Thursday, March 19, 2026
Thursday, March 19, 2026
Home Blog Page 1484

ತಾಯಿ ಎದೆಹಾಲು ಅಮೃತ ಸಮಾನ

0

ಹೊಸ ಜಗತ್ತಿಗೆ ಕಾಲಿಟ್ಟ ಮಗುವಿಗೆ ತಾಯಿಯ ಎದೆಹಾಲೇ ಜೀವ ಸಂಜೀವಿನಿ.
ಪ್ರತಿವರ್ಷ ಆಗಸ್ಟ್ 1-7ರವರೆಗೆ ಬ್ರೆಸ್ಟ್‌ ಫೀಡಿಂಗ್‌ ವೀಕ್ (ಸ್ತನಪಾನ ವಾರ) ಎಂದು ಆಚರಿಸಲಾಗುತ್ತದೆ.

1990ರಿಂದ ವಿಶ್ವಸಂಸ್ಥೆ, ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಇತರ ಸಂಸ್ಥೆಗಳು ಸೇರಿ ಸ್ತನಪಾನದ ಬಗ್ಗೆ ಮತ್ತಷ್ಟು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬ್ರೆಸ್ಟ್‌ ಫೀಡಿಂಗ್ ವೀಕ್ ಆಚರಿಸಲಾಗುತ್ತದೆ.

ಸ್ತನಪಾನ ಮಾಡುವುದು ತಾಯಿ ಹಾಗೂ ಮಗುವಿನ ಆರೋಗ್ಯದ ದೃಷ್ಟಿಯಿಂದ ಬಹುಮುಖ್ಯ. ಸ್ತನಪಾನದಿಂದ ಪ್ರತಿವರ್ಷ ವಿಶ್ವದಾದ್ಯಂತ 8 ಲಕ್ಷ ಜೀವ ಉಳಿಸಲು ಸಾಧ್ಯವಾಗುತ್ತಿದೆ, ಅದರಲ್ಲೂ 6 ತಿಂಗಳಿಗಿಂತ ಚಿಕ್ಕ ಮಕ್ಕಳಿಗೆ ಪೋಷಕಾಂಶದ ಕೊರತೆ ಉಂಟಾಗದಿರಲು ಹಾಗೂ ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸ್ತನಪಾನ ಅವಶ್ಯಕ.

ಸಹಜವಾಗಿ ಹೆರಿಗೆಯನ್ನು ಅನುಭವಿಸಿದ್ದ ಮಹಿಳೆ ಒಂದು ಗಂಟೆಯೊಳಗೆ ಮಗುವಿಗೆ ಹಾಲುಣಿಸಬೇಕು. ಅದೇ ಸಿಜೇರಿಯನ್/ಶಸ್ತ್ರಚಿಕಿತ್ಸೆಯ ಮೂಲಕ ಮಗುವನ್ನು ಪಡೆದಿದ್ದರೆ ಅಂತಹ ತಾಯಂದಿರು ನಾಲ್ಕು ಗಂಟೆಯೊಳಗೆ ಎದೆಹಾಲನ್ನು ಉಣಿಸಬೇಕು. ಪ್ರತಿಯೊಂದು ತಾಯಿ ತನ್ನ ಮಗುವಿಗೆ ಆರು ತಿಂಗಳಗಳ ಕಾಲ ಕೇವಲ ಎದೆಹಾಲನ್ನು ಉಣಿಸಬೇಕು. ನಂತರ ಮಗುವಿನ ಬೆಳವಣಿಗೆ ಆದಂತೆ ಸ್ವಲ್ಪ ಸ್ವಲ್ಪವೇ ಮೃದು ಆಹಾರ, ಹಣ್ಣಿನ ರಸಗಳನ್ನು ನೀಡಬಹುದು. ತಾಯಿಗೆ ಹಾಲಿನ ಕೊರತೆ ಇಲ್ಲದೆ ಹೋದರೆ ಮಗುವಿಗೆ ಎರಡು ವರ್ಷಗಳ ಕಾಲ ಹಾಲುಣಿಸಬಹುದು. ಇದು ಮಗುವಿನ ಬೆಳವಣಿಗೆಗೆ ಅತ್ಯಂತ ಅಗತ್ಯವಾದ ಅಮೃತ ಎನ್ನಬಹುದು ಎಂದು ವೈದ್ಯರು ಹೇಳುತ್ತಾರೆ.

ಆದರೆ ಇತ್ತೀಚಿನ ದಿನದಲ್ಲಿ ಕೆಲಸದ ಒತ್ತಡ ಹಾಗೂ ಫ್ಯಾಷನ್ ಹೆಸರಿನಲ್ಲಿ ಬಹುತೇಕ ಮಹಿಳೆಯರು ತಮ್ಮ ಮಕ್ಕಳಿಗೆ ಕಡಿಮೆ ಅವಧಿಯ ವರೆಗೆ ಹಾಲನ್ನು ಉಣಿಸುತ್ತಾರೆ. ಇದರಿಂದ ಮಗುವಿನ ಆರೋಗ್ಯವು ಬಹುಬೇಗ ಹದಗೆಡುವುದು. ಆದರೆ ಇದರ ಬಗ್ಗೆ ಯಾರು ಹೆಚ್ಚಿನ ಚಿಂತನೆ ನಡೆಸುವುದಿಲ್ಲ. ಮಗುವಿಗೆ ತಾಯಿಯ ಎದೆಹಾಲು ಆರೋಗ್ಯಕರವಾದ ಪೋಕಾಂಶಗಳನ್ನು ನೀಡುತ್ತದೆ. ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯಮಾಡುವುದು. ಅಲ್ಲದೆ ತಾಯಿಯ ಆರೋಗ್ಯದಲ್ಲೂ ಸಾಕಷ್ಟು ಉತ್ತಮ ಬದಲಾವಣೆಗಳು ಉಂಟಾಗುತ್ತವೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಹಾಲುಣಿಸುವಾಗ ತಾಯಂದಿರು ಅನುಸರಿಸಬೇಕಾದ ಕ್ರಮಗಳು ಹೀಗಿವೆ.
ಹಾಲುಣಿಸುವಾಗ ಕೆಲವು ಎಚ್ಚರಿಕೆಯನ್ನು ತಾಯಂದಿರು ಗಮನಿಸಬೇಕಾಗುವುದು. ಮಗುವಿಗೆ ಉಸಿರುಗಟ್ಟುವಂತೆ ಮಾಡಿಕೊಂಡು ಹಾಲುಣಿಸಬಾರದು. ತೆರೆದ ಗಾಳಿ ಹಾಗೂ ಸುಲಭವಾಗಿ ಹಾಲುಣುವಂತೆ ಮಾಡಿಕೊಡಬೇಕು. ಕುಳಿತುಕೊಂಡೇ ಹಾಲುಣಿಸುವುದನ್ನು ರೂಢಿಸಿಕೊಳ್ಳಬೇಕು. ಮನೆಯಲ್ಲಿ ಇರುವಾಗ ಪ್ರತ್ಯೇಕ ಕೋಣೆಯಲ್ಲಿ ಆರಾಮವಾಗಿ ಕುಳಿತು, ಮಗುವಿಗೂ ತೊಂದರೆ ಉಂಟಾಗದಂತೆ ಮಾಡಿಕೊಂಡು ಹಾಲುಣಿಸಬೇಕು. ಎರಡು ಗಂಟೆಗಳಿಗೊಮ್ಮೆ ಮಗುವಿಗೆ ಹಾಲುಣಿಸುವ ರೂಢಿಯನ್ನು ಇಟ್ಟುಕೊಂಡರೆ ಮಗುವು ಆರೋಗ್ಯಯುತವಾಗಿ ಬೆಳವಣಿಗೆಯನ್ನು ಕಾಣುವುದು. ಜೊತೆಗೆ ತಾಯಿಗೂ ಎದೆಹಾಲು ಕಟ್ಟಿಕೊಳ್ಳುವ ಹಾಗೂ ನೋವು ಬರುವುದು ತಡೆಯಬಹುದು.

ಕೆಲವರು ಎದೆಹಾಲಿಗೆ ಪರ್ಯಾಯವಾಗಿ ಬೇರೆ ಆಹಾರವನ್ನು ನೀಡುವರು. ಇದರಿಂದ ಮಗುವಿನ ಜೀರ್ಣಕ್ರಿಯೆಯ ಮೇಲೆ ಸಾಕಷ್ಟು ಪರಿಣಾಮ ಉಂಟಾಗುತ್ತದೆ. ಬಹುತೇಕ ತಾಯಂದಿರಿಗೆ ಯಾವ ರೀತಿಯ ಕಾಳಜಿ ಹಾಗೂ ಎದೆಹಾಲನ್ನು ಉಣಿಸುವ ಸರಿಯಾದ ಮಾರ್ಗದರ್ಶನ ಇರುವುದಿಲ್ಲ. ಹಾಗಾಗಿಯೇ ವಿಶ್ವ ಸ್ತನ್ಯಪಾನ ವಾರದ ಪ್ರಯುಕ್ತ ಎದೆ ಹಾಲನ್ನು ಉಣಿಸುವ ರೀತಿ ಹಾಗೂ ಸೂಕ್ತ ಮಾರ್ಗದರ್ಶನಗಳನ್ನು ಈ ಮುಂದೆ ನೀಡಲಾಗಿದೆ.

ಸ್ತನ್ಯಪಾನಕ್ಕಾಗಿ ಸಲಹೆಗಳು ನೋಡುವುದಾದರೆ ಹೀಗಿವೆ.

ಮಗುವಿನ ಹಾವ ಭಾವಗಳನ್ನು ಹೆಚ್ಚು ಗಮನಿಸಬೇಕಾಗುವುದು. ಮಗು ಅಳುವುದು ಹಸಿವಿನ ಚಿಹ್ನೆ. ನಿಮ್ಮ ಮಗುವಿಗೆ ಅವನು / ಅವಳು ಹಸಿವಿನಿಂದ ಬಳಲುತ್ತಿದ್ದಾಳೆ ಎಂದು ಖಚಿತಪಡಿಸಿಕೊಳ್ಳಲು ಬೇರೂರಿಸುವಿಕೆ, ತುಟಿಗಳನ್ನು ನೆಕ್ಕುವುದು, ಕೈಗಳಿಂದ ಬಾಯಿಯನ್ನು ಸ್ಪರ್ಶಿಸುವುದು ಮುಂತಾದ ವರ್ತನೆಯನ್ನು ತೋರುತ್ತಾರೆ. ಆಗ ನೀವು ಮಗುವಿಗೆ ಹಸಿವಾಗಿದೆ ಎನ್ನುವುದನ್ನು ಅರಿಯಬೇಕು. ಮಗು ಬೆಳೆದಂತೆ ನಿಮ್ಮ ಮಗುವಿನ ಅಗತ್ಯತೆಗಳು ಬದಲಾಗುತ್ತವೆ. ನೀವು ಹೆಚ್ಚಾಗಿ ಅಥವಾ ಹೆಚ್ಚು ಸಮಯದವರೆಗೆ ಸ್ತನ್ಯಪಾನ ಮಾಡಬೇಕಾಗಬಹುದು. ನಿಮ್ಮ ಮಗುವಿಗೆ ಹಾಲುಣಿಸುವಾಗ ಗಡಿಯಾರವನ್ನು ನೋಡಬೇಡಿ ಮತ್ತು ನಿಮ್ಮ ಪ್ರವೃತ್ತಿಗೆ ಅನುಗುಣವಾಗಿ ಹೋಗಬೇಡಿ. ಮಗುವಿಗೆ ಹೊಟ್ಟೆ ತುಂಬಿದ ಬಳಿಕ ಹಾಲುಕುಡಿಯುವುದನ್ನು ನಿಲ್ಲಿಸುತ್ತದೆ. ಅದರ ಆಧಾರದ ಮೇಲೆ ನೀವು ಹಾಲುಣಿಸುವುದನ್ನು ನಿಲ್ಲಿಸಬೇಕು.

