Wednesday, February 25, 2026
Wednesday, February 25, 2026
Home Blog Page 262

Sigandur Bridge ಮಲೆನಾಡಿನ ಶರಾವತಿ ಸೊಬಗಿನ ಸಿಂಧೂರ – ಈ ಐತಿಹಾಸಿಕ ಸಿಗಂದೂರು ಸೇತುವೆ

0

Sigandur Bridge ಸಾಗರ ತಾಲ್ಲೂಕು ಕಳಸವಳ್ಳಿ – ಅಂಬಾರಗೊಡ್ಲು ಮಾರ್ಗದ ನಡುವೆ ಶರಾವತಿ ಹಿನ್ನೀರಿನ ಪ್ರದೇಶದಲ್ಲಿ ನಿರ್ಮಾಣ ಮಾಡಿರುವ ಐತಿಹಾಸಿಕ ಕೇಬಲ್ ಆಧಾರಿತ ಸಿಗಂದೂರು ಸೇತುವೆ ಕಾಮಗಾರಿ ಮುಕ್ತಾಯಗೊಂಡು ಸಾರ್ವಜನಿಕ ಬಳಕೆಗೆ ಲೋಕಾರ್ಪಣೆಗೊಳ್ಳಲು ಸಕಲ ರೀತಿಯಲ್ಲೂ ಸಜ್ಜಾಗಿ ನಿಂತಿದ್ದು, ಇಂದು ಸ್ಥಳಕ್ಕೆ ಭೇಟಿ ನೀಡಿ ಸಂಪೂರ್ಣ ಸೇತುವೆ ಪರಿವೀಕ್ಷಣೆ ನಡೆಸಲಾಯಿತು.

ಇದಕ್ಕೂ ಮುನ್ನ ನಾಡಿನ ಇತಿಹಾಸ ಪ್ರಸಿದ್ಧ ಶಕ್ತಿ ಕೇಂದ್ರಗಳಲ್ಲಿ ಒಂದಾದ ಶ್ರೀಕ್ಷೇತ್ರ ಸಿಗಂದೂರು ಚೌಡೇಶ್ವರಿ ಸನ್ನಿಧಾನಕ್ಕೆ ಪಕ್ಷದ ಪ್ರಮುಖರೊಂದಿಗೆ ಭೇಟಿ ನೀಡಿ ಯಾವುದೇ ಅಡೆತಡೆಗಳಿಲ್ಲದೆ ನಿರ್ವಿಘ್ನವಾಗಿ ಸಾಗಲು ಶಕ್ತಿ ನೀಡಿದ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ ನಾಡಿನ ಒಳಿತಿಗಾಗಿ ಪ್ರಾರ್ಥಿಸಲಾಯಿತು.

ಮಲೆನಾಡ ಹಚ್ಚ ಹಸಿರಿನ ರಾಜಧಾನಿ ಶಿವಮೊಗ್ಗ ಜಿಲ್ಲೆ ಹಲವಾರು ವಿಶೇಷತೆಗಳಿಂದ ವಿಶ್ವ ಭೂಪಟದಲ್ಲಿ ಗುರುತಿಸಿಕೊಂಡಿದೆ. ಅದರಲ್ಲೂ ವಿಶೇಷವಾಗಿ ಸಾಗರ ತಾಲ್ಲೂಕಿನ ಶರಾವತಿ ಹಿನ್ನೀರಿನ ಅಂಬಾರಗೋಡ್ಲು – ಕಳಸವಳ್ಳಿ ನಡುವೆ ಸಾಗುವ ಹಾದಿಗೆ ನಿರ್ಮಾಣ ಮಾಡಿರುವ ಈ ಸಿಗಂದೂರು ಸೇತುವೆ ಒಂದು ಹೊಸ ಮೈಲಿಗಲ್ಲು ಎಂದು ದಾಖಲೆ ಬರೆದಿದೆ.

ನವನವೀನ ತಂತ್ರಜ್ಞಾನ ಹಾಗೂ ಆಧುನಿಕ ತಾಂತ್ರಿಕ ವ್ಯವಸ್ಥೆಯಿಂದ ಅತ್ಯಂತ ಅಚ್ಚುಕಟ್ಟಾಗಿ ಸುಮಾರು 430.00 ಕೋಟಿ ಅನುದಾನದಲ್ಲಿ ರಾಜ್ಯದ ಅತಿ ಉದ್ದದ 2.25 ಕಿ.ಮೀ ಕೇಬಲ್ ಆಧಾರಿತ ಸೇತುವೆ ಕಾಮಗಾರಿ ಸಾರ್ವಜನಿಕ ಸೇವೆಗೆ ಅಡಿ ಇಡಲು ಸಜ್ಜಾಗಿದೆ.

ಮತ್ತೊಮ್ಮೆ ಐತಿಹಾಸಿಕ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಶ್ರಮಿಸಿದವರಲ್ಲಿ ಮೊದಲಿಗರಾದ ಪೂಜ್ಯ ತಂದೆಯವರಾದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರಿಗೆ ಧನ್ಯವಾದ ತಿಳಿಸುತ್ತಾ, ಇದೇ ಸಂದರ್ಭದಲ್ಲಿ ಈ ಯೋಜನೆಗೆ ಸೂಕ್ತ ಅನುದಾನ ನೀಡಿದ ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ಅವರಿಗೆ ಹಾಗೂ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಈ ಸಂದರ್ಭದಲ್ಲಿ ಅನಂತ ಅನಂತ ಧನ್ಯವಾದ ಅರ್ಪಿಸುತ್ತೇನೆ.

ಈ ಒಂದು ಇತಿಹಾಸ ಪುಟಗಳಲ್ಲಿ ದಾಖಲಾಗುವಂತ ಐತಿಹಾಸಿಕ ಸೇತುವೆ ನಿರ್ಮಾಣದಿಂದ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಮೆರುಗು ದೊರೆಯುತ್ತದೆ. ಜೊತೆಗೆ ವ್ಯಾವಹಾರಿಕವಾಗಿ ಜಿಲ್ಲೆಯ ಆರ್ಥಿಕ ಪರಿಸ್ಥಿತಿ ಸದೃಢವಾಗುತ್ತದೆ. ಈ ಮೂಲಕ ಹೊಸ ರೀತಿಯ ಸಾಮಾಜಿಕ ಬದಲಾವಣೆಗೆ ಮುನ್ನುಡಿ ಬರೆಯುತ್ತದೆ ಎಂಬ ವಿಶ್ವಾಸ ಬಲವಾಗಿದೆ.

Sigandur Bridge ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು, ಶಾಸಕರಾದ ಶ್ರೀ ಬಿ.ವೈ. ವಿಜಯೇಂದ್ರ ಅವರು, ಹಿರಿಯ
ಶಾಸಕರಾದ ಶ್ರೀ ಆರಗ ಜ್ಞಾನೇಂದ್ರ ಅವರು, ಮಾಜಿ ಶಾಸಕರಾದ ಶ್ರೀ ಹರತಾಳು ಹಾಲಪ್ಪ ಅವರು, ಜಿಲ್ಲಾಧ್ಯಕ್ಷರಾದ ಶ್ರೀ ಜಗದೀಶ್ ಅವರು, ಎಂಎಡಿಬಿ ಮಾಜಿ ಅಧ್ಯಕ್ಷರಾದ ಶ್ರೀ ಗುರುಮೂರ್ತಿ ಅವರು, ಮುಖಂಡರಾದ ಶ್ರೀ ಮೇಘರಾಜ್ ಅವರು ಸೇರಿದಂತೆ ಅನೇಕ ಪಕ್ಷದ ಪ್ರಮುಖರು ಹಾಗೂ ಗಣ್ಯರು ಉಪಸ್ಥಿತರಿದ್ದರು.

Klive Special Article ಭಿನ್ನ ಕಥಾ ಹಂದರದ ನೈತಿಕ ಥ್ರಿಲ್ಲರ್ ‘ಶಾಖಾಹಾರಿ’

0

Klive Special Article 2024ರ ಫೆಬ್ರವರಿ 16 ರಂದು ಬಿಡುಗಡೆಯಾದ “ಶಾಖಾಹಾರಿ” ಎಂಬ ಕನ್ನಡ ಚಲನಚಿತ್ರವು ವಿಶಿಷ್ಟ ವಿಷಯವನ್ನು ಆಧಾರವಾಗಿಟ್ಟುಕೊಂಡು ನಿರ್ಮಾಣವಾಗಿದೆ. ಇದು ತಾತ್ವಿಕ ಚರ್ಚೆ, ನೈತಿಕತೆ ಹಾಗೂ ಹಾಸ್ಯಾಸ್ಪದ ಪ್ರಹಸನಗಳ ಮಧ್ಯೆ ಕಟ್ಟಲ್ಪಟ್ಟಿರುವ ಒಂದು ಥ್ರಿಲ್ಲರ್ ಕಥಾಹಂದರವನ್ನು ಹೊಂದಿದೆ.

ಈ ಚಿತ್ರವನ್ನು ಸಂದೀಪ್ ಸುಂಕದ ನಿರ್ದೇಶಿಸಿದ್ದಾರೆ. ಕತೆ, ಸಂಭಾಷಣೆ ಹಾಗೂ ಚಿತ್ರಕಥೆಯನ್ನೂ ಸಂದೀಪ್ ಸುಂಕದ ಅವರು ಎಸ್.ಆರ್. ಗಿರೀಶ್ ಅವರ ಜೊತೆಯಲ್ಲಿ ಬರೆದಿದ್ದಾರೆ. ಚಿತ್ರಕ್ಕೆ ಬದಲಾಗದ ಗುಣಮಟ್ಟ ನೀಡಿರುವ ನಿರ್ಮಾಪಕರು ರಾಜೇಶ್ ಕೀಳಂಬಿ ಮತ್ತು ರಂಜಿನಿ ಪ್ರಸನ್ನ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಗೋಪಾಲಕೃಷ್ಣ ದೇಶಪಾಂಡೆ, ವಿನಯ್ ಯುಜಿ ಮತ್ತು ನಿಧಿ ಹೆಗ್ಗಡೆ ಅಭಿನಯಿಸಿದ್ದಾರೆ. ಇವರ ಅಭಿನಯ ಚಿತ್ರಕ್ಕೆ ತೀವ್ರತೆ ಮತ್ತು ನಾಟಕೀಯತೆಯ ಸ್ಪರ್ಶ ನೀಡಿದೆ.

ಸಾಂದರ್ಭಿಕ ಹಿನ್ನೆಲೆಗಳಿಗೆ ತಕ್ಕಂತೆ ಭಾವಯುಕ್ತ ಸಂಗೀತವನ್ನು ಮಯೂರ ಅಂಬಿಕಳ್ಳು ರಚಿಸಿದ್ದು, ಚಿತ್ರಕ್ಕೆ ಔದಾರ್ಯ ತುಂಬಿದೆ. ಚಿತ್ರದಲ್ಲಿ ವಿಶ್ವಜಿತ್ ರಾವ್ ಅವರ ಛಾಯಾಗ್ರಹಣ ಕಾರ್ಯ ತಂತ್ರಜ್ಞಾನ ಮತ್ತು ದೃಶ್ಯ ವೈಭವದಲ್ಲಿ ಗಮನ ಸೆಳೆಯುತ್ತದೆ. ಶಶಾಂಕ್ ನಾರಾಯಣ ಅವರ ಸಂಪಾದನೆಯು ಚಿತ್ರಕ್ಕೆ ಸರಿಯಾದ ಹರಿವನ್ನು ನೀಡಿದೆ.

ಈ ಚಿತ್ರವನ್ನು ಕೀಳಂಬಿ ಮೀಡಿಯಾ ಲ್ಯಾಬ್ ನಿರ್ಮಾಣ ಸಂಸ್ಥೆ ಯಿಂದ ತಯಾರಿಸಲಾಗಿದ್ದು, ಕೆ.ಎಂ.ಜಿ. ಸ್ಟುಡಿಯೋಸ್ ವಿತರಣೆ ಹೊಣೆ ಹೊತ್ತಿದೆ. ವಿತರಣೆ ಮತ್ತು ಪ್ರದರ್ಶನದಲ್ಲಿ ರಂಗಾಯಣ ದಂಪತಿ ಮುಖ್ಯ ಪಾತ್ರವಹಿಸಿಕೊಂಡಿದ್ದಾರೆ. ಚಿತ್ರದ ಕಾಲಾವಧಿಯೂ 146 ನಿಮಿಷಗಳಾಗಿದ್ದು, ಇದು ಭಾರತದಾದ್ಯಂತ ಕನ್ನಡ ಭಾಷೆಯಲ್ಲಿ ಬಿಡುಗಡೆಯಾಗಿದೆ.

ಈ ಸಂಶೋಧನಾತ್ಮಕ ಥ್ರಿಲ್ಲರ್ ಚಿತ್ರವು ಮಾಂಸಾಹಾರ ಮತ್ತು ಶಾಖಾಹಾರದ ನೈತಿಕ ಮತ್ತು ತಾತ್ವಿಕ ಚರ್ಚೆಯ ಸುತ್ತ ಮೂಡಿರುವ ಮರ್ಡರ್ ಮಿಸ್ಟರಿ ಕಥಾವಸ್ತು ಹೊಂದಿದ್ದು, ಪ್ರೇಕ್ಷಕರ ಮನಸ್ಸಿಗೆ ಆಳವಾಗಿ ತಲುಪುವಂಥದ್ದು.

ಚಿತ್ರದ ಹಿನ್ನಲೆಯಲ್ಲಿ ಮಲೆನಾಡಿನ ತೀರ್ಥಹಳ್ಳಿ ಪ್ರದೇಶವನ್ನು ಆಯ್ಕೆ ಮಾಡಿದ್ದು, ಇಲ್ಲಿ ‘ಸುಬ್ಬಣ್ಣ’ ಎಂಬ ಹೋಟೆಲ್ ಅಡುಗೆಗಾರನ ಪಾತ್ರದಲ್ಲಿ ರಂಗಾಯಣ ರಘು ಅವರು, ದೀಪದಂತೆ ಪ್ರಕಾಶಮಾನವಾದ ಅಭಿನಯ ನೀಡಿದ್ದಾರೆ. ಸೂಕ್ಷ್ಮ ಮತ್ತು ಅನಿರೀಕ್ಷಿತ ಘಟನೆಗಳ ಸರಣಿಯಲ್ಲಿ, ಸತ್ಯವನ್ನು ಹುಡುಕುತ್ತಿರುವ ಪೊಲೀಸ್ ಅಧಿಕಾರಿಯಾಗಿ, ಗೋಪಾಲಕೃಷ್ಣ ದೇಶಪಾಂಡೆ ಅವರ ತನಿಖೆ ಪ್ರೇಕ್ಷಕರನ್ನು ಕುತೂಹಲದಿಂದ ಕಟ್ಟಿ ಹಿಡಿಯುತ್ತದೆ.

Klive Special Article ಈ ಚಿತ್ರದಲ್ಲಿ ‘ಹತ್ಯೆ ಯಾರು ಮಾಡಿದರು?’ ಎಂಬ ಪ್ರಶ್ನೆಯೊಂದಿಗೆ ಆಹಾರದ ಆಯ್ಕೆಗೂ ಸಂಬಂಧಿಸಿದ ಧಾರ್ಮಿಕ-ಸಾಂಸ್ಕೃತಿಕ ಚರ್ಚೆ ಹಿನ್ನಲೆಯಲ್ಲಿ ಬರುವುದರಿಂದ, ಇದು ಪಾರಂಪರಿಕ ಥ್ರಿಲ್ಲರ್‌ಗಿಂತ ವಿಶಿಷ್ಟವಾಗಿದೆ. ನವೀನ್ ರಾಜ್ ಅವರ ಹಿನ್ನೆಲೆ ಸಂಗೀತವು ಚಿತ್ರದಲ್ಲಿ ಥ್ರಿಲ್ಲರ್ ಎಫೆಕ್ಟ್‌ಗೆ ತಕ್ಕಷ್ಟು ತೀವ್ರತೆ ನೀಡಿದೆ. ಸೌಂಡ್ ಡಿಸೈನ್ ಸುಕ್ಷ್ಮವಾಗಿದೆ. ಛಾಯಾಗ್ರಹಣ ನಿಸರ್ಗದ ಸೌಂದರ್ಯವನ್ನು ಹಾಗೂ ಪಾತ್ರಗಳ ಭಾವನಾತ್ಮಕ ದಿಕ್ಕುಗಳನ್ನು ಸಮರ್ಪಕವಾಗಿ ಹಿಡಿದಿಟ್ಟುಕೊಳ್ಳುತ್ತದೆ.

Bangalore International Film Festival (BIFFes) 2024 – Best Kannada Feature Film (Special Mention), Best Backgroundd score.
Ottawa Indian Film Festival Awards (OIFFA) 2024 – Best Director ನಾಮಿನೇಷನ್.
IFFI 2024 Indian Panorama – ಅಧಿಕೃತ ಆಯ್ಕೆ.
Karnataka State Film Awards 2024–25 – ನಿರೀಕ್ಷಿತ ಪ್ರಶಸ್ತಿಗಳ ಪಟ್ಟಿ: Best Debut Director, Best Story/Screenplay. ಇವು ಚಿತ್ರದ ಕಲಾತ್ಮಕತೆಯ ಜಾಗತಿಕ ಗುರುತಿನ ಸಾಕ್ಷಿಗಳಾಗಿವೆ.ಹಾಗೂ ಅನೇಕ ಪ್ರಶಸ್ತಿಗಳೂ ಸಹ ದೊರೆತಿದ್ದು, ವಿವಿಧ ಭಾಷೆಗಳಿಗೆ ಅನುವಾದವು ಸಹ ಆಗಿದೆ.

ಮೇ 24, 2024 ರಂದು ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ಬಿಡುಗಡೆಯಾದ ನಂತರ, ಕೆಲವೇ ದಿನಗಳಲ್ಲಿ 10 ಮಿಲಿಯನ್ ನಿಮಿಷಗಳ ವೀಕ್ಷಣೆ ದಾಖಲಾಗಿದ್ದು, ಇದುOTT ವೀಕ್ಷಣಾ ವಿಶ್ವಾಸಾರ್ಹತೆಗೂ ಸಾಕ್ಷಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರೇಕ್ಷಕರು ಚಿತ್ರವನ್ನು “ಅತ್ಯುತ್ತಮ ಥ್ರಿಲ್ಲರ್” ಎಂದು ಹೊಗಳಿದ್ದಾರೆ.

ಸಿನಿಮಾದಲ್ಲಿ ಉತ್ತಮ ಅಂಶವನ್ನು ಗುರುತಿಸುವುದಾದರೆ,
ವಿಭಿನ್ನ ಕಥಾವಸ್ತುವನ್ನು ಹೊಂದಿದ್ದು, ಗಂಭೀರ ಪಾತ್ರ ನಿರ್ವಹಣೆಯು ಉತ್ತಮವಾಗಿ ಮೂಡಿದೆ,
ನೈತಿಕವಾಗಿ ಮತ್ತು ತಾತ್ವಿಕ ಚರ್ಚೆಗೆ ಆಧಾರವಾಗಿ ವಿಷಯ ವಿಶ್ಲೇಷಣೆ ದೊರೆತಿದೆ, ಸಂಯಮಿತ ನಿರ್ದೇಶನ ಮತ್ತು ಸಾಫ್ಟ್ ಥ್ರಿಲ್ಲರ್ ಹಾದಿಯಿಂದ ಸಿನಿಮಾ ನೋಡುಗರನ್ನು
ಹಿಡಿದಿಟ್ಟುಕೊಳ್ಳುವ ಪ್ರಯತ್ನವನ್ನು ಕಾಣಬಹುದಾಗಿದೆ.

ಕೆಲವು ಅಂಶಗಳನ್ನು ಸಿನಿಮಾದಲ್ಲಿ ಒಳಪಡಿಸಿದ್ದರೆ ಮತ್ತಷ್ಟು ವಿಶೇಷವಾಗಿ ಮೂಡಿರಬಹುದೇನೋ ಎಂಬ ಅಂಶಗಳನ್ನು ಹೇಳುವುದಾದರೆ, ನಿರ್ದಿಷ್ಟ ಶ್ರೇಣಿಯ ಪ್ರೇಕ್ಷಕರಿಗೆ ಮಾತ್ರ ಪೂರ್ಣವಾಗಿ ಮನರಂಜನೆ ನೀಡಬಹುದು (commercial mass appeal ಕಡಿಮೆ) ಕಥೆಯಲ್ಲಿ ರಂಗಾಯಣ ರಘು ಅವರ ಪ್ರೀತಿ ವಿಷಯಾಧರಿತ ಒಂದಿಷ್ಟು ಮತ್ತಿಷ್ಟು ಅಂಶ, ಹಾಗೂ ಗೋಪಾಲಕೃಷ್ಣ ದೇಶಪಾಂಡೆ ಅವರ ಮಡದಿಯ ಮತ್ತಿಷ್ಟು ಸನ್ನಿವೇಶಗಳನ್ನು ನೀಡಬಹುದಿತ್ತೇನೋ,

“ಶಾಖಾಹಾರಿ” ಕನ್ನಡ ಚಲನಚಿತ್ರದಲ್ಲಿ ಬರುವ ಹಾಡುಗಳು ತಮ್ಮ ವೈಶಿಷ್ಟ್ಯತೆಯಿಂದ ಗಮನ ಸೆಳೆದಿವೆ. ಈ ಚಿತ್ರವನ್ನು ಎಸ್. ಮಹೇಶ್ ಕುಮಾರ್ ನಿರ್ದೇಶನ ಮಾಡಿದ್ದಾರೆ ಮತ್ತು ಚಿತ್ರವು ಸಾಹಿತ್ಯ, ಸಂಸ್ಕೃತಿ ಮತ್ತು ಆತ್ಮವಿಶ್ಲೇಷಣೆಯ ಸೂಕ್ಷ್ಮತೆಗೆ ಪ್ರಾಮುಖ್ಯತೆ ನೀಡಿರುವ ತೀವ್ರ ಕಥಾವಸ್ತುವನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ, ಚಿತ್ರದಲ್ಲಿನ ಸಂಗೀತ ಕೂಡ ಅದರ ವಿಷಯದ ಮೇಲೆ ಸಮಶಾಖJukeಮೂಡಿಬಂದಿದೆ.

  1. Soul of shakahari, ಈ ಹಾಡು ಚಿತ್ರದಲ್ಲಿ ಬರುವ ಅತ್ಯಂತ ಭಾವನಾತ್ಮಕ ಸಂಗೀತವಾಗಿದ್ದು. “ಸೋಲ್ ಆಫ್ ಶಾಖಾಹಾರಿ” ಎಂಬ ಹೆಸರಿನಂತೆ, ಈ ಹಾಡು ಕಥೆಯ ಆಂತರಂಗವನ್ನು ಮನೋಜ್ಞವಾಗಿ ಪ್ರತಿಬಿಂಬಿಸುತ್ತದೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ವಿನಯ್ ಯುಜೆ ಮತ್ತು ನಿಧಿ ಹೆಗ್ಡೆ ಈ ಹಾಡಿನಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿದ್ದಾರೆ.
  2. Sougandhika, ಚಲನಚಿತ್ರದ ಮತ್ತೊಂದು ಮಧುರ ಹಾಡಾಗಿದೆ. ಪ್ರೇಮ ಹಾಗೂ ನಿಜವಾದ ಸಂಬಂಧಗಳ ನಡುವಿನ ಭಾವನೆಗಳನ್ನು ಈ ಹಾಡು ತುಂಬಾ ಮನಮೋಹಕವಾಗಿ ವಿವರಿಸುತ್ತದೆ. ಹಾಡಿನ ಸಾಹಿತ್ಯ ಮತ್ತು ಸಂಗೀತ ಸಂಯೋಜನೆ ವಿಭಿನ್ನ ಅನುಭವವನ್ನು ನೀಡುತ್ತದೆ.
    ಚಿತ್ರದ ಎಲ್ಲಾ ಹಾಡುಗಳನ್ನು ಒಟ್ಟುಗೂಡಿಸಿ MRT Music ಸಂಸ್ಥೆ “Audio Jukebox” ರೂಪದಲ್ಲಿ ಬಿಡುಗಡೆ ಮಾಡಿದ್ದು, ಶ್ರೋತರಿಗೆ ಒಂದು ನಿರಂತರ ಸಂಗೀತಾನುಭವವನ್ನು ನೀಡುತ್ತದೆ. ಇದು ಆನ್‌ಲೈನ್‌ನಲ್ಲಿ ಯೂಟ್ಯೂಬ್‌ ಮೂಲಕ ಲಭ್ಯವಿದೆ.

ಚಿತ್ರದ ಹಿನ್ನೆಲೆ ಸಂಗೀತ ಹಾಗೂ ಎಲ್ಲಾ ಹಾಡುಗಳನ್ನು ಮಯೂರ ಅಂಬೇಕಳ್ಳು ಸಂಯೋಜಿಸಿದ್ದಾರೆ. ಅವರು ಈ ಚಿತ್ರದ ಭಾವನಾತ್ಮಕ ಹಿನ್ನೆಲೆಯೊಂದಿಗೆ ಸಂಗೀತವನ್ನು ಅಪರೂಪದ ಸಂಯೋಜನೆಯೊಂದಿಗೆ ಬೆರೆಸಿ, ಕೇಳುಗರಿಗೆ ಹೊಸ ಅನುಭವವನ್ನು ನೀಡಿದ್ದಾರೆ. ಹಾಡುಗಳ ವೈಶಿಷ್ಟ್ಯತೆ ನೋಡುವುದಾದರೆ, ಹೃದಯಸ್ಪರ್ಶಿ ಸಂಗೀತ ಮತ್ತು ದಾರ್ಶನಿಕ ಸಾಹಿತ್ಯ. ಕಥೆಯ ತೀವ್ರತೆಗೆ ತಕ್ಕಂತೆ ಹಾಡುಗಳ ಅರ್ಥಪೂರ್ಣ ವಿನ್ಯಾಸ, MRT Music ನಿಂದ ಉಚಿತವಾಗಿ ಆನ್‌ಲೈನ್‌ನಲ್ಲಿ ಲಭ್ಯವಾಗುತ್ತದೆ.

“ಶಾಖಾಹಾರಿ” ಚಿತ್ರದ ಹಾಡುಗಳು ಸಿನಿಮಾ ಕಥೆಗೂ, ಪಾತ್ರಗಳೊಳಗಿನ ಆಂತರಿಕ ಬದಲಾವಣೆಗೂ ತಾಳಮೇಳ ಹೊಂದಿವೆ. ಭಾವನೆ ಮತ್ತು ಕಲಾತ್ಮಕತೆ ಎರಡರನ್ನೂ ಒಳಗೊಂಡಿರುವ ಈ ಹಾಡುಗಳು ನಿಜಕ್ಕೂ ಪ್ರೇಕ್ಷಕರ ಮನಸ್ಸಿನಲ್ಲಿ ಧೀರ್ಘಕಾಲ ನೆನಪಾಗುವಂಥವು. ಹೊಸ ತರದ ಸಂಗೀತ ಪ್ರೀತಿಸುವವರು ಈ ಹಾಡುಗಳನ್ನು ತಪ್ಪದೆ ಕೇಳಬೇಕು.

“ಶಾಖಾಹಾರಿ” ನಿಜವಾಗಿಯೂ ಕನ್ನಡ ಚಿತ್ರರಂಗದಲ್ಲಿ ಹೊಸತವನ್ನು ಸಾದರಪಡಿಸುವ ಪ್ರಯತ್ನ. ಅದರಲ್ಲಿ ಕೇವಲ ಮನರಂಜನೆ ಮಾತ್ರವಲ್ಲ, ಅರ್ಥಪೂರ್ಣ ಸಂದೇಶವಿದೆ. ವಿಭಿನ್ನ ಥ್ರಿಲ್ಲರ್ ಅನುಭವವನ್ನು ಹುಡುಕುತ್ತಿರುವ ಪ್ರೇಕ್ಷಕರಿಗೆ ಇದು ತಪ್ಪದೇ ನೋಡಬೇಕಾದ ಚಿತ್ರ.

ಬರಹ :ಭಾರ್ಗವಿ ಬಿ.ಆರ್.
ವಿಧ್ಯಾರ್ಥಿನಿ
ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗ
ಕುವೆಂಪು ವಿಶ್ವವಿದ್ಯಾಲಯ
ಶಂಕರಘಟ್ಟ

VISL Unit ವಿಐಎಸ್ಎಲ್ ಘಟಕದಿಂದ ಪ್ರತಿಭಾ ಪುರಸ್ಕಾರ ಸಮಾರಂಭ

0

VISL Unit 2024-25ನೇ ಸಾಲಿನ ಏಳನೇ ತರಗತಿ, ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಶೇಕಡಾ 90ಕ್ಕಿಂತ ಹೆಚ್ಚು ಅಂಕಗಳಿಸಿದ ಕಾರ್ಖಾನೆಯ ಉದ್ಯೋಗಿಗಳ ಮಕ್ಕಳಿಗೆ ಭದ್ರಾ ಅತಿಥಿಗೃಹದಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಲಾಯಿತು.
ಎಸ್.ಎಸ್.ಎಲ್.ಸಿಯಲ್ಲಿ 90% ಕ್ಕೂ ಹೆಚ್ಚು ಅಂಕಗಳನ್ನು ಪಡೆದ, 8 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ, ವಿಐಎಸ್.ಎಲ್ ಕಾರ್ಯಪಾಲಕ ನಿರ್ದೇಶಕ ಶ್ರೀ ಬಿ.ಎಲ್. ಚಂದ್ವಾನಿ, ಗೌರವಾನ್ವಿತ ಅತಿಥಿಗಳಾದಿ ಶ್ರೀ ಕೆ.ಎಸ್. ಸುರೇಶ್, ಮುಖ್ಯ ಮಹಾಪ್ರಬಂಧಕರು (ಸ್ಥಾವರ), ಶ್ರೀ ಜೆ. ಜಗದೀಶ, ಅಧ್ಯಕ್ಷರು, ವಿಐಎಸ್‌ಎಲ್ ಕಾರ್ಮಿಕರ ಸಂಘ, ಶ್ರೀ ಪಾರ್ಥಸಾರಥಿ ಮಿಶ್ರಾ, ಅಧ್ಯಕ್ಷರು, ವಿಐಎಸ್‌ಎಲ್ ಅಧಿಕಾರಿಗಳ ಸಂಘ, ಮಕ್ಕಳಿಗೆ ಅಭಿನಂದನಾ ಪತ್ರ, ನಗದು ಪುರಸ್ಕಾರ ಮತ್ತು ಸಸಿಗಳನ್ನು ನೀಡಿ, ಅವರ ಸಾಧನೆಗಾಗಿ ಆ ವಿದ್ಯಾರ್ಥಿಗಳನ್ನು ಅಭಿನಂದಿಸಿದರು ಮತ್ತು ಭವಿಷ್ಯ ಉಜ್ವಲವಾಗಿರಲೆಂದು ಹರಸಿದರು. VISL Unit ಸಮಾರಂಭದಲ್ಲಿ ವಿಐಎಸ್‌ಎಲ್ ಕಾರ್ಮಿಕರ ಸಂಘ ಮತ್ತು ವಿಐಎಸ್‌ಎಲ್ ಅಧಿಕಾರಿಗಳ ಸಂಘದ ಪದಾಧಿಕಾರಿಗಳು, ಹಿರಿಯ ಅಧಿಕಾರಿಗಳು, ಕಾರ್ಮಿಕರು, ಅವರ ಕುಟುಂಭದವರು ಹಾಗೂ ಪ್ರಶಸ್ತಿ ವಿಜೇತ ಮಕ್ಕಳು ಪೋಷಕರೊಂದಿಗೆ ಹಾಜರಿದ್ದರು.
ಶ್ರೀ ಎಲ್. ಪ್ರವೀಣ್ ಕುಮಾರ್, ಮಹಾಪ್ರಬಂಧಕರು (ಮಾನವ ಸಂಪನ್ಮೂಲ ಮತ್ತು ಸಾರ್ವಜನಿಕ ಸಂಪರ್ಕ) ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಶೈಕ್ಷಣಿಕವಾಗಿ ಪ್ರತಿಭಾವಂತ ಸೈಲ್-ವಿಐಎಸ್‌ಎಲ್ ಉದ್ಯೋಗಿಗಳ ಮಕ್ಕಳಿಗೆ ಉತ್ತೇಜನ ನೀಡಲು ಇರುವ ಹಲವು ಯೋಜನೆಗಳ ಬಗ್ಗೆ ತಿಳಿಸಿದರು. ಕು. ಎಸ್. ಅನನ್ಯ ಸುಶ್ರಾವ್ಯವಾಗಿ ಪ್ರಾರ್ಥನೆಗೈದರು.

Backward Classes Welfare Department ಮೆಟ್ರಿಕ್ ನಂತರದ ಕೋರ್ಸ್ ಓದುತ್ತಿರುವ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಸೌಲಭ್ಯದ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

0

Backward Classes Welfare Department ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಮೆಟ್ರಿಕ್ ನಂತರದ ಕೋರ್ಸ್ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು 2024-25ನೇ ಸಾಲಿಗೆ ನೀಡಲಾಗುತ್ತಿರುವ ಶುಲ್ಕ ಮರುಪಾವತಿ ಕಾರ್ಯಕ್ರಮದ ಸೌಲಭ್ಯಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಕೋರ್ಸುಗಳಿಗೆ ಶುಲ್ಕ ಮರುಪಾವತಿ ಕಾರ್ಯಕ್ರಮದ ಸೌಲಭ್ಯಕ್ಕಾಗಿ ಮಾತ್ರ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಜುಲೈ 10ಕ್ಕೆ ವಿಸ್ತರಿಸಲಾಗಿದೆ.
ಆಸಕ್ತರು https://ssp.postmatric.karnataka.gov.in ಮೂಲಕ ಜು. 10 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಇಲಾಖಾ ಸಹಾಯವಾಣಿ 8050770005 ನ್ನು ಇ-ಮೇಲ್ bcwdhelpline@gmail.com, ರಾಜ್ಯ ವಿದ್ಯಾರ್ಥಿವೇತನ ತಂತ್ರಾAಶದ ಸಹಾಯವಾಣಿ ಇ-ಮೇಲ್ postmatrichelp@karnataka.gov.in, ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದ ಮಾಹಿತಿಗಾಗಿ https://bcwd.karnataka.gov.in ಗಳನ್ನು ಹಾಗೂ ದೂರವಾಣಿ ಸಂ.: 1902 ಗಳನ್ನು ಸಂಪರ್ಕಿಸುವುದು.

