Monday, May 11, 2026
Monday, May 11, 2026

B. S. Yediyurappa ಅಭಿಮಾನೋತ್ಸವ ಆಚರಿಸಿದ ಅಭಿಮಾನಿಗಳಿಗೆ ಹಿರಿಯ ರಾಜಕಾರಣಿ “ಬಿಎಸ್ ವೈ” ಅವರಿಂದ ಧನ್ಯತೆ ಅರ್ಪಣೆ

Date:

B. S. Yediyurappa ಜನರ ಪ್ರೀತಿ, ಅಭಿಮಾನಿಗಳಿಂದ ಹೃದಯ ತುಂಬಿದೆ. ಕಳೆದ ಐದು ದಶಕಗಳ ನನ್ನ ಪ್ರಾಮಾಣಿಕ ಹೋರಾಟ, ಜನಸೇವೆಗಳನ್ನು ಗಮನಿಸಿ, ಅಭಿನಂದಿಸಿ, ಆಶೀರ್ವದಿಸಲು ಬೃಹತ್ ಅಭಿನಂದನೋತ್ಸವವನ್ನು ಅರ್ಥಪೂರ್ಣವಾಗಿ ಆಯೋಜಿಸಿ, ನನ್ನ ನಿರೀಕ್ಷೆಯನ್ನೂ ಮೀರಿ ಯಶಸ್ವಿಗೊಳಿಸಿದ ಲಕ್ಷ ಲಕ್ಷ ಅಭಿಮಾನಿಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪನವರು ಹೇಳಿದ್ದಾರೆ.

ತಮ್ಮ ಬಿಡುವಿಲ್ಲದ ಕಾರ್ಯಗಳ ಒತ್ತಡದ ನಡುವೆಯೂ ಆಗಮಿಸಿ ಶುಭ ಹಾರೈಸಿದ ಕೇಂದ್ರ ಗೃಹ ಸಚಿವ ಶ್ರೀ Amit Shah ಜೀ ಅವರಿಗೆ, ನನ್ನನ್ನು ಆಶೀರ್ವದಿಸಿ ಹರಸಲು ದಿವ್ಯ ಸಾನ್ನಿಧ್ಯ ವಹಿಸಿದ್ದ ನಾಡಿನ ಎಲ್ಲ ಪರಮಪೂಜ್ಯ ಸ್ವಾಮೀಜಿಗಳಿಗೆ, ಹರ ಗುರು ಚರ ಮೂರ್ತಿಗಳಿಗೆ, ಪಕ್ಷದ ಎಲ್ಲಾ ನಾಯಕರಿಗೆ, ಜನಪ್ರತಿನಿಧಿಗಳಿಗೆ, ಸಂಘಟಕರಿಗೆ ಹಾಗೂ ಎಲ್ಲಾ ನಮ್ಮ ನಿಷ್ಠಾವಂತ ಕಾರ್ಯಕರ್ತರಿಗೆ ನಾನು ಸದಾ ಆಭಾರಿಯಾಗಿದ್ದೇನೆ ಎಂದಿದ್ದಾರೆ.

ನನ್ನಲ್ಲಿ ಶಕ್ತಿ ಇರುವವರೆಗೂ, ನನ್ನ ಕೊನೆಯ ಉಸಿರಿರುವವರೆಗೂ, ಪಕ್ಷ ಸಂಘಟನೆಗೆ, ನಾಡು ನುಡಿಯ, ನಾಡಿನ ಜನರ ಸೇವೆಗೆ ನನ್ನ ಪ್ರಾಮಾಣಿಕ ಪ್ರಯತ್ನಗಳು ಮುಂದುವರಿಯಲಿದೆ. ನಿಮ್ಮೆಲ್ಲರ ಪ್ರೀತಿ, ಅಭಿಮಾನ, ಬೆಂಬಲ, ಹಾರೈಕೆ ಆಶೀರ್ವಾದಗಳೇ ನನ್ನ ಶಕ್ತಿ ಎಂದು ತಿಳಿಸಿದ್ದಾರೆ.

B. S. Yediyurappa ಮತ್ತೊಮ್ಮೆ ಪ್ರತಿಯೊಬ್ಬರಿಗೂ ನನ್ನ ಅಭಿವಂದನೆಗಳು. ಕಾರ್ಯಕ್ರಮಕ್ಕೆ ಆಗಮಿಸಿದ ಪ್ರತಿಯೊಬ್ಬರೂ ಸುರಕ್ಷಿತವಾಗಿ ತಮ್ಮ ತಮ್ಮ ಊರು, ಮನೆಗಳಿಗೆ ತಲುಪಲಿ, ಯಾರಿಗೂ ಏನೂ ತೊಂದರೆಯಾಗದಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Karnataka Sanga ಕವಿ ಜಿಎಸ್ಎಸ್ ಕನ್ನಡದ ಸಾಂಸ್ಕೃತಿಕ ಪ್ರಜ್ಞೆ, ರಾಯಭಾರಿ- ಡಾ.ಕಿರಣ್ ದೇಸಾಯಿ

Karnataka Sanga ಕನ್ನಡ ಕಾವ್ಯ ಪರಂಪರೆಯಲ್ಲಿ ಕವಿಗೆ ಸಮಾನ ಹೃದಯವುಳ್ಳವರೆಲ್ಲರೂ ಸಹೃದಯರು...

D.K. Sivakumar ಡಿ.ಕೆ ಸುಧಾಕರ್ ನಿಧನ: ಡೀಸಿಎಂ ಡಿ.ಕೆ.ಶಿವಕುಮಾರ್ ಸಂತಾಪ

D.K. Sivakumar ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ನಮ್ಮ ಸಂಪುಟ ಸಹೋದ್ಯೋಗಿ,...