Friday, February 13, 2026
Friday, February 13, 2026
Home Blog Page 104

ಶಿವಮೊಗ್ಗದಲ್ಲಿ 50 ಕ್ಕೂ ಹೆಚ್ಚುಮಂದಿಗೆ ಕಿಡ್ನಿ & ಇನ್ನಿತರ ಆರೋಗ್ಯ ಉಚಿತ ತಪಾಸಣೆ

0

ಶಿವಮೊಗ್ಗದ ದುರ್ಗಿಗುಡಿ ಮುಖ್ಯ ರಸ್ತೆಯಲ್ಲಿರುವ ತೃಪ್ತಿ ಕ್ಲಿನಿಕ್ ನಲ್ಲಿ ಭಾವಸಾರ ವಿಷನ್ ಇಂಡಿಯಾ ಸಮತಿಯವರಿಗೆ 50ಕ್ಕೂ ಹೆಚ್ಚು ಜನರಿಗೆ ಕಿಡ್ನಿ ಮತ್ತು ಇನ್ನಿತರ ಆರೋಗ್ಯದ ಬಗ್ಗೆ ಉಚಿತವಾಗಿ ಚಿಕಿತ್ಸೆ ನಡೆಯಿತು.
ಈ ಸಂದರ್ಭದಲ್ಲಿ ಕ್ಲಿನಿಕ್‌ನ ಸಂಸ್ಥಾಪಕ ಡಾ. ಚಂದ್ರಶೇಖರ್ ,ಸಂಘದ ಅಧ್ಯಕ್ಷ ನಂದಾ ಜಗದೀಶ್, ಬಾಬು ಅಂಜನಪ್ಪ , ಸುನಿಲ್ ಗುಜ್ಜಾರ್ ,ಗಜೇಂದ್ರನಾಥ್ ಮಾಳೋದೆ, ನಿಖಿಲ್, ಕಾಳಿದಾಸ್ , ಮೋಹನ ಕೃಷ್ಣ ಮತ್ತು ಇನ್ನಿತರರಿದ್ದರು.

Rotary Club Shimoga ಸೇವೆ ಎಂಬುದು ಯಾವುದೇ ಅಪೇಕ್ಷೆಯಿಲ್ಲದೇ ಅಗತ್ಯ ಇರುವವರಿಗೆ ಸಹಕಾರ ನೀಡುವುದು- ಬಿ.ಬಸವರಾಜ್

0

Rotary Club Shimoga ಸೇವಾ ಮನೋಭಾವ ಬೆಳೆಸುವಲ್ಲಿ ರೋಟರಿ ಸಂಸ್ಥೆಯು ಸಮಾಜಕ್ಕೆ ಪ್ರೇರಣೆಯಾಗಿದೆ. ಸೇವೆ ಎಂಬುದು ಯಾವುದೇ ಅಪೇಕ್ಷೆ ಇಲ್ಲದೆ ಅಗತ್ಯ ಇರುವವರಿಗೆ ಸಹಕಾರ ನೀಡುವುದಾಗಿದೆ ಎಂದು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಬಸವರಾಜ್ ಬಿ ಹೇಳಿದರು.

ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ವಿನೋಬನಗರದ ಸರ್ಕಾರಿ ಪ್ರೌಢಶಾಲೆಗೆ ಉಚಿತವಾಗಿ ಕಲರ್ ಪ್ರಿಂಟರ್ ಕೊಡುಗೆ ನೀಡಿ ಮಾತನಾಡಿ, ಸೇವಾ ಸಂಸ್ಥೆಗಳಲ್ಲಿ ರೋಟರಿ ಸಂಸ್ಥೆ ವಿಶ್ವದಲ್ಲಿ ಅತ್ಯಂತ ದೊಡ್ಡ ಸಂಸ್ಥೆಯಾಗಿದೆ. ಈ ಸಂಸ್ಥೆಯಲ್ಲಿರುವ ಎಲ್ಲ ಸದಸ್ಯರು ದಾನಿಗಳೇ ಎಂದು ತಿಳಿಸಿದರು.

ಜಿಲ್ಲಾ ಕಾರ್ಯಕ್ರಮ ಶಿಕ್ಷಣದ ಅಡಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಗ್ರಾಮಾಂತರ ಪ್ರದೇಶದಲ್ಲಿರುವ ಎಲ್ಲಾ ಸರ್ಕಾರಿ ಶಾಲೆಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಸಂಸ್ಥೆಯ ಸಹಕಾರವನ್ನು ನೀಡುತ್ತ ಬರುತ್ತಿದ್ದೇವೆ. ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ರೋಟರಿ ಸಂಸ್ಥೆಯು ಹಗಲಿರುಳು ಶ್ರಮಿಸುತ್ತಿದೆ. ಈ ಸೇವಾ ಮನೋಭಾವವನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಮುಂದಿನ ದಿನಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲೆಯ ಮುಖ್ಯ ಉಪಾಧ್ಯಾಯಿನಿ ಶಕುಂತಲಾ ಮಾತನಾಡಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ನಿಸ್ವಾರ್ಥ ಸೇವೆಯ ಬಗ್ಗೆ ಪ್ರಶಂಶಿಸಿದರು. ಈ ಸಂಸ್ಥೆಯು 16 ವರ್ಷದಿಂದ ಶಾಲೆಗೆ ಸಹಕಾರ ನೀಡುತ್ತಾ ಬಂದಿದ್ದಾರೆ. ಅವರ ಸಂಸ್ಥೆಗೆ ನಮ್ಮ ಶಾಲೆಯು ಚಿರಋಣಿಯಾಗಿದೆ ಎಂದು ಹೇಳಿದರು.

