Friday, May 15, 2026
Friday, May 15, 2026
Home Blog Page 88

Industrial and Infrastructure Development Corporation ಆರೇಳು ತಿಂಗಳಿನಲ್ಲಿ ಶಿವಮೊಗ್ಗಕ್ಕೆ ರಾತ್ರಿ ವಿಮಾನ ಸಂಚಾರಕ್ಕೆ ಕ್ರಮ- ನಂಜಯ್ಯನ ಮಠ್

0

Industrial and Infrastructure Development Corporation ಮುಂದಿನ ಆರೇಳು ತಿಂಗಳ ಅವಧಿಯೊಳಗಾಗಿ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ರಾತ್ರಿ ವೇಳೆಯಲ್ಲಿ ವಿಮಾನಗಳು ಏರಿಳಿಯಲು ಅನುಕೂಲವಾಗುವಂತೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಫೆಬ್ರವರಿ ಮಾಸಾಂತ್ಯದೊಳಗಾಗಿ ಸುಮಾರು 6 ಕೋಟಿ ರೂ.ಗಳ ವೆಚ್ಚದ ಕಾಮಗಾರಿಗಳು ಆರಂಭಗೊಳ್ಳಲಿವೆ ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅ‍ಧ್ಯಕ್ಷ ನಂಜಯ್ಯನಮಠ್‌ ಅವರು ಹೇಳಿದರು.
ಅವರು ಶಿವಮೊಗ್ಗ ನಗರದ ಹೊರವಲಯದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ವಿವರ ನೀಡಿ ಮಾತನಾಡುತ್ತಿದ್ದರು. ಈ ಹಿಂದೆ ನವೀಕರಣಗೊಳ್ಳದೆ ಬಾಕಿ ಉಳಿದಿದ್ದ ವಿಮಾನ ನಿಲ್ದಾಣದ ಪರವಾನಗಿ ನವೀಕರಣದ ಸಮಸ್ಯೆಯನ್ನು ಇತ್ಯರ್ಥಗೊಳಿಸಿ, ಆಡಳಿತಾತ್ಮಕ ಅಡತಡೆಗಳನ್ನು ನಿವಾರಿಸಿಕೊಳ್ಳಲಾಗಿದೆ. ಅಲ್ಲದೇ ಬಾಕಿ ಇದ್ದ 22.00ಲಕ್ಷ ರೂ. ದಂಡ ಪಾವತಿಸಲಾಗಿದ್ದು, ಮುಂದಿನ ಮೂರು ವರ್ಷಗಳ ಅವಧಿಗೆ ಪರವಾನಗಿ ನವೀಕರಿಸುವ ಅಗತ್ಯವಿರುವುದಿಲ್ಲ ಎಂದವರು ತಿಳಿಸಿದರು.
ಹವಾಮಾನ ವೈಪರೀತ್ಯ ಹಾಗೂ ಮತ್ತಿತರ ಹಲವು ಕಾರಣಗಳಿಗಾಗಿ ಇಳಿಯಬೇಕಾದ ವಿಮಾನಗಳು ಇಳಿಯದೇ ಹಿಂದಿರುಗಿ ಹೋಗುವುದನ್ನು ನಿಯಂತ್ರಿಸಲು, ರಾತ್ರಿ ಸಂಚಾರಕ್ಕೆ ಮತ್ತು ಸರಕು ಸಾಗಾಣಿಕೆಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಅಗತ್ಯವಾಗಿರುವ ದಿಕ್ಸೂಚಿ ಯಾಂತ್ರಿಕ ವ್ಯವಸ್ಥೆ (DBOR)ಗೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಅಲ್ಲದೇ ವಿದ್ಯುತ್‌ ಸಂಪರ್ಕ ವ್ಯವಸ್ಥೆಯೂ ಪೂರ್ಣಗೊಂಡಿದೆ ಎಂದರು.
ನೈಟ್‌ಲ್ಯಾಂಡಿಂಗ್‌ ವ್ಯವಸ್ಥೆ ಕಲ್ಪಿಸಲು ನಿಯಮಾನುಸಾರ ಸದರಿ ಪ್ರದೇಶದಲ್ಲಿನ ಮಣ್ಣಿನ ಗುಣಮಟ್ಟದ ಪರೀಕ್ಷೆಗಾಗಿ ರವಾನಿಸಲಾಗಿದ್ದು, ಇನ್ನೊಂದು ವಾರದಲ್ಲಿ ವರದಿ ಬರುವ ನಿರೀಕ್ಷೆ ಹೊಂದಲಾಗಿದೆ ಎಂದ ಅವರು, ಈ ಎಲ್ಲಾ ಕಾಮಗಾರಿಗಳ ಸಕಾಲಿಕ ಪರಿಶೀಲನೆಗಾಗಿ ತಾವು ಖುದ್ದಾಗಿ ಆಗಮಿಸಿ, ಪರಿಶೀಲಿಸಿ ಸೂಕ್ತ ಮಾರ್ಗದರ್ಶನ ನೀಡುವುದಾಗಿ ಅವರು ತಿಳಿಸಿದರು.
ಉಡಾನ್ ಯೋಜನೆ ಮುಂದುವರಿಸಲು ಕೇಂದ್ರಕ್ಕೆ ಮನವಿ : ಶಿವಮೊಗ್ಗದಿಂದ ಬೆಂಗಳೂರು, ಚೆನ್ನೈ, ಹೈದ್ರಾಬಾದ್‌, ಗೋವಾ ಸೇರಿದಂತೆ ಹಲವು ಪ್ರದೇಶಗಳಿಗೆ ನಿರಂತರವಾಗಿ ಪ್ರಯಾಣಿಸುತ್ತಿರುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಕೇಂದ್ರ ಪುರಸ್ಕೃತ ಹಾಗೂ ವಿಮಾನ ಪ್ರಯಾಣಕ್ಕೆ ರಿಯಾಯಿತಿ ಒದಗಿಸುವ ‘ಉಡಾನ್’ ಯೋಜನೆಯ ಅವಧಿ ಶೀ‍ಘ್ರದಲ್ಲಿ ಮುಕ್ತಾಯಗೊಳ್ಳಲಿದೆ. ಆದ್ದರಿಂದ ಪ್ರಯಾಣಿಕರಿಗೆ ಹೆಚ್ಚಿನ ಪ್ರಯಾಣದರ ಪಾವತಿಸುವ ಹೊರೆ ಬೀಳದಂತೆ ನೋಡಿಕೊಳ್ಳಲು ಸ್ಥಳೀಯ ಸಂಸದರು ಹಾಗೂ ಜನಪ್ರತಿನಿಧಿಗಳ ಸಹಕಾರವನ್ನು ಪಡೆದು, ಸದರಿ ಯೋಜನೆಯನ್ನು ಮುಂದುವರೆಸಲು ಕೇಂದ್ರ ವಿಮಾನಯಾನ ಸಚಿವರಿಗೆ ಮನವಿ ಮಾಡಿಕೊಳ್ಳಲಾಗುವುದು ಎಂದವರು ನುಡಿದರು.
Industrial and Infrastructure Development Corporation ವಿಮಾನ ನಿಲ್ದಾಣದಲ್ಲಿ ಈಗಾಗಲೇ ಕಾಯ್ದಿರಿಸಲಾಗಿರುವ 17ಎಕರೆ ನಿವೇಶನದಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಬೃಹತ್‌ ವಾಣಿಜ್ಯ ಸಂಕೀರ್ಣ ಮತ್ತು ಪಂಚತಾರಾ ಹೋಟೆಲ್‌ನ್ನು ನಿರ್ಮಿಸುವ ಕುರಿತು ಈಗಾಗಲೇ ನಿಗಮದ ಸಭೆಯಲ್ಲಿ ಸಮಾಲೋಚನೆ ನಡೆಸಲಾಗಿದೆ. ಶೀಘ್ರದಲ್ಲಿ ಈ ವಿಷಯದ ಕುರಿತು ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದರು.
ಸದರಿ ವಿಮಾನ ನಿಲ್ಧಾಣದಲ್ಲಿ ಪೈಲಟ್‌ ತರಬೇತಿ ಕೇಂದ್ರ ಆರಂಭಿಸಲು ಈ ಹಿಂದೆ ಖಾಸಗಿ ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಆದರೆ, ಯಾವುದೇ ಕಂಪನಿಗಳು ಆಸಕ್ತ ವಹಿಸಿರುವುದು ಕಂಡುಬಂದಿರುವುದಿಲ್ಲ. ಆದಾಗ್ಯೂ ಪೈಲಟ್‌ ತರಬೇತಿ ಕೇಂದ್ರ ಆರಂಭಿಸಲು ಇನ್ನೊಮ್ಮೆ ಆಸಕ್ತ ತರಬೇತಿ ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗುವುದು ಎಂದರು.
ವಿಮಾನ ನಿಲ್ದಾಣದ ನಿರ್ಮಾಣಕ್ಕಾಗಿ ಭೂಮಿ ನೀಡಿ ಸಹಕರಿಸಿದ ರೈತರ 370 ಕುಟುಂಬಗಳಿಗೆ ಅಂದಿನ ಅಧಿಕಾರಿ-ಜನಪ್ರತಿನಿಧಿಗಳು ನೀಡಿದ ಭರವಸೆಯಂತೆ ತಲಾ ಒಂದು ನಿವೇಶನ ನೀಡಿರುವುದಿಲ್ಲ. ಈ ಬಗ್ಗೆ ಸಂತ್ರಸ್ಥರು ಅನೇಕ ಬಾರಿ ಸರ್ಕಾರದ ಗಮನ ಸೆಳೆಯುವ ಕಾರ್ಯ ಮಾಡಿದ್ದಾರೆ. ಅಲ್ಲದೇ ನ್ಯಾಯಾಲಯವೂ ಕೂಡ ಸಂತ್ರಸ್ಥರ ಪರವಾಗಿ ತೀರ್ಪು ನೀಡಿರುವುದು ಗಮನಕ್ಕೆ ಬಂದಿದೆ. ಈ ಸಮಸ್ಯೆಯ ಇತ್ಯರ್ಥಗೊಳಿಸಲು ಖುದ್ದಾಗಿ ಮಾನ್ಯ ಮುಖ್ಯಮಂತ್ರಿಗಳ ಗಮನಸೆಳೆದು ಅಗತ್ಯವಿರುವು ಅನುದಾನ ಬಿಡುಗಡೆಗೊಳಿಸಲು ಒತ್ತಾಯಿಸಲಾಗುವುದು ಎಂದರು.
ಸಭೆಯಲ್ಲಿ ವಿಮಾನ ನಿಲ್ದಾಣದ ಮುಖ್ಯಸ್ಥ ಕ|| ಶಮಂತ್‌, ವಿದ್ಯಾಧರ್‌ ಸಾಲಿಮಠ್‌, ಮುಖಂಡ ಯೋಗೀಶ್‌ ಮತ್ತಿತರರು ಉಪಸ್ಥಿತರಿದ್ದರು.

