World Environment Day ವಿಶ್ವ ಪರಿಸರ ದಿನದ ಪ್ರಯುಕ್ತ ಜೆಸಿಐ ಸಮೃದ್ಧಿ ಘಟಕದ ಅಧ್ಯಕ್ಷರಾದ ಜೆ ಎಫ್ ಡಿ ಜೆಸಿ ನರಸಿಂಹಮೂರ್ತಿ ಹಾಗೂ ಜೆಸಿ ರಾಜಣ್ಣ ರವರ ಅಮೃತ ಹಸ್ತದಿಂದ ಗಿಡ ನೆಡುವ ಕಾರ್ಯಕ್ರಮ ನೆರವೇರಿತು.
ಈ ಸಂದರ್ಭದಲ್ಲಿ ಜೆ ಸಿ ರಾಜಣ್ಣ ಮಾತನಾಡಿ, ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಕಾಪಾಡಿಕೊಳ್ಳುವ ಹೊಣೆ ನಮ್ಮದು. ಪ್ರತಿಯೊಬ್ಬರು ಕನಿಷ್ಠ ಐದು ಗಿಡಗಳನ್ನು ನೆಟ್ಟು ಪೋಷಿಸಬೇಕು ಎಂದರು.
ಅಧ್ಯಕ್ಷರಾದ ಜೆಸಿ ನರಸಿಂಹಮೂರ್ತಿ ಮಾತನಾಡಿ, ಗಿಡಮರಗಳನ್ನು ನಾವು ರಕ್ಷಿಸಿದಲ್ಲಿ ಮುಂದೊಂದು ದಿನ ಈ ಗಿಡ ಮರಗಳಾಗಿ ಅವು ನಮ್ಮನ್ನು ರಕ್ಷಿಸುತ್ತವೆ ಎಂದು ಹಿತನುಡಿದರು.
World Environment Day ಸುಮಾರು 50 ಗಿಡಗಳನ್ನು ನೆಟ್ಟು ಉಳಿದ 450 ಗಿಡಗಳನ್ನು ನೆಡಲು ಕೊಡಿಸಲಾಯಿತು.
ಸಮೃದ್ಧಿ ಘಟಕದ ಕಾರ್ಯದರ್ಶಿ ಜೆಸಿ ಗಾಯತ್ರಿ ಯಲ್ಲಪ್ಪ ಗೌಡ, ಪದಾಧಿಕಾರಿಗಳಾದ ಜೆಸಿ ನರಸಮ್ಮ, ಜೆಸಿ ಶಶಿಕಲಾ, ಜೆಸಿ ಪುಷ್ಪ, ಜೆಸಿ ಕಿರಣ್ ಕುಮಾರ್, ಜೆಸಿ ಮೋಹನ್ ಕುಮಾರ್, ಜೆಸಿ ಸರಳ ವಾಸನ್, ಜೆಸಿ ನವೀನ್ ಗೌಡ , ಜೆಸಿ ಅನ್ನಪೂರ್ಣ, ಜೆಸಿ ಮಂಜುಳ, ಜೆಸಿ ಸುಮಾ ಮತ್ತು ಬಿ.ಎಂ.ಯಲ್ಲಪ್ಪ ಗೌಡ, ಜೆಸಿ ರಂಜಿತಾ, ಲಕ್ಷ್ಮಮ್ಮ ಇವರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.