Rotary Club Shimoga ಕಾರ್ಯಕ್ರಮದಲ್ಲಿ ವಲಯ ಸೇನಾನಿ ಕಿರಣ್ ಕುಮಾರ್ ಜಿ, ಮಾಜಿ ಸಹಾಯಕ ಗವರ್ನರ್ ರವಿ ಕೋಟೋಜಿ, ಧರ್ಮೇಂದ್ರ ಸಿಂಗ್, ಸಂತೋಷ್, ಗೀತಾ ಜಗದೀಶ್, ಬಲರಾಮ್, ಈಶ್ವರ್, ಮೋಹನ್, ಕಾರ್ಯದರ್ಶಿ ಜಯಶೀಲ್ ಶೆಟ್ಟಿ, ಆನ್ಸ್ ಅಧ್ಯಕ್ಷೆ ರಾಜಶ್ರೀ ಬಸವರಾಜ್, ಜಗದೀಶ್, ಮಥುರಾ ಧನಂಜಯ್ ಮತ್ತು ಶಾಲಾ ಶಿಕ್ಷಕ ರಮೇಶ್ ಮತ್ತು ಸಿಬ್ಬಂದಿ ಹಾಗೂ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Shivappa Nayak University of Agriculture and Horticulture ಕೃಷಿಮೇಳದಲ್ಲಿ ಕೃಷಿ ವಿವಿಯ ಉತ್ತಮ ರೈತ & ಉತ್ತಮ ರೈತ ಮಹಿಳೆ ಆಯ್ಕೆ ಪ್ರಶಸ್ತಿ ಪಟ್ಟಿ ಘೋಷಣೆ

0

Shivappa Nayak University of Agriculture and Horticulture ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಿಂದ ಉತ್ತಮ ರೈತ ಹಾಗೂ ರೈತ ಮಹಿಳೆ ಪ್ರಶಸ್ತಿ ಘೋಷಿಸಲಾಗಿದೆ.

ಶಿವಮೊಗ್ಗದಿಂದ ಶ್ರೀ ವೈ.ಕೆ. ಮಹೇಶ್ವರ, ಚಿತ್ರದುರ್ಗದಿಂದ ಶ್ರೀ ಸಿದ್ದೇಶ್ವರ ರೆಡ್ಡಿ, ದಾವಣಗೆರೆಯಿಂದ ಶ್ರೀ ಮಂಜುನಾಥ ಜೆ.ಎಂ. , ಚಿಕ್ಕಮಗಳೂರಿನಿಂದ ಶ್ರೀ ಆಸ್ತಿಕ್ ಎಂ.ಎಸ್, ಕೊಡಗಿನಿಂದ ಶ್ರೀ ಪಿ.ಎ. ನಂದಕುಮಾರ್, ಉಡುಪಿಯಿಂದ ಶ್ರೀ ರಾಮಯ್ಯ ಶೆಟ್ಟಿ, ದಕ್ಷಿಣ ಕನ್ನಡದಿಂದ ಶ್ರೀ ರಾಜೇಶ್ ದೇವರಾಜ್ ಅವರು ಉತ್ತಮ ರೈತ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಶಿವಮೊಗ್ಗದಿಂದ ಶ್ರೀಮತಿ ಲಲಿತಮ್ಮ, ಚಿತ್ರದುರ್ಗದಿಂದ ಶ್ರೀಮತಿ ಸೂರ್ಯ ಕೋಂ. ಶಂಕರ್ , ದಾವಣಗೆರೆಯಿಂದ ಶ್ರೀಮತಿ ಮಂಜುಳಾ ದೇವಿ ಎಸ್, ಚಿಕ್ಕಮಗಳೂರಿನಿಂದ ಶ್ರೀಮತಿ ಇಂದ್ರಮ್ಮ, ಕೊಡಗಿನಿಂದ ಶ್ರೀಮತಿ ಪಂಕಜ ಗಿರೀಶ್ , ಉಡುಪಿಯಿಂದ ಶ್ರೀಮತಿ ಉಷಾ ಎ, ದಕ್ಷಿಣ ಕನ್ನಡದಿಂದ ಶ್ರೀಮತಿ ನಮಿತಾ ಪಿ. ವಿ. ಅವರು ಉತ್ತಮ ರೈತ ಮಹಿಳೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

CM Siddharamaiah ಕಬ್ಬಿನ ಬೆಲೆ ನಿಗದಿ ವಿವಾದ ,ಕೇಂದ್ರ ಸರ್ಕಾರ ಹುಟ್ಟು ಹಾಕಿದ ಸಮಸ್ಯೆ- ಸೀಎಂ ಸಿದ್ಧರಾಮಯ್ಯ

0

CM Siddharamaiah ಕಬ್ಬು ಬೆಳೆಗಾರರು ಪ್ರತಿ ಟನ್ ಕಬ್ಬಿಗೆ 3,500 ರೂ. ದರ ನಿಗದಿ ಮಾಡಬೇಕು ಎಂಬ ಬೇಡಿಕೆಯೊಂದಿಗೆ ಬೀದಿಗಿಳಿದಿರುವ ಕಬ್ಬು ಬೆಳೆಗಾರರ ಹೋರಾಟವನ್ನು ಗಮನಿಸಿದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತಿದೆ.

