Klive Special Article ಸೊರಬ(ಸುರಭಿಪುರದ) ಉದ್ದರೆ(ಉದ್ರಿ)ಯೊಳಗೆ
ಭವ್ಯ ಇತಿಹಾಸವಡಗಿದೆ ಕಲ್ಲು, ಕಲ್ಲಿನಲಿ.
ಕಳೆದ ವರ್ಷ, 2025 ರ ಆಗಸ್ಟ್ ನಲ್ಲಿ ಮಲೆನಾಡು ಇತಿಹಾಸ ಸಂಶೋಧನಾ ಮತ್ತು ಅಧ್ಯಯನ ವೇದಿಕೆ, ಶಿವಮೊಗ್ಗ (ರಿ) ಇದರ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸದಸ್ಯರೂ ಐತಿಹಾಸಿಕ ಸ್ಥಳಗಳ ಛಾಯಾಗ್ರಾಹಕರೂ ಆದ ಆದಿತ್ಯಪ್ರಸಾದರು ಹುಡುಕಲು ಹೊರಟಿದ್ದು ಕಣ್ಮರೆಯಾಗಿರುವ 14 ಶಾಸನಗಳನ್ನು, ಗಮ್ಯಸ್ಥಾನವನ್ನೇನೋ ತಲುಪಿದ್ದರು. ಆದರೆ ಅದನ್ನು ಕಾಣುವ ಅವಕಾಶವಿಲ್ಲದೆ ಸುಮಾರು ಮೂವತ್ತು ಅಡಿಗಳಷ್ಟು ಆಳದ ನೀರಿರುವ ಕಂದಕದ ಮೇಲ್ಭಾಗದಲ್ಲಿರುವ ಬಗ್ಗೆ ಮಾಹಿತಿ ದೊರಕಿತು. Klive Special Article ಮುಂದಿನ ಮಾರ್ಚಿ, ಏಪ್ರಿಲ್ ವರೆಗೂ ಸಾಧ್ಯವಿಲ್ಲ ಎಂದು ಸ್ಥಳೀಯರು ತಿಳಿಸಿದ ಕಾರಣ ಮುಂದಿನ ವರ್ಷ ಅದನ್ನು ಅಧ್ಯಯನ ಮಾಡುವ ಭರವಸೆಯ ಬೆಳಕಿನೊಂದಿಗೆ ಹಿಂತಿರುಗಬೇಕಾಯಿತು. ಸೊರಬ ತಾಲ್ಲೂಕಿನ ಉದ್ರಿಯ ವೀರಭದ್ರೇಶ್ವರ ದೇವಾಲಯದ ಎದುರು ಭಾಗದ, ಬನಶಂಕರಿ ಅಮ್ಮನವರದೇವಾಲಯದ ಹಿಂಭಾಗದಲ್ಲಿರುವ ಹೊಂಡದ ತೂಬಿನ ಮೇಲೆ ಕಂಡಿದ್ದು ಬರೋಬ್ಬರಿ ಹದಿನಾಲ್ಕು ಶಾಸನಗಳು. ಹೊಂಡದ ತೂಬಿನ ಮೇಲೆಹದಿನಾಲ್ಕು ಶಾಸನಗಳನ್ನು ಹಾಕಿ ಕಾಲ್ಸಂಕ ಮಾಡಿಕೊಂಡು ಭವ್ಯ ಇತಿಹಾಸವನ್ನು ಸುಮಾರು ಹತ್ತು ಅಡಿ ಮಣ್ಣಿನಡಿಯಲ್ಲಿ ಹಾಕಲಾಗಿದೆ. ಆ ತೂಬಿನೊಳಗೆ ಬೆಳಕು ಬಿಟ್ಟು ಇಣುಕಿದಾಗ ಕಂಡಿದ್ದು ಹದಿನಾಲ್ಕು ಶಾಸನದ ಕಲ್ಲುಗಳು ಬೋರಲಾಗಿಮಲಗಿ ತಮ್ಮ ಗತವೈಭವದ ಜೊತೆಗೆ, ತ್ಯಾಗ, ಬಲಿದಾನವನ್ನು ಸಾರುತ್ತಿವೆ, ಸುಮಾರು ಮೂವತ್ತು ಅಡಿ ಉದ್ದದ್ದ ತೂಬಿನೊಳಗೆ ನಾಗಲೋಕವೇ ಸೃಷ್ಟಿ ಯಾದಂತೆಕಾಣುತ್ತಿತ್ತು. ಅಂತೂ ಹೊಸ ಸಾಹಸ, ಉತ್ಸಾಹದೊಂದಿಗೆ ಹಲವು ಚಿತ್ರ ಗಳೊಂದಿಗೆ ಮುಂದಿನ ದಿನಗಳಲ್ಲಿ ಈ ಶಾಸನಗಳನ್ನು ಜಿಲ್ಲಾಢಳಿತದ ನೆರವಿನೊಂದಿಗೆ ಹೊರತೆಗೆಸಿ ಅಧ್ಯಯನನಡೆಸುವ ತೀರ್ಮಾನದೊಂದಿಗೆ ನಾಗದೇವತೆಗಳ ದರ್ಶನದಿಂದ ಬೆವರುತ್ತಿದ್ದ ಮುಖವನ್ನು ಒರೆಸಿಕೊಂಡು ವಾಪಾಸು ಬರಲಾಯಿತು.
ದಿಲೀಪ್ ನಾಡಿಗ್,
ಕಾರ್ಯದರ್ಶಿ
ಮಲೆನಾಡು ಇತಿಹಾಸ ಸಂಶೋಧನೆ ಮತ್ತು ಅಧ್ಯನ ವೇದಿಕೆ, ಶಿವಮೊಗ್ಗ.
ಚಿತ್ರಕೃಪೆ:
ಶ್ರೀ ಆದಿತ್ಯ ಪ್ರಸಾದ್, ಸದಸ್ಯರು,
ಮಲೆನಾಡು ಇತಿಹಾಸ ಸಂಶೋಧನೆ ಮತ್ತು ಅಧ್ಯನ ವೇದಿಕೆ, ಶಿವಮೊಗ್ಗ.
ರಾಯಲ್ ಕಾಫೀ ವರ್ಕ್ಸ್.
ವಿಶೇಷ ಧನ್ಯವಾದಗಳು:
ಡಾ. ಎಸ್.ಜಿ ಸಾಮಕ್,
ಹಿರಿಯ ಇತಿಹಾಸ ಸಂಶೋಧಕರು ಹಾಗೂ
ಅಧ್ಯಕ್ಷರು, ಮಲೆನಾಡು ಇತಿಹಾಸ ಸಂಶೋಧನೆ ಮತ್ತು ಅಧ್ಯನ ವೇದಿಕೆ, ಶಿವಮೊಗ್ಗ.
