Saturday, May 23, 2026
Saturday, May 23, 2026

Shimoga News ನಲವತ್ತು ವರ್ಷ ವಯಸ್ಸು ದಾಟಿದ ಪ್ರತೀಯೊಬ್ಬರೂ ಪ್ರತೀ ತಿಂಗಳು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು- ಡಾ.ಚಂದ್ರಶೇಖರ್.

Date:

Shimoga News ನಗರದ ತೃಪ್ತಿ ಹೆಲ್ತ್ ಕೇರ್ ಆಶ್ರಯದಲ್ಲಿ ಇಲ್ಲಿನ ಹೋಂ ಗಾರ್ಡ್ ಅವರಿಗಾಗಿ ಆಯೋಜಿಸಿದ್ದ ಉಚಿತ ಮೂತ್ರ ರೋಗ, ಮೂತ್ರ ಕೋಶ ತಪಾಸಣೆ ಮತ್ತು ಮಾಹಿತಿ ಕಾರ್ಯಕ್ರಮವು ಆಸ್ಪತ್ರೆ ಆವರಣದಲ್ಲಿ ಯಶಸ್ವಿಯಾಗಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮೂತ್ರ ರೋಗದ ತಜ್ಞ ಡಾ| ಚಂದ್ರಶೇಖರ್ ಅವರು, ಆರೋಗ್ಯವೇ ಭಾಗ್ಯ, ಆರೋಗ್ಯವಿಲ್ಲ ದಿದ್ದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರು ಆರೋ ಗ್ಯದ ಕಡೆ ಹೆಚ್ಚು ಗಮನ ಕೊಡಬೇಕು. ಜೊತೆಗೆ ಪ್ರತಿ ೪೦ವರ್ಷ ದಾಟಿದವರು ಪ್ರತಿ ತಿಂಗಳಿಗೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.

Shimoga News ಶಿವಮೊಗ್ಗದ ದುರ್ಗೀಗುಡಿ ಯಲ್ಲಿರುವ ನಮ್ಮ ಸೆಂಟರ್‌ನಲ್ಲಿ ಆರ್ಥಿಕವಾಗಿ ಸಂಕಷ್ಠದಲ್ಲಿರುವವರಿಗೆ ಉಚಿತವಾಗಿ ಮೂತ್ರ ರೋಗ, ಬಿ.ಪಿ. ಕಿಡ್ನಿ, ಮಧುಮೇಹ ಮತ್ತಿತರ ತಪಾಸಣೆಗಳನ್ನು ನಡೆಸಲಾಗುತ್ತಿದ್ದು, ರೋಗಿಗಳು ಇದರ ಸದುಪಯೋಗ ಪಡೆಯಲು ತಿಳಿಸಿದರು.

ತಪಾಸಣೆಯಲ್ಲಿ ಸಾಕಷ್ಟು ಜನ ಪ್ರಯೋಜನ ಪಡೆದರು. ಹೆಲ್ತ್ ಕೇರ್‌ನ ಸುಶ್ಮಾ, ರಕ್ಷಿತಾ ಮತ್ತು ಮಾರ್ಕೇಟಿಂಗ್ ಎಕ್ಸಿಕ್ಯೂಟಿವ್ ಸುನಿಲ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ನೇಪಾಳದಲ್ಲಿ ಶೃಂಗೇರಿ ಜಗದ್ಗುರುಗಳು.

ವಿಶೇಷ ವರದಿ: ಪ್ರಭಾಕರ ಕಾರಂತ Klive Special Article ಜಗದ್ಗುರು ಶ್ರೀ ವಿಧುಶೇಖರ ಭಾರತೀ...

Eshwara Khandre ಶ್ರಾವ್ಯಾ ಸಾಗರ್ ನಿರ್ಮಾಣದ ಸಾಕ್ಷ್ಯಚಿತ್ರಕ್ಕೆ ಜೀವವೈವಿಧ್ಯ ಪ್ರಶಸ್ತಿ.

Eshwara Khandre ಕರ್ನಾಟಕ ಸರ್ಕಾರದ ಜೀವವೈವಿದ್ಯ ಮಂಡಳಿ ಕೊಡಮಾಡುವ ೨೦೨೫-೨೬ನೇ ಸಾಲಿನ...

Institute of International Finance ಐಐಎಫ್ ಶಿವಮೊಗ್ಗ ಚಾಪ್ಟರ್ ನ ನೂತನ ಪದಾಧಿಕಾರಿಳ ಆಯ್ಕೆ.

Institute of International Finance ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮೆನ್ (IIF)...

Madhu Bangarappa ಹೊಳೆಹೊನ್ನೂರು ವ್ಯಾಪ್ತಿಯಲ್ಲಿ ಮಳೆಗಾಳಿ ಹಾನಿಗೀಡಾದ ಅಡಿಕೆ ತೋಟಗಳ ಪರಿಹಾರಕ್ಕೆ ಪ್ಯಾಕೇಜ್ ಘೋಷಿಸಲು ನಿರ್ಣಯ- ಮಧು ಬಂಗಾರಪ್ಪ.

Madhu Bangarappa ಜಿಲ್ಲೆಯ ಹೊಳೆಹೊನ್ನೂರು ವ್ಯಾಪ್ತಿಯ ಮತ್ತು ಇತರೆ ಕೆಲವೆಡೆ ಇತ್ತೀಚೆಗೆ ಬಿರುಗಾಳಿ‌...