Thursday, February 12, 2026
Thursday, February 12, 2026
Home Blog Page 102

PMshri Kendriya Vidyalaya ಪಿಎಂಶ್ರೀ ಕೇಂದ್ರೀಯ ವಿದ್ಯಾಲಯದಲ್ಲಿ ಭಗವದ್ಗೀತಾ ಅಭಿಯಾನ

0

PMshri Kendriya Vidyalaya ಶಿವಮೊಗ್ಗದ ಪಿಎಂಶ್ರೀ ಕೇಂದ್ರೀಯ ವಿದ್ಯಾಲಯದಲ್ಲಿ ಶ್ರೀ ಭಗವದ್ಗೀತಾ ಅಭಿಯಾನ 2025ರ ಅಂಗವಾಗಿ ಶ್ಲೋಕ ಪಠಣ ಕೇಂದ್ರ ಆರಂಭಿಸಲಾಯಿತು.

ಡಾ.ಬಾಲಕೃಷ್ಣ ಹೆಗಡೆ, ಶ್ರೀಮತಿ ಲಲಿತಾ ಹೆಗಡೆ, ಮೈತ್ರಿ ಅಶೋಕ ಭಟ್ಟ, ಅಧ್ಯಾಪಕರಾದ ಸತ್ಯಂ ಮಿಶ್ರಾ ಮೊದಲಾದವರಿದ್ದರು.

Bangalore Agricultural University ನವೆಂಬರ್13 ರಿಂದ ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ಕೃಷಿಮೇಳ.

0

Bangalore Agricultural University ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆಶ್ರಯದಲ್ಲಿ ನವೆಂಬರ್‌ 13ರಿಂದ 16ರವರೆಗೆ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ‘ಸಮೃದ್ಧ ಕೃಷಿ ವಿಕಸಿತ ಭಾರತ– ನೆಲ, ಜಲ, ಬೆಳೆ’ ಎಂಬ ಘೋಷವಾಕ್ಯದಡಿ ಕೃಷಿ ಮೇಳ ನಡೆಯಲಿದೆ.

Thawar Chand Gehlot ಭಗವಾನ್ ಬಾಹುಬಲಿ ಅವರ ತತ್ವಗಳು ಇಂದಿಗೂ ಪ್ರಸ್ತು- ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್

0

Thawar Chand Gehlot “ಭಗವಾನ್ ಮಹಾವೀರರು ನಮಗೆ “ಬದುಕು ಮತ್ತು ಬದುಕಲು ಬಿಡಿ” ಎಂಬ ದೈವಿಕ ಸಂದೇಶವನ್ನು ನೀಡಿದರು. ನಾವು ಅವರ ದೈವಿಕ ಸಂದೇಶದಿಂದ ಸ್ಫೂರ್ತಿ ಪಡೆದು, ಅವರು ತೋರಿಸಿದ ಮಾರ್ಗವನ್ನು ಅನುಸರಿಸಿ ವಿಶ್ವ ಶಾಂತಿ ಮತ್ತು ಕಲ್ಯಾಣಕ್ಕಾಗಿ ಕೆಲಸ ಮಾಡಬೇಕು” ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.

ಶ್ರೀ ಕ್ಷೇತ್ರ ಶ್ರವಣಬೆಳಗೊಳ ದಿಗಂಬರ ಜೈನ ಮಹಾಸಂಸ್ಥಾನ ಮಠ ವತಿಯಿಂದ ಆಯೋಜಿಸಿದ್ದ ಪೂಜ್ಯ ಆಚಾರ್ಯ ಶ್ರೀ ಶಾಂತಿಸಾಗರ್‌ಜೀ ಮಹಾರಾಜರ ಪ್ರತಿಮೆ ಸ್ಥಾಪನೆ ಉತ್ಸವ ಮತ್ತು ನಾಲ್ಕನೇ ಪರ್ವತದ ನಾಮಕರಣ ಸಮಾರಂಭದಲ್ಲಿ ಗೌರವಾನ್ವಿತ ಉಪರಾಷ್ಟ್ರಪತಿ ಸಿ.ಪಿ.ರಾಧಕೃಷ್ಣ ಅವರೊಂದಿಗೆ ಭಾಗವಹಿಸಿ ಅವರು ಮಾತನಾಡಿದರು.

“ಮೋಕ್ಷವನ್ನು ಪಡೆದ ಭಗವಾನ್ ಬಾಹುಬಲಿ, ಮಾನವನ ಆಧ್ಯಾತ್ಮಿಕ ಉನ್ನತಿ ಮತ್ತು ಮಾನಸಿಕ ಶಾಂತಿಗಾಗಿ ನಾಲ್ಕು ತತ್ವಗಳನ್ನು ಪ್ರತಿಪಾದಿಸಿದರು: ಅಹಿಂಸೆಯ ಮೂಲಕ ಸಂತೋಷ, ತ್ಯಾಗದ ಮೂಲಕ ಶಾಂತಿ, ಸ್ನೇಹದ ಮೂಲಕ ಪ್ರಗತಿ ಮತ್ತು ಧ್ಯಾನದ ಮೂಲಕ ಸಾಧನೆ ಎಂಬ ಸಂದೇಶ ನೀಡಿದ್ದರು. ಈ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ ಮತ್ತು ವಿಶ್ವ ಶಾಂತಿ ಮತ್ತು ಕಲ್ಯಾಣಕ್ಕೆ ದಾರಿ ಮಾಡಿಕೊಡುತ್ತವೆ” ಎಂದು ರಾಜ್ಯಪಾಲರು ಹೇಳಿದರು.

“ಜೈನ ಧರ್ಮವು ಪ್ರಾಚೀನ ಶ್ರವಣ ಸಂಪ್ರದಾಯದಿಂದ ಪಡೆದ ಧರ್ಮವಾಗಿದ್ದು, ಇದನ್ನು ಭಗವಾನ್ ಋಷಭದೇವ ಮತ್ತು ನಂತರದ ತೀರ್ಥಂಕರರು ಉತ್ತೇಜಿಸಿದರು. 24 ನೇ ತೀರ್ಥಂಕರರಾದ ಭಗವಾನ್ ಮಹಾವೀರ ಸ್ವಾಮಿಗಳು ಇದಕ್ಕೆ ವ್ಯವಸ್ಥಿತ ರೂಪ ನೀಡಿದರು. ಭಗವಾನ್ ಮಹಾವೀರ ಸ್ವಾಮಿಗಳು ಸತ್ಯ, ಅಹಿಂಸೆ, ಕಳ್ಳತನ ಮಾಡದಿರುವುದು, ಬ್ರಹ್ಮಚರ್ಯ ಮತ್ತು ಸ್ವಾಧೀನ ಮಾಡದಿರುವುದು ಮುಂತಾದ ತತ್ವಗಳ ಮೂಲಕ ಶಾಂತಿಯುತ ಸಹಬಾಳ್ವೆ ಮತ್ತು ಸಾರ್ವತ್ರಿಕ ಸಹೋದರತ್ವದ ಹಾದಿಯನ್ನು ಬೆಳಗಿಸಿದರು. ಅವರು “ಅಹಿಂಸಾ ಪರಮೋ ಧರ್ಮಃ” ಎಂದು ಹೇಳುತ್ತಿದ್ದರು, ಅಂದರೆ ಅಹಿಂಸೆಯೇ ಶ್ರೇಷ್ಠ ಧರ್ಮ. ದೈಹಿಕ ಹಿಂಸೆಯಲ್ಲಿ ಮಾತ್ರವಲ್ಲದೆ ನಮ್ಮ ಆಲೋಚನೆಗಳು, ಮಾತುಗಳು ಮತ್ತು ಕಾರ್ಯಗಳಲ್ಲಿಯೂ ಸಹಾನುಭೂತಿ ಇರಬೇಕು ಎಂದು ಅವರು ನಮಗೆ ಕಲಿಸಿದರು. ಇಂದಿನ ಕಾಲದಲ್ಲಿ, ಸಮಾಜದಲ್ಲಿ ಉದ್ವಿಗ್ನತೆ, ಕೋಪ ಮತ್ತು ಹಿಂಸೆ ಹೆಚ್ಚುತ್ತಿರುವಾಗ, ಮಹಾವೀರ ಸ್ವಾಮಿಗಳ ಈ ಸಂದೇಶವು ನಮ್ಮನ್ನು ಶಾಂತಿ, ಸಹಬಾಳ್ವೆ ಮತ್ತು ಪ್ರೀತಿಯ ಕಡೆಗೆ ಕರೆದೊಯ್ಯುತ್ತದೆ” ಎಂದು ತಿಳಿಸಿದರು.

“ಆಚಾರ್ಯ ಶ್ರೀ ಶಾಂತಿಸಾಗರ್ ಮಹಾರಾಜ್ ಸಂಯಮದ ಜೀವಂತ ಸಾಕಾರವಾಗಿದ್ದರು. ಆಧ್ಯಾತ್ಮಿಕ ಜೀವನವು ಧರ್ಮಗ್ರಂಥಗಳಲ್ಲಿ ಮಾತ್ರವಲ್ಲದೆ ನಡವಳಿಕೆಯಲ್ಲೂ ಇದೆ ಎಂದು ಅವರು ಪ್ರದರ್ಶಿಸಿದರು. ಅವರು ಜೈನ ಧರ್ಮದ ಅದ್ಭುತ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸಿದರು, ಸಂಯಮ ಮತ್ತು ಧ್ಯಾನದ ಆದರ್ಶಗಳಿಂದ ಸಮಾಜವನ್ನು ಬೆಳಗಿಸಿದರು. ಒಬ್ಬ ಅನ್ವೇಷಕನು ದೃಢನಿಶ್ಚಯ, ಆತ್ಮವಿಶ್ವಾಸ ಮತ್ತು ಸತ್ಯದ ಹಾದಿಯಲ್ಲಿ ನಡೆದಾಗ, ಯುಗಗಳ ಹರಿವು ಕೂಡ ಅವನ ಭಕ್ತಿಯ ಮುಂದೆ ತಲೆಬಾಗುತ್ತದೆ ಎಂಬುದಕ್ಕೆ ಅವರ ಜೀವನ ಸಾಕ್ಷಿಯಾಗಿದೆ. . ಅವರ ಹೆಸರಿನಲ್ಲಿರುವ “ಶಾಂತಿ” ಮತ್ತು “ಸಾಗರ” ಎಂಬ ಪದಗಳು ಅವರ ವ್ಯಕ್ತಿತ್ವದ ಸಾರವನ್ನು ಸಾಕಾರಗೊಳಿಸುತ್ತವೆ. ಶಾಂತಿಯು ಬಾಹ್ಯ ಸಂದರ್ಭಗಳಿಂದಲ್ಲ, ಆದರೆ ಸ್ವಯಂ ನಿಯಂತ್ರಣ ಮತ್ತು ವಿವೇಕಯುತ ನಡವಳಿಕೆಯಿಂದ ಉಂಟಾಗುತ್ತದೆ ಎಂದು ಅವರು ನಮಗೆ ತೋರಿಸಿದರು. ಸಾಗರದಂತೆ, ಅವರ ಹೃದಯವು ವಿಶಾಲವಾಗಿತ್ತು – ತನ್ನೊಳಗಿನ ಪ್ರತಿಯೊಬ್ಬರನ್ನು ಒಳಗೊಳ್ಳುತ್ತಿತ್ತು, ಎಲ್ಲರಿಗೂ ಯೋಗಕ್ಷೇಮದ ಮನೋಭಾವದಿಂದ ತುಂಬಿತ್ತು” ಎಂದು ಶ್ಲಾಘಿಸಿದರು.

Thawar Chand Gehlot ಸಮಾರಂಭದಲ್ಲಿ ಪೂಜ್ಯ ಆಚಾರ್ಯ ಶ್ರೀ ಸುವಿಧಿ ಸಾಗರ್ ಮಹಾರಾಜರು, ಪೂಜ್ಯ ಸಂಯಮ್ಮೂರ್ತಿ ಆಚಾರ್ಯ ಶ್ರೀ ವರ್ಧಮಾನಸಾಗರ್ ಮಹಾರಾಜರು, ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯರು, ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

Kanakadasa ಮೂಢನಂಬಿಕೆ, ಜಾತಿಪದ್ಧತಿ ವಿರುದ್ಧ ಧ್ವನಿ ಎತ್ತಿದ ಕನಕದಾಸರು-ತಿಪ್ಪಣ್ಣ

0

Kanakadasa ದಾಸಶ್ರೇಷ್ಠ ಕನಕದಾಸರು ಸಮಾಜದಲ್ಲಿನ ಮೂಢ ನಂಬಿಕೆ, ಜಾತಿ ಪದ್ಧತಿ ಸೇರಿದಂತೆ ಅನಿಷ್ಟ ಪದ್ಧತಿಗಳ ವಿರುದ್ದ ಧ್ವನಿ ಎತ್ತಿ, ಸಮಾಜದ ಅಂಕು-ಡೊಂಕುಗಳನ್ನು ತಿದ್ದಿದ ಮಹಾನ್ ದಾರ್ಶನಿಕರು ಎಂದು ಕನಕದಾಸ ಭಕ್ತ ಮಂಡಳಿ ಅಧ್ಯಕ್ಷ ತಿಪ್ಪಣ್ಣ ಹೇಳಿದರು.

ಸೊರಬ ಪಟ್ಟಣದ ದಂಡಾವತಿ ಬ್ಲಾಕ್‌ನಲ್ಲಿ ಶನಿವಾರ ನಡೆದ ಕನಕದಾಸ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಕನಕದಾಸರು ಒಂದು ವರ್ಗದ ಸೀಮಿತವಾಗಿಲ್ಲ. ಅವರು ಕಾವ್ಯ ಹಾಗೂ ಕೀರ್ತನೆಗಳ ಮೂಲಕ ಸಮಾಜದಲ್ಲಿ ಬೇರೂರಿದ್ದ ಕಂದಾಚಾರಗಳನ್ನು ಹೋಗಲಾಡಿಸಲು ಶ್ರಮಿಸಿ, ಸಾಹಿತ್ಯಕ್ಕೆ ತನ್ನದೆ ಆದ ಕೊಡುಗೆ ನೀಡಿ, ಎಲ್ಲರನ್ನು ಸಮಾನತೆ ದೃಷ್ಟಿಕೋನದಿಂದ ನೋಡುವಂತೆ ತಿಳಿಸಿ ವಿಶ್ವಮಾನವರಾದರು.

ಅವರ ಭಕ್ತಿ ಜ್ಞಾನದಿಂದ ಜಾತಿ ವ್ಯವಸ್ಥೆ ವಿರುದ್ಧವಾಗಿ ಧ್ವನಿಎತ್ತಿ ದಾಸ ಶ್ರೇಷ್ಠರಾಗಿದ್ದಾರೆ. ಅವರು ಮೂಲ ಹೆಸರು ತಿಮ್ಮಪ್ಪ ನಾಯ್ಕ, ಅವರು ಭಕ್ತಿ ಮಾರ್ಗವನ್ನು ಆಯ್ಕೆ ಮಾಡಿಕೊಂಡು ಕನಕದಾಸ ಎಂಬ ಹೆಸರನ್ನು ಪಡೆದರು.

ಅವರು ಜನರ ನಡುವೆ ಸಮಾನತೆ, ವಿನಯ, ಸತ್ಯ, ಅಹಿಂಸೆ ಎಂಬ ಮೌಲ್ಯಗಳನ್ನು ಸಾರಿದರು ಎಂದರು.
ಶಿಕ್ಷಕ ವಿನಯ ಕುಮಾರ್ ಹೊನ್ನಾಳಿ ಮಾತನಾಡಿ, ಕನಕದಾಸರು ಕನ್ನಡ ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆಗಳನ್ನು ನೀಡಿದ್ದಾರೆ. ಅವರ ದೃಢವಾದ ಭಕ್ತಿಗೆ ಉಡುಪಿಯ ಶ್ರೀ ಕೃಷ್ಣನೇ ತನ್ನ ಸ್ಥಾನವನ್ನು ಬದಲಿಸಿದ ಎಂದು ಹೇಳಲಾಗುತ್ತದೆ.

Kanakadasa ಜೊತೆಗೆ ಅದನ್ನು ಕನಕನ ಕಿಂಡಿ ಎಂದು ಕರೆಯಲಾಗುತ್ತದೆ. ಅವರು ತಮ್ಮ ಜೀವಿತಾವಧಿಯಲ್ಲಿ ಅನೇಕ ದೇಗುಲಗಳನ್ನು ಸಂದರ್ಶಿಸಿದ್ದಾರೆ. ಅವರು ಪಾದಸ್ಪರ್ಶ ಮಾಡಿದ ದೇಗುಲಗಳು ಪವಾಡಕ್ಕೆ ಸಾಕ್ಷಿಯಾಗಿವೆ ಎಂದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಉಪಾಧ್ಯಕ್ಷ ದತ್ತಾ ಸೊರಬ, ಬಾಲಕೃಷ್ಣ ಸಿದ್ದಾಪುರ, ಯಶವಂತ ಸಿದ್ದಾಪುರ, ಈಶ್ವರ ಸಮನವಳ್ಳಿ, ವೈಷ್ಣವಿ, ಅಲಿನಾ, ಸೇರಿದಂತೆ ಇತರರಿದ್ದರು.

ವಂದೇ ಮಾತರಂ ಗೀತೆಗೆ 150 ವರ್ಷ ಸಂದ ವಿಶೇಷವಾಗಿ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಮಾಲಾರ್ಪಣೆ

0

ಈ ದಿನ ಭಾರತದ ರಾಷ್ಟ್ರಗೀತೆಗೆ 150 ವರ್ಷಗಳ ಸಂಭ್ರಮದ ಪ್ರಯುಕ್ತ ಭಾರತೀಯರಲ್ಲಿ ದೇಶ ಅಭಿಮಾನವನ್ನು ಹೆಚ್ಚಿಸಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಪ್ರತಿಮೆಗೆ ಮಾಲಾರ್ಪಣೆ ಹಾಗೂ ಸಾಮೂಹಿಕ ಒಂದೇ ಮಾತರಂ ಗೀತೆಯನ್ನು ಆಯೋಜಿಸುವ ಮೂಲಕ ಸಮಸ್ತ ರಾಷ್ಟ್ರಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಒಂದು ಕಾರ್ಯಕ್ರಮದಲ್ಲಿ ಪ್ರಮುಖರಾದ ವಿಜಯ ರೇವಣ್ಣ ಕರ್ ಪರಿಸರ ರಮೇಶ್. ಪ್ರಫುಲ್ಲಚಂದ್ರ ಹೆಚ್. (ಅಧ್ಯಕ್ಷರು ಎಪಿಎಂಸಿ ಆಟೋ ಚಾಲಕರ ಸಂಘ) ಮುಕುಂದಣ್ಣ. ವಾಗೀಶ್( ನ್ಯಾಯವಾದಿಗಳು) ರಾಘವೇಂದ್ರ( ಲಾರಿ ಮಾಲೀಕರು ಶೇಷಾದ್ರಿಪುರಂ) ಪವನ್ ಕುಮಾರ್ ಹಾಗೂ ರಾಷ್ಟ್ರಾಭಿಮಾನಿಗಳು ಮತ್ತು ಧರ್ಮ ಅಭಿಮಾನಿಗಳು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಸಭೆ

0

ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಬೆಂಗಳೂರಿನ ವಿಕಾಸಸೌಧದಲ್ಲಿ ಲೋಕೋಪಯೋಗಿ ಇಲಾಖೆಯ ವಿವಿಧ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದರು.

ಇಲಾಖೆಯ ಕಾಮಗಾರಿಗಳ ಗುಣಮಟ್ಟ, ಕಾರ್ಯಗತಿ ಹಾಗೂ ಜನಹಿತದ ಪರಿಣಾಮಗಳನ್ನು ವಿವರವಾಗಿ ಪರಿಶೀಲಿಸಿ, ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.

ಕೆಲವು ಕಾಮಗಾರಿಗಳ ನಿಧಾನಗತಿಗೆ ಕಾರಣವಾದ ಅಡೆತಡೆಗಳ ಕುರಿತು ವಿಮರ್ಶೆ ನಡೆಸಿ, ಅವುಗಳ ಶೀಘ್ರ ಪರಿಹಾರಕ್ಕಾಗಿ ಅಗತ್ಯ ಸಲಹೆಗಳನ್ನು ನೀಡಿದರು. ಪ್ರತಿ ಯೋಜನೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು

ಈ ಸಂದರ್ಭದಲ್ಲಿ ಎಲ್ಲಾ ಜಿಲ್ಲಾ ಇಲಾಖಾಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಲಾಯಿತು. ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

CM Siddharamaiah ಪ್ರಸಕ್ತ ಸಾಲಿನ ಕನಕಶ್ರೀ ಪ್ರಶಸ್ತಿ ವಿತರಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ‌

0

CM Siddharamaiah ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರವೀಂದ್ರ ಕಲಾ ಕ್ಷೇತ್ರದಲ್ಲಿ ಆಯೋಜಿಸಿದ್ದ “ಸಂತ ಶ್ರೇಷ್ಠ ಕನಕದಾಸ” ಜಯಂತಿಯನ್ನು ಉದ್ಘಾಟಿಸಿ, ಕನಕಶ್ರೀ ಪ್ರಶಸ್ತಿ ಪುರಸ್ಕಾರ ಮಾಡಿದರು.

ಕಾಗಿನೆಲೆ ಗುರುಪೀಠದ ಶ್ರೀ ಸಿದ್ದರಾಮಾನಂದ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಆಯೋಜಿಸಿದ್ದ ಜಯಂತಿಯಲ್ಲಿ ಮುಖ್ಯಮಂತ್ರಿಗಳು ಪ್ರಸಕ್ತ ಸಾಲಿನ ಕನಕಶ್ರೀ ಪ್ರಶಸ್ತಿಯನ್ನು ಚಂದ್ರಕಾಂತ ಬಿಜ್ಜರಗಿ ಅವರಿಗೆ, ಕನಕ ಗೌರವ ಪ್ರಶಸ್ತಿಯನ್ನು- ಡಾ.ಅಕ್ಕಮಹಾದೇವಿ ಹಾಗೂ ಕನಕ ಯುವ ಪುರಸ್ಕಾರವನ್ನು ಡಾ.ರವೀಂದ್ರ ಲಂಜವಾಡಕರ್ ಅವರಿಗೆ ನೀಡಿ ಗೌರವಿಸಿದರು.

CM Siddharamaiah ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ, ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ.ಚಿಕ್ಕಣ್ಣ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಚನ್ನಪ್ಪಕಟ್ಟಿ, ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಎಂ.ಈರಣ್ಣ, ಇಲಾಖೆ ಕಾರ್ಯದರ್ಶಿ ಕುಮಾರ್, ನಿರ್ದೇಶಕಿ‌ ಕೆ.ಎಂ.ಗಾಯಿತ್ರಿ ಹಾಗೂ ಇನ್ನಿತರರು ಅಧಿಕಾರಿಗಳು ಉಪಸ್ಥಿತರಿದ್ದರು.

University of Agricultural and Horticultural Sciences ಲ್ಯಾಬ್ ಟು ಲ್ಯಾಂಡ್ ಸರ್ಕಾರದ ಪರಿಕಲ್ಪನೆ. ವಿಜ್ಞಾನಿಗಳು, ರೈತರು ಸಂಪರ್ಕದಲ್ಲಿರಬೇಕು- ಸಚಿವ ಎನ್.ಚಲುವರಾಯ ಸ್ವಾಮಿ

0

University of Agricultural and Horticultural Sciences ಕಡಿಮೆ ವೆಚ್ಚದಲ್ಲಿ ಉತ್ತಮ ಇಳುವರಿ ಮತ್ತು ಆದಾಯ ನೀಡುವ ಬೆಳೆಗಳನ್ನು ನೀಡುವ ಉದ್ದೇಶದಿಂದ ಇಂತಹ ಕೃಷಿ ಮೇಳಗಳನ್ನು ಆಯೋಜಿಸಲಾಗಿದ್ದು, ಇದನ್ನು ಬಳಸಿಕೊಂಡು ರೈತರು ಉದ್ಯಮಿಗಳಾಗಿ ಬಲವರ್ಧನೆಗೊಳ್ಳಬೇಕೆಂದು ಕೃಷಿ ಸಚಿವರು ಹಾಗೂ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಎನ್.ಚೆಲುವರಾಯಸ್ವಾಮಿ ಕರೆ ನೀಡಿದರು.

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಕೃಷಿ ಮತ್ತು ಕೃಷಿ ಸಂಬAಧಿತ ಅಭಿವೃದ್ದಿ ಇಲಾಖೆಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ಬಿ.ಸಿ. ಟ್ರಸ್ಟ್ ಇವರ ಸಹಯೋಗದೊಂದಿಗೆ “ಸಹಕಾರ ಕೃಷಿಯಿಂದ ಸುಸ್ಥಿರ ಕೃಷಿ” ಶೀರ್ಷಿಕೆ ಅಡಿಯಲ್ಲಿ ಇಂದಿನಿಂದ ನ.09 ರವರೆಗೆ ಕೃಷಿ ಮಹಾವಿದ್ಯಾಲಯ ನವುಲೆ ಆವರಣದಲ್ಲಿ ಏರ್ಪಡಿಸಲಾಗಿರುವ ಕೃಷಿ-ತೋಟಗಾರಿಕೆ ಮೇಳ-2025 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅತ್ಯುತ್ತಮ ಕೃಷಿ ಮೇಳ ಮತ್ತು ಪ್ರದರ್ಶವನ್ನು ಏರ್ಪಡಿಸಲಾಗಿದ್ದು, ಭತ್ತದ ಮತ್ತು ಇತರೆ ಉತ್ತಮ ತಳಿಗಳನ್ನು ಬಿಡುಗಡೆಗೊಳಿಸಲಾಗಿದೆ. ರೈತರಿಗೆ ವಿಶ್ವವಿದ್ಯಾಲಯ ನೀಡಾಬೇಕಾಗಿರುವುದು ಇದನ್ನೇ. ಕೃಷಿಯನ್ನು ಉದ್ದಿಮೆಯಾಗಿ ಪರಿವರ್ತಿಸಿ ರೈತರಿಗೆ ಉತ್ತಮ ಆದಾಯ ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಸೌಲಭ್ಯಗಳು, ಕಾರ್ಯಕ್ರಮಗಳನ್ನು ನೀಡುತ್ತಿವೆ. ಕೆಪೆಕ್ ಸಂಸ್ಥೆಯು ರಾಜ್ಯದಲ್ಲಿ 5 ಸಾವಿರ ಘಟಕಗಳಿಗೆ ಸಬ್ಸಿಡಿ ನೀಡಿದೆ ಎಂದ ಅವರು ರೈತರಿಗೆ ಎಂಒ 4 ತಳಿಯನ್ನು ನೀಡಲು ಕೃಷಿ ಇಲಾಖೆ ಮತ್ತು ವಿಶ್ವವಿದ್ಯಾಲಯಗಳು ಬದ್ದವಾಗಿದೆ.

ಫಿಲಿಫೈನ್ಸ್ ದೇಶದಲ್ಲಿ ಸುಮಾರು 25 ರಿಂದ 30 ದಿನಗಳ ಕಾಲ ಮಳೆ ನಿರಂತರವಾಗಿ ಬಂದರೂ ಹಾನಿಯಾಗದಂತಹ ಭತ್ತದ ತಳಿಯನ್ನು ಕಂಡು ಹಿಡಿದಿದ್ದು, ಮುಂದಿನ ದಿನಗಳಲ್ಲಿ ನಮ್ಮ ವಿಜ್ಞಾನಿಗಳೂ ರೈತರಿಗೆ ಇಂತಹ ತಳಿಗಳನ್ನು ಸಂಶೋಧಿಸಿ ನೀಡುವರು ಎಂದು ಭರವಸೆ ವ್ಯಕ್ತಪಡಿಸಿದರು.

ರೋಗ ನಿರೋಧಕ ಶಕ್ತಿ ಹೆಚ್ಚಿಸುವ, ಕಡಿಮೆ ಖರ್ಚು ಮಾಡಿ ಹೆಚ್ಚು ಇಳುವರಿ ನೀಡುವ ಬೆಳೆಗಳನ್ನು ನೀಡುವ ತಳಿಗಳನ್ನು ನೀಡಲು ವಿಶ್ವವಿದ್ಯಾಲಯಗಳು ಶ್ರಮಿಸುತ್ತಿವೆ. ಲ್ಯಾಬ್ ಟು ಲ್ಯಾಂಡ್ ಎಂಬುದು ಸರ್ಕಾರದ ಪರಿಕಲ್ಪನೆಯಾಗಿದ್ದು ವಿಜ್ಞಾನಿಗಳು ಮತ್ತು ರೈತರು ಸಂಪರ್ಕದಲ್ಲಿರಬೇಕು ಎಂದರು.

