Monday, August 24, 2026
Monday, August 24, 2026

ಖ್ಯಾತ ಗಾಯಕಿ ಶಿವಶ್ರೀ ತೇಜಸ್ವಿ ಸೂರ್ಯ ಅವರಿಂದ ವಿಶೇಷ ಗಾಯನ ಕಾರ್ಯಕ್ರಮ”ನಾಮಾಮೃತ”

Date:

ಈಕೆ ನಮ್ಮ ಕರ್ನಾಟಕದ ಸೊಸೆ . ಯುವ ನಾಯಕ , ಬೆಂಗಳೂರು ದಕ್ಷಿಣ ಕ್ಷೇತ್ರದ ಜನಾನುರಾಗಿ ಸಂಸದ ಶ್ರೀ ತೇಜಸ್ವಿ ಸೂರ್ಯ ಅವರ ಧರ್ಮಪತ್ನಿ .

ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಪ್ರಧಾನಿ ಮೋದಿಜಿ ಈಕೆ ಹಾಡಿದ ಎರಡು ಕನಸು ಕನ್ನಡ ಚಲನ ಚಿತ್ರದ “ ಪೂಜಿಸಲೆಂದೇ…. ಹೂಗಳ ತಂದೆ” ಗೀತೆಯನ್ನು ಪ್ರಶಂಸಿಸಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು !!! . ಅಂದೇ ಈ ಕಲಾವಿದೆಯ ಕಂಠ ಮಾಧುರ್ಯಕ್ಕೆ ದೇಶವೇ ಮಾರುಹೋಗಿತ್ತು !!! .

ಶ್ರೀಮತಿ ಶಿವಶ್ರೀ ತೇಜಸ್ವಿಸೂರ್ಯ (ಶಿವಶ್ರೀ ಸ್ಕಂದಪ್ರಸಾದ್) ಸಂಗೀತ ಮನೆತನದಲ್ಲಿ ಹುಟ್ಟಿ ಬೆಳೆದ ಕಲಾವಿದೆ . ಸಂಗೀತ ಮಾತ್ರವಲ್ಲದೇ ಭರತ ನೃತ್ಯದಲ್ಲೂ ಪ್ರವೀಣೆ . ಈಕೆಯ ಧ್ವನಿ ಮಾರ್ದವತೆಯನ್ನು ಮೆಚ್ಚಿ ಸಂಗೀತ ಮಾಂತ್ರಿಕ A R ರೆಹಮಾನ್ ಖ್ಯಾತ ಸಿನಿಮಾ ನಿರ್ದೇಶಕ ಮಣಿರತ್ನಂ ಅವರ “ಪೊನ್ನಿಯನ್ ಸೆಲ್ವನ್” ಚಿತ್ರದಲ್ಲಿ ಹಾಡಿಸಿದ್ದಾರೆ.

ಎಲ್ಲಾ ರೀತಿಯ ಸಂಗೀತವನ್ನೂ ಹಾಡುವ ಸಾಮರ್ಥ್ಯವಿರುವ ಈ ಕಲಾವಿದೆಯ ವಿಶೇಷ ಆಸಕ್ತಿ ಎಂದರೆ ಅದು ಭಕ್ತಿ ಸಂಗೀತ . ಭಜನೆ, ನಾಮಾವಳಿ, ದಾಸರ ಪದಗಳನ್ನು ಅಮೋಘವಾಗಿ ಹಾಡುವ ಶಿವಶ್ರೀ ತನ್ನ ಭಕ್ತಿಪೂರ್ಣ ಗಾಯನದಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ .

ಇಂತಹ ಅಪರೂಪದ ಕಲಾವಿದೆಯ ಸಂಗೀತ ಕಾರ್ಯಕ್ರಮ “ನಾಮಾಮೃತ”ಪ್ರಪ್ರಥಮ ಬಾರಿಗೆ ಇದೇ ಗುರುವಾರ 9ರ ಸಂಜೆ 5.30ಕ್ಕೆ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ .

ಶಿವಮೊಗ್ಗದ ಪ್ರಸಿದ್ಧ ಪಂಚತಾರ ಐಸ್ರೀಮ್ಮ್ಸ್ ಸಂಸ್ಥೆಯ ಮಾಲೀಕರಾದ ಶ್ರೀಯುತ ಪ್ರಕಾಶ್ ಪ್ರಭು ಅವರ ನೇತೃತ್ವದ ದಿ. ಮಣೂರು ಗೋವಿಂದರಾಯ ಪ್ರಭು ಚಾರಿಟಬಲ್ ಟ್ರಸ್ಟ್ ಆಯೋಜಿಸಿರುವ ಈ ಭಕ್ತಿ-ಭಾವದ ಸಂಗೀತಮಯ ಕಾರ್ಯಕ್ರಮಕ್ಕೆ ಸಿಹಿಮೊಗೆಯ ಸಂಗೀತ ರಸಿಕ ಮನಸ್ಸುಗಳಿಗೆ ಆತ್ಮೀಯ ಆಹ್ವಾನ 🙏

~ ವಿನಯ್ ಶಿವಮೊಗ್ಗ. ಸಂಚಾಲಕರು, – ದಿ. ಮಣೂರು ಗೋವಿಂದರಾಯ ಪ್ರಭು ಚಾರಿಟಬಲ್ ಟ್ರಸ್ಟ್

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಸಾಧಕರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ...

ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ನೇಮಕಾತಿ ಪ್ರಕಟಣೆ

ಅಂಗನವಾಡಿ ಕಂ ಕ್ರಷ್ ಕೇಂದ್ರಗಳ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ...