Saturday, August 8, 2026
Saturday, August 8, 2026
Home Blog Page 139

District Legal Services Authority ಮಾನಸಿಕ ಅಸ್ವಸ್ಥರಿಗೆ ವೈದ್ಯಕೀಯ, ಆರೋಗ್ಯ, ಆಸ್ತಿ ರಕ್ಷಣೆ ನಿಟ್ಟಿನಲ್ಲಿ ಕಾನೂನು ಸೇವೆಗಳಿವೆ, ಸದ್ಬಳಕೆ ಮಾಡಿ- ನ್ಯಾ.ಜಿ.ಎ.ಮಂಜುನಾಥ್.

0

District Legal Services Authority ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವರಿಗೆ ವಿಶಿಷ್ಟ ಹಕ್ಕುಗಳಿವೆ. ಅವರುಗಳ ಆರೋಗ್ಯ, ಆಸ್ತಿ ರಕ್ಷಣೆ ಮಾಡಿಕೊಳ್ಳಲು ಕಾನೂನಿನ ಸೇವೆಗಳಿದ್ದು ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕೆಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ಮಂಜುನಾಥ್ ಜಿ.ಎ. ತಿಳಿಸಿದರು.
ಶಿವಮೊಗ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಾನಸಿಕ ಆರೋಗ್ಯ ಪರಿಶೀಲನಾ ಮಂಡಳಿ ಹಾಗೂ ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆ, ಸಿಮ್ಸ್ ಶಿವಮೊಗ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ನಗರದ ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆಯ ಮಾನಸಿಕ ಆರೋಗ್ಯ ವಿಮರ್ಶ ಮಂಡಳಿಯ ಕಚೇರಿಯಲ್ಲಿ ತೆರೆಯಲಾಗಿರುವ ಉಚಿತ ಕಾನೂನು ಸೇವಾ ಕೇಂದ್ರದ ಉದ್ಘಾಟನೆ ಕಾರ್ಯಕ್ರಮವನ್ನು ನೆರವೇರಿಸಿ ಅವರು ಮಾತನಾಡಿದರು.
ಮಾನಸಿಕ ಅಸ್ವಸ್ಥತೆಗೆ ಒಳಗಾದ ವ್ಯಕ್ತಿಗಳ ವೈದ್ಯಕೀಯ, ಆರೋಗ್ಯ, ಆಸ್ತಿ ರಕ್ಷಣೆಯ ನಿಟ್ಟಿನಲ್ಲಿ ಕಾನೂನು ಸೇವಾ ಪ್ರಾಧಿಕಾರದಡಿ ಸಹಾಯ ಲಭ್ಯವಿದ್ದು, ಅದರ ಸದ್ಭಳಕೆ ಪಡೆದುಕೊಳ್ಳಬೇಕು. ಹಾಗೂ ಯಾರೇ ಆಗಲಿ ತಾವು ಮಾಡುವ ಕೆಲಸವನ್ನು ಶ್ರದ್ದೆ, ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಮಾಡಬೇಕು ಎಂದು ಕರೆ ನೀಡಿದರು. .
ಸಿಮ್ಸ್ ನಿರ್ದೇಶಕರಾದ ಡಾ.ವಿರೂಪಾಕ್ಷಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೆಗ್ಗಾನ್ ಜಿಲ್ಲಾ ಆಸ್ಪತ್ರೆಯ ಮಾನಸಿಕ ಆರೋಗ್ಯ ವಿಮರ್ಶ ಮಂಡಳಿಯ ಕಚೇರಿಯಲ್ಲಿ ಕಾನೂನು ಸಲಹಾ ಕೇಂದ್ರವನ್ನು ಸ್ಥಾಪಿಸಿರುವುದು ಬಹಳ ಉಪಯುಕ್ತವಾಗಿದ್ದು, ಇಂತಹ ಕಾರ್ಯಕ್ರಮಗಳ ಮಾಹಿತಿಯು ಎಲ್ಲಾ ಜನರಿಗೆ ತಲುಪಬೇಕು ಹಾಗೂ ಅಗತ್ಯವಿದ್ದವರು ಇದರ ಸದುಪಯೋಗ ಪಡೆಯಬೇಕೆಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಧೀಶರಾದ ಸಂತೋಷ್ ಎಂ ಎಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಶಿವಮೊಗ್ಗ ನಗರದಲ್ಲಿ ಸಾರ್ವಜನಿಕರಿಗೆ ಕಾನೂನು ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಸಿಡಿಪಿಓ ಕಚೇರಿ, ಮೆಗ್ಗಾನ್ ಆಸ್ಪತ್ರೆಯ ಎಆರ್‌ಟಿ ಕ್ಲಿನಿಕ್, ಬಾಲ ನ್ಯಾಯ ಮಂಡಳಿ, ಜಿಲ್ಲಾ ಸೈನಿಕ್ ಬೋರ್ಡ್, ಹಿರಿಯ ನಾಗರಿಕರ ಸಹಾಯವಾಣಿ, ಕೇಂದ್ರ ಕಾರಾಗೃಹ ಹಾಗೂ ಮಹಿಳಾ ಕೇಂದ್ರ ಕಾರಾಗೃಹ ಹಾಗೂ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನುರಿತ ವಕೀಲರನ್ನು ಕಾನೂನು ಸಲಹಾ ಕೇಂದ್ರಗಳಿಗೆ ನಿಯೋಜಿಸಲಾಗಿದ್ದು, ಇವರ ಸೇವೆಯನ್ನು ಪಡೆಯಬಹುದು.
ಅಲ್ಲದೆ ಮಕ್ಕಳು ಕಾಣೆಯಾದ ಬಗ್ಗೆ ದೂರು ನೀಡಲು ಬಂದವರಿಗೆ ಹಾಗೂ ಮಹಿಳೆಯರಿಗೆ ಹಾಗೂ ಕಾನೂನು ನೆರವನ್ನು ಬಯಸುವ ಬಂಧಿತರಾದ ಆರೋಪಿಗಳಿಗೆ ಕಾನೂನು ಸೇವೆಗಳ ಬಗ್ಗೆ ಮಾಹಿತಿಯನ್ನು ನೀಡಲು ದೊಡ್ಡಪೇಟೆ ಪೊಲೀಸ್ ಠಾಣೆ, ತುಂಗಾನಗರ ಪೊಲೀಸ್ ಠಾಣೆ ಹಾಗೂ ಮಹಿಳಾ ಪೊಲೀಸ್ ಠಾಣೆಯಲ್ಲಿ ತಲಾ ಒಬ್ಬ ಅರೆಕಾಲಿಕ ಕಾನೂನು ಸ್ವಯಂಸೇವಕರನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
District Legal Services Authority ಮಾನಸಿಕ ಅಸ್ವಸ್ಥರಿಗೆ ಉಚಿತ ಕಾನೂನಿನ ನೆರವು ನೀಡಲು ಹಾಗೂ ಘನತೆಯಿಂದ ಬದುಕಲು ನಮ್ಮ ಪ್ರಾಧಿಕಾರವು ಉಚಿತವಾಗಿ ವಕೀಲರನ್ನು ನೇಮಿಸಿದ್ದು, ಪ್ರಾಧಿಕಾರದ ಸಹಾಯವಾಣಿ ಸಂಖ್ಯೆ 15100 ಗೆ ಕರೆ ಮಾಡಿ ಉಚಿತ ಕಾನೂನಿನ ಸಲಹೆ ಪಡೆಯಬಹುದು ಎಂದರು.
ಕಾರ್ಯಕ್ರಮದಲ್ಲಿ ಮೆಗ್ಗಾನ್ ಬೋಧನಾ ಜಿಲ್ಲಾಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ತಿಮ್ಮಪ್ಪ ಟಿ.ಡಿ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಗೀತಾ, ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ. ರಾಮ್ ಪ್ರಸಾದ್, ಶುಶ್ರೂಷಕಾಧೀಕ್ಷಕಿ ಶೇಷಮ್ಮ, ಮಾನಸಿಕ ಆರೋಗ್ಯ ವಿಮರ್ಶ ಮಂಡಳಿಯ ಸದಸ್ಯರಾದ ರಜನಿ ಪೈ, ಮಾನಸಿಕ ಆರೋಗ್ಯ ಪರಿಶೀಲನಾ ಮಂಡಳಿ ಸದಸ್ಯರಾದ ಶುಭ್ರತ, ನರ್ಸಿಂಗ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಇಂದೇ ಮಧ್ಯಾಹ್ನ 3 ಗಂಟೆಗೆ ದ್ವಿತೀಯ ಪಿಯು ಫಲಿತಾಂಶ ಪ್ರಕಟಣೆ

0

ದ್ವಿತೀಯ ಪಿಯು ಫಲಿತಾಂಶ ಇಂದು ಮಧ್ಯಾಹ್ನ 3ಕ್ಕೆ ಪ್ರಕಟವಾಗಲಿದೆ. ಇದೇ ಮೊದಲ ಬಾರಿ ಫಲಿತಾಂಶದ ಜತೆಗೇ ಅಂಕಪಟ್ಟಿಯೂ ಲಭ್ಯವಿದ್ದು, ಡಿಜಿಲಾಕರ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಫಲಿತಾಂಶವನ್ನು karresults.nic.in ಜಾಲತಾಣ ಹಾಗೂ ಕರ್ನಾಟಕ ಒನ್‌ ಮೊಬೈಲ್‌ ಆ್ಯಪ್‌ ಮೂಲಕ ಪಡೆಯುಬಹುದು. ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್‌ ಸಂಖ್ಯೆಗೆ ವಾಟ್ಸ್‌ ಆ್ಯಪ್‌, ಎಸ್‌ಎಂಎಸ್‌ ಮೂಲಕವೂ ಫಲಿತಾಂಶವನ್ನು ರವಾನಿಸಲಾಗುವುದು.

ಜಿಲ್ಲೆಯ ಆಯ್ದ ತಾಲ್ಲೂಕುಗಳಲ್ಲಿ ಯುವನಿಧಿ ಗ್ಯಾರಂಟಿ ಯೋಜನೆ ಪ್ರಚಾರ ಕಾರ್ಯಕ್ರಮ

0

ಶಿವಮೊಗ್ಗ ಜಿಲ್ಲಾ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವತಿಯಿಂದ ಏ. 13 ರಂದು ಸ.ಪ್ರ.ದ.ಕಾಲೇಜು- ಶಿಕಾರಿಪುರ, ಏ. 15 ರಂದು ಕೊಡಚಾದ್ರಿ ಪ್ರ.ದ.ಕಾಲೇಜು -ಹೊಸನಗರ , ಏ.16 ರಂದು ಸ.ಪ್ರ.ದ.ಕಾಲೇಜು -ಸೊರಬ, ಏ.17 ರಂದು ಸ.ಪ್ರ.ದ.ಕಾಲೇಜು -ತೀರ್ಥಹಳ್ಳಿ, ಏ.22 ರಂದು ಸರ್.ಎಂ.ವಿ. ಪ್ರ.ದ.ಕಾಲೇಜು- ಭದ್ರಾವತಿ ಹಾಗೂ ಏ. 24 ರಂದು ಸ.ಪ್ರ.ದ.ಕಾಲೇಜು – ಸಾಗರ ಈ ಎಲ್ಲಾ ಸ್ಥಳಗಳಲ್ಲಿ ಯುವನಿಧಿ ಗ್ಯಾರಂಟಿ ಯೋಜನೆಯ ಪ್ರಚಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಮಂಜುನಾಥ ಕೆ.ಡಿ. ತಿಳಿಸಿರುತ್ತಾರೆ

Kuvempu University ಮುದ್ರಣ ಮಾಧ್ಯಮದಲ್ಲಿ ಬರವಣಿಗೆ ಕೌಶಲ, ಮುಖ್ಯ. ವರದಿಗಾರಿಕೆ ತುಂಬಾ ಜವಾಬ್ದಾರಿಯುಳ್ಳದ್ದು- ಶರತ್ ಕುಮಾರ್ ಉದಯವಾಣಿ

0

Kuvempu University ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಆಯೋಜಿಸಿದ್ದ “ವೃತ್ತಿಪರ ಪತ್ರಕರ್ತರ ಸವಾಲುಗಳು” ಎನ್ನುವ ವಿಷಯದ ಕುರಿತು ಶರತ್ ಕುಮಾರ್ ಅವರು ವಿಶೇಷ ಉಪನ್ಯಾಸ ನೀಡಿದರು.
ಮುದ್ರಣ ಮಾಧ್ಯಮದಲ್ಲಿ ಕೆಲಸ ಮಾಡುವುದು ತುಂಬಾ ಸವಾಲು ಆಗಿರುತ್ತದೆ. ಪತ್ರಕರ್ತರಿಗೆ ಸಮಯ ನಿರ್ವಹಣೆ ಮಾಡುವುದು ತಿಳಿದಿರಬೇಕು. ಸೂಕ್ಷ್ಮ ವಿಚಾರಗಳ ಕುರಿತು ವರದಿ ಮಾಡುವಾಗ ಜವಾಬ್ದಾರಿಯಿಂದ ಮಾಡಬೇಕು ಮತ್ತು ಗಂಭೀರ ವಿಚಾರದ ಕುರಿತು ಜಾಗೃತರಾಗಿರಬೇಕು ಎಂದು ತಿಳಿಸಿದರು.
ಪತ್ರಿಕೋದ್ಯಮ ಕ್ಷೇತ್ರದಲ್ಲಿ ತುಂಬಾ ಅವಕಾಶಗಳಿವೆ ಮತ್ತು ಮುದ್ರಣ ಮಾಧ್ಯಮಕ್ಕೆ ಹೋಗುವವರಿಗೆ ಬರವಣಿಗೆ ಕೌಶಲ್ಯ ತುಂಬಾ ಮುಖ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು.
Kuvempu University ವಿಭಾಗದ ಹಳೆಯ ವಿದ್ಯಾರ್ಥಿ ಆಗಿದ್ದ ಶರತ್ ಕುಮಾರ್ ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2024 ನೇ ಸಾಲಿನ ಬಿ ಜಿ ತಿಮ್ಮಪ್ಪಯ್ಯ ಪ್ರಶಸ್ತಿಗೆ ಭಾಜನರಾದ ಕಾರಣ ವಿಭಾಗದ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಭಾಗದ ಮುಖ್ಯಸ್ಥರಾದ ಡಾ. ವರ್ಗೀಸ್ ಪಿ.ಎ ವಹಿಸಿದ್ದರು.ಈ ಸಂದರ್ಭದಲ್ಲಿ ವಿಭಾಗದ ಪ್ರಾಧ್ಯಾಪಕರಾದ ಡಾ. ಸತೀಶ್ ಕುಮಾರ್,ಡಾ.ಸತ್ಯ ಪ್ರಕಾಶ್ ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಮುಬೀನಾ ಬಾನು ಕಾರ್ಯಕ್ರಮವನ್ನು ನಿರೂಪಿಸಿದರು. ಭಾರ್ಗವಿ ಜಿ.ಆರ್ ಪ್ರಾರ್ಥಿಸಿ, ತಾರಾ ವಂದಿಸಿದರು.

DC Shivamogga ಗಣತಿ ಸಂದರ್ಭದಲ್ಲಿ ಕುಟುಂಬದ ಮಾಹಿತಿ,ಜಾತಿ,ಉಪಜಾತಿ,ಹೆಸರುಗಳ ಗೊಂದಲ ಆಗದಂತೆ ಜಾಗ್ರತೆಯಿಂದ ಕಾರ್ಯ ನಿರ್ವಹಿಸಿ- ಪ್ರಭುಲಿಂಗ ಕವಳಿಕಟ್ಟಿ

0

DC Shivamogga ಜನ ಗಣತಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಮತ್ತು ನಿಖರವಾಗಿ ನಡೆಸುವಂತೆ ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ಜಿಲ್ಲಾಧಿಕಾರಿಳಾದ ಪ್ರಭುಲಿಂಗ ಕವಳಿಕಟ್ಟಿಯವರು ನಿರ್ದೇಶನ ನೀಡಿದರು.
ಶಿವಮೊಗ್ಗ ನಗರದ ಬಿ ಹೆಚ್ ರಸ್ತೆಯಲ್ಲಿರುವ ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜಿನಲ್ಲಿ ಶಿವಮೊಗ್ಗ ಗ್ರಾಮಾಂತರ ವಿಭಾಗದ ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ಏರ್ಪಡಿಸಲಾಗಿದ್ದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಗಣತಿ ಸಂದರ್ಭದಲ್ಲಿ ಪ್ರತಿಯೊಂದು ಕುಟುಂಬದ ಸದಸ್ಯರು ನೀಡುವ ಮಾಹಿತಿ ಅತ್ಯಂತ ನಿಖರವಾಗಿರಬೇಕು. ಉಪಜಾತಿ ಮತ್ತು ಪರ್ಯಾಯ ಹೆಸರುಗಳ ಬಗ್ಗೆ ಗೊಂದಲ ಉಂಟಾಗದಂತೆ ಎಚ್ಚರಿಕೆ ವಹಿಸಲು ಸೂಚಿಸಿದ ಅವರು ಸ್ವಯಂ ಗಣತಿ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದರು.
DC Shivamogga ಜಿಲ್ಲೆಯ ಪ್ರತಿಯೊಂದು ಮನೆ ಮತ್ತು ಪ್ರದೇಶದ ನಿವಾಸಿಗಳನ್ನು ಈ ಸಮೀಕ್ಷೆಯಲ್ಲಿ ಕಡ್ಡಾಯವಾಗಿ ಒಳಪಡಿಸಬೇಕು. ಯಾವುದೇ ಒಂದು ಕುಟುಂಬವೂ ಗಣತಿಯಿಂದ ವಂಚಿತವಾಗಬಾರದು ಎಂದು ತಿಳಿಸಿದ ಅವರು ಗಣತಿಗಾಗಿ ಬಳಸಲಾಗುವ ಡಿಜಿಟಲ್ ಪೋರ್ಟಲ್‌ಗಳಲ್ಲಿ ದತ್ತಾಂಶವನ್ನು ದಾಖಲಿಸುವಾಗ ತಾಂತ್ರಿಕ ದೋಷಗಳಾಗದಂತೆ ನೋಡಿಕೊಳ್ಳಲು ಸೂಚನೆ ನೀಡಿದರು.
ಸಾರ್ವಜನಿಕರು ನೀಡುವ ವೈಯಕ್ತಿಕ ಮತ್ತು ಸಾಮಾಜಿಕ ಮಾಹಿತಿಯ ಗೌಪ್ಯತೆಯನ್ನು ಕಾಪಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಭರವಸೆ ನೀಡಿದ ಅವರು ತಹಶೀಲ್ದಾರ್‌ಗಳು, ಮೇಲ್ವಿಚಾರಕರು ಮತ್ತು ಗಣತಿದಾರರು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಶಿವಮೊಗ್ಗ ತಹಶೀಲ್ದಾರ್ ರಾಜೀವ್, ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.

MESCOM ಏಪ್ರಿಲ್11. ಶಿವಮೊಗ್ಗದ ಮಲ್ಲಿಗೆ ಇಡ್ಲಿ ಸೆಂಟರ್, ಡೀಸಿ ಕಛೇರಿ ಕಾಂಪೌಂಡ್ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

0

MESCOM ಶಿವಮೊಗ್ಗ ನಗರ ಉಪವಿಭಾಗ-1, ಘಟಕ-2ರ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬ ತೆರವುಗೊಳಿಸುವ ಕಾಮಗಾರಿ ಹಮ್ಮಿಕೊಂಡಿದ್ದು, ಏ.11 ರಂದು ಬೆಳಗ್ಗೆ 10.00 ರಿಂದ ಮಧ್ಯಾಹ್ನ 2.00 ರವರೆಗೆ ಮಲ್ಲಿಗೆ ಇಡ್ಲಿ ಸೆಂಟರ್, ಡಿ.ಸಿ.ಕಚೇರಿ ಕಾಂಪೌಂಡ್, ಆರ್.ಟಿ.ಓ. ಕಚೇರಿ, ಕೋರ್ಟ್ ರಸ್ತೆ, ವಾರ್ತಾ ಇಲಾಖೆ, ಬಾಲರಾಜ್ ಅರಸ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

S.N. Channabasappa ಐಪಿಎಲ್ ಕ್ರಿಕೆಟ್ ಪಾಸ್ ನನಗೆ ಬೇಡ- ಶಾಸಕ ಎಸ್.ಎನ್.ಚನ್ನಬಸಪ್ಪ

0

S.N. Channabasappa ಶಾಸಕರಿಗೆ ನೀಡಲಾಗುವ ನನ್ನ ಹೆಸರಿನ ಐಪಿಎಲ್ ಕ್ರಿಕೆಟ್ ಪಾಸುಗಳನ್ನ ನಿರಾಕರಿಸುವೆ ಎಂದು ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಎಸ್.ಎನ್.ಚನ್ನಬಸಪ್ಪ ಮಾಧ್ಯಮಗಳಿಗೆ ಪತ್ರ ಮುಖೇನ ಹಂಚಿಕೊಂಡಿದ್ದಾರೆ.

ಹನ್ನೊಂದು ಮಂದಿ ಅಮಾಯಕರ ಬಲಿ ಪಡೆದ ಕಳೆದ ಐಪಿಎಲ್ ಪಂದ್ಯದ ದುರಂತದ ಹಿನ್ನೆಲೆ ನೆನಪಿಸಿ ಈ ನಿರ್ಧಾರ ಮಾಡಿರುವ ಬಗ್ಗೆ ಅವರ ಅಭಿಮಾನಿಗಳು ಸಮಾಧಾನದ ನಿಟ್ಟುಸಿರು ಚೆಲ್ಲಿದ್ದಾರೆ.

S.N. Channabasappa ಕಾಂಪ್ಲಿಮೆಂಟರಿ ಪಾಸುಗಳನ್ನ ಶಾಸಕರಿಗೆ ಕಡ್ಡಾಯ ನೀಡಬೇಕೆನ್ನುವ ಬಹುಪಾಲು ಶಾಸಕರು ಈಗ ತಮ್ಮ ಆತ್ಮಸಾಕ್ಷಿಯನ್ನ ಪ್ರಶ್ನಿಸುವಂತಿದೆ ,ಮತ್ತು ಮೇಲ್ಪಂಕ್ತಿಯಾಗಿದೆ ನಮ್ಮ ಕ್ಷೇತ್ರದ ಶಾಸಕರ ಒಳ್ಳೆಯ ತೀರ್ಮಾನ ಎಂದು ಸಾರ್ವಜನಿಕರ ಅನಿಸಿಕೆ.

ಖ್ಯಾತ ಗಾಯಕಿ ಶಿವಶ್ರೀ ತೇಜಸ್ವಿ ಸೂರ್ಯ ಅವರಿಂದ ವಿಶೇಷ ಗಾಯನ ಕಾರ್ಯಕ್ರಮ”ನಾಮಾಮೃತ”

0

ಈಕೆ ನಮ್ಮ ಕರ್ನಾಟಕದ ಸೊಸೆ . ಯುವ ನಾಯಕ , ಬೆಂಗಳೂರು ದಕ್ಷಿಣ ಕ್ಷೇತ್ರದ ಜನಾನುರಾಗಿ ಸಂಸದ ಶ್ರೀ ತೇಜಸ್ವಿ ಸೂರ್ಯ ಅವರ ಧರ್ಮಪತ್ನಿ .

ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಪ್ರಧಾನಿ ಮೋದಿಜಿ ಈಕೆ ಹಾಡಿದ ಎರಡು ಕನಸು ಕನ್ನಡ ಚಲನ ಚಿತ್ರದ “ ಪೂಜಿಸಲೆಂದೇ…. ಹೂಗಳ ತಂದೆ” ಗೀತೆಯನ್ನು ಪ್ರಶಂಸಿಸಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು !!! . ಅಂದೇ ಈ ಕಲಾವಿದೆಯ ಕಂಠ ಮಾಧುರ್ಯಕ್ಕೆ ದೇಶವೇ ಮಾರುಹೋಗಿತ್ತು !!! .

ಶ್ರೀಮತಿ ಶಿವಶ್ರೀ ತೇಜಸ್ವಿಸೂರ್ಯ (ಶಿವಶ್ರೀ ಸ್ಕಂದಪ್ರಸಾದ್) ಸಂಗೀತ ಮನೆತನದಲ್ಲಿ ಹುಟ್ಟಿ ಬೆಳೆದ ಕಲಾವಿದೆ . ಸಂಗೀತ ಮಾತ್ರವಲ್ಲದೇ ಭರತ ನೃತ್ಯದಲ್ಲೂ ಪ್ರವೀಣೆ . ಈಕೆಯ ಧ್ವನಿ ಮಾರ್ದವತೆಯನ್ನು ಮೆಚ್ಚಿ ಸಂಗೀತ ಮಾಂತ್ರಿಕ A R ರೆಹಮಾನ್ ಖ್ಯಾತ ಸಿನಿಮಾ ನಿರ್ದೇಶಕ ಮಣಿರತ್ನಂ ಅವರ “ಪೊನ್ನಿಯನ್ ಸೆಲ್ವನ್” ಚಿತ್ರದಲ್ಲಿ ಹಾಡಿಸಿದ್ದಾರೆ.

ಎಲ್ಲಾ ರೀತಿಯ ಸಂಗೀತವನ್ನೂ ಹಾಡುವ ಸಾಮರ್ಥ್ಯವಿರುವ ಈ ಕಲಾವಿದೆಯ ವಿಶೇಷ ಆಸಕ್ತಿ ಎಂದರೆ ಅದು ಭಕ್ತಿ ಸಂಗೀತ . ಭಜನೆ, ನಾಮಾವಳಿ, ದಾಸರ ಪದಗಳನ್ನು ಅಮೋಘವಾಗಿ ಹಾಡುವ ಶಿವಶ್ರೀ ತನ್ನ ಭಕ್ತಿಪೂರ್ಣ ಗಾಯನದಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ .

ಇಂತಹ ಅಪರೂಪದ ಕಲಾವಿದೆಯ ಸಂಗೀತ ಕಾರ್ಯಕ್ರಮ “ನಾಮಾಮೃತ”ಪ್ರಪ್ರಥಮ ಬಾರಿಗೆ ಇದೇ ಗುರುವಾರ 9ರ ಸಂಜೆ 5.30ಕ್ಕೆ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ .

ಶಿವಮೊಗ್ಗದ ಪ್ರಸಿದ್ಧ ಪಂಚತಾರ ಐಸ್ರೀಮ್ಮ್ಸ್ ಸಂಸ್ಥೆಯ ಮಾಲೀಕರಾದ ಶ್ರೀಯುತ ಪ್ರಕಾಶ್ ಪ್ರಭು ಅವರ ನೇತೃತ್ವದ ದಿ. ಮಣೂರು ಗೋವಿಂದರಾಯ ಪ್ರಭು ಚಾರಿಟಬಲ್ ಟ್ರಸ್ಟ್ ಆಯೋಜಿಸಿರುವ ಈ ಭಕ್ತಿ-ಭಾವದ ಸಂಗೀತಮಯ ಕಾರ್ಯಕ್ರಮಕ್ಕೆ ಸಿಹಿಮೊಗೆಯ ಸಂಗೀತ ರಸಿಕ ಮನಸ್ಸುಗಳಿಗೆ ಆತ್ಮೀಯ ಆಹ್ವಾನ 🙏

~ ವಿನಯ್ ಶಿವಮೊಗ್ಗ. ಸಂಚಾಲಕರು, – ದಿ. ಮಣೂರು ಗೋವಿಂದರಾಯ ಪ್ರಭು ಚಾರಿಟಬಲ್ ಟ್ರಸ್ಟ್

ಜಿಲ್ಲೆಯಲ್ಲಿ ಆಟೋ ಎಲ್.ಪಿ.ಜಿ ಮತ್ತು ಸಿ ಎನ್ ಜಿ ಬಂಕ್ ಗಳಲ್ಲಿ ಸರ್ಕಾರಿ ದರದಲ್ಲೇ ಮಾರಾಟ ಕಡ್ಡಾಯ- ಡೀಸಿ ಪ್ರಭುಲಿಂಗ ಕವಳಿಕಟ್ಟಿ

0

ಶಿವಮೊಗ್ಗ ಜಿಲ್ಲೆಯಾದ್ಯಂತ ಇರುವ ಆಟೋ ಎಲ್‌ಪಿಜಿ ಮತ್ತು ಸಿಎನ್‌ಜಿ ಬಂಕ್‌ಗಳಲ್ಲಿ ಇಂಧನವನ್ನು ಸರ್ಕಾರ ಹಾಗೂ ತೈಲ ಕಂಪನಿಗಳು ನಿಗದಿಪಡಿಸಿದ ದರದಲ್ಲೇ ಮಾರಾಟ ಮಾಡುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ಕಟ್ಟುನಿಟ್ಟಾಗಿ ತಿಳಿಸಿದ್ದಾರೆ.

ದರ ಪ್ರದರ್ಶನ ಕಡ್ಡಾಯ: ತೈಲ ಕಂಪನಿಗಳು ಅಥವಾ ಖಾಸಗಿ ಸಂಸ್ಥೆಗಳು ನಿಗದಿಪಡಿಸಿದ ದರದ ವಿವರವನ್ನು ಗ್ರಾಹಕರಿಗೆ ಹಾಗೂ ಸಾರ್ವಜನಿಕರಿಗೆ ಕಾಣುವಂತೆ ಬಂಕ್‌ಗಳಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು.

ಹೆಚ್ಚುವರಿ ಹಣ ವಸೂಲಿ ಮಾಡುವಂತಿಲ್ಲ: ಯಾವುದೇ ಕಾರಣಕ್ಕೂ ನಿಗದಿತ ದರಕ್ಕಿಂತ ಹೆಚ್ಚಿನ ಹಣವನ್ನು ಗ್ರಾಹಕರಿಂದ ಪಡೆಯಬಾರದು ಎಂದು ಎಚ್ಚರಿಕೆ ನೀಡಲಾಗಿದೆ.
ಕಾನೂನು ಕ್ರಮದ ಎಚ್ಚರಿಕೆ: ಒಂದು ವೇಳೆ ನಿಗದಿತ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವುದು ಕಂಡುಬಂದಲ್ಲಿ, ಅಂತಹ ಬಂಕ್ ಮಾಲೀಕರ ವಿರುದ್ಧ ‘ಅಗತ್ಯ ವಸ್ತುಗಳ ಕಾಯ್ದೆ-1955’ ಮತ್ತು ‘ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ (ರೆಗ್ಯುಲೇಷನ್ ಆಫ್ ಯೂಸ್ ಇನ್ ಮೋಟರ್ ವೆಹಿಕಲ್ಸ್) ಆರ್ಡರ್-2001’ ರ ಅಡಿಯಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಏಪ್ರಿಲ್ 10 ರಿಂದ ಶಿವಮೊಗ್ಗದಲ್ಲಿ ” ರಜಾ ವಿತ್ ಮಜಾ” ಬೇಸಿಗೆ ಶಿಬಿರ

0

ಶಿವಮೊಗ್ಗ ನಗರದ ಲಕ್ಷ್ಮೀ ಗೆಲಾಕ್ಸಿಯಲ್ಲಿರುವ ಸ್ಟೈಲ್ ಡಾನ್ಸ್ ಕ್ರಿವ್ ನೃತ್ಯ ಸಂಸ್ಥೆಯ ವತಿಯಿಂದ “ರಜಾ ವಿತ್ ಮಜಾ” ಬೇಸಿಗೆ ಶಿಬಿರ ವನ್ನು ಆಯೋಜಿಸಲಾಗಿದೆ. ಶಿಬಿರವು ಏ.10ರಿಂದ ಮೇ.20ರವರೆಗೆ ನಡೆಯಲಿದೆ.
ಈ ಶಿಬಿರದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಅಮೋಘ ಪ್ರತಿಭಾನ್ವಿತ ರತ್ನ ಬಿರುದು ಇರುವ ಪಾರಿತೋಷಕ ಮತ್ತು ಪ್ರಶಸ್ತಿಪತ್ರ ನೀಡಿ ಗೌರವಿಸಲಾಗುವುದು.
“ರಜಾ ವಿತ್ ಮಜಾ” ಬೇಸಿಗೆ ಶಿಬಿರದಲ್ಲಿ ವಿವಿಧ ರೀತಿಯ ನೃತ್ಯಗಳು, ಫಿಲ್ಮ್ ಆಕ್ಟಿಂಗ್ , ಆಡಿಷನ್ಸ್ ಕೊಚಿಂಗ್ಸ್ ,ಡ್ರಾಯಿಂಗ್, ಟೆಂಟ್ ಸಿನಿಮಾ, ನಿರೂಪಣೆ, ಯೋಗ, ಓಲ್ಡ್ ಗೆಮ್ಸ್, ಸಿಂಗಿಗ್,ಅಜ್ಜಿಕಥೆಗಳು, ಜಿಮ್ನಾಸ್ಟಿಕ್, ಫ್ಯಾಷನ್ ಷೋ, ಡ್ರಾಮಾ, ಹೀಗೆ ಹಲವಾರು ವಿಷಯಗಳನ್ನು ಮಕ್ಕಳಿಗೆ ಹೇಳಿಕೊಡಲಾಗುವುದು.
ಈ ಶಿಬಿರದಲ್ಲಿ ೨ವರ್ಷದ ಮಗುವಿನಿಂದ ೨೫ವರ್ಷದ ವಯಸ್ಕರವರೆಗೂ ಭಾಗವಹಿಸಬಹುದು. ಈ ಎಲ್ಲಾ ವಯಸ್ಸಿಗೂ ಅನುಗುಣವಾಗಿ ಬೆಳಗಿನ ಬ್ಯಾಚ್ , ಮದ್ಯಾಹ್ನದ ಬ್ಯಾಚ್ , ಸಂಜೆ ಬ್ಯಾಚ್ , ವಿಕೆಂಡ್ ಬ್ಯಾಚ್, ವಿಕ್ ಡೇಸ್ ಬ್ಯಾಚ್ ಹಾಗೆ ಬೆಳಗಿ೦ದ ಸ೦ಜೆಯವರೆಗಿನ ಬ್ಯಾಚ್ ಎಂದು ನಿಮ್ಮ ಅನುಕೂಲಕರ ಸಮಯಕ್ಕೆ ತರಗತಿಗಳು ಇರಲಿದೆ.
ಶಿಬಿರವು ಎರಡು ಬ್ಯಾಚ್‌ಗಳಲ್ಲಿ ನಡೆಯಲಿದ್ದು, ಬೆಳಗಿನ ಬ್ಯಾಚ್ 10 ರಿಂದ ಮದ್ಯಾಹ್ನ 1ರವರೆಗೆ ಮದ್ಯಾಹ್ನದ ಬ್ಯಾಚ್ : 2:30 ರಿಂದ ಸಂಜೆ 5:15ರವರೆಗೆ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ಹೆಸರು ನೊಂದಾಯಿಸಿಕೊಳ್ಳಲು 9845388028, 8123005603ಗೆ ಸಂಪರ್ಕಿಸಿ.