Thursday, April 9, 2026
Thursday, April 9, 2026
Home Blog Page 652

K. Armstrong ತಮಿಳುನಾಡು ಬಿಎಸ್ ಪಿ ಮುಖಂಡ ಆರ್ಮ್ ಸ್ಟ್ರಾಂಗ್ ಕೊಲೆ ಆರೋಪಿ ಪೊಲೀಸ್ ಎನ್‌ಕೌಂಟರ್‌ ಗೆ ಬಲಿ

0

K Armstrong ತಮಿಳುನಾಡು ಬಿಎಸ್‌ಪಿ ಮುಖ್ಯಸ್ಥನ ಹತ್ಯೆಯಲ್ಲಿ ಭಾಗಿಯಾಗಿದ್ದ ಆರೋಪಿಗಳಲ್ಲಿ ಒಬ್ಬನನ್ನು ನಿನ್ನೆ ಸಂಜೆ ಚೆನ್ನೈನಲ್ಲಿ ಪೊಲೀಸರು ನಡೆಸಿದ ಎನ್‌ಕೌಂಟರ್‌ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಯಿಂದ ವಶಪಡಿಸಿಕೊಂಡ ಬಂದೂಕಿನಿಂದ ಪೊಲೀಸ್ ಅಧಿಕಾರಿಗಳ ಮೇಲೆ ಗುಂಡು ಹಾರಿಸಿದಾಗ ಘಠನೆ ನಡೆದಿದ್ದು, ಕೆ. ಆರ್ಮ್‌ಸ್ಟ್ರಾಂಗ್ ಹತ್ಯೆಗೆ ಬಳಸಿದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲು ತಿರುವೆಂಗಡಮ್ ಅವರನ್ನು ಸ್ಥಳಕ್ಕೆ ಕರೆದೊಯ್ಯಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಆರೋಪಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. “ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದರು” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆ ಆರ್ಮ್‌ಸ್ಟ್ರಾಂಗ್ ಅವರನ್ನು ಈ ತಿಂಗಳ ಆರಂಭದಲ್ಲಿ ಚೆನ್ನೈನಲ್ಲಿರುವ ಅವರ ಮನೆಯ ಸಮೀಪ ಆರು ಮಂದಿ ಬೈಕ್‌ನಲ್ಲಿ ಬಂದವರು ಕೊಂದಿದ್ದರು.
ಆರ್ಮ್‌ಸ್ಟ್ರಾಂಗ್ ಅವರು ನಗರದ ಸೇಂಬಿಯಂ ಪ್ರದೇಶದಲ್ಲಿನ ಅವರ ಮನೆಯ ಬಳಿ ಪಕ್ಷದ ಕೆಲವು ಕಾರ್ಯಕರ್ತರೊಂದಿಗೆ ಚರ್ಚೆ ನಡೆಸುತ್ತಿದ್ದಾಗ ಆರು ಜನರು ಆತನ ಮೇಲೆ ಹಲ್ಲೆ ನಡೆಸಿ ನಂತರ ಪರಾರಿಯಾಗಿದ್ದಾರೆ. ಕುಟುಂಬದವರು ಅವರನ್ನು ಆಸ್ಪತ್ರೆಗೆ ಕರೆದೊಯ್ದರು, ಆದರೆ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು.
ಕೆ ಆರ್ಮ್‌ಸ್ಟ್ರಾಂಗ್ ಅವರ ಹತ್ಯೆಗೆ ಸಂಬಂಧಿಸಿದಂತೆ ಬಂಧಿಸಲಾದ ಶಂಕಿತರಲ್ಲಿ ತಿರುವೆಂಗಡಮ್ ಕೂಡ ಒಬ್ಬನಾಗಿದ್ದ.. ವಕೀಲರಾಗಿದ್ದ ಆರ್ಮ್‌ಸ್ಟ್ರಾಂಗ್ ಅವರು 2006 ರಲ್ಲಿ ಚೆನ್ನೈ ಕಾರ್ಪೊರೇಷನ್ ಕೌನ್ಸಿಲ್‌ಗೆ ಆಯ್ಕೆಯಾದರು. ಎರಡು ವರ್ಷಗಳ ಹಿಂದೆ ಚೆನ್ನೈನಲ್ಲಿ ಮೆಗಾ ರ್ಯಾಲಿಯನ್ನು ಆಯೋಜಿಸಿದ ನಂತರ ಮತ್ತು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿಯನ್ನು ಆಹ್ವಾನಿಸಿದ ನಂತರ ಅವರು ಖ್ಯಾತಿಯನ್ನು ಗಳಿಸಿದರು.
K. Armstrong ದಾಳಿಯ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು
ಮುಖ್ಯಸ್ಥೆ ಮಾಯಾವತಿ ಆಗ್ರಹಿಸಿದ್ದಾರೆ. “ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಂತೆ ನಾನು ರಾಜ್ಯ ಸರ್ಕಾರವನ್ನು ವಿಶೇಷವಾಗಿ ಮುಖ್ಯಮಂತ್ರಿಯನ್ನು ಒತ್ತಾಯಿಸುತ್ತೇನೆ. ವಿಶೇಷವಾಗಿ ದುರ್ಬಲ ವರ್ಗದವರು ಸುರಕ್ಷಿತವಾಗಿರಬೇಕು. ಸರ್ಕಾರ ಗಂಭೀರವಾಗಿರುತ್ತಿದ್ದರೆ ಆರೋಪಿಗಳನ್ನು ಬಂಧಿಸಲಾಗುತ್ತಿತ್ತು. ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ನಾವು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇವೆ” ಎಂದು ಅವರು ಹೇಳಿದರು.

Agumbe Ghat ಆಗುಂಬೆ ಘಾಟಿಯಲ್ಲಿ ಮತ್ತೆ ಗುಡ್ಡ ಕುಸಿತ. ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗಸೂಚಿ

0

Agumbe Ghat ಮಳೆ ಹಿನ್ನೆಲೆಯಲ್ಲಿ ಭಾರೀ ವಾಹನ್ಳಿಗೆ ಗಳಿಗೆ ಆಗುಂಬೆ ಘಾಟಿಯಲ್ಲಿ ನಿರ್ಬಂಧ ಹೇರಲಾಗಿದೆ. ಈ‌ಮಧ್ಯೆ ಘಾಟಿಯಲ್ಲಿ ಕಳೆದ ರಾತ್ರಿ ಗುಡ್ಡ ಕುಸಿದಿದೆ.

ಸ್ವಲ್ಪ ಪ್ರಮಾಣದಲ್ಲಿ ಈಗ ಕುಸಿದಿದ್ದರೂ ಮಳೆ ಹೆಚ್ಚಿರುವ ಕಾರಣ ಆತಂಕ ಉಂಟಾಗಿದೆ.
ಘಾಟಿ ತಿರುವುಗಳಲ್ಲಿ ಧರೆಯಿಂದ ಇಳಿಯುವ ನೀರು, ಮಣ್ಣನ್ನು ಸಡಿಲಗೊಳಿಸುತ್ತಲೇ ಇರುತ್ತವೆ. ಇನ್ನೂ ರಸ್ತೆ ಮೇಲಿನ ನೀರು ಧರೆಕೊರೆಯುತ್ತಾ ಹರಿಯುತ್ತವೆ. ಇದರ ಪರಿಣಾಮವೋ ಏನೋ ಎಂಬಂತೆ ಇವತ್ತು ಐದು ಮತ್ತು ಆರನೇ ಕ್ರಾಸ್‌ನಲ್ಲಿ ಬೆಟ್ಟದಲ್ಲಿ ರಸ್ತೆ ಪಕ್ಕದ ಧರೆ ತುಸು ಪ್ರಮಾಣದಲ್ಲಿ ಕುಸಿದಿದೆ.

Agumbe Ghat ಕುಸಿದ ಮಣ್ಣು ರಸ್ತೆ ಮೇಲೆ ಬಿದ್ದಿದ್ದು, ಅರ್ಧರಸ್ತೆಯ ತುಂಬಾ ಹರಡಿದೆ. .
ಸ್ಥಳೀಯರು ಹೇಳುವ ಪ್ರಕಾರ, ಇನ್ನೊಂದಿಷ್ಟು ದಿನ ಹೀಗೆ ಧರೆಕುಸಿಯುವ ಆತಂಕವಿದೆ. ಈ ಹಿಂದೆ ದೊಡ್ಡ ಪ್ರಮಾಣದಲ್ಲಿ ಘಾಟಿಯಲ್ಲಿ ಗುಡ್ಡ ಕುಸಿದಿತ್ತು. ಆ ಥರದ ಘಟನೆಗಳು ಮತ್ತೆ ಸಂಭವಿಸದೇ ಇರಲಿ ಎನ್ನುತ್ತಾರೆ.

ಭಾರಿ ತೀರ್ಥಹಳ್ಳಿ – ಉಡುಪಿ ಮಾರ್ಗವಾಗಿ ಹೋಗುವ ವಾಹನಗಳು ಹುಲಿಕಲ್ ಘಾಟಿ ಮಾರ್ಗವಾಗಿ ಹೋಗುತ್ತಿವೆ. ಈಗ ಆಗುಂಬೆ ಘಾಟಿಯ 5 ನೇ ತಿರುವಿನಲ್ಲಿ ಸಣ್ಣ ಪ್ರಮಾಣದಲ್ಲಿ ಗುಡ್ಡ ಕುಸಿಯಲು ಆರಂಭವಾಗಿದ್ದು ವಾಹನ ಸವಾರರು ಎಚ್ಚರಿಕೆವಹಿಸಬೇಕಿದೆ.

Malnad Area Development Board ದೇಶದ ಯೋಜನೆ ರೂಪಿಸಬೇಕಾದರೆ ಜನಸಂಖ್ಯೆ & ಸಂಪನ್ಮೂಲಗಳ ಬಳಕೆ ಮುಖ್ಯ- ಡಾ.ಹರಿಪ್ರಸಾದ್

0

Malnad Area Development Board ದೇಶದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸಾಂಖ್ಯಿಕ ಇಲಾಖೆಯ ದತ್ತಾಂಶ ಆಧರಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ದತ್ತಾಂಶ ಇಲ್ಲದೇ ತೆಗೆದುಕೊಳ್ಳುವ ನಿರ್ಧಾರ ವಿನಾಶಕ್ಕೆ ಕಾರಣವಾಗುತ್ತದೆ ಎಂದು ಉಪನ್ಯಾಸಕ ಡಾ.ಹರಿಪ್ರಸಾದ್ ಹೇಳಿದರು.

ಶಿವಮೊಗ್ಗ ನಗರದ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಛೇರಿಯಲ್ಲಿ ಏರ್ಪಡಿಸಲಾಗಿದ್ದ ಸಾಂಖ್ಯಿಕ ತಜ್ಞರಾದ ಪ್ರೊ.ಸಿ ಮಹಾಲನೋಬಿಸ್
ಜನ್ಮದಿನಾಚರಣೆ ಹಾಗೂ ಸಾಂಖ್ಯಿಕ ದಿನಾಚರಣೆ ಕುರಿತು ಉಪನ್ಯಾಸ ನೀಡಿದ ಅವರು ಒಂದು ದೇಶ ಅಭಿವೃದ್ಧಿ ಹೊಂದಬೇಕಾದರೆ ಆ ದೇಶದ ಜನಸಂಖ್ಯೆ ಹಾಗೂ ಇರುವ ಸಂಪನ್ಮೂಲಗಳನ್ನು ಬಳಸಿಕೊಂಡು ಯೋಜನೆ ರೂಪಿಸಿ ಅಭಿವೃದ್ಧಿ ಸಾಧಿಸಲು ಯೋಜನಾ ಮತ್ತು ಸಾಂಖ್ಯಿಕ ಇಲಾಖೆ ನೀಡುವ ಅಂಕಿಅಂಶಗಳು ಬಹುಮುಖ್ಯವಾಗಿದೆ.

ಯುದ್ದಗಳ ಸಂದರ್ಭದಲ್ಲಿ ಎದುರಾಳಿ ಸೈನ್ಯದ ಸಂಖ್ಯಾಬಲ ಹಾಗೂ ನಮ್ಮ ಸೈನ್ಯದಲ್ಲಿ ಇರುವ ಶಸ್ತ್ರಾಸ್ತ್ರಗಳ ಕುರಿತು ಸರಿಯಾದ ದತ್ತಾಂಶ ಮಾಹಿತಿ ಇದ್ದರೆ, ಯುದ್ದ ಮಾಡಬೇಕು ಅಥಾವ ಬೇಡ ಎಂದು ನಿರ್ಧಾರ ಮಾಡಲು ಸಾಧ್ಯ. ಆದ್ದರಿಂದ ದತ್ತಾಂಶ ಇಲದೇ ಹೋದರೆ ಒಂದು ದೇಶವೇ ಅವನತಿ ಹೊಂದುತ್ತದೆ. ಇಸ್ರೋ ಏರೋನಾಟಿಕ್ಸ್ ಸರ್ವೆ, ಬೆಳೆ ಸರ್ವೆಗಳನ್ನು ಆಧರಿಸಿ ಸರ್ಕಾರಗಳು ರೈತರ ಬೆಳೆಗಳ ಕುರಿತು ಮಾಹಿತಿ ಪಡೆದು ರೈತರಿಗೆ ಪರಿಹಾರವನ್ನು ನೀಡಲು ಸಹಕಾರಿ ಆಗಿದೆ.

ಪ್ರೊ.ಸಿ ಮಹಾಲನೋಬಿಸ್ ಅವರು ಒಬ್ಬ ಶ್ರೇಷ್ಠ ಸಾಂಖ್ಯಿಕ ತಜ್ಞರಾಗಿದ್ದು ಖ್ಯಾತ ಗಣಿತಶಾಸ್ತ್ರಜ್ಞರಾದ ಸರ್ ಸಿ ವಿ ರಾಮಾನುಜನ್ ಅವರ ಪ್ರಭಾವಕ್ಕೆ ಒಳಗಾಗಿ ಸಂಖ್ಯಾಶಾಸ್ತ್ರದಲ್ಲಿ ದೊಡ್ಡ ಹೆಸರನ್ನು ಮಾಡಿದ್ದರು. ಹಾಗೂ ರವಿಂದ್ರನಾಥ್ ಠಾಗೂರ್ ಅವರ ಒಡನಾಡಿಯಾಗಿ ಬದುಕಿದ ವ್ಯಕ್ತಿಯಾಗಿದ್ದು ಭಾರತದ ಸಾಂಖ್ಯಿಕ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾಗಿದೆ. ಕಳೆದ 17 ವರ್ಷಗಳಿಂದ ಅವರ ಜನ್ಮ ದಿನವನ್ನು ಸಾಂಖ್ಯಿಕ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.

Malnad Area Development Board ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಗಾಯಿತ್ರಿ ಅವರು ಮಾತನಾಡಿ ಎಲ್ಲಾ ಇಲಾಖೆಗಳಿಗೂ ದತ್ತಾಂಶದ ಕುರಿತು ಮಾಹಿತಿ ಅಗತ್ಯವಾಗಿದ್ದು ಅಂಕಿ ಅಂಶಗಳು ಇಲ್ಲದೇ ಯಾವುದೇ ಯೋಜನೆಗಳನ್ನು ರೂಪಿಸಲು ಸಾಧ್ಯವಿಲ್ಲ. ಯೋಜನೆ ಇಲ್ಲದೆ ಜೀವನ ನಡೆಸುವುದು ಕಷ್ಟವಾಗಿದೆ. ಇದೇ ರೀತಿ ಮಾನವನ ಪ್ರತಿದಿನದ ಜೀವನದಲ್ಲಿ ದತ್ತಾಂಶ ಆಧಾರಿತ ಜೀವನವನ್ನು ನಾವು ನಡೆಸುತ್ತಿದ್ದೇವೆ . ಪ್ರತಿಯೊಂದು ಮನೆ, ಹಾಗೂ ಉದ್ಯೋಗ ಸ್ಥಳ,ಹಾಗೂ ವಿವಿಧ ಚಟುವಟಿಕೆಗಳಲ್ಲಿ ದತ್ತಾಂಶ ಅತೀ ಮುಖ್ಯವಾಗಿದೆ. ಯೋಜನಾ ಮತ್ತು ಸಾಂಖ್ಯಿಕ ಇಲಾಖೆ ಉತ್ತಮವಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದು ಮುಂದಿನ ದಿನಗಳಲ್ಲಿ ಪರಿಣಾಮಕಾರಿಯಾಗಿ ಇನ್ನೂ ಹೆಚ್ಚಿನ ಸೇವೆಯನ್ನು ಸಲ್ಲಿಸೊಣ ಎಂದರು.

ಸೂಡಾ ಆಯುಕ್ತರಾದ ವಿಶ್ವನಾಥ್ ಮಾತನಾಡಿ ಪ್ರೊ.ಸಿ ಮಹಾಲನೋಬಿಸ್ ಅವರ ಜಯಂತಿ ಪ್ರತಿಯೊಬ್ಬರಿಗೂ ತಿಳಿಯುವಂತೆ ಆಗಬೇಕಾಗಿದೆ. ಅದ್ದರಿಂದ ಶಾಲಾ ಕಾಲೇಜುಗಳಲ್ಲಿ ಜಯಂತಿ ಆಚರಿಸಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಅರಿವು ಮೂಡಿಸುವ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಆಗಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಮಹೇಶ್ವರಪ್ಪ, ಎಂಎಡಿಬಿ ಅಧೀನ ಕಾರ್ಯದರ್ಶಿ ಹನುಮಾನಾಯ್ಕ್, ಇಲಾಖೆಯ ನಿವೃತ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