ಕಬ್ಬು ಬೆಳೆಗಾರರಿಗೆ ನೆರವಾಗುವುದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಜವಾಬ್ದಾರಿಯಾಗಿದೆ. ರೈತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಎಫ್ಆರ್‌ಪಿ ನಿಗದಿಪಡಿಸುವುದು ಕೇಂದ್ರ ಸರ್ಕಾರದ ಕಾರ್ಯ. ಕೇಂದ್ರ ಸರ್ಕಾರ ದಿನಾಂಕ 6-05-2025ರಲ್ಲಿ ಎಫ್ಆರ್‌ಪಿ ನಿಗದಿಪಡಿಸಿದೆ.

ಅದರಲ್ಲಿ ಸಾಗಾಟ ಮತ್ತು ಕಟಾವು ವೆಚ್ಚ ಸಹ ಸೇರಿದೆ. ಸಕ್ಕರೆಯ ಎಂಎಸ್‌ಪಿ ಹೆಚ್ಚಳ ಮಾಡುವಂತೆ ಈ ಹಿಂದೆಯೇ ಕೇಂದ್ರ ಸರ್ಕಾರಕ್ಕೆ ನಾವು ಮನವಿ ಸಲ್ಲಿಸಿದ್ದೇವೆ. ಇದೀಗ ಕೇಂದ್ರ ಸರ್ಕಾರ ಸಮಸ್ಯೆ ಹುಟ್ಟು ಹಾಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದ್ದಾರೆ.

CM Siddharamaiah ಸಕ್ಕರೆ ಕಾರ್ಖಾನೆಗಳು ಮಾರಾಟ ಮಾಡುವ ವಿದ್ಯುತ್ ಮೇಲೆ ಪ್ರತಿ ಯುನಿಟ್‌ಗೆ 60 ಪೈಸೆ ತೆರಿಗೆ ನಿಗದಿಪಡಿಸುವ ಪ್ರಸ್ತಾವನೆಯನ್ನು ಮರು ಪರಿಶೀಲಿಸಲಾಗುವುದು ಎಂದಿದ್ದಾರೆ.

University of Agricultural and Horticultural Sciences ಕೃಷಿಮೇಳ-2025 ರಲ್ಲಿ ಸಾರ್ವಜನಿಕರಿಗೆ ಉಚಿತ ಕಾನೂನು ಸಲಹೆ & ಅರಿವು ನೀಡುವ ಚಟುವಟಿಕೆ- ನ್ಯಾ. ಎಂ.ಎಸ್.ಸಂತೋಷ್

0

University of Agricultural and Horticultural Sciences ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾದ “ಕೃಷಿ ಮೇಳ 2025” ರಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಸಾರ್ವಜನಿಕರಿಗೆ ಉಚಿತವಾಗಿ ಕಾನೂನು ಸಲಹೆ ಮತ್ತು ಕಾನೂನು ಅರಿವನ್ನು ನೀಡುವ ದೃಷ್ಟಿಯಿಂದ ಕಾನೂನು ಸಲಹಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಈ ಕಾನೂನು ಸಲಹಾ ಕೇಂದ್ರವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀ ಸಂತೋಷ್ ಎಂ. ಎಸ್. ರವರು ದಿನಾಂಕ 7-11.2025 ರಂದು ಉದ್ಘಾಟಿಸಿದರು. ಈ ಕಾನೂನು ಸಲಹಾ ಕೇಂದ್ರದಲ್ಲಿ ನಾಲ್ಕು ದಿನಗಳ ಕಾಲ ಪ್ರಾಧಿಕಾರದ ಪ್ಯಾನಲ್ ವಕೀಲರು, ಕಾನೂನು ನೆರವು ಅಭಿರಕ್ಷಕರು ಹಾಗೂ ಸ್ಟೈಫ್0ಡ್ ವಕೀಲರು ಸಾರ್ವಜನಿಕರಿಗೆ ಕಾನೂನು ಸಲಹೆಯನ್ನು ಮತ್ತು ಕಾನೂನು ಅರಿವನ್ನು ನೀಡುವುದರ ಜೊತೆಗೆ ಕಾನೂನು ಸೇವಾ ಪ್ರಾಧಿಕಾರ ನೀಡುವಂತಹ ಸೇವೆಗಳ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸಲು ಪ್ರಾಧಿಕಾರದಿಂದ ನಿಯೋಜಿಸಲಾಗಿದೆ. University of Agricultural and Horticultural Sciences ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾನೂನು ಸಲಹಾ ಕೇಂದ್ರಕ್ಕೆ ಖುದ್ದಾಗಿ ಭೇಟಿಕೊಟ್ಟು ಕಾನೂನು ಸೇವಾ ಪ್ರಾಧಿಕಾರದ ಸೇವೆಗಳ ಬಗ್ಗೆ ಮತ್ತು ಕಾನೂನಿನ ಬಗ್ಗೆ ಅರಿವು ಪಡೆದುಕೊಳ್ಳುವುದರ ಜೊತೆಗೆ ತಮಗಿರುವಂತಹ ಕಾನೂನು ಸಮಸ್ಯೆಗಳ ಬಗ್ಗೆ ಸಲಹೆಯನ್ನು ಉಚಿತವಾಗಿ ಪಡೆದುಕೊಳ್ಳುವಂತೆ ಶಿವಮೊಗ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆದಂತಹ ಶ್ರೀ ಸಂತೋಷ ಎಂ. ಎಸ್. ರವರು ಪ್ರಕಟಣೆಯ ಮೂಲಕ ಕೋರಿಕೊಂಡಿದ್ದಾರೆ.

