Tuesday, March 31, 2026
Tuesday, March 31, 2026
Home Blog Page 586

Sahana Chethan Sahachetana ಆಗಸ್ಟ್ 30 ರಿಂದ ಸಹಚೇತನ ನಾಟ್ಯಾಲಯದಿಂದ 13 ನೇ ನಾಟ್ಯಾರಾಧನ

0

Sahana Chethan Sahachetana ಭಾರತದ ವೈವಿಧ್ಯಮಯ ನೃತ್ಯ ಶೈಲಿಗಳನ್ನು ಒಂದೇ ವೇದಿಕೆಯಲ್ಲಿ ನೋಡುವ ಅವಕಾಶವನ್ನು ಸಹಚೇತನ ನಾಟ್ಯಾಲಯ ನಗರದ ನಾಗರಿಕೆ ಒದಗಿಸಿದೆ.

ನಾಟ್ಯಾರಾಧನವನ್ನು 13 ನೇ ವರ್ಷ ಏರ್ಪಡಿಸಿದೆ. ಆ.30,32 ಹಾಗೂ ಸೆಪ್ಟೆಂಬರ್ 01 ರಂದು ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ಪ್ರತೀ ದಿನ ಸಂಜೆ 6 ರಿಂದ ಜರುಗಲಿದೆ ಎಂದು ನಾಟ್ಯಾಲಯದ ನೃತ್ಯಗುರು ಸಹನಾ ಚೇತನ್ ತಿಳಿಸಿದರು.

ಪ್ರೆಸ್ ಟ್ರಸ್ಟಿನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಆಗಸ್ಟ್ 30 ರ ಶುಕ್ರವಾರ ನಾಟ್ಯಾಲಯದ ಎಲ್ಲಾ 175 ಮಕ್ಕಳು ರುದ್ರಾಭಿಸಾರ – ನಟರಾಜನವಿಶೇಷ ಕೀರ್ತನೆಗಳ ಸರಮಾಲೆಯನ್ನು ಪ್ರಸ್ತುತಪಡಿಸಲಿದ್ದಾರೆ. ಮೂರು ವರ್ಷದಿಂದ ನಲವತ್ತು ವಯಸ್ಸಿನ ವಿದ್ಯಾರ್ಥಿಗಳು ಇದರಲ್ಲಿ ಭಗವಹಿಸುವರು ಎಂದರು.

Sahana Chethan Sahachetana ಆಗಸ್ಟ್ 31ರ ಶನಿವಾರ ನೃತ್ಯಗುರು ಸಹನಾ ಚೇತನ್ ಲಲಿತಾರ್ಣವ – ಆದಿಶಂಕರಾಚಾರ್ಯರು ರಚಿಸಿರುವ ಲಲಿತಾ ಪಂಚಕಮ್ ಜೊತೆಗೆ ಕಾಮಾಕ್ಷಿ ಸುಪ್ರಭಾತಮ್ ಹಾಗೂ ದೇವಿ ಲಲಿತೆಯ ಕೀರ್ತನೆಗಳನ್ನು ತಮ್ಮ ಏಕವ್ಯಕ್ತಿ ನೃತ್ಯರೂಪಕದಲ್ಲಿ ಪ್ರಸ್ತುತ ಪಡಿಸಲಿದ್ದಾರೆ. ತದನಂತರ ನಾಟ್ಯಾಲಯದ ಹಿರಿಯ ವಿದ್ಯಾರ್ಥಿಗಳು ಹರಿದಾಸಕೂಟ ನೃತ್ಯರೂಪಕವನ್ನು ಪ್ರಸ್ತುತಪಡಿಸುವರು ಎಂದರು.
ಸೆಪ್ಟೆಂಬರ್ 1 ರ ಭಾನುವಾರ ಅಂತರಾಷ್ಟ್ರೀಯ ಖ್ಯಾತನಾಮರಾದ 2 ತಂಡಗಳು ಶಿವಮೊಗ್ಗೆಗೆ ಆಗಮಿಸಲಿವೆ.

ದೇಶವಿದೇಶಗಳಲ್ಲಿ, ಯೂಟ್ಯೂಬ್‌ನಲ್ಲಿ ಹೆಚ್ಚಿನ ವೀಕ್ಷಣೆ ಹಾಗೂ ಹಿಂಬಾಲಕರನ್ನು ಹೊಂದಿರುವ ಚೆನ್ನೈನ ಶ್ರೀದೇವಿ ನೃತ್ಯಾಲಯ ಭರತನಾಟ್ಯವನ್ನು ವಿಭಿನ್ನ ರೀತಿಯಲ್ಲಿ ನರ್ತಿಸಲಿದ್ದಾರೆ. ಮತ್ತೊಂದು ತಂಡವೆಂದರೆ, ಮಹಾರಾಷ್ಟ್ರದ ಪುರಸ್ಕಾರ್ ಡಾನ್ಸ್ ಅಕಾಡೆಮಿ ಲಾವಣಿ, ಕೋಳಿ ನೃತ್ಯ, ಗೋಂಡಾಲ್, ಗಾವಾಲನ್ ಇತ್ಯಾದಿ ನೃತ್ಯಗಳನ್ನು ಪ್ರದರ್ಶಿಸಲಿದ್ದಾರೆ ಎಂದರು.

Kuvempu University ಕುವೆಂಪು ವಿವಿ ವಿದ್ಯಾರ್ಥಿಗಳ ಜೊತೆ ಚೆಲ್ಲಾಟವಾಡುತ್ತಿದೆ- ಶಾಸಕ ಡಿ.ಎಸ್.ಅರುಣ್