ದೌರ್ಜನ್ಯ ಪ್ರತಿಬಂಧಕ ಕಾಯ್ದೆ ಬಗ್ಗೆ ವಿಚಾರಗೋಷ್ಠಿ ನಡೆಸಲು ಸಂಘಸಂಸ್ಥೆಗಳಿಂದ ಅರ್ಜಿ ಆಹ್ವಾನ

0

2025-26 ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಅಧಿನಿಯಮ ಮತ್ತು ಪಿಸಿಆರ್ ಕಾಯ್ದೆಯ ಬಗ್ಗೆ ಸರ್ಕಾರೇತರ ಸಂಘ ಸಂಸ್ಥೆಗಳ ಮೂಲಕ ಜಾಗೃತಿ/ಅರಿವು ಮೂಡಿಸಲು ವಿಚಾರಗೋಷ್ಟಿ ಮತ್ತು ಕಾರ್ಯಾಗಾರಗಳನ್ನು ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಮಟ್ಟದಲ್ಲಿ ಆಯೋಜಿಸುವ ಸಲುವಾಗಿ ಸಂಘ/ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯೊಂದಿಗೆ ಸಂಘ/ಸಂಸ್ಥೆಯ ನೋಂದಣಿ ಪ್ರಮಾಣ ಪತ್ರ, ನವೀಕರಣ ಪ್ರಮಾಣ ಪತ್ರ, ಕಳೆದ 3 ವರ್ಷದ ಆಡಿಟ್ ವರದಿ, ಸಂಘ ಸಂಸ್ಥೆಯು ಪರಿಶಿಷ್ಟ ಜಾತಿ/ವರ್ಗದ ಅಭಿವೃದ್ದಿಗಾಗಿ 5 ವರ್ಷ ಸೇವೆ ಸಲ್ಲಿಸಿರುವ ಬಗ್ಗೆ ದೃಢೀಕೃತ ದಾಖಲೆ, ಈ ಹಿಂದೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಿರುವ ಬಗ್ಗೆ ದಾಖಲೆಗಳು, ಛಾಯಾಚಿತ್ರ, ಪತ್ರಿಕಾ ವರದಿ, ಸಂಸ್ಥೆಯು ದೌರ್ಜನ್ಯ ಪ್ರತಿಬಂಧಕ ಅಧಿನಿಯಮ-1989 ರ ಅನುಷ್ಟಾನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿರುವ ಬಗ್ಗೆ ದಾಖಲೆಗಳು, ಪ್ರಕಟಣೆಗಳು, ಕರಪತ್ರ, ಭಿತ್ತಿ ಪತ್ರ ಇತ್ಯಾದಿ ಲಗತ್ತಿಸಬೇಕು.
ಆಸಕ್ತ ಸ್ವಯಂ ಸೇವಾ ಸಂಘ/ಸAಸ್ಥೆಯವರು ಫೆ.19 ರೊಳಗೆ ಪೂರಕ ದಾಖಲೆಳೊಂದಿಗೆ ಪ್ರಸ್ತಾವನೆಯನ್ನು ಸಮಾಜ ಕಲ್ಯಾಣ ಇಲಾಖೆ, ಉಪ ನಿರ್ದೇಶಕರ ಕಚೇರಿ, ಪೃಥ್ವಿ ಮ್ಯಾನ್ಶನ್, 100 ಅಡಿ ರಸ್ತೆ, ವಿನೋಬ ನಗರ ಶಿವಮೊಗ್ಗ ಇಲ್ಲಿ ಸಲ್ಲಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಲ್ಲೇಶಪ್ಪ ತಿಳಿಸಿದ್ದಾರೆ.

Shivaganga Yoga Center ಶ್ರೀಆದಿ ಚುಂಚನಗಿರಿ ಶಾಖಾಮಠದಲ್ಲಿ ವೈಭವದ ಶಿವರಾತ್ರಿ ಆಚರಣೆ

0

Shivaganga Yoga Center ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಶಿವಮೊಗ್ಗ ಶಾಖೆಯ ವತಿಯಿಂದ, ಗುರುಪುರದಲ್ಲಿರುವ ಪುರಾತನ ಕಾಲದ ಶ್ರೀವೀರ ಸೋಮೇಶ್ವರ ಸನ್ನಿಧಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಶ್ರೀ ಆದಿಚುಂಚನಗಿರಿ ಶಿವಮೊಗ್ಗ ಶಾಖೆಯ ಪೂಜ್ಯ ಶ್ರೀ ಶ್ರೀ ನಾದಮಯಾನಂದನಾಥ ಸ್ವಾಮೀಜಿಯವರ ಸಾನಿಧ್ಯದಲ್ಲಿ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಹಾಗೂ ಬಿಲ್ವಪತ್ರೆ, ಪುಷ್ಪಗಳಿಂದ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ಪೂಜ್ಯರಿಂದ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಶಿವಮೊಗ್ಗದ ಮಹಿಳಾ ಭಜನಾ ಮಂಡಳಿಗಳಾದ ಶ್ರೀ ಪಾಂಡುರಂಗ ಭಜನಾ ಮಂಡಳಿ, ಶ್ರೀ ಆರ್ಯವೈಶ್ಯ ಭಜನಾ ಮಂಡಳಿ,
ಶ್ರೀ ಮುದ್ದು ಗಣಪ ಭಜನಾ ಮಂಡಳಿ, ಹಾಗೂ ಶಾಲಾ ಮಕ್ಕಳಿಂದ ಭಜನೆ, ಶಿವ ಸಂಕೀರ್ತನೆಗಳೊಂದಿಗೆ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಶಾಲೆ ಮತ್ತು ಕಾಲೇಜಿನ ಪ್ರಾಂಶುಪಾಲರಾದ ಸುರೇಶ್ ಎಸ್. ಹೆಚ್., ಶಿಕ್ಷಕರು ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಹಾಗೂ ಶ್ರೀಮಠದ ಸದ್ಭಕ್ತರು ಪಾಲ್ಗೊಂಡಿದ್ದರು.