ಧೂಮಪಾನ ಮಾಡಬೇಡಿ
ಸ್ತನ್ಯಪಾನ ಮಾಡುವ ಮೊದಲು ಅಥವಾ ಸಮಯದಲ್ಲಿ ಧೂಮಪಾನ ಮಾಡಬೇಡಿ. ಏಕೆಂದರೆ ಧೂಮಪಾನವು ಹಾಲಿನ ಪೂರೈಕೆಯನ್ನು ಕಡಿಮೆ ಮಾಡುತ್ತದೆ. ಆರೋಗ್ಯ ಸಮಸ್ಯೆಗಳಿಗೆ ತೀವ್ರ ಅಪಾಯಗಳನ್ನುಂಟುಮಾಡುವುದರ ಹೊರತಾಗಿ, ಇದು ಹಾಲಿನ ರುಚಿಯ ಜೊತೆಗೆ ನಿಮ್ಮ ಮಗುವಿನ ನಿದ್ರೆಯ ಮೇಲೂ ಪರಿಣಾಮ ಬೀರುತ್ತದೆ.

ಸೆಕೆಂಡ್ ಹ್ಯಾಂಡ್ ಹೊಗೆ ಕೂಡ ಹಠಾತ್ ಶಿಶು ಸಾವಿನ ಸಿಂಡ್ರೋಮ್, ಬಾಲ್ಯದ ಆಸ್ತಮಾ, ಬ್ರಾಂಕೈಟಿಸ್ ಮತ್ತು ನ್ಯುಮೋನಿಯಾದಂತಹ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.

ತಾಯಿಯ ಎದೆಹಾಲು ಹೆಚ್ಚಿಸಲು ಮನೆಮದ್ದುಗಳು
ಚೆನ್ನಾಗಿ ನೀರು ಮತ್ತು ಹಾಲು ಕುಡಿಯಿರಿ
ನೀರು ಮತ್ತು ಹಾಲು ದೇಹದ ಎಲ್ಲಾ ಕಾರ್ಯಗಳಿಗೆ ನೀರು ಅಗತ್ಯವಾಗಿರುವಂತೆಯೇ ತಾಯಿಹಾಲಿನ ಉತ್ಪಾದನೆಯಲ್ಲಿಯೂ ನೀರು ಅಗತ್ಯವಾಗಿದೆ. ಈ ಅಗತ್ಯವನ್ನು ಪೂರೈಸುವಲ್ಲಿ ಅತ್ಯುತ್ತಮವಾದುದು ಹಸುವಿನ ಹಾಲು. ಇದರಲ್ಲಿ ಶೇಖಡಾ ಎಂಭತ್ತು ಅಪ್ಪಟ ನೀರು ಇರುವುದರಿಂದ ಹಾಗೂ ಹಾಲಿನಲ್ಲಿರುವ ಇತರ ಪೋಷಕಾಂಶಗಳು ತಾಯಿಹಾಲಿನ ಉತ್ಪಾದನೆಯನ್ನು ಹೆಚ್ಚಿಸುತ್ತವೆ.

ಬೇರೆ ಸಮಯದಲ್ಲಿ ಎಂಟು ಲೋಟ ನೀರು ನಿಮಗೆ ಅಗತ್ಯವಿದೆ. ಪ್ರಥಮ ತಿಂಗಳುಗಳಲ್ಲಿ ಈ ಪ್ರಮಾಣವನ್ನು ಸುಮಾರು ಹನ್ನೆರಡು ಲೋಟಗಳಿಗೆ ಹೆಚ್ಚಿಸುವುದು ಒಳಿತು.

ಬೆಳ್ಳುಳ್ಳಿ ಜೀರ್ಣಶಕ್ತಿಯನ್ನು ಹೆಚ್ಚಿಸುವ ಬೆಳ್ಳುಳ್ಳಿಗೆ ತಾಯಿಹಾಲನ್ನು ಹೆಚ್ಚಿಸುವ ಶಕ್ತಿಯೂ ಇದೆ. ಮೂರು ಎಸಳು ಬೆಳ್ಳುಳ್ಳಿಯನ್ನು ಚಿಕ್ಕದಾಗಿ ಕೊಚ್ಚಿ ಒಂದು ಲೋಟ ನೀರಿನಲ್ಲಿ ಕುದಿಸಿ. ಕುದಿಬಂದ ಬಳಿಕ ಜ್ವಾಲೆಯನ್ನು ಚಿಕ್ಕದಾಗಿಸಿ ಈ ನೀರು ಕಾಲುಭಾಗವಾಗುವವರೆಗೂ ಮುಂದುವರೆಸಿ. ಈಗ ಒಂದು ಕಪ್ ಹಸುವಿನ ಹಾಲನ್ನು ಹಾಕಿ ಮತ್ತೊಮ್ಮೆ ಕುದಿ ಬರಿಸಿ. ಕುದಿಬಂದ ಬಳಿಕ ಇಳಿಸಿ ಸೋಸಿ ಅರ್ಧ ಚಮಚ ಜೇನು ಸೇರಿಸಿ ಕಲಕಿ. ಈ ದ್ರವವನ್ನು ಪ್ರತಿದಿನ ಬೆಳಿಗ್ಗೆ ಕುಡಿಯಿರಿ. ಸುಮಾರು ಆರು ತಿಂಗಳವರೆಗೂ ಇದನ್ನು ಕುಡಿಯುವುದು ಶ್ರೇಯಸ್ಕರ.

ಪ್ರತಿದಿನ ಕೆಲವು ಬಾದಾಮಿ ಮತ್ತು ಗೋಡಂಬಿಗಳನ್ನು ಕುರುಕುವ ಮೂಲಕವೂ ತಾಯಿಹಾಲನ್ನು ಹೆಚ್ಚಿಸಬಹುದು. ಆದರೆ ಒಂದು ದಿನಕ್ಕೆ ಹತ್ತಕ್ಕಿಂತ ಹೆಚ್ಚು ಬಾದಾಮಿ ಅಥವಾ ಗೋಡಂಬಿಯನ್ನು ಸೇವಿಸಬೇಡಿ.