Pre-university Education ಪಿಯು ಪೂರಕ ಪರೀಕ್ಷೆ ವಿದ್ಯಾರ್ಥಿಗಳ ವ್ಯಾಸಂಗ ವರ್ಷ ಕಾಪಿಡುವಲ್ಲಿ ಸಾರ್ಥಕ -ಪೋಷಕ

0

Pre-university Education 2025ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-3ರ ಫಲಿತಾಂಶಗಳು ಜುಲೈ 1 ಕ್ಕೆ ಪ್ರಕಟಗೊಳ್ಳಲಿದ್ದು, ಸಾವಿರಾರು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಬಾಗಿಲು ತೆರೆದಿದೆ. ವಿಶೇಷವಾಗಿ, ಮೂರನೇ ಪರೀಕ್ಷೆಯ ಅವಕಾಶವು ಅನೇಕ ವಿದ್ಯಾರ್ಥಿಗಳಿಗೆ ವರದಾನವಾಗಿದ್ದು, ಸಿಇಟಿ (KCET) ಮೂಲಕ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ಆಕಾಂಕ್ಷೆಗಳಿಗೆ ಹೊಸ ಭರವಸೆ ಮೂಡಿಸಿದೆ.

ದ್ವಿತೀಯ ಪಿಯುಸಿ ಪರೀಕ್ಷೆ-1 ಮತ್ತು ಪರೀಕ್ಷೆ-2ರಲ್ಲಿ ಉತ್ತೀರ್ಣರಾಗದ 82,683 ವಿದ್ಯಾರ್ಥಿಗಳು ಪರೀಕ್ಷೆ-3ಕ್ಕೆ ಹಾಜರಾಗಿದ್ದರು. ಈ ಬಾರಿ, ಪರೀಕ್ಷೆಗೆ ಹೆಚ್ಚಿನ ವಿದ್ಯಾರ್ಥಿಗಳು ಹಾಜರಾಗುವಂತೆ ಮಾಡಲು ಪ್ರಾದೇಶಿಕ ಉಪನಿರ್ದೇಶಕರು, ಪ್ರಾಂಶುಪಾಲರು ಮತ್ತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಕ್ರಿಯವಾಗಿ ಪ್ರಯತ್ನಿಸಲಾಗಿತ್ತು. ಪತ್ರಿಕಾ ಪ್ರಕಟಣೆಗಳು ಮತ್ತು ಗೋಷ್ಠಿಗಳನ್ನು ನಡೆಸಿ, ವಿದ್ಯಾರ್ಥಿಗಳಲ್ಲಿ ಉತ್ತೇಜನ ನೀಡಲಾಯಿತು.

ಅಲ್ಲದೆ, ಕಾಲೇಜು ಹಂತದಲ್ಲಿ ಫಲಿತಾಂಶ ಸುಧಾರಣೆಗೆ ಪರಿಹಾರ ಬೋಧನಾ ತರಗತಿಗಳನ್ನು (Remedial Classes) ನಡೆಸಿದ್ದು, ಇದು ವಿದ್ಯಾರ್ಥಿಗಳ ಕಾರ್ಯಕ್ಷಮತೆಗೆ ಸಹಕಾರಿಯಾಗಿದೆ. ಜೂನ್ 9 ರಿಂದ ಜೂನ್ 20, 2025ರವರೆಗೆ ಒಟ್ಟು 262 ಪರೀಕ್ಷಾ ಕೇಂದ್ರಗಳಲ್ಲಿ ವೆಬ್‌ಕಾಸ್ಟಿಂಗ್ ಅಳವಡಿಸಿ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲಾಯಿತು.

ದ್ವಿತೀಯ ಪಿಯುಸಿ ಪರೀಕ್ಷೆ-2 ರಲ್ಲಿ ಉತ್ತೀರ್ಣರಾಗದ ಎಲ್ಲಾ ವಿದ್ಯಾರ್ಥಿಗಳಿಗೆ ಪರೀಕ್ಷೆ-3 ಕ್ಕೆ ಶುಲ್ಕ ವಿನಾಯಿತಿ ನೀಡಿದ್ದರಿಂದ ಹೆಚ್ಚಿನ ವಿದ್ಯಾರ್ಥಿಗಳು, ಪರೀಕ್ಷೆ-3 ಕ್ಕೆ ನೋಂದಾಯಿಸಿಕೊಳ್ಳಲು ಅನುಕೂಲವಾಯಿತು.

ದ್ವಿತೀಯ ಪಿಯುಸಿ ಪರೀಕ್ಷೆ-3ಕ್ಕೆ ಹಾಜರಾದ 82,683 ವಿದ್ಯಾರ್ಥಿಗಳಲ್ಲಿ 18,834 ಉತ್ತೀರ್ಣರಾಗಿದ್ದು, ಶೇಕಡಾ 22.78ರಷ್ಟು ಉತ್ತೀರ್ಣತಾ ಪ್ರಮಾಣ ದಾಖಲಾಗಿದೆ.

Pre-university Education ಒಟ್ಟಾರೆ ಪರೀಕ್ಷೆ-3ರ ಫಲಿತಾಂಶಗಳು (Including Repeater and Private Students):
2025 ಪರೀಕ್ಷೆ-3: ಒಟ್ಟು 1,11,002 ವಿದ್ಯಾರ್ಥಿಗಳು ಹಾಜರಾಗಿದ್ದು, 22,446 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಉತ್ತೀರ್ಣತಾ ಪ್ರಮಾಣ ಶೇಕಡಾ 20.22.
2024 ಪರೀಕ್ಷೆ-3: ಒಟ್ಟು 71,716 ವಿದ್ಯಾರ್ಥಿಗಳು ಹಾಜರಾಗಿದ್ದು, 16,136 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಉತ್ತೀರ್ಣತಾ ಪ್ರಮಾಣ ಶೇಕಡಾ 22.5.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಪರೀಕ್ಷಾ ಅವಕಾಶವನ್ನು ಬಳಸಿಕೊಂಡಿರುವುದು ಸ್ಪಷ್ಟವಾಗಿದೆ.

ಫಲಿತಾಂಶ ಸುಧಾರಣೆಗಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ ಉತ್ತಮ ಸಾಧನೆ ಕಂಡುಬಂದಿದೆ. 2025ರ ಪರೀಕ್ಷೆ-3ರಲ್ಲಿ ಒಟ್ಟು 17,398 ವಿದ್ಯಾರ್ಥಿಗಳು ಅಂಕ ಸುಧಾರಣೆಗೆ ಹಾಜರಾಗಿದ್ದು, ಅವರಲ್ಲಿ 11,937 ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಹೆಚ್ಚಿಸಿಕೊಂಡಿದ್ದಾರೆ. 2024ರ ಪರೀಕ್ಷೆ-3ರಲ್ಲಿ ಈ ಸಂಖ್ಯೆ 7,420 ಆಗಿತ್ತು. ಇದು ವಿದ್ಯಾರ್ಥಿಗಳಿಗೆ ತಮ್ಮ ಶ್ರೇಣಿಯನ್ನು ಉತ್ತಮಪಡಿಸಿಕೊಳ್ಳಲು ಸರ್ಕಾರ ನೀಡಿದ ಅವಕಾಶದ ಸದ್ಬಳಕೆಯನ್ನು ತೋರಿಸುತ್ತದೆ. ರಸಾಯನಶಾಸ್ತ್ರ, ಭೌತಶಾಸ್ತ್ರ ಮತ್ತು ಗಣಿತ ವಿಷಯಗಳಲ್ಲಿ ಅಂಕ ಸುಧಾರಣೆಗೆ ಮುಂದಾದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ಇದು ಸಿಇಟಿ ರ್ಯಾಂಕಿಂಗ್ ಉತ್ತಮಪಡಿಸಿಕೊಳ್ಳುವ ಅವರ ಇಚ್ಛೆಯನ್ನು ಪ್ರತಿಬಿಂಬಿಸುತ್ತದೆ.

ದ್ವಿತೀಯ ಪಿಯುಸಿ ಪರೀಕ್ಷೆ-1, ಪರೀಕ್ಷೆ-2, ಮತ್ತು ಪರೀಕ್ಷೆ-3ರ ಕ್ರೋಢೀಕೃತ ಫಲಿತಾಂಶವು ರಾಜ್ಯದ ವಿದ್ಯಾರ್ಥಿಗಳ ಒಟ್ಟಾರೆ ಶೈಕ್ಷಣಿಕ ಪ್ರಗತಿಯನ್ನು ಎತ್ತಿ ತೋರಿಸುತ್ತದೆ:

ಹೊಸಬರು (Freshers): ಒಟ್ಟು 6,39,800 ವಿದ್ಯಾರ್ಥಿಗಳು ಹಾಜರಾಗಿದ್ದು, 5,45,032 ಮಂದಿ ಉತ್ತೀರ್ಣರಾಗಿದ್ದಾರೆ. ಉತ್ತೀರ್ಣತಾ ಪ್ರಮಾಣ ಶೇಕಡಾ 85.19.
ಒಟ್ಟಾರೆ ಕ್ರೋಢೀಕೃತ ಫಲಿತಾಂಶ (Including Repeater and Private Students): ಒಟ್ಟು 7,09,968 ವಿದ್ಯಾರ್ಥಿಗಳು ಹಾಜರಾಗಿದ್ದು, 5,66,636 ಮಂದಿ ಉತ್ತೀರ್ಣರಾಗಿದ್ದಾರೆ. ಉತ್ತೀರ್ಣತಾ ಪ್ರಮಾಣ ಶೇಕಡಾ 79.81.

ಮೂರನೇ ಪರೀಕ್ಷೆಯ ಅವಕಾಶ ನೀಡಿದುದರಿಂದ ಒಟ್ಟು 22,446 ವಿದ್ಯಾರ್ಥಿಗಳು ಹೆಚ್ಚುವರಿಯಾಗಿ ಉತ್ತೀರ್ಣರಾಗಿದ್ದಾರೆ. ಈ ವಿದ್ಯಾರ್ಥಿಗಳಿಗೆ ಸಿಇಟಿ (counselling/rounds) ನಂತರ ಲಭ್ಯವಿರುವ ಸೀಟುಗಳಿಗೆ ಭಾಗವಹಿಸಲು ಉತ್ತಮ ಅವಕಾಶವಾಗಲಿದೆ.

ಇದು ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‌ಗಳಿಗೆ ದಾಖಲಾಗಲು ಮತ್ತು ಭವಿಷ್ಯದಲ್ಲಿ ಪದವಿ ಹಾಗೂ ಉನ್ನತ ವ್ಯಾಸಂಗವನ್ನು ಮುಂದುವರಿಸಲು ಉತ್ತಮ ಅವಕಾಶವನ್ನು ಒದಗಿಸಿದೆ.

ವಿದ್ಯಾರ್ಥಿಗಳು ಮತ್ತು ಪೋಷಕರು ಜುಲೈ 1, 2025 ರಂದು ಮಧ್ಯಾಹ್ನ 1:00 ಗಂಟೆಯ ನಂತರ ತಮ್ಮ ಫಲಿತಾಂಶಗಳನ್ನು https://karresults.nic.in ಜಾಲತಾಣದಲ್ಲಿ ಪಡೆಯಬಹುದಾಗಿದೆ.

ಈ ವರ್ಷದ ಪಿಯುಸಿ ಫಲಿತಾಂಶಗಳು, ವಿಶೇಷವಾಗಿ ಮೂರನೇ ಪರೀಕ್ಷೆಯ ಅವಕಾಶವು ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದ್ದು, ವಿದ್ಯಾರ್ಥಿಗಳಿಗೆ ಹೆಚ್ಚಿನ ಶೈಕ್ಷಣಿಕ ಭವಿಷ್ಯವನ್ನು ರೂಪಿಸಿಕೊಳ್ಳಲು ನೆರವಾಗಿದೆ.

Bhadravati Police ಭದ್ರಾವತಿಯಿಂದ ವ್ಯಕ್ತಿ ನಾಪತ್ತೆ. ಪೊಲೀಸ್ ಪ್ರಕಟಣೆ

0

Bhadravati Police ಆನಂದ ಕುಮಾರ್, 61 ವರ್ಷ, ಜಿಂಕ್‌ಲೈನ್, ಹೊಸಸಿದ್ದಾಪುರ, ಭದ್ರಾವತಿ ಇವರು ಏ.06 ರಂದು ಭದ್ರಾವತಿಯ ತಮ್ಮ ಮನೆಯಿಂದ ಕಾಣೆಯಾಗಿರುತ್ತಾರೆ.
ಕಾಣೆಯಾದ ವ್ಯಕ್ತಿಯು ಸುಮಾರು 5.5 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು ಕಾಣೆಯಾದ ವೇಳೆ ಕೆಂಪು ಬಿಳಿ ಮಿಶ್ರ ಬಣ್ಣದ ಗೆರೆಗಳಿರುವ ಶರ್ಟ್, ಬೂದು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಬಲ ಕೆನ್ನೆಯ ಮೇಲೆ ಒಂದು ಕಪ್ಪು ಬಣ್ಣದ ಮಚ್ಚೆ ಇದ್ದು, ಕನ್ನಡ, ತೆಲುಗು, ತಮಿಳು ಭಾಷೆ ಮಾತನಾಡುತ್ತಾರೆ. Bhadravati Police ಈತನ ಸುಳಿವು ಯಾರಿಗಾದರೂ ಪತ್ತೆಯಾದಲ್ಲಿ ನ್ಯೂಟೌನ್ ಪೊಲೀಸ್ ಠಾಣೆ ಸಂಖ್ಯೆ : 08282-274313, 08282 266549, 08282 266252 ಅಥವಾ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದೆಂದು ತಿಳಿಸಿದೆ.

Inner Wheel Institute ವೈದ್ಯರು ದೈವಸ್ವರೂಪ. ಅವರ ಸೇವೆ ಅವಿಸ್ಮರಣೀಯ- ವೀಣಾ ಸುರೇಶ್

0

Inner Wheel Institute ಆಪತ್ ಕಾಲದಲ್ಲಿ ನಮ್ಮ ಜೀವವನ್ನು ರಕ್ಷಿಸುವ ವೈದ್ಯ ದೇವರಿಗೆ ಸಮಾನ ವೈದ್ಯರ ಸೇವೆ ಅವಿಸ್ಮರಣೀಯ ಎಂದು ಇನ್ನರ್ವಿಲ್ ಕ್ಲಬ್ ಶಿವಮೊಗ್ಗ ಪೂರ್ವದ ಅಧ್ಯಕ್ಷರಾದ ವೀಣಾ ಸುರೇಶ್ ಅವರು ಅಭಿಮತ ವ್ಯಕ್ತಪಡಿಸಿದರು. ರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ ಇನ್ನರ್ ವೀಲ್ ಕ್ಲಬ್ ಶಿವಮೊಗ್ಗ ಪೂರ್ವ ವತಿಯಿಂದ ವೈದ್ಯಕೀಯ ವೃತ್ತಿಯ ಜೊತೆಗೆ ಸಮಾಜ ಸೇವೆ ಸಲ್ಲಿಸುತ್ತಿರುವ ವೈದ್ಯರಗಳನ್ನ ಗುರುತಿಸಿ ಸನ್ಮಾನಿಸಿ ಅಭಿನಂದಿಸಿ ಮಾತನಾಡಿದರು. ಇನ್ನರ್ ವೀಲ್ ಸಂಸ್ಥೆ ಸಮಾಜದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಗೌರವಿಸುವುದರ ಮುಖಾಂತರ ಅವರನ್ನು ಸಮಾಜಕ್ಕೆ ಪರಿಚಯಿಸುತ್ತಾ ಇದೆ ಈ ನಿಟ್ಟಿನಲ್ಲಿ ನಾವು ವೈದ್ಯರನ್ನು ಅವರ ಸೇವೆಯನ್ನು ಸದಾ ಗೌರವಿಸಬೇಕು ಕೆಲವು ಬಾರಿ ನಮ್ಮ ತಪ್ಪಿನಿಂದ ಅಥವಾ ಕಾಲದ ಪರಿಮಿತಿಯಿಂದ ರೋಗಿಯ ಕಾಯಿಲೆಯ ಸ್ವರೂಪದಿಂದ ಮರಣವನ್ನಪ್ಪಿದಾಗ ಅವರನ್ನ ಶಿಕ್ಷಿಸುವುದು ದೂರುವುದು ಗಲಾಟೆ ಮಾಡುವುದು ಅವಮಾನವೀಯ ಎಂದು ನೋಡಿದರು. Inner Wheel Institute ಇದೇ ಸಂದರ್ಭದಲ್ಲಿ ಇನ್ನರ ವೀಲ್ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ. ಡಾಕ್ಟರ್ ಕೌಸ್ತುಭ ಅರುಣ್. ಡಾಕ್ಟರ್ ಅಕ್ಷತಾ. ಡಾಕ್ಟರ್ ಐಶ್ವರ್ಯ. ಡಾಕ್ಟರ್ ಅರುಣ್. ಡಾ. ಅಪರ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರುಗಳಾದ ಬಿಂದು ವಿಜಯ ಕುಮಾರ್. ಜಯಂತಿ ವಾಲಿ. ವಿನೋದ ದಳವೇ. ಶ್ವೇತಾ ಆಶಿತ್. ವಿಜಯಶ್ರೀ. ಶಿಲ್ಪ ಗೋಪಿನಾಥ್. ಚೇತನ. ಹಾಗೂ ಇನ್ನರ್ವೇಲ್ ಸದಸ್ಯರು ಉಪಸ್ಥಿತರಿದ್ದರು

