Saturday, May 23, 2026
Saturday, May 23, 2026

Eshwara Khandre ಶ್ರಾವ್ಯಾ ಸಾಗರ್ ನಿರ್ಮಾಣದ ಸಾಕ್ಷ್ಯಚಿತ್ರಕ್ಕೆ ಜೀವವೈವಿಧ್ಯ ಪ್ರಶಸ್ತಿ.

Date:

Eshwara Khandre ಕರ್ನಾಟಕ ಸರ್ಕಾರದ ಜೀವವೈವಿದ್ಯ ಮಂಡಳಿ ಕೊಡಮಾಡುವ ೨೦೨೫-೨೬ನೇ ಸಾಲಿನ ಜೀವ ವೈವಿದ್ಯ ಪ್ರಶಸ್ತಿಗೆ ಶ್ರೀಮತಿ ಶ್ರಾವ್ಯಾ ಸಾಗರ್ ಅವರು ಭಾಜನರಾಗಿದ್ದಾರೆ. ಶ್ರಾವ್ಯಾ ಸಾಗರ್ ನಿರ್ಮಿಸಿದ ವರದಾನದಿ ಜೀವವೈವಿದ್ಯ ಸಾಕ್ಷ್ಯಚಿತ್ರವನ್ನು ೨೦೨೫-೨೬ನೇ ಸಾಲಿನ ರಾಜ್ಯಮಟ್ಟದ ಉತ್ತಮ ಜೀವವೈವಿದ್ಯ ಸಾಕ್ಷ್ಯ ಚಿತ್ರವೆಂದು ಪರಿಗಣಿಸಿ ದಿನಾಂಕ: 22-05-2026ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಅಂತಾರಾಷ್ಟ್ರೀಯ ಜೀವವೈವಿದ್ಯ ಕಾರ್ಯಕ್ರಮದಲ್ಲಿ ಮಾನ್ಯ ಅರಣ್ಯ, ಜೀವಪರಿಸರ ಮತ್ತು ಪರಿಸರ ಮಂತ್ರಿಗಳಾದ ಶ್ರೀ ಈಶ್ವರ ಖಂಡ್ರೆ ಅವರು ಪ್ರಶಸ್ತಿ ಪ್ರದಾನ ಮಾಡಿದರು.
Eshwara Khandre ಸಾಗರ ತಾ ಚಿಪ್ಪಳ್ಳಿ ಗ್ರಾಮದ ಪ್ರಗತಿಪರ ಕೃಷಿಕರಾದ ನಾಗೇಂದ್ರ ಸಾಗರ್ ಮತ್ತು ವಾಣಿಶ್ರೀ ದಂಪತಿಗಳ ಪುತ್ರಿ ಶ್ರಾವ್ಯಾ ವೃತ್ತಿಯಲ್ಲಿ ವಕೀಲರು. ಗ್ರಾಮಾಂತರ ಸಮುದಾಯ ವಿಜ್ಞಾನಕೇಂದ್ರ ಶೆಡ್ತಿಕೆರೆ ಇವರ ಸಹಕಾರ, ಮತ್ತು ಕೆ. ವೆಂಕಟೇಶ್ ಕವಲಕೋಡು ಇವರ ಮಾರ್ಗದರ್ಶನದಲ್ಲಿ ಸಾಕ್ಷ್ಯಚಿತ್ರವನ್ನು ನಿರ್ಮಿಸಲಾಗಿದೆ. ವೃಕ್ಷ ಲಕ್ಷ ಆಂದೋಲನ-ಕರ್ನಾಟಕ ಮತ್ತು
ಶಡ್ತಿಕೆರೆ ಸಮುದಾಯ ವಿಜ್ಞಾನ ಕೇಂದ್ರದ ಅಧ್ಯಕ್ಷ, ಸದಸ್ಯರುಗಳು ಶ್ರೀಮತಿ ಶ್ರಾವ್ಯಾ ಅವರನ್ನು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ನೇಪಾಳದಲ್ಲಿ ಶೃಂಗೇರಿ ಜಗದ್ಗುರುಗಳು.

ವಿಶೇಷ ವರದಿ: ಪ್ರಭಾಕರ ಕಾರಂತ Klive Special Article ಜಗದ್ಗುರು ಶ್ರೀ ವಿಧುಶೇಖರ ಭಾರತೀ...

Institute of International Finance ಐಐಎಫ್ ಶಿವಮೊಗ್ಗ ಚಾಪ್ಟರ್ ನ ನೂತನ ಪದಾಧಿಕಾರಿಳ ಆಯ್ಕೆ.

Institute of International Finance ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮೆನ್ (IIF)...

Madhu Bangarappa ಹೊಳೆಹೊನ್ನೂರು ವ್ಯಾಪ್ತಿಯಲ್ಲಿ ಮಳೆಗಾಳಿ ಹಾನಿಗೀಡಾದ ಅಡಿಕೆ ತೋಟಗಳ ಪರಿಹಾರಕ್ಕೆ ಪ್ಯಾಕೇಜ್ ಘೋಷಿಸಲು ನಿರ್ಣಯ- ಮಧು ಬಂಗಾರಪ್ಪ.

Madhu Bangarappa ಜಿಲ್ಲೆಯ ಹೊಳೆಹೊನ್ನೂರು ವ್ಯಾಪ್ತಿಯ ಮತ್ತು ಇತರೆ ಕೆಲವೆಡೆ ಇತ್ತೀಚೆಗೆ ಬಿರುಗಾಳಿ‌...