Shivamogga City Corporation ಶಿವಮೊಗ್ಗ ಮಹಾನಗರ ಪಾಲಿಕೆಯ ವಿವಿದೆಡೆ ತ್ಯಾಜ್ಯಗಳನ್ನು ವಿಲೇವಾರಿ ಮಾಡದಿರುವುದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿರುವುದಾಗಿ ಮಾಧ್ಯಮದಲ್ಲಿ ವರದಿಯಾಗಿತ್ತು. ಇದನ್ನು ಗಮನಿಸಿದ ಮುಖ್ಯಮಂತ್ರಿಯವರ ಕಚೇರಿಯ ಕುಂದುಕೊರತೆ ವಿಭಾಗದ ವಿಶೇಷ ಕರ್ತವ್ಯಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದರು.
Shivamogga City Corporation ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾಲ ಕಾಲಕ್ಕೆ ಘನತ್ಯಾಜ್ಯ ವಸ್ತು ವಿಲೇವಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದು, ಮಾನವ ಸಂಪನ್ಮೂಲ ಮತ್ತು ಯಂತ್ರೋಪಕರಣಗಳನ್ನು ನಿಯಮಾವಳಿಗಳ ಪ್ರಕಾರ ಸ್ವಚ್ಛತೆ ಕಾರ್ಯವನ್ನು ದಿನನಿತ್ಯ ಯಾವುದೇ ಲೋಪವಿಲ್ಲದಂತೆ ನಿರ್ವಹಿಸಲಾಗುತ್ತಿರುತ್ತದೆ ಎಂದು ಶಿವಮೊಗ್ಗ ಮಹಾನಗರಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.
Shiomga News ಕೃಷಿ ಬಗ್ಗೆ ರೈತರ ಆಸಕ್ತಿ ಕಡಿಮೆ ಆಗಿರುವುದರಿಂದ ಕೃಷಿ ಹಿಂದೆ ಬಿದ್ದಿದೆ, ಯುವ ರೈತರು ನಗರ ಪ್ರದೇಶದ ಆಕರ್ಷಣೆ ಹಾಗೂ ನೌಕರಿಗೆ ವ್ಯಾಪರಕ್ಕೆ ಒತ್ತು ಕೊಡುವಷ್ಟು ಕೃಷಿಗೆ ಕೊಡದ ಕಾರಣ ಕೃಷಿ ಹಿನ್ನಲೆಗೆ ಬಿದ್ದಿದೆ ಎಂದು ಕಾಶಿ ಪೀಠದ ಜಗದ್ಗುರು ೧೦೦೮ ಡಾ.ಮಲ್ಲಿಕಾಜರ್ನ ವಿಶ್ವರಾಧ್ಯ ಶಿವಾಚಾರ್ಯ ಭಗವತ್ಪಾದರು ಬೇಸರ ವ್ಯಕ್ತಪಡಿಸಿದರು.
ಲಿಂ.ಶ್ರೀ ಮೃತ್ಯುಂಜಯ ಶಿವಾಚಾರ್ಯ ಶ್ರೀಗಳ ಪುಣ್ಯಾರಾಧನೆ ಹಾಗೂ ಲಿಂ.ಚAದ್ರಶೇಖರ ಶಿವಾಚಾರ್ಯ ಶ್ರೀಗಳ ಪುಣ್ಯಸ್ಮರಣೆ ಅಂಗವಾಗಿ ಹೊನ್ನಾಳಿ ಪಟ್ಟಣದ ಹಿರೇಕಲ್ಮಠದಲ್ಲಿ ಹಮ್ಮಿಕೊಂಡಿರುವ ರಾಜ್ಯಮಟ್ಟದ ಕೃಷಿಮೇಳ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ನಮ್ಮ ಪೂರ್ವಜರ ಕಾಲದಲ್ಲಿ ಕೃಷಿ ಉನ್ನತ ಸ್ಥಾನ ಪಡೆದಿತ್ತು, ವ್ಯಾಪಾರ ಮಧ್ಯಮ, ನೌಕರಿ ಕೊನೆಯ ಸ್ಥಾನ ಪಡೆದಿತ್ತು, ಆದರೀಗ ವ್ಯಾಪಾರ, ಉದ್ಯೋಗ ಮೊದಲೆರಡು ಸ್ಥಾನ ಪಡೆದು ಕೃಷಿಯನ್ನು ಕೊನೆಯ ಸ್ಥಾನಕ್ಕೆ ತಳ್ಳಿದೆ ಎಂದು ಹೇಳಿದರು. ಒಂದು ಮನೆಯಲ್ಲಿ ಇಬ್ಬರು ಮಕ್ಕಳಿದ್ದು ಒಬ್ಬರು ಕೃಷಿಯನ್ನು, ಮತ್ತೊಬ್ಬರು ನೌಕರಿಯನ್ನು ಅವಲಂಬಿಸಿದ್ದರೆ, ನಾವು ನೌಕರಿ ಇರುವ ಮಗನನ್ನು ನೋಡುವ ರೀತಿಯೇ ಬೇರೆಯಾಗಿರುತ್ತದೆ. ಇದನ್ನು ಬಿಡಬೇಕು ಎಂದ ಅವರು, ಭೂಮಿ ರಾಸಾಯನಿಕ ಗೊಬ್ಬರಗಳಿಂದ ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದ್ದು, ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವತ್ತ ರೈತರು ಗಮನಕೊಡಬೇಕು ಎಂದರು.
ಇದು ಹೀಗೆ ಮುಂದುವರಿದರೆ ಭವಿಷ್ಯದಲ್ಲಿ ಆಹಾರದ ಕೊರತೆ ಉಂಟಾಗಬಹುದು, ನಮ್ಮ ಯುವಕರು ಎಚ್ಚೆತ್ತುಕೊಳ್ಳದಿದ್ದರೆ ದೇಶದಲ್ಲಿ ಆಹಾರ ಭದ್ರತೆ ಕಾಡುವುದರಲ್ಲಿ ಅನುಮಾನವೇ ಇಲ್ಲ ಎಂದರು.
ಭೂಮಿತಾಯಿಯನ್ನು ನಂಬಿದರೆ ನಮಗೆ ಕೊನೆಯವರೆವಿಗೂ ಅನ್ನ ನೀಡಿ ಸಾಕುತ್ತಾಳೆ, ಆದರೆ ನಾವು ಭೂಮಿತಾಯಿಯನ್ನು ಮರೆತರೆ ಆಕೆ ಕೂಡ ನಮ್ಮ ಅನ್ನಕ್ಕೂ ಕಮಟಕ ಆಗಬಹುದು,ಆದ್ದರಿಂದ ಮನೆಯಲ್ಲಿ ಕೃಷಿಗೆ ಮೊದಲ ಆಧ್ಯತೆ ನೀಡಿ ಎಂದು ರೈತರಿಗೆ ಕರೆ ನೀಡಿದರು.
ಪೋಷಕರು ತಮ್ಮ ಮಕ್ಕಳ ವಿಷಯದಲ್ಲಿ ನೌಕರಿ ಮಾಡುವ ಹಾಗೂ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಮಕ್ಕಳಲ್ಲಿ ತಾರತಮ್ಯ ಮಾಡುತ್ತಿರುವುದು ಕಂಡು ಬರುತ್ತಿದೆ ಇದು ಸಲ್ಲದು ಎಂದು ಹೇಳಿದರು.
ಶಿಕ್ಷಣದಲ್ಲಿ ಹಾಗೂ ಇತರ ಜ್ಞಾನ ಅಪಾರವಿರುವ ಯುವಕ ನೌಕರಿ ಹಿಡಿಯುತ್ತಾನೆ, ಶಿಕ್ಷಣದಲ್ಲಿ ಜ್ಞಾನದಲ್ಲಿ ಹಿಂದುಳಿದವ ಕೃಷಿಯಲ್ಲಿ ತೊಡಗಿಸಿಕೊಳ್ಳುವುದು ಸಾಮಾನ್ಯವಾಗಿದೆ ಅಪಾರ ಜ್ಞಾನವಂತ ಕೃಷಿಯಲ್ಲಿ ತೊಡಗಿಸಿಕೊಂಡರೆ ಉತ್ತಮ ಎಂದು ಹೇಳಿದರು
Shiomga News ಪ್ರಾಸ್ತಾವಿಕವಾಗಿ ಮಾತನಾಡಿದ ಹೊನ್ನಾಳಿ ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನಾ ಶಿವಾಚಾರ್ಯ ಸ್ವಾಮಿಜಿಗಳು, ಶ್ರೀಮಠದಿಂದ ಕೃಷಿಮೇಳ ಮಾಡುವ ಅವಶ್ಯಕತೆ ಇತ್ತೆ ಎಂದು ಕೆಲವ ಮನಸ್ಸಿನಲ್ಲಿದೆ ಆದರೆ ಇಂದು ರೈತನ ಬದುಕು ನಿಜಕ್ಕೂ ದುಸ್ತರವಾಗಿದೆ ಎಂಬುದನ್ನೆ ಎಲ್ಲರೂ ಅರಿಯಬೇಕು ಹಾಗಾಗಿ ಶ್ರೀಮಠ ರಾಜ್ಯಮಟ್ಟದ ಕೃಷಿಮೇಳ ನಡೆಸಿಅವರ ಬದುಕು ಹಸನಾಗಬೇಕು ಎಂದ ನಮ್ಮ ಆಶಯ ಎಂದರು.
ರೈತ ಎಂದೂ ತಮ್ಮ ನೆಮ್ಮದಿಯ ಜೀವನ ಸಾಗಿಸುತ್ತಾನೋ ಆಗ ಮಾತ್ರ ನಾವು ನೆಮ್ಮದಿಯಾಗಿರಲು ಸಾಧ್ಯ, ಹಾಗಾಗಿ ನಮ್ಮ ಶ್ರೀ ಮಠದಲ್ಲಿ ರಾಜ್ಯಮಟ್ಟದ ಕೃಷಿಮೇಳ ನಡೆಸಲು ಹಮ್ಮಿಕೊಂಡಿದ್ದೇವೆ ಎಂದ ಅವರು ಕೆಲವರು ಕೃಷಿಮೇಳ ನಡೆಸಲು ಸಮಯ ಅವಕಾಶ ಕಡಿಮೆ ಇದೆ ಎಂದು ಹೇಳಿದ್ದರೂ ಆದರೂ ನಾವು ಎಲ್ಲವನ್ನು ಅನುವು ಮಾಡಿಕೊಂಡು ಎಲ್ಲರ ಸಹಕಾರದಿಂದ ಕೃಷಿಮೇಳ ನಡೆಸುತ್ತಿದ್ದೇವೆ ಎಂದರು.ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್,ಶಾಸಕ ಡಿ.ಜಿ.ಶಾಂತನಗೌಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಬಯಲುಸೀಮೆ ನಿಗಮ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ ಹಾಗೂ ಇತರರು ಕೃಷಿಮೇಳಕ್ಕೆ ಶಕ್ತಿಮೀರಿ ಸಹಕಾರ ನೀಡಿದ್ದಾರೆ ಎಂದು ಸ್ಮರಿಸಿದರು.
ಶಾಸಕ ಡಿ.ಜಿ.ಶಾಂತನಗೌಡ ಅವರು ಸ್ವಾಗತ ಭಾಷಣ ಮಾಡಿ, ಮಠ ಮಾನ್ಯಗಳು ಎಂದಿಗೂ ಧರ್ಮ,ಸಂಸ್ಕಾರ,ಮೌಲ್ಯಗಳ ಬಗ್ಗೆ ಮಾತನಾಡುತ್ತಾರೆ,ಆದರೆ ವಿಶೇಷವಾಗಿ ನಮ್ಮ ಹಿರೇಕಲ್ಮಠದಲ್ಲಿ ರೈತರ ಬಗ್ಗೆ ಚಿಂತಿಸಿ,ರೈತರ ಬದುಕು ದುಸ್ತಾರವಾಗದಂತೆ ನಾವು ನೋಡಿಕೊಳ್ಳಬೇಕು,ಅದು ನಮ್ಮ ಆಧ್ಯ ಕರ್ತವ್ಯ ಎಂದು ತಿಳಿದು ನಮ್ಮ ಶ್ರೀಗಳು ಕೃಷಿಮೇಳ ನಡೆಸಿ,ರೈತರಿಗೆ ಬೇಕಾದ ಕೃಷಿ ಪರಿಕರ ಹಾಗೂ ಆಧುನಿಕ ಬೇಸಾಯದ ಬಗ್ಗೆ ತಿಳಿಸಲು ಕೃಷಿಮೇಳ ನಡೆಸುತ್ತಿರುವ ನಮ್ಮ ಶ್ರೀಗಳು ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ ಎಂದರು.
ಹಿರೇಕೆರುರು ಶಾಸಕ ಯು.ಬಿ.ಬಣಕರ್ ಮಾತನಾಡಿ, ರೈತರಿಗೆ ಬಗ್ಗೆ ವೇದಿಕೆಗಳಲ್ಲಿ ಮಾತನಾಡುತ್ತೇವೆ ಆದರೆ ಅವರ ಸಮಸ್ಯೆಗಳನ್ನು ಬಗೆ ಹರಿಸುವ ಕಾರ್ಯಕ್ಕೆ ನಾವು ಮಗ್ನರಾಗಬೇಕಿದೆ.ರೈತರಿಗೆ ಹಾಲಿನ ಧರ ನಿಗದಿಮಾಡಿರುವುದನ್ನು ಬಿಟ್ಟರೆ ಬೇರೆ ಬೆಳೆಗಳಿಗೆ ಇನ್ನೂ ಧರ ನಿಗದಿ ಮಾಡಿಲ್ಲ,ನಮ್ಮ ಸರ್ಕಾರ ಕೂಡಲೆ ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇವೆ ಎಂದರು.
ಜನಸAಖ್ಯೆ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಬರುವ ದಿನಗಳಲ್ಲಿ ಹೆಚ್ಚು ಆಹಾರ ಬೆಳೆಯುವ ಕಡೆ ರೈತರು ಆಧುನಿಕ ಕೃಷಿ ಪರಿಕರಗಳ ಬಗ್ಗೆ ಅಧ್ಯಾಯನ ಮಾಡಬೇಕು ಎಂದು ತಿಳಿಸಿದರು.
ರಾಂಪುರ ಶ್ರೀಮಠದ ಶಿವಕುಮಾರ ಹಾಲಸ್ವಾಮಿಜಿ,ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷ ಪ್ರಭು ಸಾರಂಗ ದೇಶಿಕೇಂದ್ರ ಶಿವಾಚಾರ್ಯ ಶ್ರೀಗಳು,ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವ ರಟ್ಟೆಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಶ್ರೀಗಳು ಮಾತನಾಡಿ, ಯಾವುದದರೂ ಕಾರ್ಯ ಮಾಡಿದರೆ ಅದಕ್ಕೊಂದು ಫಲ ಬೇಕು,ಅದನ್ನು ನಾವು ಸ್ವೀಕಾರ ಮಾಡಬೇಕು.ಹಾಗಾಗಿ ಈ ಕೃಷಿ ಮೇಳಕ್ಕೆ ಆಗಮಿಸಿ ಕೃಷಿ ವಿಚಾರಗಳ ಲಾಭ ಪಡೆಯಬೇಕು ಎಂದರು.
ಮಾಜಿ ಶಾಸಕ ವೈ ಸಂಪAಗಿ,ಬಯಲುಸೀಮೆ ನಿಗಮ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ,ಮಾಜಿ ಕಾಡ ಅಧ್ಯಕ್ಷ ನಗರದ ಮಹಾದೇವಪ್ಪ,ಮಾತನಾಡಿದರು.
ಅನ್ನ ಸಂತರ್ಪಣೆ ; ಶುಕ್ರವಾರ ಬೆಳಗ್ಗೆಯಿಂದಲ್ಲೇ ಉಪಹಾರ,ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸರದಿಯಲ್ಲಿ ನಿಂತು ಊಟ ಉಪಹಾರ ಮಾಡುತ್ತಿದ್ದುದ್ದು ಕಂಡು ಬಂತು.
ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ,ಎಚ್.ಎ.ಉಮಾಪತಿ,ರೈತ ಮುಖಂಡ ಹಿರೇಮಠದ ಬಸವರಾಜಪ್ಪ,ಗ್ಯಾರಂಟಿ ಅನುಷ್ಟಾನ ಸಮಿತಿಯ ಅಧ್ಯಕ್ಷ ಎಚ್.ಗದ್ದಿಗೇಶ್, ಪುರಸಭೆ ಮಾಜಿ ಸದಸ್ಯ ಹೊಸಕೇರಿ ಸುರೇಶ್,ಅನ್ನದಾನಯ್ಯ,ಪಂಚಾಕ್ಷರಯ್ಯ,ವೀರಣ್ಣ,ದಿಡಗುರು ಪಾಲಕ್ಷಪ್ಪ,ವಾಸಪ್ಪ,ಕುಮಾರಸ್ವಾಮಿ,ಶಾಂತ ಸುರೇಶ್,ದಾನಪ್ಪ,ಲಾವಣ್ಯ, ಮಧುಗೌಡ,ಹಾಗೂ ಇತರರು ಇದ್ದರು.
ಎಚ್ಎನ್ಎಲ್ ಕೃಷಿಮೇಳ ಫೆ ೨೭ ಚಿತ್ರ೧ ; ಹೊನ್ನಾಳಿ ಹಿರೇಕಲ್ಮಠದಲ್ಲಿ ಆಯೋಜಿಸಿದ್ದ ನಾಲ್ಕು ದಿನಗಳ ಕೃಷಿ ಮೇಳವನ್ನು ಕಾಶಿ ಪೀಠದ ಜಗದ್ಗುರು ೧೦೦೮ ಡಾ.ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಭಗವತ್ಪಾದರು ಹಾಗೂ ಶಾಸಕ ಡಿ.ಜಿ.ಶಾಂತನಗೌಡ ಉದ್ಘಾಟಿಸಿದರು.ರಾಂಪುರ ಶ್ರೀಮಠದ ಶಿವಕುಮಾರ ಹಾಲಸ್ವಾಮಿಜಿ,ಶಾಸಕ ಯು.ಬಿ.ಬಣಕಾರ್,ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ,ಎಚ್.ಬಿ.ಮAಜಪ್ಪ,ಎಚ್.ಎ.ಉಮಾಪತಿ,ರೈತ ಮುಖಂಡ ಹಿರೇಮಠದ ಬಸವರಾಜಪ್ಪ,ಗ್ಯಾರಂಟಿ ಅನುಷ್ಟಾನ ಸಮಿತಿಯ ಅಧ್ಯಕ್ಷ ಎಚ್.ಗದ್ದಿಗೇಶ್, ಪುರಸಭೆ ಮಾಜಿ ಸದಸ್ಯ ಹೊಸಕೇರಿ, ಜಿ ವಿಜಯ್ ಕುಮಾರ್.. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ.. ಉಪಾಧ್ಯಕ್ಷರು
Shimoga News ನಗರದ ವಾಣಿಜ್ಯೋದ್ಯಮ ಕುಟುಂಬದ ದಿವಂಗತ ಮಹೇಂದ್ರ ಭೂಪಾಳಂ ಅವರ ಪತ್ನಿ ನಿರ್ಮಲಾ ಮಹೇಂದ್ರ ಭೂಪಾಳಂ ಶುಕ್ರವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ನಿಧನರಾದರು. ಅವರಿಗೆ ಮಗಳು, ಅಳಿಯ, ಮೊಮ್ಮಕ್ಕಳು ಇದ್ದಾರೆ. ಶನಿವಾರ ರೋಟರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ರೋಟರಿ ಶಿವಮೊಗ್ಗ ಪೂರ್ವ, ವಾಸವಿ ಬಳಗ, ಇನ್ನರ್ವ್ಹೀಲ್ ಕ್ಲಬ್ ಶಿವಮೊಗ್ಗ ಪೂರ್ವ, ಗೆಳತಿ ಸಂಸ್ಥೆ ಮತ್ತಿತರ ಸಂಘ ಸಂಸ್ಥೆಗಳ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
Shimoga News ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ವಿಕಲಚೇತನರಿಗೆ ತ್ರಿಚಕ್ರ ವಾಹನಗಳ ವಿತರಣೆ
ಸಮಾಜಮುಖಿ ಚಿಂತನೆ ಹಾಗೂ ಸಮಾವೇಶಾತ್ಮಕ ಅಭಿವೃದ್ಧಿಯತ್ತ ತನ್ನ ಬದ್ಧತೆಯನ್ನು ಮತ್ತೊಮ್ಮೆ ಪ್ರತಿಪಾದಿಸಿದ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಸ್ಥಾಪಿತ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ವಿಕಲಚೇತನರಿಗೆ ಅನುಕೂಲಿತ ತ್ರಿಚಕ್ರ ವಾಹನಗಳ ವಿತರಣೆ ಕಾರ್ಯಕ್ರಮವು ಇಂದು ಕೊಪ್ಪಳ ಜಿಲ್ಲಾಡಳಿತ ಆವರಣದಲ್ಲಿ ಭಾವಪೂರ್ಣವಾಗಿ ನಡೆಯಿತು.
ಸಮಾಜದ ಅಂಚಿನಲ್ಲಿರುವ ವಿಕಲಚೇತನರು ಸ್ವಾಭಿಮಾನದಿಂದ ಬದುಕಲು ಮತ್ತು ತಮ್ಮ ದೈನಂದಿನ ಚಟುವಟಿಕೆಗಳನ್ನು ಸ್ವತಂತ್ರವಾಗಿ ನಿರ್ವಹಿಸಲು ಅನುಕೂಲವಾಗುವಂತೆ ಒಟ್ಟು 5 ತ್ರಿಚಕ್ರ ವಾಹನಗಳನ್ನು ದೇಣಿಗೆಯಾಗಿ ನೀಡಿ ಇಂದು 27-02-2026 ರಂದು ಜಿಲ್ಲಾದಿಕಾರಿಗಳು ಮತ್ತು ಲೋಕಸಭಾ ಸದಸ್ಯರ ಸಮುಖದಲ್ಲಿ ವಿತರಿಸಲಾಯಿತು.
ಈ ವಾಹನಗಳು ಫಲಾನುಭವಿಗಳ ಸಂಚಾರ ಸುಗಮಗೊಳಿಸಿ, ಉದ್ಯೋಗ, ಶಿಕ್ಷಣ ಹಾಗೂ ಆರೋಗ್ಯ ಸೇವೆಗಳ ಪ್ರವೇಶವನ್ನು ಸುಲಭಗೊಳಿಸುವುದರೊಂದಿಗೆ ಅವರ ಜೀವನಮಟ್ಟವನ್ನು ಉತ್ತಮಗೊಳಿಸುವ ಉದ್ದೇಶ ಹೊಂದಿವೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಗೌರವಾನ್ವಿತ ಸಂಸದರಾದ ಶ್ರೀ ರಾಜಶೇಖರ್ ಹಿಟ್ನಾಳ್ ಅವರು ಮಾತನಾಡಿ, ಖಾಸಗಿ ಸಂಸ್ಥೆಗಳು ಸರ್ಕಾರದೊಂದಿಗೆ ಕೈಜೋಡಿಸಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳುವುದು ಅತ್ಯಂತ ಶ್ಲಾಘನೀಯ ಎಂದರು. ಇಂತಹ ಉಪಕ್ರಮಗಳು ವಿಕಲಚೇತನರ ಬದುಕಿನಲ್ಲಿ ನಿಜವಾದ ಬದಲಾವಣೆಯನ್ನು ತರಲಿವೆ ಎಂದು ಅವರು ಅಭಿಪ್ರಾಯಪಟ್ಟರು.
Shimoga News ಗೌರವಾನ್ವಿತ ಜಿಲ್ಲಾಧಿಕಾರಿಗಳಾದ ಶ್ರೀ ಸುರೇಶ್ ಇಟ್ನಾಳ್ ಅವರು ತಮ್ಮ ಮಾತಿನಲ್ಲಿ, ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯ (CSR) ಚಟುವಟಿಕೆಗಳು ಜಿಲ್ಲೆಯಲ್ಲಿ ಸಮಾವೇಶಾತ್ಮಕ ಬೆಳವಣಿಗೆಯನ್ನು ಉತ್ತೇಜಿಸುತ್ತಿವೆ ಎಂದು ತಿಳಿಸಿದರು. ವಿಕಲಚೇತನರ ಸಬಲೀಕರಣಕ್ಕೆ ಇಂತಹ ಸಹಾಯ ಹಸ್ತವು ಮಹತ್ವದ್ದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ್, ಜಿಲ್ಲಾ ಕಾರ್ಮಿಕ ಅಧಿಕಾರಿ ಸುಧಾ ಗರಗ, ಕೊಪ್ಪಳ ಕಾರ್ಖಾನೆ ಮತ್ತು ಬಾಯ್ಲರ್ಗಳ ಸ್ವಾಸ್ಥ್ಯ ಇಲಾಖೆಯ ಸಹಾಯಕ ನಿರ್ದೇಶಕ ವಿಜಯಕುಮಾರ್ ಬಿ., ಗಂಗಾವತಿ ಕಾರ್ಮಿಕ ನಿರೀಕ್ಷಕ ಎಂ.ಅಶೋಕ, ಕೊಪ್ಪಳ ಕಾರ್ಮಿಕ ನಿರೀಕ್ಷಕಿ ಮಂಜುಳಾ ವಿಶ್ವನಾಥ, ಕುಷ್ಟಗಿ ಕಾರ್ಮಿಕ ನಿರೀಕ್ಷಕಿ ನಿವೇದಿತಾ, ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡ್ರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಇತರೆ ಜನಪ್ರತಿನಿಧಿಗಳು, ವಿಶೇಷ ಚೇತನರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಫಲಾನುಭವಿಗಳಿಗೆ ಶುಭಾಶಯ ಕೋರಿದರು.
ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಪರವಾಗಿ ಶ್ರೀ ಶಿವಯ್ಯ ಸ್ವಾಮಿ, ಉಪಾಧ್ಯಕ್ಷರು – ಮಾನವ ಸಂಪನ್ಮೂಲ ಮತ್ತು ಆಡಳಿತ, ಶ್ರೀ ಕಿರಣ್ ಶೇಜೆಕರ್, ಸಿನಿಯರ್ ಜನರಲ್ ಮ್ಯಾನೇಜರರ್- ಹೆಚ್ ಆರ್ ಮತ್ತು ಐ ಆರ್, ಡಾ. ಪ್ರವೀಣ್ ಹಾಗೂ ಶ್ರೀ ವಿಕ್ರಂ ಪಾಟೀಲ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಫಲಾನುಭವಿಗಳಿಗೆ ವಾಹನಗಳನ್ನು ಹಸ್ತಾಂತರಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಫಲಾನುಭವಿಗಳು ಮತ್ತು ಅವರ ಕುಟುಂಬದವರು ಕಂಪನಿಯ ಈ ಸಮಾಜಮುಖಿ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದರು. ಸಮಾಜದ ಪ್ರತಿಯೊಬ್ಬರೂ ಸಮಾನ ಅವಕಾಶಗಳನ್ನು ಹೊಂದಬೇಕು ಎಂಬ ಆಶಯದೊಂದಿಗೆ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಂದಿನ ದಿನಗಳಲ್ಲಿಯೂ ಇಂತಹ ಮಾನವೀಯ ಕಾರ್ಯಗಳನ್ನು ಮುಂದುವರಿಸಲು ಬದ್ಧವಾಗಿದೆ ಎಂದು ಶ್ರೀ ಶಿವಯ್ಯ ಸ್ವಾಮಿಯವರು ತಿಳಿಸಿದ್ದಾರೆ.
ಈ ಕಾರ್ಯಕ್ರಮವು ಸಮಾಜದಲ್ಲಿ ಸಮಾನತೆ, ಸ್ವಾವಲಂಬನೆ ಮತ್ತು ಮಾನವೀಯ ಮೌಲ್ಯಗಳನ್ನು ಉತ್ತೇಜಿಸುವ ಮಹತ್ವದ ಹೆಜ್ಜೆಯಾಗಿದ್ದು, ಜಿಲ್ಲೆಯಲ್ಲಿ ಒಂದು ಸಕಾರಾತ್ಮಕ ಸಂದೇಶವನ್ನು ರವಾನಿಸಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದರು.
Dinesh Gundu Raoಕರ್ನಾಟಕಕ್ಕೆ 2026-27ರಲ್ಲಿ ₹ 4.99 ಲಕ್ಷ ಕೋಟಿಯಷ್ಟು ಹೆಚ್ಚಿನ ಮೊತ್ತದ ಆದ್ಯತಾ ವಲಯದ ಸಾಲ ಸಾಮರ್ಥ್ಯವನ್ನು ನಬಾರ್ಡ್ ಅಂದಾಜಿಸಿದೆ
ನಬಾರ್ಡ್ನಿಂದ “2026-27ನೇಹಣಕಾಸುವರ್ಷಕ್ಕಾಗಿರಾಜ್ಯನಿರ್ದಿಷ್ಟಪತ್ರ” ಬಿಡುಗಡೆ
ನಬಾರ್ಡ್ 2026-27ನೇ ಸಾಲಿಗೆ ಕರ್ನಾಟಕಕ್ಕೆ ₹ 4.99 ಲಕ್ಷ ಕೋಟಿ ಆದ್ಯತಾ ವಲಯದ ಸಾಲ ಸಾಮರ್ಥ್ಯವನ್ನು ಅಂದಾಜಿಸಿದೆ. ಇದು 2025-26ಕ್ಕೆ ಮಾಡಿದ ಅಂದಾಜಿಗಿಂತ 12% ಹೆಚ್ಚಾಗಿದೆ.
ನಬಾರ್ಡ್ನ ಕರ್ನಾಟಕ ಪ್ರಾದೇಶಿಕ ಕಚೇರಿಯು 2026-27ನೇ ಸಾಲಿನ ರಾಜ್ಯ ಸಾಲ ವಿಚಾರ ಸಂಕಿರಣವನ್ನು 2026 ಫೆಬ್ರವರಿ 27ರಂದು ಬೆಂಗಳೂರಿನ ಕೆ.ಜಿ. ರಸ್ತೆಯಲ್ಲಿರುವ ತನ್ನ ಪ್ರಾದೇಶಿಕ ಕಚೇರಿಯಲ್ಲಿ ಆಯೋಜಿಸಿತ್ತು. ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಅವರು ಈ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀಮತಿ ಶಾಲಿನಿ ರಜನೀಶ್, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ/ಡಿಸಿ ಶ್ರೀಮತಿ ಉಮಾ ಮಹಾದೇವನ್, ಆರ್ಬಿಐ ಜನರಲ್ ಮ್ಯಾನೇಜರ್ ಶ್ರೀ ಕಾರ್ತಿಕೇಯನ್, ಕೆನರಾ ಬ್ಯಾಂಕ್ನ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಭವೇಂದ್ರ ಕುಮಾರ್, ಎಸ್ಎಲ್ಬಿಸಿ ಕರ್ನಾಟಕದ ಸಂಚಾಲಕ ಶ್ರೀ ಭಾಸ್ಕರ್ ಚಕ್ರವರ್ತಿ ಮತ್ತು ಬ್ಯಾಂಕುಗಳು ಮತ್ತು ರಾಜ್ಯ ಸರ್ಕಾರಿ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ, ರೈತರ ಅಭಿವೃದ್ಧಿ, ಕಿರು ಸಾಲ ಸಂಸ್ಥೆಗಳಡಿ ಗ್ರಾಮೀಣ ಮಹಿಳೆಯರು, ಎಫ್ಪಿಒಗಳು ಮತ್ತು ಹಣಕಾಸು ಸೇರ್ಪಡೆಯಲ್ಲಿನ ಮಧ್ಯಸ್ಥಿಕೆಗಳನ್ನು ಎತ್ತಿ ತೋರಿಸುವ ಪ್ರದರ್ಶನವನ್ನು ನಬಾರ್ಡ್ ಕಚೇರಿಯಲ್ಲಿ ಯೋಜಿಸಲಾಗಿತ್ತು. ಈಪ್ರದರ್ಶನವನ್ನುಕರ್ನಾಟಕಸರ್ಕಾರದಆರೋಗ್ಯಮತ್ತುಕುಟುಂಬಕಲ್ಯಾಣಸಚಿವಶ್ರೀದಿನೇಶ್ಗುಂಡೂರಾವ್ಉದ್ಘಾಟಿಸಿದರು.
2026-27ನೇ ಸಾಲಿನ ಹಣಕಾಸು ವರ್ಷದ ರಾಜ್ಯ ನಿರ್ದಿಷ್ಟ ಪತ್ರಿಕೆಯನ್ನು ಗೌರವಾನ್ವಿತ ಆರೋಗ್ಯ ಸಚಿವರು ಬಿಡುಗಡೆ ಮಾಡುವುದರೊಂದಿಗೆ ವಿಚಾರ ಸಂಕಿರಣ ಪ್ರಾರಂಭವಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಗೌರವಾನ್ವಿತ ಶ್ರೀ ದಿನೇಶ್ ಗುಂಡೂರಾವ್, ನಮ್ಮ ಜನರ ಅಗತ್ಯಗಳಿಗೆ ಅನುಗುಣವಾಗಿ ನಮ್ಮ ಆರ್ಥಿಕ ಪರಿಸರವನ್ನು ಹೊಂದಿಸುವ ಮೂಲಕ ಕರ್ನಾಟಕದ ಅಭಿವೃದ್ಧಿ ಭೂದೃಶ್ಯವನ್ನು ರೂಪಿಸುವಲ್ಲಿ ನಬಾರ್ಡ್ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಹೇಳಿದರು. ಪ್ರತಿ ವರ್ಷ, ಬ್ಯಾಂಕುಗಳು, ಸರ್ಕಾರಿ ಇಲಾಖೆಗಳು ಮತ್ತು ವಲಯ ತಜ್ಞರನ್ನು ಒಟ್ಟುಗೂಡಿಸಿ ರಾಜ್ಯ ನಿರ್ದಿಷ್ಟ ಪತ್ರವನ್ನು ಚರ್ಚೆಗಾಗಿ ನಬಾರ್ಡ್ ಮಂಡಿಸುತ್ತದೆ. ಇದು ಲೀಡ್ ಬ್ಯಾಂಕ್ನಿಂದ ವಾರ್ಷಿಕ ಸಾಲ ಯೋಜನೆ ತಯಾರಿಸುವುದಕ್ಕೆ ಅಡಿಪಾಯ ಹಾಕುತ್ತದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ, ನಬಾರ್ಡ್ನಿಂದ ವಿತರಣೆಯಾದ ಮೊತ್ತ ₹25,189 ಕೋಟಿಗೆ ತಲುಪಿದೆ, ಅದರಲ್ಲಿ ₹21,560 ಕೋಟಿ ಬ್ಯಾಂಕುಗಳಿಗೆ, ವಿಶೇಷವಾಗಿ ಸಹಕಾರಿ ಬ್ಯಾಂಕುಗಳಿಗೆ ಮರುಹಣಕಾಸು ಮತ್ತು ₹3,629 ಕೋಟಿಗಳನ್ನು ನಬಾರ್ಡ್ RIDF ಅಡಿಯಲ್ಲಿ ಕರ್ನಾಟಕ ಸರ್ಕಾರಕ್ಕೆ ಪ್ರಮುಖ ಮೂಲಸೌಕರ್ಯಕ್ಕಾಗಿ ನೀಡಿದೆ. ಕರ್ನಾಟಕದ ಅಭಿವೃದ್ಧಿ ಪ್ರಯಾಣದಲ್ಲಿ ನಬಾರ್ಡ್ ವಿಶ್ವಾಸಿ ಪಾಲುದಾರ. 2032ರ ವೇಳೆಗೆ ಕರ್ನಾಟಕ $1 ಟ್ರಿಲಿಯನ್ ಆರ್ಥಿಕತೆಯಾಗುವ ಆಕಾಂಕ್ಷೆಯತ್ತ ಸಾಗುತ್ತಿರುವಾಗ, ಆರೋಗ್ಯ ವಲಯವು ಈ ಪ್ರಗತಿಯ ಅಡಿಪಾಯವನ್ನು ರೂಪಿಸುತ್ತದೆ ಎಂದು ಅವರು ಹೇಳಿದರು. ಆರೋಗ್ಯಕರ ಜನರು ಉತ್ಪಾದಕ ಸಮಾಜ, ಸದೃಢ ಸಮುದಾಯಗಳು ಮತ್ತು ಸುಸ್ಥಿರ ಗ್ರಾಮೀಣ ಅಭಿವೃದ್ಧಿಯ ಬೆನ್ನೆಲುಬಾಗಿರುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಕಲಿತ ಪಾಠಗಳು, ಸಾರ್ವಜನಿಕ ಆರೋಗ್ಯ ಮೂಲಸೌಕರ್ಯವು ಬಲಿಷ್ಠವಾಗಿರಬೇಕು, ಎಲ್ಲರನ್ನೂ ಒಳಗೊಳ್ಳುವಂತಿರಬೇಕು ಮತ್ತು ಭವಿಷ್ಯಕ್ಕೆ ಸಿದ್ಧವಾಗಿರಬೇಕು ಎಂಬುದನ್ನು ನೆನಪಿಸುತ್ತದೆ, ವಿಶೇಷವಾಗಿ ಗ್ರಾಮೀಣ, ಬುಡಕಟ್ಟು ಮತ್ತು ಕಡಿಮೆ ಸೌಲಭ್ಯಗಳಿರುವ ಪ್ರದೇಶಗಳಲ್ಲಿ. ಈ ಸನ್ನಿವೇಶದಲ್ಲಿ, ಸಾಂಪ್ರದಾಯಿಕವಾಗಿ ಕೃಷಿ, ನೀರಾವರಿ ಮತ್ತು ರಸ್ತೆಗಳಿಗೆ ನೆರವಾಗಲು ಹೆಸರುವಾಸಿಯಾದ ನಬಾರ್ಡ್ನ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿ (RIDF), ಆರೋಗ್ಯ ವಲಯಕ್ಕೂ ಒಂದು ಪ್ರಮುಖ ಪರಿವರ್ತಕವಾಗಿ ಮೂಡಿದೆ. PHCಗಳು ಮತ್ತು CHCಗಳನ್ನು ಬಲಪಡಿಸಲು, ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳು, ತಾಯಿಯ ಮತ್ತು ಮಕ್ಕಳ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು, ರೋಗನಿರ್ಣಯ ಮತ್ತು ತುರ್ತು ಆರೈಕೆ ಸೌಲಭ್ಯಗಳು, ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಗಳು ಮತ್ತು ರೋಗ ಕಣ್ಗಾವಲು ಮೂಲಸೌಕರ್ಯಗಳನ್ನು ಬಲಪಡಿಸಲು ನೆರವಾಗುವುದಕ್ಕೆ 343 ಆರೋಗ್ಯ ವಲಯ ಯೋಜನೆಗಳಿಗೆ ನಬಾರ್ಡ್ RIDF ಅಡಿಯಲ್ಲಿ ₹663 ಕೋಟಿ ಮಂಜೂರು ಮಾಡಿದೆ.
ರಾಜ್ಯವು ನಬಾರ್ಡ್ನ ಪಾಲುದಾರಿಕೆಯೊಂದಿಗೆ, ರೋಗನಿರ್ಣಯ ಮತ್ತು ನಿರ್ಣಾಯಕ ಆರೈಕೆ ಮೂಲಸೌಕರ್ಯವನ್ನು ವಿಸ್ತರಿಸುವುದು, ಜಿಲ್ಲಾ ಆಸ್ಪತ್ರೆಗಳನ್ನು ಆಧುನೀಕರಿಸುವುದು, ಸಾರ್ವಜನಿಕ ಆರೋಗ್ಯ ಕಣ್ಗಾವಲು ಬಲಪಡಿಸುವುದು, ತಾಯಿ ಮತ್ತು ಮಕ್ಕಳ ಆರೋಗ್ಯ ಸೌಲಭ್ಯಗಳನ್ನು ಸುಧಾರಿಸುವುದು ಮತ್ತು ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಆರೋಗ್ಯ ಸೇವೆಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
Dinesh Gundu Rao ಈ ನಿಟ್ಟಿನಲ್ಲಿ ಕರ್ನಾಟಕದ ನಬಾರ್ಡ್ನ ಸ್ಥಿರ ನಾಯಕತ್ವ ಮತ್ತು ಪರಿಣತಿಯನ್ನು ಅವರು ಶ್ಲಾಘಿಸಿದರು. ರಾಜ್ಯದಲ್ಲಿ ಗ್ರಾಮೀಣ ಜೀವನೋಪಾಯ, ಕೃಷಿ ಸದೃಢತೆ ಮತ್ತು ಆರ್ಥಿಕ ಸೇರ್ಪಡೆಯನ್ನು ಬಲಪಡಿಸುವಲ್ಲಿ ನಬಾರ್ಡ್ನ ನಿರಂತರ ಬದ್ಧತೆಯನ್ನು ಅವರು ಶ್ಲಾಘಿಸಿದರು. ಆರೋಗ್ಯಕರ, ಬಲವಾದ ಮತ್ತು ಹೆಚ್ಚು ಸದೃಢ ಕರ್ನಾಟಕವನ್ನು ನಿರ್ಮಿಸಲು ಬ್ಯಾಂಕುಗಳು, ಸಹಕಾರಿ ಸಂಸ್ಥೆಗಳು, ಸರ್ಕಾರಿ ಇಲಾಖೆಗಳು ಮತ್ತು ಖಾಸಗಿ ಪಾಲುದಾರರು ಒಟ್ಟಾಗಿ ಕೆಲಸ ಮಾಡುವಂತೆ ಅವರು ಎಲ್ಲಾ ಪಾಲುದಾರರಿಗೆ ಕರೆ ನೀಡಿದರು. ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವ, ಕಿರು-ಸಣ್ಣ-ಮಧ್ಯಮ ಗಾತ್ರದ ಉದ್ದಿಮೆಗಳನ್ನು (MSME) ವಿಸ್ತರಿಸುವ ಮತ್ತು ಗ್ರಾಮೀಣ ಉದ್ಯಮಶೀಲತೆಯನ್ನು ವಿಶೇಷವಾಗಿ ಸಣ್ಣ ಮತ್ತು ಅತಿ ಸಣ್ಣ ರೈತರು, ಯುವಕರು, ಮಹಿಳೆಯರು ಮತ್ತು ಮೊದಲ ತಲೆಮಾರಿನ ಉದ್ಯಮಿಗಳಿಗೆ ಪ್ರೋತ್ಸಾಹಿಸುವ ಮೂಲಕ ನೀತಿ ಆದ್ಯತೆಗಳನ್ನು ವಾಸ್ತವದ ಫಲಿತಾಂಶಗಳಾಗಿ ಪರಿವರ್ತಿಸಲು ನಬಾರ್ಡ್ ಮಾಡಿದ ಅಂದಾಜುಗಳು ಮಹತ್ವದ ಅವಕಾಶವನ್ನು ನೀಡುತ್ತವೆ ಎಂದು ಅವರು ಒತ್ತಿ ಹೇಳಿದರು. ರೈತರು, ಎಂಎಸ್ಎಂಇಗಳು ಮತ್ತು ಗ್ರಾಮೀಣ ಉದ್ಯಮಿಗಳಿಗೆ ಹಣಕಾಸಿನ ನಿಲುಕನ್ನು ಒದಗಿಸುವಲ್ಲಿ ಬ್ಯಾಂಕಿಂಗ್ ವಲಯದ ಮಹತ್ವದ ಪಾತ್ರವು ನಿರ್ಣಾಯಕವಾಗಿದೆ ಎಂದರು.
ಕರ್ನಾಟಕ ಪ್ರಾದೇಶಿಕ ಕಚೇರಿಯ ನಬಾರ್ಡ್ನ ಮುಖ್ಯ ಮಹಾ ವ್ಯವಸ್ಥಾಪಕರಾದ ಡಾ. ಸುರೇಂದ್ರ ಬಾಬು ತಮ್ಮ ಭಾಷಣದಲ್ಲಿ, 2026–27ನೇ ಹಣಕಾಸು ವರ್ಷದಲ್ಲಿ, ನಬಾರ್ಡ್ ₹4.99 ಲಕ್ಷ ಕೋಟಿಗಳ ವಾಸ್ತವಿಕವಾಗಿಸಬಹುದಾದ ಸಾಲ ಸಾಮರ್ಥ್ಯವನ್ನು ಅಂದಾಜಿಸಿದೆ, ಇದು ಹಿಂದಿನ ವರ್ಷಕ್ಕಿಂತ ಶೇ.12 ರಷ್ಟು ಹೆಚ್ಚಾಗಿದೆ ಎಂದು ಹೇಳಿದರು. ಕೃಷಿ ಮತ್ತು ಸಂಬಂಧಿತ ವಲಯಗಳು ಶೇ. 45ರಷ್ಟಿದ್ದರೆ, ಎಂಎಸ್ಎಂಇಗಳು ₹2.14 ಲಕ್ಷ ಕೋಟಿ ಅಥವಾ ಒಟ್ಟು ಸಾಮರ್ಥ್ಯದ ಶೇ. 42ರಷ್ಟಿವೆ ಮತ್ತು ಇತರ ಆದ್ಯತೆಯ ವಲಯದ ಚಟುವಟಿಕೆಗಳು ರೂ.0.57 ಲಕ್ಷ ಕೋಟಿ (11.62%). ರಾಜ್ಯ ಸಾಲ ವಿಚಾರ ಸಂಕಿರಣಕ್ಕೆ ಆಯ್ಕೆ ಮಾಡಲಾದ ವಿಷಯ – “ಕೃಷಿ ಸಂಸ್ಕರಣೆಯ ಮೇಲೆ ಕೇಂದ್ರೀಕರಿಸುವ ಮಹಿಳಾ ರೈತರು ಮತ್ತು ಎಂಎಸ್ಎಂಇಗಳು: ಸುಸ್ಥಿರ ಗ್ರಾಮೀಣಾಭಿವೃದ್ಧಿಗಾಗಿ ಸಮಾವೇಶಿತ ಸಾಲ” ಎಂದು ಅವರು ಹೇಳಿದರು.
ವಲಯವಾರು ಅಂದಾಜುಗಳು
ಕ್ರ.ಸಂ.
ವಿವರಗಳು
ಮೊತ್ತ (ಕೋಟಿರೂಪಾಯಿಗಳಲ್ಲಿ)
A
ಕೃಷಿ ಸಾಲ
1
ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ಬೆಳೆ ಸಾಲ
190397.40
2
ಅವಧಿ ಸಾಲ
47166.71
B
ಕೃಷಿ ಮೂಲಸೌಲಭ್ಯ
81.4.85
C
ಪೂರಕ ಚಟುವಟಿಕೆಗಳು
28876.81
1
ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು
214501.00
2
ರಫ್ತು ಸಾಲ
5983.00
3
ಶಿಕ್ಷಣ
5650.12
4
ವಸತಿ
28119.01
5
ರಫ್ತು
5983.00
6
ಸಾಮಾಜಿಕ ಮೂಲಸೌಲಭ್ಯಗಳು
1936.91
7
ನವೀಕರಿಸಬಹುದಾದ ಇಂಧನ
1802.14
8
ಇತರೆ
14159.65
Total
499530.93
ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಅತ್ಯುನ್ನತ ಅಭಿವೃದ್ಧಿ ಹಣಕಾಸು ಸಂಸ್ಥೆಯಾಗಿ, ನಬಾರ್ಡ್ ರಾಜ್ಯದಲ್ಲಿ ಗ್ರಾಮೀಣ ಸಾಲ ಪರಿಸರವನ್ನು ಬೆಳೆಸಲು ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. 2025-26ನೇ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ ₹21560 ಕೋಟಿ ಮೊತ್ತವನ್ನು ವಿವಿಧ ಹಣಕಾಸು ಸಂಸ್ಥೆಗಳಿಗೆ ಮರುಹಣಕಾಸು ಆಗಿ ವಿತರಿಸಲಾಗಿದೆ, ಅದರಲ್ಲಿ ₹13982 ಕೋಟಿಗಳನ್ನು ಹಂಗಾಮಿನ ಕೃಷಿ ಕಾರ್ಯಾಚರಣೆಗಳಿಗೆ ಮತ್ತು ₹7580 ಕೋಟಿಗಳನ್ನು ಕೃಷಿಯಲ್ಲಿ ಬಂಡವಾಳ ರಚನೆಯನ್ನು ಉತ್ತೇಜಿಸಲು ಹೂಡಿಕೆ ಸಾಲಕ್ಕಾಗಿ ನೀಡಲಾಗಿದೆ.
ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿ (RIDF) ಮೂಲಕ ಗ್ರಾಮೀಣ ಮೂಲಸೌಕರ್ಯ ಸೃಷ್ಟಿಗೆ ಆರ್ಥಿಕ ಬೆಂಬಲವನ್ನು ನೀಡುವ ಮೂಲಕ NABARD ಗ್ರಾಮೀಣ ಮೂಲಸೌಕರ್ಯ ಸೃಷ್ಟಿಯಲ್ಲಿ ರಾಜ್ಯ ಸರ್ಕಾರದ ಪ್ರಯತ್ನಗಳಿಗೆ ಪೂರಕವಾಗಿದೆ ಎಂದು ಅವರು ಸದನಕ್ಕೆ ತಿಳಿಸಿದರು.
ನಬಾರ್ಡ್ ಇತರ ಪಾಲುದಾರರ ಸಹಯೋಗದೊಂದಿಗೆ ಉತ್ತೇಜಿಸುತ್ತಿರುವ ರೈತ ಉತ್ಪಾದಕರ ಸಂಸ್ಥೆಗಳು (FPOಗಳು) ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಕೃಷಿ ಮೌಲ್ಯ ಸರಪಳಿಯಲ್ಲಿ ಸಂಯೋಜಿಸುವಲ್ಲಿ ಮತ್ತು ಅವರ ಆದಾಯವನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿ ಎಂದು ಅವರು ತಿಳಿಸಿದರು.
ಸಹಕಾರಿ ಸಂಘಗಳು ಸದಸ್ಯ ರೈತರಿಗೆ ತಡೆರಹಿತ ಸೇವೆಗಳನ್ನು ನೀಡಲು ಅನುವು ಮಾಡಿಕೊಡುವ ನಬಾರ್ಡ್ ಮೂಲಕ ಜಾರಿಗೆ ತರಲಾಗುತ್ತಿರುವ PACS ಗಣಕೀಕರಣದ ಕೇಂದ್ರ ಪ್ರಾಯೋಜಿತ ಯೋಜನೆಯ ಬಗ್ಗೆಯೂ CGM ಸದನಕ್ಕೆ ಮಾಹಿತಿ ನೀಡಿದರು.
ಸಹಕಾರಿ ಸಂಘಗಳನ್ನು ಬಲಪಡಿಸುವಲ್ಲಿ NABRD ಯಾವುದೇ ಅವಕಾಶವನ್ನು ಬಿಟ್ಟುಕೊಟ್ಟಿಲ್ಲ ಎಂದು CGM ಹೇಳಿದರು. GOI, NABARD ಮತ್ತು ರಾಜ್ಯ ಸರ್ಕಾರದ ಹಣಕಾಸಿನ ನೆರವಿನ ಈ ಯೋಜನೆಯಡಿಯಲ್ಲಿ, ದಕ್ಷತೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಲು 5,894 PACS ಗಳನ್ನು ಗಣಕೀಕರಿಸಲಾಗುತ್ತಿದೆ, 2,463 ಸಂಘಗಳನ್ನು ಈಗಾಗಲೇ ಹಂತ-I ಅಡಿಯಲ್ಲಿ ಇ-PAC ಗಳಾಗಿ ಘೋಷಿಸಲಾಗಿದೆ, ಈ ಸಂಘಗಳು ಈಗ ಪ್ರತಿದಿನವೂ ತಮ್ಮ ಎಲ್ಲಾ ಚಟುವಟಿಕೆಗಳನ್ನು ಡಿಜಿಟಲ್ ರೂಪದಲ್ಲಿ ವಹಿವಾಟು ನಡೆಸುವಂತೆ ಮಾಡುತ್ತದೆ.
ಅನುದಾನ ಆಧಾರಿತ ಯೋಜನೆಗಳ ಮೂಲಕ ಅಭಿವೃದ್ಧಿ ಮಧ್ಯಸ್ಥಿಕೆಗಳು ಮೂಡಿಸಿದ ಹಾದಿಯನ್ನು ತಿಳಿಸುತ್ತಾ, ನಬಾರ್ಡ್ ಕರ್ನಾಟಕವು 3.33 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 356 ಜಲಾನಯನ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಹೇಳಿದರು. 22,576 ಕುಟುಂಬಗಳಿಗೆ ಸುಸ್ಥಿರ ಜೀವನೋಪಾಯವನ್ನು ಗಳಿಸಲು 40 ಬುಡಕಟ್ಟು ಅಭಿವೃದ್ಧಿ ಯೋಜನೆಗಳಿಗೆ ನೆರವಾಗಿದೆ. ಈ ಕಾರ್ಯಕ್ರಮಗಳು ಆದಾಯವನ್ನು ಹೆಚ್ಚಿಸುತ್ತವೆ, ಸುಸ್ಥಿರತೆಯನ್ನು ಉತ್ತೇಜಿಸುತ್ತವೆ ಮತ್ತು ಗ್ರಾಮೀಣ ಉದ್ಯಮಶೀಲತಾ ಅವಕಾಶಗಳನ್ನು ಸೃಷ್ಟಿಸುತ್ತವೆ, ವಿಶೇಷವಾಗಿ ಮಹಿಳೆಯರು, ಯುವಕರು ಮತ್ತು ಸಣ್ಣ ರೈತರಿಗೆ.
ರಾಜ್ಯದಲ್ಲಿ ಗ್ರಾಮೀಣ ಸಮೃದ್ಧಿಯನ್ನು ಬೆಳೆಸಲು ಉತ್ತಮ ಕ್ರಮಗಳನ್ನು ತೆಗೆದುಕೊಂಡಿದ್ದಕ್ಕಾಗಿ ಅವರು ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು ಮತ್ತು ನಬಾರ್ಡ್ನ ನಿರಂತರ ಬೆಂಬಲದ ಭರವಸೆ ನೀಡಿದರು. ಆದ್ಯತೆಯ ವಲಯಕ್ಕೆ ಸಾಲ ಹರಿವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ಬ್ಯಾಂಕಿಂಗ್ ಸಮುದಾಯಕ್ಕೆ ಅವರು ಧನ್ಯವಾದ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಕಾರ್ಯದರ್ಶಿ ಶ್ರೀಮತಿ ಶಾಲಿನಿ ರಜನೀಶ್, ಐಎಎಸ್, ಅವರು ಸಮಗ್ರ ರಾಜ್ಯ ನಿರ್ದಿಷ್ಟ ಪತ್ರವನ್ನು ಹೊರತರುವಲ್ಲಿ ನಬಾರ್ಡ್ನ ಪ್ರಯತ್ನಗಳನ್ನು ಶ್ಲಾಘಿಸಿದರು. ರಾಜ್ಯದಲ್ಲಿ ಗ್ರಾಮೀಣ ಜೀವನೋಪಾಯ, ಕೃಷಿ ಸದೃಢತೆ ಮತ್ತು ಆರ್ಥಿಕ ಸೇರ್ಪಡೆಯನ್ನು ಬಲಪಡಿಸುವ ನಿರಂತರ ಬದ್ಧತೆಗಾಗಿ ನಬಾರ್ಡ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಆದ್ಯತೆಯ ವಲಯಕ್ಕೆ ಸಾಲದ ಹರಿವನ್ನು ಹೆಚ್ಚಿಸಲು ಈ ಅಂದಾಜುಗಳನ್ನು ತಮ್ಮ ವಾರ್ಷಿಕ ಸಾಲ ಯೋಜನೆಗಳಲ್ಲಿ ಸಂಯೋಜಿಸಲು ಅವರು ಎಸ್ಎಲ್ಬಿಸಿ ಮತ್ತು ಬ್ಯಾಂಕ್ಗಳಿಗೆ ಸೂಚಿಸಿದರು. ರೈತರು, ಎಂಎಸ್ಎಂಇಗಳು ಮತ್ತು ಗ್ರಾಮೀಣ ಉದ್ಯಮಿಗಳಿಗೆ ಆರ್ಥಿಕ ನಿಲುಕನ್ನು ಒದಗಿಸುವಲ್ಲಿ ಬ್ಯಾಂಕಿಂಗ್ ಕ್ಷೇತ್ರದ ನಿರ್ಣಾಯಕ ಪಾತ್ರವನ್ನು ಅವರು ಒತ್ತಿ ಹೇಳಿದರು.
ಕರ್ನಾಟಕವು ಯಾವಾಗಲೂ ಕ್ರಿಯಾಶೀಲ ರಾಜ್ಯವಾಗಿದ್ದು, ಅದರ ಕೃಷಿ ಬೇರುಗಳನ್ನು ಕೈಗಾರಿಕಾ ಪ್ರಗತಿಯೊಂದಿಗೆ ಸಮತೋಲನಗೊಳಿಸುತ್ತದೆ ಎಂಬುದನ್ನು ಅವರು ಗಮನಕ್ಕೆ ತಂದರು. ಕೃಷಿ ನಿರ್ಣಾಯಕ ಆಧಾರಸ್ತಂಭವಾಗಿ ಉಳಿದಿದ್ದರೂ, ಇಂದು ಗ್ರಾಮೀಣ ರೂಪಾಂತರವು ತಂತ್ರಜ್ಞಾನ ಅಳವಡಿಕೆ, ಮೂಲಸೌಕರ್ಯ ವಿಸ್ತರಣೆ, ಹವಾಮಾನ-ಚತುರ ಮಧ್ಯಸ್ಥಿಕೆಗಳು ಮತ್ತು ಕೃಷಿಯಾಚೆಯ ಉದ್ಯೋಗಾವಕಾಶಗಳಿಂದ ನಡೆಸಲ್ಪಡುತ್ತದೆ. ಮೂಲಸೌಕರ್ಯ ಸೃಷ್ಟಿಗೆ ಸಾರ್ವಜನಿಕ ಹೂಡಿಕೆಗಳು ಸಾಲ ಹೀರಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಲು ಪ್ರಮುಖ ವೇಗವರ್ಧಕವಾಗಿರುವುದರಿಂದ, ಗ್ರಾಮೀಣ ಸಂಪರ್ಕ, ನೀರಾವರಿ ಮೂಲಸೌಕರ್ಯ, ಮಾರುಕಟ್ಟೆ ಮತ್ತು ಸಂಗ್ರಹಣಾ ಸೌಲಭ್ಯಗಳು, ಆರೋಗ್ಯ ಮತ್ತು ನೈರ್ಮಲ್ಯ, ಕುಡಿಯುವ ನೀರು ಸರಬರಾಜು ಇತ್ಯಾದಿಗಳಂತಹ ಸುಸಜ್ಜಿತ ಗ್ರಾಮೀಣ ಮೂಲಸೌಕರ್ಯದೊಂದಿಗೆ ಅಂದಾಜಿಸಿದ ಸಾಲ ಸಾಮರ್ಥ್ಯವನ್ನು ಹೀರಿಕೊಳ್ಳಲು ರಾಜ್ಯವು ಸುಸಜ್ಜಿತವಾಗಿದೆ.
ಬೆಂಗಳೂರಿನ ಆರ್ಬಿಐನ ಮುಖ್ಯ ವ್ಯವಸ್ಥಾಪಕರಾದ ಶ್ರೀ ಆರ್ ಕಾರ್ತಿಕೇಯನ್, ನಬಾರ್ಡ್, ಸಮಾಲೋಚನಾ ವಿಧಾನದೊಂದಿಗೆ ರಾಜ್ಯ ನಿರ್ದಿಷ್ಟ ಪತ್ರದಂತಹ ಸಮಗ್ರ ದಾಖಲೆಯನ್ನು ಸಿದ್ಧಪಡಿಸುವಲ್ಲಿ ಮಾಡಿದ ಪ್ರಯತ್ನಗಳನ್ನು ಶ್ಲಾಘಿಸಿದರು. ರಾಜ್ಯದಲ್ಲಿ ನ್ಯಾಯಯುತ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ಸಣ್ಣ ಮತ್ತು ಅತಿಸಣ್ಣ ರೈತರು ಮತ್ತು ಸೂಕ್ಷ್ಮ ಉದ್ಯಮಗಳಿಗೆ ಸಾಲಕ್ಕಾಗಿ ನಿಗದಿಪಡಿಸಿದ ಗುರಿಗಳನ್ನು ಸಾಧಿಸುವ ಅಗತ್ಯಕ್ಕೆ ಅವರು ಒತ್ತು ನೀಡಿದರು. ಆರ್ಥಿಕ ಸೇರ್ಪಡೆಗಾಗಿ ನಬಾರ್ಡ್ನ ಪ್ರಯತ್ನಗಳನ್ನು ಶ್ಲಾಘಿಸಿದ ಅವರು, ಬ್ಯಾಂಕರ್ಗಳು ನಬಾರ್ಡ್ನಿಂದ ಬೆಂಬಲವನ್ನು ಪಡೆದುಕೊಳ್ಳಬೇಕು ಮತ್ತು ಡಿಜಿಟಲ್ ಮತ್ತು ಆರ್ಥಿಕ ಸಾಕ್ಷರತೆಯ ಬಗ್ಗೆ ಹೆಚ್ಚಿನ ಜಾಗೃತಿಯನ್ನು ಉತ್ತೇಜಿಸಬೇಕು ಎಂದು ಒತ್ತಾಯಿಸಿದರು.