MESCOM ಜುಲೈ 3 ರಂದು ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

0

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜುಲೈ 03 ರಂದು ಬೆಳಿಗ್ಗೆ 11.00 ರಿಂದ 01.00 ರವರೆಗೆ ಜನಸಂಪರ್ಕ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದು, ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ತಿಳಿಸಿದೆ.

Rotary Shivamogga ನೂತನ ರೋಟರಿ‌ ಜಿಲ್ಲಾ ಗವರ್ನರ್ ಕೆ.ಫಾಲಾಕ್ಷ ಅವರಿಗೆ ಸನ್ಮಾನ

0

Rotary Shivamogga ರೋಟರಿ ಜಿಲ್ಲಾ ಗವರ್ನರ್ ಆಗಿ ಕೆ.ಪಾಲಾಕ್ಷಪ್ಪ ಅವರಿಗೆ ರೋಟರಿ ಶಿವಮೊಗ್ಗ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.

ಹಾಸನದ ಪವನಪುತ್ರ ಕನ್ವನ್ಷನ್ ಹಾಲ್‌ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ನೂತನ ಗವರ್ನರ್ ಆಗಿ ಕೆ.ಪಾಲಾಕ್ಷಪ್ಪ ಅಧಿಕಾರ ವಹಿಸಿಕೊಂಡರು. ರೋಟರಿ ಜಿಲ್ಲೆಯು ಹಾಸನ, ಚಿಕ್ಕಮಗಳೂರು, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳನ್ನು ಒಳಗೊಂಡಿರುತ್ತದೆ. ಒಂದು ವರ್ಷದ ಅವಧಿಗೆ ಗವರ್ನರ್ ಆಗಿ ಆಯ್ಕೆಯಾಗಿದ್ದಾರೆ.

ರೋಟರಿ ಅಂತರಾಷ್ಟ್ರೀಯ ಸಂಸ್ಥೆಯಾಗಿದ್ದು, ಸಮಾಜಮುಖಿ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಬಂದಿದ್ದು, ಮಹತ್ವದ ಕೊಡುಗೆಗಳನ್ನು ನೀಡುತ್ತಿದೆ. ಇಂತಹ ಪ್ರತಿಷ್ಠಿತ ಸಂಸ್ಥೆಗೆ ನೂತನ ಜಿಲ್ಲಾ ಗವರ್ನರ್ ಆಗಿ ಆಯ್ಕೆಯಾದ ಪಾಲಾಕ್ಷ ಅವರಿಗೆ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.

Rotary Shivamogga ರೋಟರಿ ನಿಯೋಜಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್, ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಡಾ. ಗುಡದಪ್ಪ ಕಸಬಿ, ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯ ನಿಯೋಜಿತ ಅಧ್ಯಕ್ಷ ನೆಪ್ಚೂನ್ ಕಿಶೋರ್‌ಕುಮಾರ್, ಮಾಜಿ ಅಧ್ಯಕ್ಷ ಎನ್.ಎಚ್.ಶ್ರೀಕಾಂತ್, ಮಂಜುನಾಥ್ ರಾವ್ ಕದಂ, ಚಂದ್ರಹಾಸ್ ಪಿ.ರಾಯ್ಕರ್, ಡಾ. ಕಡಿದಾಳ್ ಗೋಪಾಲ್, ಶಬರಿ ಕಡಿದಾಳ್, ಚಂದ್ರಶೇಖರಯ್ಯ, ವಲಯ 11ರ ಸಹಾಯಕ ಗವರ್ನರ್ ಲಕ್ಷ್ಮಣ್ ಗೌಡ, ಪ್ರಮೀಳಾ, ರೋಟರಿ ಶಿವಮೊಗ್ಗ ಪೂರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು

Karnataka Union Of Working Journalists Association ಮುದ್ರಣ & ದೃಶ್ಯ ಮಾಧ್ಯಮಗಳು ರಚನಾತ್ಮಕತೆಗೆ ಗಮನ ಕೊಡಬೇಕು- ಡಾ.ಎಚ್.ಬಿ.ಮಂಜುನಾಥ್

