ಜಾಗತಿಕ ಸವಾಲಿನ ಸಂದರ್ಭದಲ್ಲಿ ದೇಶದ ಹಿತರಕ್ಷಣೆ ಮತ್ತು ರಾಷ್ಟ್ರದ ಸಶಕ್ತತೆ ದೃಷ್ಟಿಯಿಂದ ಆದರಣೀಯ ಪ್ರಧಾನಿ ಶ್ರೀ ನರೇಂದ್ರಮೋದಿಜೀ ಸಮಸ್ತ ಭಾರತೀಯರಲ್ಲಿ 7 ಪ್ರಮುಖ ಮನವಿ ಮಾಡಿಕೊಂಡಿದ್ದಾರೆ. ಭಾರತಕ್ಕಾಗಿ ಭಾರತೀಯರೆಲ್ಲರೂ ಒಂದಾಗಿ ಮುನ್ನಡೆಯುವ ಸಂದರ್ಭ ಮತ್ತೆ ಎದುರಾಗಿದೆ.
ಸಾಧ್ಯವಾದಲ್ಲೆಲ್ಲಾ ಮನೆಯಿಂದಲೇ ಕೆಲಸ ಮಾಡಲು ಆದ್ಯತೆ ನೀಡಿ, ಇಂಧನ ಬಳಕೆ ಕಡಿಮೆ ಮಾಡೋಣ, ಒಂದು ವರ್ಷದ ಕಾಲ ವಿದೇಶ ಪ್ರಯಾಣ ಬೇಡ, ಸ್ವದೇಶಿ ಉತ್ಪನ್ನಗಳನ್ನೇ ಬಳಸೋಣ, ಅಡುಗೆ ಎಣ್ಣೆಯ ಬಳಕೆಯನ್ನು ಕಡಿಮೆ ಮಾಡಿ, ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳೋಣ ಮತ್ತು ಒಂದು ವರ್ಷದವರೆಗೆ ಚಿನ್ನದ ಖರೀದಿ ಆದಷ್ಟು ತಪ್ಪಿಸೋಣ! ನಾಗರಿಕರ ಸಾಮೂಹಿಕ ಜವಾಬ್ದಾರಿಯುತ ನಡವಳಿಕೆ, ಜಾಗತಿಕ ಸವಾಲಿನ ಈ ಸಂದರ್ಭಗಳಲ್ಲಿ ಭಾರತವನ್ನು ಹೆಚ್ಚು ಬಲಿಷ್ಠ ಮತ್ತು ಹೆಚ್ಚು ಸ್ವಾವಲಂಬಿಯನ್ನಾಗಿಸಲಿದೆ. ಭಾರತಕ್ಕಾಗಿ ಒಂದಾಗಿ ನಾವೆಲ್ಲರೂ ಮುನ್ನಡೆಯೋಣ!