ಬೀಟ್‌ರೂಟ್, ಕ್ಯಾರೆಟ್ ಮತ್ತು ಸಿಹಿಗೆಣಸುಗಳನ್ನು ಹೆಚ್ಚಾಗಿ ಸೇವಿಸಿ
ಬೀಟ್‌ರೂಟ್, ಕ್ಯಾರೆಟ್ ಮತ್ತು ಸಿಹಿಗೆಣಸುಗಳಲ್ಲಿ ತಾಯಿಹಾಲನ್ನು ಹೆಚ್ಚಿಸುವ ಪೋಷಕಾಂಶಗಳಿವೆ. ಇವುಗಳನ್ನು ಸಾಧ್ಯವಾದಷ್ಟು ಹಸಿಯಾಗಿ ಸೇವಿಸಿ. ತೆಳುವಾದ ಬಿಲ್ಲೆಗಳಂತೆ ಕತ್ತರಿಸಿ ಪ್ರತಿ ಊಟದಲ್ಲಿ ಸಲಾಡ್ ರೂಪದಲ್ಲಿ ಸೇವಿಸಿ. ಇದರಲ್ಲಿ ಬೀಟ್ ರೂಟ್ ಅತ್ಯುತ್ತಮವಾಗಿದೆ.

ತುಳಸಿ ಎಲೆಗಳಲ್ಲಿ ಅತ್ಯುತ್ತಮ ಪ್ರಮಾಣದ ವಿಟಮಿನ್ ಕೆ. ಇದೆ. ಈ ಪೋಷಕಾಂಶ ರಕ್ತಹೆಪ್ಪುಗಟ್ಟುವ ಶಕ್ತಿಯನ್ನು ಹೆಚ್ಚಿಸುವ ಜೊತೆಗೇ ತಾಯಿಹಾಲನ್ನು ಹೆಚ್ಚಿಸಲೂ ನೆರವಾಗುತ್ತದೆ. ಈಗ ತಾನೇ ಹೂಬಿಟ್ಟ ತುಳಸಿ ಗಿಡದ ಎಲೆಗಳು ತಾಯಿಹಾಲಿಗೆ ಅತ್ಯುತ್ತಮವಾಗಿವೆ. ಹೂಗಳ ಕೆಳಭಾಗದ ಸುಮಾರು ಹತ್ತು ಎಲೆಗಳನ್ನು ಚೆನ್ನಾಗಿ ಕೊಚ್ಚಿ ಒಂದು ಲೋಟ ನೀರಿಗೆ ಹಾಕಿ ಕುದಿಸಿ. ಒಂದು ನಿಮಿಷ ಕುದಿದ ಬಳಿಕ ಉರಿಯನ್ನು ತುಂಬಾ ಚಿಕ್ಕದಾಗಿಸಿ ಐದು ನಿಮಿಷ ಬಿಡಿ. ಬಳಿಕ ಈ ನೀರನ್ನು ನೋಸಿ ಎರಡು ಹನಿ ಜೇನುತುಪ್ಪವನ್ನು ಸೇರಿಸಿ. ತಣಿದ ಬಳಿಕ ಈ ನೀರನ್ನು ದಿನಕ್ಕೆರಡು ಬಾರಿ ಕುಡಿಯಿರಿ. (ಒಂದು ಬಾರಿಗೆ ಅರ್ಧ ಕಪ್). ಮಗುವಿಗೆ ಆರು ತಿಂಗಳು ತುಂಬುವವರೆಗೂ ಈ ನೀರನ್ನು ಕುಡಿಯಬಹುದು.

ಅನುದಾನ ರಹಿತ ಶಾಲೆಗಳ ಮಾನ್ಯತೆ & ನವೀಕರಣಕ್ಕೆ ಅವಧಿ ವಿಸ್ತರಣೆ

0

ಅನುದಾನರಹಿತ ಶಾಲೆಗಳ ಪ್ರಥಮ ಮಾನ್ಯತೆ ಹಾಗೂ ಮಾನ್ಯತೆ ನವೀಕರಣಕ್ಕೆ ಅರ್ಜಿ ಸಲ್ಲಿಸಲು ಆ.12ರವರೆಗೆ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ.

ಮಾನ್ಯತೆಯನ್ನು ಪಡೆಯದ ಶಾಲೆಗೆ ಆರ್‍ಟಿಇ ಶುಲ್ಕ ಮರುಪಾವತಿ ಹಾಗೂ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ವಿದ್ಯಾರ್ಥಿಯನ್ನು ನಿಯಮಾನುಸಾರ ಹಾಜರುಪಡಿಸಲು ಸಾಧ್ಯವಿಲ್ಲ. ಮಾನ್ಯತೆ ಪಡೆಯದ ಶಾಲೆಗಳನ್ನು ಅನಧಿಕೃತ ಶಾಲೆಗಳು ಎಂದು ಪರಿಗಣಿಸಲಾಗುವುದು ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಕಟನೆಯಲ್ಲಿ ತಿಳಿಸಿದೆ.

2022-23ನೇ ಸಾಲಿನಲ್ಲಿ ಅರ್ಜಿ ಸಲ್ಲಿಸದಿರುವ ಶಾಲೆಗಳ ಆಡಳಿತ ಮಂಡಳಿಗಳು ಅಂತಿಮವಾಗಿ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ.
ಒಮ್ಮೆ ಅರ್ಜಿ ಸಲ್ಲಿಸಿ ತಿರಸ್ಕೃತಗೊಂಡಿದ್ದರೆ ಶುಲ್ಕದೊಂದಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಸೂಚಿಸಿದೆ.

ಮತ್ತೆ ಶಿಮುಲ್ ಅಧ್ಯಕ್ಷ ಪಟ್ಟಕ್ಕೆ ಶ್ರೀಪಾದ ರಾವ್

0

ಶಿವಮೊಗ್ಗ , ಚಿತ್ರದುರ್ಗ, ದಾವಣಗೆರೆ ಹಾಲು ಉತ್ಪಾದಕರ ಒಕ್ಕೂಟ ಶಿಮುಲ್ ಅಧ್ಯಕ್ಷ ಸ್ಥಾನಕ್ಕೆ ಜನವರಿ ಒಂದರಂದು ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದ ಶ್ರೀಪಾಲ್ ಅವರನ್ನು ಆ ಸಿಂಧುಗೊಳಿಸಿದ್ದ ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶವನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ದ್ವಿಸದಸ್ಯ ಪೀಠ ರದ್ದುಗೊಳಿಸಿದೆ.

ಹೀಗಾಗಿ ,ನಿಸರಾಣಿ ಎನ್.ಎಚ್. ಶ್ರೀಪಾದ್ ರಾವ್ ಮತ್ತೆ ಶಿಮುಲ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಸ್ಥಳೀಯ ಹಾಲು ಉತ್ಪಾದಕರ ಸಹಾಯಕ ಸಂಘಗಳಲ್ಲಿ ಬರುವ ಲಾಭವನ್ನು ಮೀಸಲು ನಿಧಿಯಾಗಿ ಸಹಕಾರ ಬ್ಯಾಂಕುಗಳಲ್ಲಿ ಬಾಂಡ್ ರೂಪದಲ್ಲಿ ಇಡಬೇಕಾದ ನಿಯಮ ಉಲ್ಲಂಘಿಸಿದ ಆಪಾದನೆಯ ಮೇರೆಗೆ ಚೆನ್ನಗಿರಿ ತಾಲೂಕು ಕಂಚುಗಾರನಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿದ್ದ ಎಚ್.ಕೆ.ಬಸಪ್ಪ, ಶಿಕಾರಿಪುರ ತಾಲೂಕು ಹಿರೇಜಮ್ಮೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿದ್ದ ಟಿ. ಶಿವಶಂಕರಪ್ಪ ಅವರನ್ನು ನಿರ್ದೇಶನ ಸ್ಥಾನದಿಂದ ವಜಾಗೊಳಿಸಲಾಗಿತ್ತು.

ಇದರ ಪರಿಣಾಮ, ಶಿಮುಲ್ ನಲ್ಲಿ ಅಧಿಕಾರಿಗಳು ಸೇರಿ ಬಿಜೆಪಿ ಬೆಂಬಲಿತರ ಸಂಖ್ಯೆ 8ಕ್ಕೆ ಏರಿಕೆಯಾಗಿತ್ತು. ಅದೇ ಕಾಂಗ್ರೆಸ್ ಬೆಂಬಲಿತರ ಸಂಖ್ಯೆಯು ಏಳಕ್ಕೆ ಕುಸಿತ ಕಂಡಿತ್ತು .

ಶಿವಮೊಗ್ಗದಲ್ಲಿ ವಿಕ ಎಜುಕೇಷನ್ ಫೇರ್

0

ವಿಜಯ ಕರ್ನಾಟಕ ಪತ್ರಿಕೆಯ ಸಹಯೋಗದಲ್ಲಿ ಆಗಸ್ಟ್ 6 ಮತ್ತು 7ರಂದು ಒಕ್ಕಲಿಗರ ಸಮುದಾಯ ಭವನ ಬಾಲರಾಜ್ ಅರಸ್ ರಸ್ತೆ ಶಿವಮೊಗ್ಗದಲ್ಲಿ ಎಜುಕೇಶನ್ ಫೇರ್ ನಡೆಯಲಿದೆ.

ಫೇರ್ ನಲ್ಲಿ ಕೆಇಎ ಅಧಿಕಾರಿಗಳಿಂದ ಕೆಸಿಇಟಿ ಮತ್ತು ಕಾಮೆಡ್ -ಕೆ ಕುರಿತು ಸಮಾಲೋಚನೆ, ಉನ್ನತ ವಿಶ್ವ ವಿದ್ಯಾಲಯಗಳ ಮತ್ತು ಪ್ರತಿಷ್ಠಿತ ಕಾಲೇಜುಗಳಲ್ಲಿರುವ ವಿದ್ಯಾರ್ಥಿ ವೇತನ ಕುರಿತು ಪ್ರತಿ ವಿದ್ಯಾರ್ಥಿ ,ಪಾಲಕ ಪೋಷಕರಿಗೆ ತಜ್ಞರಿಂದ ಮಾಹಿತಿ ದೊರೆಯಲಿದೆ.

ವೃತ್ತಿಪರ ಕೋರ್ಸ್ ಗಳಿಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಯಲಿದೆ. ಅತಿ ಹೆಚ್ಚು ವಿಶ್ವವಿದ್ಯಾಲಯಗಳು ಕಾಲೇಜುಗಳು ಒಂದೇ ಸೂರಿನಡಿ ಭಾಗವಹಿಸುತ್ತಿರುವುದು ಗಮನಾರ್ಹ

ಸ್ವಾತಂತ್ರ್ಯೋತ್ಸವದಲ್ಲಿ ಡಾ.ರಾಜ್ ಮತ್ತು ಡಾ.ಪುನೀತ್ ಜೀವನ ಬಿಂಬಿಸುವ ಪುಷ್ಪಗಳ ವಿನ್ಯಾಸ

0

ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸದ ಅಂಗವಾಗಿ ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಕರ್ನಾಟಕ ರತ್ನ ದಿವಂಗತ ಡಾ . ರಾಜ್‌ಕುಮಾರ್‌ ಮತ್ತು ಡಾ. ಪುನೀತ್‌ ರಾಜ್‌ಕುಮಾರ್‌ ಅವರ ಜೀವನ ಕುರಿತು ಹೂವುಗಳ ಮೂಲಕ ಪ್ರದರ್ಶಿಸಲು ಊಟಿ, ಕೆಮ್ಮಣ್ಣುಗುಂಡಿ ಸೇರಿದಂತೆ ವಿವಿಧ ಭಾಗಗಳಿಂದ ಹಲವು ಬಗೆಯ ವೈವಿಧ್ಯಮಯ ಹೂವುಗಳನ್ನು ತರಿಸಲಾಗಿದೆ.

ಜೊತೆಗೆ, ಲಾಲ್‌ಬಾಗ್‌ನಲ್ಲೇ ಬೆಳೆಸಿದ ವಿದೇಶಿ ತಳಿಯ ಅಪರೂಪದ ಹೂವುಗಳು ಪ್ರದರ್ಶನದಲ್ಲಿ ಕಣ್ಮನ ಸೆಳೆಯಲು ಸಜ್ಜಾಗುತ್ತಿದೆ. ರಾಜ್ಯ ತೋಟಗಾರಿಕೆ ಇಲಾಖೆ ಹಾಗೂ ಮೈಸೂರು ಉದ್ಯಾನ ಕಲಾ ಸಂಘಗಳ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಪ್ರದರ್ಶನ ಆಗಸ್ಟ್‌ 5ರಿಂದ 15ರವರೆಗೆ ನಡೆಯಲಿದೆ. ಇದಕ್ಕಾಗಿ ಲಾಲ್‌ಬಾಗ್‌ ಹಾಗೂ ಸುತ್ತಮುತ್ತ ಸುಮಾರು 50 ಸಾವಿರ ಹೂವಿನ ಕುಂಡಗಳು, ಜತೆಗೆ ಎಚ್‌ಎಎಲ್‌ ನರ್ಸರಿ, ಬಿಡಿಎ, ಬಿಬಿಎಂಪಿ ಮತ್ತಿತರ ಸಂಸ್ಥೆಗಳು ಪ್ರದರ್ಶನಕ್ಕೆಂದೇ ಬೆಳೆಸಿರುವ ನಾನಾ ಹೂವು, ತರಕಾರಿಗಳನ್ನು ತರಿಸಿಕೊಂಡು ಬೆಳೆಸಿದೆ. ಒಟ್ಟಾರೆ ಸುಮಾರು 1.25 ಲಕ್ಷಕ್ಕೂ ಹೆಚ್ಚು ಪಾಟ್‌ಗಳು ಪ್ರದರ್ಶನದಲ್ಲಿ ಜೋಡಣೆಯಾಗುತ್ತಿದೆ. ನೂರಾರು ಕಾರ್ಮಿಕರು ಸಿದ್ಧತಾ ಕಾರ್ಯದಲ್ಲಿ ತೊಡಗಿದ್ದಾರೆ

ಪ.ಜಾತಿ/ ಪ.ವರ್ಗ, ಓಬಿಸಿ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಗೆ ಪ್ರವೇಶಾತಿ ಆಹ್ವಾನ

0

2022-23ನೇ ಸಾಲಿಗೆ ಶಿವಮೊಗ್ಗ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ನಗರದಲ್ಲಿ ಹೊಸದಾಗಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯವನ್ನು ಪ್ರಾರಂಭಿಸಲಾಗಿದೆ.

ಪರಿಶಿಷ್ಟ ವರ್ಗದ ವಿದ್ಯಾರ್ಥಿನಿಯರಿಗೆ ಶೇ.75, ಪರಿಶಿಷ್ಟ ಜಾತಿ ಮತ್ತು ಓಬಿಸಿ ಹಾಗೂ ಹಾಗೂ ಇತರ ವರ್ಗದವರಿಗೆ ಶೇ.25ರಷ್ಟು ಅವಕಾಶ ಕಲ್ಪಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ತಾಲೂಕು ಸಮಾಜ ಕಲ್ಯಾಣ ಇಲಾಖೆ ದೂ:08182-240512ಅನ್ನು ಸಂಪರ್ಕಿಸಬಹುದು.

ಗುಡ್ ನ್ಯೂಸ್ ಸ್ಥಳೀಯ ಸಂಸ್ಥೆ ನೌಕರರಿಗೆ ಕನಿಷ್ಠ ವೇತನ ಜಾರಿಗೆ

0

ರಾಜ್ಯದಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವಂತ ನೌಕರರಿಗೆ ಸರ್ಕಾರ ಕನಿಷ್ಠ ವೇತನವನ್ನು ಜಾರಿಗೊಳಿಸುತ್ತಿದೆ. ಹೀಗಾಗಿ ವೇತನದಲ್ಲಿ ಭಾರಿ ಹೆಚ್ಚಳವಾಗಲಿದೆ.
ಆ ವೇತನ ಪರಿಷ್ಕರಣೆಯಂತೆ ನಿಮಗೆ ವೇತನ ಸಿಗಲಿದೆ.

ಈ ಕರಡು ಅಧಿಸೂಚನೆಗೆ ಸಲಹೆ, ಆಕ್ಷೇಪಣೆಗಳು, ಕರಡು ಪ್ರಸ್ತಾವನೆಯನ್ನು ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಮುಂದೆ ಮಂಡಿಸಲಾಗಿತ್ತು ಎಂದು ತಿಳಿಸಿದ್ದಾರೆ.

ಈ ಹಿಂದಿನ ಎಲ್ಲಾ ಅಧಿಸೂಚನೆಗಳನ್ನು ರದ್ದುಪಡಿಸಿ, ಕರ್ನಾಟಕ ರಾಜ್ಯಾಧ್ಯಂತ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಉದ್ಯೋಗ ಉದ್ದಿಮೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಈ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ ಅನ್ವಯವಾಗುವಂತೆ ಕನಿಷ್ಠ ವೇತನವನ್ನು ಪರಿಷ್ಕರಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಸಂಬಂಧ ಕಾರ್ಮಿಕ ಇಲಾಖೆಯ ಕನಿಷ್ಠ ವೇತನ ವಿಭಾಗದ ಪೀಠಾಧಿಕಾರಿಗಳು ಅಧಿಸೂಚನೆಯನ್ನು ಹೊರಡಿಸಿದ್ದಾರೆ. ಈ ಅಧಿಸೂಚನೆಯಂತೆ ರಾಜ್ಯಾಧ್ಯಂತ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಉದ್ಯೋಗ ಉದ್ದಿಮೆಯಲ್ಲಿ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನ ಕೋಷ್ಟಕದಲ್ಲಿ ನಿರ್ದಿಷ್ಟ ಪಡಿಸಿರುವಂತ ಕನಿಷ್ಠ ವೇತನ ದರಗಳನ್ನು ಪರಿಷ್ಕರಿಸಲು ರಾಜ್ಯ ಸರ್ಕಾರದ ಕರಡು ಪ್ರಸ್ತಾವನೆಯನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿದೆ ಎಂದಿದ್ದಾರೆ.

ಅಕ್ಟೋಬರ್ ನಲ್ಲಿ 5G ಸೇವೆ ಲಭ್ಯ-ಅಶ್ವಿನಿ ವೈಷ್ಣವ್

0

ಅಕ್ಟೋಬರ್‌ ತಿಂಗಳಿನಿಂದ 5G ಸೇವೆ ಲಭ್ಯವಾಗುವ ನಿರೀಕ್ಷೆ ಇದೆ. ಆಗಸ್ಟ್ 10ರೊಳಗೆ 5G ಸ್ಪೆಕ್ಟ್ರಮ್‌ ಹಂಚಿಕೆ ಮಾಡಲಾಗುವುದು. ಅಕ್ಟೋಬರ್‌ನಲ್ಲಿ 5ಜಿ ಸೇವೆ ಲಭ್ಯವಾಗಲಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ಅವರು ತಿಳಿಸಿದ್ದಾರೆ.

5G ಆಗಮನದ ನಂತರ ಕರೆ ಗುಣಮಟ್ಟವು ಸುಧಾರಿಸುವ ನಿರೀಕ್ಷೆಯಿದೆ ಎಂದಿದ್ದಾರೆ.

ಸರ್ಕಾರವು 10 ಬ್ಯಾಂಡ್‌ಗಳಲ್ಲಿ ಸ್ಪೆಕ್ಟ್ರಮ್ ಆಫರ್ ಅನ್ನು ಹಾಕಿತ್ತು. ಆದರೆ 600 MHz ನಲ್ಲಿ ಏರ್‌ವೇವ್‌ಗಳಿಗೆ ಯಾವುದೇ ಬಿಡ್‌ಗಳನ್ನು ಸ್ವೀಕರಿಸಲಿಲ್ಲ. ಬಹುತೇಕ 5G ಬ್ಯಾಂಡ್‌ಗಳಿಗೇ ಬಂದಿದ್ದರೆ, 700 Mhz ಬ್ಯಾಂಡ್‌ಗೂ ಅಲ್ಪ ಬೇಡಿಕೆ ಬಂದಿದೆ. ಹಿಂದಿನ 2 ಹರಾಜುಗಳಲ್ಲಿ 2016 ಹಾಗೂ 2021ರಲ್ಲಿ ಇವು ಮಾರಾಟವಾಗದೇ ಉಳಿದಿವೆ. ಸರ್ಕಾರ ಸ್ಪೆಕ್ಟ್ರಂ ಹರಾಜಿನಲ್ಲಿ ದಾಖಲೆಯ 1.5 ಲಕ್ಷ ಕೋಟಿ ರೂ. ಬಿಡ್‌ಗಳನ್ನು ಸ್ವೀಕರಿಸಿದೆ.

ಮುಖೇಶ್ ಅಂಬಾನಿ ಅವರ ಜಿಯೋ 88,078 ಕೋಟಿ ರೂ. ಬಿಡ್‌ನೊಂದಿಗೆ ಮಾರಾಟವಾದ ಎಲ್ಲಾ ಏರ್‌ವೇವ್‌ಗಳಲ್ಲಿ ಅರ್ಧದಷ್ಟು ಭಾಗವನ್ನು ಆಕ್ರಮಿಸಿಕೊಂಡಿದೆ. ಇನ್ನು ಉದ್ಯಮಿ ಗೌತಮ್ ಅದಾನಿ ಗ್ರೂಪ್‌ ಹರಾಜಿನಲ್ಲಿ ಮುಖೇಶ್‌ ಅಂಬಾನಿ ಅವರಿಗೆ ಪೈಪೋಟಿ ನೀಡಿದೆ.

ಟೆಲಿಕಾಂ ಉದ್ಯಮಿ ಸುನಿಲ್ ಭಾರ್ತಿ ಮಿತ್ತಲ್ ಅವರ ಭಾರ್ತಿ ಏರ್‌ಟೆಲ್ 43,084 ಕೋಟಿ ರೂಪಾಯಿಗಳ ಯಶಸ್ವಿ ಬಿಡ್ ಮಾಡಿದೆ. ವೊಡಾಫೋನ್ ಐಡಿಯಾ ಲಿಮಿಟೆಡ್ 18,799 ಕೋಟಿ ರೂಪಾಯಿಗೆ ಸ್ಪೆಕ್ಟ್ರಮ್ ಖರೀದಿಸಿದೆ.

ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, ಕಂಪನಿಗಳ ಹರಾಜು ಹಾಗೂ ಸ್ಪೆಕ್ಟ್ರಮ್ ಟಾಪ್ ಅಪ್ ದೇಶಾದ್ಯಂತ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ಭರವಸೆ ನೀಡಿದ್ದಾರೆ.

ಅಕ್ಟೋಬರ್ ವೇಳೆಗೆ 5G ಸೇವೆಗಳು ಪ್ರಾರಂಭವಾಗಲಿವೆ. ಒಟ್ಟಾರೆಯಾಗಿ 1,50,173 ಕೋಟಿ ರೂಪಾಯಿ ಮೌಲ್ಯದ ಬಿಡ್‌ಗಳನ್ನು ಸ್ವೀಕರಿಸಲಾಗಿದೆ. ಪ್ರಥಮ ವರ್ಷದಲ್ಲಿ ಸರ್ಕಾರವು 13,365 ಕೋಟಿ ರೂಪಾಯಿ ಪಡೆಯಲಿದೆ ಎಂದು ಅವರು ಹೇಳಿದರು.

ಅಲ್ಟ್ರಾ ಹೈ ಸ್ಪೀಡ್ ಮೊಬೈಲ್ ಇಂಟರ್ನೆಟ್ ಸಂಪರ್ಕವನ್ನು ನೀಡುವ ಸಾಮರ್ಥ್ಯವನ್ನು 5G ಸ್ಪೆಕ್ಟ್ರಮ್‌ ಹೊಂದಿದೆ. ಕಳೆದ ವರ್ಷ 4ಜಿ ಹರಾಜಿನಲ್ಲಿ 77,815 ಕೋಟಿ ಸಂಗ್ರಹವಾಗಿದ್ದರೆ, 2010 ರಲ್ಲಿ 3G ಹರಾಜಿನಿಂದ ಸರ್ಕಾರ 50,968.37 ಕೋಟಿ ರೂ.ಗಳಿಸಿತ್ತು. 4G ಗಿಂತ ಸುಮಾರು 10 ಪಟ್ಟು ವೇಗವನ್ನು ನೀಡುವ ಸಾಮರ್ಥ್ಯವನ್ನು 5ಜಿ ಹೊಂದಿದೆ. ಮುಂಬರುವ 2-3 ವರ್ಷಗಳಲ್ಲಿ ದೇಶದ ಬಹುತೇಕ ನಗರಗಳಲ್ಲಿ ಉತ್ತಮ 5G ಕವರೇಜ್ ಅನ್ನು ಹೊಂದುವ ನಿರೀಕ್ಷೆ ಇದೆ. ಟೆಲಿಕಾಂಗಳ ಗಮನವು ಸೇವಾ ಗುಣಮಟ್ಟ ಸುಧಾರಣೆಯತ್ತ ಇರಬೇಕು ಎಂದು ಸರ್ಕಾರ ತಿಳಿಸಿದೆ.

ವಿಜ್ಞಾನ ವಿಸ್ಮಯ: ವೇಗದ ಸೌರ ಮಾರುತಗಳಿಂದ ಭೂಕಾಂತೀಯ ಚಂಡಮಾರುತ

0

ಸೂರ್ಯನ ಮೇಲ್ಮೈಯಲ್ಲಿನ ರಂಧ್ರದಿಂದ ಹೊರಹೊಮ್ಮಿದ ಹೆಚ್ಚಿನ ವೇಗದ ಸೌರ ಮಾರುತಗಳು ಇಂದು ಭೂಮಿಯ ಮೇಲೆ ಸಣ್ಣ ಭೂಕಾಂತೀಯ ಚಂಡಮಾರುತದ ಸಾಧ್ಯತೆಯನ್ನು ಹೆಚ್ಚಿಸಿದೆ.

ಅನಿಲ ವಸ್ತುವು ಸೂರ್ಯನ ವಾತಾವರಣದಲ್ಲಿನ ದಕ್ಷಿಣ ರಂಧ್ರದಿಂದ ಹರಿಯುತ್ತಿದೆ ಎಂಬುದನ್ನು ಎನ್​ಒಎಎ ಗಮನಿಸಿದೆ. ಇಂದು ಚಂಡಮಾರುತ ಅಪ್ಪಳಿಸಲಿದೆ ಎಂದು ರಾಷ್ಟ್ರೀಯ ಸಾಗರ ಮತ್ತು ವಾತಾವರಣದ ಆಡಳಿತ ಮುನ್ಸೂಚಕರು ಭವಿಷ್ಯ ನುಡಿದಿದ್ದಾರೆ.

ಭೂಮಿಯ ಕಕ್ಷೆಯ ಉಪಗ್ರಹಗಳು ಸೂರ್ಯನ ಈಶಾನ್ಯ ಪ್ರದೇಶದಲ್ಲಿ ಭಾನುವಾರದಂದು ಸರಿಸುಮಾರು 2309 ಯುಟಿಸಿಯಲ್ಲಿ ಸ್ಫೋಟವನ್ನು ಕಂಡುಹಿಡಿದಿದೆ. ಈ ಸೌರ ಜ್ವಾಲೆಗಳೊಂದಿಗೆ ಸೇರಿಕೊಂಡಾಗ ಭೂಕಾಂತೀಯ ಚಂಡಮಾರುತವನ್ನು ಉಂಟುಮಾಡಬಹುದು ಎನ್ನಲಾಗುತ್ತಿದೆ.

ಈ ಚಂಡಮಾರುತಗಳು ಅರೋರಾ ಡಿಸ್ಪ್ಲೇಗಳನ್ನು ಸಹ ರಚಿಸಬಹುದು. ಏಕೆಂದರೆ ಅವು ಭೂಮಿಯ ಕಾಂತೀಯ ಕ್ಷೇತ್ರವನ್ನು ಅತ್ಯಂತ ಶಕ್ತಿಯುತ ಕಣಗಳ ಅಲೆಗಳಿಂದ ಸ್ವಲ್ಪ ಸಂಕುಚಿತಗೊಳಿಸುತ್ತವೆ. ಈ ಕಣಗಳು ಧ್ರುವಗಳ ಸಮೀಪವಿರುವ ಕಾಂತೀಯ ಕ್ಷೇತ್ರದ ರೇಖೆಗಳ ಉದ್ದಕ್ಕೂ ಚಲಿಸುವಾಗ ವಾತಾವರಣದ ಅಣುಗಳನ್ನು ಅಡ್ಡಿಪಡಿಸುತ್ತವೆ.ಪ್ರಕಾಶಮಾನವಾಗಿರುವ ಮತ್ತು ಉತ್ತರದ ದೀಪಗಳನ್ನು ಹೋಲುವ ಅರೋರಾಗಳನ್ನು ಉತ್ಪಾದಿಸಲು ಶಕ್ತಿಯನ್ನು ಬೆಳಕಿನಂತೆ ಬಿಡುಗಡೆ ಮಾಡುತ್ತವೆ.

ಜಿ1 ಜ್ವಾಲೆಗಳು ತುಲನಾತ್ಮಕವಾಗಿ ನಿರುಪದ್ರವ ಸೌರ ಬಿರುಗಾಳಿಗಳಾಗಿವೆ. ಆದರೆ ಅವು ವಲಸೆ ಹೋಗುವ ಪ್ರಾಣಿಗಳ ಮೇಲೂ ಪರಿಣಾಮ ಬೀರಬಹುದು ಮತ್ತು ಸಣ್ಣ ಉಪಗ್ರಹ ಕಾರ್ಯದ ಅಡಚಣೆಗಳು ಮತ್ತು ವಿದ್ಯುತ್ ವ್ಯವಸ್ಥೆಯ ಸ್ಥಗಿತಗಳಿಗೆ ಕಾರಣವಾಗಬಹುದು ಎನ್ನಲಾಗುತ್ತಿದೆ.