0

Kuvempu University ಕುವೆಂಪು ವಿಶ್ವವಿದ್ಯಾಲಯ ಮಕ್ಕಳ ಜೊತೆ ಚೆಲ್ಲಾಟವಾಡುತ್ತಿದೆ. ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುವೆಂಪು ವಿ.ವಿ ಅವ್ಯವಸ್ಥೆಗಳ ಆಗರವಾಗಿದೆ. ಎ.11ರಂದು ಪಿಯು ಫಲಿತಾಂಶ ಬಂದಿದ್ದರೂ ಕೂಡ ಪದವಿ ತರಗತಿಗಳಿಗೆ ಇನ್ನೂ ಪ್ರವೇಶಾತಿ ಆರಂಭವಾಗಿಲ್ಲ. 4 ತಿಂಗಳು ಕಳೆದು ಹೋಗಿವೆ. ಕುವೆಂಪು ವಿವಿ ವ್ಯಾಪ್ತಿಯಲ್ಲಿ ಸುಮಾರು 84 ಕಾಲೇಜುಗಳು ಬರುತ್ತವೆ. ಈ ಎಲ್ಲಾ ಕಾಲೇಜುಗಳಲ್ಲಿಯೂ ಇಷ್ಟು ಹೊತ್ತಿಗೆ ಪ್ರವೇಶ ಆರಂಭವಾಗಿ ಪಾಠಗಳು ಆರಂಭವಾಗಬೇಕಿತ್ತು. ಆದರೆ ಇದುವರೆಗೂ ಅಡ್ಡಿಷನ್ ಆಗಿಲ್ಲ ಎಂದು ದೂರಿದರು.

Kuvempu University ಪರೀಕ್ಷೆ ಮೌಲ್ಯ ಮಾಪನ ಮಾಪನ ಮಾಡಿದವರಿಗೆ ಹಣವನ್ನೇ ನೀಡಿಲ್ಲ, ಅತಿಥಿ ಉಪನ್ಯಾಸಕರನ್ನು ಕಡೆಗಾಣಿಸಲಾಗುತ್ತಿದೆ. ರಾಜ್ಯದಲ್ಲಿ ಕುವೆಂಪು ವಿವಿ ಕೊನೆಯ ಸ್ಥಾನದಲ್ಲಿದೆ ಎಂದ ಅವರು, ಸ್ನಾತಕೋತ್ತರ ಕಾಲೇಜುಗಳು ಕೂಡ ಆರಂಭವಾಗಿಲ್ಲ. ಹೀಗಾದರೆ ಮಕ್ಕಳ ಗತಿಯೇನು, ಪೋಷಕರು ಆತಂಕಗೊಂಡಿದ್ದಾರೆ. ಕುವೆಂಪು ವಿವಿ ಮಕ್ಕಳ ಜೊತೆ ಚೆಲ್ಲಾಟವಾಡುತ್ತಿದೆ. ರಾಜ್ಯ ಸರ್ಕಾರ ಈ ಬಗ್ಗೆ ಕಣ್ಣು ಮುಚ್ಚಿಕೊಂಡು ಕುಳಿತಿದೆ. ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ದೂರಿದರು.

DC Shivamogga ಮೊಬೈಲ್ ಆ್ಯಪ್ ಮೂಲಕ ರೈತರು ತಮ್ಮ ಬೆಳೆ ಸಮೀಕ್ಷೆಗೆ ಅಪ್ ಲೋಡ್ ಮಾಡಲು ಅವಕಾಶ

0

DC Shivamogga ರೈತರೇ ತಮ್ಮ ಜಮೀನುಗಳಲ್ಲಿ ಮೊಬೈಲ್ ಆ್ಯಪ್ ಮೂಲಕ ಸರ್ವೇ ನಂಬರ್‌ವಾರು/ಹಿಸ್ಸಾವಾರು ಬೆಳೆ ವಿವರದ ಮಾಹಿತಿಯನ್ನು ಛಾಯಾಚಿತ್ರ ಸಹಿತ ‘ರೈತರ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ 2024-25’ ರಲ್ಲಿ ಅಪ್‌ಲೋಡ್ ಮಾಡಲು ಅವಕಾಶವನ್ನು ಸರ್ಕಾರ ಕಲ್ಪಿಸಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಸೋಮವಾರ ಬೆಳೆ ಸಮೀಕ್ಷೆ 2024-25 ಮುಂಗಾರು ಕುರಿತು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ರಾಜ್ಯದಲ್ಲಿ ಸರ್ವೇ ನಂಬರ್, ನಂಬರ್‌ವಾರು ಬೆಳೆಗಳ ನಿಖರ ಮಾಹಿತಿಯ ಮೊಬೈಲ್ ತಂತ್ರಾಂಶ ಬಳಕೆಯಿಂದ ಬೆಳೆ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಮೊಬೈಲ್ ತಂತ್ರಾಂಶದ ಜ್ಞಾನವುಳ್ಳ ಸ್ಥಳೀಯ ಯುವಕರು(ಖಾಸಗಿ ನಿವಾಸಿಗಳು) ಬೆಳೆ ಸಮೀಕ್ಷೆ ನಡೆಸುತ್ತಿದ್ದಾರೆ.
ತಾಲ್ಲೂಕು ಆಡಳಿತ ನೇಮಿಸಿರುವ ತರಬೇತಿ ಹೊಂದಿದ ಖಾಸಗಿ ನಿವಾಸಿಗಳು, ಕೃಷಿ, ತೋಟಗಾರಿಕೆ, ರೇಷ್ಮೆ, ಕಂದಾಯ ಹಾಊ ಬೃಹತ್ ನೀರಾವರಿ ಇಲಾಖೆಗಳ ಸಿಬ್ಬಂದಿಗಳು ಬೆಳೆ ವಿವರ ದಾಖಲಿಸಲು ರೈತರಿಗೆ ಮಾಹಿತಿ ನೀಡುವರು.

ಬೆಳೆ ವಿವರ ದಾಕಲಿಸದ ರಯತರ ತಾಕುಗಳನ್ನು ನಂತರ ತಾಲ್ಲೂಕು ಆಡಳಿತ ನೇಮಿಸಿರುವ ತರಬೇತಿ ಹೊಂದಿದ ಖಾಸಗಿ ನಿವಾಸಿಗಳಿಂದ ಆ.15 ರಿಂದ ಸೆ.30 ರವರೆಗೆ ಸಮೀಕ್ಷೆ ಮಾಡಿಸಲಾಗುವುದು.
ಹೀಗೆ ಸಂಗ್ರಹಿಸುವ ಬೆಳೆ ವಿವರಗಳು ಪಹಣಿಯಲ್ಲಿ ದಾಖಲಾಗುವುದರ ಜೊತೆಗೆ ಸರ್ಕಾರದ ಪ್ರಮುಖ ಯೋಜನೆಗಳಾದ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಫಲಾನುಭವಿಗಳನ್ನು ಗುರುತಿಸಲು ಬೆಳೆ ವಿಮಾ ಯೋಜನೆಯಡಿ ಬೆಳೆ ವಿವರ ಪರಿಶೀಲಿಸಲು, ಪ್ರಕೃತಿ ವಿಕೋಪದಡಿ ಪ್ರವಾಹ ಮತ್ತು ಬರಗಾಲ ಸಂದರ್ಭದಲ್ಲಿ ಪರಿಹಾರ ವಿತರಿಸಲು, ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಫಲಾನುಭವಿ ಆಧಾರಿತ ಯೋಜನೆಗಳಲ್ಲಿ ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳಲು ಮತ್ತು ಸಾಂಖ್ಯಿಕ ಇಲಾಖೆ, ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಬೆಳೆ ವಿಸ್ತೀರ್ಣ ವರದಿ ಮಾಡಲು ಬೆಳೆ ಸಮೀಕ್ಷೆ ವಿವರಗಳನ್ನು ಬಳಸಲಾಗುವುದು.

DC Shivamogga ಕೃಷಿ, ತೋಟಗಾರಿಕೆ, ರೇಷ್ಮೆ ಮತ್ತು ಕಂದಾಯ ಇಲಾಖಾ ಅಧಿಕಾರಿಗಳು ಬೆಳೆ ಸಮೀಕ್ಷೆಯ ಮೇಲ್ವಿಚಾರಕರಾಗಿ ರೈತರು ಅಥವಾ ಖಾಸಗಿ ನಿವಾಸಿಗಳು ದಾಖಲಿಸಿದ ಬೆಳೆ ವಿವರಗಳನ್ನು ಪರಿಶೀಲಿಸಿ ದೃಢೀಕರಿಸುವರು. ಬೆಳೆ ಸಮೀಕ್ಷೆಯು ಕೃಷಿ ಇಲಾಖೆಯ ಮುಖಾಂತರ ಜಿಲ್ಲಾಧಿಕಾರಿಗಳ ನೇರ ಉಸ್ತುವಾರಿಯಲ್ಲಿ ಜರುಗುವುದು ಎಂದು ತಿಳಿಸಿದರು.

ಆಕ್ಷೇಪಣೆ ಸಲ್ಲಿಸಬಹುದು : ಬೆಳೆ ಸಮೀಕ್ಷೆ ಕುರಿತು ಆಕ್ಷೇಪಣೆಗಳು ಇದ್ದರೆ ರೈತರು ‘beledarshak’ ಆ್ಯಪ್ ಮೂಲಕ ಅಥವಾ ಖುದ್ದಾಗಿ ಕೃಷಿ, ತೋಟಗಾರಿಕೆ ಅಥವಾ ತಾಲ್ಲೂಕು ತಹಶೀಲ್ದಾರ್ ಇವರ ಕಚೇರಿಗೆ ಆಕ್ಷೇಪಣೆ ಅರ್ಜಿ ಸಲ್ಲಿಸಬಹುದು. ರೈತರು ಆಕ್ಷೇಪಣೆಗಳನ್ನು ಸಲ್ಲಿಸಲು ಅಕ್ಟೋಬರ್ 15 ಕೊನೆಯ ದಿನವಾಗಿರುತ್ತದೆ.
ಮರುಸಮೀಕ್ಷೆ ಆಪ್ ಕೂಡ ಬಿಡುಗಡೆ ಆಗಲಿದ್ದು ಸೂಪರ್‌ವೈಸರ್ ತಿರಸ್ಕರಿಸಿದ ಬೆಳೆ ವಿವರಗಳನ್ನು PRs ಆ್ಯಪ್ ನಲ್ಲಿ ತ್ವರಿತವಾಗಿ ಮರುಸಮೀಕ್ಷೆ ನಡೆಸಲಾಗುವುದು. ಬೆಳ ಸಮೀಕ್ಷೆಗೆ ಸಂಬಂಧಿಸಿದ ಮಾಹಿತಿಗಾಗಿ ರೈತರು ಸಹಾಯವಾಣಿ ಸಂಖ್ಯೆ 18004253553 ಗೆ ಕರೆ ಮಾಡಬಹುದು ಅಥವಾ ಹೆಚ್ಚಿನ ವಿವರಗಳಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ, ಕೃಷಿ, ಕಂದಾಯ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖಾ ಅಧಿಕಾರಿಗಳನ್ನು ಸಂಪರ್ಕಿಸಬಹುದೆಂದು ತಿಳಿಸಿದರು.

ಸಭೆಯಲ್ಲಿ ಐಎಎಸ್ ಪ್ರೊಬೇಷನರಿ ಅಧಿಕಾರಿ ದೃಷ್ಟಿ ಜೈಸ್ವಾಲ್, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಕೃಷಿ ಜಂಟಿ ನಿರ್ದೇಶಕಿ ಪೂರ್ಣಿಮಾ, ಇತರೆ ಅಧಿಕಾರಿಗಳು ಹಾಜರಿದ್ದರು.

Department of Youth Empowerment and Sports ತರಬೇತಿ ದಾರರಿಗೆ ನೀಡಲಾಗುವ ಕ್ರೀಡಾರತ್ನ ಪ್ರಶಸ್ತಿಗೆ ಅರ್ಜಿ ಆಹ್ವಾನ

0

Department of Youth Empowerment and Sports ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2023ನೇ ಸಾಲಿನಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಕ್ರೀಡಾಪಟುಗಳು ಅಸಾಧಾರಣ ಪ್ರತಿಭೆಯನ್ನು ತೋರುವಲ್ಲಿ ತರಬೇತುಗೊಳಿಸಿರುವ ರಾಜ್ಯದ ತರಬೇತುದಾರರುಗಳಿಗೆ ನೀಡುವ ಜೀವಮಾನ ಸಾಧನೆ ಪ್ರಶಸ್ತಿ ಹಾಗೂ ಗ್ರಾಮೀಣ ಪ್ರತಿಭೆಗಳಿಗೆ ನೀಡುವ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗಾಗಿ ಆಸಕ್ತರಿಂದ ಆನ್‌ಲೈನ್ ಅರ್ಜಿ ಅಹ್ವಾನಿಸಿದೆ.

Department of Youth Empowerment and Sports ಆಸಕ್ತರು ಸೇವಾಸಿಂದು http://sevasindhuservices.karnataka.gov.in ಪೋರ್ಟಲ್ ಮೂಲಕ ಸೆ. 20 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಕ್ರೀಡಾಂಗಣ ಇವರನ್ನು ಸಂಪರ್ಕಿಸಬಹುದು.
ಮೊಬೈಲ್ ಸಂಖ್ಯೆ: 9480841222

Nagabhushana shivacharya swamiji ಅವಿಭಕ್ತ ಕುಟುಂಬಕ್ಕಾಗಿ ಶ್ರಮಿಸಿದ ದಾಂಪತ್ಯ ಜೀವನ ಎಲ್ಲರಿಗೂ ಮಾದರಿ- ಶ್ರೀಗುರು ನಾಗಭೂಷಣ ಶಿವಾಚಾರ್ಯಶ್ರೀ

0

Nagabhushana shivacharya swamiji ದಾಂಪತ್ಯದಲ್ಲಿ ಹೊಂದಾಣಿಕೆಯಿಂದ ಜೀವನ ನಡೆಸುವುದು ಅತ್ಯಂತ ಅವಶ್ಯಕ. ಉತ್ತಮ ಹೊಂದಾಣಿಕೆಯಿಂದ ಸುದೀರ್ಘ ದಾಂಪತ್ಯ ಜೀವನ ಸಾಧ್ಯ ಎಂದು ಮಳಲಿ ಮಠದ ಶ್ರೀ ಗುರು ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ರಿಪ್ಪನ್ಪೇಟೆ ಸಮೀಪದ ದೂನ ಗ್ರಾಮದಲ್ಲಿ ಆಯೋಜಿಸಿದ್ದ ಚನ್ನವೀರಪ್ಪ ಗೌಡ್ರು ಹಾಗೂ ವಿಶಾಲಕ್ಷಮ್ಮ ದಂಪತಿಯ 60ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸ್ವಾರ್ಥವೇ ಎಲ್ಲೆಡೆ ಕಾಣುತ್ತೇವೆ. ಅವಿಭಕ್ತ ಕುಟುಂಬಕ್ಕಾಗಿ ಶ್ರಮಿಸಿ ಹೊಂದಾಣಿಕೆಯ ದಾಂಪತ್ಯ ಜೀವನ ನಡೆಸುವುದು ಎಲ್ಲರಿಗೂ ಮಾದರಿ ಎಂದು ತಿಳಿಸಿದರು.
ಸಮಾಜದ ಪ್ರತಿಯೊಬ್ಬರು ಉತ್ತಮ ಜೀವನಶೈಲಿ ರೂಪಿಸಿಕೊಳ್ಳಲು ಗುರುಹಿರಿಯರ ಮಾರ್ಗದರ್ಶನ ಪಡೆಯಬೇಕು. ಒಳ್ಳೆಯ ಆಲೋಚನೆಗಳು ಹಾಗು ಮತ್ತೊಬ್ಬರಿಕೆ ಉಪಕಾರ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಮಕ್ಕಳಿಗೆ ಮನೆಗಳಲ್ಲಿ ಪಾಲಕರು ಸಂಸ್ಕಾರ ಮನೋಭಾವ ಬೆಳೆಸಬೇಕು ಎಂದು ಸಲಹೆ ನೀಡಿದರು.
Nagabhushana shivacharya swamiji ಪ್ರಗತಿಪರ ರೈತ ಚನ್ನವೀರಪ್ಪ ಗೌಡ್ರು, ಸಹೋದರರಾದ ಶಿವನಂದಪ್ಪ ಗೌಡ್ರು ಮತ್ತು ಗಂಗಾಧರಪ್ಪ ಗೌಡ್ರು ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿ ಕಷ್ಟಪಟ್ಟು ಬೆಳೆದಿದ್ದಾರೆ ಎಂದರು.
ವಕೀಲ ದಿನೇಶ್ ಮಣಿಕೆರೆ, ಗಂಗಾಧರಪ್ಪ ಕಳಸೆ, ಮಧುಸೂದನ್ ಡಿ.ಯು, ಸುಗಂಧರಾಜ ಇತರರು ಮಾತನಾಡಿದರು. ಅಶ್ವಿನಿ ವಿನಾಯಕ್ ಕಾರ್ಯಕ್ರಮದ ನಿರೂಪಣೆ ಮಾಡಿದರು. ಯುಕ್ತ ಸ್ವಾಗತಿಸಿದರು. ರೂಪಾ ವಂದನಾರ್ಪಣೆ ಮಾಡಿದರು. ಉಮೇಶ್, ಭಾಗ್ಯಾ, ಯಶ್ವಿನ್ ಇತರರು ಹಾಜರಿದ್ದರು.

Kim Star Udupi ಸಮಾಜ ಸೇವಕ ಶಿವಮೊಗ್ಗದ ಜಿ ವಿಜಯಕುಮಾರ್ ಗೆ ರಾಜರತ್ನ ಪ್ರಶಸ್ತಿ ಪ್ರದಾನ

0

Kim Star Udupi ಕಿಮ್‌ಸ್ಟಾರ್ ಉಡುಪಿ ವತಿಯಿಂದ ಬೆಂಗಳೂರು ವಿಶ್ವವಿದ್ಯಾಲಯದ ಪ್ರೊ. ಕೆ.ವೆಂಕಟಗಿರಿಗೌಡ ಸ್ಮಾರಕ ಸಭಾಂಗಣದಲ್ಲಿ ಬೆಂಗಳೂರು ಚಿತ್ರೋತ್ಸವ ಕಾರ್ಯಕ್ರಮದಲ್ಲಿ ಶಿವಮೊಗ್ಗದ ರೋಟರಿ ಜಿ.ವಿಜಯಕುಮಾರ್ ಅವರಿಗೆ “ಡಾ. ಪುನೀತ್ ರಾಜ್‌ಕುಮಾರ್ ರಾಜರತ್ನ ಸೇವಾ ಪ್ರಶಸ್ತಿ” ಪ್ರದಾನ ಮಾಡಲಾಯಿತು.
ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಅವರು ದಶಕಗಳಿಂದ ಸಮಾಜಮುಖಿ ಹಾಗೂ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಬಡವರಿಗೆ ಆರ್ಥಿಕ ಸಹಾಯ, ಕುಡಿಯುವ ನೀರಿನ ವ್ಯವಸ್ಥೆ, ಶಿಕ್ಷಣ, ಆರೋಗ್ಯ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
Kim Star Udupi ಸೈಕ್ಲಿಂಗ್‌ನಲ್ಲಿ ಗಿನ್ನೆಸ್ ಲಿಮ್ಕಾ ದಾಖಲೆ ಮಾಡಿದ್ದಾರೆ. 47 ಬಾರಿ ರಕ್ತದಾನ ಮಾಡಿದ್ದಾರೆ. ರೋಟರಿ ವಿಜಯ್‌ಕುಮಾರ್ ಅವರ ದಶಕಗಳ ಸಾಮಾಜಿಕ ಸೇವೆಯನ್ನು ಗುರುತಿಸಿ ಡಾ. ಪುನೀತ್‌ರಾಜ್ ಕುಮಾರ್ ರಾಜರತ್ನ ಸೇವಾ ಪ್ರಶಸ್ತಿ ನೀಡಲಾಯಿತು. ಪುನೀತ್‌ರಾಜ್ ಪುತ್ಥಳಿ, ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು.
ಖ್ಯಾತ ಜನಪದ ಗಾಯಕ ಗುರುರಾಜ್ ಹೊಸಕೋಟಿ, ಚಲನಚಿತ್ರ ನಿರ್ದೇಶಕ ಲೋಹಿತ್ ರಾಣ, ಚಿತ್ರನಟಿ ರಕ್ಷಾ, ಕಿಮ್‌ಸ್ಟಾರ್ ಉಡುಪಿ ಸಂಸ್ಥೆ ಅಧ್ಯಕ್ಷ ಕೆ.ಜಯಶೀಲನ್, ಉಡುಪಿ ಕುಕ್ಕೇಹಳ್ಳಿಯ ಆದಿಶಕ್ತಿ ಮೂಕಾಂಬಿಕಾ ಶ್ರೀ ಕಾಗಜ್ಜ ದೇವಸ್ಥಾನದ ಧರ್ಮದರ್ಶಿ ಡಾ. ಕೃಷ್ಣ ಕುಲಾಲ್, ವಿದುಷಿ ಉಮಾ ದಿಲೀಪ್, ವಿದ್ಯಾ ಮಂಜುನಾಥ್, ಬಿಂದು ವಿಜಯಕುಮಾರ್ ಇತರರು ಉಪಸ್ಥಿತರಿದ್ದರು.
ವಿಜಯಕುಮಾರ್ ಅವರಿಗೆ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಪದಾಧಿಕಾರಿಗಳು, ಶಿವಗಂಗಾ ಯೋಗಕೇಂದ್ರ ಯೋಗಾಚಾರ್ಯ ಸಿ.ವಿ.ರುದ್ರಾರಾಧ್ಯ, ಎಸ್.ಎಸ್.ಜ್ಯೋತಿಪ್ರಕಾಶ್, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.

Delhi World School Shivamogga ಡೆಲ್ಲಿ ವರ್ಲ್ಡ್ ಸ್ಕೂಲ್‌ ಆಗಸ್ಟ್ 30 & 31ಡೆಲ್ಲಿ ವರ್ಡ್ ಸ್ಕೂಲ್ ನಲ್ಲಿ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ

0

Delhi World School Shivamogga ಆಗಸ್ಟ್ 30 ಹಾಗೂ 31 ರಂದು ನಗರದ ಸಾಗರ ರಸ್ತೆಯ ಮಲ್ಲಿಗೇನಹಳ್ಳಿಯಲ್ಲಿರುವ ಡೆಲ್ಲಿ ವರ್ಲ್ಡ್ ಸ್ಕೂಲ್‌ನಲ್ಲಿ ಅಂತರಾಷ್ಟ್ರೀಯ ಮಕ್ಕಳ ಚಲನ ಚಿತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ಪ್ರೆಸ್ ಟ್ರಸ್ಟ್ ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದ ಶಾಲೆ ಪ್ರಾಚಾರ್ಯೆ ದಿವ್ಯಾ ಶೆಟ್ಟಿ,
ಮಕ್ಕಳ‌ಮೇಲೆ ಸಿನಿಮಾಗಳು ಬಹಳ ಪ್ರಭಾವ ಬೀರುತ್ತವೆ. ಅವುಗಳಲ್ಲಿನ‌ ಒಳ್ಳೆಯ ಸಂದೇಶದಿಂದ ಮಕ್ಕಳು ಚಿಂತನೆ ಬೆಳೆಸಿಕೊಳ್ಳುವಂತಾಗಬೇಕು, ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳಬೇಕು, ಸತ್ಪ್ರಜೆಗಳಾಗಬೇಕೆಂಬ ಉದ್ದೇಶ ಇದರದ್ದಾಗಿದೆ ಎಂದರು.
ಸ್ಕೂಲ್ ಸಿನಿಮಾದ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾದ ಈ ಚಲನ ಚಿತ್ರೋತ್ಸವ 70ಕ್ಕೂ ಹೆಚ್ಚು ಸಣ್ಣ ಚಲನ ಚಿತ್ರವನ್ನು ಒಳಗೊಂಡಿದೆ. 15ಕ್ಕೂ ಅಧಿಕ ಭಾಷೆಯ ಚಿತ್ರವನ್ನೊಳಗೊಂಡು 20ಕ್ಕೂ ಹೆಚ್ಚು ರಾಷ್ಟ್ರಗಳ ಆಯ್ದ ಅತ್ಯುತ್ತಮ ಚಲನ ಚಿತ್ರವನ್ನು ನಗರದ ಎಲ್ಲ ಶಾಲೆಯ ವಿದ್ಯಾರ್ಥಿಗಳು ವೀಕ್ಷಿಸ ಬಹುದಾಗಿದೆ ಎಂದರು.
Delhi World School Shivamogga ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಮಕ್ಕಳ ಚಲನ ಚಿತ್ರವನ್ನು ವೀಕ್ಷಿಸುವ ಅವಕಾಶ ಬಹಳ ಕಡಿಮೆಯಿದ್ದು ಈ ನಿಟ್ಟಿನಲ್ಲಿ ಇಂತಹ ಮಕ್ಕಳ ಚಲನ ಚಿತ್ರೋತ್ಸವಗಳು ಮಕ್ಕಳಿಗೆ ಉತ್ತಮ ಸಂದೇಶವನ್ನು ನೀಡಲು ಸಹಕಾರಿಯಾಗಿದೆ ಎಂದರು.
ಮಕ್ಕಳಲ್ಲಿ ಸೃಜನ ಶೀಲತೆ, ವಿವಿಧತೆಯ ಮಹತ್ವ, ಸಾಮಾಜಿಕ ಸಮಸ್ಯೆ ಹಾಗೂ ಅದರ ಮೂಲ, ಅದನ್ನು ನಿರ್ಮೂಲನೆ ಮಾಡುವ ಬಗೆ, ಸಾಮಾಜಿಕ ಕಳಕಳಿಯನ್ನು ಹೆಚ್ಚಿಸುವ, ವಿವಿಧ ಭಾಷೆ, ಧರ್ಮ ಸಂಸ್ಕೃತಿಯನ್ನು ಗೌರವಿಸುವ, ಮನೋಭಾವನೆಯನ್ನು ಬೆಳೆಸುವ ನಿಟ್ಟಿನಲ್ಲಿ ಇಂತಹ ಚಲನ ಚಿತ್ರೋತ್ಸವ ವಿದ್ಯಾರ್ಥಿಗಳ ವಿಕಸನಕ್ಕೆ ಸಹಕಾರಿಯಾಗಲಿದೆ ಎಂದರು.
ಚಿತ್ರೋತ್ಸವದಲ್ಲಿ ಕನ್ನಡ ಭಾಷೆಯ ಚಿತ್ರ ಸಹ ಪ್ರದರ್ಶಿತವಾಗಲಿದೆ. ಪ್ರತಿ ಸಿನಿಮಾ ಒಂದು ಗಂಟೆಯ ಅವಧಿಯದ್ದಾಗಿದೆ. ಬೆಳಗ್ಗೆ 10 ಗಂಟೆಗೆ ಚಿತ್ರ ಪ್ರದರ್ಶನ ಆರಂಭವಾಗುವುದು ಎಂದರು.

Rotary Shivamogga ಮಕ್ಕಳಿಗೆ ವೃತ್ತಿಜೀವನಕ್ಕೆ‌‌ ಅವಶ್ಯವಿರುವ ಕೌಶಲ್ಯಗಳನ್ನ ಹಂತಹಂತವಾಗಿ ಕಲಿಸಿ-ಎಚ್.ಮಾಣೇಶ್ವರ್ ಶೇಠ್

0

Rotary Shivamogga ಮಕ್ಕಳಿಗೆ ವಿದ್ಯಾಭ್ಯಾಸದ ಜತೆ ಸಂಸ್ಕಾರ ಹಾಗೂ ಉತ್ತಮ ಜೀವನ ರೂಪಿಸಿಕೊಳ್ಳಲು ಅವಶ್ಯವಿರುವ ಮೌಲ್ಯಗಳನ್ನು ಕಲಿಸಬೇಕು ಎಂದು ಗಾಯತ್ರಿ ವಿದ್ಯಾಲಯದ ಅಧ್ಯಕ್ಷ ಎಚ್.ಮಾಣೇಶ್ವರ್ ಶೇಠ್ ಹೇಳಿದರು.

ಶಿವಮೊಗ್ಗ ನಗರದ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯಿಂದ ಹಮ್ಮಿಕೊಳ್ಳಲಾದ ಪ್ರತಿಭಾ ಪುರಸ್ಕಾರ ಹಾಗೂ ಇಂಟರ‍್ಯಾಕ್ಟ್ ಕ್ಲಬ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಿಗೆ ವೃತ್ತಿ ಜೀವನಕ್ಕೆ ಅವಶ್ಯವಿರುವ ಕೌಶಲ್ಯಗಳನ್ನು ಹಂತ ಹಂತವಾಗಿ ಕಲಿಸಬೇಕು. ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳಲ್ಲೂ ಮಕ್ಕಳು ಹೆಚ್ಚು ತೊಡಗಿಸಿಕೊಳ್ಳಬೇಕು. ಆಗ ಪರಿಪೂರ್ಣ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ರೋಟರಿ ಮಾಜಿ ಸಹಾಯಕ ಗವರ್ನರ್ ಚಂದ್ರಹಾಸ ಪಿ.ರಾಯ್ಕರ್ ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಅಭಿನಂದಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಅರುಣ್ ದೀಕ್ಷಿತ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸಿಕೊಳ್ಳುವ ದೃಷ್ಟಿಯಿಂದ ಇಂಟರ‍್ಯಾಕ್ಟ್ ಕ್ಲಬ್ ಸಹಕಾರಿಯಾಗುತ್ತದೆ. ಮನೆ ಹಾಗೂ ಶಾಲೆಯಲ್ಲಿ ಮಕ್ಕಳಿಗೆ ಅಗತ್ಯ ಮಾರ್ಗದರ್ಶನ ನೀಡುವ ಕೆಲಸ ಆಗಬೇಕು ಎಂದು ಹೇಳಿದರು.

ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಮಾತನಾಡಿ, ಇಂಟರ‍್ಯಾಕ್ಟ್ ಕ್ಲಬ್ ಮೂಲಕ ಮಕ್ಕಳಿಗೆ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸುವುದು ವಿಷಯ ಕುರಿತು ತರಬೇತಿ ಶಿಬಿರ ನಡೆಸಲಾಗುವುದು. ಉಚಿತ ಆರೋಗ್ಯ ತಪಾಸಣೆ ಹಾಗೂ ಪ್ರಬಂಧ ಸ್ಪರ್ಧೆ ವೈವಿಧ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

Rotary Shivamogga ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಶಶಿಕಾಂತ್ ನಾಡಿಗ್ ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯದ ಸದೃಢ ಪ್ರಜೆಗಳಾಗಬೇಕು. ಶಿಕ್ಷಣದ ಜತೆ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸೇವಾ ಕಾರ್ಯಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇಂಟರ‍್ಯಾಕ್ಟ್ ಕ್ಲಬ್ ಚೇರ್ಮನ್ ಶೇಷಗಿರಿ ಮಾತನಾಡಿ, ಇಂಟರ‍್ಯಾಕ್ಟ್ ನಲ್ಲಿ ಮಕ್ಕಳು ತೊಡಗಿಸಿಕೊಳ್ಳುವಿಕೆ ಕುರಿತು ವಿವರಿಸಿದರು. ನೂತನ ಇಂಟರ‍್ಯಾಕ್ಟ್ ಕ್ಲಬ್ ಅಧ್ಯಕ್ಷರಾಗಿ ಮನೀಶಾ, ಕಾರ್ಯದರ್ಶಿ ಧನುಷ್ ತಂಡದವರು ಅಧಿಕಾರ ವಹಿಸಿಕೊಂಡರು. ಗಾಯತ್ರಿ ವಿದ್ಯಾಲಯದ ಉಪಾಧ್ಯಕ್ಷ ಗೋಪಾಲ್ ಎನ್.ಶೇಠ್, ಕಾರ್ಯದರ್ಶಿ ಗಣಪತಿ ಶೇಠ್ ಉಪಸ್ಥಿತರಿದ್ದರು.

Shimoga Youth Empowerment and Sports Department ಏಕಲವ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ

0


Shimoga Youth Empowerment and Sports Department ಶಿವಮೊಗ್ಗ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಕ್ರೀಡಾ ಪಟುಗಳಿಗೆ ಏಕಲವ್ಯ ಪ್ರಶಸ್ತಿ ಮತ್ತು ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ ನೀಡಲು ಅರ್ಹ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನಿಸಿದೆ.
Shimoga Youth Empowerment and Sports Department ಆಸಕ್ತ ಕ್ರೀಡಾಪಟುಗಳು ನಿಗಧಿತ ನಮೂನೆ ಅರ್ಜಿಯನ್ನು ನಗರದ ನೆಹರೂ ಕ್ರೀಡಾಂಗಣದಲ್ಲಿರುವ ಇಲಾಖಾ ಕಚೇರಿಯಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಸೆ. 15 ರೊಳಗಾಗಿ ಸಲ್ಲಿಸುವಂತೆ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08182-223328ನ್ನು ಸಂಪರ್ಕಿಸಬಹುದಾಗಿದೆ.

Klive Special Article “ಕಾಡುವ ಹುಡುಗನ ಹಾಡು”ಪ್ರೇಮಿಯ ಪ್ರಾಮಾಣಿಕ ಕನವರಿಕೆಗಳು- ಸಂತೋಷ್ ಕುಮಾರ್”

0

Klive Special Article ಪುಸ್ತಕ ಪರಿಚಯ: ಕಾಡುವ ಹುಡುಗನ ಹಾಡು

“ಇದು ನಿಚ್ಚಂ ಪೊಸತು ಅರ್ಣವಂಬೋಲ್ ಅತಿಗಂಭೀರಂ ಕವಿತ್ವಂ” ಎಂಬುದು ಮಹಾಕವಿ ಪಂಪನ ಕಾವ್ಯೋಕ್ತಿ. ಪಂಪನು ಕಾವ್ಯವನ್ನು ಕುರಿತು ಈ ಮಾತು ಹೇಳಿದ್ದಾದರೂ,ವಿಶೇಷವಾಗಿ “ಪ್ರೇಮಕಾವ್ಯ”ಕ್ಕೇ ಈ ಮಾತನ್ನು ಅನ್ವಯಿಸಿದಾಗ ಆ ಮಾತಿನ ಸಾರ್ಥಕತೆ ಹೆಚ್ಚು ಎಂದು ನನಗನ್ನಿಸುತ್ತದೆ. ಏಕೆಂದರೆ ಪ್ರೇಮವೂ ಕೂಡ ಸಮುದ್ರದಂತೆ ಅತೀ ಗಂಭೀರವೂ,ನಿತ್ಯ ಹೊಸತನದಿಂದ ಕೂಡಿರುವುದು ಆಗಿದೆ.ಪ್ರೇಮಸಾಗರ, ಪ್ರೇಮಸಮುದ್ರ ಎಂದು ಮುಂತಾಗಿ ನಾವು ಆಗಾಗ ಬಳಸುತ್ತಲೇ ಇರುತ್ತೇವೆ.ಇಂತಹ ಸಮುದ್ರದಂತಹ ಪ್ರೇಮವನ್ನು, ಅವ್ಯಕ್ತವಾಗಿಯೂ, ಅಮೂರ್ತವಾಗಿಯೂ ಇರುವಂತಹ ಪ್ರೇಮವನ್ನು,ಇದನ್ನು ಹೀಗೆ ವ್ಯಕ್ತಪಡಿಸಬೇಕು ಎಂದು ಯಾರೂ ತಿಳಿಸಲಾರದಂತಹ, ಹೇಳಿಕೊಡಲಾಗದಂತಹ ಪ್ರೇಮವನ್ನು,ಅಕ್ಷರಗಳಲ್ಲಿ ಪದಪುಂಜಗಳಲ್ಲಿ ಕಟ್ಟಿಕೊಡುವುದು ಅತೀ ಕಷ್ಟದ ಕೆಲಸವೇ ಸರಿ. ಜೊತೆಗೆ ಪ್ರೇಮವನ್ನು ಕುರಿತೇ ಅಸಂಖ್ಯ ಕತೆ, ಕಾದಂಬರಿ,ಭಾವಗೀತೆಗಳು, ನಾಟಕಗಳು ಈಗಾಗಲೇ ನಮ್ಮ ಮುಂದಿರುವಾಗ ಅದೇ ವಿಷಯವನ್ನು ಕುರಿತು ಹೊಸದನ್ನು ಹೇಳುವುದು ಹೇಗೆ ಎಂಬುದು ಮತ್ತೊಂದು ಸವಾಲಿನ ಕೆಲಸ. ಏಕೆಂದರೆ ನಾನು ಮೊದಲೇ ಹೇಳಿದಂತೆ ಸಮುದ್ರದಂತೆ ನಿತ್ಯವೂ ಹೊಸತನದಿಂದ ಕೂಡಿರುವ ಪ್ರೇಮವನ್ನು ಹೊಸತಾಗಿ ಕಂಡರಿಸುವ ಈ ಸೃಜನಶೀಲ ಪ್ರಕ್ರಿಯೆಯೇ ಕ್ಲಿಷ್ಟಕರವಾದ್ದು. ಈ ಹಿನ್ನೆಲೆ ಇಟ್ಟುಕೊಂಡು ಕು.ಅಂಜುಮ್ ಅವರ ಹನಿಗವನಗಳನ್ನು ಅವಲೋಕಿಸಿದಾಗ ನನಗನ್ನಿಸಿದ ಮೊದಲ ಸಂಗತಿ,ಅವರು ತಾವೇನೋ ಹೊಸದನ್ನು ಹೇಳುವ ಭ್ರಮೆಗೆ ಬೀಳದೆ ಅಥವಾ ಇದುವರೆಗೂ ಯಾರೂ ಕಂಡರಿಸದ ಪ್ರೇಮದ ಭಿನ್ನ ಮುಖಗಳನ್ನು ಪರಿಚಯಿಸುತ್ತಿದ್ದೇನೆಂಬ ಹಠಕ್ಕೆ ಬೀಳದೆ, ತಮಗೆ ಅನ್ನಿಸಿದ ಮನೋಸಹಜ ಭಾವನೆಗಳನ್ನು ತಮ್ಮ ಓದಿನ ಅಥವಾ ಅನುಭವದ ವ್ಯಾಪ್ತಿಯಲ್ಲಿ ಎರಕಹೊಯ್ದು ನಮ್ಮ ಮುಂದೆ ಇಟ್ಟಿದ್ದಾರೆ.ಇಲ್ಲಿರುವ ಪದ್ಯಗಳು ಒಮ್ಮೊಮ್ಮೆ ಭಾವಗೀತೆಗಳಂತೆ,ಒಮ್ಮೊಮ್ಮೆ ಗಜಲ್ ಗಳಂತೆ,ಮತ್ತೊಮ್ಮೆ ಹನಿಗವಿತೆಯಂತೆ ಮನಸ್ಸಿಗೆ ಭಾಸವಾಗಿ ಕಡೆಗೆ ಕಾವ್ಯದ ಯಾವ ಬಂಧವೋ ಅನ್ನುವ ವಿಷಯವನ್ನೇ ಮರೆಸುವಷ್ಟು ಅವುಗಳಲ್ಲಿನ “ಪ್ರೇಮ ಭಾವ” ನಮ್ಮನ್ನು ಆವರಿಸುತ್ತದೆ.