ಕೆನರಾ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ. ಭವೇಂದ್ರ ಕುಮಾರ್ ಅವರು ತಮ್ಮ ಭಾಷಣದಲ್ಲಿ, ಪ್ರತಿ ಜಿಲ್ಲೆಗೆ ಸಾಲದ ಮುನ್ಸೂಚನೆಗಳನ್ನು ಅಂದಾಜು ಮಾಡುವ ಮತ್ತು ಅದನ್ನು ರಾಜ್ಯ ನಿರ್ದಿಷ್ಟ ಪತ್ರಿಕೆಯ ರೂಪದಲ್ಲಿ ಒಟ್ಟುಗೂಡಿಸುವ ನಿಖರ ಪ್ರಯಾಸಕ್ಕಾಗಿ ನಬಾರ್ಡ್ ಅನ್ನು ಶ್ಲಾಘಿಸಿದರು ಮತ್ತು 2026-27ನೇ ಸಾಲಿಗೆ ಜಿಲ್ಲಾವಾರು ವಾರ್ಷಿಕ ಸಾಲ ಯೋಜನೆಯನ್ನು ಸಿದ್ಧಪಡಿಸುವಾಗ ಈ ಮುನ್ಸೂಚನೆಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ದಾಖಲೆಯಲ್ಲಿ ತಿಳಿಸಿದ್ದಾರೆ.
ಸೆಮಿನಾರ್ ಸಂದರ್ಭದಲ್ಲಿ, ನಬಾರ್ಡ್, ಕರ್ನಾಟಕ ಕ್ಷೇತ್ರೀಯ ಕಾರ್ಯಾಲಯ ಸಿದ್ಧಪಡಿಸಿದ 4 ಕಿರುಪುಸ್ತಕಗಳನ್ನು ಮುಖ್ಯ ಅತಿಥಿಗಳು ಬಿಡುಗಡೆ ಮಾಡಿದರು:
ಜೀವ (JIVA) – ಸುಸ್ಥಿರ ಕೃಷಿಯನ್ನು ಬೆಳಗಿಸುವುದು
ii) ಸಣ್ಣ ಹೆಜ್ಜೆಗಳು ದೊಡ್ಡ ಬದಲಾವಣೆ – ಮೈಕ್ರೋಫೈನಾನ್ಸ್ ಮತ್ತು ಹಣಕಾಸು ಸೇರ್ಪಡೆಯ ಕುರಿತು ಯಶಸ್ಸಿನ ಕಥೆಗಳು
iii) ಇ-ಪಿಎಸಿಗಳು – ಕರ್ನಾಟಕದಲ್ಲಿ ಸಹಕಾರಿ ಸಂಸ್ಥೆಗಳನ್ನು ಡಿಜಿಟೈಸ್ ಮಾಡುವುದು.
iv) ನೀರಿನ ಕೊರತೆಯನ್ನು ಬಲಪಡಿಸುವುದು: ಕರ್ನಾಟಕದಲ್ಲಿ ಆರ್ಐಡಿಎಫ್ ಉಪಕ್ರಮಗಳು
Deputy Commissioner, Shivamogga ಅಧ್ಯಕ್ಷರು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಜಿಲ್ಲಾಧಿಕಾರಿಗಳು ಶಿವಮೊಗ್ಗ ಜಿಲ್ಲೆ ರವರ ಅಧ್ಯಕ್ಷತೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿನ ವಿಪತ್ತು ನಿರ್ವಹಣೆ ಪರಿಹಾರ ಕಾರ್ಯಗಳ ಕುರಿತು ಪ್ರಗತಿ ಪರಿಶೀಲನಾ ಸಭೆಯನ್ನು ದಿನಾಂಕಃ 27.02.2026 ರಂದು ಮಧ್ಯಾಹ್ನ 3.00 ಕ್ಕೆ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಸಭೆಯನ್ನು ಕೈಗೊಳ್ಳಲಾಗಿತ್ತು . ಸಬೆಯಲ್ಲಿ ಕುಡಿಯುವ ನೀರು., ಜಲಾಶಯ ಹಾಗೂ ಕೆರೆಗಳ ಸಂಗ್ರಹಣ ಸ್ಥಿತಿ, ಅಂತರ್ಜಲದ ಮಟ್ಟ, ಜಾನುವಾರು ಮೇವು ಲಭ್ಯತೆ, ಕಾಡ್ಗಿಚ್ಚು, ರಾಜ್ಯ ಉಪಶಮನ (DMF)ಕಾಮಗಾರಿ, ಮಳೆಮಾಪನ ನಿರ್ವಹಣೆ ಮತ್ತು ಅಣೆಕಟ್ಟುಗಳು ಮತ್ತು Critical infrastructure ಗಳ ರಕ್ಷಣೆ ಕುರಿತು ಚರ್ಚಿಸಿ, ಸೂಕ್ತವಾದ ಸೂಚನೆಯನ್ನು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮಾನ್ಯ ಅಧ್ಯಕ್ಷರು ಜಿಲ್ಲಾ Deputy Commissioner, Shivamogga ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಜಿಲ್ಲಾಧಿಕಾರಿಗಳು ಶಿವಮೊಗ್ಗ ಜಿಲ್ಲೆ ರವರು ನೀಡಿದರು
Shimoga News ಭದ್ರಾ ಅಚ್ಚುಕಟ್ಟು ಪ್ರದೇಶಭಿವೃದ್ಧಿ ಪ್ರಾಧಿಕಾರ ಕಚೇರಿಯ ಆವರಣದಲ್ಲಿ ಶಿವಮೊಗ್ಗ ಚಿಕ್ಕಮಗಳೂರು ಜಿಲ್ಲೆಯ ನೀರು ಬಳಕೆದಾರರ ಸಹಕಾರ ಸಂಘಗಳಿಗೆ ಕಾಡಾ ಅಧ್ಯಕ್ಷರಾದ ಡಾ. ಕೆ. ಪಿ. ಅಂಶುಮಂತ್ ರವರು, ಕಾಡಾ ಕಛೇರಿಯಿಂದ ಕೃಷಿ ಚಟುವಟಿಕೆಗಳಿಗೆ ಉಪಯೋಗವಾಗುವ ಕೃಷಿ ಯೊಂತ್ರೋಪಕರಣ ಹಾಗೂ ವಾರ್ಷಿಕ ಕಾರ್ಯಅನುದಾನವನ್ನು ನೀಡಿದರು Shimoga News ಸಂದರ್ಭದಲ್ಲಿ ಕಾಡಾ ಆಡಳಿತಾಧಿಕಾರಿಗಳು ಆರ್, ಸತೀಶ್ ಹಾಗೂ ಭೂ ಅಭಿವೃದ್ಧಿ ಅಧಿಕಾರಿಗಳು ಕೆ ಪ್ರಶಾಂತ್ (ತಾಂತ್ರಿಕ),(ಕೃಷಿ)(ಪ್ರ) ಹಾಗೂ ಡಾ|| ಶಶಿಧರ್ ಪ್ರಾಧ್ಯಾಪಕರು, ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಶಿವಮೊಗ್ಗ, ಡಾ. ನಾಗೇಶ್ ಎಸ್, ಡೋಂಗರೆ (ಸಹಕಾರ) ಮತ್ತು ಭದ್ರ ಕಾಡಾ ಕಚೇರಿಯ ಅಧಿಕಾರಿ ಮತ್ತು ಸಿಬ್ಬಂದಿಯವರು ಉಪಸ್ಥಿತರಿದ್ದರು.
Shimoga News ಲಯನ್ಸ್ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 317ಅ ವತಿಯಿಂದ ಉಡುಪಿಯ ಅಮೃತ್ ಗಾರ್ಡನ್ನಲ್ಲಿ ನಡೆದ ತೃತೀಯ ಕ್ಯಾಬಿನೆಟ್ ಸಭೆಯಲ್ಲಿ ‘ಅಂಧತ್ವ ಮುಕ್ತ ಯೋಜನೆ’ ಅಡಿಯಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಜಿಲ್ಲಾ ಸಂಯೋಜಕ ಲಯನ್ ನಂದೀಶ್ ಎನ್.ಟಿ ಅವರಿಗೆ ಗೌರವ ಸನ್ಮಾನ ನೆರವೇರಿಸಲಾಯಿತು. ಜಿಲ್ಲಾ ಗವರ್ನರ್ ಪಿ.ಎಂ.ಜೆ.ಎಫ್ ಲಯನ್ ಸಪ್ನಾ ಸುರೇಶ್ ಹಾಗೂ ಪ್ರಥಮ ಉಪ ಜಿಲ್ಲಾ ಗವರ್ನರ್ ಪಿ.ಎಂ.ಜೆ.ಎಫ್ ಲಯನ್ ರಾಜೀವ್ ಕೋಟಿಯನ್ ಅವರು ಲಯನ್ ನಂದೀಶ್ ಎನ್.ಟಿ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ಸೆಪ್ಟೆಂಬರ್ 2025ರಿಂದ ಜನವರಿ 202೬ರವರೆಗೆ ಅವರ ಸಂಯೋಜನೆಯಲ್ಲಿ ಒಟ್ಟು 16 ಉಚಿತ ಕಣ್ಣಿನ ತಪಾಸಣಾ ಶಿಬಿರಗಳು ಹಾಗೂ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮಗಳು ಯಶಸ್ವಿಯಾಗಿ ಆಯೋಜಿಸಲ್ಪಟ್ಟವು. Shimoga News ಈ ಶಿಬಿರಗಳು ಡಿಸ್ಟ್ರಿಕ್ಟ್ ಬ್ಲೈಂಡ್ನೆಸ್ ಕಂಟ್ರೋಲ್ ಸೊಸೈಟಿ , ಜಿಲ್ಲಾ ಆರೋಗ್ಯಾಧಿಕಾರಿ ಶಿವಮೊಗ್ಗ, ಲಯನ್ಸ್ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 307ಅ ಹಾಗೂ ಶಿವಮೊಗ್ಗ ಆಪ್ಟಿಕಲ್ಸ್ ಇವರ ಸಹಯೋಗದಲ್ಲಿ ನಡೆಯಿತು. 2880ಕ್ಕೂ ಹೆಚ್ಚು ಜನರಿಗೆ ಕಣ್ಣಿನ ತಪಾಸಣೆ ಮಾಡಲಾಯಿತು. ಜೊತೆಗೆ 992 ಉಚಿತ ಕನ್ನಡಕಗಳನ್ನು ವಿತರಿಸಲಾಯಿತು. ಈ ಎಲ್ಲಾ ಸೇವಾ ಕಾರ್ಯಗಳನ್ನು ಗಿರುತಿಸಿ ಈ ಪ್ರಶಸ್ತಿ ನೀಡಲಾಗಿದ್ದು, ಅಂಧತ್ವ ನಿರ್ಮೂಲನೆ ದಿಸೆಯಲ್ಲಿ ಇವರ ಮಹತ್ವದ ಹೆಜ್ಜೆಯಾಗಿದೆ ಎಂದು ಜಿಲ್ಲಾ ಗವರ್ನರ್ ಪ್ರಶಂಸಿಸಿದರು. ಲಯನ್ಸ್ ನಂದೀಶ್ ಎನ್.ಟಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಸೇವಾ ಚಟುವಟಿಕೆಗಳನ್ನು ವಿಸ್ತರಿಸುವ ಸಂಕಲ್ಪವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕ್ಲಬ್ನ ಪ್ರಮುಖರು ಹಾಜರಿದ್ದರು.
Gopala Krishna Beluru ತಾಲೂಕಿನ ಹುಲಿ ದೇವರ ಬನ ಬಳಿ ನಡೆದ ಒಂದು ಘಟನೆ, ಮಾನವೀಯ ಮೌಲ್ಯಗಳು ಇನ್ನೂ ಜೀವಂತವಾಗಿವೆ ಎಂಬುದಕ್ಕೆ ಸಾಕ್ಷಿಯಾಗಿದೆ. ಹೊಸನಗರ ಮಾರ್ಗದಿಂದ ಆವಿನಹಳ್ಳಿ ಕಡೆಗೆ ಸಾಗುತ್ತಿದ್ದಾಗ, ಬೈಕ್ ಸವಾರರೊಬ್ಬರು ಎದುರಿಗೆ ಬಂದ ಎಮ್ಮೆಗೆ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದು ನರಳುತ್ತಿದ್ದರು. ಈ ದೃಶ್ಯವನ್ನು ಕಂಡ ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ತಮ್ಮ ವಾಹನದಿಂದ ತಕ್ಷಣ ಇಳಿದು, ಗಾಯಾಳುವಿಗೆ ಪ್ರಥಮ ಚಿಕಿತ್ಸೆ ನೀಡಿ, ಮಾನವೀಯತೆಯ ಉದಾತ್ತ ಗುಣವನ್ನು ಪ್ರದರ್ಶಿಸಿದ್ದಾರೆ.
ಘಟನೆಯ ತೀವ್ರತೆಯನ್ನು ಅರಿತ ಶಾಸಕರು, ತಮ್ಮ ಚಾಲಕರಾದ ರಾಕೇಶ್ ಗೌತಮಪುರ, ಅಂಗರಕ್ಷಕರಾದ ತೀರ್ಥೇಶ್ ಮತ್ತು ಎಸ್ಕಾರ್ಟ್ ವಾಹನದ ಸಿಬ್ಬಂದಿಗಳನ್ನು ಕರೆದು, ಸ್ಥಳದಲ್ಲಿಯೇ ಗಾಯಾಳುವಿಗೆ ಅಗತ್ಯ ಪ್ರಥಮ ಚಿಕಿತ್ಸೆಯನ್ನು ನೀಡಲು ಮುಂದಾದರು. ರಕ್ತಸ್ರಾವವಾಗುತ್ತಿದ್ದ ಗಾಯಗಳಿಗೆ ಸ್ವಚ್ಛ ಬಟ್ಟೆಯಿಂದ ಒತ್ತಿ, ನೋವನ್ನು ಕಡಿಮೆ ಮಾಡಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಶಾಸಕರ ಸಮಯಪ್ರಜ್ಞೆ ಮತ್ತು ಸಹಾನುಭೂತಿ ನಿಜಕ್ಕೂ ಶ್ಲಾಘನೀಯ. ಯಾವುದೇ ಹಿಂಜರಿಕೆ ಇಲ್ಲದೆ, ತಮ್ಮ ಸ್ಥಾನಮಾನವನ್ನು ಬದಿಗಿಟ್ಟು, ಒಬ್ಬ ಸಾಮಾನ್ಯ ನಾಗರಿಕನಂತೆ ಸಂಕಷ್ಟದಲ್ಲಿರುವ ವ್ಯಕ್ತಿಗೆ ನೆರವಾಗಲು ಮುಂದಾದ ಅವರ ನಡೆ, ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
Gopala Krishna Beluru ಪ್ರಥಮ ಚಿಕಿತ್ಸೆ ನೀಡಿದ ನಂತರ, ಗಾಯಾಳುವಿನ ಸ್ಥಿತಿ ಗಂಭೀರವಾಗುವುದನ್ನು ತಪ್ಪಿಸಲು, ಶಾಸಕರು ತಕ್ಷಣ ಆಂಬುಲೆನ್ಸ್ಗೆ ಕರೆ ಮಾಡಿ, ಗಾಯಾಳುವನ್ನು ಸಾಗರದ ಆಸ್ಪತ್ರೆಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಿದರು. ಇದರಿಂದಾಗಿ, ನರಳುತ್ತಿದ್ದ ವ್ಯಕ್ತಿಗೆ ಸಕಾಲದಲ್ಲಿ ವೈದ್ಯಕೀಯ ಚಿಕಿತ್ಸೆ ದೊರೆಯುವಂತಾಯಿತು. ಈ ಘಟನೆ, ಕೇವಲ ಒಬ್ಬ ಶಾಸಕರ ಕರ್ತವ್ಯವನ್ನು ಮೀರಿ, ಒಬ್ಬ ವ್ಯಕ್ತಿಯಾಗಿ ಗೋಪಾಲಕೃಷ್ಣ ಬೇಳೂರು ಅವರು ಹೊಂದಿರುವ ಸಾಮಾಜಿಕ ಕಳಕಳಿ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿ ತೋರಿಸುತ್ತದೆ.
ಇಂತಹ ಸಂದರ್ಭದಲ್ಲಿ, ಒಬ್ಬ ಜನಪ್ರತಿನಿಧಿಯಾಗಿ ಶಾಸಕರು ತೋರಿದ ಈ ನಡೆ, ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ರವಾನಿಸುತ್ತದೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆರೋಗ್ಯ ಇಲಾಖಾ ನೌಕರರ ಸಂಘದ ನೇತೃತ್ವದಲ್ಲಿ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ, ವೈದ್ಯಕೀಯ ಶಿಕ್ಷಣ ಇಲಾಖಾ ನೌಕರರ ಕೇಂದ್ರ ಸಂಘ ಹಾಗೂ ಆರೋಗ್ಯ ಇಲಾಖೆಯ ಎಲ್ಲ ವೃಂದ ಸಂಘದಿಂದ ಪಟ್ಟಣದ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ನೇತೃತ್ವ ವಹಿಸಿದ್ದ ಆರೋಗ್ಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಜಿ.ಇ. ನಾಗರಾಜ್ ಮಾತನಾಡಿ, ಮೊದಲ ಹಂತದಲ್ಲಿ ಮಾ. 11ರಿಂದ ಮಾ.15ರ ವರೆಗೆ ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಮತ್ತು ಡಿಸ್ಪೆನ್ಸರಿಗಳಲ್ಲಿನ ಎಲ್ಲ ವೃಂದದ ವೈದ್ಯರು, ಅಧಿಕಾರಿ-ನೌಕರರು ಕಪ್ಪು ಪಟ್ಟಿ ಧರಿಸಿ ಹೊರರೋಗಿಗಳ ಚಿಕಿತ್ಸೆಯನ್ನು ಸ್ಥಗಿತಗೊಳಿಸಿ, ತುರ್ತು ಸೇವೆಗಳನ್ನು ಮಾತ್ರ ನಿರ್ವಹಿಸುವ ಮೂಲಕ ಮುಷ್ಕರದಲ್ಲಿ ಪಾಲ್ಗೊಳ್ಳುತ್ತಾರೆ ಎಂದರು.
ಸರ್ಕಾರ ಸ್ಪಂದಿಸದಿದ್ದರೆ ಮಾ. 16ರಿಂದ ಬೇಡಿಕೆ ಈಡೇರುವವರಿಗೂ ರಾಜ್ಯದ ಆರೋಗ್ಯ ಇಲಾಖೆಯ ಎಲ್ಲ ವೈದ್ಯರು, ಅಧಿಕಾರಿಗಳು, ನೌಕರರು ಕರ್ತವ್ಯಕ್ಕೆ ಅನಿರ್ಧಿಷ್ಟಾವಧಿವರೆಗೆ ಗೈರುಹಾಜರಾಗಿ ಮುಷ್ಕರ ನಡೆಸಲಾಗುವುದು. ಔಷಧಿಗಳ ಸರಬರಾಜು, ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ, ಮುಂಬಡ್ತಿ, ಉನ್ನತ ವ್ಯಾಸಂಗ, ಸ್ನಾತಕೋತ್ತರ ವ್ಯಾಸಂಗಕ್ಕೆ ಅವಕಾಶ, ಖಾಲಿ ಹುದ್ದೆಗಳ ಭರ್ತಿ, ಕೇಂದ್ರ ಪುರಸ್ಕೃತ ಯೋಜನೆ ಅಡಿ ಕಾರ್ಯನಿರತ ನೌಕರರಿಗೆ ಹಲವಾರು ವರ್ಷಗಳಿಂದ 3-4 ತಿಂಗಳಿಗೊಮ್ಮೆ ವೇತನ ಭತ್ಯೆಗಳನ್ನು ನೀಡುತ್ತಿದ್ದು, ಪ್ರತಿ ತಿಂಗಳ ಮೊದಲ ವಾರದಲ್ಲಿ ವೇತನ ಭತ್ಯೆಗಳನ್ನು ನೀಡುವುದು ಸೇರಿ 11 ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.
ಆರೋಗ್ಯ ಇಲಾಖಾ ನೌಕರರ ಸಂಘದ ಕಾರ್ಯಾಧ್ಯಕ್ಷ ಡಾ. ಪ್ರಭು ಸಾಹುಕಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್. ಮಂಜುನಾಥ್, ತಾಲೂಕು ವೈದ್ಯಾಧಿಕಾರಿ ಡಾ. ನೂತನ್ ನಾಯ್ಕ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ದಯಾನಂದ, ಡಾ. ವಿನಯ್ ಪಾಟೀಲ್, ಡಾ. ರಾಘವೇಂದ್ರ ಸೇರಿದಂತೆ ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖಾ ನೌಕರರು ಪಾಲ್ಗೊಂಡಿದ್ದರು.