Karnataka Madiwala Machideva Development Corporation ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದಿಂದ ಆಹಾರವಾಹಿನಿ ಸೌಲಭ್ಯ

0

Karnataka Madiwala Machideva Development Corporation ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ವತಿಯಿಂದ ಹಿಂದುಳಿದ ವರ್ಗಗಳ ಜನರಿಂದ 2025-26 ನೇ ಸಾಲಿಗೆ ಆಹಾರ ವಾಹಿನಿ ಯೋಜನೆಯಡಿ ಸ್ಥಳಾಂತರಿಸಬಹುದಾದ ತಿಂಡಿ ಮಳಿಗೆಗಳನ್ನು ನಾಲ್ಕು ಚಕ್ರಗಳ ಇವಿ-ಗೂಡ್ಸ್ ವಾಹನಗಳನ್ನು ಅಗತ್ಯಕ್ಕೆ ತಕ್ಕಂತೆ ನವೀಕರಿಸಿ ಫಲಾನುಭವಿಗಳಿಗೆ ವಿತರಿಸುವ ಯೋಜನೆಯಲ್ಲಿ ನಿಗಮದಿಂದ ವಾಹನ ಖರೀದಿಗೆ ರೂ.3.00 ಲಕ್ಷಗಳ ಸಹಾಯಧನವನ್ನು ಪಡೆಯಲು ಸೇವಾಸಿಂಧು ಪೋರ್ಟೆಲ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಈ ಯೋಜನೆಯು ವಿಶ್ವಕರ್ಮ, ಉಪ್ಪಾರ, ಅಂಬಿಗ, ಸವಿತಾ, ಅಲೆಮಾರಿ/ಅರೆಅಲೆಮಾರಿ ಸಮುದಾಯ,, ಒಕ್ಕಲಿಗೆ, ಲಿಂಗಾಯತ, ಕಾಡುಗೊಲ್ಲ, ಹಟ್ಟಿಗೊಲ್ಲ, ಮರಾಠ ಮತ್ತು ಇದರ ಉಪಜಾತಿ ಸಮುದಾಯಗಳನ್ನು ಹೊರತುಪಡಿಸಿ ಮಡಿವಾಳ ಮಾಚಿದೇವ ಸಮುದಾಯಕ್ಕೆ ಮಾತ್ರ ಸೇರಿದವರಾಗಿರಬೇಕು.

ಅರ್ಜಿದಾರರು ಆಧಾರ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಆಧಾರ್ ಕಾರ್ಡನಲ್ಲಿರುವಂತೆ ಅರ್ಜಿದಾರರ ಹೆಸರು ಇತರೆ ದಾಖಲಾತಿಗಳಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಕ್ ಪಾಸ್ ಪುಸ್ತಕದಲ್ಲಿಯೂ ಇರುವಂತೆ ಹೊಂದಾಣಿಕೆಯಾಗಬೇಕು.

ಕುಟುಂಬದ ವಾರ್ಷಿಕ ವರಮಾನ 3.00 ಲಕ್ಷಗಳ ಒಳಗಿರಬೇಕು ಮತ್ತು ವಯಸ್ಸು 21 ರಿಂದ 45 ವರ್ಷ ಒಳಗಿನವರಾಗಿಬೇಕು. ಒಂದು ಕುಟುಂಬದ ಒಬ್ಬ ಸದಸ್ಯರು ಮಾತ್ರ ಯಾವುದಾದರು ಒಂದು ಯೋಜನೆಯಲ್ಲಿ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸುವುದು.

ಆಸಕ್ತರು ಸೇವಾಸಿಂಧು ಪೋರ್ಟಲ್ http://sevasindhukarnataka.gov.in ನ ಗ್ರಾಮ್ ಒನ್, ಬೆಂಗಳೂರು ಒನ್, ಕರ್ನಾಟಕ ಒನ್‌ಗಳ ಮೂಲಕ ಆನ್‌ಲೈನ್ ಮೂಲಕ ಮಾರ್ಚ್ 6 ರೊಳಗಾಗಿ ಅರ್ಜಿ ಸಲ್ಲಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

Karnataka Madiwala Machideva Development Corporation ಹೆಚ್ಚಿನ ಮಾಹಿತಿಗೆ ನಿಗಮದ ಜಾಲತಾಣ https://kmmdc.karnataka.gov.in ಹಾಗೂ ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬಾಲರಾಜ್ ಅರಸ್ ರಸ್ಥೆ, ಕೆ.ಇ.ಬಿ. ಸರ್ಕಲ್ ಹತ್ತಿರ,ಶಿವಮೊಗ್ಗ. ದೂ,ಸಂ: 08182-229634 ನ್ನು ಸಂಪರ್ಕಿಸಬಹುದಾಗಿದೆ.

ಲೋಕಾಯುಕ್ತ ಬಲೆಗೆ ಬಿದ್ದ ವಿಶೇಷ ಭೂಸ್ವಾಧೀನಾಧಿಕಾರಿ ಮತ್ತು ಗ್ರಾಮ ಸಹಾಯಕ

0

ಶಿವಮೊಗ್ಗದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ವಿಶೇಷ ಭೂ ಸ್ವಾಧೀನಾಧಿಕಾರಿ ಮತ್ತು ಗ್ರಾಮ ಸಹಾಯಕರನ್ನು ಅವರನ್ನು ವಶಕ್ಕೆ ಪಡೆದಿದ್ದಾರೆ.

40 ಸಾವಿರ ರೂ. ಲಂಚ ಪಡೆಯುವಾಗ ಗ್ರಾಮ ಸಹಾಯಕ ರಾಜೇಶ್ ಹಾಗೂ ವಿಶೇಷ ಭೂ ಸ್ವಾಧೀನಾಧಿಕಾರಿ ಸಿದ್ಧಲಿಂಗರೆಡ್ಡಿ ಅವರನ್ನ ವಶಕ್ಕೆ ಪಡೆದಿದ್ದಾರೆ.

ಸಿದ್ದಲಿಂಗರೆಡ್ಡಿ ಅವರು ಈ ಹಿಂದೆ ಶಿವಮೊಗ್ಗದ ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.

ಕೆಲ ತಿಂಗಳ ಹಿಂದೆಯಷ್ಟೇ ವಿಶೇಷ ಭೂ ಸ್ವಾಧೀನಾಧಿಕಾರಿ ವರ್ಗಾವಣೆಯಾಗಿದ್ದ ಸಿದ್ದಲಿಂಗ ರೆಡ್ಡಿ ಅವರು
ತಮ್ಮ ಸಹಾಯಕನ ಮೂಲಕ
ಕಾರಿನ ಮಾಸಿಕ ಬಾಡಿಗೆ ಹಣ ಮಂಜೂರು ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಕಾರು ಚಾಲಕ ಕೇಶವಮೂರ್ತಿ ದೂರಿನನ್ವಯ ಲೋಕಾಯುಕ್ತ ಟೀಮ್ ದಾಳಿ ನಡೆಸಲಾಗಿತ್ತು.
ಇಬ್ಬರನ್ನೂ ಲೋಕಾಯುಕ್ತ ಕಚೇರಿಯಲ್ಲಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಶಿವರಾತ್ರಿ ವಿಶೇಷ ಸಿನಿಮಾ, ಪ್ರಶಾಂತ್ ಸಾಗರ ನಿರ್ದೇಶನದ “ಕೌತುಕ” ಪ್ರದರ್ಶನ- ವಿನಯ್ , ಶಿವಮೊಗ್ಗ

0

ಮಹಾಶಿವರಾತ್ರಿಯ ಪೂಜೆ , ಭಜನೆ, ಉಪವಾಸ, ಅರ್ಚನೆಯ ಪರಂಪರಾಗತ ಆಚರಣೆಗಳು ಒಂದೆಡೆಯಾದರೇ….. ಪರಿಸರವೇ ಪರಮೇಶ್ವರನೆಂಬ ಜಾಗೃತಿಯ ಪರ್ವ ಒಂದೆಡೆ!!! ಶಿವಮೊಗ್ಗದಲ್ಲಿ ತಮ್ಮ ಕನಸಿನ ಈಶ್ವರವನದಲ್ಲಿ ನವ್ಯಶ್ರೀ ನಾಗೇಶ್ ಅವರ ಪರಿಸರ ಶಿವರಾತ್ರಿಯ ಸಂಭ್ರಮ ಮುಗಿಲು ಮುಟ್ಟಿದೆ .

ಪ್ರಕೃತಿಯಲ್ಲಿ ಪರಶಿವನನ್ನು ಕಾಣುವ ಒಳನೋಟಕ್ಕೊಂದು ಸಂಸ್ಕಾರ ಬೇಕು. ನಮ್ಮ ಸಾಗರದ ಪ್ರಶಾಂತ್ ಇಂಥಹ ಸೂಕ್ಷ್ಮಮತಿಯುಳ್ಳ ಕಿರುಚಿತ್ರ ನಿರ್ದೇಶಕ . ಇವರು ತಪ್ಪಸ್ಸಿನಂತೆ ತಾಳ್ಮೆಯಿಂದ ನಿರ್ಮಿಸಿದ ಕಿರುಚಿತ್ರ “ಕೌತುಕ” ಇಂದು ಸಂಜೆ 6.30 ಗೆ ಅಬ್ಬಲಗೆರೆ ಬಳಿ ಇರುವ ಈಶ್ವರವನದ ಹಸಿರು ಸಮುಚ್ಛಯದಲ್ಲಿ ಪ್ರದರ್ಶನವಾಗಲಿದೆ .

Navyashree Eeshwaravan Charitable Trust ಒಬ್ಬರ ಪ್ರಾಣವುಳಿಸಿದ ಪುಣ್ಯ ರಕ್ತದಾನದಿಂದ ಬರುತ್ತದೆ- ನವ್ಯಶ್ರೀ ನಾಗೇಶ್

0

ನೊಂದವರು, ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಪರಶಿವನ ಅನುಗ್ರಹ ಪಡೆಯಬಹುದು. ಮತ್ತೊಬ್ಬರ ಜೀವ ಉಳಿಸುವಂತಹ ರಕ್ತದಾನ ಮಹಾದಾನಗಳಲ್ಲೊಂದು. ಇಂತಹ ದಾನದ ಮೂಲಕ ಶಿವನ ಅನುಗ್ರಹ ಲಭಿಸುತ್ತದೆ. ಶಿವರಾತ್ರಿಯ ಉಪವಾಸ, ಜಾಗರಣೆಗಿಂತ ಹೆಚ್ಚು ಪುಣ್ಯ ಪ್ರಾಪ್ತವಾಗುತ್ತದೆ ಎಂದು ನವ್ಯಶ್ರೀ ಈಶ್ವರವನ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷ ನವ್ಯಶ್ರೀ ನಾಗೇಶ್ ಅವರು ಹೇಳಿದರು.

ನವ್ಯಶ್ರೀ ಈಶ್ವರವನ ಚಾರಿಟಬಲ್ ಟ್ರಸ್ಟ್ನ ವತಿಯಿಂದ ತಾಲೂಕಿನ ಅಬ್ಬಲಗೆರೆಯ ಈಶ್ವರವನದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಫೆ. 15ರಂದು ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.

ಶಿವರಾತ್ರಿಯಂದು ಓಂ ನಮಃ ಶಿವಾಯ ಎಂದು ಜಪ-ತಪ, ಪೂಜೆ, ಭಜನೆ, ಆರಾಧನೆ, ಉಪವಾಸ, ಜಾಗರಣೆ ಮಾಡುವ ಮೂಲಕ ಶಿವನ ಅನುಗ್ರಹಕ್ಕೆ ಪ್ರಾಪ್ತರಾಗಲು, ಪುಣ್ಯ ಸಂಪಾದಿಸಲು ಪೂಜಾ ಕೈಂಕರ್ಯವನ್ನು ಕೈಗೊಳ್ಳಲಾಗುತ್ತದೆ. ಪರಿಸರವೇ ಪರಮೇಶ್ವರ ಎಂಬ ಜಾಗೃತಿಯ ಪರ್ವದೊಂದಿಗೆ ಶಿವರಾತ್ರಿ ಪ್ರಯುಕ್ತ ರಕ್ತದಾನ ಮಾಡಬೇಕೆಂದು ಕರೆ ನೀಡಿದರು.

ಸಕಾಲದಲ್ಲಿ ರಕ್ತ ಸಿಗದೆ ಸಾಕಷ್ಟು ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಂದು ರಕ್ತದ ಕೊರತೆ ಸಾಕಷ್ಟು ಎದ್ದು ಕಾಣುತ್ತಿದೆ. ಯುವಕರು ರಕ್ತದಾನ ಮಾಡಲು ಜಾಗೃತಿಯ ಕೊರತೆ ಇದೆ. ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ ಚೈತನ್ಯ ಮೂಡುತ್ತದೆ ಹಾಗೂ ಸದಾಕಾಲ ಆರೋಗ್ಯವಂತರಾಗಿ ಇರುತ್ತಾರೆ ಎಂದು ತಿಳಿಸಿದರು.

ಅಪಘಾತ, ಆಪರೇಷನ್, ಹೆರಿಗೆ, ರಕ್ತಸ್ರಾವ ಮತ್ತಿತರೆ ತುರ್ತು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಬಹಳ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ರಕ್ತದಾನಿಗಳು ದೊರೆಯದಿದ್ದಲ್ಲಿ ಪ್ರಾಣಕ್ಕೆ ಕುತ್ತು ಬರುವ ಅಥವಾ ಪ್ರಾಣವೇ ಹೊರಟು ಹೋಗುವಂತಹ ಸಂದರ್ಭಗಳೂ ಇರುತ್ತವೆ. ಇದನ್ನು ತಪ್ಪಿಸಲು ಅಗತ್ಯವಾದ ರಕ್ತ ಸಂಗ್ರಹ ಅತಿಮುಖ್ಯ. ಅರ್ಹ ರಕ್ತದಾನಿಗಳು ರಕ್ತದಾನ ಮಾಡುವುದರ ಮುಖಾಂತರ ಸದೃಢವಾದ ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡಲು ಕೈಜೋಡಿಸಬೇಕೆಂದರು.

ಕೇವಲ ವಿಭೂತಿ ಧರಿಸಿ ಓಂ ನಮಃ ಶಿವಾಯ ಎನ್ನುವುದಕ್ಕಿಂತ ಪ್ರಕೃತಿಯ ಮಡಿಲಲ್ಲಿ ಪ್ರತಿಯೊಂದು ಕಣದಲ್ಲೂ ಇರುವ ಶಿವತತ್ವವನ್ನು ಅನುಭವಿಸುವುದೇ ನಿಜವಾದ ಪೂಜೆ. ಈಶ್ವರ ಎಂದರೆ ಎಲ್ಲೋ ದೂರದ ಲೋಕದಲ್ಲಿರುವ ಅಸ್ತಿತ್ವವಲ್ಲ, ಜಗತ್ತಿನ ಪ್ರತಿಯೊಂದು ಕಣದಲ್ಲೂ ವ್ಯಾಪಿಸಿರುವ ಚೈತನ್ಯ ಎಂದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ. ವಿಜಯಕುಮಾರ್ ಅವರು ಮಾತನಾಡಿ ಶಿವಮೊಗ್ಗದಲ್ಲಿ ಸಾಕಷ್ಟು ರಕ್ತದಾನಿಗಳಿದ್ದರೂ ಸಹ ರಕ್ತದ ಕೊರತೆ ಉಂಟಾಗುತ್ತದೆ. ಇತ್ತೀಚಿನ ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ರಕ್ತದಾನ ಮಾಡುವುದರಿಂದ ದೀರ್ಘಾಯುಷ್ಯ ಉಳ್ಳವರಾಗುತ್ತಾರೆ ಹಾಗೂ ನಮ್ಮ ದೇಹದಲ್ಲಿ ಗೊತ್ತಿಲ್ಲದೆ ಇರುವಂತಹ ಯಾವುದಾದರೂ ಕಾಯಿಲೆಗಳಿದ್ದರೆ ಈ ರಕ್ತದಾನದಿಂದ ತಿಳಿಯುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ರಕ್ತದಾನ ಮಾಡುವುದರ ಮುಖಾಂತರ ರಕ್ತದ ಕೊರತೆಯನ್ನು ನೀಗಿಸೋಣ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ 120 ಬಾರಿ ರಕ್ತದಾನ ಮಾಡಿ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಧರಣೇಂದ್ರ ದಿನಕರ್, ಈ ಶಿವರಾತ್ರಿಯ ಪವಿತ್ರ ದಿನದಂದು ರಕ್ತದಾನ ಮಾಡಿದರೆ ತೃಪ್ತಿ ಸಿಗುವುದರ ಜೊತೆಗೆ ನಾಲ್ಕು ಜನರ ಪ್ರಾಣ ಉಳಿಸಿದ ಫಲ ನಮಗೆ ದೊರೆಯುತ್ತದೆ. ನವ್ಯಶ್ರೀ ನಾಗೇಶ್ ಅವರ ಸೇವೆ ಅಮೋಘ ಎಂದು ನೋಡಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಖಜಾಂಚಿ ಆರ್. ಮನೋಹರ್, ಆರತಿ ತಿವಾರಿ, ಸಂತೋಷ್ ಎಲಿಗಾರ್, ನಾಗರಾಜ್ ಶೆಟ್ಟರ್, ಪಿ. ಪ್ರದೀಪ್, ಎಸ್. ಸುಬ್ರಹ್ಮಣ್ಯ, ವಿಜಯಕುಮಾರ್, ಲಕ್ಷಿö್ಮ, ಡಾ. ದಿನಕರ್, ನವ್ಯಶ್ರೀ ಈಶ್ವರವನ ಚಾರಿಟಬಲ್ ಟ್ರಸ್ಟ್ನ ಪದಾಧಿಕಾರಿಗಳಾದ ಶಶಿಕಲಾ ನಾಗೇಶ್, ಶರತ್, ಶರಣ್ಯ, ಹಾಗೂ ರಕ್ತದಾನಿಗಳು ಉಪಸ್ಥಿತರಿದ್ದರು.