ರಾಜ್ಯದಲ್ಲಿ ಬಿತ್ತನೆ ಬೀಜ ಮತ್ತು ಗೊಬ್ಬರಕ್ಕೆ ಅಭಾವ ಉಂಟಾಗಿಲ್ಲ. ಸಾಕಷ್ಟು ಪೂರೈಕೆ ಮಾಡಲಾಗಿದೆ. ಕೇಂದ್ರದಿAದ 3.5 ಲಕ್ಷ ಮೆ.ಟನ್ ಗೊಬ್ಬರ ಸರಬರಾಜು ಕೊರತೆಯಾದರೂ ರೈತರಿಗೆ ತೊಂದರೆಯಾಗದAತೆ ಕ್ರಮ ವಹಿಸಲಾಗಿದೆ. ಕೃಷಿ ಕೃಷಿ ಹೊಂಡ ಯಾರು ಎಷ್ಟು ಬೇಕಾದರೂ ಮಾಡಲು ಅವಕಾಶ ಕಲ್ಪಿಪಸಲಾಗಿದೆ. ಪ್ರಯೋಗಾಲಯ ಬಲವರ್ಧನೆ ಮಾಡುವ ಕೆಲಸ ಆಗುತ್ತಿದೆ. ರೈತರು ಮಣ್ಣು ಪರೀಕ್ಷೆ ಮಾಡಿಸಿ ಎಂದ ಅವರು ಇಡೀ ರಾಜ್ಯದಲ್ಲಿ ಕೃಷಿಯಲ್ಲಿ ಡಿಜಿಟಲ್ ತಂತ್ರಜ್ಞಾನ ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಮಲೆನಾಡಿನಲ್ಲಿ ಅಡಿಕೆ ಬೆಳೆ ಹೆಚ್ಚಾಗಿದೆ. 20 ರಿಂದ 27 ಲಕ್ಷ ಹೆ. ಬೆಳೆ ಹೆಚ್ಚಾಗಿದೆ. ಕೃಷಿಗೆ ಹೆಚ್ಚಿನ ಆದ್ಯತೆ ನೀಡಲು ಮೂಡಿಗೆರೆ, ದಾವಣಗೆರೆ, ಬೆಳಗಾವಿ, ಬೆಂಗಳೂರು ಮತ್ತು ಮಂಡ್ಯದಲ್ಲಿ ಕೃಷಿ ಕಾಲೇಜುಗಳನ್ನು ಪ್ರಾರಂಭಿಸಲಾಗಿದೆ. ಕಳೆದ ಬಾರಿ ಮಳೆಗೆ 13 ರಿಂದ 16 ಲಕ್ಷ ಹೆ. ಬೆಳೆ ನಷ್ಟ ಸಂಭವಿಸಿದ್ದು ಎನ್‌ಡಿಆರ್‌ಎಫ್ ಪರಿಹಾರದ ಜೊತೆಗೆ ರಾಜ್ಯ ಸರ್ಕಾರ ರೂ.8.5 ಸಾವಿರ ಪರಿಹಾರ ನೀಡುತ್ತಿದೆ ಎಂದ ಅವರು ರೈತರ ಆದಾಯ ಹೆಚ್ಚಿಸಲು ಸರ್ಕಾರ ಎಲ್ಲ ರೀತಿಯಿಂದ ಸಹಕರಿಸುತ್ತಿದ್ದು ರೈತರು ತಮ್ಮ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿ ಉತ್ತಮ ಬೆಲೆ ಪಡೆಯಬೇಕು ಎಂದು ತಿಳಿಸಿದರು.

University of Agricultural and Horticultural Sciences ವಿಧಾನ ಪರಿಷತ್ ಶಾಸಕರಾದ ಮಂಜುನಾಥ ಭಂಡಾರಿ ಹಾಗೂ ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಶಾರದಾ ಪೂರ್ಯನಾಯ್ಕ ಮಾತನಾಡಿದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಆರ್.ಸಿ.ಜಗದೀಶ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ 6 ಜಿಲ್ಲೆ ವಿದ್ಯಾರ್ಥಿಗಳು ಹಾಗೂ ರೈತರು ಬರಲಿದ್ದು, ರೈತರ ಅನುಕೂಲಕ್ಕಾಗಿ ಅನೇಕ ತಳಿಗಳನ್ನು ಬಿಡುಗಡೆ ಮಾಡಲಾಗಿದೆ, 13 ತಾಂತ್ರಿಕ ತಳಿಗಳನ್ನು ಬಿಡುಗಡೆ 205 ಸಂಶೋಧನೆಗಳನ್ನು ನಡೆಸಲಾಗಿದ್ದು 90 ತಳಿಗಳಲ್ಲಿ 737 ಪ್ರಯೋಗ ಮಾಡಿದ್ದೇವೆ. ವಿದ್ಯಾರ್ಥಿಗಳಿಗೆ ವಿದೇಶ ಪ್ರಯಾಣದ ಅವಕಾಶ ಮಾಡಿಕೊಡಲಾಗಿದ್ದು, ಪರೋಕ್ಷವಾಗಿ 4 ಲಕ್ಷ ರೈತರನ್ನು ತಲುಪುತ್ತಿದ್ದೇವೆ. ಇರುವಕ್ಕಿಯಲ್ಲಿ ರೂ.255 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಿದ್ದು ಇದಕ್ಕೆ ಅಗತ್ಯವಾದ ಪೀಠೋಪಕರಣಕ್ಕೆ ರೂ.10 ಕೋಟಿ ಅನುದಾನದ ಅವಶ್ಯಕತೆ ಇದೆ. ಹಾಗೂ 2013 ರಿಂದ ಇಲ್ಲಿಯವರೆಗೆ ವಿಶ್ವವಿದ್ಯಾಯದಲ್ಲಿ ಯಾವುದೇ ಹುದ್ದೆಗಳು ಭರ್ತಿಯಾಗಿಲ್ಲ, ಬೋಧಕ ಹಾಗೂ ಬೋಧಕೇತರ ಹುದ್ದೆಗಳನ್ನು ತುಂಬುವಂತೆ ಮನವಿ ಮಾಡಿದರು.

ಇದೇ ವೇಳೆ ಉತ್ತಮ ರೈತ ಮತ್ತು ರೈತ ಮಹಿಳೆ ಪ್ರಶಸ್ತಿಯನ್ನು ವಿತರಣೆ ಮಾಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಚೇತನ್ ಕೆ, ಕಾಡಾ ಅಧ್ಯಕ್ಷ ಡಾ.ಅಂಶುಮAತ್, ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಎಸ್.ಆರ್ ಮಜುನಾಥ ಗೌಡ, ಡಾ.ಹನುಮಂತಪ್ಪ, ಆಡಳಿತ ಮಂಡಳಿ ಸದಸ್ಯರಾದ ಬಿ.ಕೆ ಕುಮಾರಸ್ವಾಮಿ, ಜೆ ಜೆ ಕಾವೇರಪ್ಪ, ದೇವಿಕುಮಾರ್, ಹಾಪ್‌ಕಾಮ್ಸ್ ಅಧ್ಯಕ್ಷ ವಿಜಯಕುಮಾರ್, ರಾಮಕೃಷ್ಣ ಆಶ್ರಮದ ವಿನಯಾನಂದ ಸರಸ್ವತಿ ಸ್ವಾಮೀಜಿ, ವಿವಿಧ ಜಿಲ್ಲೆಯ ಕೃಷಿ ವಿಶ್ವವಿದ್ಯಾಲಯಗಳ ಕುಲಪತಿಗಳು, ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರುಗಳು, ವಿಶ್ವವಿದ್ಯಾಲಯದ ಅಧಿಕಾರಿ ವರ್ಗದವರು, ಬೋಧಕ, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ರೈತರು ಭಾಗವಹಿಸಿದ್ದರು.

Kanakadasa Jayanti ಕನಕದಾಸರ ಅರಮನೆ ಹುಡುಕಿದ ಸಂಶೋಧಕ ಡಾ.ಶಾಂತಾರಾಮ ಸಾಮಕ.ಲೇ: ದಿಲೀಪ್ ನಾಡಿಗ್.

0

Kanakadasa Jayanti ನಮ್ಮ ನಾಡು ಪ್ರಾಚೀನ ಕಾಲದಿಂದಲೂ ಋಷಿ-ಮುನಿಗಳ, ಸಾಧು-ಸಂತರ ನೆಲೆವೀಡು. ಕನಕದಾಸರು ಸಂತರು, ಹರಿದಾಸರು ಮತ್ತು ಕವಿಗಳು. ಈ ನಾಡಿನ ಆಧ್ಯಾತ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಮೌಲ್ಯಗಳ ಉನ್ನತಿಗೆ ಇವರ ಕೊಡುಗೆ ಅನುಪಮವಾದದ್ದು.

ಇವರು ತಮ್ಮ ಕೀರ್ತನೆಗಳಲ್ಲಿ ಅನನ್ಯ ಭಕ್ತಿಯಿಂದ ಭಗವಂತನನ್ನು ಕೊಂಡಾಡಿ ದಾಸಶ್ರೇಷ್ಠರೆಂದು ಕರೆಯಿಸಿಕೊಂಡರು. ಅಲ್ಲದೆ ಅವರು ಹರಿಭಕ್ತಿಸಾರ, ಮೋಹನ ತರಂಗಿಣಿ, ನಳ ಚರಿತ್ರೆ, ರಾಮಧಾನ್ಯಚರಿತೆಗಳಂತಹ ಉತ್ತಮ ಕೃತಿಗಳನ್ನು ರಚಿಸಿ ಕವಿಶ್ರೇಷ್ಠರೆಂದು ಪ್ರಸಿದ್ಧರಾದರು

. ಹುಟ್ಟಿನಿಂದ ಕೆಳವರ್ಗಕ್ಕೆ ಸೇರಿದ ಕನಕದಾಸರು ತಮ್ಮ ವಿಶಿಷ್ಟಗುಣಗಳಿಂದ, ಭಕ್ತಿ ವೈರಾಗ್ಯ ಕಾವ್ಯರಚನೆಯಿಂದ ವ್ಯಾಸರಾಯರ ಪ್ರಿಯಶಿಷ್ಯರಲ್ಲಿ ಒಬ್ಬರಾಗುವ ಯೋಗ್ಯತೆಯನ್ನು ಗಳಿಸಿಕೊಂಡು ದಾಸವರೇಣ್ಯರೆಂಬ ಗೌರವಕ್ಕೆ ಪಾತ್ರರಾದರು.

ಕನಕದಾಸರು ಜನಿಸಿದ್ದು ಬಾಡ ಎಂಬ ಗ್ರಾಮದಲ್ಲಿ. ನೆಲೆಸಿದ್ದು ಕಾಗಿನೆಲೆಯಲ್ಲಿ. ಆದಿಕೇಶವನ ಅಂಕಿತ. ಕುರುಬ ಜನಾಂಗಕ್ಕೆ ಸೇರಿದ ಇವರ ತಂದೆ ತಾಯಿ ಬೀರಪ್ಪ ಹಾಗೂ ಬಚ್ಚಮ್ಮ ವಿಭೂತಿ ಧರಿಸಿ ಶೈವಧರ್ಮವನ್ನು ಅನುಸರಿದರೂ ತಿರುಪತಿ ತಿಮ್ಮಪ್ಪನಲ್ಲಿ ಅಪಾರ ಭಕ್ತಿ. ತಿಮ್ಮಪ್ಪ ನಾಯಕನೆಂದೇ ಮಗನಿಗೆ ಹೆಸರಿಟ್ಟಿದ್ದರು.

ತಿಮ್ಮಪ್ಪ ನಾಯಕ ಕನಕನಾಯಕನಾದದ್ದು ಪವಾಡದ ರೀತಿಯಲ್ಲಿ. ತಮ್ಮ ಜೀವಿತದಲ್ಲಿಯೇ ವಿಜಯನಗರ ಸಾಮ್ರಾಜ್ಯದ ಏಳು-ಬೀಳುಗಳನ್ನು ಕಂಡವರು ಇವರು.

ಕನಕದಾಸರು ಸ್ವತಃ ಪಾಳೆಯಗಾರನಾಗಿ ಧನಸಂಪತ್ತನ್ನು, ವೈಭವವನ್ನು, ಅಧಿಕಾರವನ್ನು ಅನುಭವಿಸಿದರು.

ಆದರೆ ನಂತರದ ತಮ್ಮ ಜೀವನದಲ್ಲಿ ಇವುಗಳ ನಿಷ್ಪ್ರಯೋಜಕತೆಯನ್ನೂ, ಅನಿತ್ಯತೆಯನ್ನೂ ಮನಗಂಡು ಹರಿಗೆ ಶರಣಾಗಿ ಹರಿದಾಸರಾದರು.

Kanakadasa Jayanti ಕನಕದಾಸರ ಕೀರ್ತನೆಗಳು ಭಾವಪೂರ್ಣವಾಗಿವೆ. ಈ ಕೀರ್ತನೆಗಳ ಮೂಲಕ ಭಗವಂತನಲ್ಲಿ ಭಕ್ತಿಯನ್ನು ಸಾರುವುದರ ಜೊತೆಗೆ ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ. ಕೆಲವು ಅಸಾಂಪ್ರದಾಯಿಕ ಆಚರಣೆಗಳನ್ನು ಒರೆಗಲ್ಲಿಗೆ ಹಚ್ಚಿ ಪ್ರಶ್ನಿಸಿದ್ದಾರೆ. ಸ್ವಸ್ಥಸಮಾಜದ ನಿರ್ಮಾಣಕ್ಕಾಗಿ ಪ್ರತಿಯೊಬ್ಬರಿಗೂ ಮಾನಸಿಕ ನೆಮ್ಮದಿಯ ಅವಶ್ಯಕತೆ ಇದೆ. ಅದು ಭಗವದ್ಭಕ್ತಿಯಿಂದ ಲಭಿಸುವುದು.