G. Parameshwar ಹವಾಮಾನ ವೈಪರೀತ್ಯ ಶಿವಮೊಗ್ಗದ ಧರೆಗಿಳಿಯದೇ ಬೆಂಗಳೂರಿಗೆ ಗೃಹಸಚಿವರಿದ್ದ ವಿಮಾನ ವಾಪಸ್

0

G. Parameshwar ಹವಾಮಾನ ವೈಪರೀತ್ಯದಿಂದಾಗಿ ಗೃಹ ಸಚಿವ ಜಿ. ಪರಮೇಶ್ವರ್ ಅವರು ಶಿವಮೊಗ್ಗಕ್ಕೆ ಬಂದು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಇಂದು ಬೆಳಗ್ಗೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ವಿಮಾನದ ಮೂಲಕ ಆಗಮಿಸಬೇಕಾಗಿತ್ತು. ಬೆಳಗ್ಗೆ ಬೆಂಗಳೂರಿನಿಂದ ಸುಮಾರು 11:30ಕ್ಕೆ ಹೊರಟು 12:30ಕ್ಕೆ ಶಿವಮೊಗ್ಗಕ್ಕೆ ಆಗಮಿಸಬೇಕಿತ್ತು. ಬೆಂಗಳೂರಿನಿಂದ ಹೊರಟ ಇಂಡಿಗೋ ವಿಮಾನ ಶಿವಮೊಗ್ಗಕ್ಕೆ ಬಂದಾಗ ಇಲ್ಲಿ ವಿಮಾನ ಲ್ಯಾಂಡ್ ಮಾಡಿಸಲು ಪೂರಕ ವಾತಾವರಣ ಇರದ ಕಾರಣಕ್ಕೆ ವಿಮಾನ ಬೆಂಗಳೂರಿಗೆ ವಾಪಸ್ ಆಗಿದೆ.
ಗೃಹ ಸಚಿವ ಜಿ.ಪರಮೇಶ್ವರ್ ಅವರು ಇಂದು ಶಿವಮೊಗ್ಗ ಜಿಲ್ಲೆಗೆ ಆಗಮಿಸಿ, ಸೊರಬದಲ್ಲಿ ಪೊಲೀಸ್ ವಸತಿ ಸಮುಚ್ಚಯ ಉದ್ಘಾಟನೆ ನಡೆಸಿ, ತೀರ್ಥಹಳ್ಳಿಗೆ ತೆರಳಬೇಕಿತ್ತು. ತೀರ್ಥಹಳ್ಳಿಯಲ್ಲಿ 20.50 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾದ ಕೋಣಂದೂರು ಪೊಲೀಸ್​ ವಸತಿ ಸಂಕೀರ್ಣ, ತೀರ್ಥಹಳ್ಳಿ ರಥಬೀದಿ ಪೊಲೀಸ್​ ಸ್ಟೇಷನ್, ಬೆಟ್ಟಮಕ್ಕಿಯಲ್ಲಿ ನೂತನವಾಗಿ ನಿರ್ಮಾಣ ಆಗಿರುವ ಫೈರ್ ಸ್ಟೇಷನ್ ಹಾಗೂ ಸೊಪ್ಪುಗುಡ್ಡೆಯಲ್ಲಿ 24 ಮನೆಗಳುಳ್ಳ ವಸತಿ ಸಮುಚ್ಚಯ ಕೂಡ ಉದ್ಘಾಟನೆ ಮಾಡಬೇಕಿತ್ತು. ಇಂದು ಗೃಹ ಸಚಿವರು ಬಾರದ ಕಾರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉದ್ಘಾಟನೆ ಮಾಡಲಿದ್ದಾರೆ.
G. Parameshwar ಈ ಕುರಿತು ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಗೃಹ ಸಚಿವರು ಇಂದು ಸೊರಬಕ್ಕೆ ಬರಬೇಕಿತ್ತು. ಆದರೆ, ಹವಾಮಾನ ವೈಪರೀತ್ಯದಿಂದ ವಿಮಾನ ಲ್ಯಾಂಡ್ ಆಗದೆ ವಾಪಸ್ ಆಗಿದ್ದಾರೆ. ಗೃಹ ಸಚಿವರ ಗೈರಿನಲ್ಲಿ ನಾನು ಉದ್ಘಾಟನೆ ಮಾಡಲಿದ್ದೇನೆ ಎಂದು ತಿಳಿಸಿದರು.

Murder In Mysore ರೀಲ್ಸ್ ಮೂಲಕ ಲವ್ ನಂತರ ಮದುವೆ ಕೊಲೆಯಲ್ಲಿ ಯುವತಿ ಕೊನೆ

0

Murder In Mysore ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡುತ್ತಾ, ಯುವಕನ ಜೊತೆ ಲವ್ ನಲ್ಲಿ ಬಿದ್ದು ಮದುವೆಯಾಗಿದ್ದ ಮೈಸೂರು ಮೂಲದ ಯುವತಿ ಇದೀಗ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೈಸೂರಿನ ಕುಂಬಾರಕೊಪ್ಪಲು ನಿವಾಸಿ 23 ವರ್ಷದ ಮಂಜುಳ ಅಲಿಯಾಸ್ ನಯನ ಮೃತಪಟ್ಟ ಯುವತಿ. ಈಕೆಗೆ ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡುವ ಹುಚ್ಚಿತ್ತು. ಈ ನಡುವೆ ಇನ್ಸ್ಟಾಗ್ರಾಮ್ ನಲ್ಲಿ ಬೆಳಗಾವಿ ಜಿಲ್ಲೆ ಮಚ್ಚೆ ಗ್ರಾಮದ ಬೀರೇಶ್ ಎಂಬುವವನ ಪರಿಚಯವಾಗಿ ಪ್ರೇಮಾಂಕುರವಾಗಿದೆ. ಈ ಹಿನ್ನೆಲೆಯಲ್ಲಿ ಮಂಜುಳ ಬೆಳಗಾವಿಗೆ ತೆರಳಿ ಒಂದು ವರ್ಷದ ಹಿಂದೆ ಬೀರೇಶ್ ನನ್ನು ವಿವಾಹವಾಗಿದ್ದಳು.

ಮೈಸೂರಿನಿಂದ ಬೆಳಗಾವಿಗೆ ಆಗಮಿಸಿದ್ದ ಮಂಜುಳಾಳನ್ನ ಪುಸಲಾಯಿಸಿ ಬೀರೇಶ್ ಮದುವೆಯಾಗಿದ್ದ. ಈ ಮಧ್ಯೆ ಮಂಜುಳ 3 ತಿಂಗಳ ಗರ್ಭಿಣಿಯಾಗಿದ್ದು, ಇದೀಗ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾಳೆ.

Murder In Mysore ಪತಿ ಬೀರೇಶ್ ಮತ್ತು ಕುಟುಂಬದವರೇ ಮಂಜುಳಳನ್ನ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂದು ಮಂಜುಳ ಪೋಷಕರು ಆರೋಪಿಸಿದ್ದಾರೆ. 3 ತಿಂಗಳ ಗರ್ಭೀಣಿಯಾಗಿದ್ದ ಮಂಜುಳಾಗೆ ಗರ್ಭಫಾತ ಮಾಡಿಸಿಕೊಳ್ಳುವಂತೆ ಒತ್ತಾಯ ಮಾಡಿದ್ದಾರೆ .

ಒಪ್ಪದ ಹಿನ್ನೆಲೆಯಲ್ಲಿ ಹತ್ಯೆಗೈದಿದ್ದಾರೆ. ಕೊಲೆ ಮಾಡಿ ಪತಿ ಬೀರೇಶ್ ಕುಟುಂಬ ಪರಾರಿಯಾಗಿದ್ದಾರೆ ಎಂದು ಮಂಜುಳಾ ಪೋಷಕರು ಆರೋಪಿಸಿದ್ದಾರೆ.

Bhadravati TAPCMS ಭದ್ರಾವತಿ ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಬಿ.ಟಿ.ನಾಗರಾಜ್ ಅವಿರೋಧ ಆಯ್ಕೆ

0

Bhadravati TAPCMS ಅನುಭವಿ ರಾಜಕಾರಣಿ ಕಾಂಗ್ರೇಸ್ ಮುಖಂಡ ಮಾಜಿ ನಗರಸಭೆ ಆಧ್ಯಕ್ಷರಾಗಿ ಹಾಲಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವ ಬಿ.ಟಿ.ನಾಗರಾಜ್ ಅವರು ಮತ್ತೊಂದು ಮೆಟ್ಟಿಲೇರಿ ರೈತರ ಕೃಷಿಕರ ಸೇವೆ ಮಾಡಲು ನೂತನ ಅಧ್ಯಕ್ಷರಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್‌ಬಾನು ಹೇಳಿದರು.

ಭದ್ರಾವತಿ ನಗರದ ಟಿಎಪಿಸಿಎಂಎಸ್ ನೂತನ ಅಧ್ಯಕ್ಷರಾಗಿ ನಡೆದ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾದ ನಂತರ ಅವರನ್ನು ಅಭಿನಂದಿಸಿ ಮಾತನಾಡಿ ಆಡು ಮುಟ್ಟದ ಸೊಪ್ಪಿಲ್ಲವೆಂಬಂತೆ ನಾಗರಾಜ್ ಅವರು ಸಹಕಾರಿ ಕ್ಷೇತ್ರದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿರುವುದು ಸಂತಸ ತಂದಿದೆ. ಕೃಷಿ ಮತ್ತು ರೈತರಿಗಿರುವ ಕೆಲವು ಸಮಸ್ಯೆಗಳನ್ನು ನಿವಾರಿಸಿ ಈ ಕ್ಷೇತ್ರಕ್ಕೆ ಹೆಸರಾಗಲಿ ಎಂದರು.

ನೂತನ ಅಧ್ಯಕ್ಷ ಬಿ.ಟಿ.ನಾಗರಾಜ್ ಮಾತನಾಡಿ ನಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲಾ ಸದಸ್ಯರಿಗೂ ಸಹಕರಿಸಿದ ಪಕ್ಷದ ಮುಖಂಡರಿಗೂ ಹಾಗೂ ಅಭಿಮಾನಿ ಬಳಗಕ್ಕೂ ಕೃತಜ್ಞತೆ ಸಲ್ಲಿಸಿ ನಮ್ಮ ಅವಧಿಯಲ್ಲಿ ಕೃಷಿಕರ ರೈತರಿಗೆ ಪ್ರಾಮಾಣಿಕ ಸೇವೆ ನೀಡುವುದಾಗಿ ಹೇಳಿದರು.

Bhadravati TAPCMS ಈ ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷದ ಗ್ರಾಮಾಂತರ ಅಧ್ಯಕ್ಷ ಹೆಚ್.ಎಲ್.ಷಡಾಕ್ಷರಿ, ಮುಖಂಡರಾದ ಬಿ.ಕೆ.ಶಿವಕುಮಾರ್, ಬಸವರಾಜಪ್ಪ, ಹನುಮಂತಪ್ಪ, ನಂಜಪ್ಪ, ಪ್ರಕಾಶ್‌ರಾವ್, ಬಸಂತಪ್ಪ, ಗಿರಿನಾಯ್ಡು, ಜಹೀರ್‌ಜಾನ್, ಸುರೇಶ್, ಆಬಿದಲಿ, ಲಕ್ಷ್ಮೀದೇವಿ, ವಿಐಎಸ್‌ಎಲ್ ಕಾರ್ಮಿಕ ಸಂಘದ ಅಧ್ಯಕ್ಷ ಜೆ.ಜಗದೀಶ್, ಬಿಜೆಪಿ ಅಧ್ಯಕ್ಷ ಧರ್ಮಪ್ರಸಾದ್ ಮುಂತಾದವರಿದ್ದರು.

Railway Department ರೈಲ್ವೆ ಕ್ರಿಯಾ ಸಮಿತಿ ನಿಯೋಗದಿಂದ ರೈಲ್ವೆ ಬೇಡಿಕೆ & ಹಿರಿಯ ನಾಗರೀಕರಿಗೆ ರಿಯಾಯಿತಿ ಸೌಲಭ್ಯ ಲಭ್ಯತೆಗೆ ಕ್ರಮಕ್ಕೆ ಮನವಿ

0

Railway Department ಬೆಂಗಳೂರಿನಲ್ಲಿ ಭಾರತ ಸರ್ಕಾರದ ರಾಜ್ಯ ರೈಲ್ವೆ ಮಂತ್ರಿಗಳಾದ ಶ್ರೀ ವಿ. ಸೋಮಣ್ಣರವರನ್ನು ರೈಲ್ವೆ ಕ್ರಿಯಾ ಸಮಿತಿ ನಿಯೋಗ ಭೇಟಿ ಮಾಡಿ ಮನವಿ ಪತ್ರ ಅರ್ಪಿಸಿತು.

ಮನವಿ ಪತ್ರದಲ್ಲಿರುವ ರೈಲ್ವೆ ಬೇಡಿಕೆಗಳ ಜೊತೆಗೆ ರಾಯದುರ್ಗ ತುಮಕೂರು ನೂತನ ಬ್ರಾಡ್ ಕಾಮಗಾರಿಯನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸುವಂತೆ ಸಚಿವರಲ್ಲಿ ವಿನಂತಿಸಲಾಯಿತು.
ಈ ಕಾಮಗಾರಿಯ ವೀಕ್ಷಣೆಯನ್ನು ಈ ದಿನವೇ ಮಾಡುತ್ತಿರುವುದಾಗಿ ಸಚಿವರು ತಿಳಿಸಿದರು.

ಹಿರಿಯ ನಾಗರಿಕರಿಗೆ ರೈಲ್ವೆಯಲ್ಲಿ ರಿಯಾಯಿತಿ ಸೌಲಭ್ಯ ದೊರೆಯುವಂತೆ ಕ್ರಮ ವಹಿಸಲು ವಿನಂತಿಸಲಾಯಿತು.

ಮನವಿ ಪತ್ರದಲ್ಲಿ ಕೋರಿರುವ ಬಳ್ಳಾರಿ ಭಾಗಕ್ಕೆ ದೊರೆಯಬೇಕಾದ ರೈಲ್ವೆಗಳ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಮಂತ್ರಿಗಳು ಅಧಿಕಾರಿಗಳಿಗೆ ಸಮಿತಿಯ ಸಮಕ್ಷಮದಲ್ಲಿ ಸೂಚನೆ ನೀಡಿದ್ದಾರೆ.

ಬಳ್ಳಾರಿ ಭಾಗದ ಜನತೆಯ ಪರವಾಗಿ
ಹಾಗೂ ಬಿಜೆಪಿ ಪಕ್ಷದ ಪರವಾಗಿ ನಿಲುಗಡೆಯಾಗಿರುವ ರೈಲುಗಳನ್ನು ಪುನರಾರಂಭಿಸುವಂತೆ ಸಚಿವರಲ್ಲಿ ವಿನಂತಿಸಲಾಯಿತು.

Railway Department ರೈಲು ಸಂಖ್ಯೆ 07335 07336
ಬೆಳಗಾವಿ ಸಿಕಂದ್ರಾಬಾದ್ ಭದ್ರಾಚಲಂ ಬೆಳಗಾವಿ
ದಿನನಿತ್ಯದ ಎಕ್ಸ್ಪ್ರೆಸ್ ರೈಲು ಹಾಗೂ ರೈಲು ಸಂಖ್ಯೆ 07589 07590
ಕದರಿದೇವನಪಲ್ಲಿ ಬಳ್ಳಾರಿ ತಿರುಪತಿ
ಕದರಿದೇವನಪಲ್ಲಿ
ದಿನನಿತ್ಯದ ರೈಲು ಮತ್ತು ರೈಲು ಸಂಖ್ಯೆ 06223 06224
ಶಿವಮೊಗ್ಗ – ಬಳ್ಳಾರಿ – ಚೆನ್ನೈ, ಶಿವಮೊಗ್ಗ ಬೈ ವೀಕ್ಲಿ ಎರಡು ದಿನದ ಎಕ್ಸ್ಪ್ರೆಸ್ ರೈಲು…..ಈ ರೈಲುಗಳು ವಿಶೇಷ ರೈಲುಗಳಾಗಿ ಸಂಚರಿಸುತ್ತಿತ್ತು. ಆದರೆ ನೈರುತ್ಯ ರೈಲ್ವೆ ಅಧಿಕಾರಿಗಳು ಕಾರಣಾಂತರದಿಂದ ಇವುಗಳನ್ನು ರದ್ದು ಮಾಡಿದ್ದಾರೆ.

ಕೂಡಲೇ ಈ ರೈಲುಗಳು ಪುನರಾರಂಭವಾಗಬೇಕು ಜೊತೆಗೆ ರೆಗುಲರ್ ರೈಲುಗಳಾಗಿ ಸಂಚರಿಸಬೇಕು. ಬಳ್ಳಾರಿ ಮಾರ್ಗದಲ್ಲಿ ಒಂದೇ ಭಾರತ್ ಎಕ್ಸ್ಪ್ರೆಸ್ ರೈಲು ಕೂಡಾ ಬೇಕು.

ಬಳ್ಳಾರಿ ಮಾರ್ಗದಲ್ಲಿ ಬೆಂಗಳೂರಿಗೆ ಹೋಗಿ ಹಿಂದಕ್ಕೆ ಬರಲು ಒಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಸಂಚಾರವನ್ನು ಕೂಡಲೇ ಆರಂಭಿಸಲು ಸನ್ಮಾನ್ಯ ರೈಲ್ವೆ ಮಂತ್ರಿಗಳು ಸೂಕ್ತ ಮಾರ್ಗದರ್ಶನವನ್ನು ರೈಲ್ವೆ ಇಲಾಖೆಗೆ ನೀಡಬೇಕಾಗಿ ಕೋರಿಕೊಳ್ಳಲಾಯಿತು.

ಬಳ್ಳಾರಿ ಮಾರ್ಗದಲ್ಲಿ ಕಲ್ಬುರ್ಗಿ ಹಾಗೂ ಬೀದರ್ ಗೆ ಹೋಗಿ ಬರಲು ಒಂದೇ ಭಾರತ್ ರೈಲು ಅಥವಾ ಎಕ್ಸ್ಪ್ರೆಸ್ ರೈಲು ಆರಂಭಿಸಲು ನೈರುತ್ಯ ರೈಲ್ವೆಗೆ ಸಚಿವರು ನಿರ್ದೇಶನ ನೀಡಲು ಸಹ ಈ ಕೋರಿಕೊಳ್ಳಲಾಯಿತು.

ನಿಯೋಗದಲ್ಲಿ ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ಅಧ್ಯಕ್ಷ ಕೆ.ಎಮ್.ಮಹೇಶ್ವರ ಸ್ವಾಮಿ, ಎ.ಟಿ.ಪರಮೇಶ್ವರಪ್ಪ,
ಪರಶುರಾಮ ಶಾಸ್ತ್ರಿ ಉಪಸ್ಥಿತರಿದ್ದರು.

Shivamogga Police ಟಿಟಿ ವಾಹನ ಬಾಡಿಗೆಗೆ ಕರೆದು ಚಾಲಕನ ಮೇಲೆ ಹಲ್ಲೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲು

0

Shivamogga Police ಟೆಂಪೋ ಟ್ರಾವಲರ್ ಬಾಡಿಗೆಗೆ ಬೇಕೆಂದು ಕರೆಯಿಸಿಕೊಂಡು ನಂತರ ಪ್ರಯಾಣಿಸುವಾಗ ಚಾಲಕ ದರ್ಶನ್‌ನನ್ನು ಹೆದರಿಸಿ ಮಾಲಕನನ್ನು ಕರೆಯಿಸು ಎಂದು ಬೆದರಿಸಿ ಆತನ ಮೇಲೆ ರಾಡ್‌ನಿಂದ ಹಲ್ಲೆ ಮಾಡಿ, ವಾಹನವನ್ನು ಹಾನಿಗೊಳಿಸಿದ ಪ್ರಕರಣ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಜುಲೈ 10ರ ರಾತ್ರಿ ಈ ಘಟನೆ ಸಂಭವಿಸಿದೆ. ಕೆಎ ೦೫ ಎಎಫ್ ೧೪೩೧ರ ಟಿಟಿ ಬಾಡಿಗೆ ಇದೆ ಹೋಗು ಎಂದು ಮಾಲೀಕ ಕಾರ್ತಿಕ್ ಚಾಲಕನಿಗೆ ತಿಳಿಸಿದ್ದಾರೆ. ಅದರಂತೆ ಬೊಮ್ಮನಕಟ್ಟೆಯ ಲಾಸ್ಟ್ ಬಸ್ ಸ್ಟಾಪ್ ನಿಂದ ಬಾಡಿಗೆಯವರನ್ನು ಹತ್ತಿಸಿಕೊಂಡ ಚಾಲಕ ಬಸವಗಂಗೂರಿನ ಮೂಲಕ ಕುಂಸಿ ಕಡೆ ಹೊರಟಿದ್ದನು. ಈ ವೇಳೆ ಟಿಟಿಯಲ್ಲಿದ್ದ ತಂಡ ವಾಹನದ ಮಾಲೀಕನನ್ನು ಕರೆಯಿಸು ಎಂದು ಸೂಚಿಸಿದ್ದಾರೆ.

ಯಾಕೆ ಎಂದು ಪ್ರಶ್ನಿಸಿದ ಟಿಟಿ ಚಾಲಕನಿಗೆ ವೀಲ್ ರಾಡ್‌ನಿಂದ ಹಲ್ಲೆ ಮಾಡಿದ್ದಾರೆ. ಚಾಲಕನನ್ನು ಸೀಟಿನಿಂದ ಎಳೆದುಹಾಕಿದ್ದಾರೆ.
ಬಸವನಗಂಗೂರಿನಿಂದ ಕುಂಸಿಗೆ ಹೋಗುವ ದಾರಿ ಮಧ್ಯದಲ್ಲಿ ಬರುವ ಬಾರ್ ಎದುರು ಗಾಡಿ ನಿಲ್ಲಿಸಿ ವಾಹನವನ್ನು ಹಾಳು ಮಾಡಿದ್ದಾರೆ.

ಎಲ್ಲರೂ ಬಾರ್ ಗೆ ಇಳಿದು ಹೋದ ವೇಳೆ ಟಿಟಿ ಚಾಲಕ ಉಪಾಯದಿಂದ ತಪ್ಪಿಸಿಕೊಂಡು ಬಂದು ಮಾಲೀಕನಿಗೆ ವಿಷಯ ತಿಳಿಸಿದ್ದಾರೆ.

Shivamogga Police ಆಗ ಮಾಲೀಕರು ಯಾರು ಬಾಡಿಗೆಗೆ ಕರೆದಿದ್ದರೋ ಅವರಿಗೆ ಕರೆ ಮಾಡಿದಾಗ ಸ್ಚಿಚ್ ಆಫ್ ಬಂದಿದೆ. ವೀಲ್ ರಾಡಿನಿಂದ ನಂತರ ಯುವಕನ ಮೇಲೆ ಹಲ್ಲೆ ನಡೆಸಿದ ೧೦-೧೨ ಜನ ಅಪರಿಚಿತ ಯುವಕರ ವಿರುದ್ಧ ಚಾಲಕ ದರ್ಶನ್ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

BJP Shivamogga ಎಮ್ಮೆಹಟ್ಟಿಗೆ ಸಂಸದ ರಾಘವೇಂದ್ರ ಸಂಗಡ ಜಿಲ್ಲಾ ಬಿಜೆಪಿ ವರಿಷ್ಠರ ಸಾಂತ್ವನ ಭೇಟಿ. ಕುಟುಂಬಗಳಿಗೆ ಪಕ್ಷದಿಂದ ₹15 ಲಕ್ಷ ಪರಿಹಾರ ಕೊಡುಗೆ

0

BJP Shivamogga ಕಳೆದ ಜೂನ್ ತಿಂಗಳಲ್ಲಿ ಶ್ರದ್ಧಾ ಕೇಂದ್ರಗಳಿಗೆ ಪ್ರವಾಸಕ್ಕೆಂದು ಮರಾಠ ಸಮಾಜದ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ, ಹನುಮಂತಾಪುರ, ಶಿವಮೊಗ್ಗ ನಗರದಿಂದ ಸುಮಾರು 17ಮಂದಿ ಕುಟುಂಬದವರು ಹೊರಟಿದ್ದರು ದುರಾದೃಷ್ಟವಶಾತ್ ಜೂ.28ರಂದು ಹಾವೇರಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ 13 ಮಂದಿ ಧಾರುಣವಾಗಿ ಸಾವು ಕಂಡು 4ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಿವಮೊಗ್ಗ ಜಿಲ್ಲಾ ಬಿಜೆಪಿ ವತಿಯಿಂದ ಆರ್ಥಿಕ ನೆರವು ಶಿವಮೊಗ್ಗ ಜಿಲ್ಲಾ ಬಿಜೆಪಿ ಪಕ್ಷದ ವತಿಯಿಂದ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ನೇತೃತ್ವದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್ ಹಾಗು ಡಾ‌.ಧನಂಜಯ್ ಸರ್ಜಿ ಸೇರಿದಂತೆ ಇನ್ನಿತರ ಬಿಜೆಪಿ ನಾಯಕರುಗಳು ಎಮ್ಮೆಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಮೃತ ಕುಟುಂಬಗಳ ಸದಸ್ಯರನ್ನು ಭೇಟಿ ಮಾಡಿ ಸಾಂತ್ವಾನ ಹೇಳಿ ಆರ್ಥಿಕ ನೆರವನ್ನು ನೀಡಿದ್ದಾರೆ.

ನೆರವು ನೀಡಿದ ನಂತರ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ ಸುಮಾರು ಹದಿನೈದು ದಿನಗಳ ಹಿಂದೆ ಜೂ.28ರಂದು ಹಾವೇರಿಯಲ್ಲಿ ನಡೆದ ಅಪಘಾತದಲ್ಲಿ ನಮ್ಮ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಗ್ರಾಮ ಹಾಗು ಪಕ್ಕದ ಹನುಮಂತಾಪುರ ಗ್ರಾಮ ಹಾಗು ಶಿವಮೊಗ್ಗ ನಗರದಲ್ಲಿ ವಾಸವಾಗಿದ್ದ ಒಂದೇ ಸಮಾಜದ ಹಿಂದೂಗಳು 13ಮಂದಿ ಧಾರುಣವಾಗಿ ಮೃತ ಪಟ್ಟಿದ್ದರು.

ಇನ್ನೂ ನಾಲ್ಕು ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಯುತ್ತಿದ್ದಾರೆ ಘಟನೆ ನಡೆದ ಸಂಧರ್ಭದಲ್ಲಿ ಪಕ್ಷದ ವತಿಯಿಂದ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಗ್ರಾಮಕ್ಕೆ ಬಂದು ಮೃತ ಕುಟುಂಬದ ಸಂಬಂಧಿಗಳಿಗೆ ಸಾಂತ್ವಾನ ಹೇಳಲಾಗಿತ್ತು.

BJP Shivamogga ಮೃತ ಕುಟುಂಬಗಳಿಗೆ ನೆರವಾಗಲು ಸಂಘಟನೆ ತೀರ್ಮಾನಿಸಿದೆ ಅದರಂತೆ ಕುಟುಂದ ಸದಸ್ಯರಿಗೆ ಸಹಾಯವಾಗಲು ಮತ್ತು ಕುಟುಂಬದಲ್ಲಿರುವ ಮಕ್ಕಳಿಗೆ ವಿಧ್ಯಾಭ್ಯಾಸಕ್ಕೆ ನೆರವಾಗಲು ಪಕ್ಷದಿಂದ ಒಟ್ಟು ಹದಿನೈದು ಲಕ್ಷಗಳ ನೆರವು ನೀಡಿದ್ದೇವೆ. ಇದರಲ್ಲಿ ಅಪಘಾತದಲ್ಲಿ ಮೃತ ಪಟ್ಟವರ ಕುಟುಂಬಗಳಿಗೆ ತಲಾ ಒಂದು ಲಕ್ಷ ಹಾಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರವ ಗಾಯಾಳುಗಳಿಗೆ ನೆರವಾಗಲು ನಿರ್ಧರಿಸಿ ಆರ್ಥಿಕ ನೆರವು ನೀಡಲಾಗಿದೆ ಎಂದು ತಿಳಿಸಿದರು

Legislative session ವಿಧಾನಸೌಧದ ಅಧಿವೇಶನಕ್ಕೆ ಹೋಗಿ ಬರುವ ಶಾಸಕರ ಮೇಲೆ ಕ್ಯಾಮರಾ ನಿಗಾವಣೆ

0

Legislative session ಸೋಮವಾರದಿಂದ ವಿಧಾನ ಮಂಡಲದ ಉಭಯ ಸದನಗಳ ಕಲಾಪ ಆರಂಭವಾಗಲಿದೆ.

ಸೋಮವಾರ ಮುಂಗಾರು ಅಧಿವೇಶನ ಆರಂಭವಾಗುತ್ತಿದ್ದು ಈ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಸಿದ್ಧತಾ ಕಾರ್ಯಗಳು ಚುರುಕುಗೊಂಡಿವೆ.

Legislative session ವಿಶೇಷ ಅಲಂಕಾರಿಕ ಗಿಡಗಳು, ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗುತ್ತದೆ. ಸ್ಪೀಕರ್ ಖಾದರ್ ಅವರು ಮೂರು ಬಾಗಿಲಿಗೂ ಕ್ಯಾಮರಾ ಅಳವಡಿಸಿ ಯಾವ ಶಾಸಕ ಎಷ್ಟು ಬಾರಿ ಒಳಗಡೆ ಬಂದರು, ಹೊರ ನಡೆದರು ಅನ್ನುವ ಮಾಹಿತಿ ಸಂಗ್ರಹಿಸಲಿದ್ದಾರೆ.