ಸ್ವಸಹಾಯ ಗುಂಪುಗಳ ಡಿಜಿಟಲ್ ಸಾಮರ್ಥ್ಯ ಹೆಚ್ಚಿಸಲು’ವಾಲ್ ಮಾರ್ಟ್’ ಜೊತೆ ಮಹತ್ವದ ಒಪ್ಪಂದ- ಸಚಿವ ಶರಣ ಪ್ರಕಾಶ ಪಾಟೀಲ್

0

ಸ್ವಸಹಾಯ ಗುಂಪುಗಳ ಡಿಜಿಟಲ್‌ ಸಾಮರ್ಥ್ಯ ಹೆಚ್ಚಿಸಲು ಅಂತಾರಾಷ್ಟ್ರೀಯ ಖ್ಯಾತಿಯ ʼವಾಲ್‌ಮಾರ್ಟ್‌ʼ ಜೊತೆ ಮಹತ್ವದ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದ ಹೊಸ ಮಾರುಕಟ್ಟೆಗಳಿಗೆ ಅವಕಾಶ ದೊರೆಯಲಿದೆ. ಸಾವಿರಾರು ಮಹಿಳೆಯರಿಗೆ ಉತ್ತಮ ಆದಾಯ ಸಿಗಲಿದೆ. ಸ್ವಸಹಾಯ ಗುಂಪುಗಳಿಗೆ ಡಿಜಿಟಲ್‌ ವ್ಯವಸ್ಥೆ, ಇ – ಕಾಮರ್ಸ್‌ ಮತ್ತು ಮಾರ್ಕೆಟಿಂಗ್‌ ಹಾಗೂ ಇತರೆ ಸಾಮರ್ಥ್ಯಗಳಲ್ಲಿ ವಿಶೇಷ ತರಬೇತಿಯೂ ದೊರೆಯಲಿದೆ ಎಂದು ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ್ ತಿಳಿಸಿದ್ದಾರೆ.

B.K. Sangamesh ರಾಜಕೀಯಕ್ಕೆ ಶಾಸಕ ಬಿ ಕೆ ಸಂಗಮೇಶ್​ ನಿವೃತ್ತಿ ಘೋಷಣೆ. ಪುತ್ರ ಗಣೇಶ್ ಗೆ ಆಶೀರ್ವದಿಸುವಂತೆ ಮನವಿ

0

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಬಿ.ಕೆ. ಸಂಗಮೇಶ್ ಅವರು ಮುಂದಿನ ಚುನಾವಣೆಯಿಂದ ಸ್ಪರ್ಧಿಸುವುದಿಲ್ಲ ಎಂದು ಸಮಾರಂಭದಲ್ಲಿ ಘೋಷಿಸಿದರು.

ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ ಬಿಕೆ ಸಂಗಮೆಶ್
ತಮ್ಮ ಪುತ್ರ ಗಣೇಶ್ ಅವರಿಗೆ ಆಶೀರ್ವಾದ ಮಾಡುವ ಮೂಲಕ ಕ್ಷೇತ್ರದ ಜನತೆ ಬೆಂಬಲ ನೀಡಬೇಕೆಂದು ಕಳಕಳಿಯಿಂದ ಮಾತನಾಡಿದರು.

ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಗ್ರಾಮದಲ್ಲಿ ನಡೆದ ಪಂಚ ಗ್ಯಾರಂಟಿ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಸಂಗಮೇಶ್ ಅವರು
ಮುಂದಿನ ಚುನಾವಣೆಯಲ್ಲಿ ನನ್ನ ಮಗ ಗಣೇಶ್ ಅವರಿಗೆ ನಿಮ್ಮ ಬೆಂಬಲ ಮತ್ತು ಆಶೀರ್ವಾದ ಇರಲಿ ಎಂದು ಮನವಿ ಮಾಡಿದರು.

B.K. Sangamesh ನಮ್ಮ ಸಹೋದರರು ಹಾಗೂ ಮಕ್ಕಳು ಈಗಾಲೇ ತಿರ್ಮಾನ ಮಾಡಿದ್ದಾರೆ ಎಂದು ಬಿಕೆ ಸಂಗಮೇಶ್ ಹೇಳಿದರು.
ಶಾಸಕ ಸಂಗಮೇಶ್ ಪುತ್ರ ಗಣೇಶ್ ಪ್ರಸ್ತುತ ಭದ್ರಾವತಿ ಪಂಚ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Good Luck Care Center ಮಕ್ಕಳಲ್ಲಿ ಸಮಾಜಮುಖಿ ಸೇವಾ ಮನೋಭಾವವನ್ನ ಬಾಲ್ಯದಿಂದಲೇ ಬೆಳೆಸಿ- ಯು.ರವೀಂದ್ರನಾಥ ಐತಾಳ್