ನಾಸ್ತಿಕತೆಯು ಮನುಷ್ಯನಲ್ಲಿ ತಲ್ಲಣವನ್ನು, ನಿರಾಸೆಯನ್ನು, ಭ್ರಮೆಯನ್ನು, ಹತಾಶೆಯನ್ನು ಉಂಟು ಮಾಡುತ್ತದೆ. ದೇವರಲ್ಲಿ ಅನನ್ಯ ಭಕ್ತಿಯನ್ನು ಸಾರುವ- ’ತಲ್ಲಣಿಸದಿರು ಕಂಡ್ಯ ತಾಳು ಮನವೆ, ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ’, ಮಂತಾದ ಅನೇಕ ಕೀರ್ತನೆಗಳನ್ನು ಕಾಣಬಹುದು. ಆದರೆ ಡಾಂಬಿಕ ಭಕ್ತಿಯನ್ನು ಅವರು ಎಂದೂ ಒಪ್ಪುತ್ತಿರಲಿಲ್ಲ. ‘ಜಪವಮಾಡಿದರೇನು ತಪವಮಾಡಿದರೇನು, ವಿಪರೀತ ಕಪಟಗುಣಕಲುಷವಿದ್ದವರು’ ಎಂದು ದೂಷಿಸಿದ್ದಾರೆ.
ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ.
ನೀ ದೇಹದೊಳಗೋ, ನಿನ್ನೊಳು ದೇಹವೋ?
ಗಂಧದಲಿ ಕುಸುಮವೋ, ಕುಸುಮದಲಿ ಗಂಧವೋ, ಗಂಧ, ಕುಸುಮಗಳೆರೆಡೂ ಆಘ್ರಾಣದೊಳಗೋ,
ಅಸಮಭವ “ಕಾಗಿನೆಲೆಯಾದಿಕೇಶವ” ಉಸುರಳವೆಲ್ಲಾ ನಿನ್ನೊಳಗೋ.

ಹಲವು ಜೀವವ ಒಂದೆಲೆ ನುಂಗಿತು, ಒಂದೆಲೆಯು ನುಂಗಿತು, ಗಿಡವ ನುಂಗಿತು, ಗಿಡದೊಡ ತೊಟ್ಟ ನುಂಗಿತು, ಗಿಡದ ತಾಯಿ, ತಂದೆಯ ನುಂಗಿತು, ಬಡಗ ಬಲ್ಲರೇ ಹೇಳಿ ಕನಕದಾಸ, ಕಾಗಿನೆಲೆಯಾದಿಕೇಶವ ಬಲ್ಲನೀ ಬೆಡಗ.

ನೂರು ಕನ್ಯಾದಾನವನು, ಭಾಗೀರಥಿ ಸ್ನಾನವನು, ಮಿಗೆ ಕೈಯಾರೆ ಗೋವ್ಗಳ ಪ್ರೇಮದಿಂದಲಿ ಭೂಸುರರಿಗೊಲಿದು ಊರುಗಳ ನೂರು ಅಗ್ರಹಾರಗಳ ಧಾರೆಯೆರೆದೆತ್ತಂತೆ ಫಲ‌ ಕೈ ಸೇರುವುದು ಹರಿಭಕ್ತಿಸಾರದ ಕಥೆಯ ಕೇಳ್ವವರಿಗೆ,

ಮೇರುಮಂದರನಿಭಸುವರ್ಣವ ವಾರಿಮಧ್ಯದೊಳಿರುವ ಅವನಿಯ ನಾರಿಯರ ಗಾಯತ್ರಿ ಪಶುಗಳನಿತ್ತ ಫಲಹವುದು ಧಾರುಣೀಯೊಳೀ ಹರಿಭಕ್ತಿಸಾರವನಾರು ಓದುವವರನುದಿನ ಚಾರು ವರಗಳನಿತ್ತು ರಕ್ಷಿಪನಾದಿಕೇಶವನು

ಲೋಕದೊಳಗತ್ಯಧಿಕವೆನಿಸುವ ಕಾಗಿನೆಲೆಸಿರಿಯಾದಿಕೇಶವ ತಾ ಕೃಪೆಯೊಳಗೆ ನುಡಿಸಿದನು ಈ ಹರಿಭಕ್ತಿಸಾರವನು, ಜೋಕೆಯಲಿ ಬರೆದೋದಿ ಕೇಳ್ವರ ನಾ ಕುಲದಿ‌ ಮಾಧವನು ಕರುಣಿಪ ಶ್ರೀ ಕಮಲವಲ್ಲಭನು ಮಿಗೆ ಬಡದಾದಿಕೇಶವನು, ಬಡದಾದಿ‌ಕೇಶವನು.

ಕನಕದಾಸ ಜಯಂತಿಯ ಶುಭಾಶಯ.

ಕನಕದಾಸರಂತಹ ಮಹಾಮಹಿಮರ ಜನ್ಮನೆಲೆಯನ್ನು ಸಂಶೋಧಿಸಿ ಜಗತ್ತಿಗೆ ಪರಿಚಯಿಸಿದ್ದು ಇತಿಹಾಸ ಸಂಶೋಧಕರೂ, ಅಧ್ಯಯನಕಾರರು, ಶಿವಮೊಗ್ಗದವರೇ ಆದ ಶ್ರೀಯುತ ಡಾ.‌ಶಾಂತಾರಾಮ ಸಾಮಕರು, ಮೂರುವರ್ಷಗಳ ಕಾಲ ಅಮೂಲಾಗ್ರವಾಗಿ ಬಾಡದ ನೆಲೆಯಲ್ಲಿ ಕನಕದಾಸರ ಅರಮನೆಯನ್ನು ನೆಲದಾಳದಿಂದ ಹುಡುಕಿ ತೆಗೆದವರು ಜೊತೆಗೆ ಬಾರ್ಕೂರಿನ ರಾಜ್ಯಪಾಲರ ಅರಮನೆಯನ್ನೂ, ಹಿರಿಯ ಸಂಶೋಧಕರ ಜೊತೆಗೆ ತಾಳಗುಂದದ ಉತ್ಖನನದಲ್ಲೂ ಪಾತ್ರವಹಿಸಿದವರು. ಬಾಡದಲ್ಲಿ ಕನಕದಾಸರ ಅರಮನೆಯನ್ನು ಶೋಧಿಸುವಾಗ ಸ್ಥಳೀಯರಿಂದ ಹಲವಾರು ತೊಂದರೆಗಳನ್ನೂ ಅನುಭವಿಸಿದ ಕೆಟ್ಟ ಅನುಭವವಂತೂ ಹೇಳತೀರದು.

ಇಂತಹ ಸಾಧಕರನ್ನು ಕರ್ನಾಟಕ ಸರ್ಕಾರವಿರಲಿ, ಕನಕಪೀಠವೂ ಗೌರವಿಸದಿರುವುದು ಇತಿಹಾಸಕ್ಕೇ ಮಾಡಿದ ಅವಮಾನವೆಂದೇ ಹೇಳಬೇಕು.‌ ಸ್ಥಳೀಯ ಕನ್ನಡ ಸಂಘಟನೆ, ಸಂಸ್ಥೆಗಳೂ ಸಹ ಇದರಿಂದ ಹೊರತಾಗಿಲ್ಲ.‌ ಆದರೆ ಕನಕದಾಸರಂತಹ ಮಹಾಮಹಿಮ ದಾಸಶ್ರೇಷ್ಠರ ಜನ್ಮನೆಲೆಯನ್ನು ಜಗತ್ತಿನ ಎದುರಿನಲ್ಲಿ ತೆರೆದಿಟ್ಟ ಆತ್ಮಸಂತೋಷವೂ, ಅಭಿಮಾನವೂ ಇವರಿಗಿದೆ.