Klive Special Article ತನ್ಮೂಲಕ ಅಂಜುಮ್ ಅವರ ಈ ಮನದ ಮಾತುಗಳು ನಮ್ಮ ಮನ ಸೆಳೆಯುವಲ್ಲಿ ಸಾರ್ಥಕವಾಗಿವೆ ಎನ್ನಬಹುದು.
ಉದಾಹರಣೆಗೆ ಗಮನಿಸುವುದಾದರೆ,”ಕೆಲವೊಮ್ಮೆ ಅರ್ಥವಾಗದೆ ಹೋದರೂ ಮನಸ್ಸಿಗೆ ಇಷ್ಟವಾಗುವ ಸಂಗೀತದಂತೆ ನೀನು” ಎಂಬಂತಹ ಸಾಲು..ಇಲ್ಲಿ ಪ್ರೇಮದ ಅಮೂರ್ತತೆಯನ್ನು ಸರಳವಾಗಿ ಹೇಳುವ ಪ್ರಯತ್ನ ಕಾಣಬಹುದು..”ನೀ ಜೊತೆಗಿದ್ದರೆ ಮಳೆ ಇನ್ನೇನೋ,ನೀ ಇಲ್ಲದಿದ್ದರೆ ಮಳೆ ಕೇವಲ ನೀರಷ್ಟೆ”…”ನೀ ಜೊತೆಗಿದ್ದರೆ ಆಟೋನೂ ಮರ್ಸಿಡಿಸ್ ಅನಿಸುವಷ್ಟು” ಎಂಬಂತಹ ಮಾತುಗಳಲ್ಲಿ ಹೊಸತನವನ್ನು ಕಾಣಬಹುದು..
ಒಟ್ಟಾರೆಯಾಗಿ ಅಂಜುಮ್ ಅವರ “ಕಾಡುವ ಹುಡುಗನ ಹಾಡು” ನಮ್ಮನ್ನು ಕಾಡುವಂತಹ,ಹೆಣ್ಣೊಬ್ಬಳು ತನ್ನ ಪ್ರಿಯತಮನ ನೆನಹಿನಲ್ಲಿ, ಹೃತ್ಪೂರ್ವಕವಾಗಿ,ಪ್ರಾಮಾಣಿಕವಾಗಿ ಕನವರಿಸಿದಂತಹ ಭಾವನೆಗಳ ಹೂಗೊಂಚಲು ಎನ್ನಬಹುದು..ನಿಮ್ಮಿಂದ ಇನ್ನೂ ಹೆಚ್ಚಿನದನ್ನು ನಿರೀಕ್ಷಿಸುತ್ತಾ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಶುಭವಾಗಲಿ ಎಂದು ಹಾರೈಸುತ್ತೇನೆ.

ಈ ಪುಸ್ತಕವು ಶಿವಮೊಗ್ಗದ ಪ್ರಜ್ಞಾ ಬುಕ್ ಗ್ಯಾಲರಿಯಲ್ಲಿ ಲಭ್ಯವಿದ್ದು, ಪುಸ್ತಕ ಪ್ರಿಯರು ಕೊಂಡು ಓದಿ.

ಪುಸ್ತಕ: ಕಾಡುವ ಹುಡುಗನ ಹಾಡು
ಲೇಖಕರು: ಅಂಜುಮ್.ಬಿ.ಎಸ್.
ಮುಖಬೆಲೆ:110 ರೂ.
ಪುಟ: 106

ಬರಹ:

ಸಂತೋಷ್ ಕುಮಾರ್ ಎಸ್.ಜಿ.
ಮುಖ್ಯಸ್ಥರು,ಕನ್ನಡ ವಿಭಾಗ
ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು.ಶಿವಮೊಗ್ಗ.