0

Good Luck Care Center ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜತೆಯಲ್ಲಿ ಸಮಾಜಮುಖಿ ಸೇವಾ ಮನೋಭಾವವನ್ನು ಬಾಲ್ಯದಿಂದಲೇ ಬೆಳೆಸಬೇಕು ಎಂದು ಗುಡ್ ಲಕ್ ಆರೈಕೆ ಕೇಂದ್ರದ ಅಧ್ಯಕ್ಷ, ರೋಟರಿ ಮಾಜಿ ಸಹಾಯಕ ಗವರ್ನರ್ ಯು.ರವೀಂದ್ರನಾಥ್ ಐತಾಳ್ ಹೇಳಿದರು.
ಗುಡ್ ಲಕ್ ಆರೈಕೆ ಕೇಂದ್ರದಲ್ಲಿ ಜ್ಞಾನದೀಪ ಶಾಲೆಯ ಮಕ್ಕಳಿಂದ ಪ್ಲಾಸ್ಟಿಕ್ ಮುಕ್ತ ಹಾಗೂ ಸ್ವಚ್ಛತಾ ಕಾರ್ಯಕ್ರಮ ಮತ್ತು ಗುಡ್ ಲಕ್ ಆರೈಕೆ ಕೇಂದ್ರದ ಆಶ್ರಮವಾಸಿಗಳ ಜೊತೆಗೆ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಪರಿಪೂರ್ಣತೆಯನ್ನು ಹೊಂದಬೇಕಾದರೆ ಇಂತಹ ಹಲವಾರು ಆಶ್ರಮಗಳಿಗೆ ಭೇಟಿ ನೀಡಿ ಅವರ ಬದುಕು ಸಾಧನೆ ಮತ್ತು ಅವರ ಸಂಕಷ್ಟದಲ್ಲಿ ಪಾಲ್ಗೊಳ್ಳುವುದರಿಂದ ನಮಗೆ ಪುಣ್ಯ ಲಭಿಸುತ್ತದೆ ಇದರಿಂದ ಹಲವಾರು ವಿದ್ಯಾರ್ಥಿಗಳ ಮನೋಸ್ಥಿತಿ ಬದಲಾವಣೆ ಆಗುತ್ತದೆ. ಸ್ವಚ್ಛತೆ ನಮ್ಮ ದಿನನಿತ್ಯದ ಅವಿಭಾಜ್ಯ ಅಂಗವಾಗಬೇಕು. ಮಕ್ಕಳು ಪ್ಲಾಸ್ಟಿಕ್ ಮುಕ್ತ ಹಾಗೂ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಜ್ಞಾನದೀಪ ಶಾಲೆಯಿಂದ ಗುಡ್ ಲಕ್ ಆರೈಕೆ ಕೇಂದ್ರಕ್ಕೆ 10 ಫ್ಯಾನ್ ಹಾಗೂ ಧ್ವನಿವರ್ಧಕ ಮತ್ತು ಹಲವಾರು ಅಗತ್ಯ ಸಾಮಗ್ರಿಗಳನ್ನು ನೀಡಿರುತ್ತಾರೆ ಇವರ ಸೇವೆ ಅನನ್ಯ ಎಂದು ಸ್ಮರಿಸಿದರು.
Good Luck Care Center ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಮಾತನಾಡಿ, ಮಕ್ಕಳಿಗೆ ಸಮಾಜದ ಸ್ಥಿತಿಗತಿಗಳು ಹಾಗೂ ವೃದ್ಧರು ಮತ್ತು ಅಶಕ್ತರ ಅರಿವು ಅವರ ಕಷ್ಟಗಳ ಪರಿಚಯವಾಗಬೇಕು. ಈ ರೀತಿಯ ಕಾರ್ಯಕ್ರಮಗಳು ಅವರ ಕಣ್ಣನ್ನು ತೆರೆಸುತ್ತವೆ. ಜ್ಞಾನದೀಪ ಶಾಲೆ ವಿದ್ಯೆಯ ಜೊತೆಗೆ ಮನುಕುಲದ ಸೇವೆಗಳಲ್ಲಿ ಪಾಲ್ಗೊಳ್ಳುವುದರಿಂದ ಸಂಸ್ಥೆಯ ಹಿರಿಮೆ ಹೆಚ್ಚುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಕ್ಕಳಿಂದ ಆಶ್ರಮ ವಾಸಿಗಳಿಗೆ ಹಣ್ಣು ಸಿಹಿ ತಿಂಡಿ ನೀಡಿ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಆಶ್ರಮದ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು
ಆರೈಕೆ ಕೇಂದ್ರದ ಉಪಾಧ್ಯಕ್ಷ ಶಿವಪ್ಪಗೌಡ ಮಾತನಾಡಿ, ನಮ್ಮ ಗುಡ್ ಲಕ್ ಆರೈಕೆ ಕೇಂದ್ರ ದಾನಿಗಳ ನೆರವಿನಿಂದ ನಿತ್ಯ ಅನ್ನಪೂರ್ಣೇಶ್ವರಿ ಪ್ರಸಾದ ಯೋಜನೆ ಯಾವುದೇ ಅಡೆ ತಡೆ ಇಲ್ಲದೆ ನಡೆಯುತ್ತಿದೆ. ಸಾರ್ವಜನಿಕರು ಜನ್ಮದಿನ, ವಿವಾಹ ವಾರ್ಷಿಕೋತ್ಸವ ಹಾಗೂ ಶುಭ ಸಮಾರಂಭಗಳನ್ನು ಆಚರಿಸಬಹುದು ಎಂದು ತಿಳಿಸಿದರು. ಸರ್ಜಾ ಜಗದೀಶ್. ನಿರ್ದೇಶಕರಾದ ಅನುಪಮ ಹೆಗಡೆ, ಕಾರ್ಯದರ್ಶಿ ಪಂಚಾಕ್ಷರಯ್ಯ ಹಿರೇಮಠ್, ಮೀನಾಕ್ಷಿ ಎಲ್.ಜಿ., ನಯನಾ ಯು.ಡಿ., ನಾಗರಾಜ್ ನಾಡಿಗ್, ಶೃತಿ ಎಚ್.ಎಂ., ರುಕ್ಸನಾ ಬೇಗಂ, ಜೆನ್ಸಿ ಜೆಕೋಬ್ ಉಪಸ್ಥಿತರಿದ್ದರು.

R.M. Manjunatha Gowda ಕೆಎಂಎಫ್ ನಿರ್ದೇಶಕರಾಗಿ ಆಯ್ಕೆಯಾದ ಆರ್.ಎಂ.ಮಂಜುನಾಥ ಗೌಡರಿಗೆ ಜಿಲ್ಲಾ ಯುವ ಕಾಂಗ್ರೆಸ್ ಅಭಿನಂದನೆ

0

R.M. Manjunatha Gowda ಕೆ.ಎಂ.ಎಫ್. ನಿರ್ದೇಶಕರಾಗಿ ಆಯ್ಕೆಯಾಗಿರುವ ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷರು , ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಆರ್.ಎಮ್ ಮಂಜುನಾಥಗೌಡರು ರವರನ್ನು ಶಿವಮೊಗ್ಗ ಯುವ ಕಾಂಗ್ರೆಸ್ ವತಿಯಿಂದ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಶೀಮೂಲ್ ಅಧ್ಯಕ್ಷರಾದ ವಿದ್ಯಾದರ್, ಡಿಸಿಸಿ ಬ್ಯಾಂಕ್ ನ ಉಪಾಧ್ಯಕ್ಷರಾದ ಎಸ್ ಕೆ ಮರಿಯಪ್ಪ, ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಖಜಾಂಚಿ ಕೆ ರಂಗನಾಥ್, ಸೂಡ ಸದಸ್ಯರಾದ ಎಂ ಪ್ರವೀಣ್ ಕುಮಾರ್, ಹಾಪ್ ಕಾಮ್ಸ್ ನ ನೂತನ ನಿರ್ದೇಶಕ ಎಸ್.ಎಂ ಶರತ್ ಜಿಲ್ಲಾ ಯುವ ಕಾಂಗ್ರೆಸ್ ನ ಮುಖಂಡ ಹೆಚ್. ಪಿ. ಗಿರೀಶ್ , ಸಿಟಿ ಕೋ ಆಪರೇಟಿವ್ ಬ್ಯಾಂಕ್, ಖಜಾಂಚಿ ಬಿ .ಲೋಕೇಶ್, ಭಾರತಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕ ಎಸ್ ಕುಮಾರೇಶ್, ಕನಕ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕ ಟಿ ಗುರುಪ್ರಸಾದ್ ಪಂಚ ಗ್ಯಾರೆಂಟಿ ಪ್ರಾಧಿಕಾರದ ಸದಸ್ಯರಾದ ಎಸ್ ಬಸವರಾಜ್ ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ಕೆ ಎಲ್ ಪವನ್, ಎಂ ರಾಕೇಶ್, ಮೋಹನ್ ಸೋಮಿನಕೊಪ್ಪ, ವಿನೋದ್ , ಹಮೀದ್ , ಗೋಪಿ ಆಚಾರಿ,

R.M. Manjunatha Gowda ರಾಜೇಶ್ ಮಂದಾರ, ಸಚಿನ್, ರಹೀಲ್, ಆರ್‌.ಎಂ ಓಂ, ಕಿರಣ್, ಮಿಥುನ್, ಶ್ರೀಕಾಂತ್, ಮಹೇಶ್ ಗೌಡ, ಸಂತೋಷ್, ಫ್ಯಾಕ್ಟರಿ ಕಿರಣ್, ಭುವನ್, ಅಕ್ಷಯ್ ಹಾಗೂ ಇತರರು ಇದ್ದರು.

VISL ಭದ್ರಾವತಿ ಸೈಲ್- ವಿಐಎಸ್ಎಲ್ ನಲ್ಲಿ ಜಾಗೃತಾ ತಿಳುವಳಿಕೆ ಸಪ್ತಾಹ ಆಚರಣೆ

0

VISL ವಿಐಎಸ್ ಎಲ್ ನ ಕಾರ್ಮಿಕರು, ಗುತ್ತಿಗೆ ಕಾರ್ಮಿಕರು ಭದ್ರಾವತಿಯ ಶಾಲಾ ವಿದ್ಯಾರ್ಥಿಗಳಿಗಾಗಿ ಪೊಸ್ಟರ್ ಡಿಜೈನ್, ಪ್ರಬಂಧ, ಆಶುಭಾಷಣ, ರಂಗೋಲಿ, ರಸಪ್ರಶ್ನೆ ಮತ್ತು ಚಿತ್ರಕಲೆಯಂತಹ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಈ ಸಲದ ಧ್ಯೇಯವಾಕ್ಯ “ಜಾಗರೂಕತೆ: ನಮ್ಮೆಲ್ಲರ ಜವಾಬ್ದಾರಿಯಾಗಿದೆ“.