0

Karnataka Union Of Working Journalists Association ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳು ರೋಚಕ ಹಾಗೂ ರಂಜನಾತ್ಮಕ ಸುದ್ದಿಗಳಿಗೆ ಆದ್ಯತೆ ಕೊಡದೆ ರಚನಾತ್ಮಕತೆಯ ಬಗ್ಗೆ ಗಮನ ನೀಡಬೇಕಿದೆ ಎಂದು ಹಿರಿಯ ಪತ್ರಕರ್ತ ಡಾ ಎಚ್ ಬಿ ಮಂಜುನಾಥ ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದಾವಣಗೆರೆ ಜಿಲ್ಲಾ ವತಿಯಿಂದ ಏರ್ಪಾಡಾಗಿದ್ದ ಪತ್ರಿಕಾ ದಿನಾಚರಣೆ ನಿಮಿತ್ತವಾಗಿ ಹಿರಿಯ ಪತ್ರಕರ್ತ ದಿ ಹರಡಿಕರ್ ಮಂಜಪ್ಪನವರ ಪುತ್ಥಳಿಗೆ ಮಾಲಾರ್ಪಣೆ ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಮಾತನಾಡುತ್ತಾ ದೃಶ್ಯ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳು ಎಷ್ಟೇ ವ್ಯಾಪಕವಾದರೂ ಭಾರತದಲ್ಲಿ ಮುದ್ರಣ ಮಾಧ್ಯಮದ ಬೇಡಿಕೆಗೆ ಕುಂದು ಉಂಟಾಗಿಲ್ಲ, ಏಕೆಂದರೆ ಮುದ್ರಣ ಮಾಧ್ಯಮದ ಬಗ್ಗೆ ಜನರಲ್ಲಿ ಇನ್ನೂ ವಿಶ್ವಾಸ ಉಳಿದುಕೊಂಡಿದೆ, ದೃಶ್ಯ ಮಾಧ್ಯಮಗಳು ಹಾಗೂ ಜಾಲತಾಣಗಳು ಅವಸರದ ಸರಕಾದರೆ ಮುದ್ರಣ ಮಾಧ್ಯಮವು ದಿನಪೂರ್ತಿ ಕೂಲಂಕುಶ ಪರಿಶೀಲಿಸಿ ಮರುದಿನ ಸತ್ಯವಾಗಿದ್ದನ್ನು ಕೊಡುತ್ತವೆ ಎಂಬ ವಿಶ್ವಾಸ ಓದುಗರಲ್ಲಿ ಈಗಲೂ ಇದ್ದು ಇದನ್ನು ಉಳಿಸಿಕೊಂಡು ಹೋಗಬೇಕಿದೆ ಎಂದರು. 1884ರ ಜುಲೈ ಒಂದರಂದು ಮಂಗಳೂರಿನಲ್ಲಿ ಹರ್ಮಿನ್ ಮೋಗ್ಲಿಂಗ್ ರವರು ಮಂಗಳೂರು ಸಮಾಚಾರ ಎಂಬ ಪಾಕ್ಷಿಕ ಪತ್ರಿಕೆಯನ್ನು ಆರಂಭಿಸಿದ್ದು ಇಂದಿನ ಪತ್ರಿಕಾ ದಿನಾಚರಣೆಗೆ ಕಾರಣವಾದರೂ ಅದು ಮತಪ್ರಚಾರದ ಪತ್ರಿಕೆಯಾಗಿತ್ತು, ನಿಜವಾಗಿಯೂ ಕರ್ನಾಟಕದಲ್ಲಿ 1888 ರಲ್ಲಿ ಬಿ ನರಸಿಂಗರಾಯರು ಮಂಗಳೂರಿನಲ್ಲಿ ಕನ್ನಡದ ಮೊಟ್ಟ ಮೊದಲ ದಿನಪತ್ರಿಕೆ ಸೂರ್ಯೋದಯ ಪ್ರಕಾಶಿಕವನ್ನು ಆರಂಭಿಸಿದ್ದೇ ನಿಜವಾದ ಕನ್ನಡ ಪತ್ರಿಕೋದ್ಯಮದ ಆರಂಭಯ
ಎನ್ನಬಹುದು, ಇದರ ವರದಿಗಾರಿಕೆಯನ್ನು ಡಿ ವಿ ಗುಂಡಪ್ಪನವರೂ ಮಾಡಿದ್ದರು ಎಂದ ಹೆಚ್ ಬಿ ಮಂಜುನಾಥ್ ಭಾರತ ಪತ್ರಿಕಾ ರಂಗದ ಪಿತಾಮಹ ಬಂಗಾಳದ ರಮಾನಂದ ಚಟರ್ಜಿ ಯವರು 1907ರಲ್ಲಿ ಮಾಡ್ರನ್ ರಿವ್ಯೂ ಆಂಗ್ಲಪತ್ರಿಕೆಯನ್ನು ಪ್ರಾರಂಭಿಸಿದ್ದು ಇತಿಹಾಸವಾಗಿದೆ, ಕರ್ನಾಟಕದ ಗಾಂಧಿ ಎಂದೆ ಜನಪ್ರಿಯ ರಾಗಿದ್ದ ಹರಡೇಕರ್ ಮಂಜಪ್ಪನವರು ದಾವಣಗೆರೆಯಲ್ಲಿ 1906 ರಲ್ಲಿ ಧನುರ್ಧಾರಿ ಎಂಬ ಕನ್ನಡ ಪತ್ರಿಕೆಯನ್ನು ಆರಂಭಿಸಿದರು. Karnataka Union Of Working Journalists Association ಲೋಕಮಾನ್ಯ ಬಾಲಗಂಗಾಧರ ತಿಲಕರು ಕೇಸರಿ ಪತ್ರಿಕೆಯಲ್ಲಿ ಮರಾಠಿಯಲ್ಲಿ ಪ್ರಕಟಿಸುತ್ತಿದ್ದ ರಾಷ್ಟ್ರೀಯತೆಯನ್ನು ಉದ್ದೀಪನ ಗೊಳಿಸುವ ವರದಿಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಹರಡೇಕರ್ ಮಂಜಪ್ಪನವರು ಧನುರ್ದಾರಿಯಲ್ಲಿ ಪ್ರಕಟಿಸುತ್ತಿದ್ದರು. 1908ರಲ್ಲಿ ದಾವಣಗೆರೆಯಲ್ಲಿ ತಮ್ಮ ಸ್ವಂತ ಮುದ್ರಣಾಲಯವನ್ನು ಸಹ ಮಂಜಪ್ಪನವರು ಆರಂಭಿಸಿದರು. ಪ್ರಜಾಪ್ರಭುತ್ವದ ಕಾವಲು ಕಾಯುವವರಂತೆ ನಾಲ್ಕನೇ ಸ್ತಂಭವಾಗಿ ಇರುವ ಪತ್ರಕರ್ತರು ಹಾಗೂ ಮಾಧ್ಯಮದವರು ನಿರಂಕುಶರೇನೂ ಅಲ್ಲ, ಭಾರತೀಯ ದಂಡ ಸಂಹಿತೆಯ 437 ನೇ ವಿಧಿಯ ಸಿ ಆರ್ ಪಿ ಸಿ 1993 ವಿಭಾಗ 95 ರ ಪ್ರಕಾರ ಇವರೂ ದಂಡನಾರ್ಹರು. ಪತ್ರಿಕಾ ಸ್ವಾತಂತ್ರ್ಯವೆಂಬುದು ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಬರುತ್ತದೆ ಹೀಗಾಗಿ ಪತ್ರಿಕೆಗಳವರಾಗಲಿ ಮಾಧ್ಯಮದವರಾಗಲಿ ಎಚ್ಚರಿಕೆಯಿಂದಲೂ ವ್ಯವಹರಿಸಬೇಕಿದೆ ಎಂದರು.

ಹರಡಿಕರ್ ಮಂಜಪ್ಪನವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ ಶೆಟ್ಟಿಯವರು ಪತ್ರಿಕೆಯವರು ಮೌಲ್ಯಯುತ ವರದಿಗಾರಿಕೆಯಿಂದ ದೇಶದ ಆರ್ಥಿಕ ಅಭಿವೃದ್ಧಿ ಕಡೆಗೆ ಒತ್ತು ಕೊಡಬೇಕು, ಸರ್ಕಾರವನ್ನು ಉಳಿಸುವ ಅಥವಾ ಬೀಳಿಸುವ ಸಾಮರ್ಥ್ಯ ಪತ್ರಿಕೆ ಹಾಗೂ ಮಾಧ್ಯಮಗಳಿಗೆ ಇದೆ, ಪತ್ರಕರ್ತರಿಗೆ ಆರೋಗ್ಯ ವಿಮೆ ಅಪಘಾತ ವಿಮೆ ದೊರೆಯಬೇಕು, ಸವಲತ್ತುಗಳನ್ನು ಒದಗಿಸುವಾಗ ತಾರತಮ್ಯ ಇರಬಾರದು ಎಂದರು.

ಮಾಜಿ ಮಹಾಪೌರ ಚಮನ್ ಸಾಬ್ ಮಾತನಾಡಿ ಪತ್ರಿಕೆಗಳಾಗಲಿ ಮಾಧ್ಯಮಗಳಾಗಲಿ ಸುಳ್ಳಿನ ಸಾಮ್ರಾಜ್ಯವಾಗದೆ ನಿಜ ವರದಿಗಾರಿಕೆಗೆ ಗಮನ ಕೊಡಬೇಕೆಂದರು.

ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರಾದ ನಾಗರಾಜ ಬಡದಾಳ ಮಾತನಾಡಿ ಸ್ಪರ್ಧಾತ್ಮಕ ಯುಗದಲ್ಲಿ ಪತ್ರಿಕೆಗಳನ್ನು ಉನ್ನತಿಗೆ ಕೊಂಡೊಯ್ಯುವ ಜವಾಬ್ದಾರಿ ಮಹತ್ತರವಾಗಿದೆ, ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳ ಮೇಲಿನ ಜನರ ವಿಶ್ವಾಸವನ್ನು ಕಾಪಾಡಿಕೊಳ್ಳುವ ಪ್ರತಿಜ್ಞೆಯನ್ನು ಇಂತಹ ಆಚರಣೆಯ ದಿನ ಮಾಡಬೇಕು ಎಂದರು.

ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಇ ಎಂ ಮಂಜುನಾಥ ಅಧ್ಯಕ್ಷೀಯ ನುಡಿಗಳನ್ನಾಡುತ್ತಾ ವೃತ್ತಿ ಗೌರವವನ್ನು ವೃದ್ಧಿಸಿ ಕೊಳ್ಳುವಂತಹ ಕಾರ್ಯಗಳು ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳಿಂದ ಹೆಚ್ಚಾಗಿ ಆಗಬೇಕು ಎಂದರು.

ಸಂಘದ ಕಾರ್ಯದರ್ಶಿ ಫಕ್ರುದ್ದೀನ್ ನಿರೂಪಿಸಿ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿಯ ಹಿರಿಯ ಪತ್ರಕರ್ತ ಚಂದ್ರಣ್ಣ, ಏಕಾಂತಪ್ಪ, ತಿಪ್ಪೇಸ್ವಾಮಿ, ಕೆಜಿ ಶಿವಕುಮಾರ್, ವೇದಮೂರ್ತಿ, ಚೆನ್ನಬಸವ ಶೀಲವಂತ್, ಅನಿಲ್ ಕುಮಾರ್, ಮುದ್ದಯ್ಯ, ಅಲ್ಲಾಭಕ್ಷಿ, ಮಂಜುನಾಥ ಕಾಡಜ್ಜಿ, ಕೃಷ್ಣೋಜಿ ರಾವ್, ನಿಶಾನಿಮಠ್, ಕೃಷ್ಣ ಸಾ ಮುಂತಾದವರು ಭಾಗವಹಿಸಿದ್ದು ಸಂಘದ ಖಜಾಂಚಿ ಬದ್ರಿಪ್ರಸಾದ್ ವಂದನೆ
ಸಲ್ಲಿಸಿದರು.