2025ನೇ ಸಾಲಿನಲ್ಲಿ ಬಿಡುಗಡೆಯಾದ “ಅದೊಂದಿತ್ತು ಕಾಲ” ಬಹುತಾರಾಗಣದ ಕನ್ನಡ ಚಲನಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ಶಿವಮೊಗ್ಗದ ಪ್ರತಿಭಾವಂತ ನಟ ಶಶಿಕುಮಾರ್ ಎನ್ ಅವರಿಗೆ “ಬೆಸ್ಟ್ ಪ್ರಾಮಿಸಿಂಗ್ ಆಕ್ಟರ್ ಇನ್ ಕನ್ನಡ ಫಿಲ್ಮ್ ಇಂಡಸ್ಟ್ರಿ – 2026” ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಬೆಂಗಳೂರಿನ ಪ್ರತಿಷ್ಠಿತ ಚಿತ್ರಸಂತೆ ಸಿನಿಮಾ ಸಂಸ್ಥೆ ಈ ಪ್ರಶಸ್ತಿಯನ್ನು ನೀಡಿ ಶಶಿಕುಮಾರ್ ಅವರ ಪ್ರತಿಭೆಯನ್ನು ಗುರುತಿಸಿದೆ. ಚಿತ್ರದಲ್ಲಿನ ಅವರ ಅದ್ಭುತ ಅಭಿನಯಕ್ಕೆ ಈ ಗೌರವ ಲಭಿಸಿದೆ.
“ಅದೊಂದಿತ್ತು ಕಾಲ” ಚಿತ್ರದ ನಿರ್ಮಾಪಕರಾಗಿ ಭುವನ್ ಸುರೇಶ್ ಮತ್ತು ಗಿರೀಶ್ ನಾಗಪ್ಪ ಕಾರ್ಯನಿರ್ವಹಿಸಿದ್ದು, ಕೀರ್ತಿ ನಿರ್ದೇಶನ ಮಾಡಿದ್ದಾರೆ. ಚಿತ್ರದ ಛಾಯಾಗ್ರಹಣವನ್ನು ಅಭಿಷೇಕ್ ಜಿ. ಕಾಸರಗೋಡು ನಿರ್ವಹಿಸಿದ್ದು, ರಾಘವೇಂದ್ರ ವಿ. ಸಂಗೀತ ಸಂಯೋಜಿಸಿದ್ದಾರೆ.
ಚಿತ್ರದಲ್ಲಿ ನಾಯಕನಾಗಿ ವಿನಯ್ ರಾಜ್ಕುಮಾರ್ ಹಾಗೂ ನಾಯಕಿಯಾಗಿ ಅದಿತಿ ಪ್ರಭುದೇವ ಅಭಿನಯಿಸಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಿತ್ರಸಂತೆ ಸಂಸ್ಥೆಯ ಸಂಸ್ಥಾಪಕರಾದ ಗಿರೀಶ್ ವಿ. ಗೌಡ, ನಟ ಪೃಥ್ವಿ ಅಂಬರ್, ನಟಿ ಸಾನ್ವಿ ಶ್ರೀವಾತ್ಸವ ಹಾಗೂ ಮುಂಗಾರು ಮಳೆ ಖ್ಯಾತಿಯ ಸಂಗೀತ ನಿರ್ದೇಶಕ ಮನೋಮೂರ್ತಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಶಿವಮೊಗ್ಗದ ಕಲಾವಿದನಿಗೆ ಲಭಿಸಿರುವ ಈ ಪ್ರಶಸ್ತಿಯು ಜಿಲ್ಲೆಯ ಕಲಾಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
