Sunday, August 2, 2026
Sunday, August 2, 2026

Lok Sabha Election ಬೆಳಗಾವಿಯಲ್ಲಿ ಬೆಳಗುವವರು ಯಾರು?

Date:

Lok Sabha Election ಬೆಳಗಾವಿ:
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬೆಳಗಾವಿ ಸಂಸದರ ಗಾದಿ ಏರುತ್ತಾರ? ಎಂಬ ಪ್ರಶ್ನೆ ಕುತೂಹಲದ ಹಂತದಲ್ಲೇ ಇದೆ.

ಬೆಳಗಾವಿ ತವರಿನ ಹಲವು ಟಿಕೆಟ್ ಆಕಾಂಕ್ಷಿ ನಾಯಕರ ಅತೃಪ್ತಿಯ ಹೊಗೆಯ ನಡುವೆ ಶೆಟ್ಟರ್ ಪ್ರವೇಶವಾಗಿದೆ.

ಬೆಳಗಾವಿ ಬಿಜೆಪಿಗೆ ಮುಖ್ಯ ಆಧಾರಸ್ಥಂಭಗಳೆಂದರೆ ತಕ್ಷಣ ಡಾ.ಕೋರೆ ಮತ್ತು ಜಾರಕಿಹೊಳಿ ನೆನಪಿಗೆ ಬರುತ್ತಾರೆ.
ಮಿಕ್ಕವರು ಅಮುಖ್ಯರೆಂದಲ್ಲ ಗಾಳಿ ಬಂದಂತೆ ತೂರಿಕೊಳ್ಳುವ ಮನೀಷೆಯ ಮಂದಿಯೂ ಕೆಲವರಿದ್ದಾರೆ.
ಇದು ಎಲ್ಲೆಡೆಯ ಸಾಮಾನ್ಯ ಸಂಗತಿ.

ಈಗ ಕಾಂಗ್ರೆಸ್ ಕೂಡ ಚುರುಕಾಗಿ ಕೆಲಸಮಾಡಬೇಕಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಯವರ ಪುತ್ರ ಮೃಣಾಲ್ ರವೀಂದ್ರ ಹೆಬ್ಬಾಳ್ಕರ್ ಗೆ ಟಿಕೆಟ್ ನೀಡಿಯಾಗಿದೆ.

ಈಗ ಮೇಲ್ನೋಟಕ್ಕೆ
ಜಗದೀಶ್ ಶೆಟ್ಟರ್ ಎದುರಾಳಿಗೆ ವೈಟೇಜ್ ಹೇಗೆ ಕೊಡುವುದು? ಎಂಬ ಪ್ರಶ್ನೆ ಕಾಡುತ್ತದೆ.

ಬೆಳಗಾವಿ ಲೋಕಸಭಾ ಚುನಾವಣೆ.
ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ರವೀಂದ್ರ ಹೆಬ್ವಾಳ್ಕರ್

ಬೆಳಗಾವಿಯಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಲ್ಲಿ ವಕೀಲ ಮೋಹನ್ ಕಾತರಕಿ, ಡಾ ಗಿರೀಶ್ ಸೋನವಾಲ್ಕರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ್ ನಾವಲಗಟ್ಟಿ ಮತ್ತು ಯುವ ಕಾಂಗ್ರೆಸ್ ಮುಖಂಡ ಕಿರಣ ಸಾಧುನವರ್ ಸೇರಿದ್ದಾರೆ. ಚಿಕ್ಕೋಡಿಯಿಂದ ಲಕ್ಷ್ಮಣರಾವ್ ಚಿಂಗಳೆ ಮತ್ತು ಪ್ರಕಾಶ ಹುಕ್ಕೇರಿ ಪ್ರಬಲ ಆಕಾಂಕ್ಷಿಗಳಾಗಿದ್ದರು.

ಇವರೆಲ್ಲರ ಪೈಪೋಟಿಯ ನಡುವೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನಿಗೆ ಟಿಕೆಟ್ ದೊರಕಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಯುವ ಕಾಂಗ್ರೆಸ್ ನಾಯಕ ಎಂದು ಚಾಲ್ತಿಯಲ್ಲಿರುವ ಮೃಣಾಲ್ ಯುವಜನರ ಪ್ರತಿನಿಧಿ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಜನ ಯಾವ ಹಿನ್ನೆಲೆಯಲ್ಲಿ ತಮ್ಮ ಮತ ಚಲಾಯಿಸುತ್ತಾರೆ ಎಂಬುದು ನಿಗೂಢವಾಗಿದೆ.
ರಾಜಕೀಯದಲ್ಲಿ ಶೆಟ್ಟರ್ ಹಳೇಹುಲಿ.
ಆದರೆ ಆಖಾಡಕ್ಕೆ ಹೊಸಬರು. ಜಾತಿ ಲೆಕ್ಕಾಚಾರ ಬಂದರೆ ಈರ್ವರೂ ಒಂದೇ ಬ್ಯಾಂಡ್ ನಲ್ಲಿದ್ದಾರೆ.
ಸಾಧನೆಗಳ ಪಟ್ಟಿ ಇಬ್ಬರದೂ ಬೆಳಗಾವಿ ಅಭಿವೃದ್ದಿಯಲ್ಲಿ ಪಾತ್ರ ಢಾಳಾಗಿ ಕಾಣದು.

ಮೃಣಾಲ್ ಅವರು ಕಾಂಗ್ರೆಸ್ ಗ್ಯಾರಂಟಿ, ತಾಯಿಯವರ ಸಚಿವಸ್ಥಾನದ ಸೇವೆ ಇವುಗಳ ಹಿನ್ನೆಲೆಯಲ್ಲಿ ವಿಶ್ವಾಸವಿರಿಸಿಕೊಂಡಿದ್ದಾರೆ.

Lok Sabha Election ಜಗದೀಶ್ ಶೆಟ್ಟರ್ ಅವರ ಗೆಲುವಿಗೆ
ಇಲ್ಲಿ ರಮೇಶ್ ಜಾರಕಿ‌ಹೊಳಿ ,ಪ್ರಭಾಕರ್ ಕೋರೆ ಅವರ ಪುಶ್ ಹೇಗಿದೆ ಎಂದು
ನೋಡಬೇಕಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ₹ 6.400 ಕೋಟಿ ವೆಚ್ಚದ ಶಿವಮೊಗ್ಗ- ತುಮಕೂರು ಚತುಷ್ಪಥ ರಸ್ತೆ ಮುಂದಿನ ಮಾರ್ಚ್ ಗೆ ಸಿದ್ಧ- ಬಿ.ವೈ.ರಾಘವೇಂದ್ರ

B.Y. Raghavendra ಮಲೆನಾಡು ಹಾಗೂ ರಾಜಧಾನಿ ಬೆಂಗಳೂರು ನಡುವಿನ ಸಂಪರ್ಕವನ್ನು ಕ್ರಾಂತಿಕಾರಕವಾಗಿ...

S. N. Channabasappa ಬಡಾವಣೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ನಮ್ಮ ಮುಖ್ಯ ಕರ್ತವ್ಯ- ಎಸ್.ಎನ್.ಚನ್ನಬಸಪ್ಪ

S. N. Channabasappa ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ...

Rotary Club of Shivamogga ಮಕ್ಕಳಲ್ಲಿ ರೋಟರಿ ಸಂಸ್ಥೆ ನಾಯಕತ್ವ ಗುಣಗಳನ್ನ ಬೆಳೆಸುತ್ತದೆ- ಡಿ.ಕೆ.ನರಹರಿ

Rotary Club of Shivamogga ರೋಟರಿ ಸಂಸ್ಥೆಯು ಮಕ್ಕಳಿಗೆ ಶಾಲಾ ಹಂತದಲ್ಲಿಯೇ...

B.Y. Raghavendra ಹವಾಮಾನ ಆಧಾರಿತ ಬೆಳೆವಿಮೆ: ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ವಿಸ್ತರಿಸಿ- ಸಂಸದ ಬಿ.ವೈ‌.ರಾಘವೇಂದ್ರ

B.Y. Raghavendra ಮುಂಗಾರು ಹಂಗಾಮಿನಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಶೇ.34 ರಷ್ಟು ಮಳೆ...