ಜಾಗೃತಾ ತಿಳುವಳಿಕೆ ಸಪ್ತಾಹವನ್ನು ಇಸ್ಪಾತ್ ಭವನದ ಮುಂಭಾಗದಲ್ಲಿ ಶ್ರೀಮತಿ ತ್ರಿವೇಣಿಯವರ ಸುಶ್ರಾವ್ಯ ಪ್ರಾರ್ಥನೆಯೊಂದಿಗೆ ಉದ್ಘಾಟಿಸಲಾಯಿತು, ಶ್ರೀ ರಘುನಾಥ ಬಿ. ಅಷ್ಟಪುತ್ರೆ, ಮಹಾಪ್ರಬಂಧಕರು (ವಿಜಿಲೆನ್ಸ್) ರವರು ಸ್ವಾಗತ ಭಾಷಣ ಮಾಡಿದರು. ಜಾಗೃತಾ ಪ್ರತಿಜ್ಞಾ ವಿಧಿಯನ್ನು ಶ್ರೀ ಎಲ್. ಪ್ರವೀಣ್ ಕುಮಾರ್, ಮಹಾಪ್ರಬಂಧಕರು (ಮಾನವ ಸಂಪನ್ಮೂಲ ಮತ್ತು ಸಾರ್ವಜನಿಕ ಸಂಪರ್ಕ), ಶ್ರೀಮತಿ ಶೋಭಾ ಶಿವಶಂಕರನ್, ಮಹಾಪ್ರಬಂಧಕರು (ಹಣಕಾಸು) ಮತ್ತು ಶ್ರೀ ಕೆ. ಹರಿಶಂಕರ್, ಮಹಾಪ್ರಬಂಧಕರು (ಸುರಕ್ಷತೆ ಮತ್ತು ಅಗ್ನಿಶಾಮಕ ಸೇವೆಗಳು) ಕನ್ನಡ, ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ಕ್ರಮವಾಗಿ ಬೋಧಿಸಿದರು.

ಈ ಸಂದರ್ಭದಲ್ಲಿ ಮಾನ್ಯ ಭಾರತದ ರಾಷ್ಟ್ರಪತಿಗಳ, ಮಾನ್ಯ ಉಪರಾಷ್ಟçಪತಿಗಳ, ಮಾನ್ಯ ಪ್ರಧಾನಮಂತ್ರಿಗಳ ಮತ್ತು ಕೇಂದ್ರ ಜಾಗೃತ ಕಮಿಷನರ್ ರವರ ಸಂದೇಶಗಳನ್ನು ಶ್ರೀ ಟಿ. ರವಿಚಂದ್ರನ್, ಮಹಾಪ್ರಬಂಧಕರು (ಸೇವೆಗಳು), ಶ್ರೀ ಎಮ್. ಸುಬ್ಬರಾವ್, ಮಹಾಪ್ರಬಂಧಕರು (ಈಎಮ್‌ಡಿ ಮತ್ತು ಸಿ.ಈ ಪ್ಲಾಂಟ್) ಶ್ರೀ ಸುಂದರ ವಡಿವೇಲು, ಮಹಾಪ್ರಬಂಧಕರು (ಐಇಡಿ ಮತ್ತು ನಿರ್ವಹಣೆ) ಮತ್ತು ಡಾ. ಸುಜೀತ್ ಕುಮಾರ್, ಹೆಚ್ಚುವರಿ ಮುಖ್ಯ ವೈಧ್ಯಾಧಿಕಾರಿಗಳು ಕ್ರಮವಾಗಿ ಓದಿದರು.

ಶ್ರೀ ಬಿ.ಎಲ್. ಚಂದ್ವಾನಿ, ಕಾರ್ಯಪಾಲಕ ನಿರ್ದೇಶಕರು, ಶ್ರೀ ಕೆ.ಎಸ್. ಸುರೇಶ್, ಮುಖ್ಯ ಮಹಾಪ್ರಬಂಧಕರು (ಸ್ಥಾವರ), ಶ್ರೀ ಜೆ. ಜಗದೀಶ, ಅಧ್ಯಕ್ಷರು, ವಿಐಎಸ್ ಎಲ್ ಕಾರ್ಮಿಕರ ಸಂಘ, ಶ್ರೀ ಅಜಯ್ ಡಿ. ಸೋಂಕುವಾರ್, ಅಧ್ಯಕ್ಷರು, ವಿಐಎಸ್ ಎಲ್ಅಧಿಕಾರಿಗಳ ಸಂಘ ಮತ್ತು ಶ್ರೀ ರಘುನಾಥ ಬಿ. ಅಷ್ಟಪುತ್ರೆ, ಮಹಾಪ್ರಬಂಧಕರು (ವಿಜಿಲೆನ್ಸ್) ರವರುಗಳು ಶ್ರೀ ಸರ್ದಾರ್ ವಲ್ಲಭಾಯ್ ಪಟೇಲ್ ಮತ್ತು ಸರ್. ಎಂ. ವಿಶ್ವೇಶ್ವರಯ್ಯರವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು.

VISL ನವೆಂಬರ್ 3 ರಂದು ಭದ್ರಾ ಅತಿಥಿಗೃಹದಲ್ಲಿ ಆಯೋಜಿಸಲಾಗಿದ್ದ ಜಾಗೃತಾ ತಿಳುವಳಿಕೆ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಶ್ರೀ ಉನ್ನೀಕೃಷ್ಣನ್, ಸಹಾಯಕ ಮಹಾಪ್ರಬಂಧಕರು (ಹಣಕಾಸು) ರವರು ಪ್ರಾರ್ಥನಾಗೀತೆಯನ್ನು ಹಾಡಿದರು. ಸೈಂಟ್ ಚಾರ್ಲ್ಸ್ ಆಂಗ್ಲ ಶಾಲೆಯ 4ನೇ ತರಗತಿಯ ವಿಧ್ಯಾರ್ಥಿನಿಯರಾದ ಕು. ಪಾವನಿ ಎಮ್. ನಾಯಕ್ ಮತ್ತು ಕು. ಹರ್ಷಾಲಿಶೆಟ್ಟಿ ತಮ್ಮ ಭರತನಾಟ್ಯದಿಂದ ಪ್ರೇಕ್ಷಕರನ್ನ ಮನರಂಜಿಸಿದರು. ಶ್ರೀ ಹಾಲಸ್ವಾಮಿ (ಕಥೆ ರಚನೆ ಮತ್ತು ನಿರ್ದೆಶನ) ಮತ್ತು ಕಲಾವಿದರಾದ ಶ್ರೀ ಭಾನುಪ್ರಕಾಶ್, ಕು. ಖುಷಿ.ಬಿ, ಶ್ರೀ ರೂಪೇಶ್.ಎಸ್, ಶ್ರೀ ರಾಘವೇಂದ್ರ.ಎಮ್.ಕೆ, ಶ್ರೀ ರಿಜ್ವಾನ್ ಬೇಗ್, ಶ್ರೀ ವಸಂತ್.ಬಿ.ಎಸ್, ಶ್ರೀ ಭಾನುಪ್ರಕಾಶ್ ಬಾಬು, ಮತ್ತು ಶ್ರೀ ಜಗದೀಶ್ ಆಚಾರ್ಯ ಒಳಗೊಂಡ ವಿಐಎಸ್ ಎಲ್ ನ ತಂಡ ನಟಿಸಿದ ‘ಮನ್ವಂತರ’ ಎಂಬ ಕನ್ನಡ ಕಿರು ಚಿತ್ರ/ನಾಟಕವನ್ನು ಪ್ರದರ್ಶಿಸಲಾಯಿತು ಮತ್ತು ವಿವಿಧ ಸ್ಪರ್ದೆಗಳಲ್ಲಿ ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು.

ಶ್ರೀ ರಘುನಾಥ ಬಿ. ಅಷ್ಟಪುತ್ರೆ, ಮಹಾಪ್ರಬಂಧಕರು (ವಿಜಿಲೆನ್ಸ್) ರವರು 35 ಅಧಿಕಾರಿಗಳಿಗೆ ಉeಒ ಕುರಿತು ತರಬೇತಿ ನೀಡಿದ ವರದಿಯನ್ನು ಓದಿದರು. ಮೆಟೀರಿಯಲ್ ಮ್ಯಾನೇಜ್‌ಮೆಂಟ್ ಇಲಾಖೆಯು ಮಾರಾಟಗಾರರ ಸಭೆಯನ್ನು ಆಯೋಜಿಸಿತ್ತು, ಇದರಲ್ಲಿ ಸುಮಾರು 30 ಮಾರಾಟಗಾರರು ಭಾಗವಹಿಸಿದ್ದರು.

ಶ್ರೀ ಬಿ.ಎಲ್. ಚಂದ್ವಾನಿ, ಕಾರ್ಯಪಾಲಕ ನಿರ್ದೇಶಕರು ತಮ್ಮ ಮುಖ್ಯ ಅತಿಥಿಗಳ ಭಾಷಣದಲ್ಲಿ ವಿಜಿಲೆನ್ಸ್ನಲ್ಲಿನ ಎಲ್ಲಾ ಪಾಲುದಾರರ ಜವಾಬ್ದಾರಿಗಳನ್ನು “ಜಾಗರೂಕತೆ: ನಮ್ಮೆಲ್ಲರ ಜವಾಬ್ದಾರಿ, ನಿಯಮಗಳನ್ನು ಪಾಲಿಸುವ ಪ್ರಾಮುಖ್ಯತೆ, ಕಂಪನಿಯ ಪಿಸಿಪಿ, ಸಿಡಿಎ ನಿಯಮಗಳಂತಹ ಕಾರ್ಯವಿಧಾನಗಳ ಮಾರ್ಗಸೂಚಿಗಳು” ಎಂಬ ವಿಷಯಕ್ಕೆ ಸಂಬAಧಿಸಿದAತೆ ಒತ್ತಿ ಹೇಳಿದರು.

ಜಾಗರೂಕತೆಯ ಜಾಗೃತಿ ಮೂಡಿಸಲು ಜಾಗೃತ ಘೋಷಣೆಗಳ ಫಲಕಗಳನ್ನು ಹಿಡಿದು ಮೆರವಣಿಗೆ ನಡೆಸಲಾಯಿತು. ಈ ವರ್ಷದ ಧ್ಯೇಯದೊಂದಿಗೆ ಜಾಗೃತ ಸೆಲ್ಫಿ ಬೂತ್, ಉದ್ಯೋಗಿಗಳು ಮತ್ತು ಸಾರ್ವಜನಿಕರನ್ನು ಆಕರ್ಷಿಸಿತು.

ಶ್ರೀ ಕೆ.ಎಸ್. ಸುರೇಶ್ ತಮ್ಮ ಭಾಷಣದಲ್ಲಿ, ದೇಶದ ಭವಿಷ್ಯವಾಗಿರುವ ಶಾಲಾ ಮಕ್ಕಳಲ್ಲಿ ಮೌಲ್ಯಗಳು ಮತ್ತು ತತ್ವಗಳನ್ನು ಪೋಷಿಸುವ ಮಹತ್ವವನ್ನು ಒತ್ತಿ ಹೇಳಿದರು.

ಶ್ರೀ ಎಲ್. ಕುಥಲನಾಥನ್, ಸಹಾಯಕ ಮಹಾಪ್ರಬಂಧಕರು (ವಿಜಿಲೆನ್ಸ್) ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಅರ್ಪಿಸಿದರು. ವಿಐಎಸ್ ಎಲ್ ನ ವಿಜಿಲೆನ್ಸ್ ಇಲಾಖೆ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.