S.N. Channabasappa ಸ್ಥಳಿಯ ಪರಂಪರೆಯನ್ನುಳಿಸಿ ಬೆಳೆಸುವ ಕಾರ್ಯಕ್ರಮಗಳು ನಮ್ಮ ಏಕತೆ ಮತ್ತು ಸಾಂಸ್ಜೃತಿಕ ಗೌರವ ಕಾಪಾಡುತ್ತವೆ- ಶಾಸಕ ಚೆನ್ನಿ

0

S.N. Channabasappa ಕೋಟೆ ಶ್ರೀ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ, ನಮ್ಮೂರ ಬಳಗ – ಶಿವಮೊಗ್ಗ ಇವರ ವತಿಯಿಂದ ಆಯೋಜಿಸಲಾದ ರಾಷ್ಟ್ರ ಮಟ್ಟದ ಕುರಿ ಕಾಳಗ ಸ್ಪರ್ಧೆಯನ್ನು 
ಶಿವಮೊಗ್ಗ ನಗರ ಕ್ಷೇತ್ರದ ಶಾಸಕರಾದ ಎಸ್.ಎನ್.ಚನ್ನಬಸಪ್ಪ ಉದ್ಘಾಟಿಸಿದರು.

ನಾಡಿನ ಸಾಂಪ್ರದಾಯಿಕ ಕ್ರೀಡೆಗಳು ಹಾಗೂ ಗ್ರಾಮೀಣ ಸಂಸ್ಕೃತಿಯ ವೈಭವವನ್ನು ಪ್ರತಿಬಿಂಬಿಸುವ ಈ ಕಾರ್ಯಕ್ರಮದಲ್ಲಿ ವಿವಿಧ ರಾಜ್ಯಗಳಿಂದ ಆಗಮಿಸಿದ ಸ್ಪರ್ಧಿಗಳು ಹಾಗೂ ಕ್ರೀಡಾಭಿಮಾನಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಸಂಸ್ಕೃತಿ, ಕ್ರೀಡೆ ಮತ್ತು ಸಹಭಾಗಿತ್ವದ ಮನೋಭಾವವನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿದ ಈ ಆಯೋಜನೆ ಜಾತ್ರಾ ಮಹೋತ್ಸವಕ್ಕೆ ವಿಶೇಷ ಮೆರುಗು ತಂದಿದೆ.
S.N. Channabasappa ಸ್ಥಳೀಯ ಪರಂಪರೆಯನ್ನು ಉಳಿಸಿ ಬೆಳೆಸುವ ಇಂತಹ ಕಾರ್ಯಕ್ರಮಗಳು ನಮ್ಮ ಸಮುದಾಯದ ಏಕತೆ ಮತ್ತು ಸಾಂಸ್ಕೃತಿಕ ಗೌರವವನ್ನು ಮತ್ತಷ್ಟು ಬಲಪಡಿಸುತ್ತವೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ
ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಸಂತ ಶರೀಫರ ಕೃತಿಗಳನ್ನ ಕಟ್ಟಿ ಕೊಟ್ಟ ಭಟ್ಟರು

0

ಲೇ: ಪ್ರಭಾಕರ ಕಾರಂತ.

ಕವಿ ಲಕ್ಷ್ಮೀನಾರಾಯಣ ಭಟ್ಟ ಇನ್ನೂ ಶಿವಮೊಗ್ಗದಲ್ಲಿ ಪ್ರೌಢ ಶಾಲೆಯಲ್ಲಿದ್ದಾಗಲೇ ಶಾಲಾ ವಾರ್ಷಿಕೋತ್ಸವಕ್ಕೆ ಆನಕೃ ಅತಿಥಿಯಾಗಿ ಬಂದಿದ್ದರು.”ಸೋರುತಿಹುದು ಮನೆಯ ಮಾಳಿಗೀ… ಅಜ್ಞಾನದಿಂದ”ಪದ್ಯವನ್ನು ಆದರ ಆರ್ಥ ಸಮೇತ ವಿವರಿಸಿ ಸ್ವಾರಸ್ಯವಾಗಿ ಮಾತನಾಡಿ ಅವರು, ಶರೀಫರನ್ನು ಮಕ್ಕಳಿಗೆ ಸೊಗಸಾಗಿ ಪರಿಚಯಿಸಿದ್ದರು.ಶಿವಮೊಗ್ಗ ತುಂಗಾ ತೀರದ ದೊಡ್ಡ ಬ್ರಾಹ್ಮಣ ಬೀದಿಯ ಬಾಲಕ ಭಟ್ಟನಿಗೆ ಅಲ್ಲಿಂದ ಶರೀಫರ ಗೀಳು ಹಿಡಿಯಿತು.ಬೀದಿಯಲ್ಲಿ ಬರುವ ದಾಸರಲ್ಲೆಲ್ಲಾ ಶರೀಫರ ಹಾಡು ಬರುತ್ತಾ ಎಂದು ಕೇಳುವುದು ಬಾಲಕನ ಹವ್ಯಾಸವಾಯಿತು.ಓರ್ವ ಹರಿದಾಸರು ಭಟ್ಟರ ಪುಣ್ಯಕ್ಕೆ ಸಿಕ್ಕೇ ಬಿಟ್ಟರು.ಅವರನ್ನು ಹಾದಿ ಬದಿಯ ಕಟ್ಟೆ ಮೇಲೆ ಕೂರಿಸಿ “ಎಂಥಾ ಮೋಜಿನ ಕುದುರೀ”ಹಾಡನ್ನು ತಂಬೂರಿ ಯೊಂದಿಗೆ ಹಾಡಿಸಿ ಭಟ್ಟರು ಚಪ್ಪಾಳೆ ತಟ್ಟಿ ಆನಂದಿಸಿದರು.ಹರಿದಾಸರಿಗೆ ಮತ್ತೇನಾದರೂ ಕೊಡಲು ಈ ಬಾಲಕ ಬರಿಗೈ ದಾಸ.ಮುಂದೆ ಯಾರು ಕಂಡರೂ ಶರೀಫರ ಹಾಡು ಕೇಳಿ ಬರೆದುಕೊಳ್ಳುವುದು ಭಟ್ಟರ ಅಭ್ಯಾಸ ಆಯಿತು.ಭಟ್ಟರು ದೊಡ್ಡವರಾಗಿ ಓದಿ ವಿಶ್ವ ವಿದ್ಯಾಲಯ ಸೇರಿ ಪಾಠ ಮಾಡಿತೊಡಗಿದಾಗಲೂ,ಊರೂರಿಗೆ ಭಾಷಣಕ್ಕೆ ಹೋಗುವಾಗಲೂ ಶರೀಫರ ಪದ್ಯ ಸಂಗ್ರಹ ನಿಲ್ಲಿಸಲಿಲ್ಲ.ಅದು ಯಾರಬಳಿ ದೊರಕೀತು ಎಂದು ಅವರು ಸರಿಯಾಗಿ ನಿರ್ಧರಿಸಬಲ್ಲವರಾಗಿದ್ದರು.
ಒಮ್ಮೆ ವಿಶ್ವವಿದ್ಯಾಲಯ ಪಠ್ಯ ರಚನಾ ಸಮಿತಿ ಭಟ್ಟರಿಗೆ ಪಠ್ಯಕ್ಕಾಗಿ ದಾಸರಪದ ಸಂಗ್ರಹಿಸಿ ಕೊಡಲು ಕೋರುತ್ತದೆ.ಭಟ್ಟರು ಲಭ್ಯ ಇರುವ ದಾಸರ ಪದ ಸಂಗ್ರಹಿಸಿ ವಿವರಣಿ,ಅಡಿ ಟಿಪ್ಪಣಿ ಯೊಂದಿಗೆ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸುತ್ತಾರೆ.ಇನ್ನೇನು ಆದು ಅಚ್ಚಿಗೆ ಹೋಗಬೇಕು ಆಗ ಭಟ್ಟರಿಗೆ ಮತ್ತೆ ಕರೆ ಬರುತ್ತದೆ.ನಿಮ್ಮ ಸಂಗ್ರಹ ರಂ.ಶೀ.ಮುಗಳಿಯವರ ಪರಿಶೀಲನೆಗೆ ಹೋಗಿತ್ತು.ಅವರು ಹೀಗೆ ಅಭಿಪ್ರಾಯ ಪಟ್ಟಿದ್ದಾರೆ ಎಂದು ಆವರ ಪತ್ರ ಭಟ್ಟರಿಗೆ ಕೊಡುತ್ತಾರೆ.ಈ ಸಂಗ್ರಹ, ವಿವರಣೆ,ಅಡಿ ಟಿಪ್ಪಣಿ ಎಲ್ಲಾ ತುಂಬಾ ಚೆನ್ನಾಗಿದೆ.ಆದರೆ ಪುರಂದರ ದಾಸರು, ಕನಕ ದಾಸರು ಮುಂತಾದವರ ನಡುವೆ ಓರ್ವ ಮುಸಲ್ಮಾನನ ಪದ್ಯ ಸೇರಿಸಿದ್ದಾರೆ.ಆ ಆರು ಪದ್ಯ ಮತ್ತದಕ್ಕೆ ಸಂಬಂಧಿಸಿದಂತೆ ಇರುವ ಬರಹ ತೆಗೆದು ಉಳಿದಂತೆ ಇದನ್ನು ಪಠ್ಯ ಮಾಡಬಹುದು ಎಂದು ಮುಗಳಿ ಅಭಿಪ್ರಾಯ ಪಟ್ಟಿರುತ್ತಾರೆ.ಭಟ್ಟರಿಗೆ ಬೇಗ ಆವರು ಹೇಳಿದಂತೆ ಮಾಡಿಕೊಡಿ,ಪಠ್ಯ ಅಚ್ಚಿಗೆ ತಡವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.ಭಟ್ಟರು ನಾನು ಹಾಗೆ ಮಾಡಲಾರೆ ಎಂದುತ್ತರಿಸುತ್ತಾರೆ.ಈಗಲೇ ತಡವಾಗಿದೆ, ಬೇರೆಯದೇ ಸಂಗ್ರಹ ಮಾಡಿಸುವಂತಲೂ ಇಲ್ಲ.ನೀವು ಹೀಗೆ ಹೇಳಿದರೆ ಏನು ಮಾಡಬೇಕು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸುತ್ತಾರೆ.ಭಟ್ಟರೇ ಅದಕ್ಕೊಂದು ಪರಿಹಾರ ಹೇಳುತ್ತಾರೆ.ಇದೇ ಸಂಗ್ರಹ ಬೇರೊಬ್ಬರಿಂದ ನಿಮಗೆ ಬೇಕಾದಂತೆ ಮಾರ್ಪಡಿಸಿ ಅವರ ಹೆಸರಿನಲ್ಲೇ ಆಚ್ಚು ಹಾಕಿ.ಅದರ ಗೌರವ ಸಂಭಾವನೆಯನ್ನೂ ಅವರಿಗೇ ಕೊಟ್ಟುಕೊಳ್ಳಿ.ನಾನು ಯಾವುದೇ ಕಾರಣಕ್ಕೂ ಈ ಸಂಗ್ರಹದಲ್ಲಿ ಬದಲಾವಣೆ ಮಾಡುವುದೇ ಇಲ್ಲ ಎಂದು ಖಡಕ್ ಉತ್ತರ ನೀಡುತ್ತಾರೆ.ನೀವು ಹೀಗೆ ಹಠ ಮಾಡಿದರೆ…ಎಂದು ಅಧಿಕಾರಿಗಳು ಮಾತು ನಿಲ್ಲಿಸಿದಾಗ ಏನು ಮಾಡುತ್ತೀರಿ, ಉಪಕುಲಪತಿಗಳಿಗೆ ದೂರು ಕೋಡುವಿರಿ ತಾನೆ,ಹಾಗೇ ಮಾಡಿ ಎಂದು ಹೇಳಿ ಭಟ್ಟರು ನಿರ್ಗಮಿಸುತ್ತಾರೆ.
ಆದೇ ದಿನ ಭಟ್ಟರಿಗೆ ಉಪಕುಲಪತಿಗಳ ಬುಲಾವ್ ಬರುತ್ತದೆ.ಆಗ ಆ ಸ್ಥಾನದಲ್ಲಿದ್ದವರು ದಕ್ಷ ಐಎಎಸ್ ಅಧಿಕಾರಿ ಜೈರಾಮನ್.ವಿಶ್ವವಿದ್ಯಾಲಯದಲ್ಲಿ ಆದ ಕೆಲ ಅವ್ಯವಹಾರ ಕಂಡು ಸರಿಪಡಿಸಲೆಂದೇ ಸರ್ಕಾರ ಅವರನ್ನು ನೇಮಿಸಿರುತ್ತದೆ.ತಮ್ಮೆದುರು ಬಂದು ನಿಂತ ವ್ಯಕ್ತಿಯನ್ನು “ನೀವೇ ಏನ್ರೀ ಲಕ್ಷ್ಮೀನಾರಾಯಣ ಭಟ್ಟ.ಮುಗಳಿ ಯವರ ಕುರಿತು ನಿಮಗೇನಾದರೂ ಗೋತ್ತೇನ್ರೀ.ಅಂತವರು ಕೊಟ್ಟ ಸೂಚನೆ ಪಾಲಿಸುವುದು ಬಿಟ್ಟು ಸಲ್ಲದ ಕ್ಯಾತೆ ತೆಗೆದಿದ್ದೀರಂತೆ.ಪ್ರಸಿದ್ದ ದಾಸರ ಜೊತೆಗೆ ಯಾರೋ ಮುಸಲ್ಮಾನನ ಪದ್ಯ ಸೇರಿಸಿದ್ದಲ್ಲದೇ ಆದು ತೆಗೆಯಲಾರೆ ಎಂದು ಬೇರೆ ಹೇಳಿದಿರಂತೆ.ಸುಮ್ಮನೇ ಸಮಸ್ಯೆ ಮಾಡದೇ ಬದಲಾಯಿಸಿ ಕೊಡಿ” ಎಂದು ಆಜ್ಞೆ ನೀಡಿದರು.ಭಟ್ಟರು ತೆಪ್ಪಗೆ ಈಚೆಗೆ ಬಾರದೇ ನಿಂತೇ ಇರುವುದು ಕಂಡು ಸಿಡಿಮಿಡಿಗೊಂಡು ಆರ್ಥವಾಗಲಿಲ್ಲವೇನ್ರೀ ಎಂದು ಕುಲಪತಿಗಳು ಪ್ರಶ್ನಿಸಿದರು.ಆರ್ಥವಾಯಿತು, ನನಗೆ ಸ್ವಲ್ಪ ಮಾತನಾಡಲು ಅವಕಾಶ ನೀಡಬೇಕು ಎಂದು ಭಟ್ಟರು ಉತ್ತರಿಸಿದರು.ಅದೇನು ಬೇಗ ಹೇಳಿ,ನನಗೆ ಬೇಕಾದಷ್ಟು ಕೆಲಸ ಇದೆ ಎಂದು ಉಪಕುಲಪತಿ ಸಿಡುಕುತ್ತಾರೆ.ನಾನು ಓರ್ವ ಸಮರ್ಥರಾದ ದಾಸರ ಪದ್ಯವನ್ನೇ ಸೇರಿಸಿದ್ದು.ಆವರು ಉಳಿದವರಿಗಿಂತ ಕಡಿಮೆ ಇಲ್ಲ.ಯಾವನೋ ಸಾಬರಲ್ಲ ಅವರು.ಶರೀಫರು.ಧರ್ಮದ ಆಧಾರದಲ್ಲಿ ಆವರ ಶ್ರೇಷ್ಠ ತತ್ವಪದ ಕೈಬಿಡಲು ಯಾರು ಹೇಳಿದರೂ ನನಗೆ ಒಪ್ಪಿಗೆ ಇಲ್ಲ ಸಾರ್ ಎನ್ನುತ್ತಾರೆ.
ಶರೀಫರು ಮಹಾನ್ ಕೀರ್ಥನಕಾರರು, ಸಾಧಕರು ಎಂದು ಭಟ್ಟರು ಸೇರಿಸುತ್ತಾರೆ.ಏನು ಅಷ್ಟು ದೊಡ್ಡವರೇ ಉಪಕುಲಪತಿ ಕುತೂಹಲದಿಂದ ಪ್ರಶ್ನಿಸುತ್ತಾರೆ.ಹೌದು ಸರ್ ಅವರ ತತ್ವಪದಗಳು ಬಹು ಶ್ರೇಷ್ಠ ವಾಗಿವೆ.ಆವರು ಧರ್ಮ ಮೀರಿದವರು.ಇಷ್ಟಕ್ಕೂ ಅವರಿಗೆ ಉಪನಯನ ಸಹ ಆಗಿತ್ತು ಎಂದು ಭಟ್ಟರು ವಿವರಿಸತೊಡಗುತ್ತಾರೆ.ಓಹೋ ನೀವೂ ಉಪನಯನಕ್ಕೆ ಹೋಗಿದ್ದರೇನ, ಏನೆಲ್ಲಾ ಕಾಕಬೂಕ ಕಥೆ ಕಟ್ಟುತ್ತೀರ ಎಂದು ಉಪಕುಲಪತಿ ಮತ್ತೆ ಅಸಹನೆ ತೋರುತ್ತಾರೆ.ಅವಕಾಶ ಇದ್ದರೆ ನಾನು ಹೋಗುವವನೇ,ಆದರೆ ಕಳೆದ ಶತಮಾನದ ಸಮಾರಂಭಕ್ಕೆ ಹೋಗುವುದು ಹೇಗೆ.ಅದಕ್ಕೆ ಸಾಕ್ಷಿ ಇದೆ ಎನ್ನುತ್ತಾರೆ ಭಟ್ಟರು.ಏನು ಸಾಕ್ಷಿ ಎಂದಾಗ ಪದ್ಯ ಬರೆದಿಟ್ಟಿದ್ದಾರೆ ಸರ್.ತಮ್ಮ ಗುರು ಗೋವಿಂದ ಭಟ್ಟರು ಜನಿವಾರ ಹಾಕಿದ ಕುರಿತೇ ಪದ್ಯ ಇದೆ.ಇಷ್ಟು ಹೇಳಿದ ಭಟ್ಟರು” ಹಾಕಿದ ಜನಿವಾರವಾ…”ಪದ್ಯ ಹೇಳುತ್ತಾ ಅದರ ಆರ್ಥ ವಿವರಿಸುತ್ತಾ ತರಗತಿಯಲ್ಲಿ ಪಾಠ ಮಾಡುವಂತೆಯೇ ಉಪಕುಲಪತಿಗಳಿಗೆ ಪಾಠ ಮಾಡುತ್ತಾರೆ.ಈ ಆಕರ್ಷಕ ಪಾಠದ ಮೋಡಿಗೊಳಗಾದ ಉಪಕುಲಪತಿ ವಿದೇಯ ವಿದ್ಯಾರ್ಥಿಯಾಗಿ ಪಾಠ ಕೇಳುತ್ತಾರೆ.ಪಾಠ ಮುಗಿದ ಮೇಲೆ ಉಪಕುಲಪತಿಗಳು ಭೇಷ್,ನೀವು ಸರಿಯಾಗೇ ಆ ಪದ್ಯ ಸೇರಿಸಿದ್ದೀರಿ.ಯಾರು ಹೇಳಿದರೂ ಇದರ ಬದಲಾವಣೆ ಬೇಡ ಎಂದು ಹೇಳಿ ಯಥಾ ಪ್ರಕಟಣೆಯ ಆದೇಶ ಹೊರಡಿಸುತ್ತಾರೆ.ಕಲ್ಲು ಸಕ್ಕರೆ ಕೊಳ್ಳಿರೋ ಎಂಬ ಆ ಭಟ್ಟರ ಸಂಪಾದಿತ ತತ್ವಪದಗಳ ಕೃತಿ ಈವತ್ತಿಗೂ ಅತ್ಯುತ್ತಮ ಸಂಗ್ರಹ ಎನಿಸಿದೆ.
ಒಮ್ಮೆ ಅಶ್ವಥ್ ಕೆಲ ಹೊಸ ಹಾಡಿಗೆ ಭಟ್ಟರಲ್ಲಿ ಕೋರಿಕೆ ಇಡುತ್ತಾರೆ.ಭಟ್ಟರು ಒಂದೆರಡು ದಿನದಲ್ಲೇ ಶರೀಫರ ಕೆಲ ಹಾಡನ್ನು ಕೊಡುತ್ತಾರೆ.ಮತ್ತೆ ಭಟ್ಟರು ಸಿಕ್ಕಾಗ ಇದೇನು ನಿಮ್ಮ ಹಾಡು ಕೊಡಿ ಅಂದರೆ ಇದ್ಯಾವುದೋ “ಕೆಟ್ಟ ಗಂಡೇ ಚೌಡೇರು,ರಂಡೇರೈವರ ಕೂಡಿ ನಗುತಲಿ ಬಂದು…” ಇಂತಹಾ ಹಾಡು ಕೊಟ್ಟಿದ್ದೀರಲ್ಲ.ಇದನ್ನು ಹಾಡಿದರೆ ಜನ ಕಲ್ಲು ಹೊಡೆಯುತ್ತಾರೆ ಅಷ್ಟೇ ಎಂದು ಅಶ್ವಥ್ ತಿಳಿಸುತ್ತಾರೆ.
ಅಶ್ವಥ್ ಮತ್ತು ಭಟ್ಟರು ಆತ್ಮೀಯ ಸ್ನೇಹಿತರೇನೋ ಹೌದು,ಆದರೆ ಆವರ ನಡುವೆ ಆಗೀಗ ಕಲಹ ನೆಡೆಯುವುದೂ ಇತ್ತು!.
ಒಮ್ಮೆ ಅಶ್ವಥ್ ಜೊತೆಗೆ ಚಿಂತಾಮಣಿಗೆ ಸ್ನೇಹ ಕೂಟಕ್ಕೆ ಭಟ್ಟರು ಹೋಗಿದ್ದರು.ಅಂದು ಆಶ್ವಥ್ ಶಿವರುದ್ರಪ್ಪನವರ “ಎಲ್ಲೋ ಹುಡುಕಿದೆ ಇಲ್ಲದ ದೇವರ,ಕಲ್ಲು ಮಣ್ಣುಗಳ ಗುಡಿಯೊಳಗೆ”ಹಾಡನ್ನು ಹಾಡುತ್ತಾರೆ.ಹಾಡು ಹೇಗಿದೆ ಎಂದು ಭಟ್ಟರನ್ನು ಪ್ರಶ್ನಿಸುತ್ತಾರೆ.ಚೆನ್ನಾಗಿ ಹಾಡಿದಿರಿ ಎಂದು ಭಟ್ಟರಿಂದ ಉತ್ತರ ಬಂದಾಗ ಗೀತೆ ಹೇಗಿದೆ ಎಂದು ಉಪ ಪ್ರಶ್ನೆ.ನನಗೆ ಆದರ ಭಾವ ಇಷ್ಟ ಆಗಲಿಲ್ಲ ಎನ್ನುತ್ತಾರೆ.ಶಿವರುದ್ರಪ್ಪನವರ ಗೀತೆಗೇ ಭಟ್ಟರು ಹೀಗೆ ಹೇಳುವುದು ಅಶ್ವಥ್ ಗೆ ಸರಿ ಕಾಣುವುದಿಲ್ಲ.ಏನು ಭಾವ ಎಂದವರು ಕೆಣಕುತ್ತಾರೆ.ದೇವರೇ ಇಲ್ಲ ಎನ್ನುತ್ತದೆ ಈ ಪದ್ಯ.ನಮಗೆ ಪವಿತ್ರವಾದ ಗುಡಿ ಇಲ್ಲಿ ಬರೇ ಕಲ್ಲು ಮಣ್ಣು.ಇಲ್ಲದ ದೇವರು ಅನ್ನೋ ಬದಲು ಕಾಣದ ದೇವರ ಅನ್ನಬಹುದಿತ್ತು.ಭಟ್ಟರ ವಿವರಣೆ ಆಶ್ವಥ್ ಗೆ ಇಷ್ಟವಾಗಲಿಲ್ಲ.ಅವರಿಗೆ ಸಮರ್ಪಕವಾಗಿ ಸಮರ್ಥಿಸಿಕೊಳ್ಳಲೂ ಆಗಲಿಲ್ಲ.ಅವರಿಗೆ ಕೋಪದ ಜೊತೆಗೆ ಗಂಟಲೂ ಏರತೊಡಗಿತು.ಭಟ್ಟರೇನೂ ಶರಣಾಗುವವರಲ್ಲ.ತರ್ಕಬದ್ದವಾದ ಅವರ ಮಾತುಗಳಿಗೆ ಅಲ್ಲಿದ್ದವರು ತಲೆದೂಗಿದರೂ ಆಶ್ವಥ್ ಅಸಮಾಧಾನಗೊಂಡರು.ಅಷ್ಟರಲ್ಲಿ ಇಬ್ಬರನ್ನೂ ಬೇರ್ಪಡಿಸಬೇಕಾಯಿತು ಉಳಿದವರು.ಜೊತೆಯಾಗಿ ಚಿಂತಾಮಣಿ ಹೋದವರು ಬೇರೆ ಬೇರೆಯಾಗಿ ಬೆಂಗಳೂರಿಗೆ ಹಿಂದಿರುಗಿದರು.ಮುನಿಸು ಬಹಳ ಕಾಲ ಉಳಿಯಲಿಲ್ಲ.ಬೆಳಗಾಗುತ್ತಲೇ ಭಟ್ಟರ ಮನೆಯಲ್ಲಿದ್ದರು ಅಶ್ವಥ್.ನೀವು ಸರಿಯಾಗೇ ಹೇಳಿದಿರಿ.ನಾನೇ ಏನೇನೋ ಮಾತನಾಡಿದೆ ಎಂದು ಆಶ್ವಥ್ ಹೇಳಿದಾಗ ಭಟ್ಟರು ಕ್ಷಮಿಸಿ ಬಿಡುತ್ತಾರೆ.ಭಟ್ಟರು ಈ ಗೀತೆ ನನ್ನಿಂದ ಹಾಡಿಸಿ ಕಲ್ಲು ಹೊಡೆಸಿ ಯಾವುದೋ ಜಗಳದ ಸೇಡು ತೀರಿಸಿಕೊಳ್ಳುವ ಹುನ್ನಾರ ನಡೆಸುತ್ತಿದ್ದಾರೇನ ಎಂದು ಅಶ್ವಥ್ ಗೆ ಅನಿಸಿರಲೂ ಸಾಕು.
ಭಟ್ಟರು ಶರೀಫರ ಕುರಿತು ಅಶ್ವಥ್ ರಿಗೆ ಮತ್ತೆ ಪಾಠ ಮಾಡುತ್ತಾರೆ.ಅಶ್ವಥ್ ರಿಗೂ ಶರೀಫರ ಹುಚ್ಚು ಹಿಡಿಸುತ್ತಾರೆ.ಶರೀಫರ ಹತ್ತು ಕೀರ್ತನೆಗಳನ್ನು ಆಶ್ವಥ್ ರಿಂದಲೇ ಹಾಡಿಸಿ ಕ್ಯಾಸೆಟ್ ಮಾಡಿಸುತ್ತಾರೆ.ಅದು ಜನರ ಹುಚ್ಚೆಬ್ಬಿಸುತ್ತದೆ.ಮುಂದೆ ಆಶ್ವಥ್ ರಿಂದ ಶರೀಫರ ಎಂಟು ಕ್ಯಾಸೆಟ್ ಮಾಡಿಸುತ್ತಾರೆ.ಶರೀಫರ ಕುರಿತು ಭಟ್ಟರು ಒಂದು ಪುಸ್ತಕ ರಚಿಸುತ್ತಾರೆ.ತಮಗೆ ಶರೀಫರ ಕುರಿತು ಹಿಡಿದ ಹುಚ್ಚನ್ನು ಲೋಕಕ್ಕೆ ಹಬ್ಬಿಸುತ್ತಾರೆ.ಶಿಶುನಾಳದಂತ ಸಣ್ಣ ಊರವರೇ ಮರೆತಿದ್ದ ಶರೀಫರನ್ನು ಲೋಕ ವಿಖ್ಯಾತ ಮಾಡುತ್ತಾರೆ.ಕನ್ನಡಕ್ಕೆ ಇಷ್ಟು ಉಪಕಾರ ಮಾಡಿದ ಭಟ್ಟರನ್ನು ಮರೆಯುವುದುಂಟೇ.

Chamber Of Commerce Shivamogga ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು- ಡಿ.ಎಸ್.ಅರುಣ್

0

Chamber Of Commerce Shivamogga ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ನಿರಂತರವಾಗಿ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಫೆರೋಕಾಸ್ಟ್ ಸಭಾಂಗಣದಲಿ ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ವತಿಯಿಂದ ಜೆಸಿಐ ಶಿವಮೊಗ್ಗ ಸಹ್ಯಾದ್ರಿ, ಶಿವಮೊಗ್ಗ ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘ ಹಾಗೂ ಹರಪನಹಳ್ಳಿಯ ಜನನಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಪ್ರಕೃತಿ ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು.

ಇಂದಿನ ಯುಗದಲ್ಲಿ ಆಹಾರ ಪದ್ಧತಿ, ಜೀವನಶೈಲಿ ಬದಲಾಗಿದ್ದು, ಒತ್ತಡ, ಮಾಲಿನ್ಯ ವಾತಾವರಣದಿಂದ ಆರೋಗ್ಯ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಆರೋಗ್ಯ ಕಾಳಜಿ ವಹಿಸಬೇಕು. ಪ್ರಕೃತಿ ಚಿಕಿತ್ಸೆ ಬಗ್ಗೆ ಹಿಂದೂ ಸಮಾಜ ಹೆಚ್ಚಿನ ಆಸಕ್ತಿ ಹೊಂದುತ್ತಿದೆ ಎಂದು ತಿಳಿಸಿದರು.

ಜನನಿ ಸಮೂಹ ಸಂಸ್ಥೆಗಳ ಸಾರ್ವಜನಿಕ ಸಂಪರ್ಕ ಮುಖ್ಯಸ್ಥ ಉದಯಶಂಕರ ಭಟ್ ಮಾತನಾಡಿ, ಶರೀರಕ್ಕೆ ರೋಗಗಳು ಬಂದಾಗ ಅವುಗಳನ್ನು ಪರಿಹರಿಸುವ ಶಕ್ತಿ ಪಂಚಭೂತಗಳಲ್ಲಿದೆ ಎಂಬ ತತ್ವವನ್ನು ಆಧರಿಸಿರುವುದು ಪ್ರಕೃತಿ ಚಿಕಿತ್ಸೆ ಎಂದು ಹೇಳಿದರು.
ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಬಿ.ಆರ್.ಧನಂಜಯ ಮಾತನಾಡಿ, ಪ್ರತಿ ದಿನದ ಆಹಾರ ಪದ್ಧತಿ ಹಾಗೂ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಂಡರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.

Chamber Of Commerce Shivamogga ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಯೋಗ, ಪ್ರಕೃತಿ ಚಿಕಿತ್ಸೆಯು ಇಂದಿನ ಕಾಲಘಟ್ಟದಲ್ಲಿ ತುಂಬಾ ಅಗತ್ಯವಾಗಿದ್ದು, ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಪ್ರಕೃತಿ ಚಿಕಿತ್ಸೆ ಅನುಸರಿಸಬೇಕು ಎಂದು ಹೇಳಿದರು.
ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಕಿಶೋರ್ ಕುಮಾರ್, ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷ ಸಂತೋಷ್ ಕುಮಾರ್ ಬಿ.ಎನ್, ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ವಾಗೀಶ್ ಕೋಟಿ, ಜನನಿ ಆಸ್ಪತ್ರೆಯ ಡಾ. ಬಿ.ಜಯರಾಮ್, ಡಾ. ನಿಶ್ಚಿತ್, ಡಾ. ಸಹನಾ, ಪೂಜಾ ದೇವರಾಜ್, ಸಂದೀಪ್, ಅನಿಶ್, ಕೃಷ್ಣಮೂರ್ತಿ, ಮಧುಮಲಾ, ಉಮಾಮಣಿ, ಬಿಂದು ವಿಜಯಕುಮಾರ್, ಗಿರಿಜಾ ಧನಂಜಯ, ವೀಣಾ ಕಿಶೋರ್, ರೋಟರಿ, ಜೆಸಿಐ ಸದಸ್ಯರು ಇದ್ದರು.