ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರಿಗೆ ಉತ್ತಮ ಮತ್ತು ತುರ್ತು ಸೇವೆ ಕಲ್ಪಿಸುವ ದೃಷ್ಠಿಯಿಂದ ಮೂಲಭೂತ ಸೌಕರ್ಯಗಳಾದ ಬೀದಿ ದೀಪ ನಿರ್ವಹಣೆ, ನಗರ ಸ್ವಚ್ಛತಾ ಕಾರ್ಯ ನೀರು ಸರಬರಾಜು, ಕಟ್ಟಡ ಪರವಾನಿಗೆ, ವ್ಯಾಪಾರ ಪರವಾನಿಗೆ, ಕಂದಾಯ ನಿಗಧಿ ಇತ್ಯಾದಿ ಸೇವೆಗಳಲ್ಲಿ ವಿಳಂಬ ಮತ್ತು ವ್ಯತ್ಯವಾದಾಗ ಈ ವಿಭಾಗದ ಮುಖ್ಯಸ್ಥರನ್ನು ಅಥವಾ ಸಾರ್ವಜನಿಕ ಸಂಪರ್ಕ ಅಧಿಕಾರಿಗಳನ್ನು ಸಂಪರ್ಕಿಸಿ ದೂರು ದಾಖಲಿಸುವ ಸಲುವಾಗಿ ಅಧಿಕಾರಿಗಳ ದೂರವಾಣಿ ಸಂಖ್ಯೆ ಹಾಗೂ ಸಹಾಯವಾಣಿ ಸಂಖ್ಯೆ 18004257677 ನ್ನು ಪ್ರಕಟಿಸಿದೆ.
ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ದೂರುಗಳ ತ್ವರಿತ ನಿವಾರಣೆ ಮಾಡುಕೊಳ್ಳುವಂತೆ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.ಪಾಲಿಕೆ ಆಡಳಿತ ಹಾಗೂ ಆಶ್ರಯ ವಿಭಾಗಕ್ಕೆ ಸಂಬಂಧಿಸಿದ ದೂರು ನೀಡಲು ಉಪ ಆಯುಕ್ತರು ಪ್ರಮೋದ್ ಹೆಚ್.ಪಿ – 9538534685/6361468740, ಪಾಲಿಕೆ ವ್ಯಾಪ್ತಿಯ ವಿವಿಧ ಕಾಮಗಾರಿಗಳು, ಕಟ್ಟಡ ಪರವಾನಿಗೆ ಹಾಗೂ ಒಳಚರಂಡಿ ನಿರ್ವಹಣೆಗೆ ಸಂಬಂಧಿಸಿದಂತೆ ದೂರು ನೀಡಲು ಪಿ.ಆರ್.ಓ- ತುಷಾರ್ ಬಿ. ಹೊಸೂರ್, ಡೊಂಕಪ್ಪ – ಇಇ, ಹರೀಶ್-ಇಇ -9449651855/9448146358, ಬೀದಿ ದೀಪ ನಿರ್ವಹಣೆಗೆ ಸಂಬಂಧಿಸಿದ ದೂರು ನೀಡಲು ವಿದ್ಯುತ್ ಇಇ ಶ್ರೀಧರ್-8762288680, ನೀರು ಸರಬರಾಜು ಸಂಬಂಧಿಸಿದ ದೂರು ನೀಡಲು ರಮೇಶ್-ಇಇ (ಕೆಯುಡಬ್ಲ್ಯೂಎಸ್ &ಡಿಬಿ)-9480689673 /9480813132, ನಗರ ಸ್ವಚ್ಛತೆಗೆ ಸಂಬಂಧಿಸಿದ ದೂರು ನೀಡಲು ಪಾಲಿಕೆ ಆರೋಗ್ಯಾಧಿಕಾರಿ ಡಾ|| ಮದಕರಿನಾಯಕ ಹೆಚ್.ಬಿ.-7676135028, ವ್ಯಾಪಾರ ಪರವಾನಿಗೆ ಹಾಗೂ ಜನನ-ಮರಣ ಪ್ರಮಾಣ ಪತ್ರದ ಕುರಿತು ವಿಚಾರಿಸಲು ಅಮೋಘ್ ಎಸ್.ಕವಲಗಿ -9449324245, ಬೀಡಾಡಿ ಜಾನುವಾರುಗಳು ಹಾಗೂ ಬೀದಿ ನಾಯಿಗಳ ಉಪದ್ರವ ಕುರಿತು ದೂರ ನೀಡಲು ಪಶುವೈದ್ಯಾಧಿಕಾರಿ ಡಾ|| ರೇಖಾ ಎಸ್.ಟಿ. -9886326268, ಕಂದಾಯ ಶಾಖೆಗೆ ಸಂಬಂಧಿಸಿದಂತೆ ದೂರು ನೀಡಲು ಉಪ ಆಯುಕ್ತರು (ಕಂ) ನಾಗೇಂದ್ರ ಡಿ., ಕಂದಾಯಾಧಿಕಾರಿ ಬಾಲಾಜಿ ಮತ್ತು ಸುನೀತಾ -9880396995/ 8762019195 /9482056858/7892009461 ಗಳನ್ನು ಸಂಪರ್ಕಿಸಿ ತಮ್ಮ ಅಹವಾಲುಗಳನ್ನು ಸಲ್ಲಿಸುವುದು.
ಸಾಮಾಜಿಕ ಜಾಲತಾಣ ಟ್ವಿಟ್ಟರ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಥಾನಕ್ಕೆ ಜಾಕ್ ಡೋರ್ಸಿ ರಾಜಿನಾಮೆ ನೀಡಿದ್ದಾರೆ. ಭಾರತೀಯ ಮೂಲದ ಪರಾಗ್ ಅಗರವಾಲ್ ಅವರು ನೂತನ ಸಿಇಒ ಆಗಿ ಆಯ್ಕೆಯಾಗಿದ್ದಾರೆ. ಸಂಸ್ಥೆಯು ಸಂಸ್ಥಾಪಕರ ಹೊರತಾಗಿಯೂ ಮುಂದುವರಿಯುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ನಾನು ಟ್ವಿಟ್ಟರ್ ತೊರೆಯಲು ನಿರ್ಧರಿಸಿದ್ದೆನೆ. ಪರಾಕ್ ಅಗರ್ವಾಲ್ ಸಂಸ್ಥೆಯನ್ನು ಸಮರ್ಥಕವಾಗಿ ಮುನ್ನಡೆಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಜಾಕ್ ಡೋರ್ಸಿ ತಿಳಿಸಿದ್ದಾರೆ. ಪರಾಕ್ ಅಗರವಾಲ್ ಅವರು 2017 ರಿಂದ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಬಿಟ್ ಕಾಯಿನ್ ಕರೆನ್ಸಿ ಮಾನ್ಯತೆ ನೀಡುವ ಪ್ರಸ್ತಾಪ ಸರ್ಕಾರಕ್ಕಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಲೋಕಸಭೆಯಲ್ಲಿ ಬಗ್ಗೆ ವಿವರ ನೀಡಿದ ಸಚಿವೆ, ಬಿಟ್ ಕಾಯಿನ್ ಒಂದು ಕ್ರಿಪ್ಟೊ ಕರೆನ್ಸಿ ಆಗಿದ್ದು, ಜನರು ಸರಕು ಮತ್ತು ಸೇವೆಗಳ ಖರೀದಿಗೂ ಬಳಸುತ್ತಾರೆ. ಬ್ಯಾಂಕ್, ಕ್ರೆಡಿಟ್ ಕಾರ್ಡ್ ಇಲ್ಲದಿದ್ದರೂ ವರ್ಗಾವಣೆಗೆ ಬಳಸುಲಾಗುತ್ತದೆ. ಸರ್ಕಾರ ಕ್ರಿಪ್ಟೊ ಕರೆನ್ಸಿ ಗಳನ್ನು ನಿಯಂತ್ರಿಸಲು ಈಗ ನಡೆಯುತ್ತಿರುವ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ವಿಧೇಯಕವನ್ನು ಮಂಡಿಸಲಿದೆ. ಆದರೆ ಸರ್ಕಾರವು ಬಿಟ್ ಕಾಯಿನ್ ವರ್ಗಾವಣೆ ಕುರಿತು ಮಾಹಿತಿಗಳನ್ನು ಸಂಗ್ರಹಿಸಿಲ್ಲ ಎಂದರು. ಸರ್ಕಾರ ಕೆಲವು ಖಾಸಗಿ ಕ್ರಿಪ್ಟೋಕರೆನ್ಸಿಗಳಿಗೆ ಮಾತ್ರ ಅವಕಾಶ ನೀಡಿ ಉಳಿದವುಗಳನ್ನು ನಿಷೇಧಿಸುವ ಸಾಧ್ಯತೆ ಇದೆ.ಆರ್ ಬಿಐ ತನ್ನ ಡಿಜಿಟಲ್ ಕರೆನ್ಸಿ ಬಿಡುಗಡೆಗೊಳಿಸಲು ಅವಕಾಶ ನೀಡುವ ನಿರೀಕ್ಷೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
ಕೊರೋನಾ ರೂಪಾಂತರಿ ತಳಿ ಓಮೈಕ್ರಾನ್ ಜಗತ್ತಿನಾದ್ಯಂತ ಹರಡುತ್ತಿದೆ. ಈ ವೈರಸ್ ನನ್ನು ತಡೆಗಟ್ಟಲು, ವಿದೇಶದಿಂದ ಬಂದ ಪ್ರಯಾಣಿಕರ ಮಾಹಿತಿಯನ್ನು ಕೇಂದ್ರ ಸರ್ಕಾರವು ನಿಯಮಿತವಾಗಿ ರಾಜ್ಯಸರ್ಕಾರಗಳಿಗೆ ನೀಡಬೇಕು. ಆಗ ಮಾತ್ರ ವಿದೇಶಿ ಪ್ರಯಾಣಿಕರನ್ನು ಪತ್ತೆ ಮಾಡಲು ಸಾಧ್ಯ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಿಳಿಸಿದ್ದಾರೆ.
ಮುಂಬೈ ಮತ್ತು ಮಹಾರಾಷ್ಟ್ರದ ಬೇರೆ ವಿಮಾನ ನಿಲ್ದಾಣಕ್ಕೆ, ಬಂದಿಳಿದ ವಿದೇಶಿ ಪ್ರಯಾಣಿಕರನ್ನು ಗುರುತಿಸಲು ನಮಗೆ ಸಾಧ್ಯವಾಗುತ್ತದೆ. ಆದರೆ ಬೇರೆ ರಾಜ್ಯದ ವಿಮಾನ ನಿಲ್ದಾಣಗಳಿಗೆ ಬಂದಿಳಿದು ಅನಂತರ ಬಸ್, ರೈಲು, ಕಾರು ದೇಶ ವಿಮಾನದ ಮೂಲಕ ಮಹಾರಾಷ್ಟ್ರಕ್ಕೆ ಬರುವ ವಿದೇಶಿ ಪ್ರಯಾಣಿಕರನ್ನು ಪತ್ತೆ ಮಾಡಲು ಸಾಧ್ಯವಿಲ್ಲ. ಅವರಿಗೆ ಓಮೈಕ್ರಾನ್ ತಳಿಯಿಂದ ಕೋವಿಡ್ ಬಂದರೆ, ಅದನ್ನು ಪತ್ತೆ ಮಾಡಲು ಸಾಧ್ಯವಿಲ್ಲ ಎಂದು ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಈ ಅಪಾಯವನ್ನು ತಡೆಯಬೇಕೆಂದರೆ, ವಿದೇಶಗಳಿಂದ ಬರುವ ಎಲ್ಲಾ ಪ್ರಯಾಣಿಕರ ವಿವರವನ್ನು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ನೀಡಬೇಕು. ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ತಿಳಿಸಿದ್ದಾರೆ.
ಕೃಷ್ಣ ನದಿ ನೀರು ವಿವಾದ ನ್ಯಾಯಮಂಡಳಿ ಅಂತಿಮ ತೀರ್ಪಿನ ಕುರಿತು ಅಧಿಸೂಚನೆ ಹೊರಡಿಸಬೇಕು. ಕರ್ನಾಟಕ ಮತ್ತು ಮಹಾರಾಷ್ಟ್ರ ಸಲ್ಲಿಸಿರುವ ಅರ್ಜಿಯ ಬಗ್ಗೆ ನಿರ್ಧರಿಸಲು ಎರಡುವಾರಗಳ ಸಮಯ ನೀಡಬೇಕು ಎಂದು ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್ ಅನ್ನು ಕೇಳಿಕೊಂಡಿದೆ.
ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ ನೇತೃತ್ವದ ನ್ಯಾಯಪೀಠದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಲಾಯಿತು.
ಸರ್ಕಾರದ ಪರವಾಗಿ ಹಿರಿಯ ವಕೀಲ ವಾಸೀಂ ಖಾದ್ರಿ ಮಾತನಾಡಿದರು. ಕೇಂದ್ರ ಜಲ ಸಚಿವಾಲಯದಿಂದ ಸೂಚನೆ ಪಡೆಯಲು ಎರಡು ವಾರ ಬೇಕು ಎಂದರು. ಈ ವಿಷಯದ ಸರ್ಕಾರದ ಪರಿಗಣಿಸಲಿದೆ ಎಂದು ಅವರು ತಿಳಿಸಿದ್ದಾರೆ. ನ್ಯಾಯಪೀಠದ ಮುಂದಿನ ವಿಚಾರಣೆಯನ್ನು ಡಿಸೆಂಬರ್ 13ಕ್ಕೆ ಮುಂದೂಡಲಾಗಿದೆ.
ಕೋವಿಡ್ ಕಾರಣದಿಂದ ಆರ್ಥಿಕ ಸಂಪನ್ಮೂಲದ ಕೊರತೆಯಾಗಿದೆ. ಅದನ್ನು 30 ಸಾವಿರ ಕೈಗಾರಿಕಾ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡು ಗ್ಲೋಬಲ್ ಇನ್ವೆಸ್ಟರ್ಸ್ ಸಮಾವೇಶಕ್ಕೂ ಮೊದಲ ಮೂವತ್ತು ಸಾವಿರ ಎಕರೆಯಷ್ಟು ಕೈಗಾರಿಕಾ ಪ್ರದೇಶವನ್ನು ಹೊಂದಲು ಕೈಗಾರಿಕೆ ಇಲಾಖೆ ಮುಂದಾಗಿದೆ. ಸದ್ಯ ಆರ್ಥಿಕ ಚೇತರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಸೊರಗಿದ್ದ ಕೈಗಾರಿಕಾ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಇಲಾಖೆ ಮುಂದಾಗಿದೆ. ಸಬ್ಸಿಡಿ, ಲ್ಯಾಂಡ್ ಸೇಲ್ ಡೀಡ್ , ಪ್ರಕ್ರಿಯೆ ಸರಳಗೊಳಿಸುವ ವಾಗ್ಧಾನವನ್ನು ಮಾಡಿದೆ. ಭೂಮಿ ಲಭ್ಯತೆ ಇಲ್ಲದ ಕಾರಣಕ್ಕೆ ಟಾಟಾ ನ್ಯಾನೊ ಕಂಪನಿಯು ಹೊರರಾಜ್ಯದ ಪಾಲಾಯಿತು. ಆ ಸಂದರ್ಭದಲ್ಲಿ ನಾನೇ ಕೈಗಾರಿಕಾ ಸಚಿವನಾಗಿದ್ದೆ. ಆ ನೋವು ಇನ್ನೂ ಕಾಡುತ್ತಿದೆ. ಮತ್ತೊಮ್ಮೆ ಅಂತಹ ಸಂದರ್ಭ ಮರುಕಳಿಸದಿರಲಿ ಎಂದು 30 ಸಾವಿರ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಯೋಜಿಸಿದೆ ಎಂದು ಕೈಗಾರಿಕಾ ಸಚಿವರಾದ ಮುರುಗೇಶ್ ನಿರಾಣಿ ಅವರು ತಿಳಿಸಿದ್ದಾರೆ. ಬಂಡವಾಳ ಹೂಡಿಕೆದಾರರ ಸಮಾವೇಶದಿಂದ ರಾಜ್ಯಕ್ಕೆ ಹೆಚ್ಚಿನ ಪ್ರಮಾಣದ ಬಂಡವಾಳ ಹರಿದು ಬರಲಿದೆ. ಆದರೆ, ಹೂಡಿಕೆದಾರರಿಗೆ ಅಗತ್ಯ ಭೂಮಿ ಹಂಚಿಕೆ ಮಾಡಲು ಇಲಾಖೆ ಬಳಿ ಸಮರ್ಪಕ ಭೂಮಿಯೇ ಇಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಕೈಗಾರಿಕ ಚಟುವಟಿಕೆ ಸ್ಥಗಿತ ಗೊಂಡಿದ್ದರಿಂದ ಇಲಾಖೆಯು ಕಳೆದೆರಡು ವರ್ಷದಿಂದ ಸ್ವಾಧೀನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿತ್ತು. ಬೆಂಗಳೂರು ಸಮೀಪದ ದಾಬಸ್ ಪೇಟೆ, ರಾಮನಗರ ಬಳಿಯ ಹಾರೋಹಳ್ಳಿ, ಕೋಲಾರದ ಮಿಂಡ್ ಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆಯ ಪುಸ್ತೇನಹಳ್ಳಿ, ವಿಜಯಪುರದ ಮುಳವಾಡ, ಬಳ್ಳಾರಿಯ ಕುಡಿತಿನ , ಯಾದಗಿರಿಯಲ್ಲಿ ಫಾರ್ಮರ್ ಕ್ಲಸ್ಟರ್ ಮಾಡಲಾಗುವುದು. ಬೆಳಗಾವಿಯ ಕಣಗಲ್ , ಮೈಸೂರಿನ ಇಮ್ಮಾವು, ದಾವಣಗೆರೆ ಜಿಲ್ಲೆಯ ಕುರುಬರಹಳ್ಳಿ, ತುಮಕೂರಿನ ಶಿರಾದಲ್ಲಿ ಈಗಾಗಲೇ ಭೂಪ್ರದೇಶ ಸ್ವಾಧೀನಪಡಿಸಿಕೊಂಡು ಅಭಿವೃದ್ಧಿ ಮಾಡಲಾಗುತ್ತಿದೆ.
ಭಾರತದಲ್ಲಿ ಇದುವರೆಗೂ ಓಮೈಕ್ರಾನ್ ರೂಪಾಂತರ ತಳಿಯಿಂದ ಕೋವಿಡ್ ಪ್ರಕರಣ ದೃಢಪಟ್ಟಿಲ್ಲ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿದೇಶಗಳಿಂದ ಬಂದವರಲ್ಲಿ ಕೋವಿಡ್ ದೃಢಪಟ್ಟವರ ಗಂಟಲು ಮತ್ತು ಮೂಗಿನ ದ್ರವವನ್ನು ವೈರಾಣು ಸಂರಚನೆ ವಿಶ್ಲೇಷಣೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಯು ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾದಿಂದ ಕಳೆದವಾರ ಮಹಾರಾಷ್ಟ್ರಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರಿಗೆ ಕೋವಿಡ್ ತಗುಲಿದೆ. ಆದರೆ ಅವರಿಗೆ ಓಮೈಕ್ರಾನ್ ರೂಪಾಂತರ ತಳಿಯಿಂದ ಕೋವಿಡ್ ಬಂದಿದೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಅವರ ಗಂಟಲು ಮತ್ತು ಮೂಗಿನ ದ್ರವದ ಮಾದರಿಯನ್ನು ವೈರಾಣು ಸಂರಚನೆಗೆ ಕಳುಹಿಸಲಾಗಿದೆ. ಅದರ ವರದಿ ಬರಲು ಒಂದು ವಾರ ಬೇಕಾಗುತ್ತದೆ. ಆ ವ್ಯಕ್ತಿಯನ್ನು ಪ್ರತ್ಯೇಕ ವಾಸದಲ್ಲಿ ಇರಿಸಲಾಗಿದೆ.
ಆ ವ್ಯಕ್ತಿಯು ತನ್ನ ಕುಟುಂಬದ ಇನ್ನೂ 5 ಜನರ ಜೊತೆ ದಕ್ಷಿಣ ಆಫ್ರಿಕಾದಿಂದ ಬಂದಿದ್ದರು. 6ಜನರು ಆರ್ ಟಿ ಪಿ ಸಿ ಆರ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಅದರಲ್ಲಿ ಒಬ್ಬರಲ್ಲಿ ಮಾತ್ರ ಕೋವಿಡ್ ಇರುವುದು ಪತ್ತೆಯಾಗಿದೆ. ವ್ಯಕ್ತಿಯಲ್ಲಿ ಕೋವಿಡ್ ನ ಯಾವುದೇ ಲಕ್ಷಣ ಇಲ್ಲ. ಆದರೆ ಮಾನಸಿಕವಾಗಿ ಅವರು ಕುಗ್ಗಿದ್ದಾರೆ. ಅವರಿಗೆ ಆಪ್ತಸಮಾಲೋಚನೆ ನೀಡಲಾಗುತ್ತದೆ. ಅವರ ಆರೋಗ್ಯ ಸ್ಥಿತಿಯ ಮೇಲೆ ನಿಗಾ ವಹಿಸಲಾಗಿದೆ. ಅವರ ವಾಪಾಸಾದ ದಿನದಿಂದ ಅವರು ಸಂಪರ್ಕಕ್ಕೆ ಬಂದಿದ್ದ ವ್ಯಕ್ತಿಗಳನ್ನು ಪತ್ತೆ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮಹಾರಾಷ್ಟ್ರ ಸರ್ಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಮಗೆ ಬೇಕಾದಾಗ ಮತ್ತು ಉಪಯೋಗಿಸುವ ಹೊತ್ತಿನಲ್ಲಿ ಮಾತ್ರ ಸಾರ್ವಜನಿಕ ಆಸ್ತಿ ನಮ್ಮದು. ಇನ್ನುಳಿದಂತೆ ಸಾರ್ವಜನಿಕ ಆಸ್ತಿ ನಮ್ಮದಲ್ಲವೇ ಅಲ್ಲ. ಅದು ಸರ್ಕಾರಕ್ಕೆ ಸೇರಿದ್ದು. ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವ , ಕಾಪಾಡುವ ಜವಾಬ್ದಾರಿ ನಮ್ಮೆಲ್ಲರದ್ದೂ ಆಗಿದೆ. ಆದರೆ ಅದನ್ನು ನಮ್ಮ ಜನ ಸರ್ಕಾರದ ಸಂಬಳ ಪಡೆಯುವ ಅಧಿಕಾರಗಳದ್ದೇ ಹೊಣೆಗಾರಿಕೆ ಅನ್ನುವ ಹಾಗೆ ವರ್ತಿಸುತ್ತಾರೆ. ಸಾರ್ವಜನಿಕ ಗ್ರಂಥಾಲಯಗಳು, ಶಾಲಾ ಕಾಲೇಜು, ಸಾರ್ವಜನಿಕ ಶೌಚಾಲಯ, ಹಾಸ್ಟೆಲ್ ಗಳು, ಸಾರ್ವಜನಿಕ ಪಾರ್ಕ್ ಗಳು, ಸಾರ್ವಜನಿಕ ಬಸ್ ನಿಲ್ದಾಣ, ರೈಲುಗಳು ಇವೆಲ್ಲವೂ ಸಾರ್ವಜನಿಕ ಪ್ರಾಪರ್ಟಿ ಎಂದೆನಿಸಿಕೊಳ್ಳುತ್ತದೆ. ಸಾರ್ವಜನಿಕ ಆಸ್ತಿಯ ನಿರ್ವಹಣೆ ಹೇಗಿದೆ ಎಂಬುದರ ಮೇಲೆ ಸಮಾಜವೊಂದರ ಅಭಿವೃದ್ಧಿಯು ಅಳೆಯಲ್ಪಡುತ್ತದೆ. ಉಚಿತವಾಗಿ ಅಥವಾ ಕಡಿಮೆ ಖರ್ಚಿನಲ್ಲಿ ಜನರೆಲ್ಲ ಉಪಯೋಗಿಸಬಹುದಾದ ಇಂಥ ಸಾರ್ವಜನಿಕ ಆಸ್ತಿಗಳು ಸುಸ್ಥಿರ ಸಮಾಜಕ್ಕೆ ಬಹುಮುಖ್ಯವಾದವು. ಚಿಕ್ಕ ಉದಾಹರಣೆ ಹೇಳುವುದಾದರೆ, ಸಾರ್ವಜನಿಕ ಶೌಚಾಲಯಗಳು, ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಅಗತ್ಯವಿರುವ ಕಡೆ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಪಬ್ಲಿಕ್ ಟಾಯ್ಲೆಟ್ ಗಳನ್ನು ಬಳಸಿದ ನಂತರ ಶುಚಿಯಾಗಿಡುವುದಿಲ್ಲ. ಅನಗತ್ಯವಾಗಿ ನೀರನ್ನು ಪೋಲು ಮಾಡುತ್ತಾರೆ. ಗೋಡೆಗಳ ಮೇಲೆ ಅಸಹ್ಯವಾದ ಬರಹಗಳನ್ನು ಗೀಚುವವರು ತಮ್ಮ ಮನೆಯಲ್ಲಿ ಯಾಕೆ ಹೀಗೆ ಮಾಡುವುದಿಲ್ಲ? ಎಂಬ ಪ್ರಶ್ನೆ ಮೂಡುತ್ತದೆ. ರೈಲುಗಳಲ್ಲಿ ಪ್ರಯಾಣಿಸುವಾಗ ಟೀ ಕಪ್ ಗಳು, ಮಂಡಕ್ಕಿ ಪೇಪರ್, ಹಣ್ಣಿನ ಸಿಪ್ಪೆಗಳನ್ನು ತಾವು ಕೂತ ಸೀಟಿನಡಿಯೇ ಎಸೆಯುತ್ತಾರೆ. ಕಸದ ಬುಟ್ಟಿಗಳಿದ್ದರೂ ಅದನ್ನು ಉಪಯೋಗಿಸುವವರು ವಿರಳ. ಬಸ್ಸಿಗೆ ಕಲ್ಲು ಹೊಡೆಯುವುದು, ಬೆಂಕಿ ಹಚ್ಚುವುದು, ಪೊಲೀಸರ ಮೇಲೆ ಕಲ್ಲು ತೂರುವುದೂ ಹೀಗಿಲ್ಲ ಮಾಡುವುದರ ಮೂಲಕ ಸರ್ಕಾರಕ್ಕೆ ಪಾಠ ಕಲಿಸುತ್ತಿದ್ದೆವೆ ಎಂದು ಮೂರ್ಖರಂತೆ ವರ್ತಿಸುತ್ತಾರೆ. ಯಾವುದೋ ರೂಪದಲ್ಲಿ ಸಮಾಜಕ್ಕೆ ಬರಬೇಕಿದ್ದ ಹಣ ಈ ನಷ್ಟವನ್ನು ಸರಿದೂಗಿಸಲು ಉಪಯೋಗವಾದರೆ ನಿಜವಾಗಿಯೂ ನಷ್ಟ ಯಾರಿಗೆ? ನಮಗೇ ಅಲ್ಲವೇ… ಅಪರಾಧ ಚಿಕ್ಕದಾದರೂ ದೊಡ್ಡದಾದರೂ ಅದು ಅಪರಾಧವೇ ಎನ್ನುವುದನ್ನು ಎಲ್ಲರೂ ನೆನಪಿಸಿಕೊಳ್ಳಬೇಕು. ಕಚೇರಿಯ ಕೆಲಸ ಮುಗಿದ ಮೇಲೆ ಸ್ವಂತ ಕೆಲಸ ಮಾಡಲಿಕ್ಕೆಂದು ಬೇರೆಯೇ ಮೇಣದಬತ್ತಿ ಇಟ್ಟುಕೊಳ್ಳುತ್ತಿದ್ದ ಮಹಾನುಭಾವರೂ ನಮ್ಮ ದೇಶದಲ್ಲಿದ್ದರು ಎಂದರೆ ಅದೀಗ ನಂಬಲಾಗದ ವಿಚಾರ. ನಾವು ಕಸವನ್ನು ಪಕ್ಕದ ಸೈಟಿಗೆ ಎಸೆಯಬಹುದು, ಆದರೆ ಬೇರೆಯವರು ಎಸೆಯಬಾರದು. ಇನ್ನು ನೀರಿನ ಉಪಯೋಗದಲ್ಲಂತೂ ಬಿಡಿ. ಮುನ್ಸಿಪಾಲ್ಟಿಯ ನೀರು ತಾನೆ ಬರಲಿ ಬಿಡಿ.. ಹಾಗೆಯೇ ಸುರಿಯಲಿ ಬಿಡಿ. ಆದರೆ ನಮ್ಮ ಬಾವಿಯ ನೀರನ್ನು ಸ್ವಲ್ಪವೂ ವ್ಯರ್ತವಾಗಲು ಬಿಡುವುದಿಲ್ಲ. ಬಸ್ಸುಗಳ ಸೀಟಿನ ಎದುರಿಗೆ, ಕಾಲೇಜಿನ ಬೆಂಚುಗಳ ಮೇಲೆ ಎಲ್ಲಿಂದರಲ್ಲಿ ಬರೆಯುವವರು ಕಡಿಮೆಯೇ.? ಮನೆ ಬಾಗಿಲಿಗೆ ಕಸ ತೆಗೆದುಕೊಂಡು ಹೋಗುವ ವಾಹನ ಬಂದರೂ ಅದಕ್ಕೆ ಕಸ ನೀಡದೇ ಮನೆ ಮುಂದಿನ ಕಾಲುವೆಗೊ ಪಕ್ಕದ ಮನೆಯವರ ಸೈಟಿಗೊ ಎಸೆಯುವವರು ಬಹಳ ಮಂದಿ ಇದ್ದಾರೆ. ಸಾರ್ವಜನಿಕ ಅಭಿವೃದ್ಧಿಯ ರಕ್ಷಣೆಗೆ ಸಾರ್ವಜನಿಕ ಆಸ್ತಿಯನ್ನು ಜೋಪಾನ ಮಾಡುವ ಕರ್ತವ್ಯ ನಮ್ಮಲ್ಲರದ್ದು ಆಗಿದೆ. ಸಾರ್ವಜನಿಕ ಗ್ರಂಥಾಲಯಗಳಿಂದ ಪುಸ್ತಕ ಕದಿಯುವುದು, ಹಾಳೆಗಳನ್ನು ಹರಿಯುವುದು, ಹತ್ತಾರು ಕಡೆ ಇಂಥ ಪುಟ ನೋಡಿ ಎಂದು ಬರೆಯುವುದು ಇವೆಲ್ಲ ಏಕೆ ಮಾಡುತ್ತೇವೆಯೋ ಇಂದಿಗೂ ಗೊತ್ತಿಲ್ಲ. ಶಾಲೆಯಲ್ಲಿ ಪೆನ್ಸಿಲ್ ಕದ್ದ ಮಗನಿಗೆ ತಂದೆ, ಯಾಕಪ್ಪ ಶಾಲೆಯಲ್ಲಿ ಕದ್ದೆ? ಹೇಳಿದರೆ ನಾನೇ ಕಚೇರಿಯಿಂದ ತಂದು ಕೊಡುತ್ತಿದ್ದೆನಲ್ಲಾ ಎಂದು ಹೇಳುವುದು ಖಂಡಿತಾ ಜೋಕ್ ಅಲ್ಲ. ಕಚೇರಿಯ ವಾಹನಗಳನ್ನು ಮನೆ ಮಂದಿಯ ಉದ್ಯೋಗಕ್ಕೆ ಮೀಸಲಾಗಿಡುವ ಸರ್ಕಾರಿ ನೌಕರರು ಸಾರ್ವಜನಿಕ ಆಸ್ತಿಯನ್ನು ಸ್ವಂತಕ್ಕಾಗಿ ಬಳಸುತ್ತಾ ಜನಸಾಮಾನ್ಯರಿಗೆ ನ್ಯಾಯ, ನಿಷ್ಠೆಯ ಪಾಠ ಮಾಡುತ್ತಾರೆ. ನಾವು ಹೇಗಿದ್ದರೂ ಜನರೆಲ್ಲ ಸರಿ ಇರಬೇಕು ಎಂದು ನಿರೀಕ್ಷಿಸುವವರೇ ಜಾಸ್ತಿ. ಯಾವಾಗಲೂ ನಾವು ಇತರರಿಗೆ ಏನನ್ನು ನೀಡುತ್ತೆವೆಯೋ ಅದೇ ನಮಗೆ ವಾಪಸ್ ಸಿಗುತ್ತದೆ. ಅದಕ್ಕೆ ನಮ್ಮ ಪೂರ್ವ ಜನರು ಕೊಟ್ಟಿದ್ದು ತನಗೆ ಎಂದು ಹೇಳಿದ್ದು. ಆದರೆ ನಾವದನ್ನು ಮರೆತುಬಿಡುತ್ತೇವೆ. ಅಪ್ರಾಮಾಣಿಕತೆಯನ್ನು ನಾವು ರೂಡಿಸಿಕೊಂಡು ಪ್ರಮಾಣಿಕತೆಯನ್ನು ಸಮಾಜದಿಂದ ನಿರೀಕ್ಷಿಸುವುದು ಎಷ್ಟು ಮೂರ್ಖತನವಲ್ಲವೇ? … ಅದಕ್ಕಾಗಿಯೇ ಮನುಷ್ಯನ ಮನಸ್ಸಿನ ಸ್ವಭಾವವನ್ನು ವಿಚಿತ್ರ ಎನ್ನುವುದು. ಬಿತ್ತಿದ್ದು ಬೇವಾದರೂ ರುಚಿಯಾದ ಮಾವಿನ ಹಣ್ಣನ್ನು ತಿನ್ನಲು ಬಯಸುತ್ತದೆ. ಎಲ್ಲರ ಹತ್ತಿರವೂ ಕೊಪ್ಪರಿಗೆಗೆ ಹಾಲು ಹಾಕಲು ಹೇಳಿದಾಗ ತಾನೊಬ್ಬ ನೀರು ಹಾಕಿದರೆ ಯಾರಿಗೆ ಗೊತ್ತಾಗುತ್ತದೆ ಎಂದು ನೀರು ಹಾಕಿದವರೆಲ್ಲರೂ ಕೊಪ್ಪರಿಗೆ ತುಂಬಾ ಹಾಲನ್ನೇ ನಿರೀಕ್ಷಿಸಿದ್ದರು. ನೀರು ಸುರಿದ ಕೊಪ್ಪರಿಗೆಯಲ್ಲಿ ಹಾಲು ಇರಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ನಾವು ಅಪ್ರಾಮಾಣಿಕರಾಗಿದ್ದು, ಜಗತ್ತು ನೆಟ್ಟಗಿರಲಿ ಸಾಧ್ಯವೇ ಇಲ್ಲ…. ವಿಚಿತ್ರ ನೋಡಿ, ಬಸ್ಸಿನಲ್ಲಿ ಐದನೇ ಕ್ಲಾಸಿನ ಮಗನ ಹತ್ತಿರ ಮೂರನೇ ಕ್ಲಾಸ್ ಎಂದು ಸುಳ್ಳು ಹೇಳಿಸಿ ಅರ್ಧ ಟಿಕೆಟ್ ನ 10 ರೂಪಾಯಿ ಉಳಿಸಿ ಬೀಗುವ ಇದೇ ಮನಸ್ಸು, ಅಧಿಕಾರಿಗಳ ಭ್ರಷ್ಟಾಚಾರದ ವಿರುದ್ಧ ರೊಚ್ಚಿಗೇಳುತ್ತದೆ. ಇದು ಭ್ರಷ್ಟಾಚಾರವಲ್ಲವೇ? ಇದು ಅರ್ಥವಾದರೂ ಅರ್ಥವಾಗದಂತೆ ಇರುವ ಜನರೇ ಹೆಚ್ಚು. ನಾವು ಮಾತ್ರ ಸರಿ, ಜಗತ್ತಿನ ಎಲ್ಲರೂ ಮೂರ್ಖರು ಎಂದುಕೊಳ್ಳುವುದರ ಮೂಲಕ ನಾವು ಬೇರೆ ಯಾರನ್ನೋ ಅಲ್ಲ, ನಮ್ಮನ್ನೇ ವಂಚಿಸಿಕೊಳ್ಳುತ್ತಿದ್ದೆವೆ. ಸ್ವಾರ್ಥ ಮತ್ತು ಆತ್ಮವಂಚನೆಯ ಹಾದಿ ನಿರೀಕ್ಷಿತ ಗುರಿಯನೆಂದೂ ತಲುಪದು, ಸಾರ್ವಜನಿಕ ಆಸ್ತಿ ಇರಲಿ, ಸಾಮಾಜಿಕ ಮೌಲ್ಯಗಳಿರಲಿ ಈ ಎಚ್ಚರ ಎಂದಿಗೂ ಅಗತ್ಯ. ನಿಮಗೇನನಿಸುತ್ತದೆ?.. ಇನ್ನಾದರೂ ಬಸ್ಸಿನಿಂದ, ಕಾರಿನಿಂದ, ಬಿಸ್ಕಿಟ್ ಕವರ್, ಚಾಕ್ಲೇಟ್ ರಾಪರ್, ಅಥವಾ ಹಣ್ಣಿನ ಸಿಪ್ಪೆಯನ್ನೆಲ್ಲಾ ರಸ್ತೆಗೆಸೆಯುತ್ತ, ‘ಡೆನ್ಮಾರ್ಕ್ , ಸಿಂಗಾಪುರ ಸಿಟಿ ಎಷ್ಟು ಕ್ಲೀನ್ ಇದೇರೀ ‘ ಎನ್ನುವ ಮುನ್ನ ಕೊಂಚ ಯೋಚಿಸೋಣವೇ?…
ಕರೋನ ವೈರಸ್ನ ಓಮಿಕ್ರಾನ್ ರೂಪಾಂತರವು ಉಲ್ಬಣಗಳ ಜಾಗತಿಕ ಅಪಾಯವನ್ನು ಹೊಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ಹೆಚ್ಚಿನ ದೇಶಗಳು ಪ್ರಕರಣಗಳನ್ನು ವರದಿ ಮಾಡಿದ್ದರಿಂದ, ಗಡಿ ಮುಚ್ಚುವಿಕೆಯನ್ನು ಪ್ರೇರೇಪಿಸುತ್ತದೆ ಮತ್ತು ಎರಡು ವರ್ಷಗಳ ಸಾಂಕ್ರಾಮಿಕ ರೋಗದಿಂದ ಆರ್ಥಿಕ ಚೇತರಿಕೆಯ ಬಗ್ಗೆ ಚಿಂತೆಗಳನ್ನು ಮಾಡಲಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಮೊದಲು ಗುರುತಿಸಲಾದ ಓಮಿಕ್ರಾನ್ನ ತೀವ್ರತೆಯನ್ನು ಅರ್ಥಮಾಡಿಕೊಳ್ಳಲು ವಾರಗಳು ತೆಗೆದುಕೊಳ್ಳಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅದರ ಹೊರಹೊಮ್ಮುವಿಕೆಯು ಪ್ರಬಲವಾದ ಜಾಗತಿಕ ಪ್ರತಿಕ್ರಿಯೆಗಳನ್ನು ಉಂಟುಮಾಡಿದೆ.ಇದು ದೇಶಗಳು ಪ್ರಯಾಣದ ನಿರ್ಬಂಧಗಳು ಮತ್ತು ಇತರ ನಿರ್ಬಂಧಗಳನ್ನು ವಿಧಿಸಲು ಕಾರಣವಾಗಿದೆ. ಸ್ಪೋಕ್ಡ್ ಹೂಡಿಕೆದಾರರು ಶುಕ್ರವಾರ ಜಾಗತಿಕ ಷೇರುಗಳಿಂದ ಸರಿಸುಮಾರು 2 ಟ್ರಿಲಿಯನ್ ಅನ್ನು ನಾಶಪಡಿಸಿದರು. ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾದ ಜಪಾನ್ ತನ್ನ ಗಡಿಯನ್ನು ಮುಚ್ಚುವುದಾಗಿ ಹೇಳಿದ ನಂತರವೂ ಹಣಕಾಸು ಮಾರುಕಟ್ಟೆಗಳು ಶಾಂತವಾಗಿದ್ದವು. ಸೋಂಕುಗಳ ಯಾವುದೇ ಉಲ್ಬಣವು ‘ತೀವ್ರ ಪರಿಣಾಮಗಳನ್ನು’ ಉಂಟುಮಾಡಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯು ಸಲಹೆ ನೀಡಿದೆ. ಸದ್ಯ 194 ಸದಸ್ಯ ರಾಷ್ಟ್ರಗಳಲ್ಲಿ ಓಮಿಕ್ರಾನ್ ರೂಪಾಂತರಕ್ಕೆ ಸಂಬಂಧಿಸಿದ ಯಾವುದೇ ಸಾವುಗಳು ಇಲ್ಲಿಯವರೆಗೆ ವರದಿಯಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ – ಜನರಲ್ ಟೆಡ್ರೊಸ್ ಅಧಾನೊಮ್ ಘೆಬ್ಟೆಯೆಸಸ್ ಹೇಳಿದ್ದಾರೆ. ಒಮಿಕ್ರಾನ್ನ ತುರ್ತು ಪರಿಸ್ಥಿತಿಯು ಎಷ್ಟು ಅಪಾಯಕಾರಿ ಎಂದು ತೋರಿಸಿದೆ. ಸಾಂಕ್ರಾಮಿಕ ರೋಗದ ಬಗ್ಗೆ ಹೊಸ ಒಪ್ಪಂದವನ್ನು ಅನುಸರಿಸಲು ಜಿನೀವಾದಲ್ಲಿ ಆರೋಗ್ಯ ಮಂತ್ರಿಗಳನ್ನು ಭೇಟಿ ಮಾಡಲು ಕರೆ ನೀಡಲಾಗಿದೆ ಎಂದರು. ಸ್ಕಾಟ್ಲೆಂಡ್ 6 ಓಮಿಕ್ರಾನ್ ಪ್ರಕರಣಗಳನ್ನು ವರದಿ ಮಾಡಿದೆ. ಇದರಲ್ಲಿ ಯಾರೂ ದಕ್ಷಿಣ ಆಫ್ರಿಕಾ ಪ್ರಯಾಣಕ್ಕೆ ಸಂಬಂಧಿಸಿಲ್ಲ. ಕರೋನ ವೈರಸ್ ರೂಪಾಂತರವು ಈಗಾಗಲೇ ಸಮುದಾಯದಲ್ಲಿ ಹರಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದೆ. ಒಟ್ಟಾರೆಯಾಗಿ ಬ್ರಿಟನ್, ಹೊಸ ರೂಪಾಂತರದ ಒಂಬತ್ತು ಪ್ರಕರಣಗಳನ್ನು ವರದಿ ಮಾಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ತಿಳಿಸಿದೆ. ಈ ಕೊರೊನಾ ರೂಪಾಂತರಿಯು ಅಂತರಾಷ್ಟ್ರೀಯವಾಗಿ ಹರಡುವ ಸಾಧ್ಯತೆಯಿದೆ ಮತ್ತು ಸೋಂಕಿನ ಉಲ್ಬಣಗಳ ಅಪಾಯವನ್ನುಂಟು ಮಾಡುತ್ತದೆ ಎಂದು ಹೇಳಿದೆ. ಕೊರೊನಾ ರೂಪಾಂತರಿಯು ಹರಡುವುದನ್ನು ನಿಧಾನಗೊಳಿಸುವ ಪ್ರಯತ್ನಕ್ಕಾಗಿ ಯುನೈಟೆಡ್ ಕಿಂಗ್ಡಮ್ನ ನಾಲ್ಕು ರಾಷ್ಟ್ರಗಳು ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣ ನಿರ್ಬಂಧ ಹೇರಿವೆ. ಅಲ್ಲಿ ಕಳೆದ ವಾರ ಮೊದಲ ಬಾರಿಗೆ ರೂಪಾಂತರಿವನ್ನು ಕಂಡುಹಿಡಿಯಲಾಯಿತು. ಆದರೆ ಸ್ಕಾಟಿಷ್ ಮೊದಲ ಮಂತ್ರಿ ನಿಕೋಲಾ ಸ್ಟರ್ಜನ್, ಅವರು, ಕೊರೊನಾ ರೂಪಾಂತರಿಯ ಪ್ರಕರಣಗಳ ಸಮಯದ ಚೌಕಟ್ಟನ್ನು ಗಮನಿಸಿದರೆ, ಎಲ್ಲಾ ಆರು ಪ್ರಕರಣಗಳು ಇತ್ತೀಚಿನ ಪ್ರಯಾಣದ ಇತಿಹಾಸವನ್ನು ಹೊಂದಿಲ್ಲ ಅಥವಾ ದಕ್ಷಿಣ ಆಫ್ರಿಕಾದ ಪ್ರಯಾಣಿಸಿದ ಇತರರೊಂದಿಗೆ ಸಂಪರ್ಕಗಳನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಇದು ಈ ತಿಂಗಳ ಆರಂಭದಲ್ಲಿ ಗ್ಲಾಸ್ಗೋದಲ್ಲಿ ನಡೆದ COP26 ಹವಾಮಾನ ಬದಲಾವಣೆ ಸಮ್ಮೇಳನಕ್ಕೆ ಲಿಂಕ್ ಇರುವುದು ಅಸಂಭವವಾಗಿದೆ ಆದರೆ ಅಸಾಧ್ಯವಲ್ಲ ಎಂದು ಸ್ಟರ್ಜನ್ ಹೇಳಿದ್ದಾರೆ.
ರಾಜ್ಯ ಸರ್ಕಾರ ಹಸುಗಳ ಸಂಖ್ಯೆ ವೃದ್ಧಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಲಿಂಗ ನಿರ್ಧಾರಿತ ವೀರ್ಯ ಬಳಕೆ ಪ್ರಕ್ರಿಯೆ ಚುರುಕುಗೊಳಿಸಲು 2022 ಜನವರಿಯಿಂದ ಅಭಿಯಾನ ಆರಂಭಿಸಲಿದೆ.
ದೇಶಾದ್ಯಂತ ಕೇಂದ್ರ ಸರ್ಕಾರ ಮೂರು ಕಡೆ ಪ್ರಯೋಗಾಲಯಗಳನ್ನು ಆರಂಭಿಸಿದೆ. ಈ ಪ್ರಯೋಗಾಲಯದಲ್ಲಿ ರೈತರಿಗೆ ಆರ್ಥಿಕ ಹೊರೆಯಾಗಿ ಬಾದಿಸಿರುವ ಗಂಡು ಕರುಗಳ ಬದಲಾಗಿ ಹೆಣ್ಣು ಕರು ಜನಿಸುವಂತೆ ವೀರ್ಯವನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಈ ಮೂಲಕ ರಾಜ್ಯಕ್ಕೆ 2ಲಕ್ಷ ವೀರ್ಯ ಪೂರೈಕೆಯಾಗುವ ಸಾಧ್ಯವಿದೆ.
ವೀರ್ಯ ಬಳಕೆ ಪ್ರಕ್ರಿಯೆ ಈಗಾಗಲೇ ಚಾಲ್ತಿಯಲ್ಲಿದ್ದರೂ ಒಂದು ಬಾರಿಗೆ 900 ರಿಂದ 1000 ದರ ನಿಗದಿಗೊಳಿಸಲಾಗಿದೆ. ಸರ್ಕಾರ ಸಬ್ಸಿಡಿಯೊಂದಿಗೆ ರೈತರಿಗೆ 450 ಸೌಲಭ್ಯ ನೀಡಲಾಗುತ್ತಿದೆ. ಆದರೆ ಲಿಂಗ ನಿರ್ಧರಿತ ವಿಜಯಕ್ಕೆ 450.ರೂ ನೀಡಲು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಗಂಡುಗಳ ಜನನವಾಗುತ್ತದೆ. ಈ ನಿಟ್ಟಿನಲ್ಲಿ ರೈತರಿಗೆ ವೆಚ್ಚ ತಗ್ಗಿಸಲು 90% ಸಬ್ಸಿಡಿ ನೀಡುವ ಚಿಂತನೆಯನ್ನು ಪಶುಸಂಗೋಪನಾ ಇಲಾಖೆ ಹೊಂದಿದೆ. ಜನವರಿಯಿಂದ 50 ರೂಪಾಯಿಗೆ ಹೆಣ್ಣು ಕರು ಜನನಕ್ಕೆ ಪೂರಕವಾದ ವೀರ್ಯ ಸಿಗಲಿದ್ದು 92% ದರಕ್ಕೆ ಇಳಿಸಲಾಗುವುದೆ. ಅಭಿಯಾನದಿಂದ ರಾಜ್ಯದ ಹೈನೋದ್ಯಮ ಮತ್ತಷ್ಟು ಸುಧಾರಿಸುವ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ.
“ಗೋಶಾಲೆ ಮತ್ತು ರೈತರ ಆರ್ಥಿಕ ನಷ್ಟ ಕಡಿಮೆಗೊಳಿಸಲು ಹೆಣ್ಣು ಕರುಗಳ ಜನನ ಪ್ರಮಾಣ ಹೆಚ್ಚಿಸುವ ಚಿಂತನೆಯಿದೆ. ಈ ಪ್ರಯೋಗಕ್ಕೆ ಪ್ರತ್ಯೇಕಗೊಂಡ ವೀರ್ಯ ಬಳಕೆಯ ಮೊತ್ತಕ್ಕೆ ಸಬ್ಸಿಡಿ ಹೆಚ್ಚಿಸುವ ಚಿಂತನೆ ಇದೆ” ಎಂದು ಪಶುಸಂಗೋಪನಾ ಇಲಾಖೆ ಸಚಿವ ಪ್ರಭು ಚೌಹಾಣ್ ತಿಳಿಸಿದ್ದಾರೆ.