಿದರು.
ಶ್ರೀರಾಘವೇಂದ್ರಸ್ವಾಮಿಗಳವರು ಹೇಳಿದಂತೆ ಶ್ರೀರಾಯರ ಆರಾಧನೆಯು ಮುಗಿದ ನಂತರಚತುರ್ಥಿ
ಯಂದು ಶ್ರೀಸುಜ್ಞಾನೇಂದ್ರ ತೀರ್ಥರ ಆರಾಧನೆಯನ್ನು ಆಚರಿಸುತ್ತಾರೆ.
ಶ್ರೀಗಳವರ ಆರಾಧನಾ ಪರ್ವದಿನದಂದು ಭಕ್ತಿಪೂರ್ವಕ ನಮನಗಳನ್ನುಅರ್ಪಿಸಿಅವರಅನುಗ್ರಹಕ್ಕೆ
ಪಾತ್ರರಾಗೋಣ.
World Elephant Day ಆನೆ ಮರಿಗಳಿಗೆ ಸಕ್ರೆಬೈಲಿನ ಬಿಡಾರದಲ್ಲಿ”ನಾಮಕರಣ” ಮಹೋತ್ಸವ
World Elephant Day ವಿಶ್ವ ಆನೆ ದಿನಾಚರಣೆ ಹಿನ್ನೆಲೆಯಲ್ಲಿ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಲ್ಲಿ ಆನೆ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಅರಣ್ಯ ಇಲಾಖೆ ಅಧಿಕಾರಿಗಳಾದ ಸಿಸಿಎಫ್ ಹನುಮಂತಪ್ಪ ಮತ್ತು ಡಿಸಿಎಫ್ ಪ್ರಸನ್ನ ಕೃಷ್ಣ ಪಟಗಾರ್ ಅವರು ಎರಡು ಆನೆಗಳಿಗೆ ಕಿವಿಯಲ್ಲಿ ಮೂರು ಬಾರಿ ಚಾಮುಂಡಿ ಹಾಗೂ ತುಂಗಾ ಹೇಳುವ ಮೂಲಕ ಶಾಸ್ತ್ರ ಬದ್ಧವಾಗಿ ನಾಮಕರಣ ಮಾಡಿದರು.
World Elephant Day 23 ಆನೆಗಳಿಗೆ ಬಣ್ಣಗಳಿಂದ ಅಲಂಕಾರ ಮಾಡಲಾಗಿದ್ದು ಸಕ್ರೆ ಬೈಲಿನಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಅರ್ಜುನ, ಸಾಗರ, ಬಹದ್ದೂರ್ ಆನೆಗಳನ್ನು ಸಾಲಿನಲ್ಲಿ ನಿಲ್ಲಿಸಿ ಕಾಡಾನೆ ತುಂಗಾ ಮತ್ತು ಚಾಮುಂಡಿಗೆ ನಾಮಕರಣ ಮಾಡಲಾಯಿತು. ಪುರೋಹಿತ ಮಧು ಭಟ್ಟರ ನೇತೃತ್ವದಲ್ಲಿ ನಾಮಕರಣ ನಡೆದಿದ್ದು ವಿಶೇಷ ವಾಗಿತ್ತು.
Chamber Of Commerce Shivamogga ಪ್ರತಿಭೆ ಅನಾವರಣಕ್ಕೆ ಸಂಗೀತ ಸ್ಪರ್ಧೆ ಸೂಕ್ತ ವೇದಿಕೆ – ಜಿ.ವಿಜಯ ಕುಮಾರ್
Chamber Of Commerce Shivamogga ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮುಖ್ಯ. ಇದರಿಂದ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ ದೊರಕುತ್ತದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಹೇಳಿದರು.
ಭದ್ರಾವತಿ ವಾಸು ನೇತ್ರತ್ವದ ಭಾವಗಾನ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಭಾವಗೀತೆ ಕನ್ನಡ ಮತ್ತು ಹಿಂದಿ ಚಲನಚಿತ್ರ ಗೀತೆಗಳ ಗಾಯನ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿ, ಸಂಗೀತ ಸಾಧಕನ ಸ್ವತ್ತು, ಸೋಮಾರಿ ಸ್ವತ್ತಲ್ಲ. ಸಂಗೀತಕ್ಕೆ ಏಕಾಗ್ರತೆ ಹಾಗೂ ಧ್ವನಿ ಸಂಸ್ಕರಣೆ ಅತಿ ಮುಖ್ಯ ಎಂದು ತಿಳಿಸಿದರು.
ಒಳ್ಳೆಯ ಸಂಗೀತದಿಂದ ಶರೀರ ಹಾಗೂ ಶಾರೀರ ಶುದ್ಧಗೊಳ್ಳುತ್ತದೆ ಹಾಗೂ ಖಿನ್ನತೆ ದೂರವಾಗುತ್ತದೆ. ಸಮಾಜದಲ್ಲಿ ನಮಗೆ ಆದ ವಿಶೇಷವಾದ ಗೌರವ ದೊರಕುತ್ತದೆ. ಅದ್ದರಿಂದ ಪ್ರತಿಯೊಬ್ಬರೂ ಸಂಗೀತವನ್ನು ಶಾಸ್ತ್ರಬದ್ಧವಾಗಿ ಕಲಿತು ಮಾಡುವುದರಿಂದ ಅವರ ವ್ಯಕ್ತಿತ್ವವು ಸಹ ನಿರ್ಮಾಣಗೊಳ್ಳುತ್ತದೆ ಎಂದರು.
ಭಾವಗಾನ ತಂಡದ ವಾಸು ಅವರು ಸಾವಿರಾರು ವಿದ್ಯಾರ್ಥಿಗಳನ್ನು ಹಾಗೂ ಹೊಸ ಹೊಸ ಪ್ರತಿಭೆಗಳನ್ನ ವೇದಿಕೆಗೆ ಪರಿಚಯಿಸುವುದರ ಜತೆಗೆ ರಾಜ್ಯಮಟ್ಟದಲ್ಲೂ ಸಹ ಹಾಡುವುದಕ್ಕೆ ಅವಕಾಶವನ್ನು ಕಲ್ಪಿಸಿದ್ದಾರೆ ಎಂದು ಪ್ರಶಂಸಿದರು.
ಭದ್ರಾವತಿ ವಾಸು ಮಾತನಾಡಿ, ಸಂಗೀತ ಕ್ಷೇತ್ರಕ್ಕೆ ನಮ್ಮ ತಂಡದಲ್ಲಿರುವ ಕಲಾವಿದರು ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದರೊಂದಿಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳುತ್ತಿದ್ದೇವೆ. ನಮ್ಮ ತಂಡದಲ್ಲಿ ಅನೇಕ ಆಕಾಶವಾಣಿ ಗಾಯಕರು ಹಾಗೂ ದೂರದರ್ಶನ ಕಲಾವಿದರು ಸಹ ಇದ್ದಾರೆ ಎಂದರು.
Chamber Of Commerce Shivamogga ಕಾರ್ಯಕ್ರಮದಲ್ಲಿ ನೂರಾರು ಜನ ಸ್ಪರ್ಧಿಗಳು ಭಾಗವಹಿಸಿದ್ದರು. ಸುಪ್ರಜಾ ಕಾಮತ್ ಅವರು ಪ್ರಥಮ ಬಹುಮಾನ, ನಂದಿ ವಿರೂಪಾಕ್ಷ ದ್ವಿತೀಯ ಬಹುಮಾನ, ಸುನಿಲ ಕಾಮತ್ ತೃತೀಯ ಬಹುಮಾನ ಹಾಗೂ ಶ್ವೇತಾ ಪಾಟೀಲ್, ಸಾಗರ್, ಬಸವರಾಜ್, ಮಮತಾ, ಅನುಪ್ ಸಮಾಧಾನಕರ ಬಹುಮಾನ, ಪ್ರಶಸ್ತಿ ಪತ್ರ, ಪಾರಿತೋಷಕ, ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿಗಳನ್ನು ಪಡೆದುಕೊಂಡರು. ವೇದಿಕೆಯಲ್ಲಿ ಪ್ರಶಾಂತ್ ಹದಡಿ, ನವೀನ್, ಹೇಮಂತ್, ಬಸವರಾಜ್, ಪ್ರಮೋದ್ ಹಾಗೂ ನಿರ್ದೇಶಕರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
Sakrebyle Elephant Camp ವನ್ಯ ಪ್ರಾಣಿಗಳತ್ತ ಮಮತೆ ಮೂಡಿಸಿದ “ವಿಶ್ವ ಆನೆಗಳ ದಿನಾಚರಣೆ”
Sakrebyle Elephant Camp ಆನೆ ಸಂರಕ್ಷಣೆ, ಮಾನವ- ಆನೆ ಸಂಘರ್ಷ ನಿರ್ವಹಣೆ ಮತ್ತು ಸಹಬಾಳ್ವೆಯ ಮಹತ್ವದ ಸಂದೇಶ ಸಾರುವ ಹಾಗೂ ಆನೆಗಳಿಗೆ ಗೌರವ ಸಲ್ಲಿಸುವ ದಿನ ‘ವಿಶ್ವ ಆನೆಗಳ ದಿನ’ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ ಟಿ ಹನುಮಂತಪ್ಪ ತಿಳಿಸಿದರು.
ಕರ್ನಾಟಕ ಅರಣ್ಯ ಇಲಾಖೆ, ಶಿವಮೊಗ್ಗ ವನ್ಯಜೀವಿ ವಿಭಾಗ, ಶಿವಮೊಗ್ಗ ವನ್ಯಜೀವಿ ಉಪ ವಿಭಾಗ ಸಕ್ರೆಬೈಲು ವನ್ಯಜೀವಿ ವಲಯ ಇವರ ವತಿಯಿಂದ ಮಂಗಳವಾರ ಸಕ್ರೆಬೈಲಿನಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಆನೆ ದಿನಾಚರಣೆ-2025 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಕ್ರೆಬೈಲು ಆನೆ ಶಿಬಿರವು ತುಂಗಾ ನದಿಯ ದಂಡೆಯಲ್ಲಿ ಸ್ಥಾಪಿತವಾಗಿದ್ದು ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಪ್ರಕೃತಿ ಪ್ರಿಯರು ಮತ್ತು ವನ್ಯಜೀವಿ ಉತ್ಸಾಹಿಗಳಿಗೆ ಆನೆಗಳ ಜೀವನ ಕ್ರಮ ಹಾಗೂ ಸಂರಕ್ಷಣೆ ಕುರಿತು ತಿಳಿದುಕೊಳ್ಳುವುದರ ಜೊತೆಗೆ ಪರಿಸರ ಸ್ನೇಹಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಅತ್ಯುತ್ತಮ ಸ್ಥಳವಾಗಿದೆ.
ಆನೆ ಬಿಡಾರದಲ್ಲಿ ಒಟ್ಟು 25 ಆನೆಗಳಿದ್ದು, 23 ಆನೆಗಳು ಪೂರ್ಣವಾಗಿ ಪಳಗಿವೆ. 03 ಆನೆಗಳನ್ನು ಸೆರೆ ಹಿಡಿದು ಕ್ರಾಲ್ಗಳಲ್ಲಿ ಪಳಗಿಸಲಾಗುತ್ತಿದೆ. ಪಳಗಿಸಿದ ಆನೆಗಳಲ್ಲಿ 16 ಗಂಡು 5 ಹೆಣ್ಣು ಮತ್ತು 1 ಮಕನ ಆನೆಗಳಿವೆ. ಪಳಗಿಸಿದ ಆನೆಗಳು ಆನೆ ಸೆರೆ ಕಾರ್ಯಾಚರಣೆ, ಉಪಟಳ ನೀಡುವ ಆನೆ ಹಿಮ್ಮೆಟ್ಟಿಸಲು ಹಾಗೂ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತವೆ. ಇಲ್ಲಿ ಚಾಣಾಕ್ಷ ಮಾವುತರು, ಸಿಬ್ಬಂದಿಗಳು ಇದ್ದಾರೆ.
Sakrebyle Elephant Camp ಆನೆಗಳ ಪ್ರಾಮುಖ್ಯತೆ, ಆನೆಗಳ ಸಾಧನೆಗಳು, ಕಾರ್ಯಾಚರಣೆಗಳು ಮತ್ತು ಅವುಗಳ ಇತಿಹಾಸ ಕುರಿತು ಮಾಹಿತಿಯುಳ್ಳ ನಾಮಫಲಕ ಅಳವಡಿಸುವ ಅಥವಾ ಮಾಹಿತಿ ಕೇಂದ್ರ ಸ್ಥಾಪಿಸುವ ಹಾಗೂ ವಿದ್ಯಾರ್ಥಿಗಳಿಗೆ ಪರಿಸರ, ಪ್ರಾಣಿಗಳು ಮಾನವ ಸಂಘರ್ಷ, ವನ್ಯಜೀವಿ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಶೈಕ್ಷಣಿಕ ಕಾರ್ಯಕ್ರಮ ಮಾಡುವ ಯೋಜನೆ ಕೂಡ ಇದೆ.
ಆನೆ ಬಿಡಾರದಿಂದ ರವಿ ಮತ್ತು ಶಿವ ಎಂಬ ಎರಡು ಆನೆಗಳನ್ನು ಮಧ್ಯ ಪ್ರದೇಶಕ್ಕೆ ಹಾಗೂ ಕೃಷ್ಣ ಮತ್ತು ಅಭಿಮನ್ಯು ಎಂಬ ಆನೆಗಳನ್ನು ಆಂಧ್ರ ಪ್ರದೇಶಕ್ಕೆ ಕಳುಹಿಸಿಕೊಡಲಾಗಿದೆ. ಮಾನವ-ಆನೆ ಸಂಘರ್ಷ, ಆನೆಗಳ ಭಾವನಾತ್ಮಕ ಸಂಬAಧಗಳು, ಅವುಗಳ ಸಾಧನೆ, ಆನೆಗಳ ನಿಜವಾದ ಪ್ರಾಮುಖ್ಯತೆ ಕುರಿತು ಮಾಹಿತಿ ಫಲಕ ಹಾಗೂ ಶಿಕ್ಷಣ, ಸಂಶೋಧನೆ, ದತ್ತು ಇತರೆ ಯೋಜನೆಗಳನ್ನು ಶೀಘ್ರದಲ್ಲೇ ರೂಪಿಸಲಾಗುವುದು ಎಂದರು.
ಡಿಸಿಎಫ್ ಪ್ರಸನ್ನಕೃಷ್ಣ ಪಟಗಾರ್ ಮಾತನಾಡಿ, ತಮ್ಮ ಹಿಂಡುಗಳನ್ನು ಮುನ್ನಡೆಸುವ ಹಾಗೂ ಮಾರ್ಗದರ್ಶನ ನೀಡುವ ಹೆಣ್ಣು ಆನೆಗಳು ಮತ್ತು ಅವು ಹಂಚಿಕೊಳ್ಳುವ ಆಳವಾದ ಹಾಗೂ ಶಾಶ್ವತವಾದ ನೆನಪುಗಳ ಹಿನ್ನೆಲೆ ‘ಮಾತೃ ಪ್ರಧಾನರು ಮತ್ತು ನೆನಪುಗಳು’ ಎಂಬ ಧ್ಯೇಯವಾಕ್ಯದೊಂದಿಗೆ ಇಂದಿನ ವಿಶ್ವ ಆನೆಗಳ ದಿನವನ್ನುಆಚರಿಸಲಾಗುತ್ತಿದೆ. ಹಿಂಡನ್ನು ಮುನ್ನಡೆಸುವ ಹೆಣ್ಣು ಆನೆಯು ತನ್ನ ವಿಶೇಷವಾದ ನೆನಪಿನ ಶಕ್ತಿಯಿಂದ ಗುಂಪಿನ ಎಲ್ಲರಿಗೆ ನೀರು, ಆಹಾರ ಒದಗಿಸಲು ಸಹಕರಿಸುತ್ತದೆ ಎಂದರು.
ವಿಶ್ವ ಆನೆಗಳ ದಿನಾಚರಣೆ ಪ್ರಯುಕ್ತ ಭಾರತೀಯ ಅಂಚೆ ಇಲಾಖೆಯ ಸಹಯೋಗದೊಂದಿಗೆ ವಿಶೇಷ ಅಂಚೆ ಲಕೋಟೆ ತಯಾರಿಸಿ ಬಿಡುಗಡೆಗೊಳಿಸಲಾಗುತ್ತಿದೆ. ಮಾನವ ಆನೆ ಸಂಘರ್ಷದಿAದ ಬಾಧಿತ ಕಾಡಂಚಿನ ಸಮುದಾಯಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚಿನ ಜಾಗೃತಿ ಮೂಡಿಸಲು ಪುರದಾಳು, ಹೆದ್ದಾರಿಪುರ, ಬೆಳ್ಳೂರು ಶಾಲೆಗಳಲ್ಲಿ ಚಿತ್ರಕಲೆ, ಪ್ರಬಂಧ ಮತ್ತು ಪೋಸ್ಟರ್ ರಚನೆ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
ಸಕ್ರೆಬೈಲು ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಆನೆ ಮುಖವಾಡಗಳನ್ನು ಧರಿಸಿ ಜಾಥಾ ಮಾಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಗಾಜನೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳಿಗೆ, ಇಲಾಖಾ ಅಧಿಕಾರಿಗಳು ಮತ್ತು ಸಿಬ್ಬಂದಿಗಿಗೆ ಆನೆ ತಜ್ಞರೊಂದಿಗೆ ವಿಶೇಷ ವೆಬಿನಾರ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಅAಚೆ ಲಕೋಟೆ ಬಿಡುಗಡೆ : ಕಾರ್ಯಕ್ರಮದಲ್ಲಿ ವಿಶ್ವ ಆನೆ ದಿನಾಚರಣೆ ಪ್ರಯುಕ್ತ ವಿಶೇಷ ಅಂಚೆ ಲಕೋಟೆ ಬಿಡುಗಡೆಗೊಳಿಸಲಾಯಿತು.
ಅಂಚೆ ಇಲಾಖೆ ಅಂಚೆ ಅಧೀಕ್ಷಕರಾದ ಜಯರಾಂ ಶೆಟ್ಟಿ ಮಾತನಾಡಿ, ವಿಶ್ವ ಆನೆ ದಿನಾಚರಣೆ 2025 ರ ಸ್ಮರಣಾತ್ಮಕವಾಗಿ ಈ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸಲಾಗಿದೆ. ಈ ಲಕೋಟೆ ನಿಗದಿತ ಸಂಖ್ಯೆ ಅಂದರೆ 2000 ಸಂಖ್ಯೆಯಲ್ಲಿ ಮಾತ್ರ ಇದ್ದು, ಇದರ ಮೌಲ್ಯ ರೂ.30 ಆಗಿದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ಮಾರಾಟ ಮಾಡಲಾಗುತ್ತದೆ. ರಾಷ್ಟಿçÃಯ ಮತ್ತು ಅಂತರಾಷ್ಟಿçÃಯ ಮಟ್ಟದಲ್ಲಿ ಸಕ್ರೆಬೈಲಿನ ಆನೆ ಬಿಡಾರದ ಮಾಹಿತಿಯನ್ನು ಲಕೋಟೆ ಮೂಲಕ ಬಿತ್ತರಿಸಲಾಗುತ್ತದೆ. ಈ ಲಕೋಟೆ ಲಭ್ಯತೆ ಸೀಮಿತವಾಗಿರುವ ಕಾರಣಕ್ಕೆ ಮುಂದೆ ಇದರ ಮೌಲ್ಯ ವೃದ್ದಿಯಾಗುತ್ತಾ ಹೋಗುತ್ತದೆ ಎಂದು ಮಾಹಿತಿ ನೀಡಿದರು.
ಆನೆಮರಿಗಳ ನಾಮಕರಣ:
ಶಿಬಿರದ ತುಂಬಾ ಸಂಭ್ರಮದ-ಹಬ್ಬದ ವಾತಾವರಣ ಮೂಡಿತ್ತು. ಆನೆಗಳನ್ನು ಬಣ್ಣದ ಚಿತ್ತಾರದೊಂದಿಗೆ ಅಲಂಕರಿಸಿ, ಇಷ್ಟವಾದ ತಿನಿಸುಗಳೊಂದಿಗೆ ಆಚರಣೆ ನಡೆಯಿತು. ಪೂಜಾ ವಿಧಿವಿಧಾನಗಳನ್ನೂ ನಡೆಸಲಾಯಿತು. ಈ ವೇಳೆ ನೇತ್ರಾವತಿ ಮತ್ತು ಭಾನುಮತಿ ಆನೆಗಳಿಗೆ ಜನಿಸಿದ ಹೆಣ್ಣು ಆನೆ ಮರಿಗಳಿಗೆ ಕ್ರಮವಾಗಿ ಚಾಮುಂಡಿ ಮತ್ತು ತುಂಗಾ ಎಂದು ನಾಮಕರಣ ಮಾಡಲಾಯಿತು. ಎಲ್ಲ ಆನೆಗಳಿಗೆ ಅವುಗಳಿಗೆ ಇಷ್ಟವಾದ ಫಲ-ತರಕಾರಿಗಳನ್ನು ತಿನ್ನಿಸಿ ಸಂಭ್ರಮಿಸಲಾಯಿತು. ಆನೆ ಪ್ರಿಯ ಸಾರ್ವಜನಿಕರು, ಮಕ್ಕಳು ಆನೆಗಳ ಲೋಕದಲ್ಲಿ ವಿಹರಿಸುತ್ತಿದ್ದ ದೃಶ್ಯ ಕಂಡು ಬಂದಿತು.
ಕಾರ್ಯಕ್ರಮದಲ್ಲಿ ಎಸಿಎಫ್ ವಿಜಯಕುಮಾರ್, ಆರ್ಎಫ್ಒ ವಿನಯ್ ಜೆ ಆರ್, ಇತರೆ ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರು ಹಾಜರಿದ್ದರು.
DVS College of Arts and Science ಯುವಜನ ಸಾಹಿತ್ಯ ಕೃತಿಗಳ ಅಧ್ಯಯನ ಮಾಡಿ ಜ್ಞಾನ ವೃದ್ಧಿಸಿಕೊಳ್ಳಬೇಕು- ಎಂ.ಇ.ಶಿವಕುಮಾರ್ ಹೊನ್ನಾಳಿ
DVS College of Arts and Science ಸಾಹಿತ್ಯ ಕ್ಷೇತ್ರದಲ್ಲಿ ಯುವಜನತೆ ಆಸಕ್ತಿ ಬೆಳೆಸಿಕೊಳ್ಳಬೇಕು. ಸಾಹಿತ್ಯ ಕೃತಿಗಳನ್ನು ಅಧ್ಯಯನ ಮಾಡುವುದರಿಂದ ಜ್ಞಾನ ವೃದ್ಧಿಯಾಗುತ್ತದೆ ಎಂದು ಪ್ರಾಧ್ಯಾಪಕ, ಬರಹಗಾರ ಡಾ. ಎಂ.ಇ.ಶಿವಕುಮಾರ ಹೊನ್ನಾಳಿ ಹೇಳಿದರು.
ಶಿವಮೊಗ್ಗ ನಗರದ ಅಂಬೇಡ್ಕರ್ ಭವನದಲ್ಲಿ ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಓರಿಯೆಂಟೇಷನ್ ಮತ್ತು ಸ್ವಾಗತ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ವಿದ್ಯಾರ್ಥಿಗಳು ಸರಿಯಾದ ಆದರ್ಶ ವ್ಯಕ್ತಿತ್ವಗಳನ್ನು ಆಯ್ಕೆ ಮಾಡಿಕೊಳ್ಳುವುದು ಅತ್ಯಂತ ಅವಶ್ಯಕ. ನಿಮ್ಮ ಇಷ್ಟದ ಕ್ಷೇತ್ರದ ಸಾಧಕರ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿ ನೀವು ಕೂಡ ಉನ್ನತ ಸಾಧನೆ ಮಾಡಲು ಸಾಧ್ಯವಿದೆ ಎಂದು ತಿಳಿಸಿದರು.
ವಿದ್ಯಾರ್ಥಿ ಜೀವನವು ಅತ್ಯಂತ ಅಮೂಲ್ಯ ಸಮಯ. ಶಾಲಾ ಕಾಲೇಜಿನ ದಿನಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ನೆರವಾಗುತ್ತದೆ. ಪೋಷಕರು ಹಾಗೂ ಗುರು ಹಿರಿಯರ ಮಾರ್ಗದರ್ಶನದಿಂದ ಉನ್ನತ ಸಾಧನೆ ಮಾಡಬೇಕು ಎಂದು ಶುಭಕೋರಿದರು.
ಭಾರತೀಯ ನಾಗರಿಕ ಸೇವಾ ಪರೀಕ್ಷೆಯಲ್ಲಿ 421ನೆ ರಾಂಕ್ ಪಡೆದ ಬಿ.ಎಂ.ಮೇಘನಾ ಮಾತನಾಡಿ, ನಮ್ಮ ಭಾಷೆ, ಪ್ರಾದೇಶಿಕತೆ, ಸಂಸ್ಕೃತಿಯು ನಮ್ಮನ್ನು ಹೊಸತನಡೆಗೆ ಕೊಂಡೊಯ್ಯುತ್ತದೆ. ವಿದ್ಯಾರ್ಥಿಗಳು ಕೆಟ್ಟ ಆಕರ್ಷಣೆಗಳಿಂದ ದೂರ ಇರಬೇಕು. ಶ್ರದ್ದೆ, ಸಂಕಲ್ಪ, ಶಿಸ್ತು ಇದ್ದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಬಹುದು ಎಂದು ತಿಳಿಸಿದರು.
ದೇಶೀಯ ವಿದ್ಯಾಶಾಲಾ ಸಮಿತಿ ಕಾರ್ಯದರ್ಶಿ ಎಸ್.ರಾಜಶೇಖರ್ ಮಾತನಾಡಿ, ಡಿವಿಎಸ್ ಸಂಸ್ಥೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಅಧ್ಯಯನ ನಡೆಸಿದ್ದು, ರಾಜ್ಯ, ರಾಷ್ಟçಮಟ್ಟದಲ್ಲಿ ಉನ್ನತ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಪೂರಕವಾದ ಕಾರ್ಯಕ್ರಮಗಳನ್ನು ಸಂಸ್ಥೆ ಆಯೋಜಿಸಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
DVS College of Arts and Science ದೇಶೀಯ ವಿದ್ಯಾಶಾಲಾ ಸಮಿತಿ ಅಧ್ಯಕ್ಷ ಕೆ.ಎನ್.ರುದ್ರಪ್ಪ ಕೊಳಲೆ, ಉಪಾಧ್ಯಕ್ಷ ಎಸ್.ಪಿ.ದಿನೇಶ್, ಸಹ ಕಾರ್ಯದರ್ಶಿ ಡಾ. ಎ.ಸತೀಶ್ಕುಮಾರ್ ಶೆಟ್ಟಿ, ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಎಂ.ವೆಂಕಟೇಶ್, ಐಕ್ಯೂಎಸಿ ಸಂಯೋಜಕ ಪ್ರೊ. ಎನ್.ಕುಮಾರಸ್ವಾಮಿ, ಪ್ರೊ. ಎಸ್.ಡಿ.ಉಮೇಶ್,
ಪ್ರೊ. ಶಂಕರನಾರಾಯಣ ಶಾಸ್ತ್ರಿ, ವತ್ಸಲಾ, ಶಿಕ್ಷಕ ವರ್ಗ, ಸಿಬ್ಬಂದಿ ಉಪಸ್ಥಿತರಿದ್ದರು
Shivamogga Police ಶಿವಮೊಗ್ಗದಿಂದ ವ್ಯಕ್ತಿ ನಾಪತ್ತೆ ಗುರುತಿಸಿ ಸುಳಿವು ನೀಡಿ ಸಹಕರಿಸಲು ಪೊಲೀಸ್ ಪ್ರಕಟಣೆ
Shivamogga Police ಶಿವಮೊಗ್ಗ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಶೇಷಾದ್ರಿಪುರ 4ನೇ ಕ್ರಾಸ್ ವಾಸಿ ನಾರಾಯಣ ಬಿನ್ ರಾಮಸ್ವಾಮಿ ಎಂಬುವವರು ಜು 07 ರಂದು ಮನೆಯಿಂದ ಹೊರಗೆ ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ.
ಈತನ ಚಹರೆ 5 ಅಡ ಎತ್ತರ, ಕೋಲು ಮುಖ, ಗೋಧಿ ಮೈಬ್ಬಣ, ಸಾಧಾರಣ ಮೈಕಟ್ಟು ಹೊಂದಿದ್ದು, ಬಲಕೈ ಮೇಲೆ ರಾಧಮ್ಮ ಎಂಬ ಹಚ್ಚೆ ಗುರುತು ಇದೆ. ಕನ್ನಡ ಮಾತಾನಾಡುತ್ತಾರೆ.
ಮನೆಯಿಂದ ಹೋಗುವಾಗ ಕಪ್ಪು ಬಣ್ಣದ ಟೀಶರ್ಟ್, ಕಪ್ಪು ಪ್ಯಾಂಟ್ ಧರಿಸಿರುತ್ತಾರೆ.
ಈ ವ್ಯಕ್ತಿಯ ಬಗ್ಗೆ ಸುಳಿವು ದೊರೆತಲ್ಲಿ ಕೋಟೆ ಪೊಲೀಸ್ ಠಾಣೆ, ದೂ.ಸಂ.: 08182-261415 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆ ತಿಳಿಸಿದೆ.
Chamber Of Commerce Shivamogga ಉದ್ಯಮಿ ಡಾ.ಲಕ್ಷ್ಮೀದೇವಿ ಅವರಿಗೆ ಸನ್ಮಾನಿಸಿದ ವಿಜನ್ ಫೌಂಡೇಶನ್
Chamber Of Commerce Shivamogga ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನಿರ್ದೇಶಕಿ ಡಾ. ಲಕ್ಷ್ಮೀದೇವಿ ಗೋಪಿನಾಥ್ ಅವರು ಮಂಗಳೂರಿನ ವಿಜನ್ ಫೌಂಡೇಶನ್ ವತಿಯಿಂದ ಅಸಾಮಾನ್ಯ ಮಹಿಳೆ ಪ್ರಶಸ್ತಿ ಸ್ವೀಕರಿಸಿರುವುದಕ್ಕೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಲಕ್ಷ್ಮೀದೇವಿ ಅವರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ವತಿಯಿಂದ ಮಹಿಳಾ ಉದ್ಯಮಿ ಪ್ರಶಸ್ತಿಯು ಸಹ ದೊರಕಿದೆ.. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪ್ರಭಾರ ಅಧ್ಯಕ್ಷ ಜಿ.ವಿಜಯ್ ಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಸಹ ಕಾರ್ಯದರ್ಶಿ ಕೆ.ಎಸ್.ಸುಕುಮಾರ್, ಖಜಾಂಚಿ ಆರ್.ಮನೋಹರ, ಎಲ್ಲ ನಿರ್ದೇಶಕರು, ಮಾಜಿ ಅಧ್ಯಕ್ಷರಾದ ಡಿ.ಎಂ.ಶಂಕ್ರಪ್ಪ, ಜೆ.ಆರ್.ವಾಸದೇವ್, ಟಿ.ಆರ್.ಅಶ್ವತ್ಥ್ ನಾರಾಯಣ್ ಮತ್ತಿತರರು ಹಾಜರಿದ್ದರು.
Nidhi Aapke Nikat ಪ್ರತೀ ತಿಂಗಳ ” ನಿಧಿ ಆಪ್ ಕೆ ನಿಕಟ್” ಕಾರ್ಯಕ್ರಮದಲ್ಲಿ ನೌಕರರು ಭವಿಷ್ಯ ನಿಧಿ ಕ್ಲೈಮ್ ಪರಿಹಾರ ಪಡೆಯಲು ಪ್ರಕಟಣೆ
Nidhi Aapke Nikat ಮುಚ್ಚಿದ ಸಂಸ್ಥೆಗಳ ಸದಸ್ಯರಿಗೆ ಕ್ಲೈಮ್ ಫಾರ್ಮ್ಗಳ ದೃಢೀಕರಣವನ್ನು ಸುಗಮಗೊಳಿಸಲು ಕ್ರಮ ಕೈಗೊಳ್ಳುತ್ತಿದ್ದು, ಅಧಿಕೃತ ಸಹಿದಾರರು/ಉದ್ಯೋಗದಾತರು ಲಭ್ಯವಿಲ್ಲದ ಕಾರಣ, ಕ್ಲೈಮ್ ಗಳು ತಮ್ಮ ಕ್ಲೈಮ್ ಗಳನ್ನು ದೃಢೀಕರಿಸುವಲ್ಲಿ ತೊಂದರೆಗಳನ್ನು ಎದುರಿಸುತ್ತಾರೆ. ಕ್ಲೈಮ್ ಗಳು ಮತ್ತು ಪೋಷಕ ದಾಖಲೆಗಳನ್ನು ನಿಗದಿತ ಅಧಿಕಾರಿಗಳು ದೃಢೀಕರಿಸಬಹುದು ಮತ್ತು ಪ್ರಕ್ರಿಯೆಗಾಗಿ ಸಲ್ಲಿಸಬಹುದಾಗಿದೆ.
ಪ್ರಮಾಣೀಕರಿಸುವ ಅಧಿಕಾರಿಗಳು;- ಮ್ಯಾಜಿಸ್ಟ್ರೇಟ್/ಗೆಜೆಟೆಡ್ ಅಧಿಕಾರಿ, ಪೋಸ್ಟ್ ಮಾಸ್ಟರ್ ಅಥವಾ ಉಪ ಪೋಸ್ಟ್ ಮಾಸ್ಟರ್, ಗ್ರಾಮ ಒಕ್ಕೂಟ/ಪಂಚಾಯತ್ ಅಧ್ಯಕ್ಷರು, ಸಂಸತ್ ಸದಸ್ಯರು/ಶಾಸಕ ಸಭೆ ಸದಸ್ಯರು, ಕೇಂದ್ರ ಟ್ರಸ್ಟಿಗಳ ಮಂಡಳಿ/ಇಪಿಎಫ್ಒ ಪ್ರಾದೇಶಿಕ ಸಮಿತಿಯ ಸದಸ್ಯರು, ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು/ಮೇಯರ್ ಇವರುಗಳು ದಾಖಲೆಗಳನ್ನು ದೃಢೀಕರಿಸಬಹುದಾಗಿದೆ.
Nidhi Aapke Nikat ಸದಸ್ಯರು ಎದುರಿಸುತ್ತಿರುವ ಯಾವುದೇ ಇತರ ಕುಂದುಕೊರತೆಗಳನ್ನು ಮತ್ತು ಪಾಲುದಾರರ ಹಕ್ಕುಗಳನ್ನು ಸಲ್ಲಿಸುವಲ್ಲಿ ಎದುರಿಸುತ್ತಿರುವ ತೊಂದರೆಗಳನ್ನು ಪರಿಹರಿಸಲು ಮತ್ತು ಮಾರ್ಗದರ್ಶನ ನೀಡಲು ಶಿವಮೊಗ್ಗ ಪ್ರಾದೇಶಿಕ ಕಚೇರಿಯು ಪ್ರತಿ ತಿಂಗಳು ನಿಧಿ ಆಪ್ಕೆ ನಿಕಟ್ ಅನ್ನು ಆಯೋಜಿಸುತ್ತಿದ್ದು, ಸದಸ್ಯರು ತಮ್ಮ ಕುಂದುಕೊರತೆ ಪರಿಹಾರಕ್ಕಾಗಿ ಈ ಶಿಬಿರಗಳಲ್ಲಿ ಭಾಗವಹಿಸುವಂತೆ ನೌಕರರ ಭವಿಷ್ಯ ನಿಧಿ ಪ್ರಾದೇಶಿಕ ಕಚೇರಿಯ ಲೇಖಾ ಅಧಿಕಾರಿಗಳು ತಿಳಿಸಿದ್ದಾರೆ.