ಇದೀಗ ಮಲೆನಾಡು ಇತಿಹಾಸ ಸಂಶೋಧನೆ ಮತ್ತು ಅಧ್ಯಯನ ವೇದಿಕೆ (ನೋಂ) ಯ ತಂಡದೊಂದಿಗೆ ಇನ್ನೋರ್ವ ದಾಸಶ್ರೇಷ್ಠ, ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹರೆಂದೂ, ಐದು ಲಕ್ಷ ಕೀರ್ತನೆಗಳನ್ನು, ಉಗಾಭೋಗಗಳನ್ನೂ, ಮುಂಡಿಗೆಗಳನ್ನೂ ರಚಿಸಿದ್ದ ಮಲೆನಾಡಿನವರಾದ ಅದರಲ್ಲೂ ವಿಜಯನಗರದ ಅರಸರ ಕಾಲದಲ್ಲಿ ತೀರ್ಥಹಳ್ಳಿ(ತೀರ್ಥರಾಜಪುರ ಅಗ್ರಹಾರ)ಯಆರಗ ಹದಿನೆಂಟು ಕಂಪಣವೆಂದೇ ಹೆಸರಾಗಿದ್ದ ಆರಗದ ನವಕೋಟಿ ನಾರಾಯಣರೆಂದೇ ಬಿರುದಾಂಕತರಾಗಿದ್ದು, ಭಗವಂತನ ದರ್ಶನ ದಿಂದ ವೈರಾಗ್ಯಭರಿತರಾಗಿ ತಮ್ಮೆಲ್ಲಾ ಆಸ್ತಿಯನ್ನು ದಾನಮಾಡಿ ಆದದ್ದೆಲ್ಲಾ ಒಳಿತೇ ಆಯಿತು ಎಂದು ಭಕ್ತಿ ಚಳುವಳಿಗೆ, ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಮುನ್ನುಡಿ ಬರೆದ ಶ್ರೀ ಪುರಂದರ ದಾಸರ ಜನ್ಮ ನೆಲೆಯ ಶೋಧಕ್ಕೆ ತಮ್ಮ ಶಿಷ್ಯವೃಂದದೊಡನೆ ಸಜ್ಜಾಗಿದ್ದಾರೆ. ಇವರ ಸಂಶೋಧನೆಗೆ ದಾಸವರೇಣ್ಯರ, ಭಗವಂತನ ಆಶೀರ್ವಾದ ವಿರಲಿ, ಪುರಂದರದಾಸರ ಜನ್ಮನೆಲೆಯು ಐತಿಹಾಸಿ ದಾಖಲೆಯಿಂದ ಜಗತ್ತಿಗೆ ಪ್ರಚಾರವಾಗೆಲೆಂದು ಆಶಿಸೋಣ.

ಲೇಖನ:
ದಿಲೀಪ್ ನಾಡಿಗ್
ಕಾರ್ಯದರ್ಶಿ
ಮಲೆನಾಡು ಇತಿಹಾಸ ಸಂಶೋಧನಾ ಮತ್ತು ಅಧ್ಯಯನ ವೇದಿಕೆ(ನೋಂ), ಶಿವಮೊಗ್ಗ.
6361124316

ಮಕ್ಕಳ ದತ್ತು ಪ್ರಕ್ರಿಯೆ ಪ್ರೋತ್ಸಾಹಿಸಲು ಕೃಷಿಮೇಳದಲ್ಲಿ ಮಾಹಿತಿ ಮಳಿಗೆ

0

ಪ್ರತಿಯೊಂದು ಮಗುವೂ ಒಂದು ಕುಟುಂಬ ಅಥವಾ ಕುಟುಂಬದಂತಹ ವಾತಾವರಣಕ್ಕೆ ಅರ್ಹವಾಗಿದೆ ಎಂಬ ನಂಬಿಕೆಯಲ್ಲಿ ನೆಲೆಗೊಂಡಿರುವ ಈ ವರ್ಷದ ಅಭಿಯಾನವು, ವಿಶೇಷ ಅಗತ್ಯವಿರುವ ಮಕ್ಕಳ ಸಾಂಸ್ಥಿಕವಲ್ಲದ ಪುನರ್ವಸತಿಯನ್ನು ಉತ್ತೇಜಿಸುವಲ್ಲಿ ಎಲ್ಲರೂ ಸಹಯೋಗದಿಂದ ಕೆಲಸ ಮಾಡಲು ಕರೆ ನೀಡುತ್ತದೆ. ಈ ಮಕ್ಕಳು ಪ್ರೀತಿ, ಆರೈಕೆ ಮತ್ತು ಬೆಳವಣಿಗೆಯ ಅವಕಾಶಗಳಿಗೆ ಕಡಿಮೆ ಅರ್ಹರಲ್ಲ. ಒಂದು ಕುಟುಂಬವು ಮಗುವಿನ ಸಮಗ್ರ ಬೆಳವಣಿಗೆಗೆ ಅತ್ಯಂತ ಅನುಕೂಲಕರವಾದ ಪೋಷಣೆಯ ವಾತಾವರಣವನ್ನು ಒದಗಿಸುತ್ತದೆ. ಇದು ವಿಶೇಷ ಅಗತ್ಯವಿರುವ ಮಕ್ಕಳು ಸೇರಿದಂತೆ ಎಲ್ಲಾ ಮಕ್ಕಳಿಗೆ ಅವಶ್ಯಕವಾಗಿದೆ ಹಾಗೂ ಹೆಚ್ಚು ಅಂತರ್ಗತ, ಸಹಾನುಭೂತಿ ಮತ್ತು ಸ್ಪಂದಿಸುವ ಈ ದತ್ತು ಪರಿಸರ ವ್ಯವಸ್ಥೆಯನ್ನು ಕಾನೂನು ರೀತಿಯಲ್ಲಿ ಭದ್ರಪಡಿಸಲು ದಿನಾಂಕ: 07-11-2025 ರಿಂದ 10.11.2025 ವರೆಗೆ ಶಿವಮೊಗ್ಗ ಜಿಲ್ಲೆಯ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿರುವ ಕೃಷಿ ಮತ್ತು ತೋಟಗಾರಿಕಾ ಮೇಳದಲ್ಲಿ ರಾಷ್ಟ್ರೀಯ ದತ್ತು ಮಾಸಾಚರಣೆ ಪ್ರಯುಕ್ತ ಸಾರ್ವಜನಿಕರಿಗೆ ದತ್ತು ಪ್ರಕ್ರಿಯೆಯನ್ನು ಪ್ರೋತ್ಸಾಹಿಸಲು ಮತ್ತು ಪರಿತೆಕ್ತ ಮಕ್ಕಳು ಕಂಡು ಬಂದಲ್ಲಿ 1098 ಮಾಹಿತಿ ನೀಡಲು ಸ್ಟಾಲ್ ಅಳವಡಿಸಲಾಗುತ್ತದೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಶಿವಮೊಗ್ಗ ಜಿಲ